Author: kannadanewsnow57

ಚಿತ್ರದುರ್ಗ: ರಾಜ್ಯದಲ್ಲಿ 40/60 ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಿರುವ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಕ್ಯುಪೇಷನ್ ಸರ್ಟಿಫಿಕೇಟ್ (OC) ಮತ್ತು ಕಂಪ್ಲಿಷನ್ ಸರ್ಟಿಫಿಕೇಟ್ (CC) ನಿಂದ ಒಂದು ಬಾರಿ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಮತ್ತು ಸಿಸಿ ಕಡ್ಡಾಯವಾಗಿದೆ.ಈಗಾಗಲೇ 30-40 ಚದರ ಅಡಿ ಅಳತೆಯಲ್ಲಿ ನಿರ್ಮಿಸಿರುವ ಮನೆಗಳಿಗೆ ಸರ್ಕಾರ ಈ ವಿನಾಯಿತಿ ನೀಡಿದೆ ಎಂದರು. ಇದೀಗ 40/60 ಅಳತೆಯ ಕಟ್ಟಡಗಳಿಗೂ ಈ ವಿನಾಯಿತಿ ವಿಸ್ತರಿಸುವ ಪ್ರಸ್ತಾವನೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸಂಪುಟದಲ್ಲಿ ಈ ಕುರಿತು ಒಪ್ಪಿಗೆ ನೀಡಿದರೆ, ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ರೈತರಿಗೆ ಆದ್ಯತೆ: ಇದೇ ಸಂದರ್ಭದಲ್ಲಿ…

Read More

ನಮ್ಮ ಮನೆಗಳ ಮುಂದೆ ಅಥವಾ ಉದ್ಯಾನವನಗಳಲ್ಲಿ ಬಿಳಿ ಮತ್ತು ಗುಲಾಬಿ ಬಣ್ಣದಲ್ಲಿ ವರ್ಷಪೂರ್ತಿ ಕಣ್ಮನ ಸೆಳೆಯುವ ‘ನಿತ್ಯ ಪುಷ್ಪ’ (ಇದನ್ನು ಸದಾಪುಷ್ಪ ಅಥವಾ ನಿತ್ಯಕಲ್ಯಾಣಿ ಎಂದೂ ಕರೆಯುತ್ತಾರೆ) ಹೂವು ಕೇವಲ ಅಲಂಕಾರಿಕ ಸಸ್ಯವಲ್ಲ. ಆಯುರ್ವೇದದ ಪ್ರಕಾರ, ಈ ಹೂವು ಮತ್ತು ಅದರ ಎಲೆಗಳಲ್ಲಿ ಹತ್ತಾರು ರೋಗಗಳನ್ನು ಗುಣಪಡಿಸುವ ಅದ್ಭುತ ಔಷಧೀಯ ಗುಣಗಳಿವೆ. ನಿತ್ಯ ಪುಷ್ಪದ ಪ್ರಮುಖ ಆರೋಗ್ಯ ಪ್ರಯೋಜನಗಳು: ಮಧುಮೇಹಕ್ಕೆ ರಾಮಬಾಣ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar) ನಿಯಂತ್ರಿಸುವಲ್ಲಿ ನಿತ್ಯ ಪುಷ್ಪ ಅತ್ಯಂತ ಪರಿಣಾಮಕಾರಿ. ಇದರ ಎಲೆಗಳ ರಸ ಅಥವಾ ಹೂವನ್ನು ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಇನ್ಸುಲಿನ್ ಉತ್ಪಾದನೆಗೆ ಸಹಾಯವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಈ ಸಸ್ಯದಲ್ಲಿ ‘ವಿನ್‌ಬ್ಲಾಸ್ಟಿನ್’ ಮತ್ತು ‘ವಿನ್‌ಕ್ರಿಸ್ಟಿನ್’ ಎಂಬ ಆಲ್ಕಲಾಯ್ಡ್‌ಗಳಿವೆ. ಇವುಗಳನ್ನು ವೈದ್ಯಕೀಯ ಲೋಕದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಬಳಸಲಾಗುತ್ತದೆ. ಪ್ರಮುಖವಾಗಿ ರಕ್ತದ ಕ್ಯಾನ್ಸರ್ (Leukemia) ಚಿಕಿತ್ಸೆಯಲ್ಲಿ ಇದು ಸಹಕಾರಿ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ: ಅಧಿಕ ರಕ್ತದೊತ್ತಡ (BP)…

Read More

ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಆಭರಣವಾಗಿ ಚಿನ್ನವನ್ನು ಖರೀದಿಸುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ, ಆದಾಯ ತೆರಿಗೆ ಇಲಾಖೆಯ (IT) ಕಿರಿಕಿರಿ ಇಲ್ಲದೆ ಮನೆಯಲ್ಲಿ ಎಷ್ಟು ಪ್ರಮಾಣದ ಚಿನ್ನವನ್ನು ಸಂಗ್ರಹಿಸಿಡಬಹುದು ಎಂಬ ಬಗ್ಗೆ ಅನೇಕರಲ್ಲಿ ಗೊಂದಲವಿದೆ. ಈ ಕುರಿತಾದ ಪ್ರಮುಖ ಮಾಹಿತಿ ಇಲ್ಲಿದೆ. ತೆರಿಗೆ ಇಲಾಖೆಯ ಮಿತಿ ಎಷ್ಟು? ಕಾನೂನಿನ ಪ್ರಕಾರ ಮನೆಯಲ್ಲಿ ಇಂತಿಷ್ಟೇ ಚಿನ್ನ ಇಟ್ಟುಕೊಳ್ಳಬೇಕು ಎಂಬ ಗರಿಷ್ಠ ಮಿತಿ ಇಲ್ಲ. ಆದರೆ, ಒಂದು ವೇಳೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ಸಂದರ್ಭದಲ್ಲಿ, ಯಾವುದೇ ದಾಖಲೆಗಳಿಲ್ಲದೆ (Proof) ಒಬ್ಬ ವ್ಯಕ್ತಿ ಹೊಂದಿರಬಹುದಾದ ಚಿನ್ನದ ಮಿತಿ ಈ ಕೆಳಗಿನಂತಿದೆ: ವಿವಾಹಿತ ಮಹಿಳೆ: 500 ಗ್ರಾಂ ವರೆಗೆ. ಅವಿವಾಹಿತ ಮಹಿಳೆ: 250 ಗ್ರಾಂ ವರೆಗೆ. ಪುರುಷರು (ವಿವಾಹಿತ/ಅವಿವಾಹಿತ): 100 ಗ್ರಾಂ ವರೆಗೆ. ಈ ನಿಗದಿತ ಮಿತಿಯೊಳಗೆ ಚಿನ್ನವಿದ್ದಾಗ ಐಟಿ ಅಧಿಕಾರಿಗಳು ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಆದರೆ, ಈ ಮಿತಿಗಿಂತ ಹೆಚ್ಚಿನ ಚಿನ್ನವಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಅಥವಾ ಆದಾಯದ…

Read More

ಪ್ರಕೃತಿಯಲ್ಲಿ ಸಿಗುವ ಅತ್ಯಂತ ಶಕ್ತಿಶಾಲಿ ಸಸ್ಯಗಳಲ್ಲಿ ನುಗ್ಗೆ ಮರವೂ ಒಂದು. ಇದನ್ನು ‘ಕಲಿಯುಗದ ಸಂಜೀವಿನಿ’ ಎಂದೇ ಕರೆಯಲಾಗುತ್ತದೆ. ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು, ಹೂವು ಮತ್ತು ತೊಗಟೆ ಕೂಡ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ, ನುಗ್ಗೆಕಾಯಿ ಅಥವಾ ನುಗ್ಗೆ ಸೊಪ್ಪಿನ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹತ್ತು ಹಲವು ಲಾಭಗಳಿವೆ ಎಂದು ತಿಳಿದುಬಂದಿದೆ. ಸಕ್ಕರೆ ಕಾಯಿಲೆಗೆ (Diabetes) ಮದ್ದು: ನುಗ್ಗೆಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತವೆ. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಉತ್ತೇಜಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಸಮತೋಲನದಲ್ಲಿರುತ್ತದೆ. ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ಜೀರ್ಣಕ್ರಿಯೆ ಮತ್ತು ಮಲಬದ್ಧತೆ ನಿವಾರಣೆ: ನುಗ್ಗೆಕಾಯಿಯಲ್ಲಿ ಹೇರಳವಾಗಿ ಫೈಬರ್ (ನಾರಿನಂಶ) ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಮಲಬದ್ಧತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳಿಗೆ ಇದು ಉತ್ತಮ ನೈಸರ್ಗಿಕ ಪರಿಹಾರವಾಗಿದೆ. ಪೋಷಕಾಂಶಗಳ ಖಜಾನೆ:…

Read More

ನವದೆಹಲಿ: ಜಾಗತಿಕ ಮಟ್ಟದಲ್ಲಿ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಮಾರ್ಚ್ 15ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಕೆವೈಸಿ (KYC) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಗ್ರಾಹಕರಿಗೆ ಮಾತ್ರ ಇನ್ನು ಮುಂದೆ ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿ ಸೌಲಭ್ಯಗಳು ದೊರೆಯಲಿವೆ. ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಬದಲು, ಮನೆಯಲ್ಲೇ ಕುಳಿತು ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಮುಗಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳ ಎಲ್ಲಾ ಗ್ರಾಹಕರಿಗೂ ಈ ಹೊಸ ನಿಯಮ ಅನ್ವಯವಾಗಲಿದೆ. ಕೆವೈಸಿ ಪ್ರಕ್ರಿಯೆ ಮಾಡುವುದು ಹೇಗೆ? ನಿಮ್ಮ ಮೊಬೈಲ್ ಮೂಲಕ ಕೆವೈಸಿ ಪೂರ್ಣಗೊಳಿಸಲು ಈ…

Read More

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಏರ್ಪಾಡ್ಸ್ (ಇಯರ್ಬಡ್ಸ್) ಮತ್ತು ಹೆಡ್ಫೋನ್ಗಳು ಅವಿಭಾಜ್ಯ ಅಂಗವಾಗಿವೆ. ಪ್ರಯಾಣದ ಸಮಯದಲ್ಲಿ ಸಂಗೀತ ಕೇಳಲು ಅಥವಾ ಕಚೇರಿಯ ಕೆಲಸದ ನಡುವೆ ಫೋನ್ ಕರೆಗಳನ್ನು ಸ್ವೀಕರಿಸಲು ಇವು ಅನಿವಾರ್ಯ. ಆದರೆ, ಇವೆರಡರಲ್ಲಿ ಕಿಿವಿಯ ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಗೊಂದಲ ಅನೇಕರಲ್ಲಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಇವೆರಡರ ವಿನ್ಯಾಸ ಮತ್ತು ಅವು ಕಿಿವಿಯ ಮೇಲೆ ಬೀರುವ ಪರಿಣಾಮಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಏರ್ಪಾಡ್ಸ್ ಅಥವಾ ಇಯರ್ ಬಡ್ಸ್ಗಳ ಅನುಕೂಲ ಮತ್ತು ಅನಾನುಕೂಲ: ಇಯರ್ ಬಡ್ಸ್ ಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಳಸಲು ತುಂಬಾ ಸುಲಭ ಮತ್ತು ಸ್ಟೈಲಿಶ್ ಆಗಿರುತ್ತವೆ. ವ್ಯಾಯಾಮ ಮಾಡುವಾಗ ಅಥವಾ ಪ್ರಯಾಣದ ಸಮಯದಲ್ಲಿ ಇವುಗಳನ್ನು ಸುಲಭವಾಗಿ ಒಯ್ಯಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಕೆಲವು ಮಿತಿಗಳಿವೆ: ನೇರ ಪರಿಣಾಮ: ಇವು ಕಿವಿಯ ಒಳಗಿನ ನಳಿಕೆಗೆ (Ear canal) ನೇರವಾಗಿ ಸೇರುವುದರಿಂದ ಶಬ್ದದ ಅಲೆಗಳು ನೇರವಾಗಿ ಕರ್ಣಪಟಲಕ್ಕೆ (Eardrum) ಅಪ್ಪಳಿಸುತ್ತವೆ. ಇದರಿಂದ ಕಿಿವಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.…

Read More

ಬೆಂಗಳೂರು: ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಎದುರಾಗಿದ್ದು, ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರ ಉದ್ದೇಶಗಳಿಗೆ ಹಂಚಿಕೆ ಮಾಡಿ ಈಗ ಸ್ಮಶಾನಕ್ಕಾಗಿ ಸರ್ಕಾರವೇ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರಭು ಬಿ. ಚೌವಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಗಂಭೀರ ಪರಿಸ್ಥಿತಿಯನ್ನು ಸದನದ ಮುಂದೆ ಬಿಚ್ಚಿಟ್ಟರು. ವಸತಿ ಪ್ರದೇಶಗಳು ಮತ್ತು ತಾಂಡಾಗಳಿಗೆ ಸ್ಮಶಾನ ಭೂಮಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದ್ದರೂ, ಹಲವೆಡೆ ಜಮೀನು ಲಭ್ಯವಾಗುತ್ತಿಲ್ಲ.ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸ್ಮಶಾನಕ್ಕಾಗಿ ₹58 ಕೋಟಿ ವೆಚ್ಚದಲ್ಲಿ ಖಾಸಗಿ ಭೂಮಿಯನ್ನು ಸರ್ಕಾರ ಖರೀದಿಸಿದೆ. ಈ ಹಿಂದೆ ರೈತರು ಸೇರಿದಂತೆ ವಿವಿಧ ಉದ್ದೇಶಗಳಿಗೆ ಸರ್ಕಾರಿ ಭೂಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ. ಇದರಿಂದಾಗಿ ಈಗ ಸ್ಮಶಾನದಂತಹ ಅಗತ್ಯ ಸೌಲಭ್ಯಗಳಿಗೆ ಭೂಮಿ ಇಲ್ಲದಂತಾಗಿದೆ ಎಂದು ಸಚಿವರು ವಿವರಿಸಿದರು.

Read More

ಬೆಂಗಳೂರು: ರಾಜ್ಯದ ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಅಥವಾ ಸರ್ಕಾರಿ ಜಾಗಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವ ಜಾಹೀರಾತುಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ‘ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2026’ ಕ್ಕೆ ವಿಧಾನಸಭೆಯಲ್ಲಿ ಅಧಿಕೃತವಾಗಿ ಅಂಗೀಕಾರ ದೊರೆತಿದೆ. ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಈ ವಿಧೇಯಕವನ್ನು ತರಲಾಗಿದೆ. ಅನಧಿಕೃತ ಜಾಹೀರಾತುಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಎಲ್ಲೆಲ್ಲಿ ಅನ್ವಯ?: ಭೂಮಿ, ಕಟ್ಟಡ, ಗೋಡೆ, ಜಾಹೀರಾತು ಫಲಕ ಹಾಗೂ ಸ್ಟ್ರಕ್ಚರ್ಗಳ ಮೇಲೆ ಹಾಕಲಾಗುವ ಜಾಹೀರಾತುಗಳಿಗೆ ಇದು ಅನ್ವಯಿಸುತ್ತದೆ. ಅನುಮತಿ ಕಡ್ಡಾಯ: ಸಾರ್ವಜನಿಕರಿಗೆ ಕಾಣಿಸುವಂತೆ ಜಾಹೀರಾತು ಪ್ರದರ್ಶಿಸಲು ಇನ್ಮುಂದೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದಿದ್ದರೆ ಅಂತಹ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ವಿನಾಯಿತಿ: ಸಾರ್ವಜನಿಕ ಸಭೆಗಳು ಅಥವಾ ನಗರ ಪಾಲಿಕೆ/ಶಾಸನಾತ್ಮಕ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಜಾಹೀರಾತುಗಳಿಗೆ ಈ ಶುಲ್ಕ ನಿಯಮ ಅನ್ವಯಿಸುವುದಿಲ್ಲ…

Read More

ಬೇಸಿಗೆಯ ಬಿಸಿಲಿನಿಂದ ಪಾರಾಗಲು ಅಥವಾ ಬಾಯಾರಿಕೆ ತಣಿಸಿಕೊಳ್ಳಲು ನಾವೆಲ್ಲರೂ ಫ್ರಿಜ್ನಲ್ಲಿಟ್ಟ ಅತ್ಯಂತ ತಣ್ಣನೆಯ ನೀರನ್ನು (Ice Cold Water) ಕುಡಿಯಲು ಇಷ್ಟಪಡುತ್ತೇವೆ. ಆದರೆ, ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅತಿಯಾದ ತಣ್ಣನೆಯ ನೀರು ಕುಡಿಯುವುದು ಕೇವಲ ಗಂಟಲು ನೋವಿಗೆ ಮಾತ್ರವಲ್ಲದೆ, ಜೀರ್ಣಕ್ರಿಯೆ ಮತ್ತು ಹೃದಯದ ಬಡಿತದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವರದಿಗಳು ತಿಳಿಸಿವೆ. ಜೀರ್ಣಕ್ರಿಯೆಗೆ ಅಡ್ಡಿ: ಸಾಮಾನ್ಯವಾಗಿ ನಾವು ಆಹಾರ ಸೇವಿಸಿದ ನಂತರ ಅಥವಾ ಆಹಾರದ ಜೊತೆಗೆ ತಣ್ಣನೆಯ ನೀರನ್ನು ಕುಡಿದಾಗ, ಅದು ದೇಹದ ಉಷ್ಣತೆಯನ್ನು ದಿಢೀರ್ ಎಂದು ಇಳಿಸುತ್ತದೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಂಡು ಜೀರ್ಣಕ್ರಿಯೆ ನಿಧಾನವಾಗುತ್ತದೆ. ನಾವು ತಿಂದ ಆಹಾರದಲ್ಲಿರುವ ಕೊಬ್ಬಿನಂಶವು ತಣ್ಣನೆಯ ನೀರಿನ ಸಂಪರ್ಕಕ್ಕೆ ಬಂದಾಗ ಗಟ್ಟಿಯಾಗುತ್ತದೆ, ಇದು ಜೀರ್ಣವಾಗಲು ಕಷ್ಟವಾಗುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹೃದಯದ ಬಡಿತದ ಮೇಲೆ ಪರಿಣಾಮ: ಸಂಶೋಧನೆಯ ಪ್ರಕಾರ, ಅತಿಯಾದ ತಣ್ಣನೆಯ ನೀರು ಕುಡಿಯುವುದರಿಂದ ದೇಹದ…

Read More

ಬೆಂಗಳೂರು: ರಾಜ್ಯದಾದ್ಯಂತ ಹಲವು ದಿನಗಳಿಂದ ವಾಡಿಕೆಯಂತಿದ್ದ ಬಿಸಿಲಿನ ಬೇಗೆಯ ನಡುವೆ ಈಗ ವರುಣನ ಪ್ರವೇಶವಾಗಿದೆ. ಸುಮಾರು 13 ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲಿಗೆ ಬಾಲಕ ಸಾವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಿಡಿಲಿನ ಅಬ್ಬರಕ್ಕೆ 8ನೇ ತರಗತಿ ವಿದ್ಯಾರ್ಥಿ ಮಂಜುನಾಥ (14) ಎಂಬಾತ ಬಲಿಯಾಗಿದ್ದಾನೆ. ಮಳೆಯ ಆರ್ಭಟದ ನಡುವೆ ಸಿಡಿಲು ಬಡಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಹಲವೆಡೆ ಆಲಿಕಲ್ಲು ಮಳೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಹಾಸನ ಜಿಲ್ಲೆಯ ಆಲೂರು ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಬಿರುಗಾಳಿಗೆ ಮರದ ರಂಬೆ-ಕೊಂಬೆಗಳು ಧರೆಗುರುಳಿವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸುತ್ತಮುತ್ತಲಿನ ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ತಂಪಿನ ಅನುಭವ ನೀಡಿದೆ. ಮೈಸೂರು ಜಿಲ್ಲೆಯ ಬೆಟ್ಟದಪುರ ಹಾಗೂ ಮೈಸೂರು ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ದಾವಣಗೆರೆ, ಹರಿಹರ,ಹೊನ್ನಾಳಿ, ವಿಜಯನಗರ…

Read More