Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ: ಬಾನು ಮುಷ್ತಾಕ್

26/08/2025 8:42 PM

ಶಿವಮೊಗ್ಗ ವಿಮಾನ‌ ನಿಲ್ದಾಣದಿಂದ 1 ಲಕ್ಷ ಪ್ರಯಾಣಿಕರಿಗೆ ಸುಗಮ ಸೇವೆ, ಸದ್ಯದಲ್ಲೇ MRO ಆರಂಭ: ಸಚಿವ ಎಂ.ಬಿ ಪಾಟೀಲ

26/08/2025 8:34 PM

ಪಾಕ್ ಪತ್ರಕರ್ತರ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಟ್ರಂಪ್ ನಿಂದಿಸಿದ ಅಮೆರಿಕ ತಜ್ಞರು, ವಿಡಿಯೋ ವೈರಲ್

26/08/2025 8:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬ್ಯಾಂಕ್‌ಗಳು ಪಾಸ್‌ಪೋರ್ಟ್, ಒಸಿಐ ಕಾರ್ಡ್ ಅನ್ನು ಒತ್ತೆ ಇಟ್ಟುಕೊಳ್ಳುವಂತಿಲ್ಲ : ಕರ್ನಾಟಕ ಹೈಕೋರ್ಟ್
Uncategorized

ಬ್ಯಾಂಕ್‌ಗಳು ಪಾಸ್‌ಪೋರ್ಟ್, ಒಸಿಐ ಕಾರ್ಡ್ ಅನ್ನು ಒತ್ತೆ ಇಟ್ಟುಕೊಳ್ಳುವಂತಿಲ್ಲ : ಕರ್ನಾಟಕ ಹೈಕೋರ್ಟ್

By KNN IT Team18/01/2024 7:39 PM

ಯಾವುದೇ ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ನೀಡಿದರೂ ಸಹ ಪಾಸ್‌ಪೋರ್ಟ್‌ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಸಾಲದ ಭದ್ರತೆಗಾಗಿ ಒತ್ತೆ ಇರಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

 

ಭಾರತದಲ್ಲಿ ಹುಟ್ಟಿದ್ದು, ಭಾರತದ ಒಸಿಐ ಕಾರ್ಡ್ ಹೊಂದಿರುವ ಯುನೈಟೆಡ್ ಕಿಂಗ್‌ಡಂ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಬ್ಬರು ವಸತಿ ಸಾಲ ಪಡೆದಿದ್ದರು. ಸಾಲದ ಭದ್ರತೆಗಾಗಿ ಅವರು ತಮ್ಮ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಬ್ಯಾಂಕ್‌ ನೀಡಿದ್ದರು. ಆದರೆ, ಸಾಲವನ್ನು ಪಾವತಿಸದ ಆರೋಪದ ಮೇಲೆ ಬ್ಯಾಂಕ್‌ ವಂಚನೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಬ್ಯಾಂಕ್‌ ನಡೆ ಪ್ರಶ್ನಿಸಿ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು. ಯುನೈಟೆಡ್ ಕಿಂಗ್‌ಡಂ ಪ್ರಜೆಯ ಪರವಾಗಿ ವಾದ ಮಂಡಿಸಿದ ವಕೀಲರು, “ಪಾಸ್‌ಪೋರ್ಟ್‌ ಮತ್ತು ಒಸಿಐ ದಾಖಲೆಗಳನ್ನು ಬ್ಯಾಂಕ್‌ ತನ್ನ ಬಳಿ ಇಟ್ಟುಕೊಳ್ಳಲು ಅಧಿಕಾರವಿಲ್ಲ. ಯುಕೆ ಸರ್ಕಾರ ನೀಡಿದ ಪಾಸ್‌ಪೋರ್ಟ್ಅನ್ನು ತಡೆಹಿಡಿಯುವ ಅಥವಾ ಇಟ್ಟುಕೊಳ್ಳುವ ಅಧಿಕಾರ ಬ್ಯಾಂಕ್‌ಗಳಿಗೆ ಇಲ್ಲ. ಅಂತೆಯೇ, ಒಸಿಐ ಕಾರ್ಡ್‌ಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿವೆ. ಅವುಗಳನ್ನು ಬ್ಯಾಂಕ್‌ ನಿಯಂತ್ರಿಸಲಾಗದು” ಎಂದು ವಾದಿಸಿದ್ದಾರೆ. ಬ್ಯಾಂಕ್ ವಕೀಲರು, “ಸಾಲಗಾರರೇ ಸ್ವಯಂಪ್ರೇರಣೆಯಿಂದ ತಮ್ಮ ದಾಖಲೆಗಳನ್ನು ಸಾಲದ ಭದ್ರತೆಗಾಗಿ ಒತ್ತೆ ಇಟ್ಟಿದ್ದಾರೆ” ಎಂದು ವಾದಿಸಿದರು. ವಾದ ಪ್ರತಿಪಾದಗಳನ್ನು ಗಮನಿಸಿದ ನ್ಯಾಯಾಲಯವು, “ಯುಕೆ ಪ್ರಜೆಗೆ ಯುಕೆ ಸರ್ಕಾರ ಪಾಸ್‌ಪೋರ್ಟ್ ನೀಡಿದ್ದು, ಅದನ್ನು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ನೀಡಲಾಗಿಲ್ಲ. ಇನ್ನು, ಅರ್ಜಿದಾರರು ಭಾರತದಲ್ಲಿ ಉಳಿದುಕೊಳ್ಳಲು ಒಸಿಐ ಕಾರ್ಡ್ ನೀಡಲಾಗಿದೆ. ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಬ್ಯಾಂಕ್ ಅಧಿಕಾರಿಗಳಲ್ಲಿ ಒತ್ತೆ ಇಡುವುದಾಗಿ ಅರ್ಜಿದಾರರು ಒಪ್ಪಂದದ ಮೂಲಕ ನೀಡಿದ್ದರೂ ಸಹ, ಅವುಗಳನ್ನು 15 ದಿನಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವ ಯಾವುದೇ ಅಧಿಕಾರ ಬ್ಯಾಂಕ್‌ಗೆ ಇಲ್ಲ” ಎಂದು ಹೇಳಿದೆ.“ಇನ್ನೊಂದು ವಿಚಾರವೆಂದರೆ, ಒಸಿಐ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಆರ್‌ಒ) ಆಸ್ತಿಯಾಗಿದೆ. ಆ ಕಾರ್ಡ್‌ಅನ್ನು ಸುರಕ್ಷಿತವಾಗಿ ಇರಿಸಲು ಅದನ್ನು ಎಫ್‌ಆರ್‌ಆರ್‌ಒಗೆ ನ್ಯಾಂಕ್‌ ರವಾನಿಸಬೇಕಿತ್ತು. ಒಂದು ವೇಳೆ, ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ಎಫ್‌ಆರ್‌ಆರ್‌ಒಗೆ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಯಾವುದೂ ನಡೆದಿಲ್ಲ,” ಎಂದು ನ್ಯಾಯಾಲಯ ಗಮನಿಸಿದೆ. ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುವಂತೆ ಆದೇಶಿಸಿದೆಯಾಗಿದೆ.

card High court OCI Passport
Share. Facebook Twitter LinkedIn WhatsApp Email

Related Posts

SHOCKING: ಪ್ರತಿದಿನ ‘ಬಿಸಿ ಬಿಸಿ ಪಾನೀಯ’ ಕುಡಿಯುವುದರಿಂದ ‘ಕ್ಯಾನ್ಸರ್’ ಬರುತ್ತದೆ: ಅಧ್ಯಯನ

23/08/2025 10:19 AM1 Min Read

ಭಾರತದ ಅಗ್ನಿ ಕ್ಷಿಪಣಿ ಪರೀಕ್ಷೆಯನ್ನು ಟೀಕಿಸಿದ ಪಾಕಿಸ್ತಾನ

23/08/2025 9:58 AM1 Min Read

10 ಬಿಲಿಯನ್ ಡಾಲರ್ ಒಪ್ಪಂದದ ಅಡಿಯಲ್ಲಿ ಇಂಟೆಲ್‌ನಲ್ಲಿ 10% ಪಾಲನ್ನು US ತೆಗೆದುಕೊಳ್ಳಲಿದೆ: ಟ್ರಂಪ್

23/08/2025 9:32 AM1 Min Read
Recent News

BIG NEWS: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ: ಬಾನು ಮುಷ್ತಾಕ್

26/08/2025 8:42 PM

ಶಿವಮೊಗ್ಗ ವಿಮಾನ‌ ನಿಲ್ದಾಣದಿಂದ 1 ಲಕ್ಷ ಪ್ರಯಾಣಿಕರಿಗೆ ಸುಗಮ ಸೇವೆ, ಸದ್ಯದಲ್ಲೇ MRO ಆರಂಭ: ಸಚಿವ ಎಂ.ಬಿ ಪಾಟೀಲ

26/08/2025 8:34 PM

ಪಾಕ್ ಪತ್ರಕರ್ತರ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಟ್ರಂಪ್ ನಿಂದಿಸಿದ ಅಮೆರಿಕ ತಜ್ಞರು, ವಿಡಿಯೋ ವೈರಲ್

26/08/2025 8:31 PM

ಬೆಂಗಳೂರಿನ ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ: ಛಲವಾದಿ ನಾರಾಯಣಸ್ವಾಮಿ ಆರೋಪ

26/08/2025 8:25 PM
State News
KARNATAKA

BIG NEWS: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ: ಬಾನು ಮುಷ್ತಾಕ್

By kannadanewsnow0926/08/2025 8:42 PM KARNATAKA 1 Min Read

ಹಾಸನ: ನಾನು ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ, ಅಭಿಮಾನವನ್ನು ಪಡೆದಿದ್ದೇನೆ. ಇಂತಹುದ್ದರ ನಡುವೆ ಒಂದಿಬ್ಬರ ನಕಾರಾತ್ಮಕ ಟೀಕೆ, ಪ್ರತಿಕ್ರಿಯೆಗಳಿಗೆ ಉತ್ತರವನ್ನು ಕೊಡುವ…

ಶಿವಮೊಗ್ಗ ವಿಮಾನ‌ ನಿಲ್ದಾಣದಿಂದ 1 ಲಕ್ಷ ಪ್ರಯಾಣಿಕರಿಗೆ ಸುಗಮ ಸೇವೆ, ಸದ್ಯದಲ್ಲೇ MRO ಆರಂಭ: ಸಚಿವ ಎಂ.ಬಿ ಪಾಟೀಲ

26/08/2025 8:34 PM

ಬೆಂಗಳೂರಿನ ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ: ಛಲವಾದಿ ನಾರಾಯಣಸ್ವಾಮಿ ಆರೋಪ

26/08/2025 8:25 PM

ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?: ಶಾಸಕ ಕೆ.ಎಂ ಉದಯ್ ಪ್ರಶ್ನೆ

26/08/2025 8:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.