Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಆದಾಯ ತೆರಿಗೆ ಪಾವತಿದಾರರಿಗೆ ಪ್ರಮುಖ ಸೂಚನೆ ಬಂದಿದೆ. 2026-27ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಮೊದಲ ಮುಂಗಡ ತೆರಿಗೆ (Advance Tax) ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ವರ್ಷಕ್ಕೆ 10,000 ರೂ.ಗಿಂತ ಹೆಚ್ಚಿನ ಅಂದಾಜು ತೆರಿಗೆ ಹೊಣೆಗಾರಿಕೆ ಹೊಂದಿರುವವರು ಈ ದಿನಾಂಕದೊಳಗೆ ತಮ್ಮ ಒಟ್ಟು ಮುಂಗಡ ತೆರಿಗೆಯ ಶೇಕಡಾ 15 ರಷ್ಟನ್ನು ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ, ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಆದಾಯ ತೆರಿಗೆ ನಿಯಮಗಳು 2026 ರ ಅಡಿಯಲ್ಲಿ ಸಂಪೂರ್ಣವಾಗಿ ಜಾರಿಗೆ ಬರುತ್ತಿರುವ ಮೊದಲ ಮುಂಗಡ ತೆರಿಗೆ ಪಾವತಿ ಇದಾಗಿದೆ. ನಿಗದಿತ ಗಡುವಿನೊಳಗೆ ಅಗತ್ಯ ಮೊತ್ತವನ್ನು ಪಾವತಿಸದಿದ್ದರೆ, ತೆರಿಗೆ ಕಾಯ್ದೆಯ ನಿಯಮಗಳ ಪ್ರಕಾರ ಬಡ್ಡಿ ಪಾವತಿಸಬೇಕಾಗುತ್ತದೆ. ಎಟಿಎಂ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ ವಿವಿಧ ಬ್ಯಾಂಕುಗಳು ಕೆಲವು ಎಟಿಎಂ ವಹಿವಾಟುಗಳು ಮತ್ತು ಸಂಬಂಧಿತ ಸೇವೆಗಳ ಮೇಲಿನ ಶುಲ್ಕವನ್ನು ಪರಿಷ್ಕರಿಸಿವೆ. ಉಚಿತ ವಹಿವಾಟಿನ ಮಿತಿ ಮೀರಿದ ನಗದು ಹಿಂಪಡೆಯುವಿಕೆ, ಮಿನಿ ಸ್ಟೇಟ್ಮೆಂಟ್ ಮತ್ತು ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆಗೆ ಅನ್ವಯಿಸುವ…
ಬೆಂಗಳೂರು : ಮಕ್ಕಳು 18 ವರ್ಷ ಪೂರೈಸಿದ ತಕ್ಷಣ ಕಾನೂನುಬದ್ಧವಾಗಿ ವಯಸ್ಕರಾಗುತ್ತಾರೆ. ಭಾರತದಲ್ಲಿ 18 ವರ್ಷ ದಾಟುತ್ತಿದ್ದಂತೆ ಹಲವು ಕಾನೂನು ಮತ್ತು ಆರ್ಥಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದಕ್ಕಾಗಿ ಕೆಲವು ಪ್ರಮುಖ ಸರ್ಕಾರಿ ದಾಖಲೆಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಅನೇಕ ಪೋಷಕರು ಕಾಲೇಜು ಪ್ರವೇಶ, ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಗಳ ತುರ್ತು ಅಗತ್ಯ ಬರುವವರೆಗೂ ಈ ಬಗ್ಗೆ ಗಮನ ಹರಿಸುವುದಿಲ್ಲ. ಆ ಬಳಿಕ ಕೊನೆ ಕ್ಷಣದಲ್ಲಿ ಓಡಾಡುವುದು ತಪ್ಪಿಸಲು, ಮಗುವಿಗೆ 18 ವರ್ಷ ತುಂಬಿದ ತಕ್ಷಣ ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಜರೂರಾಗಿ ಮಾಡಿಸುವುದು ಜಾಣತನ. 1. ಪ್ಯಾನ್ ಕಾರ್ಡ್ (PAN Card) ಅತ್ಯಂತ ಕಡ್ಡಾಯ 18 ವರ್ಷದ ನಂತರ ಯಾವುದೇ ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆಯಲು, ಫಿಕ್ಸೆಡ್ ಡೆಪಾಸಿಟ್ (FD) ಮಾಡಲು ಅಥವಾ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಪ್ಯಾನ್ ಕಾರ್ಡ್ ಅತ್ಯಗತ್ಯ. ಒಂದು ವೇಳೆ ಯುವಕರು ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದರೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ಶಿಪ್ ಪಡೆಯಬೇಕಾಗಿದ್ದರೆ ಪ್ಯಾನ್ ಕಾರ್ಡ್…
ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ನಗರ ಪ್ರದೇಶದ ಮಾದರಿಯಲ್ಲೇ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒದಗಿಸಬೇಕಾದ 15 ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 61.43 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಅವರಿಗೆ ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಮಗಳಲ್ಲಿ ಜಾರಿಯಾಗಲಿರುವ 15 ಪ್ರಮುಖ ಸೌಲಭ್ಯಗಳು: ಶುದ್ಧ ಕುಡಿಯುವ ನೀರು: ಪ್ರತಿ ಕುಟುಂಬಕ್ಕೆ ದಿನಕ್ಕೆ ಕನಿಷ್ಠ 55 ಲೀಟರ್ ಶುದ್ಧ ನೀರು ಒದಗಿಸುವುದು ಮತ್ತು ಶೇ. 80 ರಷ್ಟು ಮನೆಗಳಿಗೆ ವೈಯಕ್ತಿಕ ನಳ ಸಂಪರ್ಕ ನೀಡುವುದು. ವೈಯಕ್ತಿಕ ಶೌಚಾಲಯ: ‘ನಿರ್ಮಲ ಭಾರತ ಅಭಿಯಾನ’ದಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಹಾಗೂ ಶಾಲೆ-ಅಂಗನವಾಡಿಗಳಲ್ಲಿ ನೈರ್ಮಲ್ಯ ಕಾಪಾಡುವುದು. ರಸ್ತೆ ನಿರ್ಮಾಣ: ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಸಜ್ಜಿತ ಗ್ರಾಮೀಣ…
ಮುಂಬೈ: ನೀವು ಬ್ಯಾಂಕ್ಗಳಿಂದ ಸಾಲ (Loan) ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾಲಗಾರರಿಗೆ ಶಾಕ್ ನೀಡುವಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ನಿಮ್ಮ ಸಿಬಿಲ್ ಸ್ಕೋರ್ 730 ಕ್ಕಿಂತ ಕಡಿಮೆ ಇದ್ದರೆ, ಇನ್ಮುಂದೆ ನಿಮಗೆ ಸಾಲ ಸಿಗುವುದು ಭಾರಿ ಕಷ್ಟವಾಗಬಹುದು! ಬ್ಯಾಂಕಿಂಗ್ ವಲಯದಲ್ಲಿನ ಆರ್ಥಿಕ ಶಿಸ್ತು ಮತ್ತು ಭವಿಷ್ಯದ ನಷ್ಟವನ್ನು ತಡೆಯುವ ಉದ್ದೇಶದಿಂದ ಆರ್ಬಿಐ ‘ಎಕ್ಸ್ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL – Expected Credit Loss) ಹೆಸರಿನ ಹೊಸ ನಿಯಮಾವಳಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 2027) ಈ ಹೊಸ ನಿಯಮಗಳು ಅಧಿಕೃತವಾಗಿ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ. ಏನಿದು ಇಸಿಎಲ್ (ECL) ನಿಯಮ? ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಕಾರ, ಗ್ರಾಹಕರು ಸಾಲದ ಕಂತುಗಳನ್ನು (EMI) ಕಟ್ಟದೆ ಸುಸ್ತಿದಾರರಾದ (Default) ಬಳಿಕವಷ್ಟೇ ಬ್ಯಾಂಕುಗಳು ಕ್ರಮ…
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆರ್ಥಿಕ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇನ್ಮುಂದೆ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯ (KAMS) ಮೊಬೈಲ್ ಆಪ್ ಮೂಲಕ ಬೆಳಗ್ಗೆ 10:00 ಗಂಟೆಯೊಳಗೆ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಸರ್ಕಾರ ಆದೇಶಿಸಿದೆ. ಇದರೊಂದಿಗೆ, ಪಾರದರ್ಶಕ ಆಡಳಿತ ಮತ್ತು ನಿಖರವಾದ ಸ್ಥಳ ಪರಿಶೀಲನೆಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು (Geo Coordinates) ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಏನಿದು ಹೊಸ ನಿಯಮ? ಪ್ರಮುಖ ಅಂಶಗಳು ಇಲ್ಲಿವೆ: ಬೆಳಗ್ಗೆ 10 ಗಂಟೆಗೆ ಹಾಜರಾತಿ ಕಡ್ಡಾಯ: ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿಯನ್ನು HRMS ನ ಕರ್ತವ್ಯ (KAMS) ಆಪ್ ಮೂಲಕವೇ ದಾಖಲಿಸಬೇಕು. ಕಚೇರಿಗಳ ಜಿಯೋ ಟ್ಯಾಗಿಂಗ್: ಪ್ರತಿಯೊಂದು ಸರ್ಕಾರಿ ಕಚೇರಿಯ ನಿಖರವಾದ ರೇಖಾಂಶ ಮತ್ತು ಅಕ್ಷಾಂಶಗಳನ್ನು (Geo-Coordinates) HRMS-ESS ಆಪ್ ಮೂಲಕ ಸೆರೆಹಿಡಿಯಲು ಸೂಚಿಸಲಾಗಿದೆ. ಅಧಿಕಾರಿಗಳ ನೇಮಕ: ಜಿಯೋ ನಿರ್ದೇಶಾಂಕಗಳನ್ನು ದಾಖಲಿಸಲು ಪ್ರತಿಯೊಂದು ಕಚೇರಿಯಿಂದ ಒಬ್ಬ ಗ್ರೂಪ್…
ಬೆಂಗಳೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆಯಲು ಈಗ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹೌದು, ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರ ಫಲಾನುಭವಿಗಳ ಪರಿಷ್ಕರಣೆಗೆ ಮುಂದಾಗಿದ್ದು, ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಫಲಾನುಭವಿಗಳು ಇಂದಿನಿಂದ ಒಂದು ತಿಂಗಳೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಅವರ ಖಾತೆಗೆ ಬರುತ್ತಿದ್ದ 2,000 ರೂಪಾಯಿ ಹಣ ಸ್ಥಗಿತಗೊಳ್ಳಲಿದೆ . ಪರಿಷ್ಕರಣೆಗೆ ಕಾರಣವೇನು? ರಾಜ್ಯದಲ್ಲಿ ಸದ್ಯ ಸುಮಾರು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ . ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ಸಂಗ್ರಹಿಸಿದ ವಿವರಗಳ ಪ್ರಕಾರ, ಯೋಜನೆಗೆ ಒಳಪಟ್ಟಿದ್ದ ಸುಮಾರು 1 ಲಕ್ಷದ 48 ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಮೃತಪಟ್ಟವರ ಖಾತೆಗಳಿಗೂ ಕಳೆದ ಐದು ತಿಂಗಳಿನಿಂದ ಹಣ ಜಮಾವಣೆಯಾಗುತ್ತಿದ್ದು, ಈವರೆಗೆ ಸುಮಾರು 128 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕೆಲವೆಡೆ ಮೃತಪಟ್ಟವರ ಹೆಸರಿನಲ್ಲಿ ಬೇರೆಯವರು…
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗಿರುವ ‘ಸೇತುಬಂಧ’ (Bridge Course) ಉಪಕ್ರಮದ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ SATS (ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ದಾಖಲಿಸುವಂತೆ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಭೌತಿಕ ದಾಖಲಾತಿಗೆ ಮುಕ್ತಿ: ಆನ್ ಲೈನ್ ನಲ್ಲೇ ವರದಿ ಲಭ್ಯ ಈ ಹಿಂದೆ ಸೇತುಬಂಧದ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು SAP ನಮೂನೆಗಳಾದ 4ಎ, 4ಬಿ ಮತ್ತು 5ಎ, 5ಬಿ ಗಳಲ್ಲಿ ಭೌತಿಕವಾಗಿ ದಾಖಲಿಸಬೇಕಾಗಿತ್ತು. ಆದರೆ ಪ್ರಸ್ತುತ SATS ತಂತ್ರಾಂಶದಲ್ಲಿ ಹೊಸದಾಗಿ ‘ಸೇತುಬಂಧ ಮಾಡ್ಯೂಲ್’ (Bridge Course Module) ಅನ್ನು ಸೃಜಿಸಲಾಗಿದ್ದು, ಶಿಕ್ಷಕರು ತಮ್ಮ LBA ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿ ತರಗತಿ ಹಾಗೂ ವಿಷಯವಾರು ಅಂಕ/ಶ್ರೇಣಿಗಳನ್ನು ಕಡ್ಡಾಯವಾಗಿ…
ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 9 ಮತ್ತು 10ನೇ ತರಗತಿಗೂ ಉಚಿತ ಪ್ರವೇಶವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಮಹತ್ವದ ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಸರ್ಕಾರದ ಸುತ್ತೋಲೆ ಮತ್ತು ಹಿನ್ನೆಲೆ ಕಳೆದ ಮೇ 21, 2026 ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿಶೇಷ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಇದರ ಅನ್ವಯ, ಇದುವರೆಗೆ 8ನೇ ತರಗತಿಯವರೆಗೆ ಮಾತ್ರ ಸೀಮಿತವಾಗಿದ್ದ ಆರ್ಟಿಇ ಅಡಿಯ ಉಚಿತ ಶಿಕ್ಷಣ ಸೌಲಭ್ಯವನ್ನು SC ಮತ್ತು ST ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವಂತೆ 9 ಮತ್ತು 10ನೇ ತರಗತಿಗಳಿಗೂ ವಿಸ್ತರಿಸಲಾಗಿತ್ತು. ಈ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸರ್ಕಾರ ಮುಂದಾಗಿತ್ತು. ಖಾಸಗಿ ಶಾಲೆಗಳ ಒಕ್ಕೂಟದ…
ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯದಲ್ಲಿ ಅಕ್ಕಿ ದರದಲ್ಲೂ ಗಮನಾರ್ಹ ಏರಿಕೆಯಾಗಿದ್ದು, ಕುಟುಂಬಗಳ ಅಡುಗೆ ಬಜೆಟ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಮೂಡಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಅಕ್ಕಿಗಳ ಬೆಲೆ ಏರಿಕೆಯಾಗಿದ್ದು, ಪ್ರತಿ ಕೆಜಿ ಅಕ್ಕಿಗೆ ₹6ರಿಂದ ₹10ರವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 25ರಿಂದ 26 ಕೆಜಿ ತೂಕದ ಅಕ್ಕಿ ಚೀಲಗಳ ದರದಲ್ಲಿ ಸುಮಾರು ₹150ರವರೆಗೆ ಏರಿಕೆ ದಾಖಲಾಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತಿಗೆ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತಗೊಂಡಿದ್ದು, ಇದರ ನೇರ ಪರಿಣಾಮವಾಗಿ ದರಗಳು ಏರಿಕೆಯಾಗಿವೆ. ಮಾರುಕಟ್ಟೆ ಮೂಲಗಳ ಪ್ರಕಾರ, ಅಕ್ಕಿಯ ಕೊರತೆಯ ಪರಿಸ್ಥಿತಿ ಮುಂದಿನ ನವೆಂಬರ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ.…
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಅರ್ಹರಲ್ಲದವರು ಮತ್ತು ಮೃತಪಟ್ಟ ಮಹಿಳೆಯರ ಖಾತೆಗಳಿಗೂ ಹಣ ಸಂದಾಯವಾಗುತ್ತಿರುವುದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯೋಜನೆಯನ್ನು ಬೃಹತ್ ಮಟ್ಟದಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ. ಇಲಾಖೆಯ ಈ ಕ್ರಮದಿಂದಾಗಿ ಯೋಜನೆಯಡಿ ನೋಂದಣಿಯಾಗಿದ್ದ ಒಟ್ಟು 1.30 ಕೋಟಿ ಫಲಾನುಭವಿಗಳ ಪೈಕಿ ಬರೋಬ್ಬರಿ 3.89 ಲಕ್ಷ ಮಂದಿಗೆ ದೊಡ್ಡ ಶಾಕ್ ಎದುರಾಗಿದೆ. ಇಲಾಖೆಯು ನಡೆಸಿರುವ ತನಿಖೆ ಮತ್ತು ಪರಿಶೀಲನೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಒಟ್ಟು 3.89 ಲಕ್ಷ ಅನರ್ಹ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಈ ಪೈಕಿ 1.94 ಲಕ್ಷ ಫಲಾನುಭವಿಗಳು ನಿಯಮ ಬಾಹಿರವಾಗಿ ಐಟಿ (ಆದಾಯ ತೆರಿಗೆ) ಮತ್ತು ಜಿಎಸ್ಟಿ ಪಾವತಿಸುತ್ತಿರುವುದು ಪತ್ತೆಯಾಗಿದೆ. ಇನ್ನುಳಿದಂತೆ, ಈಗಾಗಲೇ ಮೃತಪಟ್ಟಿರುವ 1.95 ಲಕ್ಷ ಮಹಿಳೆಯರ ಖಾತೆಗಳಿಗೂ ಮಾಸಿಕ ಧನಸಹಾಯ ತಲುಪುತ್ತಿದ್ದು, ಅದನ್ನು ಈಗ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲೇ ಪತ್ತೆಯಾದ ಅನರ್ಹರು ಮಹಿಳಾ ಮತ್ತು…














