ಬೆಂಗಳೂರು : ಬೆಂಗಳೂರಿನಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಗೆ ಪುಡಿ ರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮುಖಂಡ ಧನಂಜಯ ಸೇರಿದಂತೆ ಹಲವರ ವಿರುದ್ಧ FIR ದಾಖಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಧನಂಜಯ್ ಸ್ಪರ್ಧಿಸಿದ್ದರು. ಶಾರದಾ ವಿದ್ಯಾನಿಕೇತನ ಶಾಲೆಯ ಕಿಟಕಿ, ಬಾಗಿಲು, ಸಿಸಿ ಕ್ಯಾಮೆರಾ, ಧ್ವಂಸಗೊಳಿಸಿದ್ದು ನಿನ್ನೆ ಸಂಜೆ ಪುಡಿ ರೌಡೆಗಳನ್ನು ಬಿಟ್ಟು ದಾಂದಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಧನಂಜಯ್ ಮಾಲೀಕತ್ವದ ಸ್ಕೂಲ್ ಶಾರದಾ ಶಾಲೆಯ ಪಕ್ಕದಲ್ಲಿದೆ. ಆದರೆ ಎನ್ ಪಿ ಎಸ್ ಶಾಲೆ ನಡೆಸಲು ಇತ್ತೀಚಿಗೆ ಕಾನೂನಿನ ತೊಡಕ್ಕಾಗಿತ್ತು.
ಶಾರದಾ ಶಾಲೆಯ ಜಾಗ ಸರ್ಕಾರದಿಂದ ಲೀಸ್ ಗೆ ಪಡೆಯಲಾಗಿತ್ತು. ಜಾಗವನ್ನು ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಸರ್ಕಾರ ಲೀಸಿಗೆ ನೀಡಿತ್ತು.ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಮುಖಂಡ ಧನಂಜಯ್ ಅಧ್ಯಕ್ಷರಾಗಿದ್ದರು. 2023ರ ವರೆಗೂ ಶಾಲೆಯ ಲೀಸ್ ಅವಧಿ ಇದೆ. ಹಾಗಿದ್ದರೂ ಶಾಲೆಯನ್ನು ಅತಿಕ್ರಮಣ ಮಾಡಲು ಧನಂಜಯ್ ಸಂಚು ಮಾಡಿದ್ದಾರೆ. ಕೋರ್ಟ್ ಇಂದ ತಡೆಯಾಜ್ಞೆ ಇದ್ದರೂ ಧನಂಜಯ್ ಲೆಕ್ಕಿಸದೆ ಮೇ 2 ರಂದು ಹುಡುಗರ ಜೊತೆಗೆ ಬಂದು ಗಲಾಟೆ ಮಾಡಿದ್ದಾರೆ.
ಆಗಲು ಧನಂಜಯ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನ್ನ ಪ್ರಭಾವ ಬಳಸಿ ನಿನ್ನೆ ಮತ್ತೆ ದೊಡ್ಡ ಮಟ್ಟದಲ್ಲಿ ದಾಂಧಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಕ್ಕಳ ದಾಖಲೆ ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದು ಆರೋಪ ಕೇಳಿ ಬಂದಿದೆ. ಧನಂಜಯ್ ಮಾಲಿಕತ್ವದ ಶಾಲೆಯ ಕಾಂಪೌಂಡ್ ಜಿಗಿದು ಪುಂಡರಿಂದ ದಾಂದಲೆ ನಡೆದಿದೆ.