Author: kannadanewsnow57

ಬೆಂಗಳೂರು : ಬೆಂಗಳೂರಿನಲ್ಲಿ ನಂದಿನಿ ತುಪ್ಪ ಕಲಬೆರೆಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇದೀಗ ಕಿಂಗ್ ಪಿನ್ ದಂಪತಿಯನ್ನು ಬಂಧಿಸಿದ್ದಾರೆ. ನಂದಿನಿ ತುಪ್ಪ ಕಲಬೆರೆಕೆ ಪ್ರಕರಣದಲ್ಲಿ ಗಂಡ, ಹೆಂಡತಿಯೇ ಕಿಂಗ್ ಪಿನ್ ಆಗಿದ್ದು, ಸಿಸಿಬಿ ಪೊಲೀಸರು ಇದೀಗ ದಂಪತಿ ಶಿವಕುಮಾರ್, ರಮ್ಯಾರನ್ನು ಬಂಧಿಸಿದ್ದಾರೆ. ಸದ್ಯ ನಂದಿನಿ ತುಪ್ಪ ಕಲಬೆರೆಕೆ ಪ್ರಕರಣ ಸಂಬಂಧ ಆರೋಪಿಗಳಾದ ಶಿವಕುಮಾರ್ ಹಾಗೂ ರಮ್ಯಾಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಕಲಿ ನಂದಿನಿ ತುಪ್ಪ ತಯಾರಿ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.  ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕ ಹೊಂದಿದ್ದರು.

Read More

ಬೆಂಗಳೂರು: ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು. ಕಾವೇರಿ ನಿವಾಸದಲ್ಲಿ ಕ್ರಿಕೆಟ್ ತಂಡದ ಪ್ರತೀ ಆಟಗಾರರನ್ನು ವೈಯುಕ್ತಿಕವಾಗಿ ಅಭಿನಂಧಿಸಿ, ಸನ್ಮಾನಿಸಿದ ಬಳಿಕ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದರು. ಹಾಗೆಯೇ ಭಾರತ ತಂಡದ ಇತರೆ ರಾಜ್ಯಗಳನ್ನು ಪ್ರತಿ‌ನಿಧಿಸುವ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ತಂಡದಲ್ಲಿದ್ದ ಇತರೆ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ಸಿಎಂ ವಿಶೇಷವಾಗಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಹಾಗೂ ಉನ್ನತ ಶಿಕ್ಷಣ ಸಚಿವರಾದ…

Read More

ನ್ಯೂಯಾರ್ಕ್: ಜಗತ್ತಿನಾದ್ಯಂತ ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಬಾಲಕಿಯ ಕೊಲೆಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ವಿಶ್ವಸಂಸ್ಥೆಯ ಅಧ್ಯಯನ ತಿಳಿಸಿದೆ. 2024 ರಲ್ಲಿ ಸುಮಾರು 50,000 ಮಹಿಳೆಯರು ಮತ್ತು ಹುಡುಗಿಯರು ಆತ್ಮೀಯ ಪಾಲುದಾರರು ಅಥವಾ ಕುಟುಂಬ ಸದಸ್ಯರಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿ ಮತ್ತು ವಿಶ್ವಸಂಸ್ಥೆಯ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನು ಗುರುತಿಸಲು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದ್ದಾರೆ. ವಿಶ್ವಾದ್ಯಂತ ಕೊಲ್ಲಲ್ಪಟ್ಟ ಮಹಿಳೆಯರಲ್ಲಿ 60 ಪ್ರತಿಶತ ಮಹಿಳೆಯರು ತಂದೆ, ಚಿಕ್ಕಪ್ಪ, ತಾಯಂದಿರು ಮತ್ತು ಸಹೋದರರಂತಹ ಪಾಲುದಾರರು ಅಥವಾ ಸಂಬಂಧಿಕರಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ಹೇಳಿದೆ. 117 ದೇಶಗಳ ದತ್ತಾಂಶವನ್ನು ಆಧರಿಸಿದ 50,000 ಅಂಕಿ ಅಂಶವು ದಿನಕ್ಕೆ 137 ಮಹಿಳೆಯರು ಅಥವಾ ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಎಂದು ವರದಿ ಹೇಳಿದೆ. 2023 ರಲ್ಲಿ ವರದಿಯಾದ ಅಂಕಿ ಅಂಶಕ್ಕಿಂತ ಒಟ್ಟು ಸ್ವಲ್ಪ ಕಡಿಮೆಯಾಗಿದೆ, ವರದಿಯ ಪ್ರಕಾರ ಇದು ನಿಜವಾದ ಇಳಿಕೆಯನ್ನು ಸೂಚಿಸುವುದಿಲ್ಲ…

Read More

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಸೊಹಾಗ್‌ಪುರ ಪೊಲೀಸ್ ಠಾಣೆಯ ಬಂಗಂಗಾ ಪ್ರದೇಶದಲ್ಲಿ ಸೂಕ್ಷ್ಮ ಮತ್ತು ನಿಗೂಢ ಪ್ರಕರಣವೊಂದು ಬೆಳಕಿಗೆ ಬಂದಿದೆ. 13 ವರ್ಷದ ಧೀರೇಂದ್ರ ಪ್ರಜಾಪತಿ ಭಾನುವಾರ ರಾತ್ರಿ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಅವನ ಹಾಸಿಗೆಯ ಬಳಿ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ಮಗು ಹೀಗೆ ಬರೆದಿದೆ, “ಅಮ್ಮಾ, ನಾನು ದೇವರನ್ನು ಪ್ರಾರ್ಥಿಸಲು ಮನೆಯಿಂದ ಹೊರಡುತ್ತಿದ್ದೇನೆ. ಅಮ್ಮ, ಅಪ್ಪ, ಸಹೋದರರು ಮತ್ತು ಸಹೋದರಿಯರೇ, ದಯವಿಟ್ಟು ನಿಮ್ಮನ್ನು ನೋಡಿಕೊಳ್ಳಿ, ನಾನು ಚೆನ್ನಾಗಿದ್ದೇನೆ ಎಂದು ಬರೆದಿದ್ದಾನೆ. ಈ ಕೈಬರಹದ ಪತ್ರವು ಅವನ ಕುಟುಂಬಕ್ಕೆ ಆಘಾತವನ್ನುಂಟುಮಾಡಿತು. ಧೀರೇಂದ್ರ ಬೆಳಿಗ್ಗೆ 12:00 ರಿಂದ 1:00 ರ ನಡುವೆ ಸದ್ದಿಲ್ಲದೆ ಮನೆಯಿಂದ ಹೊರಟುಹೋದನೆಂದು ಕುಟುಂಬ ಸದಸ್ಯರು ಹೇಳುತ್ತಾರೆ. ಬೆಳಿಗ್ಗೆ ಅವನು ಹಾಸಿಗೆಯಲ್ಲಿ ಸಿಗದಿದ್ದಾಗ, ಅವನ ಹುಡುಕಾಟ ನಡೆಸಿದ್ದಾರೆ. ಕುಟುಂಬವು ಆರಂಭದಲ್ಲಿ ಬಂಗಂಗಾ ಪ್ರದೇಶ, ಸುತ್ತಮುತ್ತಲಿನ ಹಳ್ಳಿಗಳು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಿತು, ಆದರೆ ನಿರಾಶೆಯನ್ನು ಎದುರಿಸಿತು. ಇದರ ನಂತರ, ತಂದೆ ಧರ್ಮೇಂದ್ರ ಪ್ರಜಾಪತಿ ಸೊಹಾಗ್‌ಪುರ ಪೊಲೀಸ್ ಠಾಣೆಗೆ ಹೋಗಿ…

Read More

ಕೊಪ್ಪಳ : ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುವ ಪೋಷಕರೇ ಎಚ್ಚರ,ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ವ್ಯಕ್ತಿಗೆ 26 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಪಾಟೀಲ್ ಅವರು, ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ವ್ಯಕ್ತಿಗೆ 26 ಸಾವಿರ ರೂ. ದಂಡ ಹಾಗೂ ಬಾಲಕನಿಗೆ ಒಂದು ದಿನ ಕೋರ್ಟ್ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. 2025, ಜ.7ರಂದು ನಗರದಲ್ಲಿ ಬಾಲಕ ಅತಿವೇಗ, ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದ. ಸಂಚಾರಿ ಠಾಣೆಯ ಪೊಲೀಸರು ಬಾಲಕನ ವಿಚಾರಣೆ ನಡೆಸಿದ್ದರು. ಬೈಕ್ ನೀಡಿದ ಮಾಲೀಕ ತಿಮ್ಮಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು.

Read More

ಬೆಂಗಳೂರು : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆರ ಜವಾಬ್ದಾರಿಗಳೇನು? ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಅಂಗನವಾಡಿ ಕಾರ್ಯಕರ್ತೆಯರು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವುದು, ಆರೋಗ್ಯ ತಪಾಸಣೆ, ರೋಗನಿರೋಧಕ ಲಸಿಕೆಗಳು, ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಶಿಕ್ಷಣ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜನ ಸಮುದಾಯದ ಸಮೀಕ್ಷೆಯನ್ನು ಕೈಗೊಂಡು, ಸಹಾಯ ಅಗತ್ಯವಾಗಿರುವಂಥವರ ವಿವರ ಸಂಗ್ರಹಿಸುವುದು. ಆರು ವರ್ಷದ ಕೆಳಗಿನ ಮಕ್ಕಳ ಸಂಖ್ಯೆ, ಗರ್ಭಿಣಿ ಮತ್ತು ಹಾಲೂಣಿಸುತ್ತಿರುವ ತಾಯಂದಿರು, ಇವುಗಳನ್ನೂ ಸಂಗ್ರಹಿಸಬೇಕು. ಕುಟುಂಬಗಳ ಸಂಖ್ಯೆ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ, ಕುಟುಂಬದ ಆದಾಯ ಇವುಗಳನ್ನು ಸಂಗ್ರಹಿಸಬೇಕು. ಮುಖ್ಯ ಅಂಕಿ-ಅಂಶಗಳಾದ ಜನನ-ಮರಣಗಳ ದಾಖಲೆಯನ್ನೂ ಇಡಬೇಕು. 3 ಮತ್ತು 6 ವರ್ಷಗಳ ನಡುವಣ ಮಕ್ಕಳ ಶಾಲಾಪೂರ್ವ ಶಿಕ್ಷಣವನ್ನು ಕೈಗೊಳ್ಳಬೇಕು. 0-6 ವರ್ಷಗಳ ನಡುವಿನ ಮಕ್ಕಳ ಮತ್ತು ಗರ್ಭಿಣಿ ಹಾಗೂ ಹಾಲೂಣಿಸುತ್ತಿರುವ ತಾಯಂದಿರಿಗೆ ಅಧಿಕ ಪೋಷಕಾಂಶ ಇರುವ ಅಹಾರವನ್ನು ಒದಗಿಸುವುದು. ಪ್ರಾಥಮಿಕ ಆರೋಗ್ಯ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು…

Read More

ದಾವಣಗೆರೆ : ಮಕ್ಕಳನ್ನು ಒಂಟಿಯಾಗಿ ಬಿಡುವ ಪೋಷಕರೇ ಎಚ್ಚರ, ನೀರು ತುಂಬಿದ ಪಾತ್ರೆಯಲ್ಲಿ ಮುಳುಗಿ 2 ವರ್ಷದ ಮಗು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಮನೆ ಹಿತ್ತಲಿನ ಬಚ್ಚಲ ಕೋಣೆಯಲ್ಲಿರುವ ನೀರು ತುಂಬಿದ ಪಾತ್ರೆಯಲ್ಲಿ ಮುಳುಗಿ ಎರಡು ವರ್ಷದ ಮಗು ಮೃತಪಟ್ಟಿದೆ. ರಾಜೇಶ್ವರಿ ಮಂಜುನಾಥ್ ದಂಪತಿಯ ಮೂರನೇ ಮಗು ವೇದಾ ಮೃತ ಹೆಣ್ಣುಮಗು. ಮನೆಯ ಹಿತ್ತಲಿನಲ್ಲಿ ಇರಿಸಿದ್ದ ನೀರಿನ ಪಾತ್ರೆಯಲ್ಲಿ ಆಟವಾಡುತ್ತಾ ಮಗು ಬಿದ್ದು ಮೃತಪಟ್ಟಿದೆ.

Read More

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಘಟಕ ಕಾರ್ಯಕ್ರಮದಡಿ ಎಲ್ಲ ವರ್ಗದ ರೈತರಿಗೆ ಶೇ. 90 ರ ಸಹಾಯಧನದಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ವಿತರಿಸಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಕಾರ್ಯಕ್ರಮ ನಿಗಧಿಯಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದಡಿ ಅನುದಾನ ಲಭ್ಯವಿದ್ದು, ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಸಹಾಯಧನ ಬಿಡುಗಡೆ ಮಾಡಲಾಗುವುದು. ಆದ್ದರಿಂದ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಪಡೆದುಕೊಳ್ಳಲು ಇಚ್ಛಿಯಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರುಗಳಾದ ಧಾರವಾಡ ರಾಜಶೇಖರ ಅನಗೌಡರ (8277931282), ಹುಬ್ಬಳ್ಳಿ ಮಂಜುಳಾ ತೆಂಬದ (8277931288), ಕಲಘಟಗಿ ಅಮರ ನಾಯ್ಕರ (8277931291), ಕುಂದಗೋಳ ಭಾರತಿ ಮೆಣಸಿನಕಾಯಿ (9071449976), ನವಲಗುಂದ ರವೀಂದ್ರಗೌಡ ಪಾಟೀಲ (8277931295) ಸಂಪರ್ಕಿಸಬಹುದು ಎಂದು ಜಂಟಿ…

Read More

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ನವಂಬರ್ 25, 2025 ರಂದು ಪ್ರಕಟಿಸಲಾಗಿದೆ. ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ 43,573 ಪುರುಷರು ಮತ್ತು 30,743 ಮಹಿಳೆಯರು ಸೇರಿ ಒಟ್ಟು 74,316 ಮತದಾರರಿದ್ದಾರೆ ಎಂದು ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಗಳು ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಕಟಿತ ಕರಡು ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಧಾರವಾಡ, ಜಿಲ್ಲಾಧಿಕಾರಿಗಳು ಗದಗ, ಜಿಲ್ಲಾಧಿಕಾರಿಗಳು ಹಾವೇರಿ ಮತ್ತು ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಕಟಿತ ಕರಡು ಮತದಾರರ ಪಟ್ಟಿಯು ಬೆಂಗಳೂರು ಚುನಾವಣಾಧಿಕಾರಿ ಅವರ ವೆಬ್ಸೈಧಟ್ www.ceokarnatake.kar.nic.in ನಲ್ಲಿ ಹಾಗೂ ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದ ವೆಬ್ಸೈೈಟ್…

Read More

ಚಿತ್ರದುರ್ಗ : ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮುರುಘಾ ಶ್ರೀ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ ಇಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟಿಸಲಿದ್ದು, ನ್ಯಾಯಮೂರ್ತಿ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ. ಬೆಳಗ್ಗೆ 11:30 ಬೆಳಗ್ಗೆ ಸ್ವಾಮೀಜಿ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಆರೋಪ ಸಾಬೀತಾದರೆ ಕನಿಷ್ಠ 20 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ನಜ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪ್ರಕರಣದ ವಾದ-ಪ್ರತಿವಾದವು ಪೂರ್ಣಗೊಂಡಿದೆ. ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸಂಬಂಧ ಸುದೀರ್ಘ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಸಂತ್ರಸ್ತೆಯ ಪರ ಅಂತಿಮ ವಾದ ಮಂಡಿಸಲಾಗಿದ್ದು, ವಾದ ಆಲಿಸಿದ ನ್ಯಾಯಾಲಯ…

Read More