ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹಲವಾರು ಗೊಂದಲಗಳಿದ್ದವು. ಆದರೆ ಇ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದು, ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ಸರಕಾರ 36 ಶಾಸಕರನ್ನು ಮೊದಲ ಪಟ್ಟಿಯಲ್ಲಿ ನಿಗಮ- ಮಂಡಳಿಗಳ ಅಧ್ಯಕ್ಷರುಗಳಾಗಿ ನೇಮಿಸಿತ್ತು.
ಇದರ ಬೆನ್ನಲ್ಲೇ 34 ಕಾರ್ಯಕರ್ತರನ್ನು ಒಳಗೊಂಡ 2ನೇ ಪಟ್ಟಿಯೂ ಸಿದ್ಧವಾಗಿ ಒಂದೆರಡು ದಿನಗಳಲ್ಲಿ ಈ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಕುರಿತ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿರುವ 34 ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ನಿಗಮ ಮಂಡಳಿಗಳ ಸ್ಥಾನಕ್ಕೆ ಇದೀಗ ಆ ಸ್ಥಾನ ಪಡೆದವರ ಕಾರ್ಯಕರ್ತರ ಪಟ್ಟಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಪಟ್ಟಿ ಪ್ರಕಾರ ಕಾಂತಾ ನಾಯಕ್, ಮುಂಡರಗಿ ನಾಗರಾಜ್, ವಿನೋದ್ ಎಸ್. ಅಸೂಟಿ, ಬಿ.ಎಚ್. ಹರೀಶ್, ಡಾ.ಅಂಶುಮಂಥ್, ಜೆ.ಎಸ್.ಆಂಜನೇಯುಲು, ಡಾ.ಬಿ.ಯೋಗೇಶ್ ಬಾಬು, ಡಾ.ಎಚ್.ಕೃಷ್ಣ, ಮರಿಗೌಡ, ದೇವಿಂದ್ರಪ್ಪ ಮರ್ತೂರು, ರಾಜಶೇಖರ್ ರಾಮಸ್ವಾಮಿ, ಕೆ.ಮರಿಗೌಡ, ಜಯಣ್ಣ, ಎಸ್.ಮನೋಹರ್, ಅಯ್ಯೂಬ್ ಖಾನ್, ಮಮತಾ ಗುಟ್ಟಿ.
ಜಿ.ಪಲ್ಲವಿ, ಎಸ್.ಇ.ಸುಧೀಂದ್ರ, ಡಾ.ನಾಗಲಕ್ಷ್ಮೀ ಚೌಧರಿ, ಎಚ್.ಎಸ್. ಸುಂದರೇಶ್, ಆರ್.ಎಂ.ಮಂಜುನಾಥ್ ಗೌಡ, ಜಯಣ್ಣ, ಸಂಪತ್ ರಾಜ್, ಸವಿತಾ ರಘು, ಪದ್ಮಾವತಿ , ಶಾಕಿರ್ ಸನದಿ, ಸರೋವರ ಶ್ರೀನಿವಾಸ್, ಸೋಮಣ್ಣ ಬೇವಿನಮರದ್, ಬಿ.ಪುಷ್ಪಾ ಅಮರನಾಥ್, ಮಹಬೂಬ್ ಪಾಷ, ಕೀರ್ತಿ ಗಣೇಶ್, ಮಝರ್ ಖಾನ್, ಲಲಿತ್ ರಾಘವ್ ಮತ್ತು ಜಿ.ಎಸ್.ಮಂಜುನಾಥ್ ಅವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ.