Author: kannadanewsnow57

ನವದೆಹಲಿ : ಭಾರತ ಸರ್ಕಾರವು ಮೇ 7, 2025 ರಂದು ದೇಶಾದ್ಯಂತ ಗುರುತಿಸಲಾದ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಬೃಹತ್ ಅಣಕು ಡ್ರಿಲ್ ಅನ್ನು ಆಯೋಜಿಸಲಿದೆ. ಕ್ಷಿಪಣಿ ದಾಳಿ ಅಥವಾ ವಾಯುದಾಳಿಗಳಂತಹ ಯುದ್ಧದಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಎಷ್ಟು ಬೇಗನೆ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಬಹುದು ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿದೆ. ಈ ಅಣಕು ಪ್ರದರ್ಶನವು ನಿಜ ಜೀವನದ ಸನ್ನಿವೇಶಗಳನ್ನು ಅನುಕರಿಸುತ್ತದೆ, ವಾಯುದಾಳಿಯ ಸೈರನ್‌ಗಳು ಸದ್ದು ಮಾಡುವುದು, ನಗರಗಳಲ್ಲಿ ವಿದ್ಯುತ್ ಕಡಿತಗೊಳ್ಳುವುದು, ಆಶ್ರಯ ಪಡೆಯುವ ಅಭ್ಯಾಸ ಮಾಡುತ್ತಿರುವ ಜನರು ಮತ್ತು ತುರ್ತು ಸೇವೆಗಳು ತ್ವರಿತವಾಗಿ ಪ್ರತಿಕ್ರಿಯಿಸುವುದನ್ನು ಇದು ಒಳಗೊಂಡಿರುತ್ತದೆ. ಈ ವ್ಯಾಯಾಮದ ಉದ್ದೇಶ ಭಯಭೀತರಾಗುವುದನ್ನು ತಪ್ಪಿಸುವುದು, ಅವ್ಯವಸ್ಥೆಯನ್ನು ಕಡಿಮೆ ಮಾಡುವುದು ಮತ್ತು ಜೀವಗಳನ್ನು ಉಳಿಸುವುದು. ಶೀತಲ ಸಮರವನ್ನು ನೆನಪಿಸುತ್ತದೆ ಇಂತಹ ಸಿದ್ಧತೆಗಳು ಶೀತಲ ಸಮರದ ಯುಗವನ್ನು ನೆನಪಿಸುತ್ತವೆಯಾದರೂ, ಪ್ರಸ್ತುತ ಜಾಗತಿಕ ಉದ್ವಿಗ್ನತೆಗಳು ಅವುಗಳನ್ನು ಮತ್ತೊಮ್ಮೆ ಮುಖ್ಯವಾಗಿಸಿದೆ. ಮೇ 7 ರಂದು ನಡೆಯಲಿರುವ ಈ ರಾಷ್ಟ್ರೀಯ ಮಟ್ಟದ ಪೂರ್ವಾಭ್ಯಾಸಕ್ಕಾಗಿ, ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು…

Read More

ಬೆಂಗಳೂರು : ಪನೀರ್‌, ಕಬಾಬ್‌ ಬಳಿಕ ಜಿಲೇಬಿ, ಶರಬತ್ತು ಸರದಿ, ಜಿಲೇಬಿ, ಶರಬತ್ತಿನಲ್ಲಿ ಕೃತಕ ಕಲರ್‌, ಕಲುಷಿತ ನೀರು ಬಳಕೆ ಮಾಡುತ್ತಿರುವ ಶಾಕಿಂಗ್‌ ವಿಚಾರ ಬಯಲಾಗಿದೆ. ಹೌದು, ಕಲಬರಕೆ ಸಂಬಂಧ ಜಿಲೇಬಿ, ಶರಬತ್‌ ಮಾದರಿ ಸಂಗ್ರಹಕ್ಕೆ ಆಹಾರ ಇಲಾಖೆ ಮುಂದಾಗಿದ್ದು, ಪ್ರತಿ ಜಿಲೆಯಲ್ಲೂ ತಲಾ 5 ಮಾದರಿ ಸಂಗ್ರಹಿಸುವಂತೆ ಸೂಚನೆ ನೀಡಿದೆ. ಹೀಗಾಗಿ ವರದಿ ಮೇಲೆ ಜಿಲೇಬಿ ವ್ಯಾಪಾರಿಗಳು ಕಣ್ಣಿಟ್ಟು ಕೂತಿದ್ದಾರೆ. ಜಿಲೇಬಿಗೆ ಕೃತಕ ಬಣ್ಣ ಬಳಕೆ ಬಳಸುತ್ತಿರುವುದು ಕಂಡು ಬಂದಿದ್ದು, ಆಹಾರ ಗುಣಮಟ್ಟ ಇಲಾಖೆ ಗಮನಕ್ಕೆ ಬಂದಿದೆ. ಜೊತೆಗೆ ದಣಿವಾರಿಸುವ ಶರಬತ್ತಿನಲ್ಲೂ ಕೃತಕ ಬಣ್ಣ ಹಾಗೂ ಕಲುಷಿತ ನೀರು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿಸಿದ್ರೆ ಕುಲುಷಿತವಾಗಲಿದೆ ಎನ್ನಲಾಗಿದೆ.

Read More

ನವದೆಹಲಿ : ಡಿಜಿಟಲ್ ಇಂಡಿಯಾದತ್ತ ಮತ್ತೊಂದು ದೊಡ್ಡ ಹೆಜ್ಜೆ ಇಡುತ್ತಿರುವ ಭಾರತ ಸರ್ಕಾರವು ಟ್ರೂ ಐಡಿ ವಿ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇದು ಡಿಜಿಟಲ್, ಪರಿಶೀಲಿಸಿದ ಗುರುತಿನ ಚೀಟಿಯಾಗಿದ್ದು, ಇದನ್ನು ಡಿಜಿಲಾಕರ್ ಮೂಲಕ ಸುಲಭವಾಗಿ ರಚಿಸಬಹುದು. ಈ ಕಾರ್ಡ್ ಸುರಕ್ಷಿತ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಸರು, ಜನ್ಮ ದಿನಾಂಕ, ಫೋಟೋ, ಲಿಂಗ, ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಪ್ರಮುಖ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಟ್ರೂ ಐಡಿ ವಿ ಕಾರ್ಡ್ ಎಂದರೇನು? ಟ್ರೂ ಐಡಿ ವಿ ಕಾರ್ಡ್ ಡಿಜಿಲಾಕರ್ ಮೂಲಕ ರಚಿಸಲಾದ ಪರಿಶೀಲಿಸಲಾದ ಡಿಜಿಟಲ್ ಐಡಿ ಕಾರ್ಡ್ ಆಗಿದೆ. ಸರ್ಕಾರಿ ದಾಖಲೆಗಳಿಂದ ದೃಢೀಕರಿಸಲ್ಪಟ್ಟ ಡಿಜಿಟಲ್ ಗುರುತನ್ನು ಜನರಿಗೆ ನೀಡುವ ಗುರಿಯನ್ನು ಇದು ಹೊಂದಿದೆ. “ಈ ಕಾರ್ಡ್ ಮೂಲಕ, ಯಾರಾದರೂ ನಿಮ್ಮ ಗುರುತಿನ ಸಿಂಧುತ್ವವನ್ನು ಪರಿಶೀಲಿಸಬಹುದು ಏಕೆಂದರೆ ಅದು ಸರ್ಕಾರಿ ಡೇಟಾಬೇಸ್‌ಗೆ ನೇರವಾಗಿ ಸಂಪರ್ಕ ಹೊಂದಿದೆ.” ಟ್ರೂ ಐಡಿ ವಿ ಕಾರ್ಡ್ ಮಾಡುವ ಪ್ರಕ್ರಿಯೆ 1. ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ತೆರೆಯಿರಿ ವೆಬ್‌ಸೈಟ್:…

Read More

ಬೆಂಗಳೂರು : 2025-26ನೇ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ. ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು.ಕೆ.ಜಿ ಅಥವಾ ತತ್ಸಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳತಕ್ಕದ್ದು ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಷಯಾನ್ವಯವಾಗಿ, ರಾಜ್ಯ ನೀತಿ ಆಯೋಗದ ಶಿಫಾರಸು / ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರದ ಆದೇಶ ಸಂಖ್ಯೆ : ಇಪಿ 250 ಪಿಜಿಸಿ 2021, ದಿನಾಂಕ: 26.07.2022ರಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ 5 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದಕ್ಕೆ ಒಂದು ಬಾರಿಯ ಕ್ರಮವಾಗಿ ಸಡಿಲಿಕೆಯನ್ನು ನೀಡಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಕಾರಣಗಳಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1 ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಿದ. ಮುಂದುವರೆದು, 2026-27ನೇ ಶೈಕ್ಷಣಿಕ ವರ್ಷದಿಂದ ಜೂನ್ ಒಂದನೇ…

Read More

ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳ್ಳಬೇಕಿರುವ ಚಟುವಟಿಕೆಗಳು ಮತ್ತು ಮೇಲ್ವಿಚಾರಣೆಯ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದ ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳ ನಲಿಕಲಿ ಘಟಕಗಳಲ್ಲಿ ವಿದ್ಯಾ ಪ್ರವೇಶ ಮತ್ತು ಸೇತುಬಂಧ ಕಾಯಕ್ರಮದ ಜೊತೆಗೆ ಆರಂಭಿಕ ಕಲಿಕೆಯನ್ನು ಕೈಗೊಳ್ಳುವ ಮೂಲಕ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿನ ಕಲಿಕಾಂಶಗಳನ್ನು ತರಗತಿ ನಿರ್ವಹಣೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದ ಅನುಷ್ಟಾನ ಮತ್ತು ಅನುಪಾಲನೆಗೆ ಅಗತ್ಯ ಕ್ರಮಗಳನ್ನು ಸೂಚಿಸಲಾಗಿದ್ದು, ಎಲ್ಲಾ ಹಂತದ ಮೇಲುಸ್ತುವಾರಿ ಅಧಿಕಾರಿಗಳು ಮತ್ತು ಬ್ಲಾಕ್ ಹಾಗೂ ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿಗಳು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ನಿರ್ದೇಶಿಸಿದೆ. ಅ) ವಿದ್ಯಾಪ್ರವೇಶ/ಶಾಲಾ ಸಿದ್ದತಾ ಕಾರ್ಯಕ್ರಮ: 1. ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ 01ನೇ ತರಗತಿಯ ಮಕ್ಕಳಿಗೆ ಜೂನ್ 02 ರಿಂದ ಜುಲೈ 18ರವರೆಗೆ ಒಟ್ಟು 4 0 ದಿನಗಳ ವಿದ್ಯಾಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸುವುದಲ್ಲದೆ,…

Read More

ಬಾಗಲಕೋಟೆ: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ ಬಿಯರ್ ಬೆಲೆಯನ್ನು 10 ರೂ. ಹೆಚ್ಚಳ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಿರುವುದು ನಿಜ. ಆದರೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡುಗಿಂತ ದರ ಕಡಿಮೆ ಇದೆ. ಪ್ರೀಮಿಯಂ ಬ್ರಾಂಡ್ ಮದ್ಯದ ದರ ಏರಿಕೆ ಮಾಡಿಲ್ಲ. ಬಿಯರ್‌ಬೆಲೆ ಮಾತ್ರ ಬಾಟಲ್‌ಗೆ 10 ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ. ಗುಣಮಟ್ಟದ ಮದ್ಯ ಪೂರೈಸುವ ಉದ್ದೇಶದಿಂದ ಬೆಲೆ ಹೆಚ್ಚಿಸಿದ್ದೇವೆ. ಎಲ್ಲ ಸರ್ಕಾರಗಳೂ ಮದ್ಯದ ಬೆಲೆ ಏರಿಕೆ ಆಗಿದೆ. ನಮ್ಮ ಸರ್ಕಾರದಲ್ಲೂ ಸ್ವಲ್ಪ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Read More

ನವದೆಹಲಿ : ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಲವಾರು ಜನರು ಸಾಮೂಹಿಕ ಅತ್ಯಾಚಾರ ಎಸಗಿದರೆ, ಅವರೆಲ್ಲರನ್ನೂ ತಪ್ಪಿತಸ್ಥರೆಂದು ಘೋಷಿಸಲು, ಪ್ರತಿಯೊಬ್ಬ ಆರೋಪಿಯು ಸಂಪೂರ್ಣ ಅತ್ಯಾಚಾರದ ಕೃತ್ಯವನ್ನು ತಾನಾಗಿಯೇ ಮಾಡಿದ್ದಾನೆ ಎಂದು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಹೇಳುವಂತೆ, ಅತ್ಯಾಚಾರವನ್ನು ಒಬ್ಬ ವ್ಯಕ್ತಿಯೇ ಮಾಡಿದರೂ, ಇತರ ಜನರು ಸಹ ಆ ಅಪರಾಧದಲ್ಲಿ ಭಾಗಿಯಾಗಿದ್ದರೆ ಮತ್ತು ಅವರ ಉದ್ದೇಶ ಒಂದೇ ಆಗಿದ್ದರೆ, ಅವರೆಲ್ಲರೂ ಹೊಣೆಗಾರರಾಗಬೇಕು ಮತ್ತು ಸಮಾನ ಶಿಕ್ಷೆಯನ್ನು ಪಡೆಯಬೇಕು. ಆರೋಪಿಯೊಬ್ಬರ ಅರ್ಜಿಯನ್ನು ತಿರಸ್ಕರಿಸುವಾಗ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ನೀಡಿದೆ. ಸಂತ್ರಸ್ತೆ ದಾಖಲಿಸಿದ ಎಫ್‌ಐಆರ್‌ನಲ್ಲಿ ತನ್ನ ಹೆಸರು ನೇರವಾಗಿ ಉಲ್ಲೇಖಿಸಲಾಗಿಲ್ಲ ಎಂದು ಈ ಆರೋಪಿ ವಾದಿಸಿದ್ದ. ಅಪರಾಧದಲ್ಲಿ ತನ್ನ ಪಾತ್ರವು ಪ್ರಮುಖ ಆರೋಪಿಗೆ ಸಹಾಯ ಮಾಡುವುದಕ್ಕೆ ಸೀಮಿತವಾಗಿದೆ ಮತ್ತು ತಾನು ಸ್ವತಃ ಅತ್ಯಾಚಾರ ಎಸಗಿಲ್ಲ ಎಂದು ಅವನು ಹೇಳಿದನು. ಆದರೆ ಸುಪ್ರೀಂ ಕೋರ್ಟ್ ಪೀಠ (ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಕೆ.ವಿ.…

Read More

ಬೆಂಗಳೂರು : ರಾಜ್ಯ ಸರ್ಕಾರ 6 ಮಂದಿ ಡಿವೈಸ್ ಪಿ ಹಾಗೂ 27 ಪೊಲೀಸ್ ಇನ್ಸ್ ಪೆಕ್ಟರ್ ( ಸಿವಿಲ್) ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ರವರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Read More

ಬೆಂಗಳೂರು: ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಆಹಾರ ಇಲಾಖೆ ಪ್ರಗತಿ ಪರಿಶೀಲನೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಾತನಾಡಿದ ಅವರು, 2023ರ ಮಾರ್ಚ್ ಅಂತ್ಯದವರೆಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಂಡು ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಬೇಕು. ಸರ್ಕಾರದ ಅನುಮತಿ ಪಡೆದ ನಂತರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಧ್ಯ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸಿಲ್ಲ, ಅನ್ನ ಸುವಿಧಾ ಯೋಜನೆಯಲ್ಲಿ ಮನೆಗಳಿಗೆ ಆಹಾರ ಧಾನ್ಯ ತಲುಪಿಸಲು ಕ್ರಮ ಕೈಗೊಳ್ಳಲಾಗಿದ್ದು, 2 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೂ ಈ ಸೇವೆ ವಿಸ್ತರಿಸಬೇಕು ಇದರಿಂದ 3.30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದರು.

Read More

ಬಿಹಾರ : ಬಿಹಾರದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರು,ಟ್ರ್ಯಾಕ್ಟರ್‌ ಡಿಕ್ಕಿಯಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಹಾರದ ಕತಿಹಾರ್‌ ಬಳಿ ಕಾರು, ಟ್ರ್ಯಾಕ್ಟರ್‌ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More