ಬೀದರ್ : ಕಳೆದ ಒಂದುವರೆ ವರ್ಷದಿಂದ ಬೀದರ್ ನಲ್ಲಿ ವಿಮಾನ ಹಾರಾಟ ಬಂದ್ ಆಗಿತ್ತು. ಇದೀಗ ಇಂದು ವಿಮಾನ ಹರಾಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡಿ ಸಿಎಂ ಸಿದ್ದರಾಮಯ್ಯ ಇಂದು ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.
ಕಾರಣವೇನು?
ಉಡಾನ್ ಯೋಜನೆಯ ಅಡಿ ನೀಡುತ್ತಿದ್ದ ರಿಯಾಯ್ತಿಯನ್ನು ನಿಲ್ಲಿಸಿದ್ದರು. ರಿಯಾಯಿತಿ ನಿಲ್ಲಿಸಿದ್ದಕ್ಕೆ ಬೀದರ್ನಲ್ಲಿ ವಿಮಾನ ಹಾರಾಟ ಬಂದ್ ಆಗಿತ್ತು. ಒಂದುವರೆ ವರ್ಷದಿಂದ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಬೀದರ್ ಬೆಂಗಳೂರು ಮಧ್ಯ ವಿಮಾನ ಹಾರಾಟ ಬಂದ್ ಆಗಿತ್ತು. ರಾಜ್ಯ ಸರ್ಕಾರದಿಂದ ರಿಯಾಯ್ತಿ ಕೊಡುವುದಾಗಿ ಒಪ್ಪಂದ ಆದ ಬಳಿಕ ಇಂದಿನಿಂದ ಬೀದರ್ ನಿಂದ ವಿಮಾನ ಹಾರಾಟ ಆರಂಭವಾಗಿದೆ.