ಬೆಂಗಳೂರು : ಯುಡಿಆರ್ ಕೇಸ್ ಪ್ರತಿ ನೀಡಲು ಲಂಚಕ್ಕೆ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳಂದೂರು ಠಾಣೆಯ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿಯನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಳಿಸಿ, ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ ಲಂಚ ಕೇಳಿದ್ದಾರೆ ಎನ್ನುವ ಆರೋಪ ಮಾಡಿದ್ದರು. ವರದಿ ನೀಡುವಂತೆ ಕಮಿಷನರ್ ಸೀಮಂತ ಕುಮಾರ್ ಸೂಚನೆ ನೀಡಿದರು. ಕಮಿಷನರ್ ಗೆ ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ಈ ಕುರಿತು ವರದಿ ಸಲ್ಲಿಸಿದರು. ಡಿಸಿಪಿ ವರದಿ ಆಧಾರದ ಮೇಲೆ ಪಿಐ ಪರಮೇಶ್ ರೊಟ್ಟಿ ಸಸ್ಪೆಂಡ್ ಮಾಡಿ ಸೀಮಂತ ಕುಮಾರ್ ಸಿಂಗ್ ಅದೇಶಿಸಿದ್ದಾರೆ.
		







