ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಪ್ರೇಯಸಿಗಾಗಿ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಕೊಂದು ಅಪಘಾತವಾದಂತೆ ಬಿಂಬಿಸಿ ನಾಟಕವಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪತಿ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಪ್ರೇಯಸಿಗಾಗಿ ಗರ್ಭಿಣಿ ಪತ್ನಿ ಕೊಂದು ಅಪಘಾತದ ನಾಟಕವಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿಯನ್ನು ಕೊಂದು ಅಪಘಾತದ ನಾಟಕವಾಡಿದ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಪತಿ ವಕೀಲ ಪ್ರದೀಪ್ ಕಿರಣಿಗೆ ಸೇರಿ ಮುವರನ್ನು ಬಂಧಿಸಲಾಗಿದೆ. ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದ ರಾಜೇಂದ್ರ ಕಾಂಬಳೆ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಸದ್ದಾಂ ಇನಾಂದಾರ್ ಬಂಧಿತರು ಎಂದು ತಿಳಿದು ಬಂದಿದೆ. ಕಾಗವಾಡ ತಾಲೂಕಿನ ಬಿಕೆ ಹೂಗಾರ್ ಗ್ರಾಮದಲ್ಲಿ ಈ ಒಂದು ಕೊಲೆ ಘಟನೆ ನಡೆದಿತ್ತು.
ಪ್ರಕರಣ ಹಿನ್ನೆಲೆ?
ಪ್ರೇಯಸಿಗಾಗಿ 15 ಲಕ್ಷ ಸುಪಾರಿ ಕೊಟ್ಟು ಚಟ್ಟ ಕಟ್ಟಿದ ಪತಿ, ರಾಡ್ ನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸೆಪ್ಟೆಂಬರ್ 7ರಂದು ಬಿಕೆ ಉಗಾರ ಗ್ರಾಮದ ಚೈತಲೀ ಕಿರಣಗಿ ಕೊಲೆಯಾಗಿದೆ. ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಪ್ರದೀಪ್ ಚೈತಾಲಿ ಜೊತೆಗೆ ಮದುವೆಯಾಗಿದ್ದಾನೆ. ಪ್ರೇಮ ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಲವ್ ನಲ್ಲಿ ಇದ್ದ. ಕಾನೂನು ಪದವಿ ಮುಗಿಸಿದ ಪ್ರದೀಪ್ ವಕೀಲನಾಗಿ ಕೆಲಸ ಮಾಡುತ್ತಿದ್ದ. ಕಾಗವಾಡ ಕೋರ್ಟ್ನಲ್ಲಿ ಪ್ರದೀಪ್ ವಕೀಲನಾಗಿ ಕೆಲಸ ಮಾಡುತ್ತಿದ್ದ. ಸೀನಿಯರ್ ಬುಟ್ಟಿಗೆ ಹಾಕಿಕೊಳ್ಳಲು ಪ್ರದೀಪ್ ಮದುವೆ ಆಗಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಪ್ರದೀಪ್ ಮಾತು ನಂಬಿ ಸೀನಿಯರ್ ವಕೀಲೆ ಆತನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.
ಇದರಿಂದ ಪತ್ನಿ ಕೊಲೆಗೆ ಸ್ನೇಹಿತ ರಾಜೇಂದ್ರ ಸುಪಾರಿ ನೀಡಿದ್ದ 15ಲಕ್ಷ ರೂಪಾಯಿ ನೀಡಿ ಪ್ರದೀಪ್ ಪತ್ನಿ ಕೊಲೆಗೆ ಸಂಚು ಹಾಕಿದ್ದಾನೆ. ಸೆಪ್ಟೆಂಬರ್ 7 ರಂದು ರಾಜೇಂದ್ರ ಸದ್ದಾಮ ಜೊತೆ ಸೇರಿ ಪ್ರದೀಪ್ ಗರ್ಭಿಣಿ ಪತ್ನಿಯನ್ನು ಕೋಂದಿದ್ದಾನೆ. ಪತ್ನಿ ಕೊಲೆ ಮಾಡಿ ಪೊಲೀಸರಿಗೆ ಅಪಘಾತ ಆಗಿದೆ. ಎಂದು ಫೋನ್ ಮೂಲಕ ತಿಳಿಸಿದ್ದಾನೆ. ಸೆಪ್ಟೆಂಬರ್ 7 ರಾತ್ರಿ ಕಾಗವಾಡ ಪೊಲೀಸರಿಗೆ ಪ್ರದೀಪ್ ಫೋನ್ ಮಾಡಿ ತಿಳಿಸಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಕಾಗವಾಡ ಆಸ್ಪತ್ರೆಗೆ ಸೇರಿಸುವುದಾಗಿ ಹೇಳಿದ್ದಾನೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕಾಗವಾಡ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ ಶವ ಇಲ್ಲದಿದ್ದರಿಂದ ಮತ್ತೆ ಪೊಲೀಸರು ಪ್ರದೀಪ್ ಗೆ ಕರೆ ಮಾಡಿದ್ದಾರೆ.
ಈ ವೇಳೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಸ್ಥಳಾಂತರಿಸಿರುವುದಾಗಿ ಹೇಳಿದ್ದಾನೆ. ಇದ್ದ ಪ್ರದೀಪ್ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರದೀಪ್ ಕಾರು ಮನೆ ಮುಂದೆ ಇದ್ದಿದ್ದರಿಂದ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಮೀರಜ್ ಗೆ ತೆರಳಿ ಚೈತಲಿ ಶವ ನೋಡಿದ ಮೇಲೆ ಅನುಮಾನ ವ್ಯಕ್ತವಾಗಿದೆ ಇದು ಅಪಘಾತ ಅಲ್ಲ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರದೀಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಹಿರಂಗವಾಗಿದೆ. ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಪ್ರದೀಪ್ ಒಪ್ಪಿಕೊಂಡಿದ್ದಾನೆ. ಬಳಿಕ ಪ್ರದೀಪ್ ರಾಜೇಂದ್ರ ಹಾಗೂ ಸದ್ದಾಮ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.a