Subscribe to Updates
Get the latest creative news from FooBar about art, design and business.
Author: kannadanewsnow57
ಪ್ರಸ್ತುತ ಇಂದಿನ ಜಂಜಾಟದ ಜೀವನಶೈಲಿಯಲ್ಲಿ ವಯಸ್ಸಿನ ಭೇದವಿಲ್ಲದೆ ಕಾಡುತ್ತಿರುವ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅದುವೇ ಹೈ ಬಿಪಿ (ರಕ್ತದೊತ್ತಡ). ವೈದ್ಯಕೀಯ ಲೋಕದಲ್ಲಿ ಇದನ್ನು ‘ಸೈಲೆಂಟ್ ಕಿಲ್ಲರ್’ (ಮೌನ ಹಂತಕ) ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ಕಾಯಿಲೆ ದೇಹದಲ್ಲಿದ್ದರೂ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಹೊರಬೀಳುವುದಿಲ್ಲ. ಆದರೆ, ಒಳಗೊಳಗೇ ಇದು ಹೃದಯಾಘಾತ (Heart Attack), ಕಿಡ್ನಿ ವೈಫಲ್ಯ ಮತ್ತು ಪಾರ್ಶ್ವವಾಯು (Paralysis) ನಂತಹ ಪ್ರಾಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್ ವರದಿಯ ಪ್ರಕಾರ, ಬಿಪಿ ಇರುವವರು ಪ್ರಾಣಾಪಾಯದಿಂದ ಪಾರಾಗಬೇಕಾದರೆ ಪ್ರಮುಖವಾಗಿ 4 ರೀತಿಯ ಆಹಾರ ಪದಾರ್ಥಗಳಿಂದ ತಕ್ಷಣವೇ ದೂರವಿರಬೇಕು. 1. ಉಪ್ಪು: ಬಿಪಿಯ ಪ್ರಧಾನ ಶತ್ರು ರಕ್ತದೊತ್ತಡ ಹೆಚ್ಚಾಗಲು ಮುಖ್ಯ ಕಾರಣ ನಾವು ಸೇವಿಸುವ ಉಪ್ಪು. ಆಹಾರದಲ್ಲಿ ಉಪ್ಪಿನಂಶ ಹೆಚ್ಚಾದರೆ ರಕ್ತನಾಳಗಳಲ್ಲಿ ನೀರು ಶೇಖರಣಗೊಂಡು ಒತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಭಾರವನ್ನು ಬೀರುತ್ತದೆ. ಪರಿಹಾರ: ಅಡುಗೆಯಲ್ಲಿ ಉಪ್ಪನ್ನು ಕಡಿಮೆ ಮಾಡಿ. ಊಟ ಮಾಡುವಾಗ ಮೇಲೆ ಪ್ರತ್ಯೇಕವಾಗಿ…
ಬೆಂಗಳೂರು: ಭಾರತೀಯ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ ಮನೆಯಲ್ಲಿ ಓಡಾಡುವ ‘ಹಲ್ಲಿ’ ಮನುಷ್ಯನ ದೇಹದ ಮೇಲೆ ಬಿದ್ದರೆ ಅದಕ್ಕೊಂದು ವಿಶೇಷ ಅರ್ಥವಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದನ್ನು ‘ಗೌಳಿ ಶಾಸ್ತ್ರ’ ಎಂದೂ ಕರೆಯಲಾಗುತ್ತದೆ. ಹಲ್ಲಿ ದೇಹದ ಯಾವ ಭಾಗದ ಮೇಲೆ ಬೀಳುತ್ತದೆ ಮತ್ತು ಯಾರ ಮೇಲೆ ಬೀಳುತ್ತದೆ ಎಂಬುದರ ಆಧಾರದ ಮೇಲೆ ಶುಭ-ಅಶುಭ ಫಲಿತಾಂಶಗಳನ್ನು ನಿರ್ಧರಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಹಲ್ಲಿ ಬೀಳುವ ಶಾಸ್ತ್ರದಲ್ಲಿ ಭಿನ್ನತೆಯಿದೆ. ಉದಾಹರಣೆಗೆ, ಹಲ್ಲಿಯು ಪುರುಷನ ಬಲಭಾಗಕ್ಕೆ ಬಿದ್ದರೆ ಶುಭ ಹಾಗೂ ಎಡಭಾಗಕ್ಕೆ ಬಿದ್ದರೆ ಅಶುಭ ಎನ್ನಲಾಗುತ್ತದೆ. ಅದೇ ರೀತಿ, ಮಹಿಳೆಯರ ಎಡಭಾಗಕ್ಕೆ ಬಿದ್ದರೆ ಶುಭ ಮತ್ತು ಬಲಭಾಗಕ್ಕೆ ಬಿದ್ದರೆ ಅಶುಭ ಶಕುನ ಎಂದು ಪರಿಗಣಿಸಲಾಗುತ್ತದೆ. ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನೆಲ್ಲಾ ಬದಲಾವಣೆಗಳಾಗಬಹುದು? ಇಲ್ಲಿದೆ ಸಂಪೂರ್ಣ ವಿವರ: ತಲೆ ಮತ್ತು ಮುಖದ ಭಾಗದ ಮೇಲೆ ಬಿದ್ದರೆ: ತಲೆಯ ಮೇಲೆ: ನಿಮ್ಮ ತಲೆಯ ಮೇಲೆ ಹಲ್ಲಿ ಬಿದ್ದರೆ…
ಇಂದಿನ ಡಿಜಿಟಲ್ ಜಮಾನಾದಲ್ಲಿ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ (Online Money Transfer) ಮಾಡಬಹುದು. ಆದರೂ ಕೂಡ ದೊಡ್ಡ ಮೊತ್ತದ ವ್ಯವಹಾರಗಳಿಗೆ ಇಂದಿಗೂ ‘ಬ್ಯಾಂಕ್ ಚೆಕ್’ (Bank Cheque) ಅತ್ಯಂತ ಸುರಕ್ಷಿತ ಮತ್ತು ಜನಪ್ರಿಯ ಮಾರ್ಗವಾಗಿದೆ. ಆದರೆ, ಚೆಕ್ ತುಂಬುವಾಗ ನಾವೆಲ್ಲರೂ ಒಂದಲ್ಲ ಒಂದು ಬಾರಿ ಒಂದು ಸಣ್ಣ ಗೊಂದಲಕ್ಕೆ ಒಳಗಾಗಿಯೇ ಇರುತ್ತೇವೆ. ಅದರಲ್ಲೂ ಲಕ್ಷ ರೂಪಾಯಿಗಳ ಚೆಕ್ ಬರೆಯುವಾಗ ಇಂಗ್ಲಿಷ್ನಲ್ಲಿ ‘Lakh’ ಎಂದು ಬರೆಯಬೇಕೋ ಅಥವಾ ‘Lac’ ಎಂದು ಬರೆಯಬೇಕೋ ಎಂಬ ಡೌಟ್ ಬಹುತೇಕರಿಗೆ ಬಂದಿರುತ್ತದೆ. ಹಾಗಾದರೆ ಬ್ಯಾಂಕಿಂಗ್ ನಿಯಮಗಳ ಪ್ರಕಾರ ಇದರಲ್ಲಿ ಯಾವುದು ಸರಿ? ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಗ್ಗೆ ಏನು ಹೇಳುತ್ತದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ‘Lakh’ ಮತ್ತು ‘Lac’ ಪದಗಳ ನಡುವಿನ ವ್ಯತ್ಯಾಸವೇನು? ನಾವೆಲ್ಲರೂ ಸಾಮಾನ್ಯವಾಗಿ ಬಳಸುವ ಈ ಎರಡು ಪದಗಳ ಅರ್ಥದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇಂಗ್ಲಿಷ್ ನಿಘಂಟಿನ (English Dictionary) ಪ್ರಕಾರ ಅವುಗಳ ನಿಜವಾದ ಅರ್ಥ ಹೀಗಿದೆ: ಲಕ್ಷ (Lakh):…
ಬೆಂಗಳೂರು: ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ಉನ್ನತ ಶಿಕ್ಷಣಕ್ಕೆ ದಾಖಲಾಗಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಕಾಲೇಜುಗಳಿಗೆ ಅಲೆದು ವರ್ಗಾವಣೆ ಪ್ರಮಾಣ ಪತ್ರ (Transfer Certificate – TC) ಪಡೆಯುವ ಕಿರಿಕಿರಿ ಇರುವುದಿಲ್ಲ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕೇವಲ ಫಲಿತಾಂಶದ ದತ್ತಾಂಶದ (Result Data) ಆಧಾರದ ಮೇಲೆ ನೇರವಾಗಿ ಡಿಜಿಲಾಕರ್ (DigiLocker) ಮೂಲಕ ಕ್ಯೂಆರ್ ಕೋಡ್ (QR Code) ಹೊಂದಿರುವ “ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ” ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಹೊಸ ವ್ಯವಸ್ಥೆಯು ಪ್ರಸಕ್ತ ಸಾಲಿನಿಂದಲೇ ಪ್ರಾಯೋಗಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ. ಈ ನೂತನ ವ್ಯವಸ್ಥೆಯ ಪ್ರಮುಖ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳು: ಸ್ವಯಂಚಾಲಿತ ಟಿಸಿ (Automation): ಇನ್ಮುಂದೆ ಹಸ್ತಚಾಲಿತ (Manual) ಟಿಸಿಗಳ ಬದಲಾಗಿ, ಮಂಡಳಿಯ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಡಿಜಿಟಲ್ ಟಿಸಿ ಸೃಜನೆಯಾಗಲಿದೆ. ಶೈಕ್ಷಣಿಕ ದಾಖಲೆಗಳ ಜೋಡಣೆ: ಡಿಜಿಟಲ್ ಟಿಸಿಯಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭೂಸ್ವಾಧೀನ ಅಧಿಕಾರಿಗಳು ಜಮೀನಿನ ಬೆಲೆ ನಿಗದಿಪಡಿಸುವ ವಿಧಾನ ಹಾಗೂ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಭೂಬೆಲೆ ನಿಗದಿಪಡಿಸಲು 5 ಪ್ರಮುಖ ವಿಧಾನಗಳು ಭೂಸ್ವಾಧೀನಾಧಿಕಾರಿಗಳು ಪರಿಹಾರ ಧನ ನಿಗದಿಪಡಿಸುವಾಗ ಈ ಕೆಳಗಿನ ಐದು ವಿಧಾನಗಳನ್ನು ಅನುಸರಿಸಬಹುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ: ಸ್ಥಳೀಯ ಪಂಚರು ನಿಗದಿಪಡಿಸಿದ ಬೆಲೆ. ಆದಾಯದ ಬಂಡವಾಳೀಕರಣ ವಿಧಾನ (Capitalization of Income Method). ತಜ್ಞರ ಅಭಿಮತ. ಭೂಮಾಲೀಕರು ಹಾಗೂ ಬೇಡಿಕೆ ಇಲಾಖೆಯವರು ಒಪ್ಪಂದದ ಮೇರೆಗೆ ಮಾತುಕತೆ ನಡೆಸಿ ನಿಗದಿಪಡಿಸಿದ ಬೆಲೆ. ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಮಾರಾಟವಾದ ಜಮೀನುಗಳ ಅಂಕಿ-ಅಂಶಗಳ ಸರಾಸರಿ ಬೆಲೆ. ಗಮನಾರ್ಹ ಅಂಶ: ಸಾಮಾನ್ಯವಾಗಿ ಅಧಿಕಾರಿಗಳು 5ನೇ ವಿಧಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ನೋಂದಣಿ ಬೆಲೆಗೂ ವಾಸ್ತವ ಬೆಲೆಗೂ…
ಬೆಂಗಳೂರು: ರಾಜ್ಯದ ಜನತೆಗೆ ಆರೋಗ್ಯ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುವುದು ಇನ್ನು ಬಹಳ ಸುಲಭ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ವಿನೂತನ ವಾಟ್ಸಾಪ್ ಸೌಲಭ್ಯವನ್ನು ಜಾರಿಗೆ ತಂದಿದೆ. ಏನಿದು ಹೊಸ ವ್ಯವಸ್ಥೆ? ನೀವು ದೂರು ನೀಡುವುದು ಹೇಗೆ? ನಿಮ್ಮ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯ ಕೊರತೆ ಇದೆಯೇ? ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆಯೇ? ಅಥವಾ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲವೇ? ಈ ಯಾವುದೇ ಸಮಸ್ಯೆಗಳಿದ್ದರೂ ನೀವು ನೇರವಾಗಿ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು. ಫೋಟೋ-ವಿಡಿಯೋ ಸಾಕ್ಷಿ: ಕೇವಲ ಮಾಹಿತಿ ಅಷ್ಟೇ ಅಲ್ಲದೆ, ಆಸ್ಪತ್ರೆಯ ಅವ್ಯವಸ್ಥೆಗೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋಗಳನ್ನು ಕೂಡ ನೀವು ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ನೇರ ನಿಗಾ: ನೀವು ಕಳುಹಿಸುವ ಪ್ರತಿಯೊಂದು ಸಂದೇಶವನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಖುದ್ದಾಗಿ ಪರಿಶೀಲಿಸಿ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಗೌಪ್ಯತೆ ಗ್ಯಾರಂಟಿ: ದೂರು ನೀಡುವ ಸಾರ್ವಜನಿಕರ…
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಭಾರಿ ಗಾಳಿಯ ಜೊತೆಗೆ ಆಲಿಕಲ್ಲು ಮಳೆ (Hailstorm) ಬೀಳುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ರೈತರು ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಇದರೊಂದಿಗೆ ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ‘ರಣ ಮಳೆ’ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ರಣ ಮಳೆ ಸುರಿಯಲಿದೆ. ಇನ್ನು ಕರಾವಳಿ ಭಾಗದ ದಕ್ಷಿಣ ಕನ್ನಡ,…
ಬೆಂಗಳೂರು : ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಉಚಿತ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ (Gruhalakshmi Scheme) ಮತ್ತು ‘ಗೃಹಜ್ಯೋತಿ’ (Gruhajyothi Scheme) ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮುಖ್ಯವಾದ ಸುದ್ದಿಯೊಂದು ಹೊರಬಿದ್ದಿದೆ. ಈ ಯೋಜನೆಗಳ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು (Re-verification) ಸರ್ಕಾರ ಮುಂದಾಗಿದ್ದು, ಮರು ನೋಂದಣಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ. ಭಾನುವಾರ ನಡೆದ ಕಾಂಗ್ರೆಸ್ ಪ್ರಮುಖರ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆದಿದ್ದು, ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು ಪಟ್ಟಿಯನ್ನು ಫಿಲ್ಟರ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ? ಸದ್ಯಕ್ಕೆ ಈ ಮರು ನೋಂದಣಿ ಪ್ರಕ್ರಿಯೆಯು ಪ್ರಾಥಮಿಕ ಚರ್ಚೆಯ ಹಂತದಲ್ಲಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಈ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಿದ ನಂತರ, ಮುಂಬರುವ ಕ್ಯಾಬಿನೆಟ್ (ಸಚಿವ ಸಂಪುಟ) ಸಭೆಯಲ್ಲಿ ಇದನ್ನು ಮಂಡಿಸಿ ಅಂತಿಮ ಒಪ್ಪಿಗೆ ಪಡೆಯಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಅನರ್ಹರನ್ನು ಪಟ್ಟಿಯಿಂದ ಕೈಬಿಟ್ಟು, ಯೋಜನೆಗಳ…
ಬೆಂಗಳೂರು: ರಾಜ್ಯದಲ್ಲಿ ಹೊಸ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಪಡಿತರ ಚೀಟಿ ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ. ಸದ್ಯ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ಈಗಿರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸುವಂತೆ ಆಹಾರ ಇಲಾಖೆಗೆ ಆಯೋಗವು ಸಲಹೆ ನೀಡಿದೆ. ರಾಜ್ಯಾದ್ಯಂತ ಹೊಸ ಬಿಪಿಎಲ್ ಕಾರ್ಡ್ಗಾಗಿ ಸಾರ್ವಜನಿಕರಿಂದ ಭಾರಿ ಬೇಡಿಕೆ ಕೇಳಿಬಂದಿದೆ. ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ 3-4 ವರ್ಷಗಳು ಕಳೆದಿದ್ದರೂ ಇನ್ನೂ ವಿಲೇವಾರಿಯಾಗಿಲ್ಲ. ಸದ್ಯ ರಾಜ್ಯಾದ್ಯಂತ 3,27,309 ಹೊಸ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಇವುಗಳನ್ನು ಶೀಘ್ರವಾಗಿ ಪರಿಶೀಲಿಸಿ ಹೊಸ ಕಾರ್ಡ್ ವಿತರಿಸಬೇಕೆಂದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಮಾನದಂಡಗಳ ಪರಿಷ್ಕರಣೆಗೆ ಕಾರಣವೇನು? ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು 2017ರಲ್ಲಿ ಕೆಲವು ಕಠಿಣ ಮಾನದಂಡಗಳನ್ನು ರೂಪಿಸಿತ್ತು.…
ಲಕ್ಷ್ಮೇಶ್ವರ: ಟ್ಯೂಷನ್ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ನಿವಾಸಿಗಳಾದ ಅಲ್ಲಾಭಕ್ಷ ಕೊಪ್ಪದ ಮತ್ತು ಆಸಿಫ್ ನಡಾಫ್ ಎಂದು ಗುರುತಿಸಲಾಗಿದೆ. ಟ್ಯೂಷನ್ ಗೆ ತೆರಳಿದ್ದ ಬಾಲಕಿಯನ್ನು ಮಾರ್ಗಮಧ್ಯೆ ತಡೆದ ಆರೋಪಿಗಳು, “ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ” ಎಂದು ನಂಬಿಸಿ, ವಾಹನದಲ್ಲಿ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಹೋಗಿದ್ದಾರೆ. ಆನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಬಲಾತ್ಕಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಬಾಲಕಿಯ ತಾಯಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.














