Author: kannadanewsnow57

ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ, ಅಪೌಷ್ಠಿಕ ವಿಕಲಾಂಗ ಮಗುವಿನ ಜನನ, ಗರ್ಭಪಾತ ಹಾಗೂ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವ್ಹಿ.ಪಿ. ಶಿವಾನಂದ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕುಕನೂರು ವಿದ್ಯಾನಂದ ಗುರುಕುಲ ಪಿ.ಯು.ಸಿ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾನಂದ ಗುರುಕುಲ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ದಂದು ಬಾಲ್ಯವಿವಾಹ ನಿಷೇಧ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಎಂಬ ವಿಷಯದ ಕುರಿತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು, ಸಾಂಕ್ರಾಮಿಕ ಮತ್ತ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಆರೋಗ್ಯ ಇಲಾಖೆಗಳ ಯೋಜನೆಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಲಾಗುತ್ತದೆ. ಬಾಲ್ಯವಿವಾಹ ಸಮಾಜದ ಒಂದು ಪಿಡುಗು. ಸರ್ಕಾರ…

Read More

ಗದಗ : ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ ಗೆ ಕರೆ ನೀಡಲಾಗಿದ್ದು ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಲಕ್ಷ್ಮೇಶ್ವರ ತಾಲೂಕು ಬಂದ್ ಹಿನ್ನೆಲೆಯಲ್ಲಿ ಇಂದು ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶ ಹೊರಡಿಸಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಪರ ಹೋರಾಟಗಾರರು ಇಂದು ಲಕ್ಷ್ಮೇಶ್ವರ ಬಂದ್ ಗೆ ಕರೆ ನೀಡಿದ್ದಾರೆ. ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ.

Read More

ಬೆಂಗಳೂರು : ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್‌ ಠಾಣೆಯ ಅಧಿಕಾರಿಯಾಗಿದ್ದರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.   ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಮಹೇಶ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿಯ ಕೋಳೂರು ಗ್ರಾಮದ ವಿ.ವಿವೇಕಾನಂದ (25) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸಂಡೂರು ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಗೌಡ ವಿರುದ್ಧ ಎಫ್‌ ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಬಳ್ಳಾರಿ ಜಿಲ್ಲಾ ಎಸ್‌ಪಿಗೆ ಆದೇಶಿಸಿದೆ. ಆರೋಪಿ ಯಾರೇ ಆಗಿದ್ದರೂ ಆತ ಅಪರಾಧ ಎಸಗಿದ್ದರೆ ತನಿಖೆ ನಡೆಸಲೇಬೇಕು. ಪ್ರಕರಣದಲ್ಲಿ ದೂರು ದಾಖಲಿಸದೆ ಇರುವುದು ಸಂಪೂರ್ಣ ಕಾನೂನು ಬಾಹಿರ. ಅಗತ್ಯ ಎನಿಸಿದರೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ಬೇರೆ ಪೊಲೀಸ್‌ ಠಾಣೆಗೆ ಆದೇಶಿಸಬಹುದು. ಆ ತನಿಖೆಯನ್ನು…

Read More

ಮಹಬೂಬ್ ನಗರ : ದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಹಸಿವಿನಿಂದ ಅಂಗವಿಕಲ ಮಗ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಹಣವಿಲ್ಲದೇ ತಂದೆಯೊಬ್ಬ ಸ್ಮಶಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಘಟನೆ ಆಂಧ್ರಪ್ರದೇಶದ ಮಹಬೂಬ್ ನಗರದಲ್ಲಿ ನಡೆದಿದೆ. ಈ ಹೃದಯವಿದ್ರಾವಕ ಘಟನೆ ಮಹಬೂಬ್ ನಗರದಲ್ಲಿ ನಡೆದಿದೆ. ಪಟ್ಟಣದ ಪ್ರೇಮ್ನಗರ ನಿವಾಸಿ ಬಾಲರಾಜ್ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗಿರಣಿ ಮುಚ್ಚಿದಾಗ ಕೆಲಸ ಕಳೆದುಕೊಂಡರು ಮತ್ತು ಆರ್ಥಿಕ ತೊಂದರೆಯಿಂದಾಗಿ ಅವರ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಕೆಲವು ದಿನಗಳ ಹಿಂದೆ, ಅವರ ಪತ್ನಿ ತಮ್ಮ ಕಿರಿಯ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋದರು. ಮಾನಸಿಕ ಅಂಗವಿಕಲ ಹಿರಿಯ ಮಗ ಹರೀಶ್ (8) ಅವರನ್ನು ನೋಡಿಕೊಳ್ಳಲು ಹಣದ ಕೊರತೆಯಿಂದಾಗಿ ಅವರು ಇತ್ತೀಚೆಗೆ ಹೋಟೆಲ್ ಶುಚಿಗೊಳಿಸುವ ಕೆಲಸಕ್ಕೆ ಸೇರಿದರು. ಆದರೆ, ಅವರಿಗೆ ಬಂದ ಅಲ್ಪ ಹಣ ಔಷಧಿ ಮತ್ತು ಆಹಾರಕ್ಕೆ ಸಾಕಾಗಲಿಲ್ಲ.. ಹರೀಶ್ ತೀವ್ರ ಅಸ್ವಸ್ಥರಾಗಿ ಸೋಮವಾರ ಬೆಳಿಗ್ಗೆ ನಿಧನರಾದರು. ಕೈಯಲ್ಲಿ ಕಂಬಳಿ ಕೂಡ ಇಲ್ಲದೆ, ಹೆಗಲ…

Read More

ಬೆಂಗಳೂರು : ರಾಜ್ಯದ ಆಸ್ತಿ ಮಾಲೀಕರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಎ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ ಸರ್ಕಾರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದೆ. 1. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವೆಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು? ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. 110ರಲ್ಲಿ ಉಳಿದಂತಹ 2. “ಎ” ರಿಜಿಸ್ಟರ್ ನಲ್ಲಿ ನಮೂದಿಸಬೇಕಾದ ಆಸ್ತಿಗಳು ಯಾವುವು? ಕೆಳಕಂಡ ಆಸ್ತಿಗಳನ್ನು ಅಧಿಕೃತ ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು “ಎ” ರಿಜಿಸ್ಟರ್ ನಲ್ಲಿ ನಮೂದಿಸಬೇಕಾಗಿದೆ; a) ಗ್ರಾಮಠಾಣಾ b) ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, c) ಕಂದಾಯ ಇಲಾಖೆಯಿಂದ 94 cc ಅಡಿ ನೀಡಲಾದ ಹಕ್ಕು ಪತ್ರ. d) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು. 3. “ಬಿ” ರಿಜಿಸ್ಟರ್ ನಲ್ಲಿ ನಮೂದಿಬೇಕಾದ ಆಸ್ತಿಗಳು…

Read More

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ದೇಶಾದ್ಯಂತ ವಾಹನ ಫಿಟ್‌ನೆಸ್ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳ (ಐದನೇ ತಿದ್ದುಪಡಿ) ಅಡಿಯಲ್ಲಿನ ತಿದ್ದುಪಡಿಗಳು ತಕ್ಷಣದಿಂದ ಜಾರಿಗೆ ಬರಲಿವೆ, ವಾಹನದ ವಯಸ್ಸು ಮತ್ತು ವರ್ಗವನ್ನು ಅವಲಂಬಿಸಿ ಶುಲ್ಕ ರಚನೆಯಲ್ಲಿ ಗಮನಾರ್ಹ ಬದಲಾವಣೆಗಳಿವೆ. ಎಲ್ಲಾ ಪರಿಷ್ಕರಣೆಗಳಲ್ಲಿ ಅತ್ಯಂತ ಗಮನಾರ್ಹ ಬದಲಾವಣೆಯೆಂದರೆ ಹೆಚ್ಚಿನ ಫಿಟ್‌ನೆಸ್ ಶುಲ್ಕಗಳಿಗೆ ವಯಸ್ಸಿನ ಮಿತಿಯಲ್ಲಿನ ಕಡಿತ. ತಿದ್ದುಪಡಿಗಳ ಮೊದಲು, 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಸ್ಲ್ಯಾಬ್‌ಗಳು ಅನ್ವಯವಾಗಿದ್ದವು. ಆದಾಗ್ಯೂ, ಕೇಂದ್ರ ಸರ್ಕಾರವು ಈಗ 10 ವರ್ಷಗಳನ್ನು ಪೂರ್ಣಗೊಳಿಸಿದ ವಾಹನಗಳಿಗೆ ಹೆಚ್ಚಿನ ಶುಲ್ಕಗಳನ್ನು ಪರಿಚಯಿಸಿದೆ. ಇದರೊಂದಿಗೆ, ಸರ್ಕಾರವು ವಯಸ್ಸಿನ ವರ್ಗಗಳನ್ನು ಪರಿಚಯಿಸಿದೆ, ಮೊದಲನೆಯದು 10-15 ವರ್ಷಗಳು, ಎರಡನೆಯದು 15-20 ವರ್ಷಗಳು ಮತ್ತು ಮೂರನೇ ವರ್ಗವು 20 ವರ್ಷಕ್ಕಿಂತ ಹಳೆಯ ವಾಹನಗಳು. ವರ್ಗವನ್ನು ಅವಲಂಬಿಸಿ ಶುಲ್ಕಗಳು ಕ್ರಮೇಣ ಹೆಚ್ಚಾಗುತ್ತವೆ, ಇದು 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಅನ್ವಯವಾಗುವ ಹಿಂದಿನ ಸ್ಥಿರ ದರಕ್ಕೆ ವ್ಯತಿರಿಕ್ತವಾಗಿದೆ. ವಯಸ್ಸಿನ ಆಧಾರದ…

Read More

ವಿಜ್ಞಾನವು ಬಹಳಷ್ಟು ಪ್ರಗತಿ ಸಾಧಿಸಿದೆ ಆದರೆ ಇಲ್ಲಿಯವರೆಗೆ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ಇಂದಿಗೂ ಕ್ಯಾನ್ಸರ್ ಬಹಳ ಮಾರಕ ಕಾಯಿಲೆಯಾಗಿದೆ. ಕ್ಯಾನ್ಸರ್ ಬರಲು ಹಲವು ಅಂಶಗಳು ಕಾರಣವಾಗಿವೆ ಆದರೆ ನಮ್ಮ ಮನೆಗಳಲ್ಲಿಯೂ ಕ್ಯಾನ್ಸರ್ ಹರಡುವ ಅಪಾಯವನ್ನು ಹೆಚ್ಚಿಸುವ ಹಲವು ವಸ್ತುಗಳು ಇವೆ. ಅಂತಹ ವಿಷಯಗಳು ನಮ್ಮ ದೈನಂದಿನ ಅಗತ್ಯಗಳಾಗಿವೆ. ನಮ್ಮ ಮನೆಗಳು ಅಂತಹ ವಸ್ತುಗಳಿಂದ ತುಂಬಿವೆ. ಆದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಪ್ರಜ್ಞೆ ಹೊಂದಿದ್ದರೆ ಈ ವಸ್ತುಗಳನ್ನು ನಿಮ್ಮ ಮನೆಯಿಂದ ತೆಗೆದುಹಾಕಿ. ಇಲ್ಲದಿದ್ದರೆ ಈ ವಸ್ತುಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ಕ್ಯಾನ್ಸರ್ ಉಂಟುಮಾಡುವ ಮನೆಯ ವಸ್ತುಗಳು 1. ನಾನ್-ಸ್ಟಿಕ್ ಪಾತ್ರೆಗಳು ಆರಂಭದಲ್ಲಿ ನಾನ್-ಸ್ಟಿಕ್ ಪಾತ್ರೆಗಳನ್ನು ಪರಿಚಯಿಸಿದಾಗ ಅವು ಯಾವುದೇ ರೋಗವನ್ನು ಹರಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಸಂಶೋಧನೆಯ ಪ್ರಕಾರ ನಾನ್-ಸ್ಟಿಕ್ ಪಾತ್ರೆಗಳ ಮೇಲಿನ ಲೇಪನವು ಪರ್ಫ್ಲೋರೋಕ್ಟಾನೊಯಿಕ್ ಆಮ್ಲ ಮತ್ತು ಇತರ ವಿಷಕಾರಿ ವಸ್ತುಗಳನ್ನು ಹೊಂದಿದ್ದು ಅದು ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ, ನಾನ್-ಸ್ಟಿಕ್ ಪಾತ್ರೆಗಳ ಬದಲಿಗೆ ಉಕ್ಕಿನ ಪಾತ್ರೆಗಳನ್ನು ಬಳಸಿ. 2. ಪ್ಲಾಸ್ಟಿಕ್…

Read More

ಬೆಂಗಳೂರು: ರಾಜ್ಯಾದ್ಯಂತ ತಾಪಮಾನದಲ್ಲಿ ಭಾರೀ ಕುಸಿದತವಾಗಿದ್ದು, ಕಳೆದ ವಾರದಿಂದ ಚಳಿ ಹೆಚ್ಚಳವಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ 2-3 ಡಿ.ಸೆ. ಉಷ್ಣಾಂಶ ಕಡಿಮೆಯಾಗಿದೆ. ಸದ್ಯ ಗರಿಷ್ಠ ತಾಪಮಾನ ಸರಾಸರಿ 29 -30 ಡಿ.ಸೆ, ಕನಿಷ್ಠ ತಾಪಮಾನ ಸರಾಸರಿ 16-ರಿಂದ 18 ಡಿ.ಸೆ ದಾಖಲಾಗುತ್ತಿದೆ. ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಕಷ್ಟು ಇಳಿಕೆಯಾಗಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಯಲ್ಲಿ (ನ.17) ಕನಿಷ್ಠ ತಾಪಮಾನ 9.5 ಡಿ.ಸೆ.ವರೆಗೆ ತಗ್ಗಿದೆ. ಗರಿಷ್ಠ ತಾಪಮಾನ ಸರಾಸರಿ 27 ಡಿ.ಸೆ. ದಾಖಲಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ 1.5 ಡಿ.ಸೆ ಕಡಿಮೆ ತಾಪಮಾನ ದಾಖಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಮುಂಜಾನೆ ಮಂಜು ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read More

ಮಳೆಗಾಲದಲ್ಲಿ ತೇವಾಂಶ ಹೆಚ್ಚಾದ ಕಾರಣ, ಮರದ, ಕಬ್ಬಿಣದ ಬಾಗಿಲುಗಳು ಮತ್ತು ಗೋಡೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಈ ಸಮಯದಲ್ಲಿ, ಬಹುತೇಕ ಎಲ್ಲಾ ಮನೆಗಳಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆ ಎಂದರೆ ಗೆದ್ದಲುಗಳ ಭಯ. ಸಾಮಾನ್ಯವಾಗಿ ಗೆದ್ದಲುಗಳು ಬಾಗಿಲುಗಳು ಮತ್ತು ಪೀಠೋಪಕರಣಗಳಂತಹ ಮರದ ವಸ್ತುಗಳ ಮೇಲೆ ಗುರುತುಗಳನ್ನು ಮಾಡಿ ಅವುಗಳನ್ನು ಟೊಳ್ಳಾಗಿಸುತ್ತವೆ. ಇದನ್ನು ತಕ್ಷಣ ಪರಿಹರಿಸದಿದ್ದರೆ, ಗೋಡೆಗಳ ಅಂಚುಗಳನ್ನು ತಮ್ಮ ಮನೆಯನ್ನಾಗಿ ಮಾಡಲು ಸಮಯ ತೆಗೆದುಕೊಳ್ಳುವುದಿಲ್ಲ. ಅವು ಗೋಡೆಗೆ ಹತ್ತಿದ ನಂತರ, ಕೋಣೆಯ ಸೌಂದರ್ಯವನ್ನು ಹಾಳುಮಾಡುವುದಲ್ಲದೆ, ಬಿರುಕುಗಳು ಮತ್ತು ತೇವಾಂಶದ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ, ಕೋಣೆಯಲ್ಲಿ ತೇವಾಂಶ ಮತ್ತು ನೀರು ತೊಟ್ಟಿಕ್ಕುವ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು, ಜನರು ಸಾಮಾನ್ಯವಾಗಿ ದುಬಾರಿ ಕೀಟ ನಿಯಂತ್ರಕಗಳು ಅಥವಾ ಮಾರುಕಟ್ಟೆಯಿಂದ ಬರುವ ರಾಸಾಯನಿಕ ಚಿಕಿತ್ಸೆಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ಕೆಲವು ದೇಶೀಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಕೇವಲ 50 ರೂಪಾಯಿಗಳಲ್ಲಿ ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಈ ವಿಧಾನಗಳಿಂದ,…

Read More

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿತ್ತು. ಈ ಬೆನ್ನಲ್ಲೇ ನವೆಂಬರ್.20ರ ಇಂದು ಬಿಹಾರದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಸತತ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರದಲ್ಲಿ ನವೆಂಬರ್.20ರಂದು ಬೆಳಗ್ಗೆ 11ರಿಂದ 12ರವರೆಗೆ ನೂತನ ಸರ್ಕಾರ ಪದಗ್ರಹಣ ಸಮಾರಂಭ ನಡೆಯಲಿದೆ. ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ 10ನೇ ಬಾರಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬಿಹಾರದಲ್ಲಿ ನೂತನ ಸರ್ಕಾರ ಅಸ್ಥಿತ್ವದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗಳಿಸುವ ಮೂಲಕ ಬಹುಮತ ಗಳಿಸಿತು, ಬಿಜೆಪಿ ಗರಿಷ್ಠ 89 ಸ್ಥಾನಗಳನ್ನು ಗೆದ್ದಿತು, ನಂತರ ಜೆಡಿ (ಯು) 85 ಸ್ಥಾನಗಳನ್ನು ಗಳಿಸಿತು. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್‌ವಿ) 19 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಇನ್ನೂ ಒಂಬತ್ತು ಸ್ಥಾನಗಳನ್ನು ಸಣ್ಣ ಪಾಲುದಾರರಾದ ಹಿಂದೂಸ್ತಾನಿ…

Read More