ಚಿತ್ರದುರ್ಗ : ಮೊಬೈಲ್ಗೆ ಟೆಂಪರ್ ಗ್ಲಾಸ್ ಗಾಗಿ ಜಗಳ ನಡೆದಿದ್ದು ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿಲಾಗಿದೆ. ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ನಡೆದಿದೆ.
ಚಿತ್ರದುರ್ಗದ ಜಿಲಾಸ್ಪತ್ರೆ ಬಳಿ ಸಂತೆ ಮೈದಾನ ಬಳಿಯ ಮೊಬೈಲ್ ಅಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ.ಅನ್ಯಕೋಮಿನ ಯುವಕನೊಬ್ಬ ಮೊಬೈಲ್ಗೆ ಟೆಂಪರ್ ಕ್ಲಾಸ್ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಅಂಗಡಿ ಮಾಲೀಕನಿಗೆ ಅನ್ಯಕೋಮಿನ ಯುವಕ ಚಾಕು ಇರಿದಿರುವ ಘಟನೆ ನಡೆದಿದೆ. ಘಟನೆ ಖಂಡಿಸಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೊಬೈಲ್ ಸ್ಕ್ರೀನ್ ಗಾರ್ಡ್ ಬದಲಿಸಲು ಅನ್ಯಕೊಮಿನ ಯುವಕ ಮೊಬೈಲ್ ಶಾಪ್ ಗೆ ಬಂದಿದ್ದಾನೆ. ಬೇರೆ ಬ್ರಾಂಡ್ ಸ್ಕ್ರೀನ್ ಗಾರ್ಡಿಗೆ ಅಂಗಡಿ ಮಾಲೀಕ ವಿಕ್ರಂ ಹೆಚ್ಚುವರಿ ಹಣ ಕೇಳಿದ್ದಾರೆ. 100 ರೂಪಾಯಿ ಹೆಚ್ಚುವರಿ ಹಣ ಕೇಳಿದ್ದ ವಿಕ್ರಂ ಚೌದರಿ, ಇಲ್ಲವಾದರೆ ಹಣ ವಾಪಸ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಹೆಚ್ಚುವರಿ ಹಣ ಕೇಳಿದಕ್ಕೆ ಜಗಳ ಮಾಡಿ ಏಕಾಏಕಿ ಆರೋಪಿ ವಿಕ್ರಮಗೆ ಚಾಕು ಇರದಿದ್ದಾನೆ.
ವಿಕ್ರಂ ಮೇಲೆ ದಾಳಿಗೆ ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಇಂದುಪರ ಸಂಘಟನೆಯಿಂದ ಇದೀಗ ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸುತ್ತಿದೆ. ವಿಕ್ರಂ ಸಂಘದ ಜೊತೆ ಗುರುತಿಸಿಕೊಂಡಿದ್ದಕ್ಕೆ ದಾಳಿ ನಡೆದಿದೆ. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾಳೆ ಚಿತ್ರದುರ್ಗ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಹಿಂದೂಪರ ಸಂಘಟನೆಗಳು ಪೊಲೀಸರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.








