ಹುಬ್ಬಳ್ಳಿ : ಲೋಕಸಭೆ ಚುನಾವಣೆಯ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹದ ಜೋಶಿ ಅವರ ಸಹೋದರ ಗೋಪಾಲ ಜೋಶಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರ ಠಾಣೆ ಪೊಲೀಸರು ಬಂಧಿಸಿದ್ದರು. ಇದೀಗ ಅವರನ್ನು ಹುಬ್ಬಳ್ಳಿಗೆ ಕರೆತಂದು ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾರೆ.
ಹೌದು ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿರುವ ಗೋಪಾಲ ಜೋಶಿ ನಿವಾಸಕ್ಕೆ ಪೊಲೀಸರು ತೆರಳಿ, ಪಂಚನಾಮೆ ನಡೆಸುತ್ತಿದ್ದಾರೆ. ಎಸಿಪಿ ಚಂದನ್ ರೊಂದಿಗೆ ಅಶೋಕನಗರ ಪೊಲೀಸರು ತಂಡ ಆಗಮಿಸಿದೆ. ಇದೆ ವೇಳೆ ದೂರುದಾರ ಗೋಪಾಲ ಜೋಶಿ ಮನೆಗೆ ಸುನಿತಾ ಚೌಹಾನ್ ನನ್ನು ಪೊಲೀಸರು ಕರೆತಂದಿದ್ದಾರೆ.ಸದ್ಯ ಗೋಪಾಲ್ ಮನೆಯಲ್ಲಿ ಹಣ ಎಣಿಕೆ ಕಾರ್ಯ ನಡೆಯುತ್ತಿದ್ದು ಪೊಲೀಸರು ದುಡ್ಡು ಎಣಿಸುತ್ತಿದ್ದಾರೆ.
ಬೆಂಗಳೂರು ತಂಡದ ಪೊಲೀಸರಿಂದ ಹಣ ಎಣಿಕೆ ಆಗುತ್ತಿದೆ. ಇದೇ ವೇಳೆ ಸುನಿತಾ ಚೌಹಾನ್ ಅವರು ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಯಾವುದೇ ಪಾತ್ರ ಇಲ್ಲ. ಅವರ ಹೆಸರು ಹೇಳಿಕೊಂಡು ಗೋಪಾಲ್ ನನ್ನ ಬಳಿ ಹಣ ಪಡೆದಿದ್ದರು.ಈ ವೇಳೆ ಹಣ ಹಿಂತಿರುಗಿಸಿ ಎಂದು ಹೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.