Author: kannadanewsnow57

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು,  ದೆವ್ವ ಹಿಡಿದಿದೆ ಅಂತ ಮಹಿಳೆಯ ಬರ್ಬರ ಕೊಲೆ ಮಾಡಲಾಗಿದೆ. ಬೇವಿನ ಕಟ್ಟಿಗೆಯಿಂದ ಹೊಡೆದು ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಕಲ್ಬುರ್ಗಿ ಮೂಲದ ಮಹಿಳೆಯನ್ನು ಮಹಾರಾಷ್ಟ್ರದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸಂಬಂಧಿಕರು ಮಹಿಳೆಯನ್ನು ಹೊಡೆದು ಕೊಲೆ ಮಾಡಿದ್ದಾರೆ 38 ವರ್ಷದ ಮುಕ್ತಬಾಯಿ ಕೊಲೆಯಾದ ಮಹಿಳೆ ಎಂದು ತಿಳಿದು ಬಂದಿದೆ. ಕಲಬುರ್ಗಿಯ ಆಳಂದದ ನಿವಾಸಿಯಾಗಿರುವ ಮುಕ್ತಬಾಯಿ ಆಗಿರುವ ಈಕೆ ಮಹಾರಾಷ್ಟ್ರದ ಮುರುಮ್ ಗ್ರಾಮದಲ್ಲಿ ಭೀಕರವಾಗಿ ಕೊಲೆಯಾಗಿದ್ದಾಳೆ. ಕಾರಣ ಏನೆಂದರೆ ಈಕೆಗೆ ದೆವ್ವ ಮೆತ್ತಿ ಕೊಂಡಿದೆ ಅದನ್ನ ಬಿಡಿಸುತ್ತೇವೆ ಅಂತ ಹೇಳಿ ಬೇವಿನ ಕಟ್ಟಿಗೆನಿಂದ ಹೊಡೆದು ಕೊಲೆ ಮಾಡಿದ್ದಾರೆ ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಟ್ಟು ಹೋಗುತ್ತದೆ ಎನ್ನುವ ನಂಬಿಕೆಯಿಂದ ಹೊಡೆದು ಹೊಡೆದು ಕೊಲೆ ಮಾಡಿದ್ದಾರೆ ಎಂದು ಮುಕ್ತ ಬಾಲ್ಯ ಸಂಬಂಧಿಕರು ಗಂಭೀರವಾಗಿ ಆರಂಭಿಸಿದ್ದಾರೆ. ಏಕಾಏಕಿ ತಲೆ ಸುತ್ತಿನಿಂದ ಮುಕ್ತಾಭಾಯಿ ಮನೆಯ ಮಳೆ ಬಂದು ಬಿದ್ದಿದ್ದಾಳೆ. ದೆವ್ವ ಹಿಡಿದಿದೆ ಅಂತ ಮುಕ್ತಾಭಾಯಿ ಮೇಲೆ…

Read More

ವಿರುಧುನಗರ: ತಮಿಳುನಾಡಿನ ಶಿವಕಾಶಿಯಲ್ಲಿ ನಡೆದ ಈ ಭೀಕರ ಘಟನೆ ಸ್ಥಳೀಯರನ್ನು ಇನ್ನೂ ಬೆಚ್ಚಿಬೀಳಿಸುತ್ತಿದೆ. ವಿಮಾ ಹಣದ ಆಸೆಯಿಂದ ದುಷ್ಕರ್ಮಿಯೊಬ್ಬ ಇಡೀ ಕುಟುಂಬವನ್ನೇ ಕೊಂದಿದ್ದಾನೆ. ಶಿವಕಾಶಿಯ ಸೈಯದ್ ಅಲಿ ಫಾತಿಮಾ (42) ಅವರ ಮೊದಲ ಪತಿ ಮುಬಾರಕ್ ಅಲಿ ಹತ್ತು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾದರು. ಆ ಅಪಘಾತಕ್ಕೆ ಸಂಬಂಧಿಸಿದಂತೆ ಫಾತಿಮಾ ಅವರಿಗೆ 11 ಲಕ್ಷ ರೂ. ವಿಮಾ ಹಣ ಸಿಕ್ಕಿತು. ಆ ಹಣದಿಂದ ಅವರು ತಮ್ಮ ಮಗಳು ಪರ್ವೀನ್ (16), ಮಗ ಸೈಯದ್ ಫಾರೂಕ್ (13) ಮತ್ತು ಚಿಕ್ಕಮ್ಮ ಸಿಕಂದರ್ ಬಿವಿ (65) ಅವರೊಂದಿಗೆ ವಾಸಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ, ಫಾತಿಮಾ ತಮ್ಮ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಅಕ್ಬರ್ ಅಲಿ (45) ಎಂಬ ವ್ಯಕ್ತಿಯೊಂದಿಗೆ ಎರಡನೇ ವಿವಾಹವಾದರು. ವ್ಯಾನ್ ಚಾಲಕನಾಗಿ ಕೆಲಸ ಮಾಡುವ ಅಕ್ಬರ್ ಅಲಿ ಆರಂಭದಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡರು. ಆದರೆ, ಕಾಲಾನಂತರದಲ್ಲಿ, ಅವರ ಕಣ್ಣು ಫಾತಿಮಾ ಅವರ 11 ಲಕ್ಷ ರೂ. ವಿಮಾ ಹಣದ ಮೇಲೆ…

Read More

ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಳ್ಳತನಕ್ಕಾಗಿ ಮಹಿಳೆಯೊಬ್ಬಳು ಬರೋಬ್ಬರಿ 9 ಮಂದಿಯನ್ನು ಮದುವೆಯಾಗಿ ವಂಚಿಸಿರುವ ಘಟನೆ ನಡೆದಿದೆ.  ಆಂಧ್ರಪ್ರದೇಶದ ವಾಣಿ ಎಂಬಾಕೆ ವಿವಾಹದ ಪವಿತ್ರ ಬಂಧವನ್ನು ಲಾಭದಾಯಕ ವ್ಯವಹಾರವನ್ನಾಗಿ ಪರಿವರ್ತಿಸುವ ಮೂಲಕ ತನ್ನ ಕೌಶಲ್ಯವನ್ನು ತೋರಿಸಿದ್ದಾಳೆ. ಶ್ರೀಕಾಕುಳಂ ಪ್ರದೇಶದವಳು ಮತ್ತು ತನ್ನ ಅತ್ತೆಯನ್ನು ಪಾಲುದಾರನನ್ನಾಗಿ ಬಳಸಿಕೊಂಡು ಯೋಜಿತ ಯೋಜನೆಯೊಂದಿಗೆ ಮುಗ್ಧ ಯುವಕರನ್ನು ವಂಚಿಸಿದ್ದಾಳೆ. ವಾಣಿ ಆರ್ಥಿಕವಾಗಿ ಸ್ಥಿರವಾಗಿರುವ ಮತ್ತು ಮುಗ್ಧ ಯುವಕರನ್ನು ತನ್ನ ಬಲೆಗೆ ಬೀಳಿಸುತ್ತಾಳೆ. ಅವರನ್ನು ಮದುವೆಯಾದ ಕೆಲವೇ ದಿನಗಳಲ್ಲಿ, ಮನೆಯಲ್ಲಿನ ಆಭರಣ ಮತ್ತು ನಗದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು. ಇಲ್ಲಿಯವರೆಗೆ 8 ಜನರನ್ನು ಈ ರೀತಿ ಮದುವೆಯಾಗಿ ವಂಚಿಸಿರುವ ವಾಣಿ, ತನ್ನ 9 ನೇ ಮದುವೆಯಾದ ಬಳಿಕ ಸಿಕ್ಕಿಬಿದ್ದಿದ್ದಾಳೆ. ವಾಣಿ ಇತ್ತೀಚೆಗೆ 9 ನೇ ವ್ಯಕ್ತಿಯನ್ನು ವಿವಾಹವಾದರು. ಆದರೆ, ಆಕೆಯ ನಡವಳಿಕೆ ಮತ್ತು ಆಕೆಯ ಮಾತಿನ ಬಗ್ಗೆ ಆಕೆಯ ಪತಿಗೆ ಅನುಮಾನ ಬಂತು. ಆಕೆಯ ಹಿನ್ನೆಲೆಯನ್ನು ರಹಸ್ಯವಾಗಿ ಕಂಡುಹಿಡಿಯಲು ಪ್ರಯತ್ನಿಸಿದನು ಮತ್ತು ಅಂತಿಮವಾಗಿ…

Read More

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು 1.5 ಲಕ್ಷಗಳ ದಂಡ ಸಹಿತ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಗಂಗಾವತಿಯ ಎಚ್.ಆರ್.ಎಸ್ ಕಾಲೋನಿಯ ನಿವಾಸಿ ಹುಲ್ಲೇಶ ಕೊಜ್ಜ ಎಂಬ ಆರೋಪಿಯು ಪ್ರಕರಣದ ಅಪ್ರಾಪ್ತ ವಯಸ್ಸಿನ ಬಾಧಿತಳು ಶಾಲೆಗೆ ಹೋಗಿ ಬರುವಾಗ ಬಾಧಿತಳನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದನು. 2022 ರ ಸೆಪ್ಟೆಂಬರ್ 7 ರಂದು ಬೆಳಿಗೆಗ 9 ಗಂಟೆಗೆ ಬಾಧಿತಳು ಶಾಲೆಗೆ ಹೋಗುವ ಸಮಯದಲ್ಲಿ ಹೊಸಳ್ಳಿ ಕ್ರಾಸ್ ಹತ್ತಿರ ತನ್ನ ಮಾವನ ಮೋಟಾರ ಸೈಕಲ್ ತೆಗೆದುಕೊಂಡು ಬಂದು ಶಾಲೆಗೆ ಬಿಡುವುದಾಗಿ ಹೇಳಿ ಮೋಟಾರ್ ಸೈಕಲ್ ಮೇಲೆ ಹತ್ತುವಂತೆ ಹೇಳಿದಾಗ ಬಾಲಕಿ ನಿರಾಕರಿಸಿದ್ದಳು. ಅವಳನ್ನು ಹೆದರಿಸಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಶಾಲೆಗೆ ಬಿಡದೇ ಬಲವಂತವಾಗಿ ಮಲ್ಲಾಪುರ ಸೀಮಾದ ವಾನಭದ್ರೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಅತ್ಯಾಚಾರ ಎಸಗಿದ್ದನು. ಹಾಗೂ ಈ ವಿಷಯವನ್ನು ಯಾರಿಗಾದರು ಹೇಳಿದಲ್ಲಿ ನಿನ್ನ ಮತ್ತು…

Read More

ಬೆಂಗಳೂರು : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಂಗಾರದ ಬೆಲೆ ಗಗನಕ್ಕೇರಿದ್ದು, ಇಂದು ಚಿನ್ನದ ಬೆಲೆ 10 ಗ್ರಾಂಗೆ 1.40 ಲಕ್ಷ ರೂ. ಗಡಿದಾಟಿದೆ. 2025 ವರ್ಷವು ಕೆಲವೇ ದಿನಗಳು ದೂರದಲ್ಲಿದೆ. ವರ್ಷದ ಕೊನೆಯ ತಿಂಗಳಲ್ಲಿ ಚಿನ್ನವು ಹಲವಾರು ಬಾರಿ ದಾಖಲೆಯ ಮಟ್ಟವನ್ನು ತಲುಪಿದೆ. ಇಂದು, ಚಿನ್ನದ ಬೆಲೆಗಳು ಗಮನಾರ್ಹ ಜಿಗಿತವನ್ನು ಕಾಣುತ್ತಿವೆ. ಇಂದು, 24 ಕ್ಯಾರೆಟ್ ಚಿನ್ನದ ಬೆಲೆ ₹770 ರಷ್ಟು ಹೆಚ್ಚಾಗಿದೆ ಮತ್ತು 10 ಗ್ರಾಂಗೆ ₹1,40,020 ಕ್ಕೆ ಲಭ್ಯವಿದೆ. ಅದೇ ರೀತಿ, ಬೆಳ್ಳಿಯ ಬೆಲೆಯೂ ₹6,000 ರಷ್ಟು ತೀವ್ರ ಏರಿಕೆಯನ್ನು ಕಂಡಿದೆ ಮತ್ತು ಪ್ರತಿ ಕೆಜಿಗೆ ₹2.4 ಲಕ್ಷಕ್ಕೆ ಲಭ್ಯವಿದೆ. ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹1,40,020 ಆಗಿದ್ದು, ನಿನ್ನೆ ಪ್ರತಿ ಗ್ರಾಂಗೆ ₹1,39,250 ಇತ್ತು. ಇಂದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹128,350 ಆಗಿದ್ದು, ನಿನ್ನೆಯ ಪ್ರತಿ ಗ್ರಾಂಗೆ ₹127,650 ರಿಂದ…

Read More

ರಾಜ್ಯ ಅಬಕಾರಿ ಇಲಾಖೆಯು ನೂತನವಾಗಿ ಪರಿಚಯಿಸಲು ಉದ್ದೇಶಿಸಿರುವ ಸಿಎಲ್-2ಎ ಮತ್ತು ಸಿಎಲ್-9ಎ ಅಬಕಾರಿ ಪರವಾನಗಿಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರು ಹಾಗೂ ಆಕಾಂಕ್ಷಿಗಳಿಗೆ ಅರಿವು ಮೂಡಿಸಲು ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ 2026ರ ಜನವರಿ 6ರಂದು ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಕಾಂಕ್ಷಿಗಳು ಭಾರತ ಸರ್ಕಾರದ ಎಂ.ಎಸ್.ಟಿ.ಸಿ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಜಿ ಶುಲ್ಕ ಹಾಗೂ ಇ.ಎಂ.ಡಿ ಮೊತ್ತ ಪಾವತಿಸಿ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇ-ಹರಾಜಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ಬಿ. ಮಾದೇಶ್ ಅವರು ತಿಳಿಸಿದ್ದಾರೆ.

Read More

ಮೈಸೂರು : ಮೈಸೂರಿನ ಅರಮನೆಯ ಎದುರು ಜಯ ಮಾರ್ಯಾಂಡ ದ್ವಾರದ ಬಳಿ ಬಲೂನ್ ಗೆ ಹೀಲಿಯಂ ತುಂಬುವ ಸಿಲಿಂಡರ್ ಸ್ಫೋಟ ದುರಂತದಲ್ಲಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ಸ್ಪೋಟದಿಂದ ಗಾಯಗೊಂಡಿದ್ದ ನಂಜನಗೂಡಿನ ಚಾಮಲಾಪುರ ಬೀದಿ ನಿವಾಸಿ ಮಂಜುಳಾ(28), ಬೆಂಗಳೂರಿನ ಬ್ಯಾಡರಹಳ್ಳಿ ಲಕ್ಷ್ಮಿ(41) ಶುಕ್ರವಾರ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದ ಜಿಲ್ಲೆಯ ತೋಫಿಯಾ ಗ್ರಾಮದ ಸಲೀಂ(40) ಅರಮನೆ ಸಮೀಪ ಸೈಕಲ್ ನಲ್ಲಿ ಹೀಲಿಯಂ ಬಲೂನ್ ಮಾರುತಿದ್ದಾಗ ಸ್ಪೋಟ ಸಂಭವಿಸಿ ಮೃತಪಟ್ಟಿದ್ದರು. ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡು ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಈಗ ಬಹಿರಂಗವಾಗಿದೆ. ಸಲೀಂ ಸತತವಾಗಿ ಬಲೂನ್ಗಳಿಗೆ ಹೀಲಿಯಂ…

Read More

ಬೆಂಗಳೂರು : ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ನಾಗಪುರದ ತನ್ನ ಮನೆಯಲ್ಲಿ ಪತಿ ಸೂರಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸೂರಜ್ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಬಿ ಚೆನ್ನಸಂದ್ರದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಗಾನವಿ (26) ಆತ್ಮಹತ್ಯೆ ಮಾಡಿಕೊಂಡಿದ್ದರು. ಹನಿಮೂನ್ ಗೆ ಶ್ರೀಲಂಕಾಗೆ ಗಾನವಿ ಹಾಗು ಸೂರಜ್ ತೆರಳಿದ್ದಾರೆ. ಆದರೆ ದಂಪತಿ ಅರ್ಧಕ್ಕೆ ಹಿಂದಿರುಗಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಬೆಸತ್ತು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಅಕ್ಟೋಬರ್ 29ರಂದು ಗಾನ್ವಿ ಮತ್ತು ಸೂರಜ್ ಮದುವೆಯಾಗಿತ್ತು. ಸೂರಜ್ ಮನೆಯವರ ಬೇಡಿಕೆಯಂತೆ ಅದ್ದೂರಿಯಾಗಿ ಆರತಕ್ಷತೆ ನಡೆದಿತ್ತು. ಈಗ ಚಿಕಿತ್ಸೆ ಫಲಕಾರಿ ಆಗಲೇ ಗಾನವಿ ಸಾವನ್ನಪ್ಪಿದ್ದರು. ಇದೀಗ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

Read More

ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. 2025ರ ಡಿಸೆಂಬರ್‌ 23ರಿಂದ 2025ರ ಡಿಸೆಂಬರ್‌ 31ರವರೆಗೆ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಕುಸುಮ್‌ ಬಿ ಯೋಜನೆ ಕುರಿತಂತೆ ರೈತರು ತಮ್ಮ ಸಮಸ್ಯೆಗಳನ್ನು ದೂರವಾಣಿ ಕರೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ರೈತರು ಇದರ ನೆರವು ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ಕ್ರೆಡಲ್‌ ಸಿಬ್ಬಂದಿ, ಪ್ರತಿದಿನ ಬೆಳಿಗ್ಗೆ 6.00 ರಿಂದ ರಾತ್ರಿ 9.00ರವರೆಗೆ ರಜೆ ಇಲ್ಲದೆ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸಹಾಯವಾಣಿಯಲ್ಲಿ ಕುಸುಮ್ ಯೋಜನೆಯ ಕಾಂಪೊನೆಂಟ್ ಬಿ ಅಡಿ ಸೋಲಾರ್‌ ಪಂಪ್‌ಸೆಟ್‌ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್‌ಲೈನ್ ಪಾವತಿ ಮತ್ತು ಇತರ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ಸಹಾಯವಾಣಿಯ ಅಧಿಕೃತ ಫೋನ್ ಸಂಖ್ಯೆ 080-22202100 ಮತ್ತು 8095132100ಅನ್ನು ನೇರವಾಗಿ ಸಂಪರ್ಕಿಸಬಹುದು. ಸೋಲಾರ್‌ ವಿದ್ಯುತ್‌ ಚಾಲಿತ ನೀರಾವರಿ…

Read More

ನವದೆಹಲಿ : ಈ ವರ್ಷ ಮುಗಿದ ನಂತರ ನೀವು ಮನೆ ಕಟ್ಟಲು ಅಥವಾ ವಸತಿ ಯೋಜನೆಯಲ್ಲಿ ಕೆಲಸ ಪ್ರಾರಂಭಿಸಲು ಯೋಜಿಸುತ್ತಿದ್ದೀರಾ? ಹೌದು ಎಂದಾದರೆ, ಅದು ನಿಮಗೆ ಸ್ವಲ್ಪ ದುಬಾರಿಯಾಗಬಹುದು. ಏಕೆಂದರೆ ಜನವರಿ 2026ರಿಂದ ದೇಶದಲ್ಲಿ ಸಿಮೆಂಟ್ ಬೆಲೆಗಳು ಏರಿಕೆಯಾಗುವ ನಿರೀಕ್ಷೆಯಿದೆ. ಆದ್ದರಿಂದ, ಹೊಸ ಮನೆ ಕಟ್ಟಲು ಅಥವಾ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಯೋಜಿಸುತ್ತಿರುವವರು ಮುಂಬರುವ ಸಮಯದಲ್ಲಿ ಹೆಚ್ಚಿನ ವೆಚ್ಚವನ್ನ ಎದುರಿಸಬೇಕಾಗುತ್ತದೆ. ಸಿಸ್ಟಮ್ಯಾಟಿಕ್ಸ್ ರಿಸರ್ಚ್‌ನ ವರದಿಯ ಪ್ರಕಾರ, ಜನವರಿ 2026ರಿಂದ ಸಿಮೆಂಟ್ ಬೆಲೆಗಳು ಹೆಚ್ಚಾಗಬಹುದು. ಸಿಮೆಂಟ್ ಬೆಲೆಗಳಲ್ಲಿ ಇತ್ತೀಚಿನ ಕುಸಿತದ ನಂತರ, ಬೇಡಿಕೆ ಸುಧಾರಿಸುವ ಸಾಧ್ಯತೆಯಿದೆ, ಇದರಿಂದಾಗಿ ಕಂಪನಿಗಳು ಬೆಲೆಗಳನ್ನ ಹೆಚ್ಚಿಸಬಹುದು ಎಂದು ವರದಿ ಹೇಳುತ್ತದೆ. ಕುಸಿತದ ನಂತರ ಬೆಲೆಗಳು ಏರಿಕೆಯಾಗುವ ನಿರೀಕ್ಷೆ.! ಸಿಸ್ಟಮ್ಯಾಟಿಕ್ಸ್ ರಿಸರ್ಚ್ ವರದಿಯ ಪ್ರಕಾರ, ಕಳೆದ ತಿಂಗಳು ಅಖಿಲ ಭಾರತ ಸರಾಸರಿ ಸಿಮೆಂಟ್ ಬೆಲೆಗಳು ಪ್ರತಿ ಚೀಲಕ್ಕೆ ₹6 ರಷ್ಟು ಕುಸಿದಿವೆ. ಈ ಕುಸಿತವು ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಬೆಲೆ ಇಳಿಕೆಯಿಂದಾಗಿ ಸಂಭವಿಸಿದೆ. ಆದಾಗ್ಯೂ, ಸಿಸ್ಟಮ್ಯಾಟಿಕ್ಸ್…

Read More