Author: kannadanewsnow57

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ 2025-26ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಪ್ರಕಟಣೆ ಹೊರಡಿಸಿದೆ. ವರ್ಗಾವಣೆ ಪ್ರಕ್ರಿಯೆಯ ಪೂರ್ವಭಾವಿ ಚಟುವಟಿಕೆಯಾಗಿ, ಡಿಸೆಂಬರ್ 2025ರ ಅಂತ್ಯಕ್ಕೆ ಅನ್ವಯವಾಗುವಂತೆ ಶಿಕ್ಷಕರ ಅಂತಿಮ ‘ವೇಯ್ಟೆಡ್ ಅಂಕಗಳನ್ನು’ (Weighted Marks) ಈಗ ತಂತ್ರಾಂಶದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ವೈಯಕ್ತಿಕ ಲಾಗಿನ್ ಅಥವಾ ಇಲಾಖೆಯ ವೆಬ್‌ಸೈಟ್ ಮೂಲಕ ಅಂತಿಮ ಅಂಕಗಳನ್ನು ಪರಿಶೀಲಿಸಬಹುದು. ಅಂತಿಮ ಗಡುವು ಮುಕ್ತಾಯ: ಸೇವಾ ವಿವರಗಳ ಇಂದೀಕರಣಕ್ಕೆ (Update) ಈ ಮೊದಲು ಫೆಬ್ರವರಿ 27, 2026ರವರೆಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದ್ದರಿಂದ, ಇನ್ನು ಮುಂದೆ ಇ.ಇ.ಡಿ.ಎಸ್ (EEDS) ತಂತ್ರಾಂಶದಲ್ಲಿ ಯಾವುದೇ ರೀತಿಯ ತಿದ್ದುಪಡಿ ಅಥವಾ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ವರ್ಗಾವಣೆಗೆ ಆಧಾರ: ಪ್ರಸ್ತುತ ಪ್ರಕಟಿಸಲಾಗಿರುವ ಅಂತಿಮ ಸೇವಾ ಅಂಕಗಳನ್ನೇ ಮುಂಬರುವ ವರ್ಗಾವಣೆ ಪ್ರಕ್ರಿಯೆಯ ಎಲ್ಲಾ ಹಂತಗಳಿಗೂ ಪರಿಗಣಿಸಲಾಗುತ್ತದೆ. ಅಧಿಕಾರಿಗಳಿಗೆ ಸೂಚನೆ: ಎಲ್ಲಾ…

Read More

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಹೊರಗುತ್ತಿಗೆ ಮತ್ತು ಒಪ್ಪಂದ ಆಧಾರಿತ ನೌಕರರಲ್ಲಿ ಆತಂಕ ಮೂಡಿಸಿದ್ದ ‘ಬಿಡುಗಡೆ ಆದೇಶ’ವು ಸಂಪೂರ್ಣವಾಗಿ ನಕಲಿ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸುಮಾರು 96 ಸಾವಿರಕ್ಕೂ ಅಧಿಕ ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಇತ್ತೀಚೆಗೆ ಹಣಕಾಸು ಇಲಾಖೆಯ ಹೆಸರಿನಲ್ಲಿ ಅಧಿಕೃತ ಎನ್ನುವಂತೆ ಜ್ಞಾಪನಾ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರಲ್ಲಿ, “ಗುತ್ತಿಗೆ ಅವಧಿ ಮುಗಿದ ತಕ್ಷಣ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಅದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗುತ್ತದೆ” ಎಂದು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಇದು ನೌಕರರಲ್ಲಿ ಭಾರಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಆರ್ಥಿಕ ಇಲಾಖೆಯ ಸ್ಪಷ್ಟನೆ: ಈ ಕುರಿತು ತುರ್ತು ಸ್ಪಷ್ಟನೆ ನೀಡಿರುವ ಆರ್ಥಿಕ ಇಲಾಖೆ, ಅಂತಹ ಯಾವುದೇ ಆದೇಶ ಅಥವಾ ಜ್ಞಾಪನಾ ಪತ್ರವನ್ನು ತಾವು ಹೊರಡಿಸಿಲ್ಲ ಎಂದು ತಿಳಿಸಿದೆ. ಈ ನಕಲಿ ಪತ್ರವು ಸರ್ಕಾರದ ಇಲಾಖೆಗಳಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಇಲಾಖೆ ಹೇಳಿದೆ. ದೂರು ದಾಖಲು:…

Read More

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಹಣಕಾಸು ವಂಚನೆಗಳನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ, ಇನ್ಮುಂದೆ ಯುಪಿಐ (UPI) ಮೂಲಕ ಹಣ ಪಾವತಿ ಮಾಡುವಾಗ ಕೇವಲ ಒನ್ ಟೈಮ್ ಪಾಸ್‌ವರ್ಡ್ (OTP) ಅಥವಾ ಪಿನ್ (PIN) ಮಾತ್ರ ಸಾಕಾಗುವುದಿಲ್ಲ. ಬದಲಾಗಿ, ‘ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್’ (Multi-factor Authentication) ಅಡಿಯಲ್ಲಿ ಡಬಲ್ ಸೆಕ್ಯೂರಿಟಿಯನ್ನು ಕಡ್ಡಾಯಗೊಳಿಸಲು ಆರ್‌ಬಿಐ ಮುಂದಾಗಿದೆ. ಇಂದಿನಿಂದ ಡಿಜಿಟಲ್ ಪಾವತಿಯಲ್ಲಿ ನಿಯಮ ಬದಲಾವಣೆ ಆಗುತ್ತಿದೆ. RBI ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಆನ್ಲೈನ್ ವೈವಾಟಿಗೆ ಏಪ್ರಿಲ್ ಒಂದರಿಂದ ಹೊಸ ರೂಲ್ಸ್ ಅನ್ವಯವಾಗುತ್ತಿದೆ.ವಾಲೆಟ್ ಪಾವತಿಗಳಿಗೆ ಎರಡು ಫ್ಯಾಕ್ಟರ್ ಅಥೆಂಟಿಕೇಶನ್ ಸೈಬರ್ ವಂಚನೆತ್ರೆಯಿಂದ ಕಠಿಣ ಸುರಕ್ಷತಾ ಕ್ರಮ ಜಾರಿ ಮಾಡಿದೆ ವ್ಯವಸ್ಥೆಯ ವೈಫಲ್ಯದಿಂದ ಹಣ ಕಳೆದುಕೊಂಡರೆ ಬ್ಯಾಂಕುಗಳೆ ಹೊಣೆ ಆಗಲಿವೆ. ಪಿನ್ ಅಥವಾ ಬಯೋಮೆಟ್ರಿಕ್ ಮೂಲಕ ಎರಡನೇ ಹಂತದ ದೃಢೀಕರಣ ಅನಿವಾರ್ಯ. ದೊಡ್ಡ…

Read More

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ಹಲ್ಲಿಗಳ ಕಾಟವೂ ಹೆಚ್ಚಾಗುತ್ತದೆ. ಹಲ್ಲಿಗಳು ನೇರವಾಗಿ ನಮಗೆ ಹಾನಿ ಮಾಡದಿದ್ದರೂ, ಅವುಗಳನ್ನು ನೋಡಿದರೆ ಅನೇಕರಿಗೆ ಅಸಹ್ಯ ಅಥವಾ ಭಯವಾಗುವುದು ಸಹಜ. ಅದರಲ್ಲೂ ಅಡುಗೆ ಮನೆ ಅಥವಾ ಮಲಗುವ ಕೋಣೆಯಲ್ಲಿ ಹಲ್ಲಿಗಳಿದ್ದರೆ ಕಿರಿಕಿರಿ ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಸ್ಪ್ರೇಗಳ ಬದಲಿಗೆ, ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಹಲ್ಲಿಗಳನ್ನು ಶಾಶ್ವತವಾಗಿ ಓಡಿಸಬಹುದು. ಹಲ್ಲಿಗಳನ್ನು ಓಡಿಸಲು ಇಲ್ಲಿವೆ ಕೆಲವು ಸರಳ ಮತ್ತು ನೈಸರ್ಗಿಕ ಮನೆಮದ್ದುಗಳು: 1. ಈರುಳ್ಳಿ ಮತ್ತು ಬೆಳ್ಳುಳ್ಳಿ: ಹಲ್ಲಿಗಳಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ತೀಕ್ಷ್ಣವಾದ ವಾಸನೆ ಎಂದರೆ ಆಗುವುದಿಲ್ಲ. ಈರುಳ್ಳಿ ಚೂರುಗಳನ್ನು ಅಥವಾ ಬೆಳ್ಳುಳ್ಳಿ ಎಸಳುಗಳನ್ನು ಹಲ್ಲಿಗಳು ಬರುವ ಕಿಟಕಿ, ಬಾಗಿಲು ಅಥವಾ ಮೂಲೆಗಳಲ್ಲಿ ಇರಿಸಿ. ಇಲ್ಲವೇ ಇವುಗಳ ರಸವನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ತಕ್ಷಣವೇ ಮನೆಯಿಂದ ಹೊರಬರುತ್ತವೆ. 2. ಮೊಟ್ಟೆಯ ಓಡು: ಇದು ಹಲ್ಲಿಗಳನ್ನು ಓಡಿಸಲು ಇರುವ ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ವಿಧಾನ. ಮೊಟ್ಟೆಯ ಓಡಿನಿಂದ ಬರುವ ಒಂದು ರೀತಿಯ…

Read More

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ವೇಳಾಪಟ್ಟಿಯಂತೆ ಏಪ್ರಿಲ್ 25ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮೇ 18ರಿಂದ ಮೇ 25ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯಲಿವೆ. ದ್ವಿತೀಯ ಪಿಯುಸಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಹೀಗಿದೆ: ದಿನಾಂಕ ದಿನ ವಿಷಯಗಳು (ಬೆಳಿಗ್ಗೆ 10:00 – 1:00) 25/04/2026 ಶನಿವಾರ ಕನ್ನಡ, ಅರೇಬಿಕ್ 27/04/2026 ಸೋಮವಾರ ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ 28/04/2026 ಮಂಗಳವಾರ ಇಂಗ್ಲಿಷ್ 29/04/2026 ಬುಧವಾರ ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ 30/04/2026 ಗುರುವಾರ ಅರ್ಥಶಾಸ್ತ್ರ, ಜೀವಶಾಸ್ತ್ರ 02/05/2026 ಶನಿವಾರ ಇತಿಹಾಸ, ಗಣಿತ, ಗೃಹವಿಜ್ಞಾನ 04/05/2026 ಸೋಮವಾರ ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ 05/05/2026 ಮಂಗಳವಾರ ಹಿಂದಿ 06/05/2026 ಬುಧವಾರ ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ 07/05/2026 ಗುರುವಾರ ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ…

Read More

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹೆಸರಾಂತ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ರಂಜಿತ್ ಅವರನ್ನು ಲೈಂಗಿಕ ದೌರ್ಜನ್ಯದ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏನಿದು ಪ್ರಕರಣ? ಯುವ ನಟಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಚಿತ್ರೀಕರಣದ ವೇಳೆ ನಿರ್ದೇಶಕರು ತಮ್ಮನ್ನು ‘ಕ್ಯಾರವಾನ್’ಗೆ ಕರೆಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ನಟಿ ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊಚ್ಚಿ ಸಿಟಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧನದ ವಿವರ: ಇಡುಕ್ಕಿ ಜಿಲ್ಲೆಯಲ್ಲಿ ರಂಜಿತ್ ಅವರ ವಾಹನವನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಸದ್ಯ ಅವರನ್ನು ತೊಡುಪುಳದಲ್ಲಿ ಇರಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೊಚ್ಚಿ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.ಬಂಧನದ ಪ್ರಕ್ರಿಯೆಯ ವೇಳೆ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೊಚ್ಚಿಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಹಳೆಯ ಪ್ರಕರಣಗಳ ನಂಟು: ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಮಲಯಾಳಂ…

Read More

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಜಿಮ್‌ಗೆ ಹೋಗಲು ಸಮಯವಿಲ್ಲದವರು ಅಥವಾ ಕಠಿಣ ವ್ಯಾಯಾಮ ಮಾಡಲು ಸಾಧ್ಯವಾಗದವರಿಗೆ ‘ನಡಿಗೆ’ (Walking) ಅತ್ಯುತ್ತಮ ಪರ್ಯಾಯ. ಆದರೆ, ಕೇವಲ ಸುಮ್ಮನೆ ನಡೆದರೆ ತೂಕ ಇಳಿಯುವುದಿಲ್ಲ. ಒಂದು ತಿಂಗಳಲ್ಲಿ ಸುಮಾರು 5 ಕೆಜಿ ತೂಕ ಇಳಿಸಬೇಕೆಂದರೆ ನೀವು ಒಂದು ನಿರ್ದಿಷ್ಟ ಗುರಿಯೊಂದಿಗೆ ನಡೆಯಬೇಕಾಗುತ್ತದೆ. ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು? ಸಾಮಾನ್ಯವಾಗಿ ಆರೋಗ್ಯವಾಗಿರಲು ದಿನಕ್ಕೆ 10,000 ಹೆಜ್ಜೆ ನಡೆಯಬೇಕು ಎಂದು ಹೇಳಲಾಗುತ್ತದೆ. ಆದರೆ, ನಿಮ್ಮ ಗುರಿ ತಿಂಗಳಿಗೆ 5 ಕೆಜಿ ತೂಕ ಇಳಿಸುವುದು ಎಂದಾದರೆ, ನೀವು ದಿನಕ್ಕೆ ಕನಿಷ್ಠ 12,000 ದಿಂದ 15,000 ಹೆಜ್ಜೆಗಳನ್ನು ಹಾಕಬೇಕಾಗುತ್ತದೆ. ತೂಕ ಇಳಿಕೆಗೆ ನಡಿಗೆಯ ಸೂತ್ರಗಳು: ವೇಗದ ನಡಿಗೆ (Brisk Walking): ನಿಧಾನವಾಗಿ ನಡೆಯುವ ಬದಲು ವೇಗವಾಗಿ ನಡೆಯುವುದರಿಂದ ಹೆಚ್ಚಿನ ಕ್ಯಾಲೊರಿಗಳು ದಹಿಸುತ್ತವೆ. ಕ್ಯಾಲೊರಿ ಲೆಕ್ಕಾಚಾರ: ಸುಮಾರು 1 ಕಿಲೋಮೀಟರ್ ನಡೆದರೆ ಅಂದಾಜು 50-60 ಕ್ಯಾಲೊರಿಗಳು ಖರ್ಚಾಗುತ್ತವೆ. 5 ಕೆಜಿ ತೂಕ ಇಳಿಸಲು…

Read More

ಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ವಾಹನ ಪ್ರಯಾಣಿಕರಿಗೆ ಏಪ್ರಿಲ್‌ 1 ರಿಂದ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶೇಕಡಾ 3 ರಿಂದ 5 ರಷ್ಟು ದರ ಏರಿಕೆಯಾಗಲಿದೆ. ರಾಜ್ಯದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಿಗೂ ಅನ್ವಯವಾಗಲಿವೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ. ಹೌದು ಏಪ್ರಿಲ್‌ 1 ರಿಂದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ ಶೇಕಡಾ 5ರಷ್ಟು ಟೋಲ್‌ ದರ ಹೆಚ್ಚಳವಾಗಲಿದೆ. ಈ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ವಾರ್ಷಿಕ ಹಣದುಬ್ಬರ ಆಧಾರಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ 2008ರ ಅನ್ವಯ ಪ್ರತಿ ವರ್ಷ ಟೋಲ್‌ದರ ಶೇ.3 ರಿಂದ ಶೇ.5ರವರೆಗೆ ಹೆಚ್ಚಳ ಆಗಲಿದೆ. ಕಳೆದ ಎರಡು ವರ್ಷಗಳಿಂದ ಇದೇ ರೀತಿ ಟೋಲ್‌…

Read More

ಅನೇಕ ಜನರು ತಮ್ಮ ಮುಖದ ಸೌಂದರ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಕೈಕಾಲುಗಳಿಗೆ ನೀಡುವುದಿಲ್ಲ. ಅದರಲ್ಲೂ ವಿಶೇಷವಾಗಿ ಮೊಣಕೈ ಭಾಗವು ದೇಹದ ಇತರ ಭಾಗಗಳಿಗಿಂತ ಕಪ್ಪಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಇದಕ್ಕೆ ಸತ್ತ ಜೀವಕೋಶಗಳ ಶೇಖರಣೆ, ಘರ್ಷಣೆ ಅಥವಾ ಸೂರ್ಯನ ಕಿರಣಗಳ ಪ್ರಭಾವ ಕಾರಣವಿರಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಕೆಲವು ನೈಸರ್ಗಿಕ ವಸ್ತುಗಳು ಸಹಾಯ ಮಾಡುತ್ತವೆ. ಅವುಗಳ ವಿವರ ಇಲ್ಲಿದೆ: 1. ನಿಂಬೆ ಹಣ್ಣಿನ ಬಳಕೆ ನಿಂಬೆ ಹಣ್ಣು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇದು ಚರ್ಮದ ಬಣ್ಣವನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: ಒಂದು ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಅದರ ರಸವನ್ನು ಮೊಣಕೈಗೆ ಹಚ್ಚಿ ೧೫-೨೦ ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. 2. ಅಲೋವೆರಾ (ಲೋಳೆಸರ) ಅಲೋವೆರಾ ಚರ್ಮವನ್ನು ಮೃದುಗೊಳಿಸುವುದಲ್ಲದೆ, ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಬಳಸುವ ವಿಧಾನ: ತಾಜಾ ಅಲೋವೆರಾ ಜೆಲ್ ಅನ್ನು ಮೊಣಕೈಗೆ ಹಚ್ಚಿ ಮಸಾಜ್ ಮಾಡಿ.…

Read More

2011ರ ನಂತರ (ಅಂದರೆ 15 ವರ್ಷಗಳ ಬಳಿಕ) ನಡೆಯುತ್ತಿರುವ ಈ ಜನಗಣತಿಯು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ. 2027ರ ಜನಗಣತಿಯ ಮೊದಲ ಹಂತದ ಪ್ರಕ್ರಿಯೆಯು ಎರಡು ತಿಂಗಳ ಕಾಲ ನಡೆಯಲಿದೆ. ಏಪ್ರಿಲ್ 1 ರ ಇಂದಿನಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಇಂದಿನಿಂದ ಆರಂಭವಾಗಿದ್ದು, ಏಪ್ರಿಲ್ 5 ರಿಂದ ಉಳಿದ ರಾಜ್ಯಗಳಲ್ಲಿ ಶುರುವಾಗಲಿದೆ. ಏನಿದು ಡಿಜಿಟಲ್ ಗಣತಿ? ಗಣತಿದಾರರು ಸ್ಮಾರ್ಟ್‌ಫೋನ್ ಬಳಸಿ ನೇರವಾಗಿ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ. ಜನರಿಗೂ ಸಹ ವೆಬ್‌ಸೈಟ್ ಮೂಲಕ ಸ್ವಯಂ ಮಾಹಿತಿ ನೀಡಲು ಅವಕಾಶವಿದೆ. ಗಣತಿಯ ಹಂತಗಳು ಏಪ್ರಿಲ್ 1 – 15: ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಾವಾಗಿಯೇ ಮಾಹಿತಿ ದಾಖಲಿಸುವ ‘ಸ್ವಯಂ ಗಣತಿ’ ಅವಧಿ. ಏಪ್ರಿಲ್ 15 – ಮೇ 15: ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಮಾಡುವ ಮತ್ತು ಮಾಹಿತಿ ಸಂಗ್ರಹಿಸುವ ‘ಮನೆ ಸೆನ್ಸಸ್’ ಅವಧಿ. ಮುಂದಿನ ಹಂತ: ಜನರಿಂದ ಮಾಹಿತಿ ಸಂಗ್ರಹಿಸುವ ಪ್ರಮುಖ ಹಂತವು…

Read More