Subscribe to Updates
Get the latest creative news from FooBar about art, design and business.
Author: kannadanewsnow57
ರಾಯಗಢ್ : ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಅಂಬೇನಳಿ ಘಾಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಲಿಬಲೇಶ್ವರ ಮತ್ತು ಪೋಲಾದ್ಪುರ ನಡುವೆ ಇರುವ ಅಂಬೇನಳಿ ಘಾಟ್ನಲ್ಲಿ ಈ ಭೀಕರ ದುರಂತ ನಡೆದಿದೆ. ಕಾರಿನಲ್ಲಿದ್ದ ಎಂಟೂ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪ್ರಸ್ತುತ ಶೋಧ ಹಾಗೂ ರಕ್ಷಣಾ ತಂಡಗಳು ಎರಡು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿವೆ. ಅಪಘಾತಕ್ಕೀಡಾದ ಸ್ಕಾರ್ಪಿಯೋ ಎಸ್ಯುವಿ ಕಾರು ಸತಾರಾ ಜಿಲ್ಲೆಯ ಆಸಗಾಂವ್ ಗ್ರಾಮಕ್ಕೆ ಸೇರಿದ್ದಾಗಿದೆ. ಮೃತರು ದಾಪೋಲಿಯಿಂದ ಸತಾರಾ ಕಡೆಗೆ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಸುಮಾರು 500 ರಿಂದ 700 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಸತಾರಾ ಮೂಲದವರಾಗಿದ್ದು, ಕೊಂಕಣ ಅಥವಾ ಮಹಾಬಲೇಶ್ವರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು ಎಂದು ಶಂಕಿಸಲಾಗಿದೆ. ಮೃತರ ವಿವರಗಳು: ಅಂಶ್ ಸಮೀರ್ ಚವಾಣ್ (19 ವರ್ಷ), ನಿವಾಸಿ:…
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಸಮುದ್ರದ ಪಾಲಾಗಿದ್ದವರ ದುರಂತದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ನಾಪತ್ತೆಯಾಗಿದ್ದ ಮಾದೇವ ನಾಯ್ಕ್ ಅವರ ಮೃತದೇಹ ಇಂದು ಪತ್ತೆಯಾಗುವ ಮೂಲಕ ಭಾನುವಾರದ ಘೋರ ದುರಂತದ ಎಲ್ಲ 11 ಶವಗಳನ್ನು ಹೊರತೆಗೆಯಲಾಗಿದೆ. ಕಾರ್ಯಾಚರಣೆ ಯಶಸ್ವಿ ಭಾನುವಾರ ನಡೆದ ಈ ಕರುಣಾಜನಕ ಘಟನೆಯಲ್ಲಿ ಒಟ್ಟು 11 ಜನರು ನೀರುಪಾಲಾಗಿದ್ದರು. ಇವರ ಪೈಕಿ ನಿನ್ನೆಯೇ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ಆದರೆ, ಮಾದೇವ ನಾಯ್ಕ್ ಅವರ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಬೆಳಿಗ್ಗೆಯಿಂದಲೇ ತೀವ್ರ ಶೋಧ ಕಾರ್ಯವನ್ನು ಮುಂದುವರಿಸಲಾಗಿತ್ತು. ನಾಪತ್ತೆಯಾಗಿದ್ದ ವ್ಯಕ್ತಿಗಾಗಿ ಎನ್ಡಿಆರ್ಎಫ್ (NDRF), ಕರಾವಳಿ ಕಾವಲು ಪಡೆ (Coastal Guard), ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಜಾಲಾಡಿದ್ದರು. ಈ ಕಾರ್ಯಾಚರಣೆಗೆ ಸ್ಥಳೀಯ ಮೀನುಗಾರರು ಕೂಡ ಕೈಜೋಡಿಸಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಮಾದೇವ್ ನಾಯ್ಕ್ ಅವರ ಶವ ಪತ್ತೆಯಾಗಿದೆ. ಘಟನೆಯ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ…
ನಾರಾಯಣಖೇಡ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಗಾರೆಡ್ಡಿ ಜಿಲ್ಲೆಯ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಭಾರೀ ಸಂಚಲನ ಮೂಡಿಸಿದೆ. ಘಟನೆಯ ವಿವರ: ನಾರಾಯಣಖೇಡ್ ಮಂಡಲದ ಗಂಗಾಪುರ ಗ್ರಾಮದ ನಿವಾಸಿ ಚೆಂಬನುಳ್ಳ ಮುತ್ಯಂ ರೆಡ್ಡಿ (35) ಕೊಲೆಯಾದ ದುರ್ದೈವಿ. ಈತ ಬೋರ್ವೆಲ್ ಮೋಟಾರ್ ರಿಪೇರಿ ಕೆಲಸ ಮಾಡಿಕೊಂಡಿದ್ದನು. ಇವನ ಪತ್ನಿ ಕಲ್ಪನಾ ನಾರಾಯಣಖೇಡ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಸಮಯದಲ್ಲಿ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದ ಗೌನಿ ಪಂಡರಿ ಎಂಬಾತ ಆರ್ಟಿಸಿ (RTC) ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಕೆಲಸದ ನಡುವೆ ಕಲ್ಪನಾ ಹಾಗೂ ಪಂಡರಿ ಮಧ್ಯೆ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಇವರ ಅಕ್ರಮ ಸಂಬಂಧಕ್ಕೆ ಮುತ್ಯಂ ರೆಡ್ಡಿ ಅಡ್ಡಿಯಾಗುತ್ತಿದ್ದನು. ಇದರಿಂದ ಆತನನ್ನು ಮುಗಿಸಲು ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ. ಪ್ಲಾನ್ ಮಾಡಿ ಕೊಲೆ: ಒಂಬತ್ತು ದಿನಗಳ…
ನವದೆಹಲಿ : ದೇಶದಲ್ಲಿ ತಾಪಮಾನವು ಭಾರೀ ಹೆಚ್ಚಳವಾಗಿದ್ದು,. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ನಕ್ಷೆಯನ್ನು ನೋಡಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಮ್ಯಾಪ್ನಲ್ಲಿ ‘ಡಾರ್ಕ್ ರೆಡ್’ (ಗಾಢ ಕೆಂಪು) ಬಣ್ಣದಲ್ಲಿರುವ ಪ್ರದೇಶಗಳಲ್ಲಿ ತಾಪಮಾನ 44 ಡಿಗ್ರಿ ದಾಟಿದ್ದರೆ, ಅದರ ಮೇಲೆ ಕಪ್ಪು ಚುಕ್ಕೆಗಳಿರುವ (Black Points) ಪ್ರದೇಶಗಳಲ್ಲಿ ತಾಪಮಾನ ಭೀಕರ 48 ಡಿಗ್ರಿ ಸೆಲ್ಸಿಯಸ್ಗೆ ಹತ್ತಿರವಾಗುತ್ತಿದೆ! ಇದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದ್ದು, ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸುವಂತೆ ‘ಹೀಟ್ ಸ್ಟ್ರೋಕ್’ ಮುನ್ನೆಚ್ಚರಿಕೆ ನೀಡಲಾಗಿದೆ. ಏನಿದು ‘ನೌತಪಾ’? ಭೀಕರ ಸೆಕೆಗೆ ಕಾರಣವೇನು? ಜ್ಯೋತಿಷ್ಯ ಶಾಸ್ತ್ರ ಮತ್ತು ಹವಾಮಾನದ ಲೆಕ್ಕಾಚಾರದ ಪ್ರಕಾರ, ಮೇ 25 ರಂದು ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇಲ್ಲಿಂದ ಜೂನ್ 2 ರವರೆಗೆ ‘ನೌತಪಾ’ ಇರಲಿದ್ದು, ಇವು ವರ್ಷದ ಅತ್ಯಂತ ಕಡು ಬೇಸಿಗೆಯ 9 ದಿನಗಳಾಗಿವೆ. ಈ ಅವಧಿಯಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ನೇರವಾಗಿ ಬೀಳುವುದರಿಂದ ಬಿಸಿಲ ಬೇಗೆ ಗರಿಷ್ಠ ಮಟ್ಟದಲ್ಲಿರಲಿದೆ. ಆದರೆ, “ನೌತಪಾ ಎಷ್ಟು ಹೆಚ್ಚಾಗಿ…
ಪ್ರಸ್ತುತ ಇಂದಿನ ಜಂಜಾಟದ ಜೀವನಶೈಲಿಯಲ್ಲಿ ವಯಸ್ಸಿನ ಭೇದವಿಲ್ಲದೆ ಕಾಡುತ್ತಿರುವ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅದುವೇ ಹೈ ಬಿಪಿ (ರಕ್ತದೊತ್ತಡ). ವೈದ್ಯಕೀಯ ಲೋಕದಲ್ಲಿ ಇದನ್ನು ‘ಸೈಲೆಂಟ್ ಕಿಲ್ಲರ್’ (ಮೌನ ಹಂತಕ) ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ಕಾಯಿಲೆ ದೇಹದಲ್ಲಿದ್ದರೂ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಹೊರಬೀಳುವುದಿಲ್ಲ. ಆದರೆ, ಒಳಗೊಳಗೇ ಇದು ಹೃದಯಾಘಾತ (Heart Attack), ಕಿಡ್ನಿ ವೈಫಲ್ಯ ಮತ್ತು ಪಾರ್ಶ್ವವಾಯು (Paralysis) ನಂತಹ ಪ್ರಾಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್ ವರದಿಯ ಪ್ರಕಾರ, ಬಿಪಿ ಇರುವವರು ಪ್ರಾಣಾಪಾಯದಿಂದ ಪಾರಾಗಬೇಕಾದರೆ ಪ್ರಮುಖವಾಗಿ 4 ರೀತಿಯ ಆಹಾರ ಪದಾರ್ಥಗಳಿಂದ ತಕ್ಷಣವೇ ದೂರವಿರಬೇಕು. 1. ಉಪ್ಪು: ಬಿಪಿಯ ಪ್ರಧಾನ ಶತ್ರು ರಕ್ತದೊತ್ತಡ ಹೆಚ್ಚಾಗಲು ಮುಖ್ಯ ಕಾರಣ ನಾವು ಸೇವಿಸುವ ಉಪ್ಪು. ಆಹಾರದಲ್ಲಿ ಉಪ್ಪಿನಂಶ ಹೆಚ್ಚಾದರೆ ರಕ್ತನಾಳಗಳಲ್ಲಿ ನೀರು ಶೇಖರಣಗೊಂಡು ಒತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಭಾರವನ್ನು ಬೀರುತ್ತದೆ. ಪರಿಹಾರ: ಅಡುಗೆಯಲ್ಲಿ ಉಪ್ಪನ್ನು ಕಡಿಮೆ ಮಾಡಿ. ಊಟ ಮಾಡುವಾಗ ಮೇಲೆ ಪ್ರತ್ಯೇಕವಾಗಿ…
ಬೆಂಗಳೂರು: ಭಾರತೀಯ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ ಮನೆಯಲ್ಲಿ ಓಡಾಡುವ ‘ಹಲ್ಲಿ’ ಮನುಷ್ಯನ ದೇಹದ ಮೇಲೆ ಬಿದ್ದರೆ ಅದಕ್ಕೊಂದು ವಿಶೇಷ ಅರ್ಥವಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದನ್ನು ‘ಗೌಳಿ ಶಾಸ್ತ್ರ’ ಎಂದೂ ಕರೆಯಲಾಗುತ್ತದೆ. ಹಲ್ಲಿ ದೇಹದ ಯಾವ ಭಾಗದ ಮೇಲೆ ಬೀಳುತ್ತದೆ ಮತ್ತು ಯಾರ ಮೇಲೆ ಬೀಳುತ್ತದೆ ಎಂಬುದರ ಆಧಾರದ ಮೇಲೆ ಶುಭ-ಅಶುಭ ಫಲಿತಾಂಶಗಳನ್ನು ನಿರ್ಧರಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಹಲ್ಲಿ ಬೀಳುವ ಶಾಸ್ತ್ರದಲ್ಲಿ ಭಿನ್ನತೆಯಿದೆ. ಉದಾಹರಣೆಗೆ, ಹಲ್ಲಿಯು ಪುರುಷನ ಬಲಭಾಗಕ್ಕೆ ಬಿದ್ದರೆ ಶುಭ ಹಾಗೂ ಎಡಭಾಗಕ್ಕೆ ಬಿದ್ದರೆ ಅಶುಭ ಎನ್ನಲಾಗುತ್ತದೆ. ಅದೇ ರೀತಿ, ಮಹಿಳೆಯರ ಎಡಭಾಗಕ್ಕೆ ಬಿದ್ದರೆ ಶುಭ ಮತ್ತು ಬಲಭಾಗಕ್ಕೆ ಬಿದ್ದರೆ ಅಶುಭ ಶಕುನ ಎಂದು ಪರಿಗಣಿಸಲಾಗುತ್ತದೆ. ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನೆಲ್ಲಾ ಬದಲಾವಣೆಗಳಾಗಬಹುದು? ಇಲ್ಲಿದೆ ಸಂಪೂರ್ಣ ವಿವರ: ತಲೆ ಮತ್ತು ಮುಖದ ಭಾಗದ ಮೇಲೆ ಬಿದ್ದರೆ: ತಲೆಯ ಮೇಲೆ: ನಿಮ್ಮ ತಲೆಯ ಮೇಲೆ ಹಲ್ಲಿ ಬಿದ್ದರೆ…
ಇಂದಿನ ಡಿಜಿಟಲ್ ಜಮಾನಾದಲ್ಲಿ ಮೊಬೈಲ್ ಮೂಲಕವೇ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ (Online Money Transfer) ಮಾಡಬಹುದು. ಆದರೂ ಕೂಡ ದೊಡ್ಡ ಮೊತ್ತದ ವ್ಯವಹಾರಗಳಿಗೆ ಇಂದಿಗೂ ‘ಬ್ಯಾಂಕ್ ಚೆಕ್’ (Bank Cheque) ಅತ್ಯಂತ ಸುರಕ್ಷಿತ ಮತ್ತು ಜನಪ್ರಿಯ ಮಾರ್ಗವಾಗಿದೆ. ಆದರೆ, ಚೆಕ್ ತುಂಬುವಾಗ ನಾವೆಲ್ಲರೂ ಒಂದಲ್ಲ ಒಂದು ಬಾರಿ ಒಂದು ಸಣ್ಣ ಗೊಂದಲಕ್ಕೆ ಒಳಗಾಗಿಯೇ ಇರುತ್ತೇವೆ. ಅದರಲ್ಲೂ ಲಕ್ಷ ರೂಪಾಯಿಗಳ ಚೆಕ್ ಬರೆಯುವಾಗ ಇಂಗ್ಲಿಷ್ನಲ್ಲಿ ‘Lakh’ ಎಂದು ಬರೆಯಬೇಕೋ ಅಥವಾ ‘Lac’ ಎಂದು ಬರೆಯಬೇಕೋ ಎಂಬ ಡೌಟ್ ಬಹುತೇಕರಿಗೆ ಬಂದಿರುತ್ತದೆ. ಹಾಗಾದರೆ ಬ್ಯಾಂಕಿಂಗ್ ನಿಯಮಗಳ ಪ್ರಕಾರ ಇದರಲ್ಲಿ ಯಾವುದು ಸರಿ? ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಗ್ಗೆ ಏನು ಹೇಳುತ್ತದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ‘Lakh’ ಮತ್ತು ‘Lac’ ಪದಗಳ ನಡುವಿನ ವ್ಯತ್ಯಾಸವೇನು? ನಾವೆಲ್ಲರೂ ಸಾಮಾನ್ಯವಾಗಿ ಬಳಸುವ ಈ ಎರಡು ಪದಗಳ ಅರ್ಥದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇಂಗ್ಲಿಷ್ ನಿಘಂಟಿನ (English Dictionary) ಪ್ರಕಾರ ಅವುಗಳ ನಿಜವಾದ ಅರ್ಥ ಹೀಗಿದೆ: ಲಕ್ಷ (Lakh):…
ಬೆಂಗಳೂರು: ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ಉನ್ನತ ಶಿಕ್ಷಣಕ್ಕೆ ದಾಖಲಾಗಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಕಾಲೇಜುಗಳಿಗೆ ಅಲೆದು ವರ್ಗಾವಣೆ ಪ್ರಮಾಣ ಪತ್ರ (Transfer Certificate – TC) ಪಡೆಯುವ ಕಿರಿಕಿರಿ ಇರುವುದಿಲ್ಲ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕೇವಲ ಫಲಿತಾಂಶದ ದತ್ತಾಂಶದ (Result Data) ಆಧಾರದ ಮೇಲೆ ನೇರವಾಗಿ ಡಿಜಿಲಾಕರ್ (DigiLocker) ಮೂಲಕ ಕ್ಯೂಆರ್ ಕೋಡ್ (QR Code) ಹೊಂದಿರುವ “ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ” ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಹೊಸ ವ್ಯವಸ್ಥೆಯು ಪ್ರಸಕ್ತ ಸಾಲಿನಿಂದಲೇ ಪ್ರಾಯೋಗಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ. ಈ ನೂತನ ವ್ಯವಸ್ಥೆಯ ಪ್ರಮುಖ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳು: ಸ್ವಯಂಚಾಲಿತ ಟಿಸಿ (Automation): ಇನ್ಮುಂದೆ ಹಸ್ತಚಾಲಿತ (Manual) ಟಿಸಿಗಳ ಬದಲಾಗಿ, ಮಂಡಳಿಯ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಡಿಜಿಟಲ್ ಟಿಸಿ ಸೃಜನೆಯಾಗಲಿದೆ. ಶೈಕ್ಷಣಿಕ ದಾಖಲೆಗಳ ಜೋಡಣೆ: ಡಿಜಿಟಲ್ ಟಿಸಿಯಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭೂಸ್ವಾಧೀನ ಅಧಿಕಾರಿಗಳು ಜಮೀನಿನ ಬೆಲೆ ನಿಗದಿಪಡಿಸುವ ವಿಧಾನ ಹಾಗೂ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಭೂಬೆಲೆ ನಿಗದಿಪಡಿಸಲು 5 ಪ್ರಮುಖ ವಿಧಾನಗಳು ಭೂಸ್ವಾಧೀನಾಧಿಕಾರಿಗಳು ಪರಿಹಾರ ಧನ ನಿಗದಿಪಡಿಸುವಾಗ ಈ ಕೆಳಗಿನ ಐದು ವಿಧಾನಗಳನ್ನು ಅನುಸರಿಸಬಹುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ: ಸ್ಥಳೀಯ ಪಂಚರು ನಿಗದಿಪಡಿಸಿದ ಬೆಲೆ. ಆದಾಯದ ಬಂಡವಾಳೀಕರಣ ವಿಧಾನ (Capitalization of Income Method). ತಜ್ಞರ ಅಭಿಮತ. ಭೂಮಾಲೀಕರು ಹಾಗೂ ಬೇಡಿಕೆ ಇಲಾಖೆಯವರು ಒಪ್ಪಂದದ ಮೇರೆಗೆ ಮಾತುಕತೆ ನಡೆಸಿ ನಿಗದಿಪಡಿಸಿದ ಬೆಲೆ. ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಮಾರಾಟವಾದ ಜಮೀನುಗಳ ಅಂಕಿ-ಅಂಶಗಳ ಸರಾಸರಿ ಬೆಲೆ. ಗಮನಾರ್ಹ ಅಂಶ: ಸಾಮಾನ್ಯವಾಗಿ ಅಧಿಕಾರಿಗಳು 5ನೇ ವಿಧಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ನೋಂದಣಿ ಬೆಲೆಗೂ ವಾಸ್ತವ ಬೆಲೆಗೂ…
ಬೆಂಗಳೂರು: ರಾಜ್ಯದ ಜನತೆಗೆ ಆರೋಗ್ಯ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುವುದು ಇನ್ನು ಬಹಳ ಸುಲಭ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ವಿನೂತನ ವಾಟ್ಸಾಪ್ ಸೌಲಭ್ಯವನ್ನು ಜಾರಿಗೆ ತಂದಿದೆ. ಏನಿದು ಹೊಸ ವ್ಯವಸ್ಥೆ? ನೀವು ದೂರು ನೀಡುವುದು ಹೇಗೆ? ನಿಮ್ಮ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯ ಕೊರತೆ ಇದೆಯೇ? ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆಯೇ? ಅಥವಾ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲವೇ? ಈ ಯಾವುದೇ ಸಮಸ್ಯೆಗಳಿದ್ದರೂ ನೀವು ನೇರವಾಗಿ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು. ಫೋಟೋ-ವಿಡಿಯೋ ಸಾಕ್ಷಿ: ಕೇವಲ ಮಾಹಿತಿ ಅಷ್ಟೇ ಅಲ್ಲದೆ, ಆಸ್ಪತ್ರೆಯ ಅವ್ಯವಸ್ಥೆಗೆ ಸಂಬಂಧಿಸಿದ ಫೋಟೋ ಅಥವಾ ವಿಡಿಯೋಗಳನ್ನು ಕೂಡ ನೀವು ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ನೇರ ನಿಗಾ: ನೀವು ಕಳುಹಿಸುವ ಪ್ರತಿಯೊಂದು ಸಂದೇಶವನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಖುದ್ದಾಗಿ ಪರಿಶೀಲಿಸಿ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಗೌಪ್ಯತೆ ಗ್ಯಾರಂಟಿ: ದೂರು ನೀಡುವ ಸಾರ್ವಜನಿಕರ…














