ಪ್ರಯಾಗರಾಜ್ : 2025 ರ ಮಹಾ ಕುಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀ ಶಿವಶಕ್ತಿ ಧಾಮ ದಾಸನಾ ದೇವಿ ದೇವಸ್ಥಾನದ ಶ್ರೀಮಹಾಂತ್ ಯತಿ ನರಸಿಂಹಾನಂದ ಗಿರಿ, ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸದಿದ್ದರೆ, 2035 ರ ವೇಳೆಗೆ ದೇಶದ ಪ್ರಧಾನ ಮಂತ್ರಿ ಒಬ್ಬ ಮುಸ್ಲಿಂರಾಗಿರುತ್ತಾರೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ದೇಶದ ಪ್ರಸ್ತುತ ಪರಿಸ್ಥಿತಿ ಬದಲಾಗದಿದ್ದರೆ, 2035 ರ ವೇಳೆಗೆ ದೇಶದ ಪ್ರಧಾನ ಮಂತ್ರಿ ಖಂಡಿತವಾಗಿಯೂ ಮುಸ್ಲಿಮರಾಗಿರುತ್ತಾರೆ ಎಂದು ಶ್ರೀ ಪಂಚದಶ್ನಮ್ ಜುನಾ ಅಖಾರದ ಶ್ರೀ ಮಹಾಂತ ಯತಿ ನರಸಿಂಹಾನಂದ ಸರಸ್ವತಿ ಮಹಾ ಕುಂಭದಲ್ಲಿ ಹೇಳಿದ್ದಾರೆ. ಹಿಂದೂ ಸಮಾಜಕ್ಕೆ ಕೇವಲ ಒಂದು ಮಗು ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂಸತ್ತಿನಲ್ಲಿ ಹಿಂದೂಗಳ ಸಮಸ್ಯೆಗಳನ್ನು ಎತ್ತುವ ಧೈರ್ಯವನ್ನು ಇಂದು ದೇಶದಲ್ಲಿ ಯಾವುದೇ ನಾಯಕ ತೋರಿಸಿಲ್ಲ . ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಹಿಂದೂಗಳು ಮತ್ತು ಸನಾತನ ಸಂಸ್ಥೆಯೊಂದಿಗೆ ಕೊನೆಯವರೆಗೂ ನಿಲ್ಲುವ ನಾಯಕ ಎಂದು ತಿಳಿಸಿದ್ದಾರೆ.








