Author: kannadanewsnow57

ನವದೆಹಲಿ :’ಶಕ್ತಿ’ಯ ವಿರುದ್ಧ ಹೋರಾಡುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ‘ಹಿಂದೂಫೋಬಿಕ್’ ಮತ್ತು ‘ಸ್ತ್ರೀದ್ವೇಷಿ’ ಎಂದು ಕರೆದಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಳವೀಯ, ಸನಾತನ ಧರ್ಮದ ವಿನಾಶಕ್ಕೆ ಕರೆ ನೀಡಿದ ಡಿಎಂಕೆಯ ಉದಯನಿಧಿ ಸ್ಟಾಲಿನ್ ನಂತರ, ಈಗ ರಾಹುಲ್ ಗಾಂಧಿ “ಶಕ್ತಿಯನ್ನು ಅವಮಾನಿಸುವ” ಸರದಿ ಬಂದಿದೆ ಎಂದು ಹೇಳಿದರು. ಮುಂಬೈನಲ್ಲಿ ಭಾನುವಾರ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಶಕ್ತಿಯ ವಿರುದ್ಧ ಹೋರಾಡುತ್ತಿವೆ ಎಂದು ಹೇಳಿದ್ದರು. ‘ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ. ಪ್ರಶ್ನೆಯೆಂದರೆ, ಆ ಶಕ್ತಿ ಯಾವುದು? ರಾಜನ ಆತ್ಮ ಇವಿಎಂನಲ್ಲಿದೆ. ಇದು ನಿಜ. ಇವಿಎಂ ಮತ್ತು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ರಾಜನ ಆತ್ಮ” ಎಂದು ರಾಹುಲ್ ಗಾಂಧಿ…

Read More

ಹೆರಿಗೆಯ ಆದ ನಂತರ ಕೂಡ ಯಾವುದೇ ಸಮಯದಲ್ಲಿ ತಲೆನೋವು ಬರಬಹುದು. ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಪ್ರಕಾರ, ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರು ಹೆರಿಗೆಯಾದ ಎರಡು ವಾರಗಳಲ್ಲಿ ತಲೆನೋವಿನ ಬಗ್ಗೆ ಹೇಳುತ್ತಾರೆ.ಆದರೆ ಕೆಲವು ಮಹಿಳೆಯರು ಒಂದು ತಿಂಗಳೊಳಗೆ  ಮೈಗ್ರೇನ್ ಸಮಸ್ಯೆಯನ್ನು ಹೊಂದುತ್ತಾರೆ. ಹೆರಿಗೆಯ ನಂತರದ ತಲೆನೋವು ಇದು ದೇಹದಲ್ಲಿ ರಾಸಾಯನಿಕ ಮತ್ತು ಭೌತಿಕ ಬದಲಾವಣೆಗಳಿಂದ ಸಂಭವಿಸುತ್ತದೆ. ಹಾರ್ಮೋನ್ ಮಟ್ಟವು ಕುಸಿದಾಗ ತಲೆನೋವು ದೂರವಾಗಬಹುದು. ಆದಾಗ್ಯೂ, ತಲೆನೋವು ದೀರ್ಘಕಾಲದವರೆಗೆ ಮುಂದುವರಿದರೆ,  ವೈದ್ಯರೊಂದಿಗೆ ಸಲಹೆ ಪಡೆಯಬೇಕು. ಡೆಲಿವರಿ ಡೇಟ್ ಹತ್ತಿರದಲ್ಲಿದೆ ಎಂದಾದರೆ ತಲೆನೋವನ್ನು  ಹೇಗೆ ತಪ್ಪಿಸಬಹುದು ಎಂದು ಗೊತ್ತಿರಬೇಕು. ಹೆರಿಗೆಯ ನಂತರ ತಲೆನೋವಿನ ಕಾರಣಗಳು ಗರ್ಭಾವಸ್ಥೆಯಲ್ಲಿ, ಈಸ್ಟ್ರೋಜೆನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳ ಮಟ್ಟವು ತುಂಬಾ ಹೆಚ್ಚಾಗುತ್ತದೆ. ಈಗಾಗಲೇ ಮೈಗ್ರೇನ್ ಸಮಸ್ಯೆ ಹೊಂದಿದ್ದರೆ ಈ ಸಮಯದಲ್ಲಿ ರೋಗಲಕ್ಷಣಗಳು ಕಡಿಮೆಯಾಗಬಹುದು. ಆದಾಗ್ಯೂ, ಹೆರಿಗೆಯ ನಂತರ, ಈ ಹಾರ್ಮೋನುಗಳು ಸಾಮಾನ್ಯವಾದಾಗ, ತಲೆನೋವು ಸಹ ಹಿಂತಿರುಗುತ್ತದೆ. ಹೆರಿಗೆಯ ನಂತರ, ಮಹಿಳೆಯರು ಹೆಚ್ಚಾಗಿ ಮಗುವಿನ ಆರೈಕೆಗೆ ತಮ್ಮ ಸಮಯವನ್ನು ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಮತ್ತು…

Read More

ಮೊಡವೆಯು ಹೇಗೆ ಉಂಟಾಗುತ್ತದೆ ಎಂದು ಹೇಳಲು ವಿಶೇಷ ವಿವರಣೆ ಬೇಕಿಲ್ಲ. ಅಂದಹಾಗೆ ಈ ಮೊಡವೆಯು ದೇಹದ ಯಾವುದೇ ಭಾಗದಲ್ಲಿ ಬೇಕಿದ್ದರೂ ಉಂಟಾಗಬಹುದು. ಆದರೆ ಸಾಮಾನ್ಯವಾಗಿ ಮೊಡೆಯು  ಮುಖ, ತೋಳು, ಎದೆ ಇಂತಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೊಡವೆಯು ನಿಮ್ಮ ತ್ವಚೆಯ ಅಂದವನ್ನು ಕೆಡಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡುತ್ತದೆ. ಹಾಗಾದರೆ ಮೊಡವೆ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಏನೆಲ್ಲ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ .. ಚಳಿಗಾಲದಲ್ಲಿ ನಿಮ್ಮ ಮುಖ ಹೆಚ್ಚು ಶುಷ್ಕವಾಗುತ್ತದೆ. ಒಣಗಾಳಿಯಿಂದಾಗಿ ತ್ವಚೆಯಲ್ಲಿ ಬಿರುಕು ಮೂಡುತ್ತದೆ. ಹೀಗಾಗಿ ಈ ಅವಧಿಯಲ್ಲಿ ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ವಿಷ ಅಂಶಗಳು ನಿಮ್ಮ ದೇಹದಿಂದ ವಿಸರ್ಜನೆಯಾಗುತ್ತದೆ. ಈ ಅವಧಿಯಲ್ಲಿ ಕೇವಲ ನೀರು ಕುಡಿಯುವುದು ಮಾತ್ರವಲ್ಲ ಸದಾ ಮುಖವನ್ನು ಸ್ವಚ್ಛವಾಗಿಯೂಇಟ್ಟುಕೊಳ್ಳಬೇಕು. ಇದಕ್ಕಾಗಿ ಒಳ್ಳೆಯ ಕ್ಲೆನ್ಸರ್​ ಹಾಗೂ ಟೋನರ್​ಗಳನ್ನು ಆಯ್ಕೆ ಮಾಡಿಕೊಳ್ಳಿ. ಮುಖ ತೊಳೆಯಲು ಉತ್ತಮ ಗುಣಮಟ್ಟದ ಫೇಸ್​ ವಾಶ್​ಗಳನ್ನು ಬಳಕೆ ಮಾಡಿ. ಚಳಿಗಾಲದಲ್ಲಿ ತ್ವಚೆಯು ಹೆಚ್ಚು ಶುಷ್ಕವಾಗಿ ಇರುತ್ತದೆ. ಇಂತಹ…

Read More

ನವದೆಹಲಿ: ದೆಹಲಿ ಜಲ ಮಂಡಳಿಗೆ (ಡಿಜೆಬಿ) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊರಡಿಸಿರುವ ಸಮನ್ಸ್ ನಿಂದ ಅರವಿಂದ್ ಕೇಜ್ರಿವಾಲ್ ಹೊರಗುಳಿಯಲಿದ್ದಾರೆ. ದೆಹಲಿ ಜಲ ಮಂಡಳಿಯಲ್ಲಿ (ಡಿಜೆಬಿ) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊರಡಿಸಿರುವ ಸಮನ್ಸ್ ನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊರಗುಳಿಯಲಿದ್ದಾರೆ ಎಂದು ಎಎಪಿ ತಿಳಿಸಿದೆ ಎಂದು ವರದಿಯಾಗಿದೆ.

Read More

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಭಸ್ಮವಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಭೈರತಿ ಉಗ್ರಾಣದ ಬಳಿಯ ಗಾಯಿತ್ರಿ ಅಸೋಸಿಯೇಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಘಟನೆ ಸಂಬಂಧ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿವೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಅಮೆರಿಕದ ಫ್ಲೋರಿಡಾದ ಜಾಕ್ಸನ್ವಿಲ್ಲೆ ಬೀಚ್ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ರಾತ್ರಿ ನಗರದ ಡೌನ್ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಜಾಕ್ಸನ್ವಿಲ್ಲೆ ಬೀಚ್ ಪೊಲೀಸ್ ಇಲಾಖೆ “ಪ್ರಸ್ತುತ ನಮ್ಮ ಡೌನ್ಟೌನ್ ಪ್ರದೇಶದಲ್ಲಿ ಸಕ್ರಿಯ ಶೂಟರ್ ಘಟನೆಯ ಬಗ್ಗೆ ಕೆಲಸ ಮಾಡುತ್ತಿದೆ” ಎಂದು ಹೇಳಿದೆ. ಅಪರಿಚಿತಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 23,830 ಜನಸಂಖ್ಯೆಯನ್ನು ಹೊಂದಿರುವ ಜಾಕ್ಸನ್ವಿಲ್ಲೆ ಬೀಚ್ ಮಿಯಾಮಿಯಿಂದ ಸುಮಾರು ಐದು ಗಂಟೆಗಳ ದೂರದಲ್ಲಿದೆ.

Read More

ಕೋಲ್ಕತಾ: ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ತಡರಾತ್ರಿ 12.10 ರ ಸುಮಾರಿಗೆ ಐದು ಅಂತಸ್ತಿನ, ನಿರ್ಮಾಣ ಹಂತದ ಕಟ್ಟಡ ಕುಸಿದಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗಾರ್ಡನ್ ರೀಚ್ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ಒಂದು ಭಾಗವು ಪಕ್ಕದ ಕೊಳೆಗೇರಿಯಲ್ಲಿ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ 10 ಕೊಳೆಗೇರಿ ನಿವಾಸಿಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಸ್ಥಳದಲ್ಲಿ ಕೆಲಸ ಮಾಡುತ್ತಿರುವ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಕತ್ತಲೆ ಮತ್ತು ಕ್ರೇನ್ಗಳನ್ನು ನಿಯೋಜಿಸಲು ಅಗತ್ಯವಾದ ಸ್ಥಳಾವಕಾಶದ ಕೊರತೆಯು ಸಮಸ್ಯೆಯನ್ನು ಒಡ್ಡುತ್ತಿದೆ” ಎಂದು ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮುಂಜಾನೆ 1.40 ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. https://twitter.com/ANI/status/1769550444399866020

Read More

ಬೇಸಿಗೆ ಸಮಯದಲ್ಲಿ ಶೂ ಧರಿಸೋದು ತುಂಬಾ ಕಷ್ಟ. ಪಾದ ಉರಿ ಬರುವ ಜೊತೆಗೆ ವಾಸನೆ ಬರಲು ಆರಂಭವಾಗುತ್ತದೆ. ಮನೆಯಲ್ಲಿಯೇ ಇರುವ ಕೆಲ ಸುಲಭ ಉಪಾಯದ ಮೂಲಕ ಶೂ ವಾಸನೆ ಬರದಂತೆ ಮಾಡಬಹುದು. ಶೂ ಮತ್ತು ಸಾಕ್ಸ್ ನ್ನು ಆಗಾಗ ತೊಳೆಯುತ್ತಿರಬೇಕು. ಶೂ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ.ಹಾಗೆ ಪ್ರತಿ ದಿನ ಸಾಕ್ಸ್ ಕೂಡ ತೊಳೆಯುತ್ತಿರಬೇಕು. ಶೂ ತೊಳೆಯುತ್ತಿದ್ದರೆ ಅದು ಯಾವಾಗಲೂ ಫ್ರೆಶ್ ಆಗಿರುತ್ತದೆ. ಇದರಿಂದ ವಾಸನೆಯನ್ನು ತಡೆಯಬಹುದು. ಶೂವನ್ನು ತಣ್ಣನೆಯ ನೀರು ಹಾಗೂ ಕೈನಿಂದ ತೊಳೆಯುವುದು ಒಳ್ಳೆಯದು. ಸೋಪ್ ಪುಡಿಯನ್ನು ಬಳಸುದಾದರೆ ಲೈಸೋಲ್ ಅಥವಾ ಪೈನ್ ಸೋಲ್ ನಂತಹ  ಸೋಂಕುನಿವಾರಕವನ್ನು ಹೆಚ್ಚಾಗಿ ಬಳಸಬಹುದು. ಶೂ ವಾಶ್ ಮಾಡಿದ ನಂತರ ಅದನ್ನು ಗಾಳಿಯಾಡುವ ಜಾಗದಲ್ಲಿ ಇಟ್ಟು ಚೆನ್ನಾಗಿ  ಒಣಗಿಸಬೇಕು. ಕೆಲವೊಂದು ಹಣ್ಣಿನ ಸಿಪ್ಪೆಯಿಂದ ಶೂ ಮತ್ತು ಸಾಕ್ಸ್ ನ ದುರ್ವಾಸನೆ ತೆಗೆಯಬಹುದು. ವಾಸನೆ ತೆಗೆಯಲು ಹಣ್ಣಿನ ಸಿಪ್ಪೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ನೀವು ಕಿತ್ತಳೆ, ನಿಂಬೆ ಹಣ್ಣನ್ನು ಬಳಸಬಹುದು. ಕಿತ್ತಳೆ ಮತ್ತು ನಿಂಬೆ ಹಣ್ಣಿನ…

Read More

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್‌ ಇದೀಗ ಲೋಕಸಭೆ ಚುನಾವಣೆಗೆ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಕಾಂಗ್ರೆಸ್‌ ಪಕ್ಷವು 14ಜಿಲ್ಲೆಗಳಿಗೆ ಒಬ್ಬರಂತೆ ಇಬ್ಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. 2ನೇ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳ ಉಸ್ತುವಾರಿಯಾಗಿ ಜಿ.ಜಿ ಚಂದ್ರಶೇಖರ್ ನೇಮಕ ಮಾಡಲಾಗಿದ್ದು,3ನೇ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳ ಉಸ್ತುವಾರಿಯಾಗಿ ಬಸವರಾಜ ರಾಯರೆಡ್ಡಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Read More

ಹೋಟೆಲ್‌ ರೆಸ್ಟೋರೆಂಟ್‌ ಅಥವಾ ಔತಣಕೂಟಕ್ಕೆ ಹೋದಾಗ ಅಲ್ಲಿನ ಸಾಮಾನ್ಯ ನೀರಿನ ಬದಲು ಮಿನೆರಲ್ ವಾಟರ್ ಬಾಟಲಿಯನ್ನೇ ಕುಡಿಯಲು ನೀಡುವುದನ್ನು ಗಮನಿಸಿರಬಹುದು. ಸಾಮಾನ್ಯ ನೀರಿಗಿಂತಲೂ ಈ ನೀರು ಹೆಚ್ಚು ನೈಸರ್ಗಿಕ ಹಾಗೂ ಆರೋಗ್ಯಕರ ಎಂದು ಪರಿಗಣಿಸಲ್ಪಡುತ್ತದೆ. ಹಾಗಾದರೆ ಸಾಮಾನ್ಯ ನೀರಿಗಿಂತ ಇದ್ರಲ್ಲೇನು ವಿಶೇಷ. ಇಲ್ಲಿದೆ ಮಾಹಿತಿ.. ಕ್ಲೋರಿನ್ ನೀರನ್ನು ಸೋಂಕುನಿವಾರಕಗೊಳಿಸಲು ಆರ್ಥಿಕ, ಪರಿಣಾಮಕಾರಿ ಮತ್ತು ಸ್ವೀಕಾರಾರ್ಹ ಸೋಂಕು ನಿವಾರಕವಾಗಿದೆ. ಒಂದು ಲೀಟರ್ ನೀರಿಗೆ ಎರಡು ಹನಿ ಕ್ಲೋರಿನೇಟ್ ಅನ್ನು ಮಾತ್ರ ಸೇರಿಸಬೇಕು. ಇದಕ್ಕಿಂತ ಹೆಚ್ಚಿನದನ್ನು ಬಳಸುವುದು ಹಾನಿಕಾರಕವಾಗಿದೆ. ಇದಕ್ಕಿಂತ ಕಡಿಮೆ ಕ್ಲೋರಿನೇಟ್ ಹಾಕಿದರೆ ನೀರಿನ ಅಶುದ್ಧತೆ ದೂರವಾಗದೆ ರೋಗ ಬರುವ ಸಾಧ್ಯತೆ ಇರುತ್ತದೆ.ಕ್ಲೋರಿನ್ ನೀರಿನಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಯುತ್ತದೆ .. ಕ್ಲೋರಿನೇಟೆಡ್ ನೀರಿನಲ್ಲಿ ವಿವಿಧ ಖನಿಜಗಳಿವೆ. ಇವೆಲ್ಲವೂ ದೇಹದ ಚಟುವಟಿಕೆಗಳಿಗೆ ಅಗತ್ಯವಾಗಿದೆ ಹಾಗೂ ಸ್ನಾಯುಗಳ ಸರಿಯಾದ ಬೆಳವಣಿಗೆಗೆ ನೆರವಾಗುತ್ತದೆ. ಸ್ನಾಯುಗಳು ಸಂಕುಚಿತ ಮತ್ತು ವಿಕಸಿತಗೊಳ್ಳಲು ನೆರವಾಗುತ್ತವೆ. ಅಲ್ಲದೇ ವ್ಯಕ್ತಿಯ ಒಟ್ಟಾರೆ ಆರೋಗ್ಯ…

Read More