Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಡಾ.ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ

15/08/2025 7:24 PM

BREAKING : ದೆಹಲಿ ಹುಮಾಯೂನ್ ಸಮಾಧಿ ಸಂಕೀರ್ಣದಲ್ಲಿ ಗುಮ್ಮಟದ ಒಂದು ಭಾಗ ಕುಸಿದು 5 ಮಂದಿ ಸಾವು, 11 ಜನರ ರಕ್ಷಣೆ

15/08/2025 7:13 PM

ಯುವಕರಿಗೆ ಸಿಹಿ ಸುದ್ದಿ ; ಮೊದಲ ಖಾಸಗಿ ಕೆಲಸಕ್ಕೆ ಸರ್ಕಾರದಿಂದ 15,000 ರೂ. ಲಭ್ಯ ; ಅರ್ಹತೆಯೇನು ಗೊತ್ತಾ.?

15/08/2025 6:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಳ್ಳಾರಿ : ಲೋಕಸಭಾ ಚುನಾವಣೆ: ಜಿಲ್ಲಾ ಸ್ವೀಪ್ ಸಮಿತಿ ರಚನೆ
KARNATAKA

ಬಳ್ಳಾರಿ : ಲೋಕಸಭಾ ಚುನಾವಣೆ: ಜಿಲ್ಲಾ ಸ್ವೀಪ್ ಸಮಿತಿ ರಚನೆ

By kannadanewsnow0702/03/2024 7:26 PM

ಬಳ್ಳಾರಿ: 2024 ರ ಲೋಕಸಭಾ ಲೋಕಸಭಾ ಚುನಾವಣೆಯ ಸಂಬಂಧ ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ನೈಜ ಮತದಾನದ ಅರಿವು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಸಮಿತಿಯ ಪ್ರಮುಖ ಕರ್ತವ್ಯವಾಗಿದೆ. ಪ್ರಯುಕ್ತ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯವಸ್ಥಿಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸ್ವೀಪ್ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದು, ಕಾರ್ಯ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. *ಅಧಿಕಾರಿಗಳು ಮತ್ತು ಕಾರ್ಯಹಂಚಿಕೆ:* ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರು, ಜಿಲ್ಲಾ ಸ್ವೀಪ್ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವುದು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ಸದಸ್ಯರಿಗೆ ಸೂಕ್ತ ನಿರ್ದೇಶನ ನೀಡುವುದಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇವರು ಸದಸ್ಯರಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ವೀಪ್ ಕಾಯಕ್ರಮಗಳನ್ನು ಹಮ್ಮಿಕೊಂಡು ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಇವರು, ಎಲ್ಲಾ ತಾಲ್ಲೂಕಿನ ಎಲ್ಲಾ ಇಲಾಖೆಗಳು ಕೈಗೊಳ್ಳುವ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದು. ಎಲ್ಲಾ ಇಲಾಖೆಗಳು ಸಲ್ಲಿಸಿರುವ ಮಾಹಿತಿಯನ್ನು ಕ್ರೂಢೀಕರಿಸಿ ಜಿಲ್ಲಾ ಪಂಚಾಯತ್ ಸಲ್ಲಿಸುವುದು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇವರು, ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವೀಪ್ ಕಾಯಕ್ರಮಗಳನ್ನು ಹಮ್ಮಿಕೊಂಡು ಛಾಯಾ ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಜಿಲ್ಲೆಯಲ್ಲಿ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳುವ ಸ್ವೀಪ್ ಕಾರ್ಯಕ್ರಮಗಳನ್ನು ನಡೆಸಿ ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು.
ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಜಿಲ್ಲೆಯ ಎಲ್ಲಾ ಬಿ.ಎಡ್, ಡಿ.ಎಡ್ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).

ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳು, ತಮ್ಮ ಇಲಾಖೆ ಹಾಗೂ ಜಿಲ್ಲೆಯ ನೆಹರು ಯುವ ಕೇಂದ್ರ, ಎಲ್ಲಾ ಯುವಕ ಮಂಡಳಿಗಳೊಂದಿಗೆ ಸಮನ್ವಯ ಮಾಡಿಕೊಂಡು ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳನ್ನು ಕೈಗೊಂಡು ಛಾಯಾ ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು.ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು, ಎಲ್ಲಾ ಇಲಾಖೆಗಳು ಕೈಗೊಳ್ಳುವ ಸ್ವೀಪ್ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದು ಪ್ರತಿನಿತ್ಯ ಪತ್ರಿಕೆಗಳಲ್ಲಿ ಪ್ರಚಾರ ಮಾಡುವುದು.

ಎಲ್ಲಾ ಸಮಿತಿ ಸದಸ್ಯರು ತಮಗೆ ವಹಿಸಿದ ಕಾರ್ಯಹಂಚಿಕೆ ವ್ಯಾಪ್ತಿಯಲ್ಲಿ ನಡೆಸುವ ಸ್ವೀಪ್ ಚಟುವಟಿಕೆಗಳ ಕುರಿತು ಕ್ರಿಯಾ ಯೋಜನೆಯನ್ನು ತಯಾರಿಸಿ ಅದರಂತೆ ಪ್ರತಿನಿತ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಇಲಾಖಾ ಅಧಿಕಾರಿಗಳು ಆಲ್ಬಂ ತಯಾರಿಸಿ ತಮ್ಮ ಇಲಾಖೆಯಲ್ಲಿ ಸಂರಕ್ಷಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.

Ballari: District sweep committee formed for Lok Sabha elections ಬಳ್ಳಾರಿ : ಲೋಕಸಭಾ ಚುನಾವಣೆ: ಜಿಲ್ಲಾ ಸ್ವೀಪ್ ಸಮಿತಿ ರಚನೆ
Share. Facebook Twitter LinkedIn WhatsApp Email

Related Posts

ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಡಾ.ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ

15/08/2025 7:24 PM1 Min Read

BREAKING : ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಚಿ. ದೊಡ್ಡಪ್ಪ ಅಪ್ಪಗೆ ಅಧಿಕಾರ ಹಸ್ತಾಂತರ

15/08/2025 6:01 PM1 Min Read

BREAKING : ಬೆಳಗಾವಿಯಲ್ಲಿ 30ಕ್ಕೂ ಅಧಿಕ ಬ್ಯೂಟಿ ಪಾರ್ಲರ್ ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ : ನೋಟಿಸ್ ಜಾರಿ

15/08/2025 5:13 PM1 Min Read
Recent News

ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಡಾ.ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ

15/08/2025 7:24 PM

BREAKING : ದೆಹಲಿ ಹುಮಾಯೂನ್ ಸಮಾಧಿ ಸಂಕೀರ್ಣದಲ್ಲಿ ಗುಮ್ಮಟದ ಒಂದು ಭಾಗ ಕುಸಿದು 5 ಮಂದಿ ಸಾವು, 11 ಜನರ ರಕ್ಷಣೆ

15/08/2025 7:13 PM

ಯುವಕರಿಗೆ ಸಿಹಿ ಸುದ್ದಿ ; ಮೊದಲ ಖಾಸಗಿ ಕೆಲಸಕ್ಕೆ ಸರ್ಕಾರದಿಂದ 15,000 ರೂ. ಲಭ್ಯ ; ಅರ್ಹತೆಯೇನು ಗೊತ್ತಾ.?

15/08/2025 6:53 PM

BREAKING : ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಚಿ. ದೊಡ್ಡಪ್ಪ ಅಪ್ಪಗೆ ಅಧಿಕಾರ ಹಸ್ತಾಂತರ

15/08/2025 6:01 PM
State News
KARNATAKA

ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಡಾ.ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ

By kannadanewsnow0515/08/2025 7:24 PM KARNATAKA 1 Min Read

ಕಲಬುರ್ಗಿ : ಪ್ರಸಿದ್ಧ ವೀರಶೈವ ಮಠಾಧೀಶ ಹಾಗೂ ಸಮಾಜಸೇವಕ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರವನ್ನು ವೀರಶೈವ ಸಂಪ್ರದಾಯದ ವಿಧಿ…

BREAKING : ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಚಿ. ದೊಡ್ಡಪ್ಪ ಅಪ್ಪಗೆ ಅಧಿಕಾರ ಹಸ್ತಾಂತರ

15/08/2025 6:01 PM

BREAKING : ಬೆಳಗಾವಿಯಲ್ಲಿ 30ಕ್ಕೂ ಅಧಿಕ ಬ್ಯೂಟಿ ಪಾರ್ಲರ್ ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ : ನೋಟಿಸ್ ಜಾರಿ

15/08/2025 5:13 PM

ಆಪರೇಷನ್‌ ಸಿಂಧೂರ ಹೆಮ್ಮೆಯ ಕಾರ್ಯಾಚರಣೆ; ಶತ್ರುಗಳು ಕಂಗಾಲಾಗಿದ್ದಾರೆ- ಹೆಚ್.‌ಎಂ. ರಮೇಶ್‌ ಗೌಡ

15/08/2025 5:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.