ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾಗದ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ವರುಣಾದಿಂದ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಳವಾಗುತ್ತಿದೆ. ಮಗನ ಮೇಲಿನ ಪ್ರೀತಿಯಿಂದ ಮಗನ ಮುಂದಿನ ರಾಜಕೀಯ ದಿನಗಳಿಗಾಗಿ ತಮ್ಮನ್ನು ಶಾಸಕಾರಿಗ ಆಯ್ಕೆ ಮಾಡಿದ್ದ ವರುಣಾವನ್ನು ಬಿಟ್ಟು ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಬಾದಾಮಿಯಲ್ಲಿ ಅತಿ ಕಡಿಮೆ ಅಂತರದಿಂದ ಸಿದ್ದರಾಮಯ್ಯ ಅವರು ಗೆಲುವು ಕಂಡು ಕೊಂಡಿದ್ದರು.
ಇವೆಲ್ಲದರ ನಡುವೆ ಬಾದಾಮಿಯನ್ನು ಬಿಟ್ಟು ಬೇರೆ ಕಡೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಕೋಲಾರ, ಚಿಕ್ಕನಾಯಕನಹಳ್ಳಿ, ಸೇರಿದಂತೆ ಇತರೆ ಕಡೆಗಳಿಂದ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಅವರ ಆತ್ಮೀಯರು ಒತ್ತಡ ಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಯಾವ ಕಡೆ ನಿಲ್ಲಬೇಕು ಗೆಲ್ಲ ಬೇಕು ಎನ್ನುವುದರ ಬಗ್ಗೆ ಇನ್ನೂ ಗೊಂದಲದಲ್ಲಿ ಇದ್ದಾರೆ.
ಈ ನಡುವೆ ಕೋಲಾರದಲ್ಲಿ ಕೆಹೆಚ್ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಅವರ ಒಳಜಗಳ ಕೂಡ, ಸಿದ್ದರಾಮಯ್ಯ ಅವರಿಗೆ ತಲೆ ನೋವಾಗಿದೆ. ಇವೆಲ್ಲದರ ನಡುವೆ ಮಗನಿಗೆ ಬಿಟ್ಟುಕೊಟ್ಟಿದ್ದ ವರುಣನನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಈ ಮೂಲಕ ತಮಗೆ ಗೊತ್ತಿರುವ ಜನರ ನಡುವೆ ಕಣಕ್ಕೆ ಇಳಿದ್ರೆ ಸೇಫ್ ಅನ್ನೋ ಮನೋಭಾವ ಕೂಡ ಬಂದಿದೆಯಂಥೆ. ಈ ಕಾರಣಕ್ಕಾಗಿ ಅವರು ಕಳೆದ ಎರಡು ದಿನಗಳಿಂದ ವರುಣಾದಲ್ಲಿ ಮತದಾರರನ್ನು ಭೇಟಿಯಾಗುತ್ತಿದ್ದು, ಈ ಮೂಲಕ ಮತ್ತೆ ವರುಣಾದಿಂದಲೇ ಕಣಕ್ಕೆ ಇಳಿಯುವುದು ಬಹುತೇಕ ಫಿಕ್ಸ್ ಆಗುತ್ತಿದೆ.