Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಭ್ರಷ್ಟಾಚಾರ ಕೇಸ್ ನಲ್ಲಿ `ರಾಜ್ಯ ಪೊಲೀಸರು’ ಕೇಂದ್ರ ನೌಕರರನ್ನು ತನಿಖೆ ಮಾಡಬಹುದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

22/01/2026 5:26 AM

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `ಮುಖ್ಯೋಪಾಧಾಯ’ ಹುದ್ದೆಗೆ ಬಡ್ತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

22/01/2026 5:24 AM

ಉದ್ಯೋಗವಾರ್ತೆ : `SSLC’ ಪಾಸಾದವರಿಗೆ ಭರ್ಜರಿ ಸುದ್ದಿ : 50,000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

22/01/2026 5:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `ಮುಖ್ಯೋಪಾಧಾಯ’ ಹುದ್ದೆಗೆ ಬಡ್ತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `ಮುಖ್ಯೋಪಾಧಾಯ’ ಹುದ್ದೆಗೆ ಬಡ್ತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

By kannadanewsnow5722/01/2026 5:24 AM

ಬೆಂಗಳೂರು : ರಾಜ್ಯದಲ್ಲಿ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯೋಪಾಧ್ಯಾಯರ ಭಡ್ತಿಗೆ ಸಂಬಂಧಿಸಿದ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು, 1967ನ್ನು ಈ ಮುಂದಿನಂತೆ ತಿದ್ದುಪಡಿ ಮಾಡಲು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14) ರ ಕಲಂ 3 ಉಪ ಕಲಂ (1) ರೊಂದಿಗೆ ಓದಿಕೊಂಡ ಕಲಂ 8 ರಂತೆ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಸರ್ಕಾರವು ಉದ್ದೇಶಿಸಿದ್ದು, ಅದರಿಂದ ಬಾಧಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಸದರಿ ಅಧಿನಿಯಮದ ಕಲಂ-3 ರ ಉಪ ಕಲಂ (2) ರ ಖಂಡ (ಎ) ರಲ್ಲಿ ಅಗತ್ಯಪಡಿಸಿರುವಂತೆ ಈ ಮೂಲಕ ಪ್ರಕಟಿಸಿದೆ. ಹಾಗೂ ಸದರಿ ಕರಡು ತಿದ್ದುಪಡಿ ನಿಯಮಗಳನ್ನು, ಅವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಸದರಿ ಕರಡು ತಿದ್ದುಪಡಿ ನಿಯಮಗಳ ಕುರಿತಂತೆ ಯಾವುದೇ ವ್ಯಕ್ತಿಯಿಂದ ನಿಗಧಿತ ಅವಧಿಯೊಳಗೆ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು -560 001 ಇವರ ವಿಳಾಸಕ್ಕೆ ಕಳುಹಿಸತಕ್ಕದ್ದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2026 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಯಾಗತಕ್ಕದ್ದು.

2. ಕೋಷ್ಟಕದ ತಿದ್ದುಪಡಿ: ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ

ಇಲಾಖೆ) (ನೇಮಕಾತಿ) ನಿಯಮಗಳು, 1967ರ ಕೋಷ್ಟಕದಲ್ಲಿ “ಶ್ರೇಣಿ III ಪತ್ರಾಂಕಿತವಲ್ಲದ ಹುದ್ದೆಗಳು” ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ: 64-ಎ ರಲ್ಲಿನ “ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು” “ನೇಮಕಾತಿ ವಿಧಾನ” ಅಂಕಣ ಸಂಖ್ಯೆ (3) ರಲ್ಲಿನ ನಮೂದುಗಳ ಬದಲಿಗೆ ಈ ಕೆಳಕಂಡ ನಮೂದುಗಳನ್ನು ಪ್ರತಿಸ್ಥಾಪಿಸತಕ್ಕದ್ದು:-

“ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಅನುಕ್ರಮವಾಗಿ 2:1ರ ಅನುಪಾತದಲ್ಲಿ ಮುಂಬಡ್ತಿ ಮೂಲಕ ಪ್ರತಿ 3ನೇ ರಿಕ್ತಸ್ಥಾನವನ್ನು ಪದವೀಧರ ಪ್ರಾಥಮಿಕ ಶಿಕ್ಷಕರಿಂದ ತುಂಬತಕ್ಕದ್ದು.

ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರು ಗ್ರೇಡ್-1 ವೃಂದಗಳಿಗೆ ಮುಂಬಡ್ತಿ ಹೊಂದಲು ಅವಕಾಶವಿದ್ದು, ಮುಂಬಡ್ತಿಗೆ ಅರ್ಹರಿರುವ ಈ ಎರಡೂ ವೃಂದಗಳ ಶಿಕ್ಷಕರಿಂದ ಮುಂಬಡ್ತಿ ನೀಡುವ ಮೊದಲು ಹಿಂದಕ್ಕೆ ಪಡೆಯಲಾಗದ ಅಭಿಮತವನ್ನು ಪಡೆಯತಕ್ಕದ್ದು”.

(2) ಅಂಕಣ (4) ರಲ್ಲಿನ ನಮೂದುಗಳ ಬದಲಿಗೆ ಈ ಕೆಳಕಂಡ ನಮೂದುಗಳನ್ನು ಪ್ರತಿಸ್ಥಾಪಿಸತಕ್ಕದ್ದು.

“ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಇವರು ಸದರಿ ವೃಂದದಲ್ಲಿ 12 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಇವರು ಸದರಿ ವೃಂದದಲ್ಲಿ 12 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು:

ಪರಂತು, ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ವೃಂದದಿಂದ ಮೇಲಿನ ಅನುಪಾತದ ಪ್ರಕಾರ ಅವಶ್ಯಕ ಸಂಖ್ಯೆಯಲ್ಲಿ ಮುಂಬಡ್ತಿಗಳನ್ನು ನೀಡಲು ಯಾವುದೇ ಕಾರಣದಿಂದ ಅನುಕ್ರಮವಾಗಿ ಸದರಿ ವೃಂದಗಳಲ್ಲಿ ಜೇಷ್ಠತೆಯನುಸಾರ ಅರ್ಹರಿರುವ ಶಿಕ್ಷಕರು ಮುಂಬಡ್ತಿ ಪಡೆಯಲು ನಿರಾಕರಿಸಿದಲ್ಲಿ ಅಥವಾ ಮುಂಬಡ್ತಿ ವರ್ತುಲದಲ್ಲಿ ಮುಂಬಡ್ತಿಗೆ ಪರಿಗಣಿಸಲು ನಿಯಮಾನುಸಾರ ಅರ್ಹರಿಲ್ಲದಿದ್ದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಇನ್ನೊಂದು ವೃಂದದಲ್ಲಿನ ಜೇಷ್ಠತೆಯನುಸಾರ ಅರ್ಹರಿರುವ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸತಕ್ಕದ್ದು. ಆದಾಗ್ಯೂ, ಈ ರೀತಿ ಅನುಕ್ರಮವಾಗಿ ಆಯಾ ವೃಂದಕ್ಕೆ ಮುಂಬಡ್ತಿಯಲ್ಲಿ ನಷ್ಟವಾದ ಹುದ್ದೆಗಳನ್ನು ಮುಂದಿನ ಮುಂಬಡ್ತಿಗಳಲ್ಲಿ ಸರಿದೂಗಿಸತಕ್ಕದ್ದು”.

BIG NEWS: Important order from the government regarding promotion of school teachers to the post of 'Mukhyopadhyaya' in the state
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಾವೇರಿ ತಂತ್ರಾಂಶದ ಮೂಲಕವೇ ಇನ್ನು `ಡಿಜಿಟಲ್ ಇ-ಸ್ಟಾಂಪ್’ ಸೇವೆ ಲಭ್ಯ.!

22/01/2026 5:10 AM1 Min Read

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `TET’ ಪರೀಕ್ಷೆಯಿಂದ ವಿನಾಯಿತಿ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ.!

22/01/2026 5:06 AM1 Min Read

BIG NEWS : `ಗೃಹ ಲಕ್ಷ್ಮಿ’ ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನ ಕಾಯಿ ಮಾರಾಟ ಮಾಡುತ್ತಿರುವ ಮಹಿಳೆ.!

22/01/2026 5:01 AM1 Min Read
Recent News

BIG NEWS : ಭ್ರಷ್ಟಾಚಾರ ಕೇಸ್ ನಲ್ಲಿ `ರಾಜ್ಯ ಪೊಲೀಸರು’ ಕೇಂದ್ರ ನೌಕರರನ್ನು ತನಿಖೆ ಮಾಡಬಹುದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

22/01/2026 5:26 AM

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `ಮುಖ್ಯೋಪಾಧಾಯ’ ಹುದ್ದೆಗೆ ಬಡ್ತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

22/01/2026 5:24 AM

ಉದ್ಯೋಗವಾರ್ತೆ : `SSLC’ ಪಾಸಾದವರಿಗೆ ಭರ್ಜರಿ ಸುದ್ದಿ : 50,000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

22/01/2026 5:15 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಾವೇರಿ ತಂತ್ರಾಂಶದ ಮೂಲಕವೇ ಇನ್ನು `ಡಿಜಿಟಲ್ ಇ-ಸ್ಟಾಂಪ್’ ಸೇವೆ ಲಭ್ಯ.!

22/01/2026 5:10 AM
State News
KARNATAKA

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `ಮುಖ್ಯೋಪಾಧಾಯ’ ಹುದ್ದೆಗೆ ಬಡ್ತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ

By kannadanewsnow5722/01/2026 5:24 AM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯೋಪಾಧ್ಯಾಯರ ಭಡ್ತಿಗೆ ಸಂಬಂಧಿಸಿದ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಾವೇರಿ ತಂತ್ರಾಂಶದ ಮೂಲಕವೇ ಇನ್ನು `ಡಿಜಿಟಲ್ ಇ-ಸ್ಟಾಂಪ್’ ಸೇವೆ ಲಭ್ಯ.!

22/01/2026 5:10 AM

BIG NEWS : ರಾಜ್ಯದ ಶಾಲಾ ಶಿಕ್ಷಕರಿಗೆ `TET’ ಪರೀಕ್ಷೆಯಿಂದ ವಿನಾಯಿತಿ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ.!

22/01/2026 5:06 AM

BIG NEWS : `ಗೃಹ ಲಕ್ಷ್ಮಿ’ ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನ ಕಾಯಿ ಮಾರಾಟ ಮಾಡುತ್ತಿರುವ ಮಹಿಳೆ.!

22/01/2026 5:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.