Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಬಿಜೆಪಿಯ ನಿರಾಣಿ ಹಣಮಂತ್ ರುದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ನಷ್ಟ, ಪ್ರಕೃತಿ ವಿಕೋಪ, ಸಾಲಬಾಧೆ, ಆರ್ಥಿಕ ಸಂಕಷ್ಟ, ಸಾಮಾಜಿಕ, ಕೌಟುಂಬಿಕ ಕಾರಣಗಳಿಂದಾಗಿ 2023ರ ಮೇ ನಿಂದ 2025ರ ಡಿಸೆಂಬರ್ ವರೆಗೆ ಒಟ್ಟು 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 2024-25 ರಲ್ಲಿ ಹಾವೇರಿ 133,ಬೆಳಗಾವಿ 88, ಬೀದರ್ 70, ಧಾರವಾಡ 57, ಮೈಸೂರು 68, ಕಲಬುರಗಿ 85, ಮಂಡ್ಯ ಮತ್ತು ಶಿವಮೊಗ್ಗ ತಲಾ 51, ವಿಜಯಪುರ 49 ಸೇರಿ 1,178 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪೈಕಿ 1,022 ಪ್ರಕರಣ ಅರ್ಹ ಎಂದು ಪರಿಗಣಿಸಿದೆ.2025-26ನೇ ಸಾಲಲ್ಲಿ ಡಿಸೆಂಬರ್31ರ ವೇಳೆಗೆ 414 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು 331 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಉಪ ವಿಭಾಗಾಧಿಕಾರಿಗಳ ಸಮಿತಿಯಲ್ಲಿ ತೀರ್ಮಾನಿಸಿ…
ನವದೆಹಲಿ : ಸಾರ್ವಜನಿಕ ಸ್ಥಳದಲ್ಲಿ ಅವಮಾನಿಸುವ ಉದ್ದೇಶವಿಲ್ಲದೆ ಕೇವಲ ಜಾತಿಯನ್ನು ಉಲ್ಲೇಖಿಸುವುದು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಛತ್ತೀಸ್ಗಢ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಅವಮಾನಿಸುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂದು ಸಾಬೀತಾಗದ ಹೊರತು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ವ್ಯಕ್ತಿಯ ಜಾತಿಯನ್ನು ಉಲ್ಲೇಖಿಸುವುದು ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ 16 ವರ್ಷಗಳ ಹಳೆಯ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ, ಸೆಷನ್ಸ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು. ನ್ಯಾಯಮೂರ್ತಿ ರಜನಿ ದುಬೆ ತೀರ್ಪು ನೀಡಿದರು. ಸೆಪ್ಟೆಂಬರ್ 3, 2008 ರಂದು, ಪಥಾರಿಯಾದಲ್ಲಿರುವ ಛತ್ತೀಸ್ಗಢ ರಾಜ್ಯ ವಿದ್ಯುತ್ ಮಂಡಳಿಯ ಉಪಕೇಂದ್ರದ ಕಿರಿಯ ಎಂಜಿನಿಯರ್ ಉತ್ತರ ಕುಮಾರ್ ಧೃತಲಹರೆ, ಆರೋಪಿ ಮನೋಜ್ ಪಾಂಡೆ ದುರ್ಗಾ ಪೂಜೆಗೆ ₹1,000 ದೇಣಿಗೆ ನಿರಾಕರಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಪೊಲೀಸ್…
ರಾಯಚೂರು: ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ರಾಯಚೂರು, ಎನ್ಹೆಚ್ಎಐ ಪ್ರಾದೇಶಿಕ ಕಚೇರಿ ಬೆಂಗಳೂರು ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಜನವರಿ 31ರಂದು ಶನಿವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕಾರ್ಯಕ್ರಮದಲ್ಲಿ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವ ಅರಿಯಬೇಕು. ನ್ಯಾಷನಲ್ ಹೈವೇ ಕಡೆಯಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹೆಲ್ಮೆಟ್ ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದರು. ಹೆಲ್ಮೆಟ್ ಧರಿಸದೇ ತಲೆಗೆ ಪೆಟ್ಟು ಬಿದ್ದು ಜೀವ…
ಬಳ್ಳಾರಿ : ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಹನ ಚಾಲನೆ ಮಾಡುವವರೇ ನಿಜವಾದ ಹೀರೋಗಳಾಗುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ ಶಾಂತಿ ಅವರು ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಿನನಿತ್ಯ ಬಳಸುವ ರಸ್ತೆಯಲ್ಲಿ ಪ್ರತಿಯೊಬ್ಬರ ಜೀವನ ಅಡಗಿದ್ದು, ಜಾಗರೂಕರಾಗಿ ವಾಹನ ಚಲಾಯಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿ, ಸಿಗ್ನಲ್ ಜಂಪ್ ಮಾಡಿ ಪೊಲೀಸರ ಕಣ್ಣು ತಪ್ಪಿಸಿ ಚಲಾಯಿಸುವುದು ಸಾಹಸವಲ್ಲ; ಬದಲಾಗಿ ನಿಯಮ ಪಾಲಿಸಿ ವಾಹನ ಚಲಾಯಿಸಿದರೆ ಮಾತ್ರ ಸುರಕ್ಷಿತರಾಗಿ ಮನೆಗೆ ಸೇರಬಹುದು ಎಂದರು. 18 ವರ್ಷದೊಳಗಿನ ಮಕ್ಕಳಿಗೆ…
ನವದೆಹಲಿ : ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಸರ್ಕಾರವು ಗ್ರಾಹಕರಿಗೆ ಶಾಕ್ ನೀಡಿದ್ದು, ಸರ್ಕಾರವು LPG ಸಿಲಿಂಡರ್ಗಳ ಬೆಲೆಯನ್ನು ₹50 ರಷ್ಟು ಹೆಚ್ಚಿಸಿದೆ. ಸರ್ಕಾರವು 19 ಕೆಜಿ LPG ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿದೆ. LPG ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ನಂತರ, ದೆಹಲಿಯಲ್ಲಿ 19 ಕೆಜಿ LPG ಸಿಲಿಂಡರ್ನ ಬೆಲೆ ಈಗ ₹1740.50 ಆಗಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ ಇದರ ಬೆಲೆ ₹1844.50 ಆಗಿದೆ. ಮುಂಬೈನಲ್ಲಿ, ಇದು ಈಗ ₹1692.00 ಗೆ ಲಭ್ಯವಿರುತ್ತದೆ, ಆದರೆ ಹಿಂದೆ ಇದು ₹1642.50 ಗೆ ಲಭ್ಯವಿತ್ತು. ಚೆನ್ನೈನಲ್ಲಿ, ಬೆಲೆ ₹1899.50 ಆಗಿದೆ. ಸರ್ಕಾರವು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ₹50 ರಷ್ಟು ಹೆಚ್ಚಿಸಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆ ಬದಲಾಗದೆ ಉಳಿದಿದೆ. ಇದನ್ನು ಕೊನೆಯದಾಗಿ ಏಪ್ರಿಲ್ 8, 2025 ರಂದು ಪರಿಷ್ಕರಿಸಲಾಯಿತು. ದೆಹಲಿಯಲ್ಲಿ ಇದರ ಪ್ರಸ್ತುತ ಬೆಲೆ ₹853. 14…
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ. ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿ ದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್. ಕೇಂದ್ರ ಸರ್ಕಾರವು ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ…
ನವದೆಹಲಿ: ಸಿಗರೇಟ್, ಗುಟ್ಟಾ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾ ಮೇಲಿನ ಆರೋಗ್ಯ ಸೆಸ್ ಇಂದಿನಿಂದ ಜಾರಿಗೆ ಬರಲಿದೆ. ಪ್ರಸ್ತುತ ಇರುವ ಗರಿಷ್ಠ ಶೇ.40ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರದ ಜತೆಗೆ ಹೊಸ ತೆರಿಗೆಗಳು ಅನ್ವಯವಾಗಲಿವೆ. 2017ರಲ್ಲಿ ಜಿಎಸ್ಟಿ ಜಾರಿಯಾದಾಗಿನಿಂದ ಇದ್ದ ಶೇ. 28ರಷ್ಟು ತೆರಿಗೆ ಮತ್ತು ಪರಿಹಾರ ಸೆಸ್ ಹೊಸ ಅಬಕಾರಿ ವ್ಯವಸ್ಥೆಯನ್ನು ಸುಂಕಗಳು ಬದಲಿಸಲಿವೆ. ಹೊಸ ನಿಯಮದ ಪ್ರಕಾರ, ಅಗಿಯುವ ತಂಬಾಕು, ಫಿಲ್ಟರ್ ಖೈನಿ, ಜರ್ದಾ ಮತ್ತು ಗುಟ್ಟಾಗಳಿಗೆ ಗರಿಷ್ಠ ಮಾರಾಟ ದರ (ಎಂಆರ್ಪಿ) ಆಧಾರಿತ ಮೌಲ್ಯಮಾಪನ ವಿಧಾನ ಅನ್ವಯವಾಗಲಿದೆ. ಪಾನ್ ಮಸಾಲಾ ತಯಾರಕರು ಹೊಸ ಸೆಸ್ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಉತ್ಪಾದನಾ ಘಟಕಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಕನಿಷ್ಠ 24 ತಿಂಗಳವರೆಗೆ ದೃಶ್ಯ ಸಂರಕ್ಷಿಸಿಡಬೇಕಿದೆ. ಸಿಗರೇಟ್ನ ಉದ್ದಕ್ಕೆ ಅನುಗುಣವಾಗಿ ಪ್ರತಿ ಸ್ಟಿಕ್ಗೆ 2.05 ರೂ.ಗಳಿಂದ 8.50 ರೂ.ವರೆಗೆ ಹೆಚ್ಚುವರಿ ಅಬಕಾರಿ ಸುಂಕ…
ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಭಾನುವಾರ ಮಂಡಿಸಲಾಗುತ್ತಿರುವ ಈವರೆಗಿನ 2ನೇ ಬಜೆಟ್ ಇದಾಗಿದೆ. ಈ ಹಿಂದೆ 1999ರಲ್ಲಿ ಭಾನುವಾರ ಬಜೆಟ್ ಮಂಡನೆ ಆಗಿತ್ತು. ಆಗ ದಿನಾಂಕ ಫೆ.28 ಆಗಿತ್ತು ಹಾಗೂ ಯಶವಂತ ಸಿನ್ಹಾ ಹಣಕಾಸು ಸಚಿವರಾಗಿ ದ್ದರು. ಆದರೆ ನಂತರ ಫೆ.1ಕ್ಕೆ ಬಜೆಟ್ ದಿನಾಂಕ ಬದಲಾಗಿತ್ತು. ಫೆ.1ಕ್ಕೆ ಬಜೆಟ್ ದಿನಾಂಕ ಬದ ಲಾದ ನಂತರ ಭಾನುವಾರ ಬಜೆಟ್ ಮಂಡನೆ ಇದೇ ಮೊದಲು ಹಾಗೂ ಒಟ್ಟಾರೆ 2ನೇ ಬಜೆಟ್. ಕೇಂದ್ರ ಸರ್ಕಾರವು ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ…
ನವದೆಹಲಿ : ಭಾರತೀಯ ಅಂಚೆ ಇಲಾಖೆಯು 28,740 ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಇಂದು, ಜನವರಿ 31 ರಂದು ಪ್ರಾರಂಭವಾಗಲಿದೆ. ಈ ನೇಮಕಾತಿ ಪ್ರಕ್ರಿಯೆಯು 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತೆರೆದಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್, indiapostgdsonline.gov.in ನಲ್ಲಿ ಫೆಬ್ರವರಿ 14, 2026 ರವರೆಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 16, 2026, ಮತ್ತು ಮೊದಲ ಮೆರಿಟ್ ಪಟ್ಟಿಯನ್ನು ಫೆಬ್ರವರಿ 28, 2026 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವಯಸ್ಸಿನ ಮಿತಿ – ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು. – ಪರಿಶಿಷ್ಟ ಜಾತಿಗಳಿಗೆ ಐದು ವರ್ಷಗಳು ಮತ್ತು ಒಬಿಸಿಗಳಿಗೆ ಮೂರು ವರ್ಷಗಳವರೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಸಡಿಲಿಸಲಾಗುತ್ತದೆ. ಶೈಕ್ಷಣಿಕ ಅರ್ಹತೆಗಳು ಗಣಿತ ಮತ್ತು ಇಂಗ್ಲಿಷ್ನೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ನೀವು…
ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಅಂಚೆ ಇಲಾಖೆ, ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ 28,740 ಹುದ್ದೆಗಳ ನೇಮಕಾತಿ ಭಾರತೀಯ ಅಂಚೆ ಇಲಾಖೆ (ಇಂಡಿಯಾ ಪೋಸ್ಟ್) ದೇಶಾದ್ಯಂತ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಒಟ್ಟು 28,740 (ನಿರೀಕ್ಷಿತ) ಹುದ್ದೆಗಳ ಭರ್ತಿಗೆ ಜನವರಿ 31 ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಅದು ಪ್ರಕಟಿಸಿದೆ. ಒಟ್ಟು ಹುದ್ದೆಗಳು: 28,740 (ಅಂದಾಜು) ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್), ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ). ಆಯ್ಕೆ ಪ್ರಕ್ರಿಯೆ: ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. 10 ನೇ ತರಗತಿಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ…














