Subscribe to Updates
Get the latest creative news from FooBar about art, design and business.
Author: kannadanewsnow57
ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ಭೀಕರ ಆಹಾರ ವಿಷಪೂರಿತ (ಫುಡ್ ಪಾಯ್ಸನಿಂಗ್) ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆ ಬದಿಯ ಗಾಡಿಯಲ್ಲಿ ಪಾನಿಪೂರಿ ತಿಂದ ಸುಮಾರು 20ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಜಿಲ್ಲೆಯ ಮುಸ್ತಬಾದ್ ಮಂಡಲದ ಗೂಡೆಮ್ ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಗ್ರಾಮಕ್ಕೆ ಬಂದಿದ್ದ ಪಾನಿಪೂರಿ ಬಂಡಿಯ ಬಳಿ ಸ್ಥಳೀಯ ಮಕ್ಕಳು ಸಾಯಂಕಾಲ ಪಾನಿಪೂರಿ ತಿಂದಿದ್ದಾರೆ. ಆದರೆ, ಪಾನಿಪೂರಿ ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಒಂದೇ ಬಾರಿಗೆ ಹಲವು ಮಕ್ಕಳು ಅಸ್ವಸ್ಥರಾಗಿದ್ದರಿಂದ ಪೋಷಕರು ಗಾಬರಿಗೊಂಡಿದ್ದಾರೆ. ಅಸ್ವಸ್ಥರಾದ ಎಲ್ಲಾ ಮಕ್ಕಳನ್ನು ತಕ್ಷಣವೇ ಮುಸ್ತಬಾದ್ ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಪಾನಿಪೂರಿ ತಯಾರಿಕೆಯಲ್ಲಿ ಕಲುಷಿತ ನೀರು ಅಥವಾ ಹಳಸಿದ ಆಹಾರ ಪದಾರ್ಥಗಳನ್ನು ಬಳಸಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಘಟನೆಯಿಂದಾಗಿ ಗ್ರಾಮಸ್ಥರು…
ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ಎಲ್ಲಾ ವಸತಿಯುಕ್ತ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿರುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದ್ದಾರೆ. ಸಂಬAಧಪಟ್ಟ ವೈದ್ಯಾಧಿಕಾರಿಗಳು, ಆರ್.ಬಿ.ಎಸ್.ಕೆ ವೈದ್ಯರು ಹಾಗೂ ನಮ್ಮ ಕ್ಲಿನಿಕ್ ವೈದ್ಯರು ಈ ತಪಾಸಣೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಹದಿಹರೆಯದವರ ಆರೋಗ್ಯದ ಮೇಲೆ ವಿಶೇಷ ನಿಗಾ 10 ರಿಂದ 19 ವರ್ಷದ ಹದಿಹರೆಯದ ಪ್ರಾಯದಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೇಗವಾಗಿ ಇರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ, ಲೈಂಗಿಕ ಆರೋಗ್ಯ, ಪೌಷ್ಟಿಕಾಂಶದ ಅಗತ್ಯತೆಗಳು ಹಾಗೂ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ. ವೈದ್ಯಾಧಿಕಾರಿಗಳು ತಪಾಸಣೆ ವೇಳೆ ಪ್ರಮುಖ ಅಂಶಗಳ ಕಡೆಗೆ ಗಮನ ಹರಿಸಬೇಕು. ದೇಹದ ತೂಕ, ಎತ್ತರ ಪರಿಶೀಲನೆ, ಪೋಷಕಾಂಶಗಳ ಕೊರತೆ…
ಮುಂಬೈ: ನೀವು ಇನ್ಸ್ಟಾಗ್ರಾಮ್ ಬಳಸುವವರಾಗಿದ್ದರೆ ‘ಒರ್ರಿ’ (Orry) ಹೆಸರನ್ನು ಖಂಡಿತಾ ಕೇಳಿರುತ್ತೀರಿ. ಸೆಲೆಬ್ರಿಟಿಗಳ ಪಾರ್ಟಿ, ಸ್ಟಾರ್ಗಳ ಜೊತೆ ವಿದೇಶಿ ಪ್ರವಾಸ ಹೀಗೆ ಬಾಲಿವುಡ್ನ ಪ್ರತಿಯೊಂದು ಅದ್ಧೂರಿ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುವ ಓರ್ಹಾನ್ ಅವಟ್ರಾಮಣಿ (Orry), ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ. ಯಾವುದೇ ಸಾಂಪ್ರದಾಯಿಕ 9 ರಿಂದ 5 ರ ಕೆಲಸವಿಲ್ಲದಿದ್ದರೂ, ಲಿಂಕ್ಡ್ಇನ್ ಪ್ರೊಫೈಲ್ ಇಲ್ಲದಿದ್ದರೂ ಒರ್ರಿ ಇಷ್ಟೊಂದು ಐಷಾರಾಮಿ ಜೀವನವನ್ನು ಹೇಗೆ ನಡೆಸುತ್ತಾರೆ? ಅವರಿಗೆ ಹಣ ಎಲ್ಲಿಂದ ಬರುತ್ತದೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇದೀಗ ಕಾವ್ಯ ಕರ್ನಾಟಕ್ ಅವರ ‘ಲರ್ನ್ ಬೈ ಕೆಕೆ ಕ್ರಿಯೇಟ್’ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒರ್ರಿ, ತಮ್ಮ ಆದಾಯದ ಮೂಲಗಳ ಬಗ್ಗೆ ಶಾಕಿಂಗ್ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಒಂದೇ ರೀಲ್ನಿಂದ ₹76 ಲಕ್ಷ ಸಂಪಾದನೆ! ತಮ್ಮ ಆದಾಯದ ಬಗ್ಗೆ ಮಾತನಾಡಿದ ಒರ್ರಿ, ಬ್ರ್ಯಾಂಡ್ ಕೊಲಾಬರೇಷನ್ ಹಾಗೂ ಪಾವತಿ ಕಾರ್ಯಕ್ರಮಗಳ ಮೂಲಕವೇ ತಾವು ಹೆಚ್ಚು ಗಳಿಸುವುದಾಗಿ ಹೇಳಿದ್ದಾರೆ. “ಕಳೆದ ತಿಂಗಳು ನಾನು ಕೇವಲ ಒಂದೇ ಒಂದು ರೀಲ್ಸ್ ಮತ್ತು…
ನವದೆಹಲಿ : ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಕ್ಕೆ ಎಸಿ ಘಟಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬೇಸಿಗೆಯ ಬಿಸಿಲು ಹೆಚ್ಚಾದಂತೆ ಎಸಿ ಸ್ಫೋಟ ಮತ್ತು ಬೆಂಕಿ ಅವಘಡಗಳ ಸುದ್ದಿಗಳು ಹೆಚ್ಚಾಗುತ್ತಿವೆ. ತಜ್ಞರ ಪ್ರಕಾರ, ಇಂತಹ ಘಟನೆಗಳು ಆಕಸ್ಮಿಕವಲ್ಲ. ಬದಲಾಗಿ, ಯಂತ್ರಗಳ ಮೇಲಿನ ವಿಪರೀತ ಒತ್ತಡ, ಕಳಪೆ ನಿರ್ವಹಣೆ ಮತ್ತು ಅಸುರಕ್ಷಿತ ವಿದ್ಯುತ್ ಸಂಪರ್ಕಗಳೇ ಇಂತಹ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ. ಎಸಿ ಸ್ಫೋಟಕ್ಕೆ ಅಥವಾ ಬೆಂಕಿಗೆ ಕಾರಣಗಳೇನು? ಕಂಪ್ರೆಸರ್ ಓವರ್ಹೀಟಿಂಗ್ (Compressor Overheating): ನಿರಂತರವಾಗಿ ಎಸಿ ಚಾಲನೆಯಲ್ಲಿದ್ದರೆ ಕಂಪ್ರೆಸರ್ ಬಿಸಿಯಾಗುತ್ತದೆ. ಕಂಡೆನ್ಸರ್ ಕಾಯಿಲ್ಗಳಲ್ಲಿ ಧೂಳು ತುಂಬಿಕೊಂಡಿದ್ದರೆ, ಸಿಸ್ಟಮ್ ಹೆಚ್ಚು ಶ್ರಮವಹಿಸಬೇಕಾಗುತ್ತದೆ, ಇದು ಯಾಂತ್ರಿಕ ವೈಫಲ್ಯಕ್ಕೆ ದಾರಿಯಾಗುತ್ತದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಬೇಸಿಗೆಯಲ್ಲಿ ಎಸಿ ಬಳಕೆಯಿಂದ ವೈರಿಂಗ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಳಪೆ ಗುಣಮಟ್ಟದ ವೈರ್ಗಳು ಅಥವಾ ಎಕ್ಸ್ಟೆನ್ಶನ್ ಬೋರ್ಡ್ಗಳನ್ನು ಬಳಸುವುದರಿಂದ ವೈರ್ಗಳು…
ಬೆಂಗಳೂರು: ಭವಿಷ್ಯದ ಭದ್ರತೆ ಮತ್ತು ನಿವೃತ್ತಿ ಜೀವನದ ಆರ್ಥಿಕ ಸ್ವಾವಲಂಬನೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಟಲ್ ಪೆನ್ಷನ್ ಯೋಜನೆ’ (APY) ನಾಗರಿಕರಿಗೆ ಅತ್ಯುತ್ತಮ ಆಸರೆಯಾಗಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾದ ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ, 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು ಖಾತರಿಪಡಿಸಿದ ಪಿಂಚಣಿಯನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ವೃದ್ಧಾಪ್ಯದಲ್ಲಿ ಯಾರನ್ನೂ ಅವಲಂಬಿಸದೆ ಬದುಕುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾದ ಅಟಲ್ ಪೆನ್ಷನ್ ಯೋಜನೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಮಾರ್ಗವಾಗಿದೆ. ಈ ಯೋಜನೆಯಡಿ ಹೂಡಿಕೆದಾರರು ತಮ್ಮ ಹೂಡಿಕೆಗೆ ಅನುಗುಣವಾಗಿ ತಿಂಗಳಿಗೆ 1,000 ರೂ.ನಿಂದ ಹಿಡಿದು 5,000 ರೂ.ವರೆಗೆ ಸ್ಥಿರ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ. ಯೋಜನೆಗೆ ಸೇರಲು ಇರಬೇಕಾದ ಅರ್ಹತೆಗಳು: ವಯೋಮಿತಿ: ಈ ಯೋಜನೆಗೆ ಸೇರಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಾಗಿರಬೇಕು.…
ದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಪ್ರಮುಖವಾದದ್ದು. ಸಣ್ಣ ಮೊತ್ತದ ಹೂಡಿಕೆ ಮಾಡಿ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಗಳಿಸಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಇರುವುದರಿಂದ ಈ ಯೋಜನೆಯಲ್ಲಿನ ಹೂಡಿಕೆಗೆ ಸಂಪೂರ್ಣ ಸುರಕ್ಷತೆ ಇರುತ್ತದೆ ಹಾಗೂ ಮಾರುಕಟ್ಟೆಯ ಏರಿಳಿತಗಳ ಅಪಾಯ ಇರುವುದಿಲ್ಲ. ಇದೀಗ ಆರ್ಥಿಕ ತಜ್ಞರ ಪ್ರಕಾರ, ಪಿಪಿಎಫ್ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಿವೃತ್ತಿಯ ನಂತರ ಭಾರಿ ಮೊತ್ತದ ನಿಧಿ (Retirement Corpus) ಸಂಗ್ರಹಿಸುವುದಲ್ಲದೆ, ಪ್ರತಿ ತಿಂಗಳು ₹1 ಲಕ್ಷದವರೆಗೆ ಪಿಂಚಣಿ ಮಾದರಿಯ ಆದಾಯವನ್ನೂ ಪಡೆಯಬಹುದು. ₹1.5 ಕೋಟಿ ನಿಧಿ ಹಾಗೂ ₹1 ಲಕ್ಷ ಪಿಂಚಣಿ ಪಡೆಯುವುದು ಹೇಗೆ? ಪಿಪಿಎಫ್ ಯೋಜನೆಯಲ್ಲಿ ಪ್ರಸ್ತುತ ವಾರ್ಷಿಕ ಶೇಕಡಾ 7.10 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ. ಇದರ ಮೂಲಕ ನಿವೃತ್ತಿ ನಿಧಿ ಮತ್ತು ಪಿಂಚಣಿ ಪಡೆಯುವ ಲೆಕ್ಕಾಚಾರ ಹೀಗಿದೆ. ಹೂಡಿಕೆಯ ಪ್ರಮಾಣ: ಪಿಪಿಎಫ್ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ…
ಮಂಡ್ಯ: ಸ್ನೇಹದ ಹೆಸರಿನಲ್ಲಿ ನಂಬಿಕೆ ದ್ರೋಹ ಎಸಗಿದ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಹೆತ್ತ ಮಕ್ಕಳನ್ನು ಹಾಗೂ ಕಟ್ಟಿ ಕೊಂಡವರನ್ನು ಬಿಟ್ಟು, ಗಂಡನ ಸ್ನೇಹಿತನ ಜೊತೆಯೇ ಮಹಿಳೆಯೊಬ್ಬರು ಪರಾರಿಯಾಗಿರುವ ಆಘಾತಕಾರಿ ಘಟನೆ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪವಿತ್ರ ಮತ್ತು ಯೇಸುದಾಸ್ ಓಡಿಹೋದ ವಿವಾಹಿತ ಜೋಡಿಗಳಾಗಿದ್ದಾರೆ. ವಿಶೇಷವೆಂದರೆ, ಓಡಿಹೋದ ಇಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ತಲಾ ಇಬ್ಬರು ಮಕ್ಕಳಿದ್ದಾರೆ. ಫೋಟೋ ಕಳುಹಿಸಿ ಶಾಕ್ ನೀಡಿದ ಜೋಡಿ! ಮನೆ ಬಿಟ್ಟು ನಾಪತ್ತೆಯಾಗಿದ್ದ ಇಬ್ಬರು ಪ್ರೇಮಿಗಳು, ಇದೀಗ ತಾವಿಬ್ಬರೂ ಮದುವೆಯಾಗಿರುವ ಫೋಟೋವನ್ನು ಕುಟುಂಬಸ್ಥರಿಗೆ ವಾಟ್ಸಾಪ್ ಮೂಲಕ ಕಳುಹಿಸಿ ಭಾರಿ ಶಾಕ್ ನೀಡಿದ್ದಾರೆ. ಮಕ್ಕಳೊಂದಿಗೆ ವಿಡಿಯೋ ಮಾಡಿ ಕಣ್ಣೀರು ಹಾಕಿದ ದಂಪತಿ ತಮ್ಮವರನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಓಡಿಹೋದವಳ ಗಂಡ ಮತ್ತು ಓಡಿಹೋದವನ ಹೆಂಡತಿ, ಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. “ಮಕ್ಕಳ ಮುಖ ನೋಡಿಯಾದರೂ ವಾಪಸ್ ಬನ್ನಿ” ಎಂದು ಅಳಲು ತೋಡಿಕೊಳ್ಳುತ್ತಾ ಜೋಡಿಗಳಿಗೆ ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ,…
ಮಹಾರಾಷ್ಟ್ರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಬೆಚ್ಚಿಬೀಳಿಸಿದೆ. ಆಟವಾಡುತ್ತಿದ್ದ ವೇಳೆ ತೆರೆದ ಸ್ಥಿತಿಯಲ್ಲಿದ್ದ ಸೆಪ್ಟಿಕ್ ಟ್ಯಾಂಕ್ಗೆ ಆಕಸ್ಮಿಕವಾಗಿ ಬಿದ್ದ ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುರ್ಘಟನೆ ಮಕ್ಕಳ ಸುರಕ್ಷತೆ ಕುರಿತಾಗಿ ಮತ್ತೊಮ್ಮೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮಾಹಿತಿಯ ಪ್ರಕಾರ, ಮೊಹಮದ್ ಎಂಬ ಐದು ವರ್ಷದ ಬಾಲಕ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಮುಚ್ಚಳವಿಲ್ಲದೆ ಬಿಟ್ಟಿದ್ದ ಸೆಪ್ಟಿಕ್ ಟ್ಯಾಂಕ್ ಇರುವ ಪ್ರದೇಶದತ್ತ ತೆರಳಿದ್ದಾನೆ. ಆಟದ ನಡುವೆಯೇ ಆಕಸ್ಮಿಕವಾಗಿ ಟ್ಯಾಂಕ್ ಒಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಬಾಲಕ ಕಾಣಿಸದಿದ್ದರಿಂದ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸೆಪ್ಟಿಕ್ ಟ್ಯಾಂಕ್ನಲ್ಲಿ ಬಾಲಕ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೆಪ್ಟಿಕ್ ಟ್ಯಾಂಕ್ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರ ಬೇಜವಾಬ್ದಾರಿತನವೇ…
ALERT : `ಪ್ಯಾನ್ ಕಾರ್ಡ್’ ಹೊಂದಿರುವವರೇ ಎಚ್ಚರ : ಈ ತಪ್ಪು ಮಾಡಿದರೆ ₹10,000 ದಂಡದ ಜೊತೆಗೆ ಜೈಲು ಶಿಕ್ಷೆ ಫಿಕ್ಸ್.!
ನವದೆಹಲಿ : ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ನಷ್ಟೇ ಪ್ಯಾನ್ ಕಾರ್ಡ್ (PAN Card) ಕೂಡ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯುವುದರಿಂದ ಹಿಡಿದು, ಬ್ಯಾಂಕ್ ಖಾತೆ ತೆರೆಯಲು ಮತ್ತು ಯಾವುದೇ ದೊಡ್ಡ ಮಟ್ಟದ ಆರ್ಥಿಕ ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಪ್ರಮುಖ ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಪ್ಯಾನ್ ಕಾರ್ಡ್ಗೆ ಸಂಬಂಧಿಸಿದ ಕಟ್ಟುನಿಟ್ಟಾದ ನಿಯಮಗಳ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ನೀವು ಮಾಡುವ ಕೆಲವೊಂದು ತಪ್ಪುಗಳು ನಿಮ್ಮನ್ನು ಜೈಲಿಗೆ ತಳ್ಳಬಹುದು ಅಥವಾ ಭಾರಿ ದಂಡ ವಿಧಿಸುವಂತೆ ಮಾಡಬಹುದು. ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ಗಳಿವೆಯೇ? ಎಚ್ಚರ! ಭಾರತೀಯ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಪ್ಯಾನ್ ಕಾರ್ಡ್ ಮಾತ್ರ ಇರಲು ಅವಕಾಶವಿದೆ. ದಂಡದ ವಿವರ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಹೊಂದುವಂತಿಲ್ಲ.…
ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯು ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಕನ್ನಡಿಗರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಪದೋನ್ನತಿ (ಪ್ರಮೋಷನ್) ಪರೀಕ್ಷೆಗೆ ಇದೀಗ ಮತ್ತೆ ದಿನಾಂಕ ನಿಗದಿಪಡಿಸಲಾಗಿದ್ದು, ಈ ಬಾರಿಯೂ ಸಹ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರೈಲ್ವೆ ಇಲಾಖೆಯ ಈ ಕ್ರಮವು ಕನ್ನಡಪರ ಸಂಘಟನೆಗಳ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ. ಜೂನ್ 25ಕ್ಕೆ ಪರೀಕ್ಷೆ ನಿಗದಿ: ಪ್ರಶ್ನೆಪತ್ರಿಕೆ ಕೇವಲ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ! ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂನ್ 4ರಂದು ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆ (ಲೆವೆಲ್-5) ಸೇರಿದಂತೆ ಒಟ್ಟು 73 ಬಡ್ತಿ ಹುದ್ದೆಗಳಿಗಾಗಿ ಜೂನ್ 25ರಂದು ಕಂಪ್ಯೂಟರ್ ಆಧಾರಿತ (CBT) ಪದೋನ್ನತಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಯಾವ ಯಾವ ಹುದ್ದೆಗಳಿಗೆ ಪರೀಕ್ಷೆ? ಆಫೀಸ್ ಸೂಪರಿಂಟೆಂಡೆಂಟ್: 39 ಪೋಸ್ಟ್ ಸೀನಿಯರ್ ಕ್ಲರ್ಕ್: 25 ಪೋಸ್ಟ್ ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್: 09 ಪೋಸ್ಟ್ ಆದರೆ, ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು…














