Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ರಾಜ್ಯದ ಜನತೆಗೆ ಒಂದೆಡೆ ಮಳೆಯ ಸಿಹಿ ಸುದ್ದಿ ಸಿಕ್ಕರೆ, ಮತ್ತೊಂದೆಡೆ ಬಿಸಿಲ ಬೇಗೆಯ ಎಚ್ಚರಿಕೆ ಲಭಿಸಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯ ಆತಂಕದ ನಡುವೆಯೂ, ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗಲಿದೆ.ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಳೆ ಸುರಿಯುವ ನಿರೀಕ್ಷೆಯಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಣ ಹವೆ ಹಾಗೂ ತಾಪಮಾನ ಏರಿಕೆ ಎಚ್ಚರಿಕೆ ಒಂದೆಡೆ ಮಳೆಯ ಸಿಂಚನವಾದರೆ, ಇನ್ನೊಂದೆಡೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.ಬಾಗಲಕೋಟೆ, ಬೀದರ್,…
ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ಹಿಂದೆ ರೈಲು ಟಿಕೆಟ್ ಬುಕ್ ಮಾಡಿದ ನಂತರ ಅದು ಕನ್ಫರ್ಮ್ ಆಗುತ್ತದೆಯೇ ಅಥವಾ ಇಲ್ಲವೇ ಎಂಬ ಆತಂಕ ಪ್ರಯಾಣಿಕರಲ್ಲಿ ಇರುತ್ತಿತ್ತು. ಆದರೆ ಈಗ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ‘RailOne’ ಮೊಬೈಲ್ ಆಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಮೊದಲೇ ಅದು ಕನ್ಫರ್ಮ್ ಆಗುವ ಸಾಧ್ಯತೆ ಎಷ್ಟು ಶೇಕಡಾ ಇದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. AI ತಂತ್ರಜ್ಞಾನದೊಂದಿಗೆ ನಿಖರ ಮುನ್ಸೂಚನೆ ರೈಲ್ವೆ ಸಚಿವಾಲಯವು ಇತ್ತೀಚೆಗೆ ‘RailConnect’ ಮತ್ತು ‘UTS’ ನಂತಹ ಹಳೆಯ ಆಪ್ಗಳ ಬದಲಿಗೆ ‘RailOne’ ಎಂಬ ಸೂಪರ್ ಆಪ್ ಅನ್ನು ಲಾಂಚ್ ಮಾಡಿದೆ. ಈ ಆಪ್ನ ವಿಶೇಷತೆಯೆಂದರೆ, ನೀವು ವೇಟಿಂಗ್ ಲಿಸ್ಟ್ ಇರುವ ಟಿಕೆಟ್ ಬುಕ್ ಮಾಡಲು ಬಯಸಿದಾಗ, ಅದು ಕನ್ಫರ್ಮ್ ಆಗುವ ಸಾಧ್ಯತೆಯನ್ನು AI (ಕೃತಕ ಬುದ್ಧಿಮತ್ತೆ) ವಿಶ್ಲೇಷಿಸಿ ನಿಮಗೆ ತಿಳಿಸುತ್ತದೆ. ಗಮನಾರ್ಹ ಬದಲಾವಣೆ: ಈ ಹಿಂದೆ ಇಂತಹ ಮುನ್ಸೂಚನೆಗಳ ನಿಖರತೆ ಕೇವಲ ಶೇ. 53 ರಷ್ಟಿತ್ತು. ಆದರೆ ಈಗಿನ…
ಬೆಂಗಳೂರು: ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ, ಹಿಂದೂ ವಿದ್ಯಾರ್ಥಿಗಳೂ ಕೂಡ ಕೇಸರಿ ಶಾಲು ಧರಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಹಿಜಾಬ್ ವಿಚಾರವಾಗಿ ರಾಜ್ಯ ಸರ್ಕಾರದ ಇತ್ತೀಚಿನ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು, ಇದು ಕೇವಲ ಅಲ್ಪಸಂಖ್ಯಾತರ ಓಲೈಕೆ ಮತ್ತು ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ತಂತ್ರ ಎಂದು ಆರೋಪಿಸಿದ್ದಾರೆ. ಯತ್ನಾಳ್ ಟ್ವೀಟ್ ನಲ್ಲಿ ಏನಿದೆ? ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ. ಸರ್ವೋಚ್ಚ ನ್ಯಾಯಾಲಯದಲ್ಲಿ ಸದರಿ ಪ್ರಕರಣ sub-judice ಇರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಸಂಪುಟದ ಮುಕುಟಮಣಿಗಳು ಹಿಜಾಬ್ ಧರಿಸಿ ಶಾಲೆಗೆ ಹೋಗಬಹುದು ಎಂಬ ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ತರ್ಕಾನುಸಾರವೇ ಮುಸಲ್ಮಾನ…
ಕುಟುಂಬದ ಹಿರಿಯರು ಅಥವಾ ತಂದೆ ಅಕಸ್ಮಾತ್ತಾಗಿ ನಿಧನರಾದಾಗ, ಅವರು ಮಾಡಿದ ಸಾಲದ ವಿಚಾರವಾಗಿ ಬ್ಯಾಂಕುಗಳಿಂದ ರಿಕವರಿ ಕರೆಗಳು ಬರುವುದು ಸಾಮಾನ್ಯ. ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತಂದೆಯ ಸಾಲವನ್ನು ಮಕ್ಕಳು ತೀರಿಸಬೇಕೇ ಅಥವಾ ಬೇಡವೇ ಎಂಬುದು ಆ ಸಾಲದ ಸ್ವರೂಪ ಮತ್ತು ಆಸ್ತಿಯ ಹಂಚಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ಬಗ್ಗೆ ಕಾನೂನುಬದ್ಧ ಮಾಹಿತಿ ಇಲ್ಲಿದೆ: 1. ಗೃಹ ಸಾಲ ಮತ್ತು ವಾಹನ ಸಾಲ (Secured Loans) ಇವು ಸುರಕ್ಷಿತ ಸಾಲಗಳು. ಅಂದರೆ ಮನೆ ಅಥವಾ ಕಾರನ್ನು ಅಡವಿಟ್ಟು ಸಾಲ ಪಡೆದಿರುತ್ತಾರೆ. ಸಾಲಗಾರ ಮರಣ ಹೊಂದಿದರೆ, ಬ್ಯಾಂಕ್ ಆ ಮನೆ ಅಥವಾ ಕಾರನ್ನು ಹರಾಜು ಹಾಕಿ ತನ್ನ ಹಣವನ್ನು ವಸೂಲಿ ಮಾಡಿಕೊಳ್ಳುತ್ತದೆ. ಒಂದು ವೇಳೆ ಆಸ್ತಿಯನ್ನು ಮಾರಿದರೂ ಸಾಲದ ಮೊತ್ತ ಪೂರ್ತಿ ಪಾವತಿಯಾಗದಿದ್ದರೆ (ಉದಾಹರಣೆಗೆ 40 ಲಕ್ಷ ಸಾಲವಿದ್ದು, ಮನೆ 38 ಲಕ್ಷಕ್ಕೆ ಮಾರಾಟವಾದರೆ), ಬಾಕಿ ಉಳಿದ 2 ಲಕ್ಷವನ್ನು ಮೃತರ ಹೆಸರಿನಲ್ಲಿರುವ ಇತರ ಆಸ್ತಿಗಳಿಂದ (ಎಫ್ಡಿ, ಭೂಮಿ) ಪಡೆಯಲಾಗುತ್ತದೆ. ಮೃತರ…
ತುಮಕೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ (Licensed Surveyors) ಸೇವೆಯನ್ನು ಕಾಯಂ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಈಗಾಗಲೇ ಭೂಮಾಪಕರ ಗಮನಕ್ಕೆ ತರಲಾಗಿದೆ. ಕಳೆದ ವಾರ ಅವರೊಂದಿಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿಯೇ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಪರವಾನಗಿ ಭೂಮಾಪಕರು ಕಳೆದ ಮೂರು ತಿಂಗಳಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. “ಭೂಮಾಪಕರ ಇತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ಅವರನ್ನು ಸಮಾಧಾನಪಡಿಸುವ ಮತ್ತು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಸಚಿವರು ಹೇಳಿದರು. ಸೇವೆಯನ್ನು ಕಾಯಂಗೊಳಿಸಬೇಕು ಅಥವಾ ನಿಗದಿತ ವೇತನ ನೀಡಬೇಕು ಎಂಬುದು ಭೂಮಾಪಕರ ಪ್ರಮುಖ ಒತ್ತಾಯವಾಗಿದೆ. ಆದರೆ, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಪ್ರಸ್ತುತ ಪರವಾನಗಿ…
ಲಖನೌ: ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಸಿಡಿಲು ಅಕ್ಷರಶಃ ಮರಣಮೃದಂಗವನ್ನೇ ಬಾರಿಸಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಈ ನೈಸರ್ಗಿಕ ವಿಕೋಪಕ್ಕೆ ಕಳೆದ 24 ಗಂಟೆಗಳಲ್ಲಿ ಸುಮಾರು 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಖಚಿತಪಡಿಸಿದ್ದಾರೆ. ಅಕಾಲಿಕ ಮಳೆ ಮತ್ತು ತೀವ್ರ ವೇಗದ ಬಿರುಗಾಳಿಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ.ರಾಜ್ಯ ಪರಿಹಾರ ಕಮಿಷನರ್ ಕಚೇರಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಪ್ರಯಾಗ್ರಾಜ್, ಕಾನ್ಪುರ ದೇಹತ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ವಿಕೋಪದ ತೀವ್ರತೆ ಹೆಚ್ಚಾಗಿತ್ತು.ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಯು ಹತ್ತಿರದ ಗ್ರಾಮಗಳನ್ನು ತಲ್ಲಣಗೊಳಿಸಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆದವರಾಗಿದ್ದಾರೆ. ಸಿಡಿಲು ಬಡಿದು ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಗಾಳಿಯ ಆರ್ಭಟಕ್ಕೆ ರಾಜ್ಯಾದ್ಯಂತ ನೂರಾರು ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ…
ಬೆಂಗಳೂರು: ರಾಜ್ಯದ ವಿಧಾನ ಪರಿಷತ್ ಸದಸ್ಯರು (MLC) ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಸರ್ಕಾರವು ವಿವಿಧ ರೀತಿಯ ವೇತನ, ಭತ್ಯೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಏಪ್ರಿಲ್ 1, 2022 ರಲ್ಲಿದ್ದಂತೆ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಒಬ್ಬ ಎಂ.ಎಲ್.ಸಿ ಪಡೆಯುವ ಪ್ರಮುಖ ಸೌಲಭ್ಯಗಳ ವಿವರ ಇಲ್ಲಿದೆ. 1. ಮಾಸಿಕ ವೇತನ ಮತ್ತು ಭತ್ಯೆಗಳು: ಒಬ್ಬ ಸದಸ್ಯರಿಗೆ ಪ್ರತಿ ತಿಂಗಳು ಒಟ್ಟು ಮೊತ್ತದ ಆಕರ್ಷಕ ವೇತನ ಪ್ಯಾಕೇಜ್ ದೊರೆಯುತ್ತದೆ: ಮೂಲ ವೇತನ: ₹40,000 ಕ್ಷೇತ್ರ ಭತ್ಯೆ: ₹60,000 ದೂರವಾಣಿ ಭತ್ಯೆ: ₹20,000 ಆಪ್ತ ಸಹಾಯಕ ಮತ್ತು ಗುಮಾಸ್ತರ ಭತ್ಯೆ: ₹20,000 ಒಟ್ಟು ಮಾಸಿಕ ವೇತನ: ಸುಮಾರು ₹1,40,000 ಗಳವರೆಗೆ ಇರುತ್ತದೆ. 2. ಪ್ರಯಾಣ ಮತ್ತು ದಿನಭತ್ಯೆ: ಅಧಿವೇಶನ ಅಥವಾ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಸದಸ್ಯರಿಗೆ ವಿಶೇಷ ಭತ್ಯೆ ನೀಡಲಾಗುತ್ತದೆ: ದಿನಭತ್ಯೆ: ರಾಜ್ಯದ ಒಳಗಿನ ಸಭೆಗಳಿಗೆ ದಿನಕ್ಕೆ ₹2,500 ಹಾಗೂ ಹೊರರಾಜ್ಯದ ಸಭೆಗಳಿಗೆ ₹3,500 ನೀಡಲಾಗುತ್ತದೆ. ಪ್ರಯಾಣ ಭತ್ಯೆ: ಸ್ವಂತ ವಾಹನದಲ್ಲಿ ಸಂಚರಿಸಿದರೆ ಪ್ರತಿ ಕಿಲೋಮೀಟರ್ಗೆ ₹35 ರಂತೆ…
ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿಶೇಷ ‘ಇ-ಸ್ವತ್ತು ಅಭಿಯಾನ’ಕ್ಕೆ ಚಾಲನೆ ನೀಡಿದೆ. ಈ ಯೋಜನೆಯ ಮೂಲಕ ಸಾರ್ವಜನಿಕರು ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಮನೆಯಲ್ಲಿಯೇ ಕುಳಿತು ತಮ್ಮ ಆಸ್ತಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆ ಎಲ್ಲಿ? ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು ವಿವಿಧ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ: ಆನ್ಲೈನ್ ಮೂಲಕ: ಜನರು ತಮ್ಮ ಮನೆಯಿಂದಲೇ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಡಿಜಿಟಲ್ ಪ್ರಮಾಣಪತ್ರ ಪಡೆಯಬಹುದು. ಸೇವಾ ಕೇಂದ್ರಗಳು: ನಿಮ್ಮ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಉಚಿತ ಸೇವೆಗಳು: ಈ ಅಭಿಯಾನದ ಅಡಿಯಲ್ಲಿ ಆಸ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಾದ ನಮೂನೆ 11ಎ (Form 11A) ಮತ್ತು ನಮೂನೆ 11ಬಿ (Form 11B) ಗಳನ್ನು ಯಾವುದೇ…
ಬೆಂಗಳೂರು: ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶವನ್ನು ಪತ್ನಿಗೆ ಪಾವತಿ ಮಾಡದ ಪತಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವುದು ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಂಗಳೂರಿನ ಶೈಲೇಶ್ ಮತ್ತು ನಿಶಾ ಎಂಬ ದಂಪತಿಗಳ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಪತ್ನಿ ಮತ್ತು ಮಗನಿಗೆ ಮಾಸಿಕ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪತಿಯು ಸರಿಯಾಗಿ ಪಾಲಿಸಿರಲಿಲ್ಲ. ಬಾಕಿ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯವು ಪತಿಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:ನ್ಯಾಯಾಲಯವು ಜೀವನಾಂಶ ನೀಡುವಂತೆ ಆದೇಶಿಸಿದ ಮೇಲೆ ಅದನ್ನು ಪಾವತಿಸುವುದು ಪತಿಯ ಕರ್ತವ್ಯ. ವಿನಾಕಾರಣ ವಿಳಂಬ ಮಾಡುವುದು ಅಥವಾ ಆದೇಶ ಉಲ್ಲಂಘಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಜೀವನಾಂಶ ಬಾಕಿ ಉಳಿಸಿಕೊಂಡಿರುವ ಪತಿಯನ್ನು ಬಂಧಿಸಲು ವಾರಂಟ್ ಹೊರಡಿಸುವುದು ಸಂವಿಧಾನದ ಪರಿಚ್ಛೇದ 21ರ…
ನವದೆಹಲಿ: ಪ್ರಸಿದ್ಧ ಡೈರಿ ಬ್ರ್ಯಾಂಡ್ ‘ಅಮೂಲ್’ ಉತ್ಪನ್ನಗಳ ಮಾರಾಟ ಸಂಸ್ಥೆಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF), ದೇಶಾದ್ಯಂತ ಹಾಲಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸುವುದಾಗಿ ಬುಧವಾರ ಘೋಷಿಸಿದೆ. ಈ ಪರಿಷ್ಕೃತ ದರಗಳು ಮೇ 14, 2026 ರಿಂದ ಜಾರಿಗೆ ಬರಲಿವೆ. ಯಾವೆಲ್ಲಾ ಹಾಲಿನ ದರ ಏರಿಕೆಯಾಗಿದೆ? ಅಮೂಲ್ನ ಪ್ರಮುಖ ಹಾಲಿನ ಪ್ರಕಾರಗಳ ಮೇಲೆ ಈ ಬೆಲೆ ಏರಿಕೆ ಅನ್ವಯಿಸಲಿದೆ: ಅಮೂಲ್ ಗೋಲ್ಡ್ (Amul Gold) ಅಮೂಲ್ ತಾಜಾ (Amul Taaza) ಅಮೂಲ್ ಶಕ್ತಿ (Amul Shakti) ಅಮೂಲ್ ಟಿ-ಸ್ಪೆಷಲ್ (Amul T-Special) ಅಮೂಲ್ ಆಕಳು ಹಾಲು (Amul Cow Milk) ಅಮೂಲ್ ಸ್ಲಿಮ್ ಅಂಡ್ ಟ್ರಿಮ್ (Amul Slim & Trim) ಬೆಲೆ ಏರಿಕೆಗೆ ಕಾರಣವೇನು? ಹಾಲಿನ ಉತ್ಪಾದನಾ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚದಲ್ಲಿನ ಹೆಚ್ಚಳವೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಸಂಸ್ಥೆ ತಿಳಿಸಿದೆ. ಪಶು ಆಹಾರದ ಬೆಲೆ ಏರಿಕೆ: ಕಳೆದ ಒಂದು ವರ್ಷದಲ್ಲಿ…














