Author: kannadanewsnow57

ಬೆಂಗಳೂರು: ರಾಜ್ಯದಲ್ಲಿ ವಿಕಲಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳಡಿ ವಿಶೇಷ ಶಾಲೆಗಳನ್ನು ನಡೆಸುತ್ತಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೃಷ್ಟಿ ದೋಷ, ಶ್ರವಣ ದೋಷ, ಬುದ್ಧಿಮಾಂದ್ಯತೆ ಹಾಗೂ ದೈಹಿಕ ವಿಕಲಚೇತನವುಳ್ಳ ಮಕ್ಕಳಿಗಾಗಿ ಒಟ್ಟು ನೂರಾರು ಶಾಲೆಗಳು ಕಾರ್ಯಾಚರಿಸುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಶಾಲೆಗಳ ವರ್ಗೀಕರಣ ಮತ್ತು ಅವುಗಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ: ಯೋಜನೆವಾರು ಶಾಲೆಗಳ ವಿವರ: ಸರ್ಕಾರಿ ವಿಶೇಷ ಶಾಲೆಗಳು: ಸರ್ಕಾರವೇ ನೇರವಾಗಿ ನಡೆಸುತ್ತಿರುವ ಶಾಲೆಗಳಲ್ಲಿ ದೃಷ್ಟಿ ದೋಷವುಳ್ಳವರಿಗಾಗಿ 04 ಹಾಗೂ ಶ್ರವಣ ದೋಷವುಳ್ಳವರಿಗಾಗಿ 05 ಶಾಲೆಗಳಿವೆ. 1982ರ ರಾಜ್ಯ ಅನುದಾನ ಸಂಹಿತೆಯಡಿ: ಈ ಯೋಜನೆಯಡಿ ಒಟ್ಟು 33 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಅತಿ ಹೆಚ್ಚು ಅಂದರೆ 12 ಶಾಲೆಗಳಿವೆ. ವಿಕಲಚೇತನ ಮಕ್ಕಳ ವಿಶೇಷ ಶೈಕ್ಷಣಿಕ ಯೋಜನೆ: ಈ ಯೋಜನೆಯಡಿ ಅತಿ ಹೆಚ್ಚು ಶಾಲೆಗಳು ನೋಂದಣಿಯಾಗಿವೆ. ಬುದ್ಧಿಮಾಂದ್ಯ ಮಕ್ಕಳಿಗಾಗಿ 104, ದೃಷ್ಟಿ ದೋಷವುಳ್ಳವರಿಗಾಗಿ 43 ಮತ್ತು ಶ್ರವಣ ದೋಷವುಳ್ಳವರಿಗಾಗಿ 17 ಶಾಲೆಗಳು ಈ ವ್ಯಾಪ್ತಿಗೆ ಬರುತ್ತವೆ.…

Read More

ಬೆಂಗಳೂರು: ಇಂದಿನ ವೇಗದ ಬದುಕಿನಲ್ಲಿ ಮನೆ ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ (Lease Agreement) ಮಾಡಿಸುವುದು ಒಂದು ದೊಡ್ಡ ತಲೆನೋವಿನ ಕೆಲಸವಾಗಿತ್ತು. ಸ್ಟಾಂಪ್ ಪೇಪರ್ಗಾಗಿ ಅಲೆಯುವುದು, ಕಚೇರಿಗಳಿಗೆ ಭೇಟಿ ನೀಡುವುದು ಇನ್ನು ಹಳೆಯ ಮಾತು. ಕರ್ನಾಟಕ ಸರ್ಕಾರದ ಕಾವೇರಿ 2.0 (Kaveri 2.0) ತಂತ್ರಾಂಶವು ಇದೀಗ ನಾಗರಿಕರಿಗೆ ಮನೆಯಲ್ಲೇ ಕುಳಿತು ಡಿಜಿಟಲ್ ಇ-ಸ್ಟಾಂಪ್ ಪಡೆಯುವ ಸೌಲಭ್ಯವನ್ನು ಕಲ್ಪಿಸಿದೆ. ಈ ಹೊಸ ವ್ಯವಸ್ಥೆಯ ಮೂಲಕ ಮಧ್ಯವರ್ತಿಗಳ ಕಾಟವಿಲ್ಲದೆ, ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ನಿಮ್ಮ ಬಾಡಿಗೆ ಒಪ್ಪಂದವನ್ನು ಪೂರ್ಣಗೊಳಿಸಬಹುದು. ಡಿಜಿಟಲ್ ಇ-ಸ್ಟಾಂಪ್ ಪಡೆಯುವ ಹಂತ ಹಂತದ ವಿಧಾನ ಇಲ್ಲಿದೆ ನೋಡಿ: ಅರ್ಜಿ ಸಲ್ಲಿಕೆ ಹೇಗೆ? ಮೊದಲು ಕಾವೇರಿ 2.0 ವೆಬ್ಸೈಟ್ಗೆ ಲಾಗಿನ್ ಆಗಿ ‘Start New Application’ ಮೂಲಕ ‘Digital e-Stamp’ ವಿಭಾಗವನ್ನು ಆರಿಸಿಕೊಳ್ಳಬೇಕು. ಇಲ್ಲಿ ಬಾಡಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ‘Lease’ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮ್ಮ ಒಪ್ಪಂದ ಒಂದು ವರ್ಷದ ಒಳಗಿದ್ದರೆ ಅದಕ್ಕೆ ಪೂರಕವಾದ ಉಪ-ವಿಭಾಗವನ್ನು ಆರಿಸಿಕೊಳ್ಳಬಹುದು.…

Read More

ನೀವು ಓದಿನಲ್ಲಿ ಮುಂದಿದ್ದು, ಆರ್ಥಿಕ ಸಂಕಷ್ಟ ನಿಮ್ಮ ಗುರಿಯನ್ನು ತಡೆಯುತ್ತಿದೆಯೇ? ಹಾಗಿದ್ದರೆ ಕೇಂದ್ರ ಸರ್ಕಾರದ ‘ಪಿಎಂ ಯಶಸ್ವಿ’ (PM YASASVI) ಯೋಜನೆ ನಿಮಗಾಗಿ ಇದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 1.25 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಮಾತ್ರವಲ್ಲದೆ, ಕಾಲೇಜು ಫೀಸು ಮತ್ತು ಲ್ಯಾಪ್‌ಟಾಪ್ ಖರೀದಿಸಲು ಕೂಡ ಧನಸಹಾಯ ಸಿಗಲಿದೆ. ಏನಿದು ಪಿಎಂ ಯಶಸ್ವಿ ಯೋಜನೆ? ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು OBC (ಇತರೆ ಹಿಂದುಳಿದ ವರ್ಗ), EBC (ಆರ್ಥಿಕವಾಗಿ ಹಿಂದುಳಿದ ವರ್ಗ) ಮತ್ತು DNT (ವಿಮುಕ್ತ ಮತ್ತು ಅಲೆಮಾರಿ ಬುಡಕಟ್ಟು) ವರ್ಗದ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. 9ನೇ ತರಗತಿಯಿಂದ ಸ್ನಾತಕೋತ್ತರ ಪದವಿ (Post Graduation) ವರೆಗಿನ ಶಿಕ್ಷಣಕ್ಕೆ ಈ ಯೋಜನೆಯಡಿ ಆರ್ಥಿಕ ನೆರವು ಸಿಗಲಿದೆ. ಯೋಜನೆಯ ಪ್ರಮುಖ ಲಾಭಗಳು: ಈ ಯೋಜನೆಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ: ಪ್ರೀ-ಮೆಟ್ರಿಕ್ ಸ್ಕಾಲರ್‌ಶಿಪ್: ವರ್ಷಕ್ಕೆ ₹4,000 ಸಹಾಯಧನ. ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್: ವಿವಿಧ ಕೋರ್ಸ್‌ಗಳ ಆಧಾರದ ಮೇಲೆ ₹5,000…

Read More

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡಿದೆ. ಸತತ ಮೂರನೇ ದಿನವೂ ಮಾರುಕಟ್ಟೆ ಕುಸಿತ ಕಂಡಿದ್ದು, ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಮಣ್ಣು ಪಾಲಾಗಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 800 ಪಾಯಿಂಟ್ಸ್ ಕುಸಿತ ಕಂಡಿದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ 805.17 ಅಂಕಗಳ (1.04%) ಇಳಿಕೆಯೊಂದಿಗೆ 76,858.83 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ: ಎನ್‌ಎಸ್‌ಇ ನಿಫ್ಟಿ 200 ಅಂಕಗಳಿಗಿಂತ ಹೆಚ್ಚು ಕುಸಿದು, 23,956.75 ಮಟ್ಟಕ್ಕೆ ತಲುಪಿದೆ. ಸಂಪತ್ತು ನಷ್ಟ: ಈ ಭಾರಿ ಕುಸಿತದಿಂದಾಗಿ ಬಿಎಸ್‌ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹4 ಲಕ್ಷ ಕೋಟಿ ಇಳಿಕೆಯಾಗಿದೆ. ಐಟಿ ವಲಯಕ್ಕೆ ಪೆಟ್ಟು: ಐಟಿ ಕಂಪನಿಗಳ ಷೇರುಗಳು ಅತಿ ಹೆಚ್ಚು ಕುಸಿತ ಕಂಡಿವೆ. ವಿಶೇಷವಾಗಿ ಎಚ್‌ಸಿಎಲ್ ಟೆಕ್ (HCL Tech) ಮತ್ತು ಇನ್ಫೋಸಿಸ್ (Infosys) ಶೇ. 2 ಕ್ಕಿಂತ ಹೆಚ್ಚು…

Read More

ನವದೆಹಲಿ: ಇರಾನ್‌ನಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಮತ್ತು ಕಟ್ಟುನಿಟ್ಟಿನ ಪ್ರಯಾಣ ಸಲಹೆಯನ್ನು (Advisory) ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರು ಯಾವುದೇ ಕಾರಣಕ್ಕೂ ಇರಾನ್‌ಗೆ ಭೇಟಿ ನೀಡಬಾರದು ಎಂದು ತಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಪ್ರಯಾಣದ ಮೇಲೆ ನಿರ್ಬಂಧ ವಾಯುಮಾರ್ಗ ಅಥವಾ ರಸ್ತೆಮಾರ್ಗ ಸೇರಿದಂತೆ ಯಾವುದೇ ರೀತಿಯಲ್ಲಿ ಇರಾನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಭಾರತ ಮತ್ತು ಇರಾನ್ ನಡುವೆ ಕೆಲವು ವಿಮಾನಯಾನ ಸೇವೆಗಳು ಪುನರಾರಂಭಗೊಳ್ಳುವ ಸುದ್ದಿಗಳ ನಡುವೆಯೇ ಈ ಎಚ್ಚರಿಕೆ ಹೊರಬಿದ್ದಿದೆ. ಪ್ರಾದೇಶಿಕ ಸಂಘರ್ಷದಿಂದಾಗಿ ಅಲ್ಲಿನ ವಾಯುಪ್ರದೇಶದಲ್ಲಿ (Airspace) ಹಲವಾರು ನಿರ್ಬಂಧಗಳು ಮತ್ತು ಅನಿಶ್ಚಿತತೆಗಳು ಮುಂದುವರಿದಿವೆ, ಇದು ಪ್ರಯಾಣಿಕರ ಸುರಕ್ಷತೆಗೆ ಅಪಾಯಕಾರಿ ಎಂದು ಸರ್ಕಾರ ತಿಳಿಸಿದೆ. ಇರಾನ್‌ನಲ್ಲಿರುವ ಭಾರತೀಯರಿಗೆ ಸೂಚನೆ ಈಗಾಗಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಕೂಡಲೇ ಆ ದೇಶವನ್ನು ತೊರೆಯುವಂತೆ ಸಲಹೆ ನೀಡಲಾಗಿದೆ. ರಾಯಭಾರ ಕಚೇರಿಯ ಸಮನ್ವಯದೊಂದಿಗೆ, ನಿಗದಿಪಡಿಸಿದ ಭೂ ಗಡಿ ಮಾರ್ಗಗಳ (Land Border Routes) ಮೂಲಕ ಸುರಕ್ಷಿತವಾಗಿ ಹೊರಬರುವಂತೆ…

Read More

ಭೋಪಾಲ್: ವೈದ್ಯಕೀಯ ತುರ್ತು ಸೇವೆಗೆ ಬಳಕೆಯಾಗಬೇಕಾದ ಆಂಬ್ಯುಲೆನ್ಸ್ ಒಂದು ಅಕ್ಷರಶಃ ‘ಅನೈತಿಕ ತಾಣ’ವಾಗಿ ಬದಲಾದ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್ ಒಳಗೆ ಯುವತಿ ಮತ್ತು ಇಬ್ಬರು ಯುವಕರು ಆಕ್ಷೇಪಾರ್ಹ ಚಟುವಟಿಕೆಯಲ್ಲಿ ತೊಡಗಿದ್ದನ್ನು ಸಾರ್ವಜನಿಕರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಘಟನೆಯ ವಿವರ ಗುರುವಾರ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಆಂಬ್ಯುಲೆನ್ಸ್ ಒಳಗಿನ ಚಲನವಲನಗಳ ಬಗ್ಗೆ ಅನುಮಾನ ಮೂಡಿದೆ. ಕಿಟಕಿಯ ಮೂಲಕ ಇಣುಕಿ ನೋಡಿದಾಗ ಒಳಗೆ ನಡೆಯುತ್ತಿದ್ದ ಅಸಭ್ಯ ವರ್ತನೆ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಆಂಬ್ಯುಲೆನ್ಸ್ ಅನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. 5 ಕಿಲೋಮೀಟರ್ ಸಿನಿಮಾ ಶೈಲಿಯ ಬೆನ್ನಟ್ಟುವಿಕೆ ಆಂಬ್ಯುಲೆನ್ಸ್ ನಿಲ್ಲಿಸದಿದ್ದಾಗ ಸಾರ್ವಜನಿಕರು ಬಿಡದೆ ಸುಮಾರು 5 ಕಿಲೋಮೀಟರ್‌ಗಳವರೆಗೆ ಅದನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನವರ ಸಹಾಯವನ್ನೂ ಕೋರಿದ್ದಾರೆ. ಕೊನೆಗೆ ವಾಹನವನ್ನು ತಡೆದು ನಿಲ್ಲಿಸಿದಾಗ ಒಳಗೆ ಒಬ್ಬ ಯುವತಿ ಹಾಗೂ ಇಬ್ಬರು ಯುವಕರು ಪತ್ತೆಯಾಗಿದ್ದಾರೆ. ಚಾಲಕನ ಹಾರಿಕೆ ಉತ್ತರ: ಸ್ಥಳೀಯರು…

Read More

ಬೆಂಗಳೂರು: “ಜೀವನ ಅಸಲಿ ಆಟ ಶುರುವಾಗುವುದೇ 40ರ ನಂತರ” ಎಂಬ ಮಾತಿದೆ. ಆದರೆ, ಇಂದಿನ ಬದಲಾದ ಜೀವನಶೈಲಿಯಲ್ಲಿ 40 ವರ್ಷ ದಾಟಿದ ನಂತರ ಪುರುಷರು ತಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಿದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಮಧುಮೇಹ, ಹೃದಯ ಕಾಯಿಲೆ, ಫ್ಯಾಟಿ ಲಿವರ್ ಮತ್ತು ಕಿಡ್ನಿ ಸಮಸ್ಯೆಗಳು ನಲವತ್ತರ ಹರೆಯದಲ್ಲೇ ಕಾಲಿಡುತ್ತವೆ. ನವದೆಹಲಿಯ ವಿಎನ್ಎ ಆಸ್ಪತ್ರೆಯ ಆಂಡ್ರಾಲಜಿಸ್ಟ್ ಡಾ. ವಿನೀತ್ ಮಲ್ಹೋತ್ರಾ ಅವರ ಪ್ರಕಾರ, ಉತ್ತಮ ಜೀವನ ಗುಣಮಟ್ಟಕ್ಕಾಗಿ ಪ್ರತಿಯೊಬ್ಬ ಪುರುಷನು ವರ್ಷಕ್ಕೊಮ್ಮೆ ಈ ಕೆಳಗಿನ 5 ಪ್ರಮುಖ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅನಿವಾರ್ಯ. ಪುರುಷರು ಮಾಡಿಸಿಕೊಳ್ಳಬೇಕಾದ 5 ಪ್ರಮುಖ ಪರೀಕ್ಷೆಗಳು: 1. ರಕ್ತದೊತ್ತಡ ತಪಾಸಣೆ (Blood Pressure): ರಕ್ತದೊತ್ತಡ ಅಥವಾ ಬಿಪಿ ಒಂದು ‘ನಿಶ್ಯಬ್ದ ಕೊಲೆಗಡುಕ’. 40 ವರ್ಷ ದಾಟಿದವರು ಕನಿಷ್ಠ ತಿಂಗಳಿಗೊಮ್ಮೆ ಬಿಪಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಎದುರಾಗಬಹುದಾದ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ. 2. ಹೃದಯದ…

Read More

ಬೆಂಗಳೂರು : SSLC (ಹತ್ತನೇ ತರಗತಿ) ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ “ಮುಂದೇನು?” ಎಂಬ ಗೊಂದಲ ಸಹಜ. ನಿಮ್ಮ ಆಸಕ್ತಿ ಮತ್ತು ಗುರಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಪ್ರಮುಖ ಮಾರ್ಗಗಳ ವಿವರ ಇಲ್ಲಿದೆ. SSLC ಫಲಿತಾಂಶದ ನಂತರದ ಭವಿಷ್ಯ: ಯಾವ ಹಾದಿ ನಿಮಗಾಗಿ? ಇಲ್ಲಿದೆ ಸಂಪೂರ್ಣ ಮಾಹಿತಿ 1. ಪಿಯುಸಿ (Pre-University College – PUC) : ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಜನಪ್ರಿಯ ಹಾದಿಯಿದು. ಇಲ್ಲಿ ಮೂರು ಪ್ರಮುಖ ವಿಭಾಗಗಳಿವೆ: ವಿಜ್ಞಾನ (Science): ಇಂಜಿನಿಯರಿಂಗ್, ವೈದ್ಯಕೀಯ (MBBS/BDS), ನರ್ಸಿಂಗ್ ಅಥವಾ ಶುದ್ಧ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಸೂಕ್ತ. (PCMB, PCMC, PCME ಕಾಂಬಿನೇಶನ್‌ಗಳು ಲಭ್ಯ). ವಾಣಿಜ್ಯ (Commerce): ಚಾರ್ಟರ್ಡ್ ಅಕೌಂಟೆಂಟ್ (CA), ಬ್ಯಾಂಕಿಂಗ್, ಅಕೌಂಟ್ಸ್ ಅಥವಾ ಬಿಜಿನೆಸ್ ಮ್ಯಾನೇಜ್‌ಮೆಂಟ್ ಕಡೆಗೆ ಆಸಕ್ತಿ ಇದ್ದರೆ ಇದನ್ನು ಆರಿಸಿಕೊಳ್ಳಬಹುದು. (EBAC, CEBA ಕಾಂಬಿನೇಶನ್‌ಗಳು). ಕಲೆ (Arts): ಸ್ಪರ್ಧಾತ್ಮಕ ಪರೀಕ್ಷೆಗಳು (IAS, KAS), ಪತ್ರಿಕೋದ್ಯಮ, ಸಮಾಜಶಾಸ್ತ್ರ ಅಥವಾ ಸಾಹಿತ್ಯದತ್ತ…

Read More

ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹರಿಯುವ ಪವಿತ್ರ ಹುಗ್ಲಿ ನದಿಯಲ್ಲಿ ಬೋಟ್ ಸಂಚಾರ ಮಾಡಿದರು. ಈ ಸಂದರ್ಭದಲ್ಲಿ ಅವರು ನದಿಯ ಸೊಬಗನ್ನು ಸವಿಯುವುದರ ಜೊತೆಗೆ ಫೋಟೋಗ್ರಫಿಯಲ್ಲೂ ಕೈಚಳಕ ತೋರಿಸಿದ್ದಾರೆ. ನೌಕಾಯಾನದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಮೋದಿ ಅವರು, ಗಂಗಾ ನದಿಯೊಂದಿಗಿನ ಬಂಗಾಳಿ ಜನರ ಭಾವನಾತ್ಮಕ ಸಂಬಂಧವನ್ನು ಕೊಂಡಾಡಿದ್ದಾರೆ. ಬೋಟ್ ಸಂಚಾರದ ವೇಳೆ ವೇಳೆ ಪ್ರಧಾನಿಯವರು ಸ್ವತಃ ಕ್ಯಾಮೆರಾ ಹಿಡಿದು ಫೋಟೋಗಳನ್ನು ಕ್ಲಿಕ್ಕಿಸಿದರು. ಪ್ರಸಿದ್ಧ ವಿದ್ಯಾಸಾಗರ್ ಸೇತು ಮತ್ತು ಹೌರಾ ಬ್ರಿಡ್ಜ್‌ಗಳ ಭವ್ಯತೆಯನ್ನು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಫೋಟೋಗಳ ಜೊತೆಗೆ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ — “ಹುಗ್ಲಿ ನದಿಯ ಕೆಲವು ಸುಂದರ ದೃಶ್ಯಗಳು ಇಲ್ಲಿವೆ. ಈ ಮಹಾನ್ ನದಿಯಲ್ಲಿ ಸಾಗುವಾಗ ನಾನು ಫೋಟೋಗ್ರಫಿಯಲ್ಲೂ ಕೈಯಾಡಿಸಿದೆ. ಪ್ರತಿಯೊಬ್ಬ ಬಂಗಾಳಿಯ ಮನಸ್ಸಿನಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗೆಯು ಬಂಗಾಳದ ಆತ್ಮದಲ್ಲಿ ಹರಿಯುತ್ತಾಳೆ ಎಂದು ಹೇಳಬಹುದು. ಈ…

Read More

ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ. ಇತಿಹಾಸ ಕಾಮಧೇನುವಿನ ವೈಶಿಷ್ಟ್ಯ ನೋಡಿ ಅದನ್ನು ಪಡೆಯುವ ದುರಾಸೆಯಿಂದ ಮಹಿಸ್ಪತಿ ನಗರದ ಅರಸು ಕಾರ್ತವೀರ್ಯಾರ್ಜುನ ರಾಜನು ಶ್ರೀ ಜಮದಗ್ನಿ ಋಷಿಗಳ ಮೇಲೆ 21 ಸಲ ಘೋರವಾದ ಹೊಡೆತದ ಕೊಟ್ಟು ಹತ್ಯೆ ಮಾಡಿ ಕಾಮಧೇನು ಪಡೆಯಲು ಹೋದಾಗ ಅದು ಮಾಯವಾಗಿ ಬಿಡುತ್ತವೆ. ಕಾರ್ತವೀರ್ಯಾರ್ಜುನನು ಬರಿಗೈಯಿಂದ ಹಿಂತಿರುಗುತ್ತಾನೆ. ಶ್ರೀ ಜಮದಗ್ನಿ ಋಷಿಗಳ ಮಗನಾದ ರಾಮಭದ್ರನು ಮಾತೃಹತ್ಯೆ ವಿಮೋಚನೆಯಿಂದ ಮುಕ್ತನಾಗಿ ಶಿವನಿಂದ ಪರಶು ಅಸ್ತ್ರವನ್ನು ಪಡೆದು ಪರಶುರಾಮನೆಂದು ಖ್ಯಾತಿಹೊಂದಿ, ಶ್ರೀ ಪಾರ್ವತಿಯನ್ನು ಒಲಿಸಿಕೊಂಡು ಅಂಬಿಕಾಸ್ತ್ರವನ್ನು ಪಡೆದು ಪರಮ ಪರಾಕ್ರಮಿ ಎಂದೆನಿಸಿಕೊಳ್ಳುತ್ತಾನೆ. ಶ್ರೀ ಜಮದಗ್ನಿ ಋಷಿಯ ಆಶ್ರಮದಲ್ಲೆಲ್ಲಾ ಸ್ಮಶಾನ ಮೌನ ಆವರಿಸಿ ರೇಣುಕಾ ದೇವಿಯು ಜಮದಗ್ನಿ ಋಷಿಯ ಮೇಲೆ…

Read More