ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಲಾರಿಯಿಂದ ಗ್ರಾನೈಟ್ ಇಳಿಸುವಾಗ ಕಾರ್ಮಿಕನನ್ನು ರಕ್ಷಿಸಲು ಹೋಗಿ ಮಾಲೀಕನ ತಲೆಯ ಮೇಲೆ ಗ್ರಾನೆಟ್ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹೊಸಾಳಿ ಕ್ರಾಸ್ ಸಮೀಪದ ಬಿಡ್ತುಲಬಾಗದಲ್ಲಿ ನಡೆದಿದೆ.
ಗ್ರಾನೈಟ್ ತಲೆ ಮೇಲೆ ಬಿದ್ದು ಉದ್ಯಮಿ ಮುದ್ದಣ್ಣ ಹನಮಪ್ಪ ಹಾಲುಂಡಿ (53) ಮೃತಪಟ್ಟಿದ್ದಾರೆ.ನಗರದ ಬಾಂಡಿಶಿಟ್ಟಾದ ಮುದ್ದಣ್ಣ ಅವರು ಮೂರು ತಾಲ್ಲೂಕಿನ ಮೂರು ಕಡೆ ಟೈಲ್ಸ್ ಮತ್ತು ಸಿರಾಮಿಕ್ಸ್ ಮಳಿಗೆ ನಡೆಸುತ್ತಿದ್ದರು.ದುರ್ಘಟನೆ ನಡೆದ ಬಿಡ್ತುಲಭಾಗದಲ್ಲಿ ಈಚೆಗಷ್ಟೆ ಹೊಸ ಮಳಿಗೆ ತೆರೆದಿದ್ದರು.
ಮಲ್ಲಿಕಾರ್ಜುನ ಟೈಲ್ಸ್ ಹಾಗೂ ಸೆರಾಮಿಕ್ ಮಾಲೀಕರಾಗಿದ್ದ ಮುದ್ದಣ್ಣ, ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದರು. ಕೆಲವು ವರ್ಷಗಳಿಂದ ಬಾಂಡಿಶೆಟ್ಟಾದಲ್ಲಿ ವಾಸ ಮಾಡುತ್ತಿದ್ದರು. ಗ್ರಾನೈಟ್ ಕಲ್ಲುಗಳನ್ನು ಆಟೋ ಗೆ ತುಂಬುತ್ತಿದ್ದ ವೇಳೆ ಈ ಒಂದು ದುರ್ಘಟನೆ ಸಂಭವಿಸಿದೆ. ಗ್ರಾನೈಟ್ ಕಲ್ಲಿಗೆ ಹಗ್ಗ ಬಿಗಿಯುವಾಗ ತಲೆಯ ಮೇಲೆ ಗ್ರಾನೈಟ್ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.