Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಬಹುತೇಕ ಅಂತಿಮ: ‘ಕೇವಲ ಅಲ್ಪವಿರಾಮ ಮತ್ತು ಪೂರ್ಣವಿರಾಮಗಳಷ್ಟೇ ಬಾಕಿ’ ಎಂದ ಸಚಿವ ಪೀಯೂಷ್ ಗೋಯಲ್

PM SVANidhi Scheme : ಆಧಾರ್ ಕಾರ್ಡ್ ಇದ್ದರೆ ಸಾಕು 90 ಸಾವಿರ ರೂ.ವರೆಗೆ ಸಾಲ..! ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

CBSE 12ನೇ ತರಗತಿ ಫಲಿತಾಂಶ 2026: ಅಂಕಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿಧಾನ : ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಈ ಮೂರು ನಗರಗಳಲ್ಲಿ ಮುಂದಿನ ‘IPL’ ಪಂದ್ಯ ನಡೆಸಲು ನಿರ್ಧರಿಸಿದ ‘BCCI’
INDIA

BIG NEWS : ಈ ಮೂರು ನಗರಗಳಲ್ಲಿ ಮುಂದಿನ ‘IPL’ ಪಂದ್ಯ ನಡೆಸಲು ನಿರ್ಧರಿಸಿದ ‘BCCI’

By ಸುರೇಶ್‌

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಹೆಚ್ಚಾದ ಹಿನ್ನಲೆ ಐಪಿಎಲ್ ಸೀಸನ್ 18 ಅನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿತ್ತು. ಇಂದು ಪಾಕಿಸ್ತಾನ ಮತ್ತು ಭಾರತ ಕದನ ವಿರಾಮ ಘೋಷಿಸಿದೆ. ಹಾಗಾಗಿ ಇದೀಗ ಮೂರು ನಗರಗಳಲ್ಲಿ ಮುಂದಿನ ಪಂದ್ಯಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಗೆ ತಾತ್ಕಾಲಿಕ ಕದನವಿರಾಮ ಘೋಷಣೆಯಾಗಿದೆ. ಇದರಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025ರ ಎರಡನೇ ಹಂತ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಆದರೆ, ವಿದೇಶಿ ಆಟಗಾರರ ಆಗಮನ ಮತ್ತು ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ಲೀಗ್‌ನ ತಕ್ಷಣದ ಆರಂಭ ಅನುಮಾನದಲ್ಲಿದೆ. ಬಿಸಿಸಿಐ ಸರ್ಕಾರದೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಅದರಂತೆ ಇದೀಗ ಮುಂದಿನ ಪಂದ್ಯಕ್ಕೆ ಬಿಸಿಸಿಐ ಮೂರು ಮೈದಾನಗಳನ್ನು ಸೂಚಿಸಿದ್ದು, ಉಳಿದ 16 ಪಂದ್ಯಗಳು ಅಲ್ಲೇ ನಡೆಸಲು ಚಿಂತನೆ ನಡೆಸಲಾಗಿದೆ. ಉತ್ತರ ಭಾರತದಲ್ಲಿ ಯುದ್ಧದ ಭೀತಿ ಹೆಚ್ಚಿರುವ ಹಿನ್ನಲೆ ಮುಂದಿನ ಪಂದ್ಯಾಟವನ್ನು ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ, ಹಾಗೂ ಹೈದರಾಬಾದ್ ನಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಲಾಗುತ್ತಿದೆ.ಒಂದು ವೇಳೆ ಬಿಸಿಸಿಐನ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ಕೆಲವೇ ದಿನಗಳಲ್ಲಿ ಪಂದ್ಯಾಟ ಪುನಾರಂಭ ಆಗಲಿದೆ ಎನ್ನಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ್ದ ಬಿಸಿಸಿಐ ಮೇ 9 ರ ಶನಿವಾರ, ಐಪಿಎಲ್ 2025 ರ ಸೀಸನ್​ ಅನ್ನು ಒಂದು ವಾರ ಮುಂದೂಡುವುದಾಗಿ ಘೋಷಿಸಿತ್ತು. ಆದರೆ ದಿನೇ ದಿನೇ ಉಭಯ ದೇಶಗಳ ನಡುವಿನ ಸೇನಾ ಕಾರ್ಯಾಚರಣೆ ಜೋರಾದ ಕಾರಣ, ವಾರದ ಬಳಿಕವೂ ಐಪಿಎಲ್ ಆರಂಭವಾಗುವುದು ಕಷ್ಟ ಎಂದು ತೋರುತ್ತಿತ್ತು. ಹೀಗಾಗಿ ಪಂದ್ಯಾವಳಿ ನಡೆಸಲು ಬೇರೆ ದಾರಿಯನ್ನು ಹುಡುಕಲು ಮುಂದಾಗಿದ್ದ ಬಿಸಿಸಿಐ, ವಿದೇಶದಲ್ಲಿ ಲೀಗ್ ನಡೆಸಲು ಚಿಂತಿಸಿತ್ತು. ಆದರೀಗ ಕದನ ವಿರಾಮ ಘೋಷಣೆಯಾಗಿರುವುದರಿಂದ ಪಂದ್ಯಾವಳಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿವೆ.

ಕದನ ವಿರಾಮ ಘೋಷಣೆ ಮಾಡಿದ ನಂತರ, ಎರಡೂ ದೇಶಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯಾವಳಿ ಮತ್ತೆ ಪ್ರಾರಂಭವಾಗಬಹುದೆಂಬ ಭರವಸೆಯನ್ನು ಹೊಂದಿದ್ದಾರೆ. ಈ ಸೀಸನ್​ನಲ್ಲಿ ಇಲ್ಲಿಯವರೆಗೆ 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈ ರೀತಿಯಾಗಿ ಸೀಸನ್‌ನಲ್ಲಿ ಒಟ್ಟು 17 ಪಂದ್ಯಗಳು ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಮತ್ತೊಮ್ಮೆ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ.

Share. Facebook Twitter LinkedIn WhatsApp Email

Related Posts

​ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಬಹುತೇಕ ಅಂತಿಮ: ‘ಕೇವಲ ಅಲ್ಪವಿರಾಮ ಮತ್ತು ಪೂರ್ಣವಿರಾಮಗಳಷ್ಟೇ ಬಾಕಿ’ ಎಂದ ಸಚಿವ ಪೀಯೂಷ್ ಗೋಯಲ್

2 Mins Read

CBSE 12ನೇ ತರಗತಿ ಫಲಿತಾಂಶ 2026: ಅಂಕಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿಧಾನ : ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ

3 Mins Read

BREAKING: ದೆಹಲಿ ಮೇಯರ್ ಕಚೇರಿ, ನ್ಯಾಯಾಲಯಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ: ‘ಖಲಿಸ್ತಾನ್ ನ್ಯಾಷನಲ್ ಆರ್ಮಿ’ಯಿಂದ ಇ-ಮೇಲ್ ಸಂದೇಶ

1 Min Read
Recent News

​ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಬಹುತೇಕ ಅಂತಿಮ: ‘ಕೇವಲ ಅಲ್ಪವಿರಾಮ ಮತ್ತು ಪೂರ್ಣವಿರಾಮಗಳಷ್ಟೇ ಬಾಕಿ’ ಎಂದ ಸಚಿವ ಪೀಯೂಷ್ ಗೋಯಲ್

PM SVANidhi Scheme : ಆಧಾರ್ ಕಾರ್ಡ್ ಇದ್ದರೆ ಸಾಕು 90 ಸಾವಿರ ರೂ.ವರೆಗೆ ಸಾಲ..! ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

CBSE 12ನೇ ತರಗತಿ ಫಲಿತಾಂಶ 2026: ಅಂಕಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿಧಾನ : ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ

ಡೆಬಿಟ್, ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಬ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು..!

State News
KARNATAKA

PM SVANidhi Scheme : ಆಧಾರ್ ಕಾರ್ಡ್ ಇದ್ದರೆ ಸಾಕು 90 ಸಾವಿರ ರೂ.ವರೆಗೆ ಸಾಲ..! ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

By kannadanewsnow57 KARNATAKA 2 Mins Read

ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಸ್ವನಿಧಿ…

ಡೆಬಿಟ್, ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಬ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು..!

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಸೇವಾಸಿಂಧು ಫೋರ್ಟಲ್ ಮೂಲಕ `ಬಸ್ ಪಾಸ್‍’ಗೆ ಅರ್ಜಿ ಆಹ್ವಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.