Subscribe to Updates
Get the latest creative news from FooBar about art, design and business.
Author: kannadanewsnow57
ಆರೋಗ್ಯಕರ ಹಲ್ಲು ಮತ್ತು ಒಸಡುಗಳಿಗಾಗಿ ನಾವು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಬ್ರಷ್ ಮಾಡುತ್ತೇವೆ. ಆದರೆ, ನಮ್ಮ ಬಾಯಿ ಸ್ವಚ್ಛಗೊಳಿಸುವ ಟೂತ್ಬ್ರಷ್ ಎಷ್ಟು ಸ್ವಚ್ಛವಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಾವು ಬಳಸುವ ಬ್ರಷ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅದು ಕೋಟ್ಯಂತರ ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿ ಮಾರ್ಪಟ್ಟು, ನಮ್ಮನ್ನು ತೀವ್ರ ಅನಾರೋಗ್ಯಕ್ಕೆ ದೂಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಬಾಯಿಯ ಆರೋಗ್ಯದ ಕುರಿತು ಪ್ರಖ್ಯಾತ ಅಂತರರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ವೇದಿಕೆಯಾದ ‘ಪಬ್ಮೆಡ್’ (PubMed) ನಲ್ಲಿ ಪ್ರಕಟವಾದ ಅಧ್ಯಯನವೊಂದು ಕಣ್ಣು ತೆರೆಸುವಂತಹ ಸತ್ಯಗಳನ್ನು ಬಹಿರಂಗಪಡಿಸಿದೆ. ಸರ್ಕಾರಿ ಹಾಸ್ಟೆಲ್ನಲ್ಲಿ ವಾಸಿಸುವ 12-14 ವರ್ಷ ವಯಸ್ಸಿನ 32 ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಅವರ ಟೂತ್ಬ್ರಷ್ಗಳ ಮೇಲೆ ವಿಜ್ಞಾನಿಗಳು ಪ್ರಯೋಗ ನಡೆಸಿದ್ದರು. ವಿಭಿನ್ನ ಸಮಯಗಳಲ್ಲಿ ಆ ಬ್ರಷ್ಗಳನ್ನು ಪರೀಕ್ಷಿಸಿದಾಗ, ಅವುಗಳ ಮೇಲೆ ತೀವ್ರವಾದ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುವುದು ಪತ್ತೆಯಾಗಿದೆ. ಕೇವಲ ಹಲ್ಲುಜ್ಜುವುದು ಮಾತ್ರವಲ್ಲ, ಅದಕ್ಕೆ ಬಳಸುವ ಬ್ರಷ್ ಅನ್ನು ಅಷ್ಟೇ ಸ್ವಚ್ಛವಾಗಿಡುವುದು ಮುಖ್ಯ ಎಂದು ಈ ಅಧ್ಯಯನ ತಿಳಿಸಿದೆ.…
ಹಸಿಮೆಣಸಿನಕಾಯಿಯನ್ನು ಕೇವಲ ಉಪ್ಪಿನಕಾಯಿ, ಅಡುಗೆಯ ಒಗ್ಗರಣೆಗೆ ಮಾತ್ರವಲ್ಲದೆ, ಹಾಗೆಯೇ ಹಸಿಯಾಗಿ ತಿನ್ನಲು ಕೂಡ ಅನೇಕರು ಇಷ್ಟಪಡುತ್ತಾರೆ. ಅದೇ ರೀತಿ, ಒಣಮೆಣಸಿನಕಾಯಿಯನ್ನು ಪುಡಿ ಮಾಡಿ ದಿನನಿತ್ಯದ ಅಡುಗೆಯಲ್ಲಿ ಖಾರಕ್ಕಾಗಿ ಮತ್ತು ಒಗ್ಗರಣೆಗಾಗಿ ಬಳಸಲಾಗುತ್ತದೆ. ಇವೆರಡೂ ಖಾರವಾಗಿದ್ದರೂ, ಇವುಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಬಣ್ಣ ಮತ್ತು ತೇವಾಂಶ. ಹಸಿಮೆಣಸಿನಕಾಯಿ ತಾಜಾವಾಗಿದ್ದರೆ, ಒಣಮೆಣಸಿನಕಾಯಿ ಒಣಗಿದ ರೂಪದಲ್ಲಿರುತ್ತದೆ. ನೋಡಲು ಒಂದೇ ಮೂಲದಿಂದ ಬಂದಂತೆ ಕಂಡರೂ, ಇವು ದೇಹದ ಮೇಲೆ ಬೀರುವ ಪ್ರಭಾವ ಬೇರೆಬೇರೆಯಾಗಿರುತ್ತದೆ. ಪೋಷಕಾಂಶಗಳಲ್ಲಿನ ವ್ಯತ್ಯಾಸಗಳು ಹಸಿಮೆಣಸಿನಕಾಯಿ ತಾಜಾವಾಗಿರುತ್ತದೆ, ಆದರೆ ಒಣಮೆಣಸಿನಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಆದ್ದರಿಂದ ಇವುಗಳಲ್ಲಿರುವ ಪೋಷಕಾಂಶಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಒಣಮೆಣಸಿನಕಾಯಿಗೆ ಹೋಲಿಸಿದರೆ ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಮತ್ತು ಕ್ಯಾಪ್ಸೈಸಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಸಂಶೋಧನೆಗಳ ಪ್ರಕಾರ, ತಾಜಾ ಮೆಣಸಿನಕಾಯಿಯಲ್ಲಿ ಆಸ್ಕೋರ್ಬಿಕ್ ಆಮ್ಲ (ವಿಟಮಿನ್ ಸಿ) ಹೆಚ್ಚಿರುತ್ತದೆ. ಆದರೆ ಅದನ್ನು ಒಣಗಿಸಿದಾಗ ವಿಟಮಿನ್ ಸಿ ಅಂಶವು ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ, ವಿಟಮಿನ್ ಎ ವಿಷಯಕ್ಕೆ ಬಂದರೆ ಕಥೆಯೇ ಬೇರೆ! ಮೆಣಸಿನಕಾಯಿಯನ್ನು ಒಣಗಿಸಿದಾಗ ಅದರಲ್ಲಿ ವಿಟಮಿನ್ ಎ…
ಮುಂಬೈ : ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆ ಶಾಕ್ ತಟ್ಟಿದ್ದು, ಸಿಎನ್ ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ವಿತರಕ ಸಂಸ್ಥೆಯಾದ ಮಹಾನಗರ್ ಗ್ಯಾಸ್ ಲಿಮಿಟೆಡ್ (MGL) ಈ ಬೆಲೆ ಪರಿಷ್ಕರಣೆ ಮಾಡಿದೆ. ಈ ಇತ್ತೀಚಿನ ಬೆಲೆ ಏರಿಕೆಯ ನಂತರ ಮುಂಬೈ, ಠಾಣೆ, ನವಿ ಮುಂಬೈ ಮತ್ತು ಎಂಎಂಆರ್ನ ಇತರ ಭಾಗಗಳಲ್ಲಿ ಸಿಎನ್ಜಿ ಬೆಲೆ ಈಗ ಪ್ರತಿ ಕೆಜಿಗೆ ₹86 ಆಗಲಿದೆ. ಇತ್ತೀಚಿನ ವಾರಗಳಲ್ಲಿ ಇದು ಎರಡನೇ ಬಾರಿ ನಡೆದಿರುವ ದರ ಏರಿಕೆಯಾಗಿದ್ದು, ಇದಕ್ಕೂ ಮುನ್ನ ಮೇ 14 ರಂದು ಎಂಜಿಎಲ್ ಸಂಸ್ಥೆಯು ಪ್ರತಿ ಕೆಜಿಗೆ 2 ರೂಪಾಯಿಗಳನ್ನು ಹೆಚ್ಚಿಸಿತ್ತು ಎಂದು ನ್ಯೂಸ್18 ಮರಾಠಿ ವರದಿ ಮಾಡಿದೆ. ಎಲ್ಲೆಲ್ಲಿ ಎಂಜಿಎಲ್ ಸೇವೆ ಇದೆ? ಸದ್ಯ ಮಹಾನಗರ್ ಗ್ಯಾಸ್ ಲಿಮಿಟೆಡ್ (MGL) ಸಂಸ್ಥೆಯು ಮಹಾರಾಷ್ಟ್ರದ ಮುಂಬೈ, ಠಾಣೆ, ನವಿ ಮುಂಬೈ, ಕಲ್ಯಾಣ್, ರಾಯಗಢ, ರತ್ನಗಿರಿ, ಲಾತೂರ್ ಮತ್ತು ಉಸ್ಮಾನಾಬಾದ್ ಸೇರಿದಂತೆ ಕರ್ನಾಟಕದ ಚಿತ್ರದುರ್ಗ ಮತ್ತು…
ಬೆಂಗಳೂರು: ನೀವು ತಂಬಾಕು ಸೇವನೆ ಕೇವಲ ಶ್ವಾಸಕೋಶಕ್ಕೆ ಮಾತ್ರ ಕಂಟಕ ಅಂದುಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಆಲೋಚನೆ ತಪ್ಪು! ಭಾರತದಲ್ಲಿ ತಂಬಾಕು ಬಳಕೆಯಿಂದಾಗಿ ಹರಡುತ್ತಿರುವ ಕ್ಯಾನ್ಸರ್ ಪ್ರಕರಣಗಳು ಇದೀಗ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬೆಂಗಳೂರಿನ ಪ್ರಖ್ಯಾತ ‘ಸಂಪ್ರದ ಹdestination ಆಸ್ಪತ್ರೆ’ಯ ಸ್ಥಾಪಕರು ಹಾಗೂ ಪ್ರಮುಖ ವೈದ್ಯಕೀಯ ನಿರ್ದೇಶಕರಾದ ಡಾ. ರಾಧೇಶ್ಯಾಮ್ ನಾಯಕ್ ಅವರು ಈ ಕುರಿತು ಅತ್ಯಂತ ಕಳವಳಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶ್ವಾಸಕೋಶ ಮಾತ್ರವಲ್ಲ.. ದೇಹದ ಇತರೆ ಅಂಗಗಳಿಗೂ ಕುತ್ತು! ಹೆಚ್ಚಿನವರು ತಂಬಾಕಿನಿಂದ ಕೇವಲ ಶ್ವಾಸಕೋಶದ ಕ್ಯಾನ್ಸರ್ ಮಾತ್ರ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ, ಡಾ. ರಾಧೇಶ್ಯಾಮ್ ಅವರ ಪ್ರಕಾರ, ಇಂದು ಸುಮಾರು 25 ರಿಂದ 30 ವಿವಿಧ ರೀತಿಯ ಕ್ಯಾನ್ಸರ್ಗಳಿಗೆ ತಂಬಾಕೇ ನೇರ ಕಾರಣವಾಗುತ್ತಿದೆ. ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಗಗಳ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ: ಅನ್ನನಾಳ ಮತ್ತು ಹೊಟ್ಟೆಯ ಕ್ಯಾನ್ಸರ್…
ಉಪನೋಂದಣಾಧಿಕಾರಿಗಳ (Sub-Registrar) ಹುದ್ದೆಯ ಅಧಿಕಾರ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಸಮಗ್ರ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.ಉಪನೋಂದಣಾಧಿಕಾರಿಗಳ ವ್ಯಾಪ್ತಿಗೆ ಬರುವ ಆಡಳಿತಾತ್ಮಕ ಮತ್ತು ನೋಂದಣಿ ಕಾರ್ಯಗಳ ಸಂಪೂರ್ಣ ಪಟ್ಟಿ ಬಿಡುಗಡೆಯಾಗಿದೆ. ವರದಿಯ ಪ್ರಕಾರ, ಉಪನೋಂದಣಾಧಿಕಾರಿಗಳ ಪ್ರಮುಖ ಕರ್ತವ್ಯಗಳನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 1. ಆಡಳಿತಾತ್ಮಕ ಜವಾಬ್ದಾರಿಗಳು: ಕಚೇರಿ ಮೇಲ್ವಿಚಾರಣೆ: ಕಚೇರಿಯ ಆಡಳಿತಾತ್ಮಕ ಉಸ್ತುವಾರಿ, ಸಿಬ್ಬಂದಿಗಳ ನಡವಳಿ ಆದೇಶಗಳು ಹಾಗೂ ದಿನನಿತ್ಯದ ರಾಜಸ್ವವನ್ನು (Revenue) ಸರ್ಕಾರಕ್ಕೆ ಜಮೆ ಮಾಡುವುದು. ವೇತನ ಮತ್ತು ಬಿಲ್ಲುಗಳು: ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ವೇತನ ಬಟಾವಾಡೆ, ಕಚೇರಿ ಕಟ್ಟಡ ಹಾಗೂ ವಿದ್ಯುತ್ ಶಕ್ತಿ ಬಿಲ್ಲುಗಳ ಪಾವತಿ ನಿರ್ವಹಣೆ. ಸಿಬ್ಬಂದಿ ನಿರ್ವಹಣೆ: ಕಚೇರಿ ಸಿಬ್ಬಂದಿಯ ರಜೆ ಮಂಜೂರಾತಿ, ಶಿಸ್ತು ಕ್ರಮಕ್ಕೆ ಶಿಫಾರಸು ಹಾಗೂ ಸೇವಾ ವಹಿಗಳನ್ನು (Service Registers) ನಿರ್ವಹಿಸುವುದು. ವರದಿ ಸಲ್ಲಿಕೆ: ಆಸ್ತಿಯ ಹೊಣೆಗಾರಿಕೆ ಪಟ್ಟಿ, ಮಾಸಿಕ ಮತ್ತು ವಾರ್ಷಿಕ ಲೆಕ್ಕ ಪತ್ರಗಳು ಹಾಗೂ ವರಮಾನ ತೆರಿಗೆ ಇಲಾಖೆಗೆ ವಾರ್ಷಿಕ ಮಾಹಿತಿಯನ್ನು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಲ್ಲಿಸುವುದು. ಸಾರ್ವಜನಿಕ…
ಮುಂಬೈ: ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಿಂಚವಡದಲ್ಲಿ ಕಳ್ಳಭಟ್ಟಿ (ವಿಷಪೂರಿತ ಮದ್ಯ) ಸೇವಿಸಿ ಕಳೆದ 48 ಗಂಟೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇನ್ನು ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಅಸ್ವಸ್ಥಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಪ್ರಾಣ ಉಳಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಎಷ್ಟು ಸಾವು? ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸಾವಿನ ವಿವರ ಹೀಗಿದೆ: ಪಿಂಪ್ರಿ-ಚಿಂಚವಡ (ಫುಗೇವಾಡಿ ಮತ್ತು ದಾಪೋಡಿ ಪ್ರದೇಶ): 13 ಸಾವು ಪುಣೆ (ಕಾಲೆ ಪಡಲ್ ಪ್ರದೇಶ): 03 ಸಾವು ಹಡಪ್ಸರ್ ಪ್ರದೇಶ: 02 ಸಾವು ಮುಖ್ಯ ಆರೋಪಿ ಬಂಧನ ದುರಂತದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು, ಈ ಅಕ್ರಮ ದಂಧೆಯ ಮುಖ್ಯ ಸೂತ್ರಧಾರಿ ಯೋಗೇಶ್ ಗಾಯಕ್ವಾಡ್ ಎಂಬಾತನನ್ನು ಬಂಧಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈತ ದೀರ್ಘಕಾಲದಿಂದ ಈ ಭಾಗದಲ್ಲಿ ಅಕ್ರಮ ಹಾಗೂ ವಿಷಪೂರಿತ ಮದ್ಯ ಸರಬರಾಜು ಮಾಡುತ್ತಿದ್ದ. ಈ ಜಾಲದ ಹಿಂದೆ…
ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ಇಡೀ ಕರ್ನಾಟಕದಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಭೀತಿ ಹುಟ್ಟಿಸುತ್ತಿದೆ. ಇಂಟರ್ನೆಟ್ ಜಗತ್ತಿನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಸರ್ಕಾರ ಮತ್ತು ಗೃಹ ಇಲಾಖೆ ಎಷ್ಟೇ ಕಸರತ್ತು ನಡೆಸುತ್ತಿದ್ದರೂ, ವಂಚಕರ ಕೈ ಮೇಲಾಗುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕೇವಲ ಕಳೆದ ಮೂರು ವರ್ಷಗಳ ಅವಧಿಯಲ್ಲೇ ರಾಜ್ಯದಲ್ಲಿ ಬರೋಬ್ಬರಿ 17,606 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದು ತನಿಖಾ ಸಂಸ್ಥೆಗಳ ನಿದ್ದೆ ಗೆಡಿಸಿದೆ. ಹಿಂದೆಲ್ಲಾ ಸೈಬರ್ ಕ್ರೈಂ ಠಾಣೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದವು. ರಾಜ್ಯದ ಯಾವುದೇ ಮೂಲೆಯಲ್ಲಿ ಆನ್ಲೈನ್ ವಂಚನೆ ನಡೆದರೂ ಜನರು ದೂರು ನೀಡಲು ರಾಜಧಾನಿಗೇ ಬರಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಕಾಲ ಬದಲಾಗಿದ್ದು, ರಾಜ್ಯಾದ್ಯಂತ 43 ಸೈಬರ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ತಾಂತ್ರಿಕ ವಂಚನೆಗಳ ಸಂಖ್ಯೆ ಮಾತ್ರ ಗಗನಕ್ಕೇರುತ್ತಲೇ ಇದೆ. ಹಳ್ಳಿಗಳಿಗೂ ಹರಡಿದ ವಂಚನೆಯ ಜಾಲ! ಈ ಹಿಂದೆ ಕೇವಲ ದೊಡ್ಡ ದೊಡ್ಡ ನಗರಗಳನ್ನಷ್ಟೇ ಟಾರ್ಗೆಟ್ ಮಾಡುತ್ತಿದ್ದ ಸೈಬರ್ ಖದೀಮರು, ಈಗ…
ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಬಲ್ಲ ಅತ್ಯಂತ ಮಹತ್ವದ ಆದೇಶವೊಂದನ್ನು ಸುಪ್ರೀಂಕೋರ್ಟ್ ಹೊರಡಿಸಿದೆ. ಯಾವುದೇ ಪ್ರಕರಣದ ವಿಚಾರಣೆ ಮುಗಿದು ತೀರ್ಪನ್ನು ಕಾಯ್ದಿರಿಸಿದರೆ, ಕೇವಲ 3 ತಿಂಗಳ ಒಳಗಾಗಿ ಹೈಕೋರ್ಟ್ಗಳು ಅಂತಿಮ ತೀರ್ಪನ್ನು ಪ್ರಕಟಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ. ವಿಚಾರಣೆ ಮುಗಿದರೂ ವರ್ಷಗಟ್ಟಲೆ ತೀರ್ಪು ಬಾರದೆ ಕೋರ್ಟ್ ಮೆಟ್ಟಿಲು ಹತ್ತಿ ಸುಸ್ತಾಗುತ್ತಿದ್ದ ಜನಸಾಮಾನ್ಯರಿಗೆ ಈ ಆದೇಶ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ದೀಪಂಕರ್ ದತ್ತಾ ಹಾಗೂ ಜಸ್ಟಿಸ್ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಈ ಐತಿಹಾಸಿಕ ಆದೇಶ ನೀಡಿದೆ. ತೀರ್ಪು ನೀಡುವಲ್ಲಿ ವಿಳಂಬ ಮಾಡುವುದು ಕಕ್ಷಿದಾರರಿಗೆ ತುಂಬಲಾರದ ನಷ್ಟ ಉಂಟುಮಾಡುತ್ತದೆ. ಅದರಲ್ಲೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತಡ ಮಾಡದೆ ತಕ್ಷಣವೇ ತೀರ್ಮಾನ ಕೈಗೊಳ್ಳುವುದು ಅತ್ಯಗತ್ಯ” ಎಂದು ಸುಪ್ರೀಂಕೋರ್ಟ್ ಗಂಭೀರವಾಗಿ ಹೇಳಿದೆ. 4 ತಿಂಗಳಾದರೂ ತೀರ್ಪು ಬರದಿದ್ದರೆ ಕೇಸ್ ಬೇರೆ ಜಡ್ಜ್ಗೆ ವರ್ಗಾವಣೆ! ಒಂದು ವೇಳೆ ವಿಚಾರಣೆ ಮುಗಿದು 3 ತಿಂಗಳಾದರೂ ತೀರ್ಪು ಹೊರಬೀಳದಿದ್ದರೆ, ಆಯಾ ಹೈಕೋರ್ಟ್ನ ಮುಖ್ಯ…
ಬೆಂಗಳೂರು: ರಾಜ್ಯ ರಾಜಕಾರಣದ ಹೈವೋಲ್ಟೇಜ್ ಸಸ್ಪೆನ್ಸ್ಗೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಕುರ್ಚಿಯ ಮಹಾ ಯುದ್ಧದ ಕ್ಲೈಮ್ಯಾಕ್ಸ್ ಮುಗಿದು, ಸಿದ್ದರಾಮಯ್ಯ ರಾಜೀನಾಮೆ ನೀಡ ಬೆನ್ನಲ್ಲೇ ಹೊಸ ಇತಿಹಾಸ ಸೃಷ್ಟಿಗೆ ವೇದಿಕೆ ಸಿದ್ಧವಾಗಿದೆ. ಈ ನಡುವೆ, ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಹಾಗೂ ರಾಜಗುರು ದ್ವಾರಕನಾಥ್ ಗುರೂಜಿ ಅವರು ನುಡಿದಿರುವ ಭವಿಷ್ಯ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಡಿಕೆಶಿ ಜಾತಕದ ಪ್ರಕಾರ ಮುಂದಿನ ಎಂಟು ವರ್ಷಗಳ ಕಾಲ ಅವರ ಮುಖ್ಯಮಂತ್ರಿ ಗದ್ದುಗೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಗುರೂಜಿ ಭಾರಿ ಭವಿಷ್ಯ ನುಡಿದಿದ್ದಾರೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮಗಿರುವ 35 ವರ್ಷಗಳ ಸುದೀರ್ಘ ಒಡನಾಟದ ಅಪರೂಪದ ರಹಸ್ಯವನ್ನು ಗುರೂಜಿ ಈ ವೇಳೆ ಬಿಚ್ಚಿಟ್ಟಿದ್ದಾರೆ. ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ಕೊಂಚ ತಡವಾಗುತ್ತಿದ್ದದ್ದನ್ನು ಕಂಡು, ನಾನು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿಯ ಶಾರದಾಂಬೆ ಸನ್ನಿಧಿಗೆ ತೆರಳಿದ್ದೆ. ದೇವಿಯ ಮುಂದೆ ಕೈಮುಗಿದು ಪ್ರಾರ್ಥನೆ ಮಾಡುತ್ತಾ ಕುಳಿತಿದ್ದಾಗಲೇ ನನ್ನ ಮೊಬೈಲ್…
ನವದೆಹಲಿ: ದೇಶದ ರಾಜಧಾನಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯ ಸ್ಪರ್ಧಾ ಆಯೋಗದ (CCI) ಮೊದಲ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ (80) ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೇ 27ರ ಬುಧವಾರ ತಡರಾತ್ರಿ ಅವರ ನಿವಾಸದಲ್ಲಿ ಏರ್ ಕಂಡೀಷನರ್ (AC) ಇನ್ಡೋರ್ ಯುನಿಟ್ ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಏಮ್ಸ್ (AIIMS) ಟ್ರಾಮಾ ಸೆಂಟರ್ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಬುಧವಾರ ರಾತ್ರಿ ಸುಮಾರು 11:18 ರ ವೇಳೆಗೆ ಹೌಜ್ ಖಾಸ್ ಪೊಲೀಸ್ ಠಾಣೆಗೆ ಅಗ್ನಿ ಅವಘಡದ ಕುರಿತು ಕರೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅವಘಡದ ಸಮಯದಲ್ಲಿ ಮನೆಯಲ್ಲಿ ಧನೇಂದ್ರ ಕುಮಾರ್ ಅವರ ಕುಟುಂಬಸ್ಥರು ಮತ್ತು ಮನೆ ಕೆಲಸದವರು ಸೇರಿದಂತೆ ಒಟ್ಟು ಐದು ಜನರಿದ್ದರು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು.…














