ಬೆಂಗಳೂರು : ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ಚಾಲಕರು ಡೆಡ್ ಲೈನ್ ಕೊಟ್ಟಿದ್ದಾರೆ. ಗ್ಯಾಸ್ ಗಾಗಿ ಆಟೋ ಚಾಲಕರು ಪರದಾಡುತ್ತಿದ್ದು ಸಚಿವ ಕೆಎಚ್ ಮುನಿಯಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ ನಾಳೆ ಸಚಿವ ಕೆಎಚ್ ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರು ನಿರ್ಧರಿಸಿದ್ದಾರೆ.
ಹೌದು ಬೆಂಗಳೂರು ಆಟೋ ಸಂಘಟನೆಗಳು ಸಚಿವ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ. ಆಟೋ ಗ್ಯಾಸ್ ಬಗ್ಗೆ ಹರಿಸುವಂತೆ ಈಗಾಗಲೇ ಚಾಲಕರು ಡೆಡ್ ಲೈನ್ ಕೊಟ್ಟಿದ್ದು ಇನ್ನಾದರೂ ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸಿದಿದ್ದರೆ ಸಚಿವ ಕೆಎಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಇಲ್ಲದೆ ಆಟೋ ಚಾಲಕರು ಪರದಾಟ ಮಾಡುತ್ತಿದ್ದಾರೆ. ಗ್ಯಾಸ್ ಬಂಕ್ಗಳ ಮುಂದೆ ಕಿಲೋಮಿಟರ್ ಗಟ್ಟಲೆ ಆಟೋಗಳು ಸರತಿ ಸಾಲಿನಲ್ಲಿ ನಿಂತು ಅಲ್ಲಿಯೇ ಊಟ, ನಿದ್ದೆ ಮಾಡುತ್ತಿದ್ದು, ಜೀವನ ಬಹಳ ದುಃಸ್ತರವಾಗಿದೆ. ಹಾಗಾಗಿ ನಾಳೆ ಆಟೋ ಚಾಲಕರು ಸಚಿವ ಕೆ ಎಸ್ ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ.
ಇನ್ನು ಮನೆಗೆ ಆಟೋ ಚಾಲಕರು ಮುತ್ತಿಗೆ ಹಾಕುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಆಟೋ ಚಾಲಕರು ಮನೆಗೆ ಬಂದರೆ ಸ್ವಾಗತ ಮಾಡುತ್ತೇನೆ. ಆಟೋ ಚಾಲಕರಿಗೆ ಕಾಫಿ, ತಿಂಡಿ ಕೊಡುತ್ತೇನೆ. ಗ್ಯಾಸ್ ವಿಚಾರದಲ್ಲಿ ರಾಜ್ಯ ಸರ್ಕಾರದ್ದು ಏನು ಇಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವಕ್ಕೆ ಹೆಚ್ ಮುನಿಯಪ್ಪ ಹೇಳಿಕೆ ನೀಡಿದರು.
ಆಟೋ ಚಾಲಕರ ಸಮಸ್ಯೆ ಬಗ್ಗೆ ಹರಿಸಲು ಪ್ರಯತ್ನ ಮಾಡುತ್ತೇನೆ. ಆಯಿಲ್ ಕಾರ್ಪೊರೇಷನ್ ಕೋ ಆರ್ಡಿನೇಟರ್ ಜೊತೆಗೆ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ. ಆಟೋ ಚಾಲಕರ ಜೀವನ ಎಲ್ಪಿಜಿ ಮತ್ತು ಸಿ ಎನ್ ಜಿ ಮೇಲೆ ನಿಂತಿದೆ. ಆದಷ್ಟು ಇನ್ನಷ್ಟು ಹೆಚ್ಚಿನ ಗ್ಯಾಸ್ ಕೊಡಬೇಕು ಅಂತ ಈಗಾಗಲೇ ಆಯಿಲ್ ಕಾರ್ಪೊರೇಷನ್ ಕೋ ಆರ್ಡಿನೇಟರ್ ಜೊತೆಗೆ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.








