ಬಾಗಲಕೋಟೆ : ತಿರುಪತಿ ಲಡ್ಡು ಕಲಬೆರಕೆಯಲ್ಲಿ ವಿದೇಶಿ ಕ್ರಿಶ್ಚಿಯನ್ ಪಾದ್ರಿಗಳ ಕೈವಾಡವಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಮದಗಿಎ ಮಾತನಾಡಿದ ಅವರು, ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಕಲಬರೆಕೆ ಮಾಡುತ್ತಿರುವುದು ಕೇಳಿ ಆಘಾತವಾಗಿದೆ. ಇದರಲ್ಲಿ ವಿದೇಶಿ ಕ್ರಿಶ್ಚಿಯನ್ ಪಾದ್ರಿಗಳ ಷಡ್ಯಂತ್ರವಿದೆ. ಜಗನ್ ಮೋಹನ್ ರೆಡ್ಡಿ ಕಾಲದಲ್ಲೇ ಯಾಕೆ ಹೀಗಾಗಿದೆ. ರೆಡ್ಡಿ ಕನ್ವರ್ಟಡ್ ಕ್ರಿಶ್ಚಿಯನ್. ವಿದೇಶಿ ಕ್ರಿಶ್ಚಿಯನ್ ಪಾದ್ರಿಗಳ ಮೂಲಕ ತಿರುಪತಿ ಲಡ್ಡು ಕಲಬೆರಕೆಯಲ್ಲಿ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.