Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯದ ನಿವೃತ್ತ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ಪಿಂಚಣಿ ಪರಿವರ್ತಿತ ಮೊತ್ತದ (Commuted Pension) ಮರುಸ್ಥಾಪನೆ ಅವಧಿಯನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರವು ಅಧಿಕೃತವಾಗಿ ತಿರಸ್ಕರಿಸಿದೆ. ಈ ಕುರಿತು ಆರ್ಥಿಕ ಇಲಾಖೆಯು ಸ್ಪಷ್ಟನೆಯನ್ನು ನೀಡಿದ್ದು, ಪ್ರಸ್ತುತ ಜಾರಿಯಲ್ಲಿರುವ 15 ವರ್ಷಗಳ ಅವಧಿಯಲ್ಲೇ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ. ಹಿನ್ನೆಲೆ ಮತ್ತು ಬೇಡಿಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 376(14) ರ ಅನ್ವಯ, ನೌಕರರು ನಿವೃತ್ತಿಯ ಸಮಯದಲ್ಲಿ ತಮ್ಮ ಪಿಂಚಣಿಯ ಒಂದು ಭಾಗವನ್ನು ಇಡಿಗಂಟಾಗಿ ಪಡೆಯಬಹುದು. ಹೀಗೆ ಪಡೆದ ಮೊತ್ತವನ್ನು ಸರಿದೂಗಿಸಲು ಮಾಸಿಕ ಪಿಂಚಣಿಯಲ್ಲಿ ಕಡಿತ ಮಾಡಲಾಗುತ್ತದೆ. ಈ ಕಡಿತದ ಅವಧಿಯನ್ನು ಪ್ರಸ್ತುತ ಇರುವ 15 ವರ್ಷಗಳಿಂದ 12 ವರ್ಷಗಳಿಗೆ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಇಳಿಸಬೇಕೆಂದು ನಿವೃತ್ತ ನೌಕರರ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಸರಳ ಬಡ್ಡಿಯ ಲೆಕ್ಕಾಚಾರದ ಪ್ರಕಾರ 11-12 ವರ್ಷಗಳಲ್ಲೇ ಅಸಲು ಮತ್ತು ಬಡ್ಡಿ ವಸೂಲಿಯಾಗುತ್ತದೆ, ಆದ್ದರಿಂದ 15 ವರ್ಷಗಳ ವರೆಗೆ ಕಡಿತ…
ರಾಯಚೂರು : ಮನೆಯಲ್ಲಿದ್ದ ಫ್ರೀಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ಕ್ ಎಂಬುವರ ಮನೆಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ರಾಜನಾಯ್ಕ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿ ಏಕಾಏಕಿ ಫ್ರಿಡ್ಜ್ ಸ್ಪೋಟಗೊಂಡಿದೆ. 2.5 ಲಕ್ಷ ರೂ. ನಗದು ಸೆರಿದಂತೆ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಂಧರ್ಬಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಮತ್ತೊಂದು ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅತಿ ವೇಗವಾಗಿ ಬಂದ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಬಸವೇಶ್ವರ ವೃತ್ತದಲ್ಲಿ ಈ ಅಪಘಾತ ನಡೆದಿದೆ. ಮೃತರನ್ನು ಮೊಹಮದ್ ಅಲಿ, ಫಯಾಜ್ ಮತ್ತು ನೂರ್ ಅಹಮದ್ ಎಂದು ಗುರುತಿಸಲಾಗಿದ್ದು, ಮೂವರೂ ಒಂದೇ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ವಿವರ: ಹೈದರಾಬಾದ್ ಮಾರ್ಗದಿಂದ ಮಂತ್ರಾಲಯದ ಕಡೆಗೆ ಅತಿ ವೇಗವಾಗಿ ತೆರಳುತ್ತಿದ್ದ ಟ್ರಕ್, ಬಸವೇಶ್ವರ ವೃತ್ತದ ಬಳಿ ಯುವಕರಿದ್ದ ಬೈಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ.ಪರಿಣಾಮ ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಮೂವರು ಯುವಕರು ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲಕ ಪರಾರಿ: ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಮಾನವೀಯತೆ ಮರೆತಿದ್ದಾನೆ. ಪೊಲೀಸ್ ಕ್ರಮ: ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪರಾರಿಯಾಗಿರುವ ಟ್ರಕ್…
ನವದೆಹಲಿ : ವ್ಯಾಪಾರ ಮೇಜು. ಕ್ಯಾಲೆಂಡರ್ ಬದಲಾದ ತಕ್ಷಣ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗುತ್ತವೆ. ಮಾರ್ಚ್ 1, 2026 ರಿಂದ, ಸಿಮ್ ಕಾರ್ಡ್’ಗಳು, ಬ್ಯಾಂಕಿಂಗ್ ಮತ್ತು ರೈಲ್ವೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನ ಜಾರಿಗೆ ತರಲಾಗುವುದು, ಇದು ನಿಮ್ಮ ಸ್ಮಾರ್ಟ್ಫೋನ್ ಬಳಕೆ ಮತ್ತು ಮನೆಯ ಬಜೆಟ್ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳು ಡಿಜಿಟಲ್ ಭದ್ರತೆಯನ್ನ ಬಲಪಡಿಸುವ ಮತ್ತು ಸೇವೆಗಳನ್ನ ಹೆಚ್ಚು ಪಾರದರ್ಶಕಗೊಳಿಸುವ ಗುರಿಯನ್ನ ಹೊಂದಿವೆ. ನಾಳೆ ಜಾರಿಗೆ ಬರಲಿರುವ ಐದು ಪ್ರಮುಖ ಬದಲಾವಣೆಗಳನ್ನು ತಿಳಿಯೋಣಾ. 1. ಈಗ ನೀವು ನಿಮ್ಮ ಸಿಮ್ ತೆಗೆದರೆ ವಾಟ್ಸಾಪ್ ಕೆಲಸ ನಿಲ್ಲಿಸುತ್ತದೆ.! ಡಿಜಿಟಲ್ ವಂಚನೆ ಮತ್ತು ‘ಒಟಿಪಿ ಹಗರಣ’ವನ್ನು ನಿಗ್ರಹಿಸಲು, ಸರ್ಕಾರವು ನಾಳೆಯಿಂದ ಕಟ್ಟುನಿಟ್ಟಾದ ಸಿಮ್ ಬೈಂಡಿಂಗ್ ನಿಯಮಗಳನ್ನು ಜಾರಿಗೆ ತರುತ್ತಿದೆ. ಈಗ ನಿಮ್ಮ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳು ನಿಮ್ಮ ಸಿಮ್ ಕಾರ್ಡ್ಗೆ ನೇರವಾಗಿ “ಲಾಕ್” ಆಗುತ್ತವೆ. ನಿಮ್ಮ ಫೋನ್ನಿಂದ ಸಿಮ್ ಕಾರ್ಡ್ ತೆಗೆದರೆ, ಈ ಅಪ್ಲಿಕೇಶನ್ಗಳು…
ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಗನಿಗೆ ವಾಹನ ಚಲಾಯಿಸಲು ನೀಡಿದ ತಂದೆಗೆ ಗುಬ್ಬಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು 25 ಸಾವಿರ ರೂಪಾಯಿ ದಂಡ ಹಾಗೂ ಒಂದು ದಿನದ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಘಟನೆಯ ಹಿನ್ನೆಲೆ: ದಿನಾಂಕ: ಆಗಸ್ಟ್ 17, 2024 ರಂದು ಪಟ್ಟಣದ ವಿನಾಯಕ ನಗರದ 2ನೇ ಕ್ರಾಸ್, ಗುರುಭವನದ ಮುಂದಿನ ರಸ್ತೆಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕನು ದ್ವಿಚಕ್ರ ವಾಹನ ಚಲಾಯಿಸುವಾಗ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದನು.ಈ ದುರ್ಘಟನೆಗೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತನಿಗೆ ವಾಹನ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಬಾಲಕನ ತಂದೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ನ್ಯಾಯಾಲಯದ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಅನುಪಮಾ ಅವರು, ಮೃತನ ತಂದೆಯೇ ಈ ತಪ್ಪಿಗೆ ಕಾರಣರಾಗಿದ್ದಾರೆ ಎಂದು ಪರಿಗಣಿಸಿ, ಅವರಿಗೆ ₹25,000 ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಗಮನಿಸಿ: ಪೋಷಕರು…
ಲಾ ಪಾಜ್ (ಬೊಲಿವಿಯಾ): ಬೊಲಿವಿಯಾದ ಎಲ್ ಆಲ್ಟೋ ನಗರದಲ್ಲಿ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ವಿಮಾನವೊಂದು ಪತನಗೊಂಡಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯ ವಿವರ: ಶುಕ್ರವಾರದಂದು ಬೊಲಿವಿಯಾದ ರಾಜಧಾನಿ ಲಾ ಪಾಜ್ ಬಳಿಯಿರುವ ಎಲ್ ಆಲ್ಟೋ ನಗರದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಬೊಲಿವಿಯನ್ ವಾಯುಪಡೆಗೆ (Bolivian Air Force) ಸೇರಿದ ಹರ್ಕ್ಯುಲಸ್ ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ಪತನಗೊಂಡಿದೆ ಎನ್ನಲಾಗಿದೆ. ಮೃತರು: ಈ ಅಪಘಾತದಲ್ಲಿ ಈವರೆಗೆ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಸುಮಾರು 30 ಜನರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪಾರುಗಾಣಿಕಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಪಘಾತಕ್ಕೆ ನಿಖರವಾದ ಕಾರಣವೇನೆಂದು ತಿಳಿಯಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. https://twitter.com/AZ_Intel_/status/2027520594892198273?ref_src=twsrc%5Etfw%7Ctwcamp%5Etweetembed%7Ctwterm%5E2027520594892198273%7Ctwgr%5E2c539394cce7ed1c345bb9cfac66826f2775aecb%7Ctwcon%5Es1_c10&ref_url=https%3A%2F%2Fkannadadunia.com%2Fair-force-plane-crash-in-bolivia-15-dead-watch-video%2F
ಭಾರತೀಯ ಸಮಾಜದಲ್ಲಿ ಪುರುಷನ ಜೀವನ ಎಂದರೆ ಅದು ಕೇವಲ ಬದುಕಲ್ಲ, ಹುಟ್ಟಿನಿಂದ ಸಾವಿನವರೆಗೆ ಹೊತ್ತು ಸಾಗುವ ಜವಾಬ್ದಾರಿಗಳ ಮೂಟೆ. ತನ್ನ ಆಸೆ-ಆಕಾಂಕ್ಷೆಗಳನ್ನು ಹೂತುಹಾಕಿ, ಕುಟುಂಬದ ಏಳಿಗೆಗಾಗಿ ಅಹೋರಾತ್ರಿ ಶ್ರಮಿಸುವ ಒಬ್ಬ ಸರಾಸರಿ ಭಾರತೀಯ ಪುರುಷನ ಜೀವನ ಚಕ್ರ ಹೇಗಿರುತ್ತದೆ ಎಂಬುದು ಯಾರಿಗಾದರೂ ಕಣ್ಣೀರು ತರಿಸುವಂತಿದೆ. ಬಾಲ್ಯದಿಂದಲೇ ಶುರುವಾಗುವ ಸ್ಪರ್ಧೆಯ ಓಟ ಮಗುವಾಗಿ ಹುಟ್ಟಿದ ಐದೇ ವರ್ಷಕ್ಕೆ ಮಗನ ಮೇಲೆ ನಿರೀಕ್ಷೆಗಳ ಪರ್ವತವೇ ಸೃಷ್ಟಿಯಾಗುತ್ತದೆ. ಇಂದಿನ ದಿನಗಳಲ್ಲಂತೂ ಮೂರು ವರ್ಷಕ್ಕೇ ಶಾಲೆಯ ಬಾಗಿಲು ತಟ್ಟುವ ಮಗುವಿನ ಹೆಗಲ ಮೇಲೆ ಆಟವಾಡಬೇಕಾದ ವಯಸ್ಸಿನಲ್ಲೇ ಪುಸ್ತಕದ ಚೀಲ ಬೀಳುತ್ತದೆ. ಇಲ್ಲಿ ಹವ್ಯಾಸಗಳಿಗೆ, ಮನರಂಜನೆಗೆ ಜಾಗವಿಲ್ಲ; ಕೇವಲ ರ್ಯಾಂಕು ಮತ್ತು ಅಂಕಗಳ ಬೇಟೆಯಲ್ಲೇ ಬಾಲ್ಯ ಕಳೆದುಹೋಗುತ್ತದೆ. 15 ರಿಂದ 22 ವರ್ಷದ ಹೊತ್ತಿಗೆ ಲಕ್ಷಾಂತರ ಜನರೊಂದಿಗೆ ಸ್ಪರ್ಧಿಸಿ ಕಾಲೇಜು ಸೀಟು, ಆಮೇಲೆ ಒಂದು ಕೆಲಸಕ್ಕಾಗಿ ರಾತ್ರಿ ಎನ್ನದೆ ಹೋರಾಡಬೇಕು. ಸಮಾಜ ಮತ್ತು ಶಿಕ್ಷಕರ ಒತ್ತಡ ಅವನನ್ನು ಯಂತ್ರವನ್ನಾಗಿ ಮಾಡುತ್ತದೆ. ತನ್ನದೇನಾದರೂ ಕನಸುಗಳಿದ್ದರೂ, ಅವು ಭವಿಷ್ಯಕ್ಕೆ ಅಡ್ಡಿಯಾಗುತ್ತವೆ ಎಂದು…
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯುವುದು ಲಕ್ಷಾಂತರ ಯುವಕರ ಕನಸು. ರೈಲ್ವೆ ವ್ಯವಸ್ಥೆಯಲ್ಲಿ ಶಿಸ್ತು ಕಾಪಾಡುವಲ್ಲಿ ಮತ್ತು ಆದಾಯ ಕ್ರೋಢೀಕರಿಸುವಲ್ಲಿ ಟಿಕೆಟ್ ಕಲೆಕ್ಟರ್ (TC) ಪಾತ್ರ ಬಹಳ ಮುಖ್ಯವಾದುದು. ನೀವು ಕೂಡ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಆಗಲು ಬಯಸಿದ್ದರೆ, ಅದಕ್ಕೆ ಬೇಕಾದ ಅಗತ್ಯ ಮಾಹಿತಿ ಇಲ್ಲಿದೆ. ಟಿಕೆಟ್ ಕಲೆಕ್ಟರ್ ಜವಾಬ್ದಾರಿಗಳೇನು? ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಟಿಕೆಟ್ಗಳನ್ನು ಪರಿಶೀಲಿಸುವುದು ಮತ್ತು ದೃಢೀಕರಿಸುವುದು. ರಿಸರ್ವೇಶನ್ ಹಾಗೂ ಅನ್-ರಿಸರ್ವ್ಡ್ ಕೋಚ್ಗಳಲ್ಲಿ ಪ್ರಯಾಣಿಕರ ವಿವರಗಳನ್ನು ಪರೀಕ್ಷಿಸುವುದು. ಟಿಕೆಟ್ ರಹಿತ ಪ್ರಯಾಣಿಕರಿಗೆ ಹಾಗೂ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು. ಪ್ಲಾಟ್ಫಾರ್ಮ್ ಮತ್ತು ವಿಚಾರಣಾ ಕೌಂಟರ್ಗಳಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವುದು. ಅರ್ಹತೆ ಮತ್ತು ವಯೋಮಿತಿ ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (ಪಿಯುಸಿ) ತೇರ್ಗಡೆಯಾಗಿರಬೇಕು. ಕೆಲವು ಉನ್ನತ ದರ್ಜೆಯ ಪೋಸ್ಟ್ಗಳಿಗೆ ಪದವಿ (Graduation) ಅಗತ್ಯವಿರುತ್ತದೆ. ವಯೋಮಿತಿ: ಸಾಮಾನ್ಯವಾಗಿ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ SC, ST, OBC…
ನವದೆಹಲಿ: ಪ್ರೇಮ ಸಂಬಂಧ ಮುರಿದುಬೀಳುವುದು (ಬ್ರೇಕಪ್) ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಮತ್ತು ಇದನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಆತ್ಮಹತ್ಯೆ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೋಜ್ ಜೈನ್ ಅವರ ಪೀಠವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಹಿನ್ನೆಲೆ ಏನು? ಈ ಘಟನೆಯು ಕಳೆದ ವರ್ಷ ನಡೆದಿದ್ದು, 27 ವರ್ಷದ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಮಹಿಳೆಯ ತಂದೆ ಆರೋಪಿಯ ವಿರುದ್ಧ ಗಂಭೀರ ದೂರು ನೀಡಿದ್ದರು.ಆರೋಪಿಯು ತನ್ನ ಮಗಳ ಮೇಲೆ ಮದುವೆಯಾಗುವಂತೆ ಒತ್ತಡ ಹೇರಿದ್ದಲ್ಲದೆ, ಧರ್ಮ ಬದಲಿಸುವಂತೆ ಪೀಡಿಸುತ್ತಿದ್ದನು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಮಗಳು, ಬ್ರೇಕಪ್ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ದೂರಿದ್ದರು. ಆರೋಪಿಯು ವಿಶ್ವವಿದ್ಯಾಲಯವೊಂದರಲ್ಲಿ ಪ್ರೊಫೆಸರ್ ಆಗಿದ್ದು, ಮೃತ ಮಹಿಳೆ ಮತ್ತು ಆತ ವ್ಯಾಸಂಗದ ಅವಧಿಯಲ್ಲಿ ಪರಿಚಯವಾಗಿದ್ದರು.ವಿಚಾರಣೆ ವೇಳೆ ಆರೋಪಿಯ ಪರ ವಕೀಲರು ವಾದ ಮಂಡಿಸಿ, ಇಬ್ಬರೂ ಸುಮಾರು 8 ವರ್ಷಗಳ ಕಾಲ ಪರಸ್ಪರ ಒಪ್ಪಿಗೆಯಿಂದ…
ಕೇಂದ್ರ ಸರ್ಕಾರದ ವಿವಿಧ ಜನಪದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಈಗ ಪ್ರತಿಯೊಬ್ಬ ರೈತರಿಗೂ ‘ಪ್ರತ್ಯೇಕ ಗುರುತಿನ ಸಂಖ್ಯೆ’ (Central ID) ಸೃಜಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಐಡಿ ಪಡೆಯಲು ರೈತರು ಕೂಡಲೇ ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಯಾವ ಯೋಜನೆಗಳಿಗೆ ಇದು ಅಗತ್ಯ? ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ: ಪಿಎಂ-ಕಿಸಾನ್ (PM-Kisan) ಗೌರವ ಧನ. ಬರಪರಿಹಾರ ಮತ್ತು ವಿಮೆ ಮೊತ್ತ. ಬೆಳೆಗಳಿಗೆ ನೀಡಲಾಗುವ ಬೆಂಬಲ ಬೆಲೆ. ಇತರೆ ಕೃಷಿ ಸಂಬಂಧಿತ ಸಬ್ಸಿಡಿಗಳು ಮತ್ತು ಸೌಲಭ್ಯಗಳು. ರೈತರು ಮಾಡಬೇಕಾದ ಕೆಲಸಗಳೇನು? ಇ-ಕೆವೈಸಿ ಕಡ್ಡಾಯ: ರೈತರು ತಮ್ಮ ‘ಫ್ರೂಟ್ಸ್’ (FRUITS) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡಿಸುವುದು ಅವಶ್ಯಕ. RTC ಸೇರ್ಪಡೆ: ಜಮೀನಿನ ಎಲ್ಲಾ ಪಹಣಿ (RTC) ವಿವರಗಳನ್ನು ಎಫ್ಐ್ಡಿಗೆ (FID) ಸೇರ್ಪಡೆಗೊಳಿಸಿ, ಡಿಜಿಟಲ್ ಕನ್ಸೆಂಟ್ (Digital Consent) ನೀಡಬೇಕಿರುತ್ತದೆ. ಸಂಪರ್ಕಿಸಬೇಕಾದ ಸ್ಥಳ ಮತ್ತು ದಾಖಲೆಗಳು: ರೈತರು ಈ ಕೆಳಗಿನ ದಾಖಲೆಗಳೊಂದಿಗೆ…














