Subscribe to Updates
Get the latest creative news from FooBar about art, design and business.
Author: kannadanewsnow57
ತುಮಕೂರು: ಪಾಕಿಸ್ತಾನ ಮೂಲದ ಉಗ್ರನೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತುಮಕೂರು ಹಾಗೂ ದಾವಣಗೆರೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೇಂದ್ರ ತನಿಖಾ ಹಾಗೂ ಗುಪ್ತಚರ ಸಂಸ್ಥೆಗಳಿಂದ ಲಭಿಸಿದ ಮಹತ್ವದ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ತುಮಕೂರಿನ ಶ್ರೀರಾಮನಗರ ನಿವಾಸಿಯಾದ 24 ವರ್ಷದ ಅಲ್ಲಾಬಕ್ಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ವಿದೇಶಿ ಉಗ್ರ ಸಂಘಟನೆಗೆ ಸಂಬಂಧ ಹೊಂದಿರುವ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂಬಾತನನ್ನೂ ಉಗ್ರ ನಿಗ್ರಹ ಕಾಯ್ದೆಯಡಿ (UAPA) ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೊದಲು ಪತ್ತೆಯಾದ ಅನುಮಾನಾಸ್ಪದ ಆನ್ಲೈನ್ ಚಟುವಟಿಕೆ ಕೇಂದ್ರ ಗುಪ್ತಚರ ಸಂಸ್ಥೆಗಳು ಶಂಕಿತರ ಡಿಜಿಟಲ್ ಚಟುವಟಿಕೆಗಳ ಮೇಲೆ ಹಲವು ದಿನಗಳಿಂದ ನಿಗಾ ಇಟ್ಟಿದ್ದವು ಎಂದು ತಿಳಿದುಬಂದಿದೆ. ಅನುಮಾನಾಸ್ಪದ ಆನ್ಲೈನ್ ಸಂಪರ್ಕಗಳು ಹಾಗೂ ಸಂವಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ, ಸಂಬಂಧಿತ…
ಬೆಂಗಳೂರು: ನಿಮ್ಮ ವಾಹನದ ಮೇಲೆ ಹಳೇ ಟ್ರಾಫಿಕ್ ಫೈನ್ ಬಾಕಿ ಉಳಿದಿದೆಯೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಸುವರ್ಣಾವಕಾಶ ನೀಡಿದ್ದು, ಬರೋಬ್ಬರಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ. ದಂಡ ಕಟ್ಟಲು ಇಲ್ಲಿದೆ ಕೊನೆಯ ದಿನಾಂಕ! ಈ ರಿಯಾಯಿತಿ ಸೌಲಭ್ಯವು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ. ಜೂನ್ 21 ರಿಂದ ಜುಲೈ 10 ರವರೆಗೆ ವಾಹನ ಸವಾರರು ಅರ್ಧ ಬೆಲೆಯಲ್ಲಿ ತಮ್ಮ ಬಾಕಿ ದಂಡವನ್ನು ಕಟ್ಟಿ ನಿರಾಳರಾಗಬಹುದು. ಯಾವೆಲ್ಲಾ ಪ್ರಕರಣಗಳಿಗೆ ಅನ್ವಯ? ಪೊಲೀಸ್ ಇಲಾಖೆ: 2026ರ ಮೇ ತಿಂಗಳಿಗಿಂತ ಮುಂಚಿತವಾಗಿ ದಾಖಲಾಗಿರುವ ಸಂಚಾರ ಇ-ಚಲನ್ ಪ್ರಕರಣಗಳ ಬಾಕಿ ದಂಡಕ್ಕೆ ಈ 50% ರಿಯಾಯಿತಿ ಸಿಗಲಿದೆ. ಸಾರಿಗೆ ಇಲಾಖೆ: 1991 ರಿಂದ 2022ರ ಒಳಗಿನ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳಿಗೂ ಈ ಆಫರ್ ಅನ್ವಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದಂಡ ಪಾವತಿಸುವುದು ಹೇಗೆ?…
ಪುಣೆ: ಧಾರ್ಮಿಕ ಜಾತ್ರೆಯೊಂದರಲ್ಲಿ ಖರೀದಿಸಿದ್ದ ಬೆಡ್ಶೀಟ್ ಅನ್ನು ಮನೆಗೆ ತಂದು ತೊಳೆದಾಗ, ಅದರಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ (ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟಿದೆ) ಎಂಬ ಲೇಬಲ್ ಪತ್ತೆಯಾಗಿದ್ದು, ಇದೀಗ ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಿಂಪ್ರಿ-ಚಿಂಚವಾಡದ ಚಿಂಚವಾಡ ಪ್ರದೇಶದ ಮೋರ್ಯ ಗೋಸಾವಿ ದೇವಸ್ಥಾನದ ಆವರಣದಲ್ಲಿ ನಡೆದ ಸಂಕಷ್ಟ ಚತುರ್ಥಿ ಜಾತ್ರೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಸ್ಥಳೀಯ ವ್ಯಾಪಾರಿಯೊಬ್ಬರಿಂದ ಈ ಬೆಡ್ಶೀಟ್ ಖರೀದಿಸಿದ್ದರು. ಘಟನೆಯ ಹಿನ್ನೆಲೆ: ಜಾತ್ರೆಯಲ್ಲಿ ಖರೀದಿ: ಬುಧವಾರ ಸಂಕಷ್ಟ ಚತುರ್ಥಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಈ ವೇಳೆ ಮಹಿಳೆ ಬೆಡ್ಶೀಟ್ ಖರೀದಿಸಿದ್ದರು. ಕೊಳ್ಳುವ ಸಮಯದಲ್ಲಿ ಅವರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ತೊಳೆದಾಗ ಬಯಲಾದ ಸತ್ಯ: ಮನೆಗೆ ಬಂದು ಬೆಡ್ಶೀಟ್ ತೊಳೆದ ನಂತರ, ಅದರ ಮೇಲಿದ್ದ ಬಟ್ಟೆಯ ಟ್ಯಾಗ್ ಸ್ಪಷ್ಟವಾಗಿ ಕಾಣಿಸಿದೆ. ಅದರಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಎಂದು ಬರೆದಿರುವುದನ್ನು ನೋಡಿ ಮಹಿಳೆ ಆಶ್ಚರ್ಯಚಕಿತರಾಗಿದ್ದಾರೆ. ಸಾಮಾಜಿಕ…
ಮುಂಬೈ: ದೇಶದ ಕರೆನ್ಸಿ ವ್ಯವಸ್ಥೆಯಲ್ಲಿ ಭಾರಿ ಹಾಗೂ ಐತಿಹಾಸಿಕ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಂತನೆ ನಡೆಸಿದೆ. ದೇಶದಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಬ್ಯಾಂಕ್ ಸಿದ್ಧಪಡಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಿಸಿದ್ದಾರೆ. ಗವರ್ನರ್ ಅವರ ಪ್ರಕಾರ, ಈ ಪ್ರಸ್ತಾವನೆಯು ಸದ್ಯಕ್ಕೆ ಆರಂಭಿಕ ಹಂತದಲ್ಲಿದೆ. ಕುತೂಹಲಕಾರಿ ವಿಷಯವೆಂದರೆ, ಕೇಂದ್ರ ಬ್ಯಾಂಕ್ ಸುಮಾರು ಒಂದು ದಶಕದ ಹಿಂದೆಯೇ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸುವ ಆಲೋಚನೆಯನ್ನು ಮೊದಲು ಮಂಡಿಸಿತ್ತು. ಈಗ ಈ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ಮುಖ್ಯ ಕಾರಣವೆಂದರೆ ಮಾರುಕಟ್ಟೆಯಲ್ಲಿ ನಗದು (ಕ್ಯಾಶ್) ಚಲಾವಣೆ ಮತ್ತು ಬೇಡಿಕೆಯಲ್ಲಿ ಕಂಡುಬಂದಿರುವ ಭಾರಿ ಜಿಗಿತವಾಗಿದೆ. ಪ್ಲಾಸ್ಟಿಕ್ ನೋಟುಗಳ ಅಗತ್ಯ ಏಕಿದೆ? ಮಾರುಕಟ್ಟೆಯಲ್ಲಿ ನಗದಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಕಾಗದದ ನೋಟುಗಳನ್ನು ಮುದ್ರಿಸುವ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಜೊತೆಗೆ ಕಾಗದದ ನೋಟುಗಳು ಬೇಗನೆ ಕೊಳೆಯಾಗುತ್ತವೆ, ಹರಿಯುತ್ತವೆ ಅಥವಾ ಹಾಳಾಗುತ್ತವೆ. ಈ ಕಾರಣದಿಂದಾಗಿ…
ಹೆಚ್ಚು ಆದಾಯ ಗಳಿಸಿದರೆ ಅನಿವಾರ್ಯವಾಗಿ ಹೆಚ್ಚಿನ ಆದಾಯ ತೆರಿಗೆ (Income Tax) ಪಾವತಿಸಬೇಕೆಂಬುದು ಅನೇಕರ ನಂಬಿಕೆ. ಆದರೆ ಆದಾಯ ತೆರಿಗೆ ಕಾಯಿದೆಯಲ್ಲಿರುವ ಕೆಲವು ನಿಯಮಗಳು, ವಿನಾಯಿತಿಗಳು ಮತ್ತು ಕಡಿತಗಳನ್ನು ಸರಿಯಾಗಿ ಬಳಸಿಕೊಂಡರೆ ಲಕ್ಷಾಂತರ ರೂಪಾಯಿ ಆದಾಯ ಇದ್ದರೂ ತೆರಿಗೆ ಹೊರೆ ಬಹುತೇಕ ಶೂನ್ಯಕ್ಕೆ ಇಳಿಸಬಹುದು ಎಂದು ತೆರಿಗೆ ತಜ್ಞರು ಹೇಳುತ್ತಾರೆ. ತೆರಿಗೆ ಯೋಜನೆ (Tax Planning) ಎಂಬುದು ಸಂಪೂರ್ಣ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಇದು ತೆರಿಗೆ ವಂಚನೆಗೆ (Tax Evasion) ಸಂಪೂರ್ಣ ಭಿನ್ನವಾಗಿದೆ. ಸರಿಯಾದ ಯೋಜನೆ ಮತ್ತು ದಾಖಲೆಗಳ ಮೂಲಕ ತೆರಿಗೆ ಉಳಿತಾಯ ಸಾಧ್ಯ. ತೆರಿಗೆ ಲೆಕ್ಕಾಚಾರ ಹೇಗೆ ನಡೆಯುತ್ತದೆ? ಆದಾಯ ತೆರಿಗೆಯನ್ನು ವ್ಯಕ್ತಿಯ ಒಟ್ಟು ಆದಾಯದ ಮೇಲೆ ಲೆಕ್ಕ ಹಾಕುವುದಿಲ್ಲ. ವಿವಿಧ ವಿನಾಯಿತಿಗಳು ಹಾಗೂ ಕಡಿತಗಳನ್ನು ತೆಗೆದುಹಾಕಿದ ನಂತರ ಉಳಿಯುವ “ತೆರಿಗೆಗೆ ಒಳಪಡುವ ಆದಾಯ” (Taxable Income) ಆಧರಿಸಿ ತೆರಿಗೆ ನಿಗದಿಯಾಗುತ್ತದೆ. ಇದೇ ಕಾರಣದಿಂದ ಕೆಲವರು ಹೆಚ್ಚಿನ ಆದಾಯ ಹೊಂದಿದ್ದರೂ ಕಡಿಮೆ ತೆರಿಗೆ ಪಾವತಿಸುತ್ತಾರೆ. 1. ಮೂಲ ವಿನಾಯಿತಿ ಮಿತಿಯ ಲಾಭ…
ಬೆಂಗಳೂರು: ಕಂದಾಯ ಇಲಾಖೆಯ ವಿವಿಧ ವೃಂದದ ನೌಕರರಿಗೆ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಲಾಖೆಯ ಅರ್ಹ ಸಿಬ್ಬಂದಿಗೆ ನಿಯಮಾನುಸಾರ ಮುಂಬಡ್ತಿ (Promotion) ನೀಡುವ ಕುರಿತು ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಜೂನ್ 5, 2026 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಪರಿಷ್ಕೃತ ನಿಯಮಾವಳಿಗಳ ಅನ್ವಯ ಕ್ರಮ ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗಿದ್ದು, ಎಲ್ಲಾ ವೃಂದಗಳಿಗೆ ವೃಂದಬಲ ಹಾಗೂ ನೇಮಕಾತಿ ವಿಧಾನವನ್ನು ನಿಗದಿಪಡಿಸಲಾಗಿದೆ. ಈ ಸಂಬಂಧ “ಕರ್ನಾಟಕ ರಾಜ್ಯ ಕಂದಾಯ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು 2026” ಅನ್ನು ರಚಿಸಿ, ಮೇ 27, 2026 ರಂದು ರಾಜ್ಯ ಪತ್ರದಲ್ಲಿ (Gazette) ಪ್ರಕಟಿಸಲಾಗಿದೆ. ಈ ಹೊಸ ನಿಯಮಾವಳಿಗಳ ಅನ್ವಯವೇ ಮುಂಬಡ್ತಿ ಪ್ರಕ್ರಿಯೆ ನಡೆಯಲಿದೆ. ಯಾವೆಲ್ಲಾ ನೌಕರರಿಗೆ ಸಿಗಲಿದೆ ಮುಂಬಡ್ತಿ ಭloading? ಸರ್ಕಾರದ ಆದೇಶದ ಪ್ರಕಾರ, ಕಂದಾಯ ಇಲಾಖೆಯ ಈ ಕೆಳಗಿನ ವಿವಿಧ ವೃಂದದ ಅರ್ಹ ನೌಕರರಿಗೆ ಮುಂಬಡ್ತಿ…
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿಯ ಪ್ರಮುಖ ವಿವರಗಳು ಈ ಕೆಳಗಿನಂತಿವೆ: ಹುದ್ದೆಗಳ ವಿವರ ಹಾಗೂ ವರ್ಗೀಕರಣ ಒಟ್ಟು 3,395 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ: ನೇರ ನೇಮಕಾತಿ (ಪುರುಷ): 2,266 ಹುದ್ದೆಗಳು ನೇರ ನೇಮಕಾತಿ (ಮಹಿಳಾ): 755 ಹುದ್ದೆಗಳು ಸೇವಾನಿರತ (ಪುರುಷ): 257 ಹುದ್ದೆಗಳು ಸೇವಾನಿರತ (ಮಹಿಳಾ): 82 ಹುದ್ದೆಗಳು ತೃತೀಯ ಲಿಂಗ ಅಭ್ಯರ್ಥಿಗಳು: 35 ಹುದ್ದೆಗಳು ವೇತನ ಶ್ರೇಣಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500 ರಿಂದ ರೂ. 76,100/- ಗಳ ವೇತನ ಶ್ರೇಣಿ ಇರಲಿದೆ. ಶೈಕ್ಷಣಿಕ ವಿದ್ಯಾರ್ಹತೆ ಅಭ್ಯರ್ಥಿಗಳು ಪಿ.ಯು.ಸಿ…
ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಾರುತಗಳು ಅಧಿಕೃತವಾಗಿ ಲಗ್ಗೆ ಇಟ್ಟಿದ್ದು, ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಮುಂದಿನ ಒಂದು ವಾರದ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಇನ್ನೆರಡು ದಿನಗಳಲ್ಲಿ ಮುಂಗಾರು ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕರಾವಳಿ ತೀರದ ಜಿಲ್ಲೆಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾಸರಗೋಡು ಜಿಲ್ಲೆಗೆ ಶನಿವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಕಾರಣ ‘ಆರೆಂಜ್ ಅಲರ್ಟ್’ ಜಾರಿಗೊಳಿಸಲಾಗಿದೆ. ಜೂನ್ 6ರಿಂದ 9ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಆರ್ಭಟ ಹೆಚ್ಚಾಗಲಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ತೀರ ಪ್ರದೇಶದ…
ಬೆಂಗಳೂರು: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಹಾಗೂ ಶಾಲಾ ಡೈಸ್ (DISE) ಕೋಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಜೂನ್ 30 ಕೊನೆಯ ದಿನಾಂಕ ಈ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 30, 2026ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮನವಿಯ ಮೇರೆಗೆ, ಜೂನ್ 3, 2026 ರಿಂದ ಜೂನ್ 30, 2026ರ ವರೆಗೆ ಒಟ್ಟು 28 ದಿನಗಳ ಕಾಲ ಅಂತಿಮವಾಗಿ ಅವಧಿ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಆಡಳಿತ ಮಂಡಳಿಗಳೆರಡಕ್ಕೂ ಈ ಅವಕಾಶ ಅನ್ವಯವಾಗುತ್ತದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್ಸೈಟ್ (https://schooleducation.karnataka.gov.in/)…
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ಆಹಾರ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಅಥವಾ ನ್ಯಾಯಬೆಲೆ ಅಂಗಡಿಗಳ ಅಕ್ರಮದ ವಿರುದ್ಧ ದೂರು ನೀಡಲು ದಿನಗಟ್ಟಲೆ ಕಾಯಬೇಕಾಗಿಲ್ಲ ಸಾರ್ವಜನಿಕರ ದೂರುಗಳನ್ನು ಅತ್ಯಂತ ವೇಗವಾಗಿ ಪರಿಹರಿಸಲು ಆಹಾರ ಇಲಾಖೆಯು ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಈ ಹೊಸ ಡಿಜಿಟಲ್ ವ್ಯವಸ್ಥೆ ಅಧಿಕೃತವಾಗಿ ಲಭ್ಯವಾಗಲಿದೆ. ಪ್ರಸ್ತುತ ಅನ್ನಭಾಗ್ಯ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ರೇಷನ್ ಕಾರ್ಡ್ಗೆ ಸಂಬಂಧಿಸಿದ ದೂರುಗಳಿಗಾಗಿ ಆಹಾರ ಇಲಾಖೆಯು ‘1967’ ಸಹಾಯವಾಣಿಯನ್ನು ನಡೆಸುತ್ತಿದೆ. ಪ್ರತಿದಿನ ಸರಾಸರಿ 200 ರಿಂದ 300 ದೂರುಗಳು ಇಲ್ಲಿ ದಾಖಲಾಗುತ್ತಿದ್ದು, ಸದ್ಯ ಚಾಲ್ತಿಯಲ್ಲಿರುವ ಮ್ಯಾನುಯಲ್ ವ್ಯವಸ್ಥೆಯಿಂದಾಗಿ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮುಕ್ತಾಯಗೊಳಿಸಲು ಇಡೀ ಸಹಾಯವಾಣಿಯನ್ನು ಸಂಪೂರ್ಣ…














