Subscribe to Updates
Get the latest creative news from FooBar about art, design and business.
Author: kannadanewsnow57
BREAKING : ರಿಯಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ : ವಿಡಿಯೋ ವೈರಲ್ | WATCH VIDEO
ರಿಯಾದ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ತಾರಕಕ್ಕೇರಿದ್ದು, ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಇರಾನ್ ಎರಡು ಡ್ರೋನ್ ದಾಳಿಗಳನ್ನು ನಡೆಸಿದೆ. ಈ ದಾಳಿಯಿಂದ ಕಚೇರಿಯ ಆವರಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಮಂಗಳವಾರ ಮುಂಜಾನೆ ತಿಳಿಸಿದೆ. ಸೋಮವಾರ ರಾತ್ರಿ ಎರಡು ಇರಾನ್ ನಿರ್ಮಿತ ಡ್ರೋನ್ಗಳು ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿವೆ. ದಾಳಿಯ ಬೆನ್ನಲ್ಲೇ ಭಾರಿ ಪ್ರಮಾಣದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಟ್ರಂಪ್ ಎಚ್ಚರಿಕೆ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ನಮ್ಮ ಪ್ರತಿಕಾರ ಏನಿರಲಿದೆ ಎಂಬುದು ನಿಮಗೆ ಶೀಘ್ರದಲ್ಲೇ ತಿಳಿಯಲಿದೆ” ಎಂದು ಅವರು ಗುಡುಗಿದ್ದಾರೆ. ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ…
ಇಂದಿನ ಅವಸರದ ಜೀವನಶೈಲಿ, ಮಾನಸಿಕ ಒತ್ತಡ ಮತ್ತು ಅಸಮರ್ಪಕ ಆಹಾರ ಪದ್ಧತಿಯಿಂದಾಗಿ ಇಂದು ಅನೇಕರು ಗ್ಯಾಸ್ಟ್ರಿಕ್, ಎಸಿಡಿಟಿ, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎದೆಯುರಿ, ಹುಳಿ ತೇಗು ಮತ್ತು ಗಂಟಲಿನಲ್ಲಿ ಏನೋ ಸಿಲುಕಿಕೊಂಡಂತಾಗುವುದು ಈ ಸಮಸ್ಯೆಗಳ ಸಾಮಾನ್ಯ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ನಾವು ಆಹಾರ ಸೇವಿಸಿದಾಗ ಜಠರದಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಮ್ಲವು ಮೇಲಕ್ಕೆ ಚಿಮ್ಮಿದಾಗ ಎಸಿಡಿಟಿ ಉಂಟಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪದೇ ಪದೇ ಇಂಗ್ಲಿಷ್ ಮೌಷಧಗಳನ್ನು ಅವಲಂಬಿಸುವ ಬದಲು, ನಮ್ಮ ಹಿರಿಯರು ಪಾಲಿಸುತ್ತಿದ್ದ ಆಯುರ್ವೇದ ಪದ್ಧತಿಗಳು ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. ಅಂತಹವುಗಳಲ್ಲಿ ‘ಧನಿಯಾ ಕಷಾಯ’ ಅತ್ಯಂತ ಪ್ರಮುಖವಾದುದು. ಕಷಾಯ ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಧನಿಯಾ, ಒಂದು ಚಮಚ ಜೀರಿಗೆ, 3-4 ಕಾಳುಮೆಣಸು, 3-4 ಲವಂಗ (ಮೊಗ್ಗು ತೆಗೆದದ್ದು) ಮತ್ತು ಒಂದು ಚಿಟಿಕೆ ಅರಿಶಿನ ಹಾಕಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು, ನೀರು ಅರ್ಧದಷ್ಟು ಆಗುವವರೆಗೆ ಚೆನ್ನಾಗಿ ಕುದಿಸಿ. ನಂತರ…
ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ 3-3-2026 ರ ಮಂಗಳವಾರ ಕೇತುಗ್ರಸ್ತ ಗ್ರಸ್ತೋದಯ “ಚಂದ್ರ ಗ್ರಹಣ” ಬಂದಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ…
ರಾಜ್ಯದ ರೈತರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಲ್ಲೇ `RTC, ಪಹಣಿ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ !
ಬೆಂಗಳೂರು: ರೈತರು ಮತ್ತು ಭೂಮಾಲೀಕರಿಗೆ ಕಂದಾಯ ಇಲಾಖೆಯ ಕೆಲಸಗಳೆಂದರೆ ಸಾಕು, ತಹಶೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿಗಳಿಗೆ ಅಲೆಯುವ ನೆನಪಾಗಿ ಸುಸ್ತಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕರ್ನಾಟಕ ಸರ್ಕಾರದ ‘ಭೂಮಿ ಆನ್ಲೈನ್’ (Bhoomi Online) ಯೋಜನೆಯಿಂದಾಗಿ ನಿಮ್ಮ ಜಮೀನಿನ ಹಕ್ಕು ಪತ್ರ (RTC), ಮ್ಯೂಟೇಶನ್ ವರದಿ ಮತ್ತು ನಕ್ಷೆಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಪಡೆಯಬಹುದಾಗಿದೆ. ಭೂಮಿ ಪೋರ್ಟಲ್ ಏಕೆ ಮುಖ್ಯ? ಜಮೀನು ಖರೀದಿ-ಮಾರಾಟ ಇರಲಿ ಅಥವಾ ಬ್ಯಾಂಕ್ ಸಾಲ ಪಡೆಯುವುದಿರಲಿ, ಭೂ ದಾಖಲೆಗಳು ಅತಿ ಮುಖ್ಯ. ಈ ಡಿಜಿಟಲ್ ಪೋರ್ಟಲ್ನಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪಿದೆ. ಅಷ್ಟೇ ಅಲ್ಲದೆ, ದಾಖಲೆಗಳಲ್ಲಿ ಪಾರದರ್ಶಕತೆ ಹೆಚ್ಚಿದ್ದು, ವಂಚನೆಗಳಿಗೆ ಕಡಿವಾಣ ಬಿದ್ದಿದೆ. ಆನ್ಲೈನ್ನಲ್ಲಿ ದಾಖಲೆ ವೀಕ್ಷಿಸುವುದು ಹೇಗೆ? ನಿಮ್ಮ ಜಮೀನಿನ ವಿವರಗಳನ್ನು ಮನೆಯಲ್ಲೇ ಕುಳಿತು ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಿ: ವೆಬ್ಸೈಟ್ಗೆ ಭೇಟಿ ನೀಡಿ: ಮೊದಲು ಬ್ರೌಸರ್ನಲ್ಲಿ landrecords.karnataka.gov.in ಅಧಿಕೃತ ವೆಬ್ಸೈಟ್ ತೆರೆಯಿರಿ. ಸೇವೆಯನ್ನು…
ಭಾರತೀಯ ರೈಲ್ವೇಯಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ರೈಲ್ವೇ ನೇಮಕಾತಿ ಮಂಡಳಿ (RRB) ಸಿಹಿ ಸುದ್ದಿಯೊಂದನ್ನು ನೀಡಿದೆ. 2026ನೇ ಸಾಲಿನ ಸುಮಾರು 22,195 ಗ್ರೂಪ್-ಡಿ (ಲೆವೆಲ್-1) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ (CEN 09/2025) ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನಾಂಕವನ್ನು ರೈಲ್ವೇ ಮಂಡಳಿಯು ಇದೀಗ ಮಾರ್ಚ್ 11, 2026 ರವರೆಗೆ ಮುಂದೂಡಿದೆ. ಪ್ರಮುಖ ದಿನಾಂಕಗಳು ಅಧಿಸೂಚನೆ ಪ್ರಕಟಣೆ: ಜನವರಿ 30, 2026 ಅರ್ಜಿ ಸಲ್ಲಿಕೆ ಆರಂಭ: ಜನವರಿ 31, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 11, 2026 ಭರ್ತಿ ಮಾಡಲಿರುವ ಹುದ್ದೆಗಳು ಈ ನೇಮಕಾತಿಯ ಮೂಲಕ ಈ ಕೆಳಗಿನ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ: ಟ್ರ್ಯಾಕ್ ಮೇಂಟೈನರ್ ಪಾಯಿಂಟ್ಸ್ಮನ್ ಅಸಿಸ್ಟೆಂಟ್ ಬ್ರಿಡ್ಜ್ ಅಸಿಸ್ಟೆಂಟ್ ಲೋಕೋ ಶೆಡ್ (ಎಲೆಕ್ಟ್ರಿಕಲ್) ಅಸಿಸ್ಟೆಂಟ್ ಆಪರೇಷನ್ಸ್ ಟ್ರ್ಯಾಕ್ ಮೆಷಿನ್ ಅಸಿಸ್ಟೆಂಟ್ ಮತ್ತು S&T ವಿಭಾಗಗಳು. ವೇತನ ಮತ್ತು ಅರ್ಹತೆಗಳು ವೇತನ: ಆರಂಭಿಕ ಮೂಲ ವೇತನ (Basic…
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಗಳು ಮತ್ತು ಸಣ್ಣ ವ್ಯವಹಾರಗಳ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಲು ಮತ್ತು ಅವರ ಉದ್ಯಮಶೀಲತೆಗೆ ಬೆಂಬಲ ನೀಡಲು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರವು ಹಲವಾರು ವಿಶೇಷ ಸಾಲ ಯೋಜನೆಗಳನ್ನು ಜಾರಿಗೆ ತಂದಿವೆ. ಕಡಿಮೆ ಬಡ್ಡಿ ದರ, ಸುಲಭ ನಿಯಮಗಳು ಮತ್ತು ಯಾವುದೇ ಭದ್ರತೆ ಇಲ್ಲದೆ (Collateral-free) ಪಡೆಯಬಹುದಾದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ. 1. ಕರ್ನಾಟಕ ಸರ್ಕಾರದ ‘ಉದ್ಯೋಗಿನಿ ಯೋಜನೆ’ ರಾಜ್ಯದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಹೊಸದಾಗಿ ಉದ್ಯಮ ಆರಂಭಿಸಲು ಅಥವಾ ಇರುವ ಉದ್ಯಮ ಬೆಳೆಸಲು 3 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಇದರೊಂದಿಗೆ ಸಬ್ಸಿಡಿ ಸೌಲಭ್ಯ ಮತ್ತು ಉದ್ಯಮಶೀಲತೆ ತರಬೇತಿಯನ್ನೂ ನೀಡಲಾಗುತ್ತದೆ. 2. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಮೂರು ಹಂತಗಳಿವೆ: ಶಿಶು: 50,000…
ಬೆಂಗಳೂರು: ರಾಜ್ಯದ ವಿವಿಧ ವಸತಿ ಶಾಲೆ ಹಾಗೂ ವಿದ್ಯಾರ್ಥಿನಿಲಯಗಳ ವ್ಯವಸ್ಥಿತ ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಸೂಚನೆ ನೀಡಿದೆ. ವಿದ್ಯಾರ್ಥಿನಿಲಯಗಳ ಸ್ಥಾಪನೆಯ ಮೂಲ ಉದ್ದೇಶಗಳನ್ನು ಈಡೇರಿಸಲು ಹಾಗೂ ಆಡಳಿತಾತ್ಮಕ ಶಿಸ್ತು ತರಲು ವಾರ್ಡನ್ಗಳು ಮತ್ತು ಶಿಕ್ಷಕರು ನಿಗದಿತ ದಾಖಲಾತಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ. ವಸತಿ ನಿಲಯಗಳ ದೈನಂದಿನ ಚಟುವಟಿಕೆಗಳು, ಆಹಾರ ಸರಬರಾಜು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇತರ ಮೂಲಸೌಕರ್ಯಗಳ ಮೇಲೆ ನಿಗಾ ಇಡಲು ಈ ರಿಜಿಸ್ಟರ್ಗಳು ಸಹಕಾರಿಯಾಗಲಿವೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮೇಲಾಧಿಕಾರಿಗಳು ಭೇಟಿ ನೀಡಿದಾಗ ಉಸ್ತುವಾರಿ ಮತ್ತು ತಪಾಸಣೆ ನಡೆಸಲು ಪೂರಕ ದಾಖಲೆಗಳು ಲಭ್ಯವಿರುತ್ತವೆ. ವಸತಿ ಶಾಲೆ/ವಿದ್ಯಾರ್ಥಿನಿಲಯಗಳಲ್ಲಿ ನಿರ್ವಹಿಸಬೇಕಾದ ದಾಖಲಾತಿಗಳು ಈ ಹಿಂದಿನ ಅಧ್ಯಾಯಗಳಲ್ಲಿ ವಿದ್ಯಾರ್ಥಿನಿಲಯಗಳ ಸ್ಥಾಪನೆ ಹಾಗೂ ನಿರ್ವಹಣೆಯ ಹಿಂದಿನ ಉದ್ದೇಶಗಳನ್ನು ವಿವರಿಸಲಾಗಿದೆ. ಮುಂದುವರೆದು, ವಿದ್ಯಾರ್ಥಿನಿಲಯಗಳ ಸಮರ್ಪಕ ನಿರ್ವಹಣೆ ದೃಷ್ಟಿಯಿಂದ ಶಿಕ್ಷಕರು/ವಾರ್ಡನ್ರವರು ವಿವಿಧ ರಿಜಿಸ್ಟರ್ಗಳನ್ನು ನಿರ್ವಹಿಸಬೇಕಾಗಿದ್ದು, ವಿವರಗಳು ಈ ಕೆಳಕಂಡಂತಿವೆ. ಈ ರಿಜಿಸ್ಟರ್ಗಳನ್ನು ಪ್ರತಿ ವಸತಿ ನಿಲಯದಲ್ಲಿಯೂ ನಿರ್ವಹಿಸುವುದರಿಂದ ಇಲಾಖೆಯ ವಸತಿ…
ಬೆಂಗಳೂರು: ಸ್ವಂತ ಜಾಗವಿದ್ದರೂ ಹಣದ ಅಡಚಣೆಯಿಂದ ಮನೆ ಕಟ್ಟಲಾಗದೆ ಪರದಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ತಲೆಗೊಂದು ಸೂರು ಹೊಂದಬೇಕೆಂಬ ಕನಸು ಕಂಡವರಿಗೆ ‘ಆಶ್ರಯ ವಸತಿ ಯೋಜನೆ’ (ಬಸವ ವಸತಿ ಯೋಜನೆ) ಅಡಿ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ (RGRHCL) ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2 ಲಕ್ಷದವರೆಗೆ ನೇರ ನಗದು ಸಹಾಯಧನ ಸಿಗಲಿದೆ. ಯೋಜನೆಯ ಪ್ರಮುಖ ಮುಖ್ಯಾಂಶಗಳು ಈ ಯೋಜನೆಯು ಮುಖ್ಯವಾಗಿ ವಸತಿ ರಹಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದೆ. ಸಹಾಯಧನ: ಮನೆ ನಿರ್ಮಾಣಕ್ಕೆ ₹1.20 ಲಕ್ಷದಿಂದ ₹2 ಲಕ್ಷದವರೆಗೆ ಸಹಾಯಧನ. ಆದ್ಯತೆ: ವಿಧವೆಯರು, ವಿಕಲಚೇತನರು ಮತ್ತು ತೃತೀಯ ಲಿಂಗಿಗಳಿಗೆ ಶೇ. 10 ರಷ್ಟು ಮೀಸಲಾತಿ. ಪಾರದರ್ಶಕತೆ: ಹಣವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು…
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (LAX) ದೊಡ್ಡದೊಂದು ವಿಮಾನ ದುರಂತ ತಪ್ಪಿದೆ. ಇಲ್ಲಿಂದ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ತುರ್ತಾಗಿ ವಾಪಸ್ ಇಳಿಸಲಾಗಿದೆ. ಯುನೈಟೆಡ್ ಏರ್ಲೈನ್ಸ್ನ ಫ್ಲೈಟ್ 2127 (ಬೋಯಿಂಗ್ 787-9) ವಿಮಾನವು ಬೆಳಿಗ್ಗೆ 10:14ಕ್ಕೆ ನ್ಯೂಜೆರ್ಸಿಗೆ ಹೊರಡಲು ಲಾಸ್ ಏಂಜಲೀಸ್ ನಿಲ್ದಾಣದಿಂದ ಟೇಕ್-ಆಫ್ ಆಗಿತ್ತು. ಆದರೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಬೆಳಿಗ್ಗೆ 11:05ಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತುರ್ತು ಪರಿಸ್ಥಿತಿಯ ಮಾಹಿತಿ ನೀಡಲಾಯಿತು. ವಿಮಾನದಲ್ಲಿ 256 ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 268 ಜನರಿದ್ದರು.ಪೈಲಟ್ಗಳ ಸಮಯಪ್ರಜ್ಞೆಯಿಂದಾಗಿ ಬೆಳಿಗ್ಗೆ 11:29ಕ್ಕೆ ವಿಮಾನವನ್ನು ಸುರಕ್ಷಿತವಾಗಿ ರನ್ವೇ 25ರಲ್ಲಿ ಇಳಿಸಲಾಯಿತು. ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪ್ರಯಾಣಿಕರನ್ನು ಸ್ಥಳಾಂತರಿಸಲು ನೆರವಾದರು. “ವಿಮಾನದಲ್ಲಿದ್ದ ಎಲ್ಲರನ್ನೂ ಸ್ಲೈಡ್ಗಳು ಮತ್ತು ಮೆಟ್ಟಿಲುಗಳ…
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ನಾಗರಿಕರು ಸರ್ಕಾರಿ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಸಂಪ್ರದಾಯಕ್ಕೆ ಕರ್ನಾಟಕ ಸರ್ಕಾರ ಬ್ರೇಕ್ ಹಾಕಿದೆ. ‘ಇ-ಜಿಲ್ಲಾ ಮಿಷನ್ ಮೋಡ್ ಪ್ರಾಜೆಕ್ಟ್’ ಅಡಿಯಲ್ಲಿ ಜಾರಿಗೆ ತಂದಿರುವ ‘ಸೇವಾ ಸಿಂಧು’ ಪೋರ್ಟಲ್, ಇಂದು ರಾಜ್ಯದ ಜನಸಾಮಾನ್ಯರ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ಸುಮಾರು 800ಕ್ಕೂ ಅಧಿಕ ಸೇವೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಪಾರದರ್ಶಕ ಆಡಳಿತಕ್ಕೆ ಹೊಸ ಭಾಷ್ಯ ಬರೆಯಲಾಗಿದೆ. ಏನಿದು ಸೇವಾ ಸಿಂಧು? 2017ರಲ್ಲಿ ಚಾಲನೆ ನೀಡಲಾದ ‘ಸೇವಾ ಸಿಂಧು’ ಕರ್ನಾಟಕ ಸರ್ಕಾರದ ಒಂದು ಕೇಂದ್ರೀಕೃತ ನಾಗರಿಕ ಸೇವಾ ವೇದಿಕೆಯಾಗಿದೆ. ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿರುವ ಈ ಪೋರ್ಟಲ್, ಸರ್ಕಾರದ ಸೇವೆಗಳನ್ನು ‘ಮುಖರಹಿತ (Faceless), ನಗದುರಹಿತ (Cashless) ಮತ್ತು ಕಾಗದರಹಿತ (Paperless)’ ರೀತಿಯಲ್ಲಿ ಒದಗಿಸುವ ಗುರಿ ಹೊಂದಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈ ಸೇವೆಯು ಹಳ್ಳಿ-ಹಳ್ಳಿಗೂ ತಲುಪಿದೆ. ಪೋರ್ಟಲ್ನ ಪ್ರಮುಖ ಉದ್ದೇಶಗಳು: ಸುಲಭ ಲಭ್ಯತೆ: ನಾಗರಿಕರು ಯಾವುದೇ…














