ಪಣಜಿ : ಕಾಂಗ್ರೆಸ್ ನ (Bharath Jodo Yathra) ಜೋಡೋ ಯಾತ್ರೆ ನಿಲ್ಲಿಸುವಂತೆ ನಾಯಕರಿಗೆ ಕಾಂಗ್ರೆಸ್ ಗೋವಾ ಸಂಸದ ಫ್ರಾನ್ಸಿಸ್ಕೋ ಸರ್ಢಿನಾ ಹೇಳಿದ್ದಾರೆ.
ಭಾರತದಲ್ಲಿ ಬಿಜೆಪಿಯನ್ನು ಸೋಲಿಸಬಲ್ಲ ಪಕ್ಷ ಅಂದರೆ ಕಾಂಗ್ರೆಸ್, ಆದ್ದರಿಂದ ಯಾತ್ರೆಯನ್ನು ನಿಲ್ಲಿಸಬೇಕು ಎಂದು ಗೋವಾ ಸಂಸದ ಫ್ರಾನ್ಸಿಸ್ಕೋ ಸರ್ಢಿನಾ ಹೇಳಿದ್ದಾರೆ.
ಚುನಾವಣಾ ಆಯೋಗ ನವೆಂಬರ್ 12 ರಿಂದ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಿದೆ.ನಂತರ ಗುಜರಾತ್ ನಲ್ಲಿ ಚುನಾವಣೆ ನಡೆಯಲಿದೆ . ಈ ಹಿನ್ನೆಲೆ ಮಾತನಾಡಿದ ಸಂಸದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಜನರನ್ನು ಜಾಗೃತಗೊಳಿಸಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಬೇಕು ಎಂದಿದ್ದಾರೆ .
ಸದ್ಯ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಳ್ಳಾರಿಯಲ್ಲಿ ಸಾಗುತ್ತಿದ್ದು, ನಾಳೆ ರಾಯಚೂರು ತೆರಳಲಿದೆ ಎನ್ನಲಾಗಿದೆ.