Subscribe to Updates
Get the latest creative news from FooBar about art, design and business.
Author: kannadanewsnow57
ಮುಂಬೈ: ನೀವು ಬ್ಯಾಂಕ್ಗಳಿಂದ ಸಾಲ (Loan) ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾಲಗಾರರಿಗೆ ಶಾಕ್ ನೀಡುವಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ನಿಮ್ಮ ಸಿಬಿಲ್ ಸ್ಕೋರ್ 730 ಕ್ಕಿಂತ ಕಡಿಮೆ ಇದ್ದರೆ, ಇನ್ಮುಂದೆ ನಿಮಗೆ ಸಾಲ ಸಿಗುವುದು ಭಾರಿ ಕಷ್ಟವಾಗಬಹುದು! ಬ್ಯಾಂಕಿಂಗ್ ವಲಯದಲ್ಲಿನ ಆರ್ಥಿಕ ಶಿಸ್ತು ಮತ್ತು ಭವಿಷ್ಯದ ನಷ್ಟವನ್ನು ತಡೆಯುವ ಉದ್ದೇಶದಿಂದ ಆರ್ಬಿಐ ‘ಎಕ್ಸ್ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL – Expected Credit Loss) ಹೆಸರಿನ ಹೊಸ ನಿಯಮಾವಳಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 2027) ಈ ಹೊಸ ನಿಯಮಗಳು ಅಧಿಕೃತವಾಗಿ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ. ಏನಿದು ಇಸಿಎಲ್ (ECL) ನಿಯಮ? ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಕಾರ, ಗ್ರಾಹಕರು ಸಾಲದ ಕಂತುಗಳನ್ನು (EMI) ಕಟ್ಟದೆ ಸುಸ್ತಿದಾರರಾದ (Default) ಬಳಿಕವಷ್ಟೇ ಬ್ಯಾಂಕುಗಳು ಕ್ರಮ…
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆರ್ಥಿಕ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇನ್ಮುಂದೆ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯ (KAMS) ಮೊಬೈಲ್ ಆಪ್ ಮೂಲಕ ಬೆಳಗ್ಗೆ 10:00 ಗಂಟೆಯೊಳಗೆ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಸರ್ಕಾರ ಆದೇಶಿಸಿದೆ. ಇದರೊಂದಿಗೆ, ಪಾರದರ್ಶಕ ಆಡಳಿತ ಮತ್ತು ನಿಖರವಾದ ಸ್ಥಳ ಪರಿಶೀಲನೆಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು (Geo Coordinates) ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಏನಿದು ಹೊಸ ನಿಯಮ? ಪ್ರಮುಖ ಅಂಶಗಳು ಇಲ್ಲಿವೆ: ಬೆಳಗ್ಗೆ 10 ಗಂಟೆಗೆ ಹಾಜರಾತಿ ಕಡ್ಡಾಯ: ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿಯನ್ನು HRMS ನ ಕರ್ತವ್ಯ (KAMS) ಆಪ್ ಮೂಲಕವೇ ದಾಖಲಿಸಬೇಕು. ಕಚೇರಿಗಳ ಜಿಯೋ ಟ್ಯಾಗಿಂಗ್: ಪ್ರತಿಯೊಂದು ಸರ್ಕಾರಿ ಕಚೇರಿಯ ನಿಖರವಾದ ರೇಖಾಂಶ ಮತ್ತು ಅಕ್ಷಾಂಶಗಳನ್ನು (Geo-Coordinates) HRMS-ESS ಆಪ್ ಮೂಲಕ ಸೆರೆಹಿಡಿಯಲು ಸೂಚಿಸಲಾಗಿದೆ. ಅಧಿಕಾರಿಗಳ ನೇಮಕ: ಜಿಯೋ ನಿರ್ದೇಶಾಂಕಗಳನ್ನು ದಾಖಲಿಸಲು ಪ್ರತಿಯೊಂದು ಕಚೇರಿಯಿಂದ ಒಬ್ಬ ಗ್ರೂಪ್…
ಬೆಂಗಳೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆಯಲು ಈಗ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹೌದು, ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರ ಫಲಾನುಭವಿಗಳ ಪರಿಷ್ಕರಣೆಗೆ ಮುಂದಾಗಿದ್ದು, ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಫಲಾನುಭವಿಗಳು ಇಂದಿನಿಂದ ಒಂದು ತಿಂಗಳೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅವರ ಖಾತೆಗೆ ಬರುತ್ತಿದ್ದ 2,000 ರೂಪಾಯಿ ಹಣ ಸ್ಥಗಿತಗೊಳ್ಳಲಿದೆ . ಪರಿಷ್ಕರಣೆಗೆ ಕಾರಣವೇನು? ರಾಜ್ಯದಲ್ಲಿ ಸದ್ಯ ಸುಮಾರು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ . ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ಸಂಗ್ರಹಿಸಿದ ವಿವರಗಳ ಪ್ರಕಾರ, ಯೋಜನೆಗೆ ಒಳಪಟ್ಟಿದ್ದ ಸುಮಾರು 1 ಲಕ್ಷದ 48 ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಮೃತಪಟ್ಟವರ ಖಾತೆಗಳಿಗೂ ಕಳೆದ ಐದು ತಿಂಗಳಿನಿಂದ ಹಣ ಜಮಾವಣೆಯಾಗುತ್ತಿದ್ದು, ಈವರೆಗೆ ಸುಮಾರು 128 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕೆಲವೆಡೆ ಮೃತಪಟ್ಟವರ ಹೆಸರಿನಲ್ಲಿ ಬೇರೆಯವರು…
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿರುವ ‘ಸೇತುಬಂಧ’ (Bridge Course) ಉಪಕ್ರಮದ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ SATS (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ದಾಖಲಿಸುವಂತೆ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಭೌತಿಕ ದಾಖಲಾತಿಗೆ ಮುಕ್ತಿ: ಆನ್ ಲೈನ್ ನಲ್ಲೇ ವರದಿ ಲಭ್ಯ ಈ ಹಿಂದೆ ಸೇತುಬಂಧದ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು SAP ನಮೂನೆಗಳಾದ 4ಎ, 4ಬಿ ಮತ್ತು 5ಎ, 5ಬಿ ಗಳಲ್ಲಿ ಭೌತಿಕವಾಗಿ ದಾಖಲಿಸಬೇಕಾಗಿತ್ತು. ಆದರೆ ಪ್ರಸ್ತುತ SATS ತಂತ್ರಾಂಶದಲ್ಲಿ ಹೊಸದಾಗಿ ‘ಸೇತುಬಂಧ ಮಾಡ್ಯೂಲ್’ (Bridge Course Module) ಅನ್ನು ಸೃಜಿಸಲಾಗಿದ್ದು, ಶಿಕ್ಷಕರು ತಮ್ಮ LBA ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿ ತರಗತಿ ಹಾಗೂ ವಿಷಯವಾರು ಅಂಕ/ಶ್ರೇಣಿಗಳನ್ನು ಕಡ್ಡಾಯವಾಗಿ…
ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 9 ಮತ್ತು 10ನೇ ತರಗತಿಗೂ ಉಚಿತ ಪ್ರವೇಶವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಮಹತ್ವದ ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಸರ್ಕಾರದ ಸುತ್ತೋಲೆ ಮತ್ತು ಹಿನ್ನೆಲೆ ಕಳೆದ ಮೇ 21, 2026 ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿಶೇಷ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಇದರ ಅನ್ವಯ, ಇದುವರೆಗೆ 8ನೇ ತರಗತಿಯವರೆಗೆ ಮಾತ್ರ ಸೀಮಿತವಾಗಿದ್ದ ಆರ್ಟಿಇ ಅಡಿಯ ಉಚಿತ ಶಿಕ್ಷಣ ಸೌಲಭ್ಯವನ್ನು SC ಮತ್ತು ST ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವಂತೆ 9 ಮತ್ತು 10ನೇ ತರಗತಿಗಳಿಗೂ ವಿಸ್ತರಿಸಲಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸರ್ಕಾರ ಮುಂದಾಗಿತ್ತು. ಖಾಸಗಿ ಶಾಲೆಗಳ ಒಕ್ಕೂಟದ…
ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯದಲ್ಲಿ ಅಕ್ಕಿ ದರದಲ್ಲೂ ಗಮನಾರ್ಹ ಏರಿಕೆಯಾಗಿದ್ದು, ಕುಟುಂಬಗಳ ಅಡುಗೆ ಬಜೆಟ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಮೂಡಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಅಕ್ಕಿಗಳ ಬೆಲೆ ಏರಿಕೆಯಾಗಿದ್ದು, ಪ್ರತಿ ಕೆಜಿ ಅಕ್ಕಿಗೆ ₹6ರಿಂದ ₹10ರವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 25ರಿಂದ 26 ಕೆಜಿ ತೂಕದ ಅಕ್ಕಿ ಚೀಲಗಳ ದರದಲ್ಲಿ ಸುಮಾರು ₹150ರವರೆಗೆ ಏರಿಕೆ ದಾಖಲಾಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತಿಗೆ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತಗೊಂಡಿದ್ದು, ಇದರ ನೇರ ಪರಿಣಾಮವಾಗಿ ದರಗಳು ಏರಿಕೆಯಾಗಿವೆ. ಮಾರುಕಟ್ಟೆ ಮೂಲಗಳ ಪ್ರಕಾರ, ಅಕ್ಕಿಯ ಕೊರತೆಯ ಪರಿಸ್ಥಿತಿ ಮುಂದಿನ ನವೆಂಬರ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ.…
ಬೆಂಗಳೂರು: “ಅವರು ಸರ್ಕಾರಿ ನೌಕರರು” ಎಂಬ ಒಂದೇ ಕಾರಣಕ್ಕೆ ಅವರ ಪ್ರತಿಯೊಂದು ವೈಯಕ್ತಿಕ ಮಾಹಿತಿಯನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾಮಾನ್ಯ ನಾಗರಿಕರಂತೆಯೇ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೂ ತಮ್ಮ ವೈಯಕ್ತಿಕ ಬದುಕಿನ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸರ್ಕಾರಿ ನೌಕರರ ಖಾಸಗಿ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಖಾಸಗಿ ಜಗಳಕ್ಕೆ ಆರ್ಟಿಐ ಅಸ್ತ್ರ ಬಳಸುವಂತಿಲ್ಲ! ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ವಿವಾದಗಳು ಅಥವಾ ಕೋರ್ಟ್ ಕೇಸ್ ಗಳಿಗೆ ಸಾಕ್ಷಿ ಸಂಗ್ರಹಿಸುವ ಉದ್ದೇಶದಿಂದ ಆರ್ ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ ಕೆಎಸ್ ಆರ್ ಟಿಸಿಯ ನಿವೃತ್ತ ಅಧಿಕಾರಿಯೊಬ್ಬರ ಆಸ್ತಿ ವಿವರಗಳನ್ನು ಕೋರಿ ಸವಿತಮ್ಮ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು…
GOOD NEWS : ಕೇವಲ ₹3 ಲಕ್ಷ ಹೂಡಿಕೆ ಮಾಡಿ ಆರಂಭಿಸಿ ಈ ಬಿಸಿನೆಸ್; ತಿಂಗಳಿಗೆ ₹2-3 ಲಕ್ಷ ಲಾಭ ಗಳಿಸುವ ಸುವರ್ಣ ಅವಕಾಶ!
ಬೆಂಗಳೂರು: ಇಂದಿನ ದಿನಗಳಲ್ಲಿ 9 ರಿಂದ 5 ರವರೆಗಿನ ಕಚೇರಿ ಕೆಲಸಕ್ಕಿಂತ ಸ್ವಂತ ಉದ್ಯೋಗ ಅಥವಾ ಸ್ಟಾರ್ಟ್ಅಪ್ಗಳತ್ತ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೀವು ಕೂಡ ಕೆಲಸ ಕಳೆದುಕೊಂಡು ಕಂಗಾಲಾಗಿದ್ದರೆ ಅಥವಾ ಸ್ವಂತವಾಗಿ ಏನಾದರೂ ಸಾಧಿಸುವ ಹಂಬಲ ಹೊಂದಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಸುವರ್ಣ ಅವಕಾಶ. ಕೇವಲ ಅಲ್ಪ ಹೂಡಿಕೆಯೊಂದಿಗೆ ಮಿನರಲ್ ವಾಟರ್ (Mineral Water) ಉದ್ಯಮವನ್ನು ಪ್ರಾರಂಭಿಸಿ ತಿಂಗಳಿಗೆ ಲಕ್ಷಗಳಲ್ಲಿ ಲಾಭ ಗಳಿಸಬಹುದು. ಪ್ರತಿ ವರ್ಷ 20% ಬೆಳವಣಿಗೆ ಕಾಣುತ್ತಿರುವ ಉದ್ಯಮ ನೀರಿನ ವ್ಯವಹಾರವು ಸದಾ ಕಾಲ ಬೇಡಿಕೆಯಲ್ಲಿರುವ ಉದ್ಯಮವಾಗಿದೆ. ಅಂಕಿಅಂಶಗಳ ಪ್ರಕಾರ, ಈ ಮಾರುಕಟ್ಟೆಯು ಪ್ರತಿ ವರ್ಷ ಶೇಕಡಾ 20 ಕ್ಕಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. 25 ಲೀಟರ್ನ ನೀರಿನ ಕ್ಯಾನ್ಗಳು ಮತ್ತು ಸಣ್ಣ ಬಾಟಲಿಗಳ ಪೂರೈಕೆಗೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಈಗ ಭಾರಿ ಬೇಡಿಕೆಯಿದೆ. ಉದ್ಯಮ ಆರಂಭಿಸಲು ಏನೆಲ್ಲಾ ಬೇಕು? ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಮೊದಲಿಗೆ ಕೆಲವು ಅಧಿಕೃತ ದಾಖಲೆಗಳು ಮತ್ತು ಸ್ಥಳದ ಅವಶ್ಯಕತೆಯಿದೆ:…
ಥಾಣೆ: ಮಗನ ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದಕ್ಕೆ ಕೇಕ್ ಅನಿರೀಕ್ಷಿತ ಆಘಾತ ನೀಡಿದೆ. ಕೇಕ್ ಮೇಲಿದ್ದ ಅಲಂಕಾರಿಕ ಚಾಕೊಲೇಟ್ ಬೌಲಿಂಗ್ ಪಿನ್ಗಳ ಒಳಗಿದ್ದ ಎರಡು ಕಬ್ಬಿಣದ ಪಿನ್ಗಳನ್ನು (ವೈರ್) ಮೂರು ವರ್ಷದ ಮಗುವೊಂದು ತಿಳಿಯದೇ ನುಂಗಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಥಾಣೆಯ ಹಿರಾನಂದಾನಿ ಎಸ್ಟೇಟ್ ನಿವಾಸಿಯಾಗಿರುವ ಜೀವಶಾಸ್ತ್ರ ಶಿಕ್ಷಕಿ ಸ್ನೇಹಾ ಶೆಲಾರ್ ಎಂಬುವವರ ಮಗ ರೇಯಾಂಶ್ ಈ ಕರಾಳ ಅನುಭವದಿಂದ ಪಾರಾದ ಬಾಲಕ. ಮೇ 31 ರಂದು ರೇಯಾಂಶ್ ಹುಟ್ಟುಹಬ್ಬದ ಅಂಗವಾಗಿ ಕುಟುಂಬಸ್ಥರು ‘ಸ್ಪೈಡರ್ಮ್ಯಾನ್’ ಥೀಮ್ನ ಬೌಲಿಂಗ್ ಅಲೆ ವಿನ್ಯಾಸದ ಕೇಕ್ ತರಿಸಿದ್ದರು. ಆದರೆ ಮರುದಿನವೇ ಈ ಸಂಭ್ರಮ ದೊಡ್ಡ ದುರಂತಕ್ಕೆ ತಿರುಗುವ ಮುನ್ಸೂಚನೆ ನೀಡಿತ್ತು. ಬೇಕರಿಯವರು ಕೇಕ್ ಮೇಲಿದ್ದ ಚಾಕೊಲೇಟ್ ಬೌಲಿಂಗ್ ಪಿನ್ ಗಳಿಗೆ ಆಧಾರ ನೀಡಲು ಒಳಭಾಗದಲ್ಲಿ ಕಬ್ಬಿಣದ ತಂತಿಗಳನ್ನು ಬಳಸಿದ್ದರು. ಆದರೆ ಈ ಬಗ್ಗೆ ಗ್ರಾಹಕರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ಪಾರ್ಟಿಯಲ್ಲಿದ್ದ ಹಿರಿಯ ಮಕ್ಕಳು…
ನವದೆಹಲಿ: ರಸ್ತೆ ಅಪಘಾತಗಳಲ್ಲಿ ಮರಣ ಹೊಂದುವ ಗೃಹಿಣಿಯರ ಪರಿಹಾರವನ್ನು ಲೆಕ್ಕಹಾಕುವಾಗ, ಅವರು ಮನೆಯಲ್ಲಿ ಉಚಿತವಾಗಿ ಸಲ್ಲಿಸುವ ಸೇವೆಗೆ ತಿಂಗಳಿಗೆ ಕನಿಷ್ಠ ₹30,000 ಕಾಲ್ಪನಿಕ ಆದಾಯವನ್ನು ನಿಗದಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ, ಗೃಹಿಣಿಯರನ್ನು ಕೇವಲ ಗೃಹ ಶ್ರಮಕ್ಕೆ ನಿರ್ವಹಿಸುವವರಾಗಿ ನೋಡದೆ, ಅವರನ್ನು “ರಾಷ್ಟ್ರ ನಿರ್ಮಾತೃಗಳು” ಎಂದು ಸುಪ್ರೀಂ ಕೋರ್ಟ್ ಶ್ಲಾಘಿಸಿದೆ. ದೇಶಾದ್ಯಂತ ಮೋಟಾರು ಅಪಘಾತ ಪರಿಹಾರ ಪ್ರಕರಣಗಳಲ್ಲಿ ದೊಡ್ಡ ಬದಲಾವಣೆ ತರಲಿರುವ ಈ ತೀರ್ಪನ್ನು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ನೀಡಿದೆ. ಗೃಹಿಣಿಯರ ಶ್ರಮವನ್ನು ಕೇವಲ ‘ಕುಶಲ ಕಾರ್ಮಿಕರ’ (skilled labourers) ಕೂಲಿಗೆ ಹೋಲಿಸುವ ಹಳೆಯ ನ್ಯಾಯಾಂಗ ಪದ್ಧತಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅಂತಹ ಹಳೆಯ ವಿಧಾನವು ಮನೆಯಲ್ಲಿ ಅವರು ನೀಡುವ ಆರ್ಥಿಕ ಮತ್ತು ಸಾಮಾಜಿಕ ಕೊಡುಗೆಯ ನಿಜವಾದ ಮೌಲ್ಯವನ್ನು ಗೌರವಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ನಾವು ಹೊಸ ತತ್ವವೊಂದನ್ನು ರೂಪಿಸಿದ್ದೇವೆ. ಇದರ ಅನ್ವಯ, ಗೃಹಿಣಿಯರ ಮರಣದಿಂದ ಕುಟುಂಬಕ್ಕೆ ಉಂಟಾಗುವ…














