Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಪಾರ್ಟಿ ವೇಳೆ ಪೊಲೀಸರ ಎಂಟ್ರಿ : ಭಯದಿಂದ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಯುವತಿ ಗಂಭೀರ!

15/12/2025 12:47 PM

BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ

15/12/2025 12:45 PM

BIG NEWS : ಕರ್ನಾಟಕದ ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ  ಶೀಘ್ರ ‘ಬೈ ಎಲೆಕ್ಷನ್‌’…!

15/12/2025 12:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
KARNATAKA

BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

By kannadanewsnow0501/06/2025 3:56 PM

ಬೆಂಗಳೂರು : ರಾಜ್ಯದ ಶಕ್ತಿಸೌಧ ವಿಧಾನಸೌಧ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಹೀಗಾಗಿ ಶಕ್ತಿಸೌಧವನ್ನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.

ಹೌದು ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಇಂದಿನಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ವಿಧಾನಸೌಧ ಪ್ರವಾಸಕ್ಕೆ ಮುಕ್ತ. ಮೊದಲ ದಿನವೇ ವಿಧಾನಸೌಧ ಟೂರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ತಲಾ 25-30 ಜನ ಇರುವ ನಾಲ್ಕೈದು ಬ್ಯಾಚ್‌ಗಳ ಮೂಲಕ ಪ್ರವಾಸಿಗರು ವಿಧಾನಸೌಧದ ಒಳಗೆಲ್ಲಾ ಸುತ್ತಾಡಿ, ಅದರ ಸೌಂದರ್ಯ ತಮ್ಮ ಕಣ್ಮನದೊಳಗೆ ತುಂಬಿಕೊಂಡರು. ಕುಟುಂಬ, ಸ್ನೇಹಿತರೊಂದಿಗೆ ಬಂದ ಹಲವರು ವಿಧಾನಸೌಧದ ಒಳಗೆ, ಹೊರಗೆ ಸುತ್ತಾಡಿ ಖುಷಿಪಟ್ಟರು.

ಪ್ರತೀ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ವಿಧಾನಸೌಧ ಟೂರ್‌ಗೆ ಅವಕಾಶವಿರುತ್ತದೆ. 16 ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ 50 ರೂ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಅವಕಾಶವಿರಲಿದೆ.

ಟೂರ್‌ಗಾಗಿ ಟಿಕೆಟ್‌ನ್ನು ಕೆಎಸ್‌ಟಿಡಿಸಿ ಆನ್‌ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗಿದ್ದು, ಒಂದು ಗ್ರೂಪ್‌ಗೆ ವೀಕ್ಷಣೆಗೆ 90 ನಿಮಿಷಗಳ ಅವಕಾಶ ಇರಲಿದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ಕೊಡಲಿದ್ದಾರೆ.

ಸದ್ಯಕ್ಕೆ ಹತ್ತು ಗೈಡ್‌ಗಳು ಪ್ರವಾಸಿಗರಿಗೆ ವಿಧಾನಸೌಧ ವೀಕ್ಷಣೆ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಮಹಾತ್ಮಾಗಾಂಧಿ ಪ್ರತಿಮೆ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಪ್ರತಿಮೆ, ವಿಧಾನಸೌಧ ಫೌಂಡೇಷನ್ ಕಲ್ಲು, ಗ್ಯಾಲರಿಗಳು, ವಿಧಾನಸೌಧದ ಕಾರಿಡಾರ್‌ಗಳು, ಕಟ್ಟಡ ವೈಶಿಷ್ಟ್ಯಗಳ ಮಾಹಿತಿ ನೀಡಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಪಾರ್ಟಿ ವೇಳೆ ಪೊಲೀಸರ ಎಂಟ್ರಿ : ಭಯದಿಂದ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಯುವತಿ ಗಂಭೀರ!

15/12/2025 12:47 PM1 Min Read

BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ

15/12/2025 12:45 PM2 Mins Read

BIG NEWS : ಕರ್ನಾಟಕದ ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ  ಶೀಘ್ರ ‘ಬೈ ಎಲೆಕ್ಷನ್‌’…!

15/12/2025 12:36 PM1 Min Read
Recent News

ಬೆಂಗಳೂರಲ್ಲಿ ಪಾರ್ಟಿ ವೇಳೆ ಪೊಲೀಸರ ಎಂಟ್ರಿ : ಭಯದಿಂದ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಯುವತಿ ಗಂಭೀರ!

15/12/2025 12:47 PM

BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ

15/12/2025 12:45 PM

BIG NEWS : ಕರ್ನಾಟಕದ ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ  ಶೀಘ್ರ ‘ಬೈ ಎಲೆಕ್ಷನ್‌’…!

15/12/2025 12:36 PM

Year Ender 2025 : `ಆಪರೇಷನ್ ಸಿಂಧೂರ್’ ನಿಂದ ಹಿಡಿದು ಸರ್ಕಾರ ವಿರುದ್ಧದ ದಂಗೆಗಳವರೆಗೆ : ಹೀಗಿವೆ 2025ರಲ್ಲಿ ಸಂಭವಿಸಿದ ವಿಶ್ವದ 13 ದೊಡ್ಡ ಘಟನೆಗಳು

15/12/2025 12:30 PM
State News
KARNATAKA

ಬೆಂಗಳೂರಲ್ಲಿ ಪಾರ್ಟಿ ವೇಳೆ ಪೊಲೀಸರ ಎಂಟ್ರಿ : ಭಯದಿಂದ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಯುವತಿ ಗಂಭೀರ!

By kannadanewsnow0515/12/2025 12:47 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಯುವತಿಯೋಬ್ಬಳು ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಳು. ಈ ವೇಳೆ ಏಕಾಏಕಿ ಪೊಲೀಸರು ಹೋಟೆಲ್ ಗೆ ಎಂಟ್ರಿ…

BIG NEWS : ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ `ಶಾಮನೂರು ಶಿವಶಂಕರಪ್ಪ’ ಕಾರಣ : ಸದನದಲ್ಲಿ CM ಸಿದ್ದರಾಮಯ್ಯ ಸಂತಾಪ

15/12/2025 12:45 PM

BIG NEWS : ಕರ್ನಾಟಕದ ಈ ಎರಡು ವಿಧಾನಸಭಾ ಕ್ಷೇತ್ರಗಳಿಗೆ  ಶೀಘ್ರ ‘ಬೈ ಎಲೆಕ್ಷನ್‌’…!

15/12/2025 12:36 PM

BREAKING : ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ, ಕಲಾಪ ನಾಳೆ ಮುಂದೂಡಿಕೆ

15/12/2025 12:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.