ತುಮಕೂರು : ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಭೀಕರವಾದ ಕೊಲೆ ಆಯಿತು. ಬಳಿಕ ಇತ್ತೀಚಿಗೆ ಅಷ್ಟೇ ಮತ್ತೆ ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಭೀಕರ ಕೊಲೆ ಆಯಿತು. ಇದೆಲ್ಲದರ ಹೊರತಾಗಿಯೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಇದನ್ನು ನಾನು ಹೇಳುತ್ತಿಲ್ಲ ಹೈದರಾಬಾದ್ ವಿಶ್ವವಿದ್ಯಾಲಯದವರು ಹೇಳುತ್ತಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಅಧ್ಯಯನ ಮಾಡಿ ಹೈದರಾಬಾದ್ ವಿಶ್ವವಿದ್ಯಾಲಯದವರು ರಾಜ್ಯದ ಕಾನೂನು ವ್ಯವಸ್ಥೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯ ವರದಿಯ ಪ್ರಕಾರ ಕರ್ನಾಟಕ ಸೇಫ್ ಎಂದು ತಿಳಿದುಬಂದಿದೆ ನಾನು ಗೃಹ ಸಚಿವನಾಗಿ ಇದನ್ನು ಹೇಳುತ್ತಿಲ್ಲ ಎಂದು ತಿಳಿಸಿದರು.
ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ವಿಚಾರವಾಗಿ ಯಾರನ್ನು ನಾವು ಟಾರ್ಗೆಟ್ ಮಾಡಲ್ಲ ತಪ್ಪು ಮಾಡಿದರೆ ಯಾರನ್ನು ಸಹ ಬಿಡುವುದಿಲ್ಲ. ಯಾರು ಕಾನೂನಿನ ವಿರುದ್ಧ ಹೋಗುತ್ತಾನೋ ಅಂತವನ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಅವನು ಹಿಂದೂವೇ ಆಗಿರಲಿ ಅಥವಾ ಮುಸ್ಲಿಮನೆ ಆಗಿರಲಿ, ಯಾರಾದರೂ ಕ್ರಮ ಕೈಗೊಳ್ಳುತ್ತೇವೆ. ಕಾನೂನಿಗೆ ವಿರುದ್ಧವಾಗಿ ಹೋದರೆ ಕ್ರಮ ಖಂಡಿತ ಎಂದು ಜಿ ಪರಮೇಶ್ವರ್ ತಿಳಿಸಿದರು.