ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಉಂಟಾದಂತ ಕಾಲ್ತುಳಿತ ದುರಂತದ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ಎ1 ಸಿಎಂ, ಎ2 ಡಿಸಿಎಂ, ಎ3 ಗೃಹ ಸಚಿವರನ್ನು ಮಾಡಬೇಕು ಎಂಬುದಾಗಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಇಂದು ಬೆಂಗಳೂರಿನ ಕೆಕೆ ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಲ್ತುಳಿತ ಪ್ರಕರಣದ ಸಾವಿಗೆ ಸರ್ಕಾರ ಕಾರಣ. ಎ-1ಸಿಎಂ ,ಎ-2ಡಿಸಿಎಂ,ಎ-3 ಗೃಹಸಚಿವರನ್ನ ಮಾಡಬೇಕು. ರಾಜ್ಯಾಪಾಲರು ಸಿಎಂ ಡಿಸಿಎಂ ಇದ್ದ ಕಾರ್ಯಕ್ರಮ. ಆದರೆ ಅಲ್ಲಿ ಪ್ರೊಟೋಕಾಲ್ ಇರಲಿಲ್ಲ. ಸೆಲ್ಪಿ ತೆಗೆದುಕೊಳ್ಳುವಲ್ಲಿ ಇವರು ಬ್ಯುಸಿ ಆಗಿದ್ರು. ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಿತ್ತು ಎಂದರು.
ಅಧಿಕಾರಿಗಳು ಬಂದೊಬಸ್ತ್ ಮಾಡಲು ಸಾಧ್ಯವಿಲ್ಲವೆಂದಿದ್ದಾರೆ. ಆದರೂ ಇವರು ಕಾರ್ಯಕ್ರಮ ಮಾಡಿದ್ದಾರೆ. ಪೆಹಲ್ಗಾಮ್ ಬಗ್ಗೆ ಏನ್ ಹೇಳಿದ್ರಿ. ಭದ್ರತಾ ಲೋಪ ಎಂದಿದ್ದರು. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದಿತ್ತು. ಈ ಕಾರ್ಯಕ್ರಮ ಮುಂದೂಡುವ ಅವಕಾಶ ಇಲ್ಲಿತ್ತು. ಈ ಕಾರ್ಯಕ್ರಮಕ್ಕೆ ನೀವೇ ಕರೆದಿದ್ದು. ಗೃಹ ಮಂತ್ರಿಯನ್ನ ನೆಗ್ಲೇಟ್ ಮಾಡಿದ್ದಾರೆ. ಅವರವರ ರಾಜಕೀಯಕ್ಕೆ ಜನ ಬಲಿಯಾಗಿದ್ದಾರೆ. ನನ್ನನ್ನ ಕೇಳದೆ ಏನು ಮಾಡಬಾರದು ಅನ್ನೋ ಮನಸ್ಥಿತಿ ಎಂಬುದಾಗಿ ಕೈ ನಾಯಕರ ವಿರುದ್ಧ ಅರಗ ಜ್ಙಾನೇಂದ್ರ ಟಾಂಗ್ ನೀಡಿದರು.
ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ: ಬೆಂಗಳೂರು ಕಾಲ್ತುಳಿತ ದುರಂತದ ಬಗ್ಗೆ ಬಿಸಿಸಿಐ ಮೊದಲ ಪ್ರತಿಕ್ರಿಯೆ