ತುಮಕೂರು : ಹೇಮಾವತಿ ಕೆನಾಲ್ ಲಿಂಕ್ ವಿಚಾರವಾಗಿ ಇತ್ತೀಚಿಗೆ ತುಮಕೂರಿನಲ್ಲಿ ರೈತರು, ವಿವಿಧ ಮಠಾಧೀಶರು, ರಾಜಕೀಯ ನಾಯಕರು ಭಾರಿ ಪ್ರತಿಭಟನೆ ನಡೆಸಿದರು. ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳ ವಿರುದ್ಧ ಹಾಗೂ ಹಲವು ಮುಖಂಡರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಮಠಾಧೀಶ್ವರ ಮೇಲೆ ದಾಖಲಾಗಿರುವ fir ಗಳನ್ನು ರದ್ದು ಮಾಡಿ ಸರ್ವ ಪಕ್ಷ ಸಭೆ ಕರೆದು ಹೇಮಾವತಿ ಕೆನಲ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಪಕ್ಷಾತೀತವಾಗಿ ಈ ಯೋಜನೆಯನ್ನು ವಿರೋಧ ಮಾಡುತ್ತಿದ್ದೇವೆ. ಹೇಮಾವತಿ ಕೆನಾಲ್ ಕಾಮಗಾರಿ ವಿಚಾರವಾಗಿ ಸಂಕಾಪುರ ಗ್ರಾಮದ ಬಳಿ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಕಾಪುರ ಗ್ರಾಮದಲ್ಲಿ ಮಾತನಾಡಿದ ಅವರು, ನಿಷೇಧಾಜ್ಞೆ ಜಾರಿ ಮಾಡಿದರು ನಾವು ವಿರೋಧ ಮಾಡಿದ್ದೆವು. ಈ ಹೋರಾಟಕ್ಕೆ ಸುಮಾರು 20 ಸಾವಿರ ರೈತರು ಕೈ ಜೋಡಿಸಿದರು. ತುಮಕೂರಿ ಇತಿಹಾಸದಲ್ಲಿ ಇಂತಹ ಹೋರಾಟ ನಡೆದಿರಲಿಲ್ಲ.
ರೈತರು ಮಠಾಧೀಶರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಮಗಾರಿ ನಿಲ್ಲಿಸಬೇಕು ಎಫ್ಐಆರ್ ಗಳನ್ನು ರದ್ದು ಮಾಡಬೇಕು. ಅಲ್ಲದೆ ಸರ್ವಪಕ್ಷ ಸಭೆ ಮಾಡಿ ಹೇಮಾವತಿ ಕೆನಲ್ ರದ್ದು ಮಾಡಬೇಕು. ಇನ್ನೊಂದು ತಿಂಗಳು ಒಳಗೆ ಯೋಜನೆಯ ರದ್ದು ಮಾಡದಿದ್ದರೆ ಸರ್ಕಾರವನ್ನು ಬಿಡಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಗಾಳಿಯಲ್ಲಿ ಗುಂಡು ಹೊಡೆಯಬೇಡಿ. ಗುಬ್ಬಿ ಕ್ಷೇತ್ರದ ಶಾಸಕರು ರೈತರ ಜೊತೆ ನಿಲ್ಲಬೇಕು ಎಂದು ಸಂಕಾಪುರ ಗ್ರಾಮದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದರು.