Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಚಾರ್ಲಿ ಕಿರ್ಕ್ ಹತ್ಯೆ ಶಂಕಿತ ವ್ಯಕ್ತಿಯ ಮೊದಲ ಪೋಟೋ ಬಿಡುಗಡೆ ಮಾಡಿದ FBI | Charlie Kirk Murder Case

11/09/2025 10:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳಾ ಸುರಕ್ಷತೆ ಸಂಬಂಧಿಸಿದಂತೆ ‘ಬಿ.ಪ್ಯಾಕ್‌’ ವತಿಯಿಂದ ‘ಬಿ.ಸೇಫ್‌ ಕ್ಷೇತ್ರ’ ಸಮೀಕ್ಷಾ ವರದಿ ಬಿಡುಗಡೆ
KARNATAKA

ಮಹಿಳಾ ಸುರಕ್ಷತೆ ಸಂಬಂಧಿಸಿದಂತೆ ‘ಬಿ.ಪ್ಯಾಕ್‌’ ವತಿಯಿಂದ ‘ಬಿ.ಸೇಫ್‌ ಕ್ಷೇತ್ರ’ ಸಮೀಕ್ಷಾ ವರದಿ ಬಿಡುಗಡೆ

By kannadanewsnow0901/04/2025 7:40 PM

ಬೆಂಗಳೂರು: ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ಬಿ.ಪ್ಯಾಕ್‌ ಮತ್ತು ಸಿಜಿಐ ಸಂಸ್ಥೆ ನಡೆಸಿದ “ಬಿ.ಸೇಫ್‌” ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಯಿತು.

ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಆಶಾಭಟ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ನಟಿ ಆಶಾಭಟ್‌, ಇಂದು ಮಹಿಳೆ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಪ್ಯಾಕ್‌ ಸಮೀಕ್ಷೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ.ಕೆ. ವೈಷ್ಣವಿ ಮಾತನಾಡಿ, ಬಿ.ಪ್ಯಾಕ್‌ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸುವೆ, ಸರ್ಕಾರವನ್ನು ಬೆಂಬಲಿಸುವ ಮತ್ತು ನಮ್ಮ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್‌ ನಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ. ಅಂತಹ ಸಂಸ್ಥೆಗಳೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತ್ತು ಸುರಕ್ಷಿತ ನಗರವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಸಿಎಸ್ಆರ್ ಮತ್ತು ಇಎಸ್‌ಜಿ ಯ ಮುಖ್ಯಸ್ಥರಾದ ಸುಧಾಕರ್ ಪೈ ಮಾತನಾಡಿ, ಬಿ.ಸೇಫ್‌ ಉಪಕ್ರಮವನ್ನು 2020ರಲ್ಲಿ ಮಹದೇವಪುರ ಮತ್ತು ಮಲ್ಲೇಶ್ವರಂನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು, ನಂತರ 2022ರಲ್ಲಿ ಹೆಬ್ಬಾಳ ಮತ್ತು ದಾಸರಹಳ್ಳಿಗೆ ವಿಸ್ತರಿಸಲಾಯಿತು ಇದೀಗ 2024–2025ರಲ್ಲಿ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಬಿ.ಪ್ಯಾಕ್‌ ಟ್ರಸ್ಟೀ ಹಾಗೂ ಮುಖ್ಯಸ್ಥರಾದ ರೇವತಿ ಅಶೋಕ್ ಮಾತನಾಡಿ, ಬಿ.ಪ್ಯಾಕ್ ನ ಬಿ.ಸೇಫ್ ಕ್ಷೇತ್ರ ಕಾರ್ಯಕ್ರಮವು, ಮಹಿಳೆಯರು ನಗರದಲ್ಲಿ ಎದುರಿಸುತ್ತಿರುವ ಪ್ರಮುಖ ಸುರಕ್ಷತಾ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುವಂತೆ ಬೆಂಗಳೂರಿನಾದ್ಯಂತ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸುರಕ್ಷತಾ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಉಪಕ್ರಮವನ್ನು ನಗರದಾದ್ಯಂತ ವಿಸ್ತರಿಸಿ, ಎಲ್ಲರಿಗೂ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಸಮೀಕ್ಷಾ ವರದಿಯ ಪ್ರಮುಖಾಂಶಗಳು:

ವಿಜಯನಗರ ವಿಧಾನಸಭಾ ಕ್ಷೇತ್ರದ 9 ಬಿಬಿಎಂಪಿ ವಾರ್ಡ್ ಮತ್ತು ಗೋವಿಂದರಾಜನಗರದ 10 ಬಿಬಿಎಂಪಿ ವಾರ್ಡ್‌ಗಳಲ್ಲಿ ಬಿ.ಸೇಫ್‌ ಸಮೀಕ್ಷಾ ಅಧ್ಯಯನ ನಡೆಸಲಾಗಿದ್ದು, ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವ ಆರು ಪ್ರಮುಖ ವಿಭಾಗಗಳ, 265 ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆಡಿಟ್‌ ಮಾಡಲಾಗಿದೆ. ಇಲ್ಲಿನ 46 ಅಂಗನವಾಡಿ ಕೇಂದ್ರಗಳು, 131 ಬಸ್ ನಿಲ್ದಾಣಗಳು, 58 ಉದ್ಯಾನವನಗಳು, 10 ಸಾರ್ವಜನಿಕ ಆರೋಗ್ಯ ಕೇಂದ್ರ, 4 ಪೊಲೀಸ್ ಠಾಣೆ ಮತ್ತು 16 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಎಷ್ಟು ಸುರಕ್ಷತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಅಭಿಪ್ರಾಯ ಸಂಗ್ರಹಿಸಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.

ವಿಜಯನಗರದ ಸಮೀಕ್ಷಾ ವರದಿ ಪ್ರಮುಖಾಂಶ

1. ಬಸ್ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಮಾರ್ಗ ನಕ್ಷೆ, ಬಸ್‌ಗಳ ವಿವರ ವಿಲ್ಲದೇ ಇರುವುದು ಮಹಿಳೆಯರು ಖಾಲಿ ಬಸ್‌ ನಿಲ್ದಾಣದತ್ತ ನಿಲ್ಲಲು ಹಿಂಜರಿಯಬಹುದು.
2. ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳ ಸುಧಾರಣೆ ಅಗತ್ಯ.
3. ಅಂಗನವಾಡಿ ಕೇಂದ್ರಗಳನ್ನು ಪೂರ್ಣ ದಿನದ ಆರೈಕೆ ಕೇಂದ್ರಗಳಾಗಿ ವಿಸ್ತರಿಸುವುದು, ಏಕೆಂದರೆ ಅವುಗಳಲ್ಲಿ ಶೇ.47 ಪ್ರತಿಶತ ಅಂಗನವಾಡಿ ಕೇಂದ್ರಗಳಲ್ಲಿ 10ಕ್ಕೂ ಹೆಚ್ಚು ಕೆಲಸ ಮಾಡುವ ತಾಯಂದೀರನ್ನು ಹೊಂದಿದೆ.
4. ಕೆಲ ಉದ್ಯಾನವನಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದು ಗಮನಕ್ಕೆ ಬಂದಿದ್ದು, ಮಹಿಳಾ ಸುರಕ್ಷತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಉದ್ಯಾನವನದ ಒಳಗೆ ಮತ್ತು ಸುತ್ತಮುತ್ತಲಿನ ಬೀದಿಯಲ್ಲಿ ಸಿಸಿಟಿವಿ ಅಳವಡಿಸುವ ಅಗತ್ಯವಿದೆ
5. ದಿನವಿಡೀ ಸಾರ್ವಜನಿಕ ಶೌಚಾಲಯಗಳನ್ನು ತೆರೆಯುವುದು ಮತ್ತು ಸ್ಯಾನಿಟರಿ ಪ್ಯಾಡ್‌ಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
ಗೋವಿಂದರಾಜ ನಗರದಲ್ಲಿ ನಡೆಸಿದ ಸುರಕ್ಷತಾ ಸಮೀಕ್ಷೆಯ ಪ್ರಮುಖ ಅಂಶಗಳು
1. ಬಸ್ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಮಾರ್ಗ ನಕ್ಷೆಗಳು, ಮತ್ತು ವಿವರಗಳನ್ನು ನೀಡುವ ಮೂಲಕ ಅವುಗಳನ್ನು ಬಳಸಲು ಸುಲಭವಾಗುತ್ತದೆ. ಅಲ್ಲದೆ, ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳ ಸುಧಾರಣೆ ಮುಖ್ಯವಾಗಿದೆ.
2. ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗ ಪೈಕಿ ಶೇ.62 ರಷ್ಟು ಆಸನ ವ್ಯವಸ್ಥೆ ಅಗತ್ಯವಿದೆ.
3. ಉದ್ಯಾನದ ಶೇ.39 ರಷ್ಟು ಜಾಗದಲ್ಲಿ ಮಕ್ಕಳಿಗೆ ಆಟದ ಸಲಕರಣೆಗಳ ಅಳವಡಿಕೆ ಅಗತ್ಯವಿದೆ. ಅದರ ಜೊತೆಗೆ, ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾದ ಎಲ್ಲಾ ಉದ್ಯಾನವನಗಳು ವಾಕಿಂಗ್ ಟ್ರ್ಯಾಕ್‌ಗಳನ್ನು ಹೊಂದಿದ್ದು, ಅವು ಸ್ವಚ್ಛ ಮತ್ತು ಬಳಸಲು ಯೋಗ್ಯವಾದ ಸ್ಥಿತಿಯಲ್ಲಿವೆ.
4. ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯವಿದ್ದು, ಅವೆಲ್ಲವನ್ನೂ ಸ್ವಚ್ಛ ಸ್ಥಿತಿಯಲ್ಲಿ ನಿರ್ವಹಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕಾಯುವ ಕೊಠಡಿ ವ್ಯವಸ್ಥೆಯು ಇದೆ.

ಸಮೀಕ್ಷೆಯ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ಗೆ ಭೇಟಿ ನೀಡಿ

– ವಿಜಯನಗರದ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ.
– ಗೋವಿಂದರಾಜ ನಗರ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ.
ಬಿ.ಸೇಫ್ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://bpac.in/b-safe-constituency/

ನಾಳೆ ಲೋಕಸಭೆಯಲ್ಲಿ ‘ವಕ್ಫ್ ತಿದ್ದುಪಡಿ ವಿಧೇಯಕ’ ಮಂಡನೆ | Waqf Amendment Bill 2024

BIG NEWS: ‘RTO ಹುದ್ದೆ’ಗೆ ಆಡಳಿತ ಇಲಾಖೆಯವರ ಲೋಪದೋಷ: ತನಿಖೆಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಆದೇಶ

Share. Facebook Twitter LinkedIn WhatsApp Email

Related Posts

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM1 Min Read

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM1 Min Read

ಶಿವಮೊಗ್ಗ: ಸಾಗರ ತಾಲ್ಲೂಕು ಕಸಾಪ ಅಧ್ಯಕ್ಷ, ಕವಿ ವಿ.ಟಿ ಸ್ವಾಮಿ ಅವರ ಕವನ ಸಂಕಲನಕ್ಕೆ ‘ಕಾವ್ಯಸಿರಿ ರಾಷ್ಟ್ರೀಯ ಪುರಸ್ಕಾರ’

11/09/2025 9:41 PM1 Min Read
Recent News

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

11/09/2025 10:50 PM

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಚಾರ್ಲಿ ಕಿರ್ಕ್ ಹತ್ಯೆ ಶಂಕಿತ ವ್ಯಕ್ತಿಯ ಮೊದಲ ಪೋಟೋ ಬಿಡುಗಡೆ ಮಾಡಿದ FBI | Charlie Kirk Murder Case

11/09/2025 10:18 PM

SHOCKING : ಪತ್ನಿ ಮತ್ತು ಆಕೆಯ ಪ್ರಿಯಕರನ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪತಿ

11/09/2025 10:11 PM
State News
KARNATAKA

ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ: ಸಂತೋಷ್ ಕುಮಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

By kannadanewsnow0911/09/2025 10:50 PM KARNATAKA 1 Min Read

ಶಿವಮೊಗ್ಗ: ಇಂದು ರಾಷ್ಟ್ರೀಯ ಹುತಾತ್ಮರ ದಿನದಂದೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ…

ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್

11/09/2025 10:30 PM

ಶಿವಮೊಗ್ಗ: ಸಾಗರ ತಾಲ್ಲೂಕು ಕಸಾಪ ಅಧ್ಯಕ್ಷ, ಕವಿ ವಿ.ಟಿ ಸ್ವಾಮಿ ಅವರ ಕವನ ಸಂಕಲನಕ್ಕೆ ‘ಕಾವ್ಯಸಿರಿ ರಾಷ್ಟ್ರೀಯ ಪುರಸ್ಕಾರ’

11/09/2025 9:41 PM

ಈವರೆಗೆ ‘ಕರ್ನಾಟಕ ರತ್ನ ಪ್ರಶಸ್ತಿ’ಗೆ ಯಾರೆಲ್ಲ ಭಾಜನ ಗೊತ್ತಾ? ಇಲ್ಲಿದೆ ಪಟ್ಟಿ

11/09/2025 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.