Author: kannadanewsnow57

ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಹಾಗೂ ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ (ಬಿ.ಸಿ. ಖಂಡೂರಿ) ಅವರು ಮಂಗಳವಾರ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದವು ಎನ್ನಲಾಗಿದ್ದು, ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೇನಾ ಜೀವನದಿಂದ ರಾಜಕೀಯದವರೆಗೆ… ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಖಂಡೂರಿ ಅವರು, ನಿವೃತ್ತಿಯ ಬಳಿಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು: ಮೊದಲ ಅವಧಿ: 2007 ರಿಂದ 2009 ಎರಡನೇ ಅವಧಿ: 2011 ರಿಂದ 2012 ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಳೆದಿದ್ದ ಅವರು, ರಾಜ್ಯದಲ್ಲಿ ಪಾರದರ್ಶಕ, ಶಿಸ್ತುಬದ್ಧ ಹಾಗೂ ಪ್ರಾಮಾಣಿಕ ಆಡಳಿತಕ್ಕೆ ಬುನಾದಿ ಹಾಕಿದ ಕೀರ್ತಿಗೆ ಪಾತ್ರರಾಗಿದ್ದರು. https://twitter.com/ani_digital/status/2056635896032788513?s=20 ರಾಷ್ಟ್ರೀಯ ರಾಜಕಾರಣಕ್ಕೆ ತುಂಬಲಾರದ ನಷ್ಟ: ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ಬಿ.ಸಿ. ಖಂಡೂರಿ ಅವರ ನಿಧನಕ್ಕೆ ಉತ್ತರಾಖಂಡದ ಪ್ರಸ್ತುತ…

Read More

ನವದೆಹಲಿ : NEET UG 2026 ಪರೀಕ್ಷಾ ಅಕ್ರಮದ ವಿವಾದವು ಈಗ ಹೊಸ ತಿರುವು ಪಡೆದುಕೊಂಡಿದೆ. ಪರೀಕ್ಷೆಗೂ ಮುನ್ನವೇ ಹರಿದಾಡಿದ್ದ ಹಾಗೂ ಪ್ರಸ್ತುತ ತನಿಖೆಯ ಪ್ರಮುಖ ಕೇಂದ್ರಬಿಂದುವಾಗಿರುವ ಹಸ್ತಪ್ರತಿಯ (Handwritten) ‘ಗೆಸ್ ಪೇಪರ್’ ಕುರಿತಾದ ಮಹತ್ವದ ವಿವರಗಳು ಈಗ ಹೊರಬಂದಿವೆ. ವರದಿಯ ಪ್ರಕಾರ, ಸೋರಿಕೆಯಾಗಿದ್ದ ಈ ದಾಖಲೆಯು ಕೆಮಿಸ್ಟ್ರಿ (ರಸಾಯನಶಾಸ್ತ್ರ) ವಿಷಯದ ಪ್ರಶ್ನೋತ್ತರಗಳನ್ನು ಒಳಗೊಂಡ 60 ಪುಟಗಳ ಹಸ್ತಪ್ರತಿಯ ಪಿಡಿಎಫ್ (PDF) ಫೈಲ್ ಆಗಿದೆ. ಇದನ್ನು ವಿವಿಧ ಜಾಲಗಳ ಮೂಲಕ ಅಭ್ಯರ್ಥಿಗಳಿಗೆ ತಲುಪಿಸಲಾಗಿತ್ತು. ಈ ಹಸ್ತಪ್ರತಿಯ ಟಿಪ್ಪಣಿಗಳನ್ನು ಪಿಡಿಎಫ್ ಫೈಲ್ ಆಗಿ ಪರಿವರ್ತಿಸಿ, ಪರೀಕ್ಷೆಗೆ ಮುಂಚಿತವಾಗಿಯೇ ಒಬ್ಬರಿಂದ ಒಬ್ಬರಿಗೆ ರವಾನಿಸಲಾಗಿತ್ತು. ಸದ್ಯ ತನಿಖಾಧಿಕಾರಿಗಳು ವಿಸ್ತೃತ NEET UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಭಾಗವಾಗಿ ಈ ಕೆಮಿಸ್ಟ್ರಿ ಹಸ್ತಪ್ರತಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಪರೀಕ್ಷೆಗೂ ಮುನ್ನ ಸೋರಿಕೆಯಾಗಿದ್ದ ರಸಾಯನಶಾಸ್ತ್ರದ ‘ಗೆಸ್ ಪೇಪರ್’ ಪಿಡಿಎಫ್‌ನ ಪ್ರಮುಖ ಅಂಶಗಳು ಇಲ್ಲಿವೆ: ಪ್ರಮುಖ ಆರೋಪಿಗಳ ಲಿಂಕ್: ಈ ಹಸ್ತಪ್ರತಿಯು ಎನ್‌ಟಿಎ (NTA) ಮಾಜಿ ಪ್ರಶ್ನೆ…

Read More

ನವದೆಹಲಿ: ಕಳೆದ ವಾರ ನಾಲ್ಕು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿದ್ದವು. ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ಗೆ ತಲಾ 3 ರೂಪಾಯಿಯಂತೆ ಹೆಚ್ಚಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈಗ ಇಂಧನ ಪೂರೈಕೆಯ ಕುರಿತು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ (ಸಿಲಿಂಡರ್) ಕೊರತೆಯೇನೂ ಇಲ್ಲ ಎಂದು ಮೋದಿ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಈ ಕುರಿತು ಪೆಟ್ರೋಲಿಯಂ ಸಚಿವಾಲಯವು ದೇಶದ ಜನತೆಗೆ ಭರವಸೆ ನೀಡಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಿ ಮುಗಿಬಿದ್ದು ಇಂಧನ ಖರೀದಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ. ಸರ್ಕಾರದ ಬಳಿ ಇರುವ ತೈಲ ಮತ್ತು ಅನಿಲ ದಾಸ್ತಾನುಗಳ ವಿವರಗಳನ್ನು ಹಂಚಿಕೊಂಡಿರುವ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶಾದ್ಯಂತ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಮತ್ತು ನೈಸರ್ಗಿಕ ಅನಿಲದ ದಾಸ್ತಾನುಗಳು ಸಮರ್ಪಕ ಪ್ರಮಾಣದಲ್ಲಿವೆ ಎಂದು ಹೇಳಿದ್ದಾರೆ. ಭಾರತದಲ್ಲಿ ಎಲ್ಲಾ ಅಗತ್ಯ ಇಂಧನಗಳ ಪೂರೈಕೆಯು ಎಂದಿನಂತೆ ಸಾಮಾನ್ಯವಾಗಿ ಮುಂದುವರಿಯಲಿದ್ದು,…

Read More

ಬೆಂಗಳೂರು: ಸಾಮಾನ್ಯವಾಗಿ ಒಬ್ಬ ರೈತ ಹೊಲದಲ್ಲಿ ಬೆಳೆ ಬೆಳೆದರೆ, ಆ ಬೆಳೆಯನ್ನು ಮಾರ್ಕೆಟ್ಗೆ ತಗೊಂಡು ಹೋಗಿ ಮಾರಾಟ ಮಾಡಿದ ಮೇಲಷ್ಟೇ ಕೈಗೆ ಕಾಸು ಸಿಗುತ್ತದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿದ್ದರೆ, ಅದೆಷ್ಟೋ ಬಾರಿ ಬೆಳೆದ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕುವ ಪರಿಸ್ಥಿತಿಯನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಇಲ್ಲೊಬ್ಬ ರೈತನ ಕಥೆ ಪೂರ್ತಿ ಉಲ್ಟಾ! ಇವರು ಬೆಳೆದ ಬೆಳೆ ಇನ್ನೂ ಹೊಲದಲ್ಲೇ ಇದೆ, ಆದರೆ ಮಾರ್ಕೆಟ್ನಲ್ಲಿ ಬೆಳೆ ಮಾರಾಟ ಮಾಡಿ ಗಳಿಸುವುದಕ್ಕಿಂತ ಹೆಚ್ಚಿನ ಹಣವನ್ನು ಇವರು ಈಗಾಗಲೇ ಸಂಪಾದಿಸಿ ಸೈ ಎನಿಸಿಕೊಂಡಿದ್ದಾರೆ! ಇದೆಲ್ಲಾ ಸಾಧ್ಯವಾಗಿದ್ದು ಕೇವಲ ಒಂದು 20 ರೂಪಾಯಿಯ ಟಿಕೆಟ್ನಿಂದ! ಹೌದು, ರೈತನೊಬ್ಬನ ಸೂರ್ಯಕಾಂತಿ ತೋಟ ಈಗ ಪ್ರವಾಸಿ ತಾಣವಾಗಿ ಬದಲಾಗಿದ್ದು, ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ಆ ಸ್ಮಾರ್ಟ್ ರೈತ ಯಾರು? ಈ ವಿಶಿಷ್ಟ ಐಡಿಯಾ ಅವರಿಗೆ ಹೊಳೆದಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ರಾತ್ರೋರಾತ್ರಿ ವೈರಲ್ ಆದ ಸೂರ್ಯಕಾಂತಿ ತೋಟ! ಇವತ್ತಿನ ಕಾಲದಲ್ಲಿ…

Read More

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳಿಂದ ಮಾನವ ಜೀವಕ್ಕಿರುವ ಭೀತಿಯನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ಸಂಸ್ಥೆಗಳು ಮತ್ತು ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ನವೆಂಬರ್ 2025 ರಲ್ಲಿ ನೀಡಿದ್ದ ತನ್ನ ನಿರ್ದೇಶನವನ್ನು ಮಾರ್ಪಡಿಸಲು ನಿರಾಕರಿಸಿರುವ ನ್ಯಾಯಾಲಯ, ಅಗತ್ಯವಿದ್ದರೆ ಹುಚ್ಚು ಹಿಡಿದ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಬೀದಿ ನಾಯಿಗಳಿಗೆ ದಯಾಮರಣ (Euthanasia) ನೀಡಲು ರಾಜ್ಯ ಸರ್ಕಾರಗಳು ಹಿಂಜರಿಯಬಾರದು ಎಂದು ಕಡಕ್ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ತೀರ್ಪು ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ನ್ಯಾಯಾಂಗವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಕಾನೂನುಬದ್ಧ ಕ್ರಮ ಮತ್ತು ದಯಾಮರಣ: ಮಾನವ ಜೀವ ಮತ್ತು ಸುರಕ್ಷತೆಗೆ ಎದುರಾಗಿರುವ ಭೀತಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ಹುಚ್ಚು ಹಿಡಿದ, ಗುಣಪಡಿಸಲಾಗದ ಕಾಯಿಲೆ ಇರುವ ಅಥವಾ ಅತ್ಯಂತ ಆಕ್ರಮಣಕಾರಿ/ಅಪಾಯಕಾರಿ ಬೀದಿ…

Read More

ಕುಶಾಲನಗರ: ತಮ್ಮ ಬದುಕಿನ ಅತಿ ದೊಡ್ಡ ನಷ್ಟ ಹಾಗೂ ಭೀಕರ ದುಃಖದ ಸಂದರ್ಭದಲ್ಲೂ, ಮೃತ ಪತ್ನಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಪತಿಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯಸ್ಪರ್ಶಿ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮತ್ತೊಬ್ಬರ ಬಾಳಿಗೆ ಬೆಳಕಾಗಲು ಮುಂದಾದ ಪತಿಯ ಈ ಸಮಾಜಮುಖಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಪ್ರಸಿದ್ಧ ದುಬಾರೆ ಆನೆ ಬಿಡಾರದಲ್ಲಿ ಈ ಘಟನೆ ಸಂಭವಿಸಿದೆ. ಕಾವೇರಿ ನದಿ ದಂಡೆಯ ಬಳಿ ಆನೆಗಳಿಗೆ ಸ್ನಾನ ಮಾಡಿಸುವಾಗ ಎರಡು ಸಾಕಾನೆಗಳ ನಡುವೆ ಹಠಾತ್ ಜಗಳ ಏರ್ಪಟ್ಟಿದೆ. ಪ್ರಸಿದ್ಧ ದಸರಾ ಆನೆಗಳಾದ ‘ಕಂಜನ್’ ಮತ್ತು ‘ಮಾರ್ತಾಂಡ’ ಪರಸ್ಪರ ಭೀಕರವಾಗಿ ಕಾದಾಡಿಕೊಂಡಿವೆ. ಈ ವೇಳೆ ಮಾರ್ತಾಂಡ ಆನೆಯು ಆಯತಪ್ಪಿ ಬಿದ್ದಿದೆ. ದುರದೃಷ್ಟವಶಾತ್, ಇದೇ ಸಮಯದಲ್ಲಿ ಅಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಚೆನ್ನೈನ ಪಲ್ಲವರಂ ಮೂಲದ ಜಿನ್ಸು (33) ಎಂಬ ಮಹಿಳೆ ಆನೆಯ ಅಡಿಯಲ್ಲಿ ಸಿಲುಕಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ…

Read More

ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯ ದೇಹದ ಭಾಷೆ (Body Language) ಮತ್ತು ಅವರ ಸಣ್ಣಪುಟ್ಟ ಅಭ್ಯಾಸಗಳು ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ರಹಸ್ಯಗಳನ್ನು ಬಿಚ್ಚಿಡುತ್ತವೆ. ಅದರಲ್ಲಿ ನಾವು ಕೈ ಮುಷ್ಟಿ ಹಿಡಿಯುವ (Fist) ವಿಧಾನವೂ ಒಂದು. ಹೌದು, ನೀವು ಮುಷ್ಟಿ ಬಿಗಿಯುವ ಶೈಲಿಯನ್ನು ನೋಡಿ ನೀವು ಎಂತಹ ಸ್ವಭಾವದವರು ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಮನೋವಿಜ್ಞಾನ ಹೇಳುತ್ತದೆ. ಹಾಗಾದರೆ ನಿಮ್ಮ ಮುಷ್ಟಿ ಹಿಡಿಯುವ ಶೈಲಿ ನಿಮ್ಮ ಬಗ್ಗೆ ಏನು ಹೇಳುತ್ತದೆ? ಈ ಕೆಳಗಿನ ವಿವರಗಳನ್ನು ನೋಡಿ ತಿಳಿಯಿರಿ. 1. ಹೆಬ್ಬೆರಳನ್ನು ಒಳಗಿಟ್ಟು ಮುಷ್ಟಿ ಹಿಡಿಯುವವರು ನೀವು ಮುಷ್ಟಿ ಹಿಡಿಯುವಾಗ ಹೆಬ್ಬೆರಳನ್ನು ಉಳಿದ ಬೆರಳುಗಳ ಒಳಗಡೆ ಮಡಚಿ ಹಿಡಿಯುತ್ತೀರಾ? ಹಾಗಿದ್ದಲ್ಲಿ, ಈ ಅಭ್ಯಾಸ ಇರುವವರು ಸಾಮಾನ್ಯವಾಗಿ ಸ್ವಲ್ಪ ಆತಂಕದ ಸ್ವಭಾವದವರಾಗಿರುತ್ತಾರೆ. ಸ್ವಭಾವ: ಇವರು ಸಣ್ಣ ವಿಷಯಗಳಿಗೂ ಬೇಗನೆ ಟೆನ್ಶನ್ ಮಾಡಿಕೊಳ್ಳುತ್ತಾರೆ ಮತ್ತು ಸದಾ ಮಾನಸಿಕ ಶಾಂತಿಗಾಗಿ ಹುಡುಕಾಡುತ್ತಿರುತ್ತಾರೆ. ಚಿಂತನೆ: ಪ್ರತಿಯೊಂದು ವಿಷಯದ ಬಗ್ಗೆಯೂ ಅತಿಯಾಗಿ ಯೋಚಿಸುವುದು (Overthinking) ಇವರ ಅಭ್ಯಾಸ. ಆದರೆ, ಇವರು ಸಮಾಜವನ್ನು…

Read More

ನವದೆಹಲಿ: ಆನ್ಲೈನ್ ಔಷಧ ಮಾರಾಟ ವೇದಿಕೆಗಳ (ಇ-ಫಾರ್ಮಸಿ) ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ‘ಅಖಿಲ ಭಾರತ ರಸಾಯನಶಾಸ್ತ್ರಜ್ಞರು ಮತ್ತು ಔಷಧ ವ್ಯಾಪಾರಿಗಳ ಸಂಸ್ಥೆ’ (AIOCD), ಮೇ 20 ರಂದು ದೇಶಾದ್ಯಂತ 24 ಗಂಟೆಗಳ ಕಾಲ ಔಷಧ ಅಂಗಡಿಗಳ ಬಂದ್ಗೆ ಕರೆ ನೀಡಿದೆ. ಮೇ 20 ರ ಮಧ್ಯರಾತ್ರಿಯಿಂದ ಆರಂಭವಾಗಲಿರುವ ಈ ಮುಷ್ಕರದ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ, ಇದನ್ನು ಅನಿರ್ದಿಷ್ಟಾವಧಿ ಮುಷ್ಕರವಾಗಿ ಬದಲಾಯಿಸಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ದಿನನಿತ್ಯದ ಔಷಧಿಗಳ ಖರೀದಿಗೆ ತೀವ್ರ ಅಡಚಣೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಯಾವುದೇ ಅನಾನುಕೂಲತೆ ತಪ್ಪಿಸಲು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ರಾಜ್ಯ ಮತ್ತು ಜಿಲ್ಲೆಗಳ ಆಧಾರದ ಮೇಲೆ ಮುಷ್ಕರದ ಬೆಂಬಲ ವ್ಯತ್ಯಾಸವಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಇದರ ಪರಿಣಾಮ ಕಡಿಮೆ ಇರಬಹುದು. ಗ್ರಾಮೀಣ ಭಾಗದ ಕೆಲವು ವೈಯಕ್ತಿಕ ಅಂಗಡಿಗಳು ಹಾಗೂ ಸ್ವತಂತ್ರ ಕ್ಲಿನಿಕ್ಗಳ ಔಷಧಾಲಯಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಅಗತ್ಯ ಔಷಧಿಗಳಿಗಾಗಿ ಇರುವ ಪರ್ಯಾಯ ಮಾರ್ಗಗಳು: ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಮತ್ತು ಅಗತ್ಯ ಔಷಧಿಗಳು…

Read More

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ನಾಳೆ ಹಮ್ಮಿಕೊಂಡಿದ್ದ ಬೃಹತ್ ಬಸ್ ಮುಷ್ಕರಕ್ಕೆ ಮಾನ್ಯ ಹೈಕೋರ್ಟ್ ತಡೆಯೊಡ್ಡಿದೆ. ನಾಳೆ ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದು ಎಂದು ಸಾರಿಗೆ ನೌಕರರ ಸಂಘಟನೆಗಳಿಗೆ ಕಡಕ್ ಸೂಚನೆ ನೀಡಿರುವ ನ್ಯಾಯಾಲಯ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಹತ್ವದ ಆದೇಶ ಹೊರಡಿಸಿದೆ. ಇದರಿಂದಾಗಿ ನಾಳೆ ಬಸ್ ಸಂಚಾರ ಸ್ಥಗಿತಗೊಳ್ಳಬಹುದು ಎಂಬ ಆತಂಕದಲ್ಲಿದ್ದ ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಮುಷ್ಕರದ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ಸಾರಿಗೆ ನೌಕರರ ದಿಢೀರ್ ಮುಷ್ಕರದ ನಿರ್ಧಾರವನ್ನು ಪ್ರಶ್ನಿಸಿ ನಿನ್ನೆಯಷ್ಟೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿತ್ತು. ವೇದಾವತಿ ಮತ್ತು ಲೆಕ್ಕಸಂದ್ರದ ಶ್ರೀಧರ್ ಎಂಬುವವರು ಈ ಅರ್ಜಿಯನ್ನು ಸಲ್ಲಿಸಿದ್ದರು. ವಿಶೇಷವೆಂದರೆ, ಅರ್ಜಿ ಸಲ್ಲಿಸಿದವರು ಸಮಾಜದ ಸಾಮಾನ್ಯ ವರ್ಗಕ್ಕೆ ಸೇರಿದ ಮನೆಗೆಲಸದ ಮಹಿಳೆ ಮತ್ತು ಕಟ್ಟಡ ಕಾರ್ಮಿಕರಾಗಿದ್ದಾರೆ. ನಾಳೆಯ ಮುಷ್ಕರದಿಂದ ದೈನಂದಿನ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ, ಆದ್ದರಿಂದ ಮುಷ್ಕರವನ್ನು ನಿರ್ಬಂಧಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ…

Read More

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ ಕೊನೆಯ ವಾರದಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರಿ ಹಿನ್ನಡೆಯಾಗಿದೆ. ಸಾರಿಗೆ ಕಾರ್ಮಿಕ ಸಂಘಟನೆಗಳ ‘ಜಂಟಿ ಕ್ರಿಯಾ ಸಮಿತಿ’ಯಿಂದ ಪ್ರಮುಖ ನೌಕರರ ಸಂಘಟನೆಗಳು ಹೊರಬಂದಿದ್ದು, ಮುಷ್ಕರಕ್ಕೆ ನೀಡಿದ್ದ ಬೆಂಬಲವನ್ನು ತಕ್ಷಣದಿಂದಲೇ ಹಿಂಪಡೆದಿರುವುದಾಗಿ ಪ್ರಕಟಿಸಿವೆ. ಜಂಟಿ ಕ್ರಿಯಾ ಸಮಿತಿಯಲ್ಲಿ ಭಿನ್ನಾಭಿಪ್ರಾಯ ಸ್ಫೋಟ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ)’ ಹಾಗೂ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂ ನೌಕರರ ಸಂಘ (ರಿ)’ ಪ್ರತ್ಯೇಕ ಪತ್ರಗಳ ಮೂಲಕ ಜಂಟಿ ಕ್ರಿಯಾ ಸಮಿತಿಯಿಂದ ಹೊರಬರುವುದಾಗಿ ಅಧಿಕೃತವಾಗಿ ಘೋಷಿಸಿವೆ. ಸಾರಿಗೆ ಕಾರ್ಮಿಕರ ಹಿತರಕ್ಷಣೆ ಮತ್ತು 2020-24ರ ವೇತನ ಒಪ್ಪಂದದ ಸಂಬಂಧ ತಾವು ಜಂಟಿ ಕ್ರಿಯಾ ಸಮಿತಿಗೆ ಸಂಪೂರ್ಣ ಬೆಂಬಲ ನೀಡಿದ್ದಾಗಿ ಸಂಘಟನೆಗಳು ತಿಳಿಸಿವೆ. ಆದರೆ, ಮುಷ್ಕರದ ಕರೆ ನೀಡಿದ ನಂತರ ಜಂಟಿ ಕ್ರಿಯಾ ಸಮಿತಿಯೊಳಗೆ ಭಿನ್ನಾಭಿಪ್ರಾಯಗಳು ಮತ್ತು ಅಸಮಾಧಾನಗಳು ತಲೆದೋರಿವೆ. ನೌಕರರಿಗೆ ನ್ಯಾಯ ಒದಗಿಸಲು ಹಾಗೂ ಯಾವ ಉದ್ದೇಶಕ್ಕಾಗಿ…

Read More