ನವದೆಹಲಿ : ಭಾರತದಲ್ಲಿ ಹಠಾತ್ ದಡಾರ ಕಾಯಿಲೆ (Measles Rubella Disease) ಕಾಣಿಸಿಕೊಂಡಿದೆ. ಈಗ 48 ಗಂಟೆಗಳಲ್ಲಿ ಮೂವರು ಮಕ್ಕಳು ಸಾವನ್ನಪ್ಪಿವೆ (Three Children’s Death). ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಎಲ್ಲಾ ಮೂರು ಮಕ್ಕಳು ಒಂದೇ ಕುಟುಂಬದವರು ಆಗಿದ್ದಾರೆ.
ರಾಜೀವ್ ಗಾಂಧಿ ಹಂತಕರ ಬಿಡುಗಡೆಯ ಬಗ್ಗೆ ಕಾಂಗ್ರೆಸ್ನಿಂದ ಮಹತ್ವದ ಹೇಳಿಕೆ | Rajiv Gandhi Assassination:
ಒಮ್ಮೆ ದಡಾರ ಬಂದರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ದಡಾರ ಕಾಯಿಲೆ ಲಕ್ಷಣಗಳ ಬಗ್ಗೆ ಸಂಪೂರ್ಣವಾಗಿ ಎಲ್ಲರೂ ತಿಳಿದಿರಬೇಕು. ಇದರಿಂದ ನೀವು ಸಕಾಲಿಕ ವೈದ್ಯಕೀಯ ಆರೈಕೆ ಪಡೆಯಬಹುದು. ದಡಾರ ರುಬೆಲ್ಲಾ ಕೂಡ ದಡಾರದ ಮತ್ತೊಂದು ಹೆಸರು ಆಗಿದೆ. ಮುಂಬೈನಲ್ಲಿ ದಡಾರ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿವೆ. ಹೀಗಾಗಿ ಇದರ ಹಿಂದಿನ ಕಾರಣ ತಿಳಿಯಲು ಕೇಂದ್ರ ಸರ್ಕಾರ ಬುಧವಾರ ತಂಡವನ್ನು ಕಳುಹಿಸಿದೆ.
ದಡಾರ ರುಬೆಲ್ಲಾ ಕಾಯಿಲೆ ಮುಂಬೈನಲ್ಲಿ ಏಕೆ ಹರಡಿದೆ?
ಕೇಂದ್ರ ತಂಡವು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ನವದೆಹಲಿ ಮತ್ತು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಮೂವರು ತಜ್ಞರನ್ನು ಹೊಂದಿದೆ. ಹಾಗೆಯೇ ಪುಣೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಯ ಮೂವರು ತಜ್ಞರೂ ಸಹ ತಂಡದಲ್ಲಿದ್ದಾರೆ. IDSP (NCDC) ಉಪ ನಿರ್ದೇಶಕ ಡಾ. ಅನುಭವ್ ಶ್ರೀವಾಸ್ತವ ಅವರು ಇದರ ನೇತೃತ್ವ ವಹಿಸಲಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಡಾರ ಕಾಯಿಲೆ ಅತ್ಯಂತ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾಗಿದೆ. ಕಡಿಮೆ ಸಮಯದಲ್ಲಿ 29 ಅಧಿಕೃತ ಪ್ರಕರಣಗಳು ದಾಖಲಾಗಿವೆ.
ರಾಜೀವ್ ಗಾಂಧಿ ಹಂತಕರ ಬಿಡುಗಡೆಯ ಬಗ್ಗೆ ಕಾಂಗ್ರೆಸ್ನಿಂದ ಮಹತ್ವದ ಹೇಳಿಕೆ | Rajiv Gandhi Assassination: