ಬೆಂಗಳೂರು: ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್ಮೆಂಟ್ ಸಹಭಾಗಿತ್ವದಲ್ಲಿ ಐಟಿಸಿ ಯಶಸ್ವಿಯಾಗಿ ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಪ್ರೋಗ್ರಾಮ್ ಅನ್ನು ಮುಕ್ತಾಯಗೊಳಿಸಿದೆ.
ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಿದ ಈ ಯೋಜನೆಯು ಅಯೋಡಿನ್ ಕೊರತೆ ಅಸ್ವಸ್ಥತೆಗಳ (ಐಡಿಡಿ) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿನ 30 ಜಿಲ್ಲೆಗಳಲ್ಲಿ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಿದೆ.
ಐಟಿಸಿ ಲಿಮಿಟೆಡ್ನ ನ್ಯೂಟ್ರಿಶನ್ ಸೈನ್ಸಸ್ ವಿಭಾಗದ ಮುಖ್ಯಸ್ಥೆ ಡಾ. ಅಗಾಥಾ ಬೆಟ್ಸಿ ಮಾತನಾಡಿ, ಕೇವಲ ಏಳು ತಿಂಗಳುಗಳಲ್ಲಿ, ಕಾರ್ಯಕ್ರಮವು ತನ್ನ ಆರಂಭಿಕ ಗುರಿಯನ್ನೂ ತಲುಪಿದ್ದು, 7.5 ಲಕ್ಷ ವ್ಯಕ್ತಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಪ್ರಮುಖವಾಗಿ ಗರ್ಭಿಣಿಯರು, ಹಾಲೂಡಿಸುವ ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳೂ ಸೇರಿದ್ದಾರೆ. ಇದಕ್ಕಾಗಿ ನಾವು ನವೀನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಅಯೋಡಿನ್ ಕೊರತೆ ಅಸ್ವಸ್ಥತೆಗಳು, ಅಯೋಡಿನ್ನ ಪ್ರಯೋಜನ, ಇತರ ಪ್ರಮುಖ ಸೂಕ್ಷ್ಮಪೋಷಕಾಂಶಗಳು, ಸಮಗ್ರ ಪೌಷ್ಠಿಕಾಂಶ ಹಾಗೂ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ ಎಂದಿದ್ದಾರೆ.
ಇದನ್ನು ಜಾರಿಗೆ ತರಲು, ಸುಸ್ಥಿರ ಮತ್ತು ಬಹುಕೋನೀಯ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಸಮುದಾಯ ಶಿಕ್ಷಣ, ಸಾಂಸ್ಕೃತಿಕ ಇಂಟಿಗ್ರೇಶನ್, ತಾಂತ್ರಿಕ ಅನ್ವೇಷಣೆ ಮತ್ತು ಸಾಮರ್ಥ್ಯ ನಿರ್ಮಾಣವನ್ನೂ ಇದರಲ್ಲಿ ಸೇರಿಸಲಾಗಿದೆ. ಈ ಮೂಲಕ ವರ್ತನೆಯಲ್ಲಿ ದೀರ್ಘಕಾಲೀನ ಬದಲಾವಣೆ ಮತ್ತು ಆರೋಗ್ಯ ಫಲಿತಾಂಶಗಳ ಸಮುದಾಯ ಮಾಲೀಕತ್ವವನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.
ಕೆಪಿಸಿಸಿ ಸಹಕಾರ ವಿಭಾಗದ ನೂತನ ರಾಜ್ಯಾಧ್ಯಕ್ಷರಾಗಿ ಧನರಾಜ್ ತಾಳಂಪಳ್ಳಿ ನೇಮಕ: ಡಿಸಿಎಂ ಡಿಕೆಶಿ ಆದೇಶ
BREAKING: ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ನಟ ಕಮಲ್ ಹಾಸನ್ | Thug Life