ಮೈಸೂರು : ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆ ಸಮೀಪ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅರ್ಜುನ್ (40) ಮೃತ ದುರ್ದೈವಿ.ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಎಸ್.ಎಸ್. ಇಂಡಸ್ಟ್ರೀಸ್ ಎಂಬ ಕಾರ್ಖಾನೆ ನಡೆಸುತ್ತಿದ್ದರು. ಹಲವಾರು ದಿನಗಳಿಂದ ಅರ್ಜುನ್ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ.ಮುಂಜಾನೆ ಮನೆಯಿಂದ ಹೊರನಡೆದ ಅರ್ಜುನ್ ತಮ್ಮ ಇಂಡಸ್ಟ್ರೀಸ್ ಸಮೀಪ ನೇಣಿಗೆ ಶರಣಾಗಿದ್ದಾರೆ.
ಮುಂಜಾನೆಯೇ ಮನೆಯಲ್ಲಿ ಅರ್ಜುನ್ ಕಂಡು ಬಂದಿಲ್ಲ.ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಮನೆಯಿಂದ ಹೊರಗೆ ತೆರಳಿರುವುದು ಕಂಡುಬಂದಿದೆ. ಇದಾದ ಕೆಲಸಮಯದ ನಂತರ ಅರ್ಜನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.