ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಮತ್ತು ಬೆಂಬಲಿಗರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಚನ್ನಪಟ್ಟಣ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಶೀಶ್ ಎಂಬುವರು ದೂರು ನೀಡಿದ್ದಾರೆ.
ಶಾಲೆಯಲ್ಲಿ ಬಿಯರ್ ಕುಡಿದು ತರಗತಿ ತೆಗೆದುಕೊಳ್ಳುತ್ತಿರುವ ಶಿಕ್ಷಕ, ವಿಡಿಯೋ ವೈರಲ್ | Watch
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಶೀಶ್ ದೂರು ನೀಡಿದ್ದು, ಎಂ.ಎಲ್. ಸಿ. ಸಿ.ಪಿ ಯೋಗೇಶ್ವರ್ ಹಾಗೂ ಅವರ ಬೆಂಬಲಿಗರು ನನಗೆ ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಠಾಣೆಯಲ್ಲಿ ಸಿ.ಪಿ. ಯೋಗೇಶ್ವರ, ರವೀಶ್, ಜಯಂತ್, ಜಯಕುಮಾರ್, ಸುರೇಂದ್ರ ರಾಜೇಶ್, ಎಂ.ರಾಜು. ನಂಜೇಶ್, ಶಿವಕುಮಾರ್, ಜಯಸ್ವಾಮಿ, ಪ್ರಸನ್ನ ವಿರುದ್ಧ ದೂರು ನೀಡಿದ್ದು, ನನ್ನ ಕೊರಳಪಟ್ಟಿ ಹಿಡಿದು ಎಳೆದಾಡಿ ನಿನ್ನ ಹಾಗೂ ನಿಮ್ಮವರನ್ನು ಕೊಲೆ ಮಾಡುತ್ತೇವೆ ಎಂದು ಪ್ರಾಣಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅಶೀಶ್ ಉಲ್ಲೇಖಿಸಿದ್ದಾರೆ.
BIGG BREAKING NEWS : ಕೆಲವೇ ಕ್ಷಣಗಳಲ್ಲಿ ಮೈಸೂರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗಮನ