Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಂಗಳೂರಲ್ಲಿ ಪಟಾಕಿ ಸಿಡಿದು ಈವರೆಗೆ ನಾಲ್ವರಿಗೆ ಗಾಯ

20/10/2025 9:30 PM

ಎಚ್ಚರ.! ಉಗುರು ಕಚ್ಚುವ ಅಭ್ಯಾಸವು ಮಾರಕ ‘ಹೃದಯ ಸಮಸ್ಯೆ’ಗೆ ಕಾರಣವಾಗಬಹುದು: ವೈದ್ಯರು | Habit of Nail-Biting

20/10/2025 9:14 PM

BIG NEWS: ‘ಕನ್ನಡಿಗ’ ಅಂದ್ರೆ ಯಾರು.? ‘ಸರ್ಕಾರಿ ಆದೇಶ’ದಲ್ಲಿ ಹೇಳೋದೇನು? ಇಲ್ಲಿದೆ ಓದಿ

20/10/2025 8:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 384 `KAS’ ಹುದ್ದೆಗಳ ನೇಮಕಾತಿ : `ಮುಖ್ಯ ಪರೀಕ್ಷೆ’ಗೆ ಅರ್ಜಿ ಆಹ್ವಾನ | KAS Recruitment
KARNATAKA

BIG NEWS : 384 `KAS’ ಹುದ್ದೆಗಳ ನೇಮಕಾತಿ : `ಮುಖ್ಯ ಪರೀಕ್ಷೆ’ಗೆ ಅರ್ಜಿ ಆಹ್ವಾನ | KAS Recruitment

By kannadanewsnow5715/02/2025 6:11 AM

ಬೆಂಗಳೂರು : ಕೆಎಎಸ್ 384 ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಗೆ ಅರ್ಹತೆ ಗಿಟ್ಟಿಸಲು ಪೂರ್ವಭಾವಿ ಪರೀಕ್ಷೆಯಲ್ಲಿನ ಕಟ್ ಆಫ್ ಅಂಕಗಳ ಬಿಡುಗಡೆಗೆ ಮೊದಲೇ ಮುಖ್ಯ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಕೆಪಿಎಸ್ ಸಿ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) ನಿಯಮಗಳು, 1997 ಮತ್ತು ಕಾಲಾಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ವಯ ಅಧಿಸೂಚನೆ ಸಂಖ್ಯೆ:ಪಿಎಸ್‌ಸಿ 509 ಇ(1)/2023-24, ದಿನಾಂಕ:26-02-2024ರಂದು ಅಧಿಸೂಚಿಸಲಾದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ – ಎ ಮತ್ತು ಗ್ರೂಪ್ – ಬಿ ವೃಂದದ 384 ಹುದ್ದೆಗಳಿಗೆ ದಿನಾಂಕ:29-12-2024ರಂದು ಪೂರ್ವಭಾವಿ ಮರುಪರೀಕ್ಷೆಯನ್ನು ನಡೆಸಲಾಗಿರುತ್ತದೆ, ಆಯೋಗವು ಸದರಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ದಿನಾಂಕ:10-02-2025ರಂದು ಪ್ರಕಟಿಸಲಾಗಿರುತ್ತದೆ, ಪ್ರಸ್ತುತ ಮುಖ್ಯ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1. ಅರ್ಜಿ ಸಲ್ಲಿಸಲು ಕಾಲಮಿತಿ:

2. ಸಹಾಯವಾಣಿ ಸಂಖ್ಯೆ: ಅರ್ಜಿ ಸಲಿಸುವುದಕ್ಕೆ ಸಂಬಂಧಿಸಿದಂತೆ ತೊಂದರೆಗಳು ಎದುರಾದಲ್ಲಿ ಅಭ್ಯರ್ಥಿಗಳು ಈ

HELP LINE : 080-30574957/30574901

3. ಪರೀಕ್ಷಾ ಶುಲ್ಕ:-
(ಅ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೆ ರೂ. 300/-

(ಆ) ಇತರೆ ಅಭ್ಯರ್ಥಿಗಳಿಗೆ ರೂ. 500/-

4. ಪರೀಕ್ಷಾ ಕೇಂದ್ರ: ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
5. 5. ಅರ್ಜಿ ಸಲ್ಲಿಸಲು ಸೂಚನೆಗಳು: ಅಭ್ಯರ್ಥಿಗಳು ಆನ್ ಲೈನ್ ಮೂಲಕ (ONLINE) ಮುಖ್ಯ ಪರೀಕ್ಷೆಯ ಅರ್ಜಿ ಭರ್ತಿ ಮಾಡುವ ಮುನ್ನ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಓದಿ ಪಾಲಿಸತಕ್ಕದ್ದು:

5.1 ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.

5.2 ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.

5.3 ವಿಶೇಷ ಸೂಚನೆ: ಈಗಾಗಲೇ ಸದರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಅರ್ಜಿಯೊಂದಿಗೆ ಆನ್‌ಲೈನ್ ನಲ್ಲಿ

ಸಲ್ಲಿಸಿರುವ ದಾಖಲೆಗಳನ್ನು ಹಾಗೂ ಪ್ರಸ್ತುತ ಮುಖ್ಯ ಪರೀಕ್ಷೆಯ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತು/ದಾಖಲೆಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ, ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ. ಆಪ್ ಲೋಡ್ ಮಾಡತಕ್ಕದ್ದು.

5.4 ಅಭ್ಯರ್ಥಿಗಳು ಈಗಾಗಲೇ ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ವಯ ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ಪೂರ್ವಭಾವಿ ಪರೀಕ್ಷೆಯ ನೊಂದಣಿ ಸಂಖ್ಯೆ, ಅಭ್ಯರ್ಥಿಯ ಹೆಸರು, ಸಹಿ, ಭಾವಚಿತ್ರ, ತಂದೆ/ತಾಯಿ ಹೆಸರು, ಪತಿ/ಪತ್ನಿಯ ಹೆಸರು, ಅಭ್ಯರ್ಥಿಯ ಲಿಂಗ ಮತ್ತು ಜನ್ಮ ದಿನಾಂಕ, ಮೀಸಲಾತಿ ಹಾಗೂ ವಿಳಾಸದ ವಿವರಗಳು ಸ್ವಯಂ ದಾಖಲಾಗುತ್ತವೆ, ಈ ಹಿಂದೆ ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ನಮೂದಿಸಲಾದ ಯಾವುದೇ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುವುದಿಲ್ಲ.

5.5 ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ. ವಿದ್ಯಾರ್ಹತೆ ಅಂಕಣದಲ್ಲಿ Pursuing ಎಂದು ಆಯ್ಕೆ ಮಾಡಿಕೊಂಡಿದ್ದಲ್ಲಿ ಮಾತ್ರ ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಬಗ್ಗೆ, ರಿಜಿಸ್ಟ್ರಾರ್ ರವರಿಂದ ದೃಢೀಕರಿಸಿದ ಘಟಿಕೋತ್ಸವ ಪ್ರಮಾಣ ಪತ್ರ/ತಾತ್ಕಾಲಿಕ ಪದವಿ ಪ್ರಮಾಣ ಪತ್ರ/ಅಂಕಪಟ್ಟಿ /ರಿಸಲ್ಸ್ ಶೀಟ್ ಪ್ರತಿಯನ್ನು ಅಪ್‌ಲೋಡ್ ಮಾಡತಕ್ಕದ್ದು, (ದಾಖಲೆಗಳು ಸ್ಪಷ್ಟವಾಗಿರಬೇಕು). ಸದರಿ ದಾಖಲೆಗಳು ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಜಾರಿಯಾಗಿರತಕ್ಕದ್ದು. ತಪ್ಪಿದ್ದಲ್ಲಿ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.

5.6 ಅಂಗವಿಕಲ ಅಭ್ಯರ್ಥಿಗಳು ಸ್ವಂತ ಲಿಪಿಕಾರರ ಸಹಾಯವನ್ನು ಕೋರಿದಲ್ಲಿ ಲಿಪಿಕಾರರ ವಿವರಗಳನ್ನು ಅರ್ಜಿಯಲ್ಲಿ. ಕಡ್ಡಾಯವಾಗಿ ನಮೂದಿಸತಕ್ಕದ್ದು. ಲಿಪಿಕಾರರ ಭಾವಚಿತ್ರ ಮತ್ತು ಸಹಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡತಕ್ಕದ್ದು,

5.7 ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 03 ಹೈಕಕೋ 2019, ದಿನಾಂಕ:15-06-2022ರಲ್ಲಿ ನಿರ್ದಿಷ್ಟ ಪಡಿಸಿರುವ ಆಯ್ಕೆಗಳನ್ನಯ ಮುಖ್ಯ ಪರೀಕ್ಷೆಯ ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ಆಯ್ಕೆಗಳನ್ನು ನಮೂದಿಸತಕ್ಕದ್ದು.

5.8 ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಾವಳಿಗಳು, 1997 ಹಾಗೂ ತಿದ್ದುಪಡಿ ನಿಯಮಗಳ ಉಪನಿಯಮ 4. (3)ರಲೆ.. “The candidates who apply for the Competitive Examinations shall clearly indicate in their application forms the services or posts for which they wish to be considered for appointment in the order of preference. They shall not be considered for such of the service or posts which are not preferred by them.” ಎಂದು ನಮೂದಾಗಿದ್ದು, ಅದರಂತೆ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲಿ ಅಧಿಸೂಚಿಸಿರುವ ಹುದ್ದೆಗಳ ಆದ್ಯತಾನುಕ್ರಮವನ್ನು (Preference) ಭರ್ತಿ ಮಾಡತಕ್ಕದ್ದು, ಆದ್ರತೆ ನೀಡದಿರುವ ಹುದ್ದೆಗಳ ಆಯ್ಕೆಗೆ ಅವರನ್ನು ಪರಿಗಣಿಸಲಾಗುವುದಿಲ್ಲ. ಹುದ್ದೆಗಳ ವಿವರಗಳನ್ನು ಅನುಬಂಧ-ಎ ರಲ್ಲಿ ನೀಡಲಾಗಿದೆ.

5.9 ವಿಶೇಷ ಸೂಚನೆ:- ಅಂಗವಿಕಲ ಅಭ್ಯರ್ಥಿಗಳು ಹುದ್ದೆಗಳಿಗೆ ಆದ್ಯತೆ (Preference) ನೀಡುವ ಸಮಯದಲ್ಲಿ

ಸಂಬಂಧಿತ ಇಲಾಖೆಗಳು ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮದನ್ವಯ ಗುರುತಿಸಿರುವ ಅನುಸೂಚಿಯನ್ನು ಪರಿಶೀಲಿಸತಕ್ಕದ್ದು (ಅನುಬಂಧ-ಬಿ), ಈಗಾಗಲೇ ಆಯೋಗವು ಪೂರ್ವಭಾವಿ ಪರೀಕ್ಷೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಗುರುತಿಸಲಾಗಿರುವ ಹುದ್ದೆಗಳಿಗೆ ಅನುಗುಣವಾಗಿ ಪರಿಶೀಲಿಸಿಕೊಂಡು ಆದ್ಯತೆಯನ್ನು ನೀಡತಕ್ಕದ್ದು.

5.10 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಅರ್ಜಿಯಲ್ಲಿ ಹುದ್ದೆಗಳ ಆದ್ಯತೆ ನೀಡುವಾಗ “ನೇಮಕಾತಿ ಪ್ರಾಧಿಕಾರವು ದೈಹಿಕ ದಾರ್ಢತೆ/ ವೈದ್ಯಕೀಯ ಅರ್ಹತೆಯ ಕುರಿತು ನಿಯಮಾನುಸಾರ ಪರಿಶೀಲಿಸುತ್ತದೆ. ಆಯೋಗದ ಅಧಿಸೂಚನೆಯನುಸಾರ ದೈಹಿಕ ದಾರ್ಢತೆ ಅಗತ್ಯವಿರುವ ಹುದ್ದೆಗಳಿಗೆ ಅರ್ಹರಿದ್ದಲ್ಲಿ ಮಾತ್ರ ಸದರಿ ಹುದ್ದೆಗಳ ಆದ್ಯತೆಯನ್ನು ನೀಡತಕ್ಕದ್ದು.”

5.11 ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ ಹಾಗೂ Pursuing ಎಂದು ವಿದ್ಯಾರ್ಹತೆಯ ಅಂಕಣದಲ್ಲಿ ಆಯ್ಕೆ ಮಾಡಿದಲ್ಲಿ ಸದರಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/UPI ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ / ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5.12 ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಗಳು ಅಧಿಸೂಚನೆಯಲಿ…ನ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ ಎಂಬುದಾಗಿ ಅರ್ಥೈಸಿಕೊಳ್ಳುವಂತಿಲ್ಲ. ನಂತರದಲ್ಲಿ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗೂ ಯಾವುದೇ ಹಂತದಲ್ಲಿ ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

BIG NEWS: 384 KAS Posts Recruitment : Apply for 'Mains Exam'
Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರಲ್ಲಿ ಪಟಾಕಿ ಸಿಡಿದು ಈವರೆಗೆ ನಾಲ್ವರಿಗೆ ಗಾಯ

20/10/2025 9:30 PM1 Min Read

BIG NEWS: ‘ಕನ್ನಡಿಗ’ ಅಂದ್ರೆ ಯಾರು.? ‘ಸರ್ಕಾರಿ ಆದೇಶ’ದಲ್ಲಿ ಹೇಳೋದೇನು? ಇಲ್ಲಿದೆ ಓದಿ

20/10/2025 8:43 PM1 Min Read

‘ವಾಟ್ಸಾಪ್’ನ ಹೊಸ ಸಂಚಲನ! ಈಗ ಅಪರಿಚಿತ ಜನರಿಂದ ಬರುವ ಸಂದೇಶಗಳು ಸ್ವಯಂಚಾಲಿತವಾಗಿ ಬ್ಲಾಕ್ | WhatsApp New Feature

20/10/2025 8:15 PM2 Mins Read
Recent News

BREAKING: ಬೆಂಗಳೂರಲ್ಲಿ ಪಟಾಕಿ ಸಿಡಿದು ಈವರೆಗೆ ನಾಲ್ವರಿಗೆ ಗಾಯ

20/10/2025 9:30 PM

ಎಚ್ಚರ.! ಉಗುರು ಕಚ್ಚುವ ಅಭ್ಯಾಸವು ಮಾರಕ ‘ಹೃದಯ ಸಮಸ್ಯೆ’ಗೆ ಕಾರಣವಾಗಬಹುದು: ವೈದ್ಯರು | Habit of Nail-Biting

20/10/2025 9:14 PM

BIG NEWS: ‘ಕನ್ನಡಿಗ’ ಅಂದ್ರೆ ಯಾರು.? ‘ಸರ್ಕಾರಿ ಆದೇಶ’ದಲ್ಲಿ ಹೇಳೋದೇನು? ಇಲ್ಲಿದೆ ಓದಿ

20/10/2025 8:43 PM

BREAKING: ಬಾಲಿವುಡ್ ಖ್ಯಾತ ಹಾಸ್ಯನಟ ಗೋವರ್ಧನ್ ಅಸ್ರಾಣಿ ಇನ್ನಿಲ್ಲ | Asrani no more

20/10/2025 8:40 PM
State News
KARNATAKA

BREAKING: ಬೆಂಗಳೂರಲ್ಲಿ ಪಟಾಕಿ ಸಿಡಿದು ಈವರೆಗೆ ನಾಲ್ವರಿಗೆ ಗಾಯ

By kannadanewsnow0920/10/2025 9:30 PM KARNATAKA 1 Min Read

ಬೆಂಗಳೂರು: ನಗರದಲ್ಲಿ ದೀಪಾವಳಿ ಆರಂಭದಲ್ಲೇ ಪಟಾಕಿ ಸಿಡಿತದಿಂದ ಅವಘಡ ಸಂಭವಿಸಿದೆ. ಪಟಾಕಿ ಸಿಡಿದು ನಾಲ್ವರು ಬೆಂಗಳೂರಲ್ಲಿ ಗಾಯಗೊಂಡಿದ್ದಾರೆ. ಬೆಂಗಳೂರಲ್ಲಿ ಬಿಜಿಲಿ…

BIG NEWS: ‘ಕನ್ನಡಿಗ’ ಅಂದ್ರೆ ಯಾರು.? ‘ಸರ್ಕಾರಿ ಆದೇಶ’ದಲ್ಲಿ ಹೇಳೋದೇನು? ಇಲ್ಲಿದೆ ಓದಿ

20/10/2025 8:43 PM

‘ವಾಟ್ಸಾಪ್’ನ ಹೊಸ ಸಂಚಲನ! ಈಗ ಅಪರಿಚಿತ ಜನರಿಂದ ಬರುವ ಸಂದೇಶಗಳು ಸ್ವಯಂಚಾಲಿತವಾಗಿ ಬ್ಲಾಕ್ | WhatsApp New Feature

20/10/2025 8:15 PM

ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ವೆಚ್ಚ, ಸರ್ಕಾರ ದಿವಾಳಿಯಾಗಿಲ್ಲ: ಸಿಎಂ ಸಿದ್ದರಾಮಯ್ಯ

20/10/2025 8:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.