Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬೆಳವಣಿಗೆಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ರಾಜ್ಯಪಾಲರು ಸರ್ಕಾರ ರಚಿಸಲು ಹಸಿರು ನಿಶಾನೆ ತೋರಿದ್ದಾರೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಶಕಗಳ ಕಾಲದ ಅವರ ಅವಿರತ ಶ್ರಮ ಮತ್ತು ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಂತಾಗಿದೆ. ಮೊದಲ ಹಂತದಲ್ಲೇ ಸಂಪುಟ ಸೇರಲು ಭರ್ಜರಿ ಲಾಬಿ! ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮದ ಜೊತೆಯಲ್ಲೇ ಅವರ ಹೊಸ ಸಚಿವ ಸಂಪುಟದ ಸದಸ್ಯರ ಮೊದಲ ಪಟ್ಟಿ ಕೂಡ ಹೊರಬೀಳುವ ಸಾಧ್ಯತೆ ಇದೆ. ಮೊದಲ ಹಂತದಲ್ಲೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರಲ್ಲಿ ಭರ್ಜರಿ ಲಾಬಿ ಹಾಗೂ ಕಸರತ್ತು ಶುರುವಾಗಿದೆ. ಹೈಕಮಾಂಡ್ನೊಂದಿಗೆ ಚರ್ಚಿಸಿ ಸಚಿವರ…
ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಮತ್ತು ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡುವಿನ ರಹಸ್ಯ ಜಾಲವನ್ನು ದೆಹಲಿ ಪೊಲೀಸರ ವಿಶೇಷ ದಳ (Special Cell) ಪತ್ತೆಹಚ್ಚಿದೆ. ದೇಶದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ನೇಪಾಳ ಮೂಲದ ಪ್ರಜೆಗಳು ಸೇರಿದಂತೆ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಐಎಎನ್ಎಸ್ (IANS) ವರದಿ ಮಾಡಿದೆ. ಬಂಧಿತರಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯು ಈ ಜಾಲವನ್ನು ಭಾರತದೊಳಗೆ ಕಾನೂನುಬಾಹಿರ ಮತ್ತು ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದಲೇ ದೀರ್ಘಕಾಲದವರೆಗೆ ಸಿದ್ಧಪಡಿಸಿತ್ತು ಎಂದು ಮೂಲಗಳು ತಿಳಿಸಿವೆ. ಸದ್ಯ ತನಿಖಾಧಿಕಾರಿಗಳು ಈ ಜಾಲದ ಕಾರ್ಯವಿಧಾನಗಳು, ಮುಂದಿನ ಕಾರ್ಯಾಚರಣೆಯ ಯೋಜನೆಗಳು ಮತ್ತು ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಮೂಲದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ಜಾಲಗಳನ್ನು ಮಟ್ಟಹಾಕುವಲ್ಲಿ ಈ ಬಂಧನವು ಭಾರತೀಯ ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ. https://twitter.com/ANI/status/2060628397727088907?s=20
ರಾಮನಗರ: ರಾಜಕೀಯದಲ್ಲಿ ನಾಯಕರಿಗಾಗಿ ಅಭಿಮಾನಿಗಳು ಪ್ರಾಣ ಕೊಡುವುದನ್ನು ಕೇಳಿದ್ದೇವೆ, ಇಲ್ಲವೇ ದೇವಸ್ಥಾನಗಳಿಗೆ ನಡೆದುಕೊಂಡು ಹೋಗಿ ಹರಕೆ ಹೊರುವುದನ್ನು ನೋಡಿದ್ದೇವೆ. ಆದರೆ, ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂದು ಅವರ ಅಭಿಮಾನಿಯೊಬ್ಬರು ಕಳೆದ ಮೂರು ವರ್ಷಗಳಿಂದ ಕ್ಷೌರವೇ ಮಾಡಿಸಿಕೊಳ್ಳದೆ ವಿಶಿಷ್ಟ ಶಪಥ ಮಾಡಿದ್ದ ರೋಚಕ ಕಥೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಡಿಕೆಶಿ ಸಿಎಂ ಆಗುವವರೆಗೂ ಕಾಲಿಗೆ ಚಪ್ಪಲಿ ಹಾಕಲ್ಲ ಎಂದು ಹರಕೆ ಹೊತ್ತಿದ್ದ ಅಭಿಮಾನಿಯೊಬ್ಬರ ಸುದ್ದಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ಅಪ್ಪಟ ಅಭಿಮಾನಿಯ ಅಪರೂಪದ ಭಕ್ತಿ ಮುನ್ನೆಲೆಗೆ ಬಂದಿದೆ. ಯಾರು ಈ ಅಪ್ಪಟ ಅಭಿಮಾನಿ? ಏನಿದು ಶಪಥ? ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬುವವರೇ ಈ ವಿಶಿಷ್ಟ ಅಭಿಮಾನಿ. ತನಗಾಗಿ ಆಸ್ತಿ-ಅಂತಸ್ತು ಮಾಡಿಕೊಳ್ಳುವುದಕ್ಕಿಂತ, ತನ್ನ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಗಾದಿ ಏರಬೇಕು ಎಂಬುದೇ ಈಶ್ವರಪ್ಪ ಅವರ ಬದುಕಿನ ಏಕೈಕ…
SHOCKING : ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಮಹಿಳೆಯ ಕೊಲೆ: ಶವ ಹೂತುಹಾಕಿ ಪತಿಯೊಂದಿಗೆ ವಾಟ್ಸಾಪ್ ಚಾಟ್ ಮಾಡಿದ ಕಿರಾತಕ!
ಏಲೂರು: ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಿ, ಆಕೆ ಬದುಕಿದ್ದಾಳೆ ಎಂದು ನಂಬಿಸಲು ಆಕೆಯ ಫೋನ್ ನಿಂದಲೇ ಪತಿಗೆ ವಾಟ್ಸಾಪ್ ಮೆಸೇಜ್ ಕಳುಹಿಸುತ್ತಿದ್ದ ಆರೋಪಿಯ ನಾಟಕವನ್ನು ಆಂಧ್ರಪ್ರದೇಶದ ಪೊಲೀಸರು ಬಯಲಿಗೆಳೆದಿದ್ದಾರೆ. ಅಕ್ರಮ ಸಂಬಂಧದಲ್ಲಿ ಉಂಟಾದ ಅನುಮಾನ ಹಾಗೂ ಹಣಕಾಸಿನ ವಿವಾದವೇ ಈ ಭೀಕರ ಕೊಲೆಗೆ ಕಾರಣವಾಗಿದೆ. ನಂಬಿಸಿ ಪ್ರಾಣ ತೆಗೆದು, ಶವವನ್ನು ಹೂತುಹಾಕಿ ಡ್ರಾಮಾ ಮಾಡುತ್ತಿದ್ದ ಆರೋಪಿಯನ್ನು ಏಲೂರು ತ್ರೀ ಟೌನ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಏಲೂರು ತ್ರೀ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೌರಿಪುರಂ ಗ್ರಾಮದ ಮಲ್ಲವಲ್ಲಿ ವಿಶಾಲಿ (36) ಎಂಬ ವಿವಾಹಿತೆ, ಏಪ್ರಿಲ್ 18 ರಂದು ಗುಡಿವಾಡದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಆಕೆ ಎಷ್ಟು ದಿನ ಕಳೆದರೂ ಮನೆಗೆ ಮರಳದಿದ್ದಾಗ ಮತ್ತು ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದರು. ಪತಿಯ ದೂರಿನ ಮೇರೆಗೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.…
ನವದೆಹಲಿ: ಶಾಲಾ ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಖಡಕ್ ಆಗಿ ಹೇಳಿದೆ. ಆದರೆ, ಶಿಕ್ಷಕರಿಗೆ ಕೊಂಚ ನಿರಾಳತೆ ತರುವ ಸುದ್ದಿಯೆಂದರೆ, ಪರೀಕ್ಷೆ ಪಾಸ್ ಮಾಡಲು ನೀಡಲಾಗಿದ್ದ ಸಮಯವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ‘ಅಂಜುಮಾನ್ ಇಶಾತ್ ಇ-ತಲೀಮ್ ಟ್ರಸ್ಟ್’ ಪ್ರಕರಣದ ಹಳೆಯ ತೀರ್ಪನ್ನು ಪ್ರಶ್ನಿಸಿ ವಿವಿಧ ರಾಜ್ಯ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಸಂಘಟನೆಗಳು ಒಟ್ಟು 65 ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಮನಮೋಹನ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಸಾರಾಸಗಟಾಗಿ ವಜಾಗೊಳಿಸಿದೆ. ಅಲ್ಲದೆ, ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಟಿಇಟಿ ಕಡ್ಡಾಯ ಎಂಬ ತನ್ನ ಹಳೆಯ ಆದೇಶವನ್ನು ಎತ್ತಿ ಹಿಡಿದಿದೆ. 2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) ಜಾರಿಗೆ ಬರುವ ಮುನ್ನವೇ…
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ಮುಂದಿನ 24 ಗಂಟೆಗಳಲ್ಲಿ ನಗರದಾದ್ಯಂತ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ನಗರದಲ್ಲಿ ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ತದನಂತರ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆಯ ಜೊತೆಗೆ ಬಲವಾದ ಬಿರುಗಾಳಿ ಬೀಸುವ ಹಾಗೂ ಗುಡುಗು ಸಿಡಿಲಿನ ಅಬ್ಬರವೂ ಇರಲಿದೆ ಎಂದು ತಿಳಿಸಲಾಗಿದೆ. ಹಠಾತ್ ಹವಾಮಾನ ಬದಲಾವಣೆ ಮತ್ತು ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಹವಾಮಾನ ಇಲಾಖೆ ವಿನಂತಿಸಿದೆ.
ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ರಾಜ್ಯದ ಸರ್ಕಾರಿ ಹಾಗೂ ಇತರೆ ಶಾಲೆಗಳಲ್ಲಿ 1ನೇ ತರಗತಿಯ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದೆ. ನಿಮ್ಮ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಬಯಸುವ ಪೋಷಕರು ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಶಿಕ್ಷಣ ಇಲಾಖೆಯ ನಿಯಮಾವಳಿಗಳ ಪ್ರಕಾರ ದಾಖಲಾತಿಗೆ ಮುಖ್ಯವಾಗಿ ಬೇಕಾಗುವ ಅಗತ್ಯ ದಾಖಲೆಗಳು ಮತ್ತು ವಯೋಮಿತಿಯ ವಿವರಗಳು ಈ ಕೆಳಗಿನಂತಿವೆ: ವಯಸ್ಸಿನ ಮಿತಿ: ಜೂನ್ 1, 2026ಕ್ಕೆ ಅನ್ವಯವಾಗುವಂತೆ ಮಗುವಿಗೆ ಕಡ್ಡಾಯವಾಗಿ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಅಗತ್ಯವಿರುವ ಕಡ್ಡಾಯ ದಾಖಲೆಗಳು: ಜನನ ಪ್ರಮಾಣ ಪತ್ರ: ಮಗುವಿನ ಜನ್ಮ ದಿನಾಂಕವನ್ನು ದೃಢೀಕರಿಸುವ ಪ್ರಮಾಣ ಪತ್ರದ ನಕಲು (Copy). ಮಗುವಿನ ಆಧಾರ್ ಕಾರ್ಡ್: ಮಗುವಿನ ಆಧಾರ್ ಕಾರ್ಡ್ ನಕಲು ಪ್ರತಿ. ಪೋಷಕರ ಆಧಾರ್ ಕಾರ್ಡ್: ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ನಕಲು. ಪಡಿತರ ಚೀಟಿ (Ration Card): ಕುಟುಂಬದ ರೇಷನ್ ಕಾರ್ಡ್ ನಕಲು ಪ್ರತಿ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ: ಚಾಲ್ತಿಯಲ್ಲಿರುವ…
ನವದೆಹಲಿ: ಗ್ರಾಹಕರಿಗೆ ಎದುರಾಗಬಹುದಾದ ಇಂಧನ ಬಿಕ್ಕಟ್ಟನ್ನು ತಪ್ಪಿಸಲು ಮತ್ತು ಎಲ್ಪಿಜಿ ಸಿಲಿಂಡರ್ಗಳ ದುರುಪಯೋಗವನ್ನು ತಡೆಯಲು ಸರ್ಕಾರ ಜೂನ್ 1 ರಿಂದ ಮಹತ್ವದ ಬದಲಾವಣೆಯೊಂದನ್ನು ತರುತ್ತಿದೆ. ಹೊಸ ನಿಯಮಗಳ ಪ್ರಕಾರ, ಪಿಎನ್ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿರುವ ಮನೆಗಳಲ್ಲಿನ ಎಲ್ಪಿಜಿ (LPG) ಸಿಲಿಂಡರ್ ಕನೆಕ್ಷನ್ಗಳು ರದ್ದಾಗುವ ಸಾಧ್ಯತೆಯಿದೆ. ದೇಶದಲ್ಲಿ ಪಿಎನ್ಜಿ ಕನೆಕ್ಷನ್ಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಮಾರ್ಚ್ ತಿಂಗಳವರೆಗೆ ಸುಮಾರು 6.5 ಲಕ್ಷ ಹೊಸ ಪಿಎನ್ಜಿ ಸಂಪರ್ಕಗಳನ್ನು ನೀಡಲಾಗಿದೆ. ಆದರೆ, ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಜನರು ಎಲ್ಪಿಜಿ ಸಿಲಿಂಡರ್ ಬಳಕೆಯನ್ನು ಕಡಿಮೆ ಮಾಡುತ್ತಿಲ್ಲ. ವಾಸ್ತವವಾಗಿ, ಪಿಎನ್ಜಿ ಸಂಪರ್ಕ ಪಡೆದ ನಂತರವೂ ಶೇ. 18 ರಷ್ಟು ಗ್ಯಾಸ್ ಪೂರೈಕೆ ಕಡಿಮೆಯಾಗಿದೆ. ಅಂದರೆ, ಹಲವು ಕುಟುಂಬಗಳು ಪಿಎನ್ಜಿ ಸಂಪರ್ಕ ಪಡೆದಿದ್ದರೂ, ಎಲ್ಪಿಜಿ ಸಿಲಿಂಡರ್ ಅನ್ನು ಸರೆಂಡರ್ ಮಾಡದೆ ಎರಡನ್ನೂ ಇಟ್ಟುಕೊಂಡಿದ್ದಾರೆ. ‘ಒಂದು ಕುಟುಂಬ, ಒಂದು ಕನೆಕ್ಷನ್’ ನಿಯಮ ಪರಿಷ್ಕೃತ ನಿಯಮಗಳ ಪ್ರಕಾರ, ಈಗಾಗಲೇ ಮನೆಯಲ್ಲಿ ಪಿಎನ್ಜಿ (PNG) ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ…
ಬೆಂಗಳೂರು : ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಈಗಾಗಲೇ ಭರದ ಸಿದ್ಧತೆ ನಡೆದಿದ್ದು, ಇದೀಗ ರಾಜ್ಯಪಾಲರನ್ನು ಭೇಟಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಜೂನ್.1 ಅಥವಾ ಜೂನ್ 5ಕ್ಕೆ ಪ್ರಮಾಣವಚನ ಸ್ವೀಕರಿಸುವ ದಿನಾಂಕ ಕೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಸಿಎಲ್ ಪಿ ಸಭೆ ಸಂಜೆ ಇಂದು 4 ಗಂಟೆಗೆ ಆರಂಭವಾಗಲಿದ್ದು, ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಮಧ್ಯಾಹ್ನ 1 ಗಂಟೆಯ ನಂತರ ರಾಜ್ಯಪಾಲರು ಧರ್ಮಸ್ಥಳಕ್ಕೆ ತೆರಳಲಿರುವ ಕಾರಣ, ಅವರು ಸಿಗುವುದಿಲ್ಲ. ಸಂಜೆ ಕೂಡ ರಾಜ್ಯಪಾಲರು ಅನುಪಸ್ಥಿತರಿರಲಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ ಸಿಎಲ್ ಪಿ ಸಭೆಗೂ ಮುನ್ನ ಲೋಕಹವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ರಾಜ್ಯಪಾಲರ ಬಳಿ ಎರಡು ದಿನಾಂಕವನ್ನು ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. ಜೂನ್ 1 ಅಥವಾ ಜೂನ್ 5ರಂದು ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಅಂದುಕೊಂಡಂತೆ ಜೂನ್ 1 ಅಥವಾ ಜೂನ್ 5 ರಂದು ವಿಧಾನಸೌಧದ…
ನವದೆಹಲಿ: ಭಾರತದ ಗಲ್ಲಿ ಗಲ್ಲಿಗಳ ಬೀದಿಬದಿಯ ಸಂಸ್ಕೃತಿಯ ಭಾಗವಾಗಿರುವ, ಭಾರತೀಯರ ಜೀವನಾಡಿಯಾದ ‘ಮಸಾಲ ಚಾಯ್’ (Masala Chai) ಈಗ ಅಧಿಕೃತವಾಗಿ ಜಗತ್ತಿನ ಅತ್ಯುತ್ತಮ ಚಹಾವಾಗಿ ಹೊರಹೊಮ್ಮಿದೆ. ಜಾಗತಿಕ ಆಹಾರ ಮತ್ತು ಪಾನೀಯಗಳ ಪ್ರತಿಷ್ಠಿತ ಮಾರ್ಗದರ್ಶಿಯಾದ ‘ಟೇಸ್ಟ್ಅಟ್ಲಾಸ್’ (TasteAtlas) ಪ್ರಕಟಿಸಿರುವ ಮೇ ಆವೃತ್ತಿಯ “ವಿಶ್ವದ ಟಾಪ್ 100 ಚಹಾಗಳು” ಪಟ್ಟಿಯಲ್ಲಿ ಭಾರತದ ಮಸಾಲ ಚಾಯ್ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಪೂರ್ವ ಏಷ್ಯಾ ಮತ್ತು ಯುರೋಪ್ನ ಅತ್ಯಂತ ದುಬಾರಿ ಹಾಗೂ ಪ್ರೀಮಿಯಂ ಚಹಾಗಳನ್ನು ಹಿಂದಿಕ್ಕಿ ಭಾರತದ ಈ ಸಾಂಬಾರ ಪದಾರ್ಥಗಳ ಮಿಶ್ರಣದ ಹಾಲಿನ ಚಹಾ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಗಳಿಸಿರುವುದು ಭಾರತೀಯ ಆಹಾರ ಪರಂಪರೆಗೆ ಸಿಕ್ಕ ಐತಿಹಾಸಿಕ ಮನ್ನಣೆಯಾಗಿದೆ. ಜಾಗತಿಕ ಅಭಿರುಚಿಯಲ್ಲಿ ಬದಲಾವಣೆ ಶತಮಾನಗಳಿಂದಲೂ ಜಾಗತಿಕ ಪಾನೀಯ ಲೋಕದಲ್ಲಿ ಯಾವುದೇ ಮಿಶ್ರಣವಿಲ್ಲದ ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ವೆರೈಟಿಗಳದ್ದೇ ಮೇಲಗೈ ಇತ್ತು. ಆದರೆ, ಈಗ ಮಸಾಲ ಚಾಯ್ ಮೊದಲ ಸ್ಥಾನಕ್ಕೇರಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರ ಅಭಿರುಚಿ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸಿಟಿಸಿ (CTC) ಚಹಾ…














