ಬೆಂಗಳೂರು : ಬಿಡದಿಯಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿಚಾರಣೆ ಅಂತ್ಯವಾಯಿತು. ಸತತ 4 ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಪೊಲೀಸರು ಸಂಪೂರ್ಣ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರಾಮನಗರದ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಬಿಡದಿ ಇನ್ಸ್ಪೆಕ್ಟರ್ ಶಂಕರನಾಯಕ್ ನೇತೃತ್ವದಲ್ಲಿ ಈ ಒಂದು ವಿಚಾರಣೆ ನಡೆದಿದೆ.
ವಿಚಾರಣೆ ಬಳಿಕ ಬಿಡದಿ ಪೊಲೀಸ್ ಠಾಣೆಯ ಬಳಿಕ ರಿಕ್ಕಿ ರೈ ಹೇಳಿಕೆ ನೀಡಿದ್ದು, ಏಪ್ರಿಲ್ 18ರಂದು ನನ್ನ ಮೇಲೆ ಅಟ್ಯಾಕ್ ಆಯ್ತು ಮನೆಯಿಂದ ಹೊರ ಬರುವಾಗ ನನ್ನ ಮೇಲೆ ಫೈರಿಂಗ್ ಮಾಡಿದರು. ಕಾರಿನ ಮೇಲೆ ಫೈರಿಂಗ್ ಆಗಿ ನನ್ನ ಮೂಗು ಕಟ್ ಆಗಿದೆ. ದಾಳಿಯಲ್ಲಿ ನನ್ನ ಕೈಗೂ ಸಹ ಗುಂಡು ತಗುಲಿತ್ತು. ದೇವರ ದಯೆಯಿಂದ ಏನು ಆಗಿಲ್ಲ.
ನಾನು ಸ್ಟ್ರಾಂಗ್ ಆಗಿ ಇದ್ದೇನೆ ಪ್ರಕರಣದಲ್ಲಿ ಇನ್ನೂ ಕೆಲವರು ಶಂಕಿತರಿದ್ದಾರೆ. ಅದರ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ತನಿಖೆ ನಡೆಯುತ್ತಿದೆ ಹೆಚ್ಚು ಏನು ಹೇಳಲು ಸಾಧ್ಯವಿಲ್ಲ. ನನಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ನಾವೇ ಹುಡುಕುತ್ತೇವೆ ಎಂದು ವಿಚಾರಣೆ ಬಳಿಕ ಬಿಡದಿ ಪೊಲೀಸ್ ಠಾಣೆ ಬಳಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೇಳಿಕೆ ನೀಡಿದರು.