ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟ್ಯಾಂತರ ರೂಪಾಯಿಗೆ ಬೆಲೆಬಾಳುವ ಜಮೀನಿಗಾಗಿ, ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿರುವ ಘಟನೆ ನಡೆದಿದೆ.
ಕೋಟ್ಯಾಂತರ ಮೌಲ್ಯದ ಭೂಮಿಗಾಗಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ. ಜಮೀನು ಮಾಲೀಕ 50 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ಸೃಷ್ಟಿಸಲಾಗಿದೆ. ಚೆಮಸಂದ್ರ ಗ್ರಾಮದ ಮುನಿಯಪ್ಪಗೆ ಡೆತ್ ಸರ್ಟಿಫಿಕೇಟ್ ನೀಡಿ ವಂಚನೆ ಎಸಗಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಚೇಮಸಂದ್ರ ಗ್ರಾಮದ ನಿವಾಸಿಯಾಗಿರುವ ಮುನಿಯಪ್ಪನಿಗೆ ಭೂಮಿ ಮಾರಿದ್ದ ನಾಗೇಶ್ ಹಾಗು ಖರೀದಿಸಿದ ನರೇಂದ್ರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
ನರೇಂದ್ರ ಮತ್ತು ನಾಗೇಶ ಸೇರಿದಂತೆ ಇದೀಗ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 21 ಜನರ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.ಜಮೀನಿನಲ್ಲಿ ಪತ್ನಿಯ ಸಮಾಧಿಯ ಮುಂದೆ ನಿಂತು ಮುನಿಯಪ್ಪ ಕಣ್ಣೀರು ಹಾಕಿದ್ದಾನೆ. ಅಧಿಕಾರಿಗಳು ಪರಿಶೀಲಿಸದೆ ಜಮೀನು ಪರಭಾರೆ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾನೆ. ಎಚ್ಎಎಲ್ ನಲ್ಲಿ ಮುನಿಯಪ್ಪ ಕೆಲಸ ಮಾಡುತ್ತಿದ್ದ ವೇಳೆ ಈ ಜಮೀನು ಖರೀದಿಸಿದ್ದ ಜಮೀನು ಪರಬಾರೆ ಮಾಡಿದವರ ವಿರುದ್ಧ ಮುನಿಯಪ್ಪ ಇದೀಗ ಕೇಸ್ ದಾಖಲಿಸಿದ್ದಾನೆ.