Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING ; ಫೆ.1ರಂದು 2026-27ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ ಸಾಧ್ಯತೆ : ಮೂಲಗಳು

19/12/2025 6:39 PM

‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ’ಗೆ ‘ಲೋಹಿಯಾ ಪ್ರಶಸ್ತಿ’ ಪ್ರದಾನ

19/12/2025 6:36 PM
Suryakumar Yadav

BREAKING : ಟಿ20 ವಿಶ್ವಕಪ್ ಬಳಿಕ ಟಿ20ಐ ಕ್ಯಾಪ್ಟನ್ ಸ್ಥಾನದಿಂದ ‘ಸೂರ್ಯಕುಮಾರ್ ಯಾದವ್’ ಔಟ್ ಸಾಧ್ಯತೆ : ವರದಿ

19/12/2025 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ‘6 ಟಾಸ್ಕ್ ಫೋರ್ಸ್’ ರಚನೆ : ಎಂ.ಬಿ ಪಾಟೀಲ್
KARNATAKA

BIG NEWS : ಕರ್ನಾಟಕದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ‘6 ಟಾಸ್ಕ್ ಫೋರ್ಸ್’ ರಚನೆ : ಎಂ.ಬಿ ಪಾಟೀಲ್

By kannadanewsnow0511/06/2025 6:27 AM

ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ತಯಾರಿಕಾ ವಲಯದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು, ರಾಜ್ಯ ಸರ್ಕಾರ ಕರ್ನಾಟಕದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ಆರು ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು 60 ಕಂಪನಿಗಳ 80 ಮುಖ್ಯಸ್ಥರು ಮತ್ತು ಸಿಇಒಗಳೊಂದಿಗೆ ‘ಉತ್ಪಾದನಾ ಮಂಥನ’ ನಡೆಯಿತು. ಈ ಸಮಾವೇಶದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್, ಟೆಕ್ನಿಕಲ್ ಮತ್ತು ಎಂಎಂಎಫ್ ಬೇಸ್ಡ್ ಟೆಕ್ಸ್ಟೈಲ್ಸ್ ಹಾಗೂ ಪಾದರಕ್ಷೆ, ಗೊಂಬೆ ಮತ್ತು ಎಫ್ಎಂಸಿಜಿ ಉತ್ಪನ್ನಗಳನ್ನು ಒಳಗೊಂಡಿರುವ ಗ್ರಾಹಕ ಉತ್ಪನ್ನಗಳ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು.

ರಾಜ್ಯದ ಕೈಗಾರಿಕಾ ವಲಯವು ತಯಾರಿಕಾ ವಲಯಕ್ಕೆ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ರಫ್ತು ಕೇಂದ್ರಿತವಾಗಿರುವಂಥ `ಫ್ರೀ ಟ್ರೇಡ್ ವೇರ್-ಹೌಸಿಂಗ್ ಝೋನ್’ಗಳು, ರಫ್ತನ್ನೇ ಮುಖ್ಯವಾಗಿ ಹೊಂದಿರುವ ಕೈಗಾರಿಕಾ ಪಾರ್ಕುಗಳು, ಬಂದರುಗಳಿಗೆ ತ್ವರಿತ ಸಂಪರ್ಕ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಲಾಗುವುದು. ಉದ್ಯಮಿಗಳು ಮಾಡಿರುವ ಶಿಫಾರಸುಗಳನ್ನು ಸರಕಾರದ ಕ್ರಿಯಾ ಯೋಜನೆಯ ಭಾಗವನ್ನಾಗಿ ಮಾಡಿಕೊಳ್ಳಲಾಗುವುದು.

6 ಪ್ರಮುಖ ವಲಯಗಳ ಪ್ರಗತಿಗೆ ಪ್ರತ್ಯೇಕ ಟಾಸ್ಕ್-ಫೋರ್ಸ್ ಗಳನ್ನು ರಚಿಸಲಿದೆ. ಇದಕ್ಕೆ ಬೇಕಾದ ಸಮಗ್ರ ಟೌನ್-ಶಿಪ್ ಗಳ ಅಭಿವೃದ್ಧಿಯಿಂದ ಹಿಡಿದು ಕೈಗಾರಿಕಾ ಪ್ರದೇಶಗಳಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಬೇಕಾದ ಸಮರ್ಪಕ ಸಂಪರ್ಕದವರೆಗೆ ಪ್ರತಿಯೊಂದು ಸೌಲಭ್ಯಗಳನ್ನೂ ಒದಗಿಸಲಾಗುವುದು.ಜೊತೆಗೆ, ಆರೂ ವಲಯಗಳಲ್ಲಿ ಪ್ರಗತಿ ಸಾಧಿಸಲು ಟಾಸ್ಕ್-ಫೋರ್ಸ್ ಗಳನ್ನು ರಚಿಸಲಾಗುವುದು. ಇದಕ್ಕಾಗಿ 2030ರ ಹೊತ್ತಿಗೆ 7.5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ, 20 ಲಕ್ಷ ಉದ್ಯೋಗ ಸೃಷ್ಟಿಸುವತ್ತ ದಾಪುಗಾಲು ಇಡಬೇಕಾಗಿದೆ.

ಉತ್ಪಾದನಾ ಮಂಥನ; ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ರೂಪಿಸುವತ್ತ ಮಹತ್ತರ ಹೆಜ್ಜೆ

ರಾಜ್ಯವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ (ಗ್ಲೋಬಲ್ ಮ್ಯಾನ್ಯುಫ್ಯಾಕ್ಚರಿಂಗ್ ಹಬ್) ರೂಪಿಸುವ ಉದ್ದೇಶದೊಂದಿಗೆ ಆಯೋಜಿಸಲಾದ #ಉತ್ಪಾದನಾಮಂಥನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಆಯೋಜನೆ… pic.twitter.com/NlUpBomp6B

— M B Patil (@MBPatil) June 10, 2025

Share. Facebook Twitter LinkedIn WhatsApp Email

Related Posts

‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ’ಗೆ ‘ಲೋಹಿಯಾ ಪ್ರಶಸ್ತಿ’ ಪ್ರದಾನ

19/12/2025 6:36 PM1 Min Read

ರಾಜ್ಯದ ‘ಪೌರ ಕಾರ್ಮಿಕ’ರಿಗೆ ಸಚಿವ ಬೈರತಿ ಸುರೇಶ್ ಗುಡ್ ನ್ಯೂಸ್: ಪಾಲಿಕೆಯಿಂದಲೇ ‘ನೇರ ವೇತನ’ ಪಾವತಿ

19/12/2025 6:18 PM2 Mins Read

‘ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ’ದ ಅಧ್ಯಕ್ಷರಾಗಿ ‘ಡಾ.ನಾಗೇಂದ್ರಪ್ಪ’ ಆಯ್ಕೆ

19/12/2025 6:13 PM2 Mins Read
Recent News

BREAKING ; ಫೆ.1ರಂದು 2026-27ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ ಸಾಧ್ಯತೆ : ಮೂಲಗಳು

19/12/2025 6:39 PM

‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ’ಗೆ ‘ಲೋಹಿಯಾ ಪ್ರಶಸ್ತಿ’ ಪ್ರದಾನ

19/12/2025 6:36 PM
Suryakumar Yadav

BREAKING : ಟಿ20 ವಿಶ್ವಕಪ್ ಬಳಿಕ ಟಿ20ಐ ಕ್ಯಾಪ್ಟನ್ ಸ್ಥಾನದಿಂದ ‘ಸೂರ್ಯಕುಮಾರ್ ಯಾದವ್’ ಔಟ್ ಸಾಧ್ಯತೆ : ವರದಿ

19/12/2025 6:18 PM

ರಾಜ್ಯದ ‘ಪೌರ ಕಾರ್ಮಿಕ’ರಿಗೆ ಸಚಿವ ಬೈರತಿ ಸುರೇಶ್ ಗುಡ್ ನ್ಯೂಸ್: ಪಾಲಿಕೆಯಿಂದಲೇ ‘ನೇರ ವೇತನ’ ಪಾವತಿ

19/12/2025 6:18 PM
State News
KARNATAKA

‘KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ’ಗೆ ‘ಲೋಹಿಯಾ ಪ್ರಶಸ್ತಿ’ ಪ್ರದಾನ

By kannadanewsnow0919/12/2025 6:36 PM KARNATAKA 1 Min Read

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ನೀಡುವ ಲೋಹಿಯಾ ಪ್ರಶಸ್ತಿಗೆ ಈ ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

ರಾಜ್ಯದ ‘ಪೌರ ಕಾರ್ಮಿಕ’ರಿಗೆ ಸಚಿವ ಬೈರತಿ ಸುರೇಶ್ ಗುಡ್ ನ್ಯೂಸ್: ಪಾಲಿಕೆಯಿಂದಲೇ ‘ನೇರ ವೇತನ’ ಪಾವತಿ

19/12/2025 6:18 PM

‘ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ’ದ ಅಧ್ಯಕ್ಷರಾಗಿ ‘ಡಾ.ನಾಗೇಂದ್ರಪ್ಪ’ ಆಯ್ಕೆ

19/12/2025 6:13 PM

BREAKING: ಸಾಗರದಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ

19/12/2025 5:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.