Author: kannadanewsnow57

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ‘ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು-2026’ ಕ್ಕೆ ದಿನಾಂಕ ನಿಗದಿಯಾಗಿದೆ. ಮೇ 23 ರಿಂದ ಮೇ 25 ರವರೆಗೆ ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಈ ಕ್ರೀಡಾಹಬ್ಬ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸ್ಪರ್ಧೆಗಳ ಸುಗಮ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಪರ್ಧೆಯ ಪ್ರಮುಖ ನಿಯಮಗಳು ಮತ್ತು ನಿಬಂಧನೆಗಳು: ಅರ್ಹತೆ: ಈ ಕ್ರೀಡಾಕೂಟದಲ್ಲಿ ಕೇವಲ ರಾಜ್ಯ ಸರ್ಕಾರದ ಖಾಯಂ ನೌಕರರು ಮಾತ್ರ ಭಾಗವಹಿಸಲು ಅವಕಾಶವಿದೆ. ನಿರ್ಬಂಧ: ದಿನಗೂಲಿ, ತಾತ್ಕಾಲಿಕ, ಗುತ್ತಿಗೆ ಆಧಾರಿತ, ಮತ್ತು ನಿಗಮ ಮಂಡಳಿಗಳ ನೌಕರರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಅಲ್ಲದೆ, ಕ್ರೀಡಾ ಕೋಟಾದಡಿ ನೇಮಕಗೊಂಡ ಇಲಾಖೆಯ ತರಬೇತುದಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಬಂಧ ಹೇರಲಾಗಿದೆ. ಗುರುತಿನ ಚೀಟಿ ಕಡ್ಡಾಯ: ಭಾಗವಹಿಸುವ…

Read More

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ‘ವಾಹನ 4.0’ (VAHAN 4.0) ತಂತ್ರಾಂಶದ ಬ್ಯಾಕ್ಎಂಡ್ ನಿರ್ವಹಣೆ ಹಾಗೂ ತಾಂತ್ರಿಕ ದೋಷನಿವಾರಣೆ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಆನ್ಲೈನ್ ವಾಹನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಸೇವೆ ಸ್ಥಗಿತದ ಅವಧಿ: ದಿನಾಂಕ 15.05.2026 ರಿಂದ 18.05.2026 ರವರೆಗೆ ವಾಹನ ಸಂಬಂಧಿತ ಎಲ್ಲಾ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ಸೇವೆಗಳ ಮೇಲೆ ಪರಿಣಾಮ? ಈ ಅವಧಿಯಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಪ್ರಮುಖ ಸೇವೆಗಳು ಲಭ್ಯವಿರುವುದಿಲ್ಲ: ಹೊಸ ವಾಹನ ನೋಂದಣಿ. ಮಾಲೀಕತ್ವ ಬದಲಾವಣೆ (Transfer of Ownership). ಫಿಟ್ನೆಸ್ ಸರ್ಟಿಫಿಕೇಟ್ (FC) ನವೀಕರಣ. ಪರ್ಮಿಟ್ ಸಂಬಂಧಿತ ಕಾರ್ಯಗಳು. ವಾಹನ ತೆರಿಗೆ ಪಾವತಿ. ಸಾರ್ವಜನಿಕರಲ್ಲಿ ಮನವಿ: ತಾಂತ್ರಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ನಿಗದಿತ ದಿನಾಂಕಗಳ ವ್ಯತ್ಯಯವನ್ನು ಗಮನಿಸಿ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಾರಿಗೆ ಇಲಾಖೆ ವಿನಂತಿಸಿದೆ. ಮೇ 19ರಿಂದ ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.…

Read More

ನವದೆಹಲಿ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಪೊಲೀಸರ ಮುಂದೆ ಶರಣಾಗಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಭಗೀರಥ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯಲು ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಈ ಶರಣಾಗತಿ ನಡೆದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, “ಮಗನ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಹಾಗೂ ಕಾನೂನಿಗೆ ಗೌರವ ನೀಡಿ, ತನಿಖೆಗೆ ಸಹಕರಿಸಲು ವಕೀಲರ ಮೂಲಕ ಭಗೀರಥ್‌ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ” ಎಂದು ತಿಳಿಸಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು: ಬಂಡಿ ಸಂಜಯ್ ತಮ್ಮ ಮಗನ ಶರಣಾಗತಿಯ ಬಳಿಕ ಮಾತನಾಡಿದ ತೆಲಂಗಾಣದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾದ ಬಂಡಿ ಸಂಜಯ್, “ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಸಾಮಾನ್ಯ…

Read More

ಇತ್ತೀಚಿನ ದಿನಗಳಲ್ಲಿ ಯಾವುದೇ ಇ-ಕಾಮರ್ಸ್ ವೆಬ್ಸೈಟ್, ಮೊಬೈಲ್ ಶೋರೂಮ್ ಅಥವಾ ಎಲೆಕ್ಟ್ರಾನಿಕ್ಸ್ ಸ್ಟೋರ್ಗಳಿಗೆ ಭೇಟಿ ನೀಡಿದರೂ “ತಿಂಗಳಿಗೆ ಕೇವಲ ₹2,999 ಇಎಂಐ” ಎಂಬ ಆಕರ್ಷಕ ಜಾಹೀರಾತುಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಮೇಲ್ನೋಟಕ್ಕೆ ಇದು ಅತ್ಯಂತ ಸುಲಭ ಮತ್ತು ಲಾಭದಾಯಕ ಪಾವತಿ ವಿಧಾನದಂತೆ ಕಂಡರೂ, ಇದರ ಹಿಂದೆ ಗ್ರಾಹಕರಿಗೆ ತಿಳಿಯದ ಹಲವು ಆರ್ಥಿಕ ನಷ್ಟಗಳಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಲೋ ಕಾಸ್ಟ್ ಇಎಂಐ ಅಥವಾ ‘ಝೀರೋ ಇಂಟರೆಸ್ಟ್’ (Zero Interest) ಯೋಜನೆಗಳಲ್ಲಿ ಬಡ್ಡಿ ನೇರವಾಗಿ ಕಾಣಿಸದಿದ್ದರೂ, ಆ ಬಡ್ಡಿಯ ಮೊತ್ತವನ್ನು ಉತ್ಪನ್ನದ ಮೂಲ ಬೆಲೆಯಲ್ಲೇ ಸೇರಿಸಲಾಗಿರುತ್ತದೆ. ಇಂತಹ ಇಎಂಐ ಆಯ್ಕೆ ಮಾಡಿಕೊಳ್ಳುವುದರಿಂದ ನಗದು ಪಾವತಿ ಮಾಡುವಾಗ ಸಿಗುವ ಪ್ರಮುಖ ಡಿಸ್ಕೌಂಟ್ ಅಥವಾ ಕ್ಯಾಶ್ಬ್ಯಾಕ್ ಪ್ರಯೋಜನಗಳನ್ನು ಗ್ರಾಹಕರು ಕಳೆದುಕೊಳ್ಳುತ್ತಾರೆ. ಉದಾಹರಣೆಗೆ: ₹50,000 ಬೆಲೆಯ ಫೋನ್ ಅನ್ನು ಒಂದೇ ಬಾರಿಗೆ ನಗದು ನೀಡಿ ಖರೀದಿಸಿದರೆ ₹45,000 ಗೆ ಸಿಗುವ ಅವಕಾಶವಿರುತ್ತದೆ. ಆದರೆ, ಅದೇ ಫೋನ್ ಅನ್ನು ಇಎಂಐ ಮೂಲಕ ಖರೀದಿಸಿದರೆ ನೀವು ಪೂರ್ಣ ₹50,000 ಪಾವತಿಸಬೇಕಾಗುತ್ತದೆ.…

Read More

ಮಂಡ್ಯ :- ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಕಾರು ಚಾಲಕನನ್ನು ಅಡ್ಡಗಟ್ಟಿ ಬರೋಬ್ಬರಿ 27 ಲಕ್ಷ ರೂ ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ಮದ್ದೂರು ನಗರದಲ್ಲಿ ನಡೆದಿದೆ. ಮೈಸೂರಿನ ಹಿಟಾಚಿ ಎಂಬ ಸಂಸ್ಥೆಯ 27 ಲಕ್ಷ ರೂ ಹಣವನ್ನು ಗೋವಿಂದರಾಜು ಎಂಬುವರು ಐ-20 ಕಾರಿನಲ್ಲಿ ಬೆಂಗಳೂರಿನ ಕೇಂದ್ರ ಕಛೇರಿಗೆ ತೆಗೆದುಕೊಂಡು ಹೋಗುವಾಗ ಮೈಸೂರಿನಿಂದ ಫಾಲೋ ಮಾಡಿರುವ ಮೂರ್ನಾಲ್ಕು ದುಷ್ಕರ್ಮಿಗಳ ಗುಂಪೊಂದು ಮದ್ದೂರು ನಗರದ ಐಶ್ವರ್ಯ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ಶುಕ್ರವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಅಡ್ಡಗಟ್ಟಿದ್ದಾರೆ. ಕೂಡಲೇ ಮಾರಕಾಸ್ತ್ರಗಳಿಂದ ಚಾಲಕ ಗೋವಿಂದರಾಜು ಅವರನ್ನು ಬೆದರಿಸಿ 27 ಲಕ್ಷ ರೂ ಹಣವನ್ನು ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಈ ಕೂಡಲೇ ಕಾರು ಚಾಲಕ ಮದ್ದೂರು ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತವಾದ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ…

Read More

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇಂಧನ ರಫ್ತು ಶುಲ್ಕದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಪೆಟ್ರೋಲ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ ₹3 ಗಳಂತೆ ‘ವಿಂಡ್‌ಫಾಲ್ ಪ್ರಾಫಿಟ್ ಟ್ಯಾಕ್ಸ್’ (ಅನಿರೀಕ್ಷಿತ ಲಾಭದ ಮೇಲಿನ ತೆರಿಗೆ) ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮಗಳು ಮೇ 16 ರಿಂದ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ಗೆ ₹3 ರಷ್ಟು ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರದಿಂದ ಈ ರಫ್ತು ಸುಂಕದ ಪರಿಷ್ಕರಣೆ ಹೊರಬಿದ್ದಿದೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡೀಸೆಲ್, ಎಟಿಎಫ್ ರಫ್ತು ಸುಂಕ ಕಡಿತ ಪೆಟ್ರೋಲ್ ರಫ್ತಿನ ಮೇಲೆ ಹೊಸದಾಗಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ವಿಧಿಸಲಾಗಿದ್ದರೂ, ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತು ಸುಂಕದಲ್ಲಿ ಭಾರಿ ಕಡಿತ ಮಾಡಲಾಗಿದೆ. ಡೀಸೆಲ್: ರಫ್ತು…

Read More

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಮುಗಳೂರು ಕೆರೆ ಅಂಗಳದಲ್ಲಿ ಮನುಷ್ಯನ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕುರಿಗಾಹಿಗಳಿಂದ ಬೆಳಕಿಗೆ ಬಂದ ಘಟನೆ ಮುಗಳೂರು ಕೆರೆಯ ಅಂಗಳದಲ್ಲಿ ಅಸ್ಥಿಪಂಜರದ ಅವಶೇಷಗಳು ಬಿದ್ದಿರುವುದನ್ನು ಮೊದಲು ಗಮನಿಸಿದ ಕುರಿಗಾಹಿಗಳು ತಕ್ಷಣವೇ ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಉನ್ನತ ಅಧಿಕಾರಿಗಳ ಭೇಟಿ ಮತ್ತು ಪರಿಶೀಲನೆ ಘಟನಾ ಸ್ಥಳಕ್ಕೆ ಎಎಸ್ಪಿ (ASP) ವೆಂಕಟೇಶ್ ಪ್ರಸನ್ನ ಹಾಗೂ ಡಿವೈಎಸ್ಪಿ (DySP) ಗೋಪಾಲ್ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಆಗಮಿಸಿದ ಸೋಕೋ (SOCO – Scene of Crime Officers) ತಂಡದ ತಜ್ಞರು ತಲೆಬುರುಡೆ ಹಾಗೂ ಮೂಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮುಂದಿನ ತನಿಖೆಗಾಗಿ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಅವಶೇಷಗಳು ಸಿಕ್ಕಿರುವ ಜಾಗದಲ್ಲಿ ಸೀರೆಯೊಂದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಕ್ಕಿರುವ ತಲೆಬುರುಡೆ ಮತ್ತು ಮೂಳೆಗಳು ಮಹಿಳೆಯೊಬ್ಬಳಿಗೆ…

Read More

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಗಿಗ್ ಕಾರ್ಮಿಕರು (Gig Workers) ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಇಂದು, ಮೇ 16ರ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಕ್ಷಾಂತರ ಡೆಲಿವರಿ ಪಾರ್ಟ್ನರ್ಗಳು ಮತ್ತು ಕ್ಯಾಬ್ ಚಾಲಕರು ಆ್ಯಪ್ಗಳಿಂದ ಲಾಗ್ ಆಫ್ (Log Off) ಮಾಡುವ ಮೂಲಕ ಮುಷ್ಕರ ನಡೆಸಲಿದ್ದಾರೆ. ಗಿಗ್ ಅಂಡ್ ಪ್ಲಾಟ್ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್’ (GIPSU) ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದ್ದು, Swiggy, Zomato, Blinkit, Zepto, Ola, Uber ಮತ್ತು Rapido ಸಂಸ್ಥೆಗಳ ಸೇವೆಗಳು ಶನಿವಾರ ದೊಡ್ಡ ಮಟ್ಟದಲ್ಲಿ ಸ್ಥಗಿತಗೊಳ್ಳಲಿವೆ. ಮುಷ್ಕರಕ್ಕೆ ಕಾರಣವೇನು? ಇಂಧನ ದರ ಏರಿಕೆಯ ಬಿಸಿ! ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ₹3 ರಷ್ಟು ಏರಿಕೆಯಾಗಿದೆ. ಜಾಗತಿಕ ಇಂಧನ ಬೆಲೆ ಏರಿಕೆಯ ಹೊರೆಯನ್ನು ತೈಲ ಕಂಪನಿಗಳು ಗ್ರಾಹಕರ ಮೇಲೆ ಹಾಕಿವೆ. ಇದರಿಂದಾಗಿ ದ್ವಿಚಕ್ರ ವಾಹನಗಳನ್ನೇ ನೆಚ್ಚಿಕೊಂಡಿರುವ ಡೆಲಿವರಿ ಬಾಯ್ಸ್ ಮತ್ತು ಕ್ಯಾಬ್…

Read More

ಸಮಸ್ತಿಪುರ: ಅಮ್ಮ ಎಂದರೆ ಕೇವಲ ಪ್ರೀತಿ-ವಾತ್ಸಲ್ಯದ ಗಣಿ ಮಾತ್ರವಲ್ಲ, ಅವಶ್ಯಕತೆ ಬಿದ್ದರೆ ಸಾವು ಎದುರಾದರೂ ತನ್ನ ಮಕ್ಕಳಿಗಾಗಿ ಯಮನೊಂದಿಗೂ ಹೋರಾಡುವ ಸಾಕ್ಷಾತ್ ಶಕ್ತಿ ಸ್ವರೂಪಿಣಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ತನ್ನ ಕಣ್ಣೆದುರೇ ಯಮನಂತೆ ಧಾವಿಸಿ ಬರುತ್ತಿದ್ದ ರೈಲನ್ನು ಕಂಡು ಎದೆಗುಂದದ ತಾಯಿಯೊಬ್ಬಳು, ತನ್ನಿಬ್ಬರು ಮಕ್ಕಳನ್ನು ಎದೆಗೆ ಕಚ್ಚಿ ಹಿಡಿದು ಪ್ರಾಣಾಪಾಯದಿಂದ ಪಾರುಮಾಡಿರುವ ರೋಮಾಂಚನಕಾರಿ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ. ನೆಟ್ಟಿಗರ ಮೈಮನ ಜುಂ ಎನಿಸುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಘಟನೆಯ ಹಿನ್ನೆಲೆ: ಸಮಸ್ತಿಪುರ ಜಿಲ್ಲೆಯ ಶಾಪುರ್ ಪಟೋರಿ ರೈಲ್ವೆ ನಿಲ್ದಾಣದಲ್ಲಿ ಮೂವರು ಮಹಿಳೆಯರು ತಮ್ಮಿಬ್ಬರು ಮಕ್ಕಳೊಂದಿಗೆ ರೈಲ್ವೆ ಹಳಿ ದಾಟುತ್ತಿದ್ದರು. ದುರದೃಷ್ಟವಶಾತ್, ಅವರು ಹಳಿ ದಾಟುತ್ತಿದ್ದ ಅದೇ ಸಮಯಕ್ಕೆ ತೀವ್ರ ವೇಗದಲ್ಲಿ ಎಕ್ಸ್ಪ್ರೆಸ್ ರೈಲೊಂದು ಅದೇ ಟ್ರ್ಯಾಕ್ಗೆ ಧಾವಿಸಿ ಬಂದಿದೆ. ಪ್ಲಾಟ್ಫಾರ್ಮ್ ಏರುವಷ್ಟರಲ್ಲಿ ರೈಲು ಅತ್ಯಂತ ಹತ್ತಿರ ಬಂದಿದ್ದರಿಂದ ಗಾಬರಿಗೊಂಡ ಮಹಿಳೆಯರು, ಪ್ಲಾಟ್ಫಾರ್ಮ್ ಹಾಗೂ ಹಳಿಯ ಪಕ್ಕದಲ್ಲಿದ್ದ ಅತ್ಯಂತ ಕಿರಿದಾದ…

Read More

ನವದೆಹಲಿ : ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಚಿಕಿತ್ಸೆಯ ವಿಧಾನವು ಅತ್ಯಂತ ಪ್ರಮುಖವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಭಾರತದಲ್ಲಿ ಹೊಸ ಇಮ್ಯುನೊಥೆರಪಿ ಔಷಧವನ್ನು ಪರಿಚಯಿಸಲಾಗಿದೆ. ಇದು ಮುಖ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ರೋಗಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಈ ಔಷಧಿಯ ಅತಿ ದೊಡ್ಡ ವೈಶಿಷ್ಟ್ಯವೆಂದರೆ, ಇದನ್ನು ಕೇವಲ 7 ನಿಮಿಷಗಳಲ್ಲಿ ಇಂಜೆಕ್ಷನ್ ರೂಪದಲ್ಲಿ ದೇಹಕ್ಕೆ ನೀಡಬಹುದು. ಈ ಮೊದಲು ಇದನ್ನು ಗಂಟೆಗಟ್ಟಲೆ ಐವಿ (IV – ಇಂಟ್ರಾವೆನಸ್) ಇನ್ಫ್ಯೂಷನ್ ಮೂಲಕ ನೀಡಲಾಗುತ್ತಿತ್ತು. ಹಾಗಾದರೆ ಭಾರತದಲ್ಲಿ ಬಿಡುಗಡೆಯಾಗಿರುವ ಈ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ. ಏನಿದು ಹೊಸ ಇಮ್ಯುನೊಥೆರಪಿ ಇಂಜೆಕ್ಷನ್? ಈ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಅನ್ನು ಮುಖ್ಯವಾಗಿ ‘ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್’ (NSCLC) ರೋಗಿಗಳಿಗೆ ಬಳಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 81,000 ಹೊಸ ಶ್ವಾಸಕೋಶದ ಕ್ಯಾನ್ಸರ್…

Read More