Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು ಎಂದು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025ನ್ನು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ ಕಲಂ-3 ರ ಉಪ ಕಲಂ (2) ರ ಖಂಡ (ಎ) ರಲ್ಲಿ ಅಗತ್ಯಪಡಿಸಿರುವಂತೆ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ-IVA (ಸಂಖ್ಯೆ: 659) ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದೆ. ಸದರಿ ವಿಶೇಷ ರಾಜ್ಯಪತ್ರವನ್ನು ದಿನಾಂಕ: 17.10.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;ಮತ್ತು ಸದರಿ ಕರಡು ತಿದ್ದುಪಡಿ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿದೆ. ಈಗ ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ವೇದವ್ಯಾಸ್ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಯೋಜನೆಗೆ ಸೂಕ್ತ ಬದಲಾವಣೆ / ಮಾರ್ಪಾಡು ಮಾಡಲು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 11.12.20180 : 01.03.2023 ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ: 16.08.2024ರಲ್ಲಿ ಪುನರ್ ರಚಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು : ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ 6 ತಿಂಗಳ ಮಗುವನ್ನು ತಂದೆಯೇ ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ತಿಂಗಳ ಮಗುವನ್ನು ಗಂಡ ಮತ್ತು ಮಾವ ಕಿಡ್ನಾಪ್ ಮಾಡಿದ್ದಾರೆ. ದೀಪಾ ಎಂಬ ಮಹಿಳೆಯ ಮಗುವನ್ನು ಕಿಡ್ನಾಪ್ ಮಾಡಲಾಗಿದೆ. ಮಾಗಡಿ ರೋಡ್ ಠಾಣೆಯಲ್ಲಿ ಪತಿ ಶಿಲ್ಪಿಕುಮಾರ್ ಮತ್ತು ಮಾವ ನರೇಶ್ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ. ತಾಯಿ ಬಳಿ ಇದ್ದ 6 ತಿಂಗಳ ಮಗುವನ್ನು ಕಿಡ್ನಾಪ್ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಮದ್ಯದ ವ್ಯಸನಿಗಳಾಗುತ್ತಿದ್ದಾರೆ. ಕೆಲವು ಮಹಿಳೆಯರು ಕುಡಿದು ರಸ್ತೆಯಲ್ಲಿ ಜಗಳವಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ, ಯುವತಿಯೊಬ್ಬಳು ಕುಡಿದು ರಾಪಿಡೋ ಬೈಕ್ ಹತ್ತಿದಳು. ರಾಪಿಡೋ ಬೈಕ್ ಸವಾರನಿಗೆ ದೌರ್ಜನ್ಯದ ಲಕ್ಷಣಗಳು ಕಂಡುಬಂದವು. ಇದನ್ನು ಗಮನಿಸಿದ ಜನರು ಯುವತಿಯ ಮೇಲೆ ಕೋಪ ವ್ಯಕ್ತಪಡಿಸಿದರು. ಯುವತಿಯೊಬ್ಬಳು ಕ್ಲಬ್ ನಿಂದ ಕುಡಿದು ಹೊರಬಂದಳು. ತನ್ನ ಸ್ಥಳಕ್ಕೆ ಹೋಗಲು ರಾಪಿಡೋ ಬೈಕ್ ಬುಕ್ ಮಾಡಿದಳು. ಸ್ವಲ್ಪ ಸಮಯದ ನಂತರ ರಾಪಿಡೋ ಬೈಕ್ ಅಲ್ಲಿಗೆ ಬಂದಿತು. ಯುವತಿ ಬೈಕ್ ಹತ್ತಿ ಕುಳಿತಳು. ಸ್ವಲ್ಪ ದೂರ ಹೋದ ನಂತರ ಯುವತಿ ಸವಾರನ ಮೇಲೆ ಬಿದ್ದಳು. ಒಂದು ಬದಿ ಜಾರಿ ಬಿದ್ದಳು. ಇದನ್ನು ಗಮನಿಸಿದ ಸವಾರ ಬೈಕ್ ನಿಲ್ಲಿಸಿದನು. ಯುವತಿ ಸಂಪೂರ್ಣವಾಗಿ ಕೆಳಗೆ ಜಾರಿ ಬಿದ್ದಳು. ಆದರೆ, ಬೈಕ್ ಸವಾರ ಆಕೆ ಬೀಳದಂತೆ ತಡೆದ. ಆಕೆಯನ್ನು ಮೇಲೆತ್ತಿ ಕೂರಿಸಲು ತುಂಬಾ ಪ್ರಯತ್ನಿಸಿದನು. ಆದರೆ, ಅವನಿಗೆ ಸಾಧ್ಯವಾಗಲಿಲ್ಲ. ಯುವತಿ ಸಂಪೂರ್ಣವಾಗಿ ರಸ್ತೆಯಲ್ಲಿ ಬಿದ್ದಳು. ಹಿಂದಿನಿಂದ ಬಂದ ವ್ಯಕ್ತಿಯೊಬ್ಬರು…
ದೇಹದ ತೂಕ ಮತ್ತು ಎತ್ತರದ ನಡುವೆ ಸಾಮಾನ್ಯ ಸಂಬಂಧವಿದೆ, ಇದನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಬಳಸಿ ಅಳೆಯಬಹುದು. ಸಮತೋಲಿತ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅತಿಯಾದ ಅಥವಾ ಸಾಕಷ್ಟು ತೂಕ ಎರಡೂ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಧಿಕ ತೂಕದ ಸಮಸ್ಯೆಗಳು: ತೂಕವು ಅಧಿಕವಾಗಿದ್ದಾಗ (ಅಧಿಕ ತೂಕ), ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಕೊಬ್ಬಿನ ಯಕೃತ್ತು, ಮಧುಮೇಹ, ಹಾರ್ಮೋನ್ ಅಸಮತೋಲನ, ಹೃದ್ರೋಗ ಮತ್ತು ಹೆಚ್ಚಿನವು ಸೇರಿವೆ. ಕಡಿಮೆ ತೂಕದ ಸಮಸ್ಯೆಗಳು: ಕಡಿಮೆ ತೂಕ (ಕಡಿಮೆ ತೂಕ) ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತೂಕವು ಸಾಮಾನ್ಯಕ್ಕಿಂತ ಕಡಿಮೆಯಾದಾಗ, ಅದು ದೇಹದ ಶಕ್ತಿ, ಮೂಳೆಗಳು, ಸ್ನಾಯುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಎತ್ತರಕ್ಕೆ ಅನುಗುಣವಾಗಿ ಮಹಿಳೆಯರಿಗೆ ಸೂಕ್ತವಾದ ತೂಕ: 150 ಸೆಂ: 43 – 57 ಕೆಜಿ 155 ಸೆಂ: 45 – 60 ಕೆಜಿ 160 ಸೆಂ:…
ಹಾವೇರಿ: ಉಳುಮೆ ಮಾಡುವಾಗ ಘೋರ ದುರಂತ ಸಂಭವಿಸಿದ್ದು, ಟ್ರ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ರೈತರೊಬ್ಬರು ಸಾವವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ನೆಗಳೂರಿನಲ್ಲಿ ನಡೆದಿದೆ. ಜಮೀನಿನಲ್ಲಿ ಟ್ರ್ಯಾಕ್ಟರ್ ಗೆ ರೋಟರ್ ಅಳವಡಿಸಿಕೊಂಡು ಉಳುಮೆ ಮಾಡುತ್ತಿದ್ದ ವೇಳೆ ರೋಟರ್ ಯಂತ್ರಕ್ಕೆ ಸಿಲುಕಿ ಪ್ರಕಾಶ ಶೆಡೇನೂರು ಎನ್ನುವ ಯುವ ರೈತ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ನಾಳೆ ನಟ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಜೈಲಿನಿಂದಲೇ ನಟ ದರ್ಶನ್ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ನಟ ದರ್ಶನ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ನಟ ದರ್ಶನ್ ಅಭಿಮಾನಿಗಳಿಗೆ ನೀಡಿದ ಸಂದೇಶ ನನ್ನ ಪ್ರೀತಿಯ ಸೆಲೆಬ್ರಿಟಿಗಳೇ, ಈ ಸಂದೇಶ ನನ್ನ ಹೃದಯದಿಂದ ಬಂದಿದೆ, ವಿಜಿ ನಿಮ್ಮೆಲ್ಲರಿಗೂ ತಲುಪಿಸುತ್ತಾಳೆ. ಅವರು ನಿಮ್ಮೆಲ್ಲರ ಪ್ರೀತಿ, ಕಾಳಜಿ, ನಿಮ್ಮ ದಣಿವರಿಯದ ಬೆಂಬಲ, ರಾಜ್ಯಾದ್ಯಂತ ನಿಮ್ಮ ಅವಿಶ್ರಾಂತ ಪ್ರಚಾರಗಳ ಬಗ್ಗೆ ಪ್ರತಿ ಬಾರಿಯೂ ನನಗೆ ತಿಳಿಸುತ್ತಿದ್ದಾರೆ. ದೂರದಿಂದ ಕೂಡ, ಪ್ರತಿ ಕ್ಷಣವೂ ನನ್ನೊಂದಿಗೆ ನಿಮ್ಮ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ. ನಾನು ನಿಮಗೆ ಹೇಳಲು ಬಯಸುವುದೇನೆಂದರೆ… ದಯವಿಟ್ಟು ಜನರು ಏನು ಹೇಳಿದರೂ ಚಿಂತಿಸಬೇಡಿ. ಯಾವುದೇ ವದಂತಿ ಅಥವಾ ಯಾವುದೇ ನಕಾರಾತ್ಮಕತೆಯು ನಿಮ್ಮ ಹೃದಯವನ್ನು ಅಲುಗಾಡಿಸಲು ಬಿಡಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ, ಮತ್ತು ಇಂದು ಎಂದಿಗಿಂತಲೂ ಹೆಚ್ಚಾಗಿ, ನೀವು ನನ್ನ…
ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ. ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ,ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವೆಬ್ ಸೈಟ್ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. http://ahara.kar.nic.in ವೆಬ್ಟ್ ಗಮನಿಸಬಹುದಾಗಿದೆ. ಹೊಸ ಸದಸ್ಯರ ಸೇರ್ಪಡೆ * ಪೋಟೋ ಬದಲಾವಣೆ * ಹೆಸರು ಡಿಲೆಟ್ * ಅಂಗಡಿ. ನಂ. ಬದಲಾವಣೆ * ಹೆಸರು ತಿದ್ದುಪಡಿ * ಮುಖ್ಯಸ್ಥರ ಬದಲಾವಣೆ ಅರ್ಜಿ ಸಲ್ಲಿಸಲು ದಾಖಲಾತಿಗಳು 1. ಸದಸ್ಯರ ಆಧಾರ ಕಾರ್ಡ್ ಕಡ್ಡಾಯ 2. ಸದಸ್ಯರ ಜಾತಿ ಮತ್ತು ಆದಾಯ…
ಭಾರತದಲ್ಲಿ ವಾಹನಗಳ ಮೇಲೆ ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ ಮತ್ತು ಅವುಗಳ ಅರ್ಥವೇನೆಂದು ಯೋಚಿಸಿದ್ದೀರಾ? ವಾಹನದ ನಂಬರ್ ಪ್ಲೇಟ್ ನ ಬಣ್ಣವು ವಾಹನದ ಮಾಲೀಕರು ಮತ್ತು ಉದ್ದೇಶಿತ ಬಳಕೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಭಾರತದಲ್ಲಿ ವಿವಿಧ ರೀತಿಯ ನಂಬರ್ ಪ್ಲೇಟ್ ಗಳು 1. ಕೆಂಪು ಬಣ್ಣದ ಸಂಖ್ಯೆಯ ಪ್ಲೇಟ್ ಈ ರೀತಿಯ ಪ್ಲೇಟ್ ಅನ್ನು ಭಾರತದ ರಾಷ್ಟ್ರಪತಿಗಳು ಮತ್ತು ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ಕಾಯ್ದಿರಿಸಲಾಗಿದೆ. ಈ ವಾಹನಗಳಲ್ಲಿ ಪರವಾನಗಿ ಸಂಖ್ಯೆಯನ್ನು ಭಾರತದ ಲಾಂಛನದಿಂದ ಬದಲಾಯಿಸಲಾಗುತ್ತದೆ. ಆದಾಗ್ಯೂ, ಭಾರತದ ಪ್ರಧಾನ ಮಂತ್ರಿಯ ಕಾರಿನ ನಂಬರ್ ಪ್ಲೇಟ್ ಸಾಮಾನ್ಯ ವ್ಯಕ್ತಿಯ ಕಾರಿನಂತೆ ಬಿಳಿ ಬಣ್ಣದ್ದಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ. 2. ನೀಲಿ ಬಣ್ಣದ ಸಂಖ್ಯೆಯ ಪ್ಲೇಟ್ ನೀಲಿ ಬಣ್ಣದ ನಂಬರ್ ಪ್ಲೇಟ್ ಅನ್ನು ವಿದೇಶಿ ಪ್ರತಿನಿಧಿಗಳು ಅಥವಾ ರಾಯಭಾರಿಗಳು ಬಳಸುವ ವಾಹನಗಳಿಗೆ ನಿಗದಿಪಡಿಸಲಾಗಿದೆ. ಈ ಪ್ಲೇಟ್ನಲ್ಲಿ ಸಂಖ್ಯೆಯನ್ನು ಬಿಳಿ ಶಾಯಿಯಲ್ಲಿ ಬರೆಯಲಾಗಿದೆ ಮತ್ತು ಇದು ಭಾರತದಲ್ಲಿನ ರಾಜ್ಯದ…
ಬೆಂಗಳೂರು : ರಾಜ್ಯದ ಭೂದಾಖಲೆಗಳ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಂದ ಸ್ವೀಕರಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 41849 ಕೆರೆಗಳಿವೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಕೆರೆಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ ಹಾಸನ- 6861 ತುಮಕೂರು -2047 ರಾಮನಗರ -1475 ಶಿವಮೊಗ್ಗ -4792 ಚಿಕ್ಕಮಗಳೂರು-1810 ಮೈಸೂರು-2991 ಬೆಂಗಳೂರು (ನ) -837 ಮಂಡ್ಯ-962 ಕೋಲಾರ- 3232 ಚಿಕ್ಕಬಳ್ಳಾಪುರ -1533 ಉತ್ತರ ಕನ್ನಡ -2118 ಬೆಳಗಾವಿ -1132 ದಾವಣಗೆರೆ -533 ಹಾವೇರಿ -2058 ಗದಗ -278 ಧಾರವಾಡ-1323 ರಾಯಚೂರು- 319 ಬಾಗಲಕೋಟೆ- 268 ವಿಜಯಪುರ-267 ದಕ್ಷಿಣ ಕನ್ನಡ-633 ಕೊಪ್ಪಳ-206 ಕೊಡಗು- 1127 ಚಿತ್ರದುರ್ಗ -437 ಬಳ್ಳಾರಿ-107 ಕಲಬುರ್ಗಿ- 254 ವಿಜಯನಗರ-219 ಬೀದರ್- 344 ಉಡುಪಿ-2030 ಯಾದಗಿರಿ-340 ಬೆಂಗಳೂರು (ಗ್ರಾ)-710 ಚಾಮರಾಜನಗರ-340 ಒಟ್ಟು- 41849














