Author: kannadanewsnow57

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್‌ಗಳಲ್ಲಿ ಹರಿದಾಡುವ ವದಂತಿಗಳು ಕೆಲವೊಮ್ಮೆ ನೈಜ ಸಮಸ್ಯೆಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಕುರಿತು ಇಂತಹದ್ದೇ ಕೆಲವು ಸುದ್ದಿಗಳು ವೈರಲ್ ಆಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಹಲವು ನಗರಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದನೆಯ ಸರತಿ ಸಾಲು ಕಂಡುಬರುತ್ತಿದೆ. ಆದರೆ, ಭಾರತದಲ್ಲಿ ನಿಜವಾಗಿಯೂ ಇಂಧನ ಖಾಲಿಯಾಗುತ್ತಿದೆಯೇ? ಈ ಗಂಭೀರ ಪರಿಸ್ಥಿತಿಯ ಕುರಿತು ದೇಶದ ಪ್ರಮುಖ ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಮೌನ ಮುರಿದಿದ್ದು, ದೇಶವಾಸಿಗಳಿಗೆ ಅತ್ಯಂತ ಪ್ರಮುಖವಾದ ಮಾಹಿತಿಯೊಂದನ್ನು ಬಿಡುಗಡೆ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೆಟ್ರೋಲ್-ಡೀಸೆಲ್ ಕೊರತೆಯ ಸುದ್ದಿಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು ಎರಡೂ ಕಂಪನಿಗಳು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿವೆ. ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹ ಲಭ್ಯವಿದೆ ಎಂದು ಕಂಪನಿಗಳು ಅಭಯ ನೀಡಿವೆ. ಪೆಟ್ರೋಲ್…

Read More

ದಮೋಹ್ (ಮಧ್ಯಪ್ರದೇಶ): ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಾದ ‘ಭಾಯ್ ದೂಜ್’ ದಿನದಂದೇ ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಸಮನ್ನಾ ಗ್ರಾಮದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕನನ್ನು ಹಾಡಹಗಲೇ ಹತ್ಯೆಗೈದಿರುವ ದುಷ್ಕರ್ಮಿಯೊಬ್ಬ, ಆತನ ರಕ್ತ ಕುಡಿದು ಮಾಂಸ ತಿನ್ನಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಭರತ್ ವಿಶ್ವಕರ್ಮ (16) ಎಂದು ಗುರುತಿಸಲಾಗಿದೆ. ಆತ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯ ವಿವರ: ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಭರತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಗುಡ್ಡಾ ಪಟೇಲ್ ಎಂಬಾತ ಹಿಂದಿನಿಂದ ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಬಾಲಕ ಕೆಳಗೆ ಬಿದ್ದ ತಕ್ಷಣ ತನ್ನ ಬಳಿಯಿದ್ದ ಸುತ್ತಿಗೆಯಿಂದ ಸತತವಾಗಿ ಹೊಡೆದು ಸ್ಥಳದಲ್ಲಿಯೇ ಕೊಂದಿದ್ದಾನೆ. ಬೆಚ್ಚಿಬೀಳಿಸಿದ ಪ್ರತ್ಯಕ್ಷದರ್ಶಿಗಳ ಹೇಳಿಕೆ: ಆರೋಪಿಯು ಬಾಲಕನನ್ನು ಕೊಂದ ನಂತರ ಅಲ್ಲಿಂದ ಪರಾರಿಯಾಗದೆ, ಶವದ ಬಳಿಯೇ ನಿಂತು ರಾಕ್ಷಸನಂತೆ ವರ್ತಿಸಿದ್ದಾನೆ. ಬಾಲಕನ ತಲೆಯಿಂದ ಸೋರುತ್ತಿದ್ದ ರಕ್ತವನ್ನು ಕುಡಿದಿದ್ದಲ್ಲದೆ,…

Read More

ಭಾರತೀಯರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಮತ್ತು ಬಿಸ್ಕೇಟ್ ಇಲ್ಲದೆ ದಿನ ಶುರುವಾಗುವುದಿಲ್ಲ. ಇದು ಬಹುತೇಕರಿಗೆ ಅತ್ಯಂತ ಸುಲಭ ಹಾಗೂ ಸಮಾಧಾನಕರವಾದ ದಿನನಿತ್ಯದ ಅಭ್ಯಾಸ. ಆದರೆ, ಈ ಸಾಮಾನ್ಯ ಅಭ್ಯಾಸ ನಿಮ್ಮ ಹೊಟ್ಟೆಗೆ ಹಾನಿ ಉಂಟುಮಾಡಬಹುದು ಎಂದು ಮುಂಬೈನ ವೈದ್ಯರೊಬ್ಬರು ಎಚ್ಚರಿಸಿದ್ದಾರೆ. ಮುಂಬೈನ ಖ್ಯಾತ ಕೀಲು ಮೂಳೆ ಶಸ್ತ್ರಚಿಕಿತ್ಸಕ ಮತ್ತು ಆರೋಗ್ಯ ತಜ್ಞ ಡಾ. ಮನನ್ ವೋರಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಬಿಸ್ಕೇಟ್ ಸೇವಿಸುವುದರಿಂದ ಕರುಳಿನ ಸಮಸ್ಯೆಗಳು ಉಂಟಾಗಬಹುದು ಮತ್ತು ದಿನದ ಮುಂದಿನ ಭಾಗದಲ್ಲಿ ಶಕ್ತಿಯ ಕೊರತೆ ಎದುರಾಗಬಹುದು ಎಂದು ಅವರು ವಿವರಿಸಿದ್ದಾರೆ. ಬೆಳಗಿನ ಚಹಾ ಹೊಟ್ಟೆಗೆ ಏಕೆ ತೊಂದರೆ ನೀಡುತ್ತದೆ? ಡಾ. ವೋರಾ ಅವರ ಪ್ರಕಾರ, ಚಹಾದಲ್ಲಿ ಕೆಫೀನ್ ಮತ್ತು ಟ್ಯಾನಿನ್ ಅಂಶಗಳಿರುತ್ತವೆ. ಇವು ಹೊಟ್ಟೆಯಲ್ಲಿ ಆಮ್ಲ (Acid) ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದಾಗ, ಅದು ಹೊಟ್ಟೆಯ…

Read More

ರಾಷ್ಟ್ರೀಯ ಜಾನುವಾರು ಮಿಷನ್ (NLM) ಅಡಿಯಲ್ಲಿ ಕತ್ತೆ, ಕುದುರೆ ಮತ್ತು ಒಂಟೆಗಳಂತಹ ಜಾನುವಾರುಗಳ ಸಾಕಾಣಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರೈತರು ಮತ್ತು ಉದ್ಯಮಿಗಳಿಗೆ ಭಾರಿ ಆರ್ಥಿಕ ನೆರವು ನೀಡಲು ಮುಂದಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಕತ್ತೆ ಸಾಕಾಣಿಕೆ (ಬ್ರೀಡಿಂಗ್ ಫಾರ್ಮ್) ಆರಂಭಿಸುವವರಿಗೆ ಸರ್ಕಾರವು ಆರ್ಥಿಕ ಬೆಂಬಲವನ್ನು ಒದಗಿಸುತ್ತಿದೆ. ಕತ್ತೆ ಸಾಕಾಣಿಕೆಗೆ ಸಬ್ಸಿಡಿ ವಿವರಗಳು: 50 ಲಕ್ಷದವರೆಗೆ ಸಹಾಯಧನ: ಯೋಜನಾ ವೆಚ್ಚದ ಶೇ. 50ರಷ್ಟು ಬಂಡವಾಳ ಸಬ್ಸಿಡಿಯನ್ನು (ಗರಿಷ್ಠ 50 ಲಕ್ಷ ರೂ.ವರೆಗೆ) ಸರ್ಕಾರ ನೀಡಲಿದೆ. ಯಾರಿಗೆ ಲಭ್ಯ?: ಆಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಥೆಗಳು (FPO), ಸ್ವ-ಸಹಾಯ ಸಂಘಗಳು (SHG), ಜಂಟಿ ಹೊಣೆಗಾರಿಕೆ ಗುಂಪುಗಳು (JLG), ಸಹಕಾರ ಸಂಘಗಳು ಮತ್ತು ಸೆಕ್ಷನ್ 8 ಕಂಪನಿಗಳು ಈ ಯೋಜನೆಯ ಲಾಭ ಪಡೆಯಬಹುದು. ಅರ್ಹತಾ ಮಾನದಂಡ: ಈ ಸಬ್ಸಿಡಿ ಪಡೆಯಲು, ಕನಿಷ್ಠ 50 ಹೆಣ್ಣು ಕತ್ತೆಗಳು ಮತ್ತು 5 ಗಂಡು ಕತ್ತೆಗಳನ್ನು ಒಳಗೊಂಡ ಸಾಕಾಣಿಕೆ ಘಟಕವನ್ನು ಸ್ಥಾಪಿಸುವುದು ಕಡ್ಡಾಯ.…

Read More

ಮೈಸೂರು: ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ಸಂಕಲನಕಾರರಾದ ನರಹಳ್ಳಿ ಜ್ಞಾನೇಶ್ (48) ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವರಾದ ಇವರು, ಕಾರ್ಯನಿಮಿತ್ತ ತಮ್ಮ ಸ್ವಗ್ರಾಮ ನರಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಸಾಧನೆ: ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಜ್ಞಾನೇಶ್ ಅವರು, ಹಿರಿಯ ಸಂಕಲನಕಾರ ಸುರೇಶ್ ಅರಸ್ ಅವರ ಗರಡಿಯಲ್ಲಿ ಪಳಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಹಲವಾರು ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳಿಗೆ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ, ನಟ ಜಗ್ಗೇಶ್ ಅಭಿನಯದ ‘ಎದ್ದೇಳು ಮಂಜುನಾಥ’ ಚಿತ್ರದ ಅತ್ಯುತ್ತಮ ಸಂಕಲನಕ್ಕಾಗಿ ಇವರು ಪ್ರತಿಷ್ಠಿತ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೇ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿದ್ದ ಇವರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಪ್ರತಿನಿಧಿಸುವ ಮೂಲಕ ವಾಣಿಜ್ಯ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು.

Read More

ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಭರಪೂರ ಅನುದಾನ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದಾಗಿ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ಯನ್ನು ಘೋಷಿಸಿದ್ದಾರೆ. ಕೃಷಿ ಪಂಪ್‌ಸೆಟ್‌ಗಳು ಹಾಗೂ ಗೃಹಬಳಕೆಯ ಉಚಿತ ವಿದ್ಯುತ್ ಯೋಜನೆಗಳಿಗಾಗಿ (ಗೃಹ ಜ್ಯೋತಿ) ಒಟ್ಟಾರೆ ಬರೋಬ್ಬರಿ 30,000 ಕೋಟಿ ರೂ. (ನಿಖರವಾಗಿ 29,868 ಕೋಟಿ ರೂ.) ಮೀಸಲಿಟ್ಟಿರುವುದು ಈ ಬಜೆಟ್‌ನ ಪ್ರಮುಖ ಅಂಶವಾಗಿದೆ. ಪರಿಸರ ಸ್ನೇಹಿ ಇಂಧನ ಬಳಕೆ ಹಾಗೂ ಕೃಷಿ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ಸರ್ಕಾರ ಈ ಬೃಹತ್ ಯೋಜನೆಗಳನ್ನು ಪ್ರಕಟಿಸಿದೆ. ಹೊಸ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’: ಕುಸುಮ್-ಸಿ (Kusum-C) ಮಾದರಿಯಲ್ಲಿ ಈ ಹೊಸ ಯೋಜನೆ ಜಾರಿಗೆ ಬರಲಿದೆ. 10,500 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಸಿಎಲ್ (KPTCL) ಉಪಕೇಂದ್ರಗಳಲ್ಲಿ 3,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ನೀರಾವರಿ ಪಂಪ್‌ಸೆಟ್‌ಗಳ ವಿಕೇಂದ್ರೀಕೃತ ಫೀಡರ್‌ಗಳಿಗೆ 2,777 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಕಾರ್ಯಗತಗೊಳಿಸಲಾಗುವುದು. ಉಚಿತ ವಿದ್ಯುತ್‌ಗೆ ಬೃಹತ್ ಅನುದಾನ: ರಾಜ್ಯದ 21…

Read More

ಬೆಂಗಳೂರು : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಏಕೀಕೃತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ನಗರಾಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ನಗರಾಭಿವೃದ್ಧಿ ಹಾಗೂ ಆಸ್ತಿ ನಿರ್ವಹಣೆ ಏಕೀಕೃತ ಆಸ್ತಿ ತೆರಿಗೆ: ಇ-ಆಸ್ತಿ ತಂತ್ರಾಂಶದೊಂದಿಗೆ ಸಂಯೋಜಿಸಿ ಸ್ವಯಂ ಚಾಲಿತವಾಗಿ ತೆರಿಗೆ ಬೇಡಿಕೆ ಸೃಜಿಸುವ ‘ಯೂನಿಫೈಡ್ ಪ್ರಾಪರ್ಟಿ ಟ್ಯಾಕ್ಸ್’ (Unified Property Tax) ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಹೊಸ ನಿಯಮ ಜಾರಿ: ನಗರ ಸ್ಥಳೀಯ ಸಂಸ್ಥೆಗಳ ಸ್ಥಿರಾಸ್ತಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ವಹಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ‘ದಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ರೂಲ್ಸ್-2026’ ಅನ್ನು ಜಾರಿಗೆ ತರಲಾಗುತ್ತಿದೆ. ಅಮೃತ್ ನಗರೋತ್ಥಾನ: ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆಯಡಿ (ಹಂತ-4) ಮೂಲಸೌಕರ್ಯ ಅಭಿವೃದ್ಧಿಗೆ ಈ ಸಾಲಿನಲ್ಲಿ ₹500 ಕೋಟಿ ಅನುದಾನ ಮೀಸಲಿಡಲಾಗಿದೆ. ಮೂಲಸೌಕರ್ಯ ಮತ್ತು ಕುಡಿಯುವ ನೀರು ಬೆಂಗಳೂರಿಗೆ ಭರ್ಜರಿ ಅನುದಾನ: ರಾಜಧಾನಿಯ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ…

Read More

ಹೋಮ್ ಲೋನ್ ಪಡೆದು ಮನೆ ಅಥವಾ ಸೈಟ್ ಖರೀದಿಸಿದ ನಂತರ, ಅನಿವಾರ್ಯ ಕಾರಣಗಳಿಂದ ಅಥವಾ ಲಾಭದ ಉದ್ದೇಶದಿಂದ ಅದನ್ನು ಮಾರಾಟ ಮಾಡಬೇಕೆಂದು ಅನೇಕರು ಯೋಚಿಸುತ್ತಾರೆ. ಆದರೆ ಸಾಲದ ಹೊರೆ ಇರುವಾಗ ಆಸ್ತಿ ಮಾರಾಟ ಸಾಧ್ಯವೇ ಎಂಬ ಗೊಂದಲ ಇರುತ್ತದೆ. ಖಂಡಿತವಾಗಿಯೂ ಸಾಲವಿರುವ ಆಸ್ತಿಯನ್ನು ಕಾನೂನುಬದ್ಧವಾಗಿ ಮಾರಾಟ ಮಾಡಬಹುದು. ಅದರ ಸರಳ ಹಂತಗಳು ಇಲ್ಲಿವೆ. ಸಾಲವಿರುವ ಆಸ್ತಿ ಮಾರಾಟಕ್ಕೆ ಬ್ಯಾಂಕಿನ ಅನುಮತಿ ಕಡ್ಡಾಯ ನಿಮ್ಮ ಆಸ್ತಿಯ ಅಸಲು ದಾಖಲೆಗಳು ಬ್ಯಾಂಕಿನ ವಶದಲ್ಲಿರುವುದರಿಂದ, ಮಾರಾಟ ಮಾಡುವ ಮೊದಲು ಬ್ಯಾಂಕಿನಿಂದ ಸಮ್ಮತಿ ಪತ್ರ (Consent Letter) ಪಡೆಯುವುದು ಮೊದಲ ಕೆಲಸ. ಇದರಲ್ಲಿ ಬಾಕಿ ಇರುವ ಒಟ್ಟು ಸಾಲ ಮತ್ತು ದಾಖಲೆಗಳ ಪಟ್ಟಿಯ ವಿವರವಿರುತ್ತದೆ. ಮಾರಾಟದ ಪ್ರಕ್ರಿಯೆ ಹೇಗಿರುತ್ತದೆ? (Step-by-Step) • ಬ್ಯಾಂಕ್ ಅನುಮತಿ: ಸಾಲ ತೀರಿಸಲು ಬೇಕಾದ ಒಟ್ಟು ಮೊತ್ತದ (Foreclosure Statement) ವಿವರ ಪಡೆಯಿರಿ. • ಖರೀದಿದಾರರ ಆಯ್ಕೆ: ಖರೀದಿದಾರರು ತಮ್ಮ ಉಳಿತಾಯದಿಂದ ಹಣ ಪಾವತಿಸಬಹುದು ಅಥವಾ ಅದೇ ಬ್ಯಾಂಕ್/ಬೇರೆ ಬ್ಯಾಂಕ್‌ನಿಂದ ಲೋನ್ ಪಡೆಯಬಹುದು.…

Read More

ಎಲ್ಲಾ ಪಡಿತರ ಚೀಟಿದಾರರು ವಿವಿಧ ಕಾರಣಗಳಿಂದ ಆದ್ಯತಾ ಪಡಿತರ ಚೀಟಿಯು (ಬಿ.ಪಿ.ಎಲ್) ಆದ್ಯತೇತರ ಪಡಿತರ ಚೀಟಿಯಾಗಿ (ಎ.ಪಿ.ಎಲ್) ಪರಿವರ್ತಿತವಾಗಿದಲ್ಲಿ ಹಾಗೂ ಪಡಿತರ ಚೀಟಿದಾರರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳಿಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನ್ನ ಸುವಿಧಾ ಯೋಜನೆಗೆ ನೋಂದಣಿಗೆ ಆಹ್ವಾನ ಅನ್ನಸುವಿಧಾ ಯೋಜನೆಯು ರಾಜ್ಯದ್ಯಂತ ಅನುಷ್ಠಾನಗೊಂಡಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 15,207 ಫಲಾನುಭವಿಗಳಿದ್ದು 3229 ಫಲಾನುಭವಿಗಳು ಅನ್ನ ಸುವಿಧ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿರುತ್ತಾರೆ ಉಳಿದ 11,978 ಪಡಿತರ ಚೀಟಿದಾರರು ಮಾರ್ಚ್ 2026 ರ ಮಾಹೆಯ 1 ರಿಂದ 6ನೇ ತಾರೀಖಿನೊಳಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನೆ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾರ್ವಕಾಲಿಕ ದಾಖಲೆಯ 47 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸ ಹುದ್ದೆಗಳ ಭರ್ತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ: 1. ಬೃಹತ್ ನೇಮಕಾತಿ ಅಭಿಯಾನ: ಶಿಕ್ಷಕರು ಮತ್ತು ಉಪನ್ಯಾಸಕರು: ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ (ಪಿಯು) ಕಾಲೇಜುಗಳಲ್ಲಿ ಖಾಲಿ ಇರುವ 15,000 ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸಹ ಪ್ರಾಧ್ಯಾಪಕರು: ಉನ್ನತ ಶಿಕ್ಷಣ ಇಲಾಖೆಯಡಿ 3,000 ಸಹ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. 2. ವಿದ್ಯಾರ್ಥಿ ಕಲ್ಯಾಣ ಮತ್ತು ಹೊಸ ಕಾಯ್ದೆ: ‘ರೋಹಿತ್ ವೇಮುಲ ಕಾಯ್ದೆ’: ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೊಳಿಸಲಾಗುವುದು.…

Read More