Subscribe to Updates
Get the latest creative news from FooBar about art, design and business.
Author: kannadanewsnow57
ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯೊಂದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಬದುಕಿಲ್ಲ, ಅಮೆರಿಕಾ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಟ್ರಂಪ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಎನ್ಬಿಸಿ ನ್ಯೂಸ್ ಮತ್ತು ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮೊಜ್ತಬಾ ಖಮೇನಿ ಅವರ ಸಾವಿನ ಬಗ್ಗೆ ತಮಗೆ ಮಾಹಿತಿ ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.”ಮೊಜ್ತಬಾ ಖಮೇನಿ ಬದುಕಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಫೆಬ್ರವರಿ 28 ರಂದು ನಡೆದ ದಾಳಿಯ ನಂತರ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯಾರೂ ಅವರನ್ನು ತೋರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅದರ ಅರ್ಥ ಅವರು ಹತರಾಗಿದ್ದಾರೆ ಎಂದೇ ಆಗಿದೆ,” ಎಂದು ಟ್ರಂಪ್ ಹೇಳಿದ್ದಾರೆ. ಫೆಬ್ರವರಿ 28 ರಂದು ಅಮೆರಿಕಾ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದವು. ಇದೇ ದಾಳಿಯಲ್ಲಿ ಅಲಿ ಖಮೇನಿ…
ಬೆಂಗಳೂರು: ನೀವು ಹೋಟೆಲ್, ಕೆಫೆ ಅಥವಾ ಟೀ ಅಂಗಡಿ ನಡೆಸುತ್ತಿದ್ದೀರಾ? ಲಾಭದ ಆಸೆಗೆ ಬಿದ್ದು ಗೃಹಬಳಕೆಯ (Domestic) ಗ್ಯಾಸ್ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ ಎಚ್ಚರ! ರಾಜ್ಯದಾದ್ಯಂತ ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ನೂರಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. 316 ಪ್ರಕರಣ ದಾಖಲು, ಸಾವಿರಾರು ಸಿಲಿಂಡರ್ ವಶ ವಾಣಿಜ್ಯ ಉದ್ದೇಶಕ್ಕೆ ಕಡಿಮೆ ಬೆಲೆಯ ಗೃಹಬಳಕೆ ಸಿಲಿಂಡರ್ ಬಳಸುತ್ತಿದ್ದ ಹೋಟೆಲ್ಗಳ ಮೇಲೆ ಅಧಿಕಾರಿಗಳು ಗದಾಪ್ರಹಾರ ನಡೆಸಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆ ಅಡಿ ಒಟ್ಟು 316 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅಕ್ರಮವಾಗಿ ಬಳಸುತ್ತಿದ್ದ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾವಾರು ದಾಖಲಾದ ಪ್ರಕರಣಗಳ ವಿವರ: ಬೆಂಗಳೂರು (ಪೀಣ್ಯ): 45 ಪ್ರಕರಣ ಬೆಂಗಳೂರು (ಚಿಕ್ಕಜಾಲ): 209 ಪ್ರಕರಣ ಯಾದಗಿರಿ: 46 ಪ್ರಕರಣ ದಾವಣಗೆರೆ: 13 ಪ್ರಕರಣ ಶಿವಮೊಗ್ಗ: 03 ಪ್ರಕರಣ ಅಕ್ರಮ ರೀಫಿಲ್ಲಿಂಗ್ ಜಾಲ ಪತ್ತೆ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ಮೇಲೆ ದಾಳಿ ನಡೆಸಿರುವ…
ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡ ಕಚೇರಿ) ಮಾತ್ರ ದೊರೆಯುತ್ತಿದ್ದ ಪ್ರಮುಖ ಸೇವೆಗಳು ಈಗ ನಿಮ್ಮ ಗ್ರಾಮದ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಲಭ್ಯವಿರಲಿವೆ. ಮುಖ್ಯವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಪ್ರಮಾಣ ಪತ್ರಗಳಿಗೆ ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯವಿರುವ ದಾಖಲೆಗಳು: ಅರ್ಜಿದಾರರು ಈ ಕೆಳಗಿನ ದಾಖಲೆಗಳೊಂದಿಗೆ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು: ರೇಷನ್ ಕಾರ್ಡ್ (ಪಡಿತರ ಚೀಟಿ) ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ (Voter ID) ಶಾಲಾ ವರ್ಗಾವಣೆ ಪ್ರಮಾಣ ಪತ್ರ (Transfer Certificate) ವಂಶವೃಕ್ಷ (ಗ್ರಾಮ ಲೆಕ್ಕಿಗರಿಂದ ಪಡೆದದ್ದು – ಐಚ್ಛಿಕ) ವೇತನ ಚೀಟಿ ಅಥವಾ ಆದಾಯ ತೆರಿಗೆ ಪಾವತಿ ದಾಖಲೆ (ಆದಾಯ ಪ್ರಮಾಣ ಪತ್ರಕ್ಕಾಗಿ) ಕಾರ್ಯವಿಧಾನ ಹೇಗೆ? ಅರ್ಜಿದಾರರು ಮೇಲ್ಕಂಡ ದಾಖಲೆಗಳೊಂದಿಗೆ ಬಾಪೂಜಿ…
ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಸುಳ್ಳು ಡಿಜಿಟಲ್ ಮಾಹಿತಿ ಹರಡಿದ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಇರಾನ್ ಪರವಾಗಿ ಪ್ರಚಾರ ನಡೆಸಿದ ಆರೋಪದ ಮೇಲೆ ಭಾರತೀಯರು ಸೇರಿದಂತೆ ವಿವಿಧ ರಾಷ್ಟ್ರಗಳ 25 ವ್ಯಕ್ತಿಗಳನ್ನು ಬಂಧಿಸಿದೆ. ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ಅವರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತರನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ವಿವರ ಮತ್ತು ಆರೋಪಗಳು: 1. ವಿಡಿಯೋ ತಿರುಚಿದ ಗುಂಪು (12 ಮಂದಿ): ಈ ಗುಂಪಿನಲ್ಲಿ ಭಾರತ, ನೇಪಾಳ, ಈಜಿಪ್ಟ್, ಪಾಕಿಸ್ತಾನ ಮತ್ತು ಫಿಲಿಪೈನ್ಸ್ನ 12 ಪುರುಷರು ಮತ್ತು ಮಹಿಳೆಯರಿದ್ದಾರೆ. ಇವರು ಯುಎಇ ಆಕಾಶದಲ್ಲಿ ಕ್ಷಿಪಣಿಗಳು ಹಾದುಹೋಗುವ ಅಥವಾ ಅವುಗಳನ್ನು ಹೊಡೆದುರುಳಿಸುವ ನೈಜ ವಿಡಿಯೋಗಳಿಗೆ ಸೌಂಡ್ ಎಫೆಕ್ಟ್ ಮತ್ತು ಸುಳ್ಳು ಕಾಮೆಂಟ್ ಸೇರಿಸಿ, ದೇಶದ ಮೇಲೆ ಸಕ್ರಿಯ ದಾಳಿ ನಡೆಯುತ್ತಿದೆ ಎಂಬಂತೆ ಬಿಂಬಿಸಿದ್ದರು. ಇದು…
ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು ಇಂದು ಪ್ರಕಟಿಸಲಿದೆ. ಇಂದು ಸಂಜೆ 4 ಗಂಟೆಗೆ ನವದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ದಿನಾಂಕಗಳನ್ನು ಘೋಷಿಸಲಿದ್ದಾರೆ. ಚುನಾವಣೆ ಎದುರಿಸಲಿರುವ ರಾಜ್ಯಗಳು: ಪಶ್ಚಿಮ ಬಂಗಾಳ ತಮಿಳುನಾಡು ಕೇರಳ ಅಸ್ಸಾಂ ಪುದುಚೇರಿ (ಕೇಂದ್ರಾಡಳಿತ ಪ್ರದೇಶ)
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನೂ ಕಾಡುತ್ತಿರುವ ಒಂದೇ ಸಮಸ್ಯೆ ಎಂದರೆ ‘ಮೂಳೆ ನೋವು’. ಕೀಲು ನೋವು ಮತ್ತು ಬೆನ್ನು ನೋವಿನ ಬಗ್ಗೆ ಆಸ್ಪತ್ರೆಗಳಿಗೆ ಹೋಗುವ ಬದಲು, ನಮ್ಮ ಅಜ್ಜಿಯರು ಅನುಸರಿಸುತ್ತಿದ್ದ ‘ಆಹಾರವೇ ಔಷಧ’ ವಿಧಾನವನ್ನು ಅನುಸರಿಸುವುದು ಉತ್ತಮ. ಅನೇಕ ಜನರು ರಾಗಿ ಅಂಬಲಿ ಕುಡಿಯಲು ಇಷ್ಟಪಡುವುದಿಲ್ಲ. ಆದರೆ, ನೀವು ಇದನ್ನು ಈ ರೀತಿ ರೊಟ್ಟಿಯಂತೆ ಮಾಡಿದರೆ, ಅವರು ಇನ್ನೂ ಎರಡು ತಿನ್ನುತ್ತಾರೆ. ಅದನ್ನು ಹೇಗೆ ತಯಾರಿಸಬೇಕೆಂದು ನೋಡೋಣ! ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 2 ಕಪ್ ಬೀನ್ಸ್ – 1 ಹಿಡಿ ಈರುಳ್ಳಿ – 2 (ದೊಡ್ಡದು) ಹಸಿರು ಮೆಣಸಿನಕಾಯಿ – 2 ಅಥವಾ 3 ಧಾನ್ಯಗಳು – 1 ಟೀಚಮಚ ಮೆಣಸು – ½ ಟೀಚಮಚ (ಪುಡಿಮಾಡಿದ್ದು) ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ ಹಸಿ ತೆಂಗಿನಕಾಯಿ ತುರಿ – 2 ಚಮಚ ಉಪ್ಪು – ರುಚಿಗೆ ತಕ್ಕಷ್ಟು ಎಣ್ಣೆ – ಹುರಿಯಲು ತಯಾರಿ: ರಾಗಿ…
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಕೇವಲ ಎರಡು ವರ್ಷಗಳ ಕಾಲಾವಕಾಶದೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಹೊಸ ಆದೇಶದಲ್ಲಿ ಏನಿದೆ? ಈ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಅಥವಾ ಉತ್ತೀರ್ಣರಾಗಲು ಒಟ್ಟು 6 ಪ್ರಯತ್ನಗಳ (6 ಆರು ಬಾರಿ ಪರೀಕ್ಷೆ ಬರೆಯುವ) ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಅವಧಿಯನ್ನು ಕೇವಲ 2 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಯಾರಿಗೆ ಅನ್ವಯ?: ಈ ನಿಯಮವು ರೆಗ್ಯುಲರ್ (ನಿಯಮಿತ), ಖಾಸಗಿ ಮತ್ತು ಪುನರಾವರ್ತಿತ (Repeaters) ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ. ಗುರಿ: ವಿದ್ಯಾರ್ಥಿಗಳು ಶೀಘ್ರವಾಗಿ ಪರೀಕ್ಷೆ ಮುಗಿಸಿ ಉನ್ನತ ವ್ಯಾಸಂಗಕ್ಕೆ ಸೇರಲಿ ಎಂಬ ಉದ್ದೇಶ ಇದರ ಹಿಂದಿದೆ ಎನ್ನಲಾಗಿದೆ. ಬದಲಾವಣೆಗೆ ಕಾರಣವೇನು? ಸರ್ಕಾರವು 2024-25ರಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಾರ್ಷಿಕ 3 ಪರೀಕ್ಷೆಗಳ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅಂಕ…
ಬೆಂಗಳೂರು: ವರ್ಗಾವಣೆ ಭಾಗ್ಯಕ್ಕಾಗಿ ಗಿಳಿ ಶಾಸ್ತ್ರ ನಂಬಿದ ಐಟಿ ಅಧಿಕಾರಿಯೊಬ್ಬರಿಗೆ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಪ್ರಕರಣಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಭಾರತಿನಗರ ಠಾಣೆ ಪೊಲೀಸರು ಆರೋಪಿ ಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. ನಡೆದಿದ್ದೇನು? ಕೋರಮಂಗಲದ ಐಟಿ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯನಾರಾಯಣ್ ಅವರು ತಮ್ಮ ವರ್ಗಾವಣೆ (Transfer) ವಿಚಾರವಾಗಿ ಚಿಂತಿತರಾಗಿದ್ದರು. ಈ ವೇಳೆ ರಸ್ತೆಯಲ್ಲಿ ಗಿಳಿ ಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿದೆ. “ನಿಮ್ಮ ಮುಖ ನೋಡಿ ಜಾತಕ ಹೇಳುತ್ತೇನೆ, ಪೂಜೆ ಮಾಡಿಸಿದರೆ ನಿಮ್ಮ ಜೀವನ ಸುಧಾರಿಸುತ್ತದೆ ಮತ್ತು ಅಂದುಕೊಂಡ ಕೆಲಸಗಳಾಗುತ್ತವೆ” ಎಂದು ಶೇಖರ್ ಅಧಿಕಾರಿಯನ್ನು ನಂಬಿಸಿದ್ದಾನೆ. ವಂಚನೆಯ ಹಂತಗಳು: ಪೂಜೆಯ ನೆಪ: ಮೊದಲು 50 ಸಾವಿರ ರೂಪಾಯಿ ಪಡೆದು ಸಣ್ಣ ಮಟ್ಟದ ಪೂಜೆ ಮಾಡಿದ್ದ ಶೇಖರ್, ನಂತರ ಪದೇ ಪದೇ ಅಧಿಕಾರಿಗೆ ಕರೆ ಮಾಡಿ ನಂಬಿಕೆ ಹುಟ್ಟಿಸಿದ್ದಾನೆ. ದೊಡ್ಡ ಪೂಜೆಯ ಆಮಿಷ: ಅಧಿಕಾರಿ ತನ್ನ ವರ್ಗಾವಣೆ ಬಗ್ಗೆ ಕೇಳಿದಾಗ, ಅದಕ್ಕೆ “ದೊಡ್ಡ ಪೂಜೆ” ಮಾಡಬೇಕೆಂದು ಹೇಳಿ…
ಬೆಂಗಳೂರು: ಆಸ್ತಿ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ಅತ್ಯಂತ ಪ್ರಮುಖವಾದ ದಾಖಲೆಯಾಗಿರುವ ಋಣಭಾರ ಪ್ರಮಾಣಪತ್ರ (EC) ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ಕಾವೇರಿ 2 (Kaveri 2.0) ವೆಬ್ ಅಪ್ಲಿಕೇಶನ್ ಮೂಲಕ 2004ರ ವರ್ಷದ ಹಿಂದಿನ ಇಸಿಗಳನ್ನು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ: ಲಾಗಿನ್ ಪ್ರಕ್ರಿಯೆ: ಮೊದಲು ಸಾರ್ವಜನಿಕರು ಕಾವೇರಿ 2 ವೆಬ್ಸೈಟ್ಗೆ ಲಾಗಿನ್ ಆಗಿ ‘Start New Application’ ಮೇಲೆ ಕ್ಲಿಕ್ ಮಾಡಬೇಕು. ಸೇವೆ ಆಯ್ಕೆ ಸೇವೆಗಳ ಪಟ್ಟಿಯಲ್ಲಿ ‘Online EC’ ಆಯ್ಕೆಯನ್ನು ಆರಿಸಿಕೊಂಡು, ಅಲ್ಲಿ ‘Before 01-01-2004’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಸ್ತಿ ವಿವರ ನಿಮ್ಮ ಆಸ್ತಿಯು ಕೃಷಿ (Agriculture) ಅಥವಾ ಕೃಷಿಯೇತರ (Non-Agriculture) ಆಸ್ತಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಕೃಷಿ ಭೂಮಿಯಾಗಿದ್ದರೆ ಮ್ಯಾಪ್ (Map) ಮೂಲಕ ಅಥವಾ ಮ್ಯಾನುವಲ್ ಆಗಿ ವಿವರಗಳನ್ನು ನೀಡಬಹುದು. ಮಾಹಿತಿ ಸಲ್ಲಿಕೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ಗಳನ್ನು…
ಇಂದಿನ ದಿನಗಳಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಲಭ್ಯವಿರುವ ಬ್ರಾಯ್ಲರ್ ಚಿಕನ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ನೀವು ಬ್ರಾಯ್ಲರ್ ಕೋಳಿಯ ಮೂಳೆಯನ್ನು ಕಚ್ಚಿ ತಿನ್ನುವ ಅಥವಾ ಅದರೊಳಗಿನ ಮಜ್ಜೆಯನ್ನು (Marrow) ಹೀರುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಈ ವರದಿ ನಿಮಗಾಗಿ. ಬ್ರಾಯ್ಲರ್ ಕೋಳಿಗಳ ಬೆಳವಣಿಗೆಯ ಹಿಂದಿನ ಕರಾಳ ಸತ್ಯ ಪೌಲ್ಟ್ರಿ ಫಾರಂಗಳಲ್ಲಿ ಕೋಳಿಗಳು ಅತಿ ವೇಗವಾಗಿ ಬೆಳೆಯಲು ಮತ್ತು ಹೆಚ್ಚಿನ ತೂಕ ಬರಲು ಅನೇಕ ಅಸ್ವಾಭಾವಿಕ ಪದ್ಧತಿಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಹಾರ್ಮೋನ್ ಇಂಜೆಕ್ಷನ್ಗಳು, ರಾಸಾಯನಿಕಯುಕ್ತ ಆಹಾರ ಮತ್ತು ಹೆಚ್ಚಿನ ಪ್ರಮಾಣದ ಆಂಟಿಬಯೋಟಿಕ್ಗಳನ್ನು ನೀಡಲಾಗುತ್ತದೆ. ಈ ಹಾನಿಕಾರಕ ರಾಸಾಯನಿಕಗಳ ಪ್ರಭಾವವು ಕೋಳಿಯ ಮಾಂಸಕ್ಕಿಂತ ಹೆಚ್ಚಾಗಿ ಅದರ ಮೂಳೆಗಳಲ್ಲಿ ಸಂಗ್ರಹವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮೂಳೆ ಮಜ್ಜೆ: ಯಾವುದು ವರ? ಯಾವುದು ಶಾಪ? ಸಾಮಾನ್ಯವಾಗಿ ಪ್ರಾಣಿಗಳ ಮೂಳೆಯೊಳಗೆ ಇರುವ ಮಜ್ಜೆಯು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಕುರಿ ಅಥವಾ ಆಡು: ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾದವರಿಗೆ ವೈದ್ಯರು ಕುರಿ ಮೂಳೆಯ ಸೂಪ್…














