ಬೆಂಗಳೂರು : ಬೆಂಗಳೂರಿನ ಕೆಂಗೇರಿಯ ಗುರೂರು ಕೆರೆಯಲ್ಲಿ ಅಣ್ಣ ತಂಗಿ ಬಿದ್ದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಕ ಜಾನ್ ಸೇನಾ ಮೃತದೇಹ ಹೊರ ತೆಗೆಯಲಾಗಿದೆ.ಆದರೆ ಮಹಾಲಕ್ಷ್ಮಿಯ ಶವ ಪತ್ತೆಯ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಹೌದು ಕೆಂಗೇರಿಯ ಕೆರೆಯಲ್ಲಿ ಅಣ್ಣ ತಂಗಿ ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಬಾಲಕ ಜಾನ್ ಸೇನಾ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿಯವರು ಹೊರಗಡೆ ತೆಗೆದಿದ್ದಾರೆ. ಆದರೆ ಇದೇ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ.ಇದು ಮಹಾಲಕ್ಷ್ಮಿ ಮೃತದೇಹನ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.