Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಪ್ರಸಕ್ತ ವರ್ಷದ ಬಕ್ರೀದ್ ಹಬ್ಬವನ್ನು ಮುಂಬರುವ ಮೇ 28ರಂದು ರಾಜ್ಯಾದ್ಯಂತ ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ. ಭಾನುವಾರ ಸಂಜೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಮಂಡಳಿ ಕಚೇರಿಯಲ್ಲಿ ಸಮಿತಿಯ ಪ್ರಮುಖ ಸದಸ್ಯರ ಉನ್ನತ ಮಟ್ಟದ ಸಭೆ ಜರುಗಿತು. ಈ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಚಂದ್ರ ದರ್ಶನದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ದೇಶದ ಯಾವುದೇ ಭಾಗದಲ್ಲೂ ದುಲ್ಹಜ್ ಮಾಸದ ಚಂದ್ರ ದರ್ಶನವಾಗಿರುವ ಬಗ್ಗೆ ಭಾನುವಾರ ಸಂಜೆಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಮೇ 28ರಂದು ಹಬ್ಬವನ್ನು ಆಚರಿಸುವುದಾಗಿ ಸಮಿತಿ ನಿರ್ಧಾರ ಪ್ರಕಟಿಸಿದೆ. ಕರಾವಳಿ ಜಿಲ್ಲೆಗಳ ನಿಲುವು: ರಾಜ್ಯಾದ್ಯಂತ ದಿನಾಂಕ ನಿಗದಿಯಾಗಿದ್ದರೂ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯ ಖಾಝಿಗಳಿಂದ ಹಬ್ಬದ ಆಚರಣೆಯ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆರಾಜ್ಯಗಳ ಚಂದ್ರ ದರ್ಶನ ಸಮಿತಿಗಳೊಂದಿಗೆ ಸಂಪರ್ಕ ಸಾಧಿಸಿ, ಒಮ್ಮತದ…
ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ದಿನಸಿ ಸಾಮಗ್ರಿಗಳನ್ನು ಕೊಳ್ಳುವುದು ಸಾಮಾನ್ಯ ಜನರಿಗೆ ದೊಡ್ಡ ತಲೆಬಿಸಿಯ ವಿಷಯವಾಗಿ ಪರಿಣಮಿಸುತ್ತಿದೆ. ತರಕಾರಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ.. ಹೀಗೆ ಯಾವುದನ್ನು ಮುಟ್ಟಿದರೂ ಬೆಲೆಗಳು ಗಗನ ಮುಟ್ಟುತ್ತಿವೆ. ಸೂಪರ್ ಮಾರ್ಕೆಟ್ಗೆ ಹೋಗಿ ನಾಲ್ಕು ತರಕಾರಿ, ಸ್ವಲ್ಪ ದಿನಸಿ ಕೊಂಡು ಬಿಲ್ ಪಾವತಿಸುವಷ್ಟರಲ್ಲಿ ಜೇಬು ಖಾಲಿಯಾಗುತ್ತಿದೆ. ಪ್ರತಿ ವಾರ ದಿನಸಿ ಬಿಲ್ಗಳು ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಆದರೆ ಬೆಲೆಗಳು ಹೆಚ್ಚಾಗುತ್ತಿವೆ ಎಂದು ನಮಗೆ ಇಷ್ಟವಾದ ಆಹಾರವನ್ನು ತ್ಯಜಿಸುವ ಅಗತ್ಯವಿಲ್ಲ. ಶಾಪಿಂಗ್ ಮಾಡುವ ವಿಧಾನದಲ್ಲಿ ಕೆಲವು ಸಣ್ಣ ಸಣ್ಣ ಬದಲಾವಣೆಗಳು ಮತ್ತು ಬುದ್ಧಿವಂತಿಕೆಯ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಯಾಪೈಸೆ ವ್ಯರ್ಥವಾಗದಂತೆ ತಿಂಗಳ ದಿನಸಿ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಬಹುದು. ಆ ಸೀಕ್ರೆಟ್ ಕಿಚನ್ ಬಜೆಟ್ ಟಿಪ್ಸ್ ಇಲ್ಲಿದೆ: 1. ಹೋಗುವ ಮುನ್ನವೇ ಇರಲಿ ಮುಂಗಡ ಪಟ್ಟಿ (ಲಿಸ್ಟ್) ಯಾವುದೇ ಪ್ಲಾನ್ ಇಲ್ಲದೆ ನೇರವಾಗಿ ದಿನಸಿ ಅಂಗಡಿಗೆ ಕಾಲಿಡುವುದೇ ಅತಿಯಾದ ಖರ್ಚಿಗೆ ಪ್ರಮುಖ ಕಾರಣ. ಶಾಪಿಂಗ್ಗೆ ಹೊರಡುವ ಮುನ್ನ ನಿಮ್ಮ ಅಡುಗೆಮನೆಯಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪೋಷಕರಿಗೆ ಭಾರಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸರಣಿಯಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ಶಾಲಾ ವಾಹನಗಳ ಮಾಸಿಕ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಇಂಧನ ದರ ಏರಿಕೆಯ ಎಫೆಕ್ಟ್ ರಾಜ್ಯದಲ್ಲಿ ತೈಲ ಬೆಲೆ ಏರಿಕೆಯು ಖಾಸಗಿ ಸಾರಿಗೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಈಗಾಗಲೇ ಖಾಸಗಿ ಹಾಗೂ ಪ್ರವಾಸಿ ಬಸ್ಗಳ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ, ಈಗ ಶಾಲಾ ಮಕ್ಕಳ ವಾಹನಗಳ ದರವೂ ದುಬಾರಿಯಾಗುತ್ತಿರುವುದು ಪೋಷಕರ ನಿದ್ದೆಗೆಡಿಸಿದೆ. ದುಪ್ಪಟ್ಟಾದ ಶುಲ್ಕದ ಹೊರೆ ಸಾಮಾನ್ಯವಾಗಿ ಪ್ರತಿ ವರ್ಷ ಶಾಲಾ ವಾಹನಗಳ ದರವು ಶೇ. 3 ರಿಂದ 5 ರಷ್ಟು ಮಾತ್ರ ಹೆಚ್ಚಳವಾಗುತ್ತಿತ್ತು. ಆದರೆ ಈ ಬಾರಿ ಇಂಧನ ದರ ಗಗನಕ್ಕೇರಿರುವುದರಿಂದ, ನೇರವಾಗಿ ಶೇ. 10 ರಿಂದ 15 ರಷ್ಟು ಶುಲ್ಕ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಪೋಷಕರ ಮೇಲಿನ ಮಾಸಿಕ ಬಜೆಟ್ ಹೊರೆಯನ್ನು ದುಪ್ಪಟ್ಟುಗೊಳಿಸಲಿದೆ. ದರ ಪರಿಷ್ಕರಣೆ…
ನೀವು ಸೋಶಿಯಲ್ ಮೀಡಿಯಾದಲ್ಲಿ ಸ್ಟೈಲ್ ಆಗಿ ಸೆಲ್ಫಿ ಪೋಸ್ ನೀಡುವ ಹವ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಹೌದು, ತಂತ್ರಜ್ಞಾನ ಮುಂದುವರಿದಂತೆ ಸೈಬರ್ ವಂಚಕರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಪ್ರಸ್ತುತ ಸೈಬರ್ ಲೋಕದಲ್ಲಿ ನಡೆದಿರುವ ಸಂಶೋಧನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನಾವು ಮೊಬೈಲ್ನಲ್ಲಿ ತೆಗೆದುಕೊಳ್ಳುವ ಕೇವಲ ಒಂದು ಸೆಲ್ಫಿ ಮೂಲಕ ನಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಜಾಲ ಸಕ್ರಿಯವಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ! ಜಪಾನ್ ಮತ್ತು ಚೀನಾದಂತಹ ದೇಶಗಳಲ್ಲಿ ಫೋಟೋಗಳ ಆಧಾರದ ಮೇಲೆ ಫಿಂಗರ್ಪ್ರಿಂಟ್ಗಳನ್ನು (ವೇಲಿಮುದ್ರೆ) ಕಾಪಿ ಮಾಡಿ ಬ್ಯಾಂಕ್ ಖಾತೆಗಳು, ಆಧಾರ್ ಬಯೋಮೆಟ್ರಿಕ್ಸ್ ಮತ್ತು ಡಿಜಿಟಲ್ ಲಾಕರ್ಗಳನ್ನು ಹ್ಯಾಕ್ ಮಾಡಿದ ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಚೀನಾದ ಭದ್ರತಾ ತಜ್ಞರೊಬ್ಬರು ರಿಯಾಲಿಟಿ ಶೋ ಒಂದರಲ್ಲಿ ಇದರ ಲೈವ್ ಡೆಮೊ ತೋರಿಸಿ ಇಡೀ ತಂತ್ರಜ್ಞಾನ ಲೋಕವೇ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಕೇವಲ ಒಂದು ಸೆಲ್ಫಿಯಿಂದ ಫಿಂಗರ್ಪ್ರಿಂಟ್ ಕಳುವು ಹೇಗೆ ಸಾಧ್ಯ? ಸಾಮಾನ್ಯವಾಗಿ ನಾವು ಫೋಟೋ ಅಥವಾ ಸೆಲ್ಫಿಗಳನ್ನು ಮುಖದ ಹತ್ತಿರ…
ಏಟಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಏಟಾ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರ ವಿರುದ್ಧ ಬರೋಬ್ಬರಿ 23 ನಿಮಿಷಗಳ ಕಾಲ ಧೈರ್ಯದಿಂದ ಹೋರಾಡಿ ತಮ್ಮ ಒಡವೆ ಹಾಗೂ ಬ್ಯಾಗ್ ಅನ್ನು ಉಳಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜಿದ್ದಾಜಿದ್ದಿನ ಹೋರಾಟದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಬೆನ್ನಲ್ಲೇ, ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 6 ರಂದು ರಾತ್ರಿ ಏಟಾ ಜಿಲ್ಲೆಯ ಜೈಥ್ರಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಅನಿತಾ ದೇವಿ ಎಂದು ಗುರುತಿಸಲಾಗಿದೆ. ಅವರು ರಾತ್ರಿ ಮನೆಗೆ ಮರಳುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಬ್ಯಾಗ್ ಹಾಗೂ ಸರವನ್ನು ಕಸಿಯಲು ಯತ್ನಿಸಿದ್ದಾರೆ. ಆದರೆ ಧೃತಿಗೆಡದ ಅನಿತಾ ದೇವಿ, ಸುಮಾರು 23 ನಿಮಿಷಗಳ ಕಾಲ ದರೋಡೆಕೋರರ ವಿರುದ್ಧ ಸತತವಾಗಿ ಹೋರಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲಿ ಎಳೆದೊಯ್ದು, ಹತ್ತಿರದ…
ಸ್ಟಾಕ್ಹೋಮ್: ಸ್ವೀಡನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಅಪರೂಪದ ಅಂತಾರಾಷ್ಟ್ರೀಯ ಗೌರವ ಲಭಿಸಿದೆ. ಸ್ವೀಡನ್ ಸರ್ಕಾರವು ತನ್ನ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ (Royal Order of Polar Star, Commander Grand Cross) ಅನ್ನು ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಿದೆ. ಬೇರೆ ದೇಶದ ಸರ್ಕಾರಿ ಮುಖ್ಯಸ್ಥರಿಗೆ ನೀಡಲಾಗುವ ಅತ್ಯುನ್ನತ ಗೌರವ ಇದಾಗಿದ್ದು, ಈ ಪ್ರಶಸ್ತಿಯೊಂದಿಗೆ ಪ್ರಧಾನಿ ಮೋದಿ ಅವರಿಗೆ ವಿವಿಧ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಲಭಿಸಿದ ಒಟ್ಟು ಅತ್ಯುನ್ನತ ಪುರಸ್ಕಾರಗಳ ಸಂಖ್ಯೆ 31ಕ್ಕೆ ಏರಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ಮತ್ತು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಅವರು ಮಾಡಿದ ಕೃಷಿಯನ್ನು ಗುರುತಿಸಿ ಸ್ವೀಡನ್ ಸರ್ಕಾರ ಈ ಗೌರವವನ್ನು ನೀಡಿದೆ. ಯುದ್ಧ ವಿಮಾನಗಳ ಮೂಲಕ ಭವ್ಯ ಸ್ವಾಗತ! ಇದಕ್ಕೂ ಮುನ್ನ ಸ್ವೀಡನ್ಗೆ…
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಹಾಸಮರವು ಲೀಗ್ ಹಂತದ ಅಂತ್ಯಕ್ಕೆ ಬಂದು ತಲುಪಿದೆ. ಟಾಪ್-4 ಸ್ಥಾನ ಗಿಟ್ಟಿಸಿಕೊಂಡು ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಲೀಗ್ನ ಮೊದಲಾರ್ಧದಲ್ಲಿ ಅಜೇಯರಾಗಿ ಮೆರೆದಿದ್ದ ಪಂಜಾಬ್ ಕಿಂಗ್ಸ್ (PBKS) ತಂಡದ ಸದ್ಯದ ಪರಿಸ್ಥಿತಿ ಮಾತ್ರ ‘ನಗಬೇಕೋ ಅಥವಾ ಅಳಬೇಕೋ’ ಎನ್ನುವಂತಾಗಿದೆ. ಸುಮ್ಮನೆ ಕೂರದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಕೆಣಕಿದ ಪಂಜಾಬ್ ಕಿಂಗ್ಸ್, ಆ ಬಳಿಕ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗದೆ ಮಕಾಡೆ ಮಲಗಿದೆ! ಅಜೇಯ ಹಾದಿಯಲ್ಲಿತ್ತು ಪಂಜಾಬ್ ಕಿಂಗ್ಸ್! ಟೂರ್ನಿಯ ಮೊದಲಾರ್ಧದಲ್ಲಿ ಪಂಜಾಬ್ ಕಿಂಗ್ಸ್ ಅಕ್ಷರಶಃ ಅಬ್ಬರಿಸಿತ್ತು. ಆಡಿದ ಮೊದಲ 7 ಪಂದ್ಯಗಳಲ್ಲಿ ತಂಡ ಒಂದೂ ಸೋಲನ್ನು ಕಂಡಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಹಾಗೂ ಉಳಿದ 6 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಒಟ್ಟು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಿಂಹಾಸನ ಏರಿ…
ರಾಯಚೂರು: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ (SSLC) ಮತ್ತು ಪಿಯುಸಿ (PUC) ಪರೀಕ್ಷೆಗಳು ಮುಕ್ತಾಯಗೊಂಡು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ, ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ದಿಢೀರ್ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಒಟ್ಟು 19 ಪ್ರಕರಣಗಳು ದಾಖಲಾಗಿದ್ದು, ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಪರೀಕ್ಷೆಗಳು ಮುಗಿದ ಬೆನ್ನಲ್ಲೇ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರು ಪ್ರೇಮದ ಬಲೆಗೆ ಬಿದ್ದು, ಯುವಕರೊಂದಿಗೆ ಮನೆ ಬಿಟ್ಟು ಹೋಗುತ್ತಿರುವ ಘಟನೆಗಳು ಸರಣಿಯಾಗಿ ವರದಿಯಾಗುತ್ತಿವೆ. ಈ ಕುರಿತು ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆಯು, “ಈ ರೀತಿ ಅಪ್ರಾಪ್ತ ಬಾಲಕಿಯರನ್ನು ವಯಸ್ಕ ಯುವಕರು ಕರೆದೊಯ್ದರೆ ಅಥವಾ ಅವರೊಂದಿಗೆ ಬಾಲಕಿಯರು ನಾಪತ್ತೆಯಾದರೆ, ಕಾನೂನುಬದ್ಧವಾಗಿ ಅದನ್ನು ‘ಅಪಹರಣ’ (Kidnapping) ಎಂದೇ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದೆ. ಪೋಷಕರಿಗೆ ಜಿಲ್ಲಾ ಎಸ್ಪಿ ತುರ್ತು ಎಚ್ಚರಿಕೆ ಮಕ್ಕಳು ದಿಢೀರನೆ ನಾಪತ್ತೆಯಾಗುತ್ತಿರುವ ಪ್ರಕರಣಗಳನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ…
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ದಿನಾಂಕ 20.05.2026 ರಿಂದ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನಿಗಮವು ಖಡಕ್ ಎಚ್ಚರಿಕೆ ನೀಡಿದೆ. ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ (No Work No Pay)” ತತ್ವದಡಿ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಗತ್ಯ ಸೇವೆಗಳ ಕಾಯ್ದೆ ಜಾರಿ: ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ. ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಅಗತ್ಯ ಸೇವೆಗಳ ಕಾಯ್ದೆ (Karnataka Act No-25/2015) ಅಡಿ ತಂದಿರುವುದರಿಂದ ನೌಕರರು ಮುಷ್ಕರ ಹೂಡುವಂತಿಲ್ಲ ಹಾಗೂ ಯಾರೂ ಇದಕ್ಕೆ ಪ್ರಚೋದನೆ ನೀಡುವಂತಿಲ್ಲ. ಸಾರ್ವಜನಿಕ ಉಪಯುಕ್ತ ಸೇವೆ: ಸರ್ಕಾರವು ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂದು ಘೋಷಿಸಿದೆ. ಸದ್ಯ ಮುಷ್ಕರದ ನೋಟಿಸ್ ಕುರಿತಾದ…
ಹೈದರಾಬಾದ್: ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣುಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವ್ಯಾಪಾರಿಗಳು ಕೃತಕ ರಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣನ್ನು ತಿಂದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಕುಮ್ರಂ ಭೀಮ್ ಆಸಿಫಾಬಾದ್ ಜಿಲ್ಲೆಯ ದಹೇಗಾಂವ್ ಮಂಡಲದ ಲೋಹ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ಸಂಭವಿಸಿದೆ. 5 ವರ್ಷದ ಬಾಲಕ ಶ್ರೀವರ್ಧನ್ ಮೃತ ದುರ್ದೈವಿ. ಕೀರ್ತನಾ ಹಾಗೂ ಕೀರ್ತಿ ಕುಮಾರ್ ಎಂಬ ಮತ್ತಿಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಯ ಹಿನ್ನೆಲೆ: ಮೂಲಗಳ ಪ್ರಕಾರ, ಬೆಜ್ಜೂರು ಮಂಡಲದ ಕುಂಟಮಾನುಪಲ್ಲಿ ನಿವಾಸಿಗಳಾದ ಪೋರ್ತೆಟ್ಟಿ ಶಾರದಾ ಮತ್ತು ಶ್ರೀನಿವಾಸ್ ದಂಪತಿ ಕೂಲಿ ಕೆಲಸಕ್ಕಾಗಿ ಲೋಹ ಗ್ರಾಮಕ್ಕೆ ವಲಸೆ ಬಂದಿದ್ದರು. ಶನಿವಾರ ಶಾರದಾ ಅವರು ಗ್ರಾಮಸ್ಥರೊಂದಿಗೆ ಸೇರಿ ಬೀಡಿ ಎಲೆ ಸಂಗ್ರಹಿಸಲು ಹೋಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಸಂಜೆ…














