Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ ಜಾಗರೂಕರಾಗಿರಿ! ಸಾರ್ವಜನಿಕ ಯುಎಸ್ಬಿ (USB) ಚಾರ್ಜಿಂಗ್ ಸಾಕೆಟ್ಗಳ ಮೂಲಕ ಸಾರ್ವಜನಿಕರ ವೈಯಕ್ತಿಕ ವಿವರಗಳನ್ನು ಕದಿಯುವ ಜಾಲ ಸಕ್ರಿಯವಾಗಿದ್ದು, ಈ ಕುರಿತು ರಾಜ್ಯ ಸೈಬರ್ ಪೊಲೀಸ್ ಇಲಾಖೆ ತೀವ್ರ ಎಚ್ಚರಿಕೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಯುಎಸ್ಬಿ ಪೋರ್ಟ್ಗಳಲ್ಲಿ ಹ್ಯಾಕರ್ಗಳು ಚಿಪ್ ಅಥವಾ ಸಾಫ್ಟ್ವೇರ್ ಅಳವಡಿಸಿರುತ್ತಾರೆ. ಇಲ್ಲಿಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಕನೆಕ್ಟ್ ಮಾಡಿದ ತಕ್ಷಣ, ಅದರಲ್ಲಿರುವ ಫೋಟೋ, ವಿಡಿಯೋ, ಬ್ಯಾಂಕ್ ಖಾತೆ ವಿವರಗಳು ಹಾಗೂ ಇತರೆ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ಕಳ್ಳರು ಸುಲಭವಾಗಿ ಲೂಟಿ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಈ ವಂಚನೆಗೆ ‘ಮಾಲ್ವೇರ್ ಅಪಾಯ’ ಹಾಗೂ ‘ಜ್ಯೂಸ್ ಜಾಕಿಂಗ್’ (Juice Jacking) ಎಂದು ಕರೆದಿದೆ. ಕಳ್ಳತನ ಮಾಡಿದ ಡೇಟಾ ಏನಾಗುತ್ತದೆ? ಹಣದ ಲೂಟಿ: ಫೋನ್ನಲ್ಲಿರುವ ಬ್ಯಾಂಕಿಂಗ್ ಆ್ಯಪ್ಗಳು, ಯುಪಿಐ (UPI), ಡೆಬಿಟ್/ಕ್ರೆಡಿಟ್ ಕಾರ್ಡ್ ಹಾಗೂ ಆಧಾರ್-ಪ್ಯಾನ್ ವಿವರಗಳನ್ನು ಬಳಸಿ ಆನ್ಲೈನ್ ಶಾಪಿಂಗ್…
ನವದೆಹಲಿ: ಮಹಿಳೆಯೊಬ್ಬರು ಬಟ್ಟೆ ಬಿಚ್ಚುತ್ತಿರುವ ಅಥವಾ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುವುದು ಆಕೆಯ ‘ಶೀಲಕ್ಕೆ ಮಸಿ ಬಳಿಯುವ’ ಬೆದರಿಕೆಯಾಗಿದ್ದು, ಇದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ (Criminal Intimidation) ಅಪರಾಧ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯೊಬ್ಬರ ಖಾಸಗಿ ವಿಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಎತ್ತಿಹಿಡಿದಿದೆ. ತೀರ್ಪಿನಲ್ಲಿ ನ್ಯಾಯಾಲಯ ಹೇಳಿದ್ದೇನು? ಮಹಿಳೆಯರ ಲೈಂಗಿಕತೆಯ ಬಗ್ಗೆ ಬದಲಾಗುತ್ತಿರುವ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಮಹಿಳೆಯೊಬ್ಬರು ಸ್ನಾನ ಮಾಡುವಾಗ ಆಕೆಯ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡುವುದು ಮತ್ತು ಅದನ್ನು ಡಿಜಿಟಲ್ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುವುದು ಐಪಿಸಿ ಸೆಕ್ಷನ್ 506 ರ ಭಾಗ II ರ ಅಡಿಯಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಪ್ರಯತ್ನಗಳು ಸಾಗುತ್ತಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ತಿಳಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಮಾದರಿಯ ವೇತನವನ್ನು ಜಾರಿಗೊಳಿಸಲು ಹಾಗೂ ಎನ್ಪಿಎಸ್ (NPS) ಯೋಜನೆಯನ್ನು ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ (OPS) ಯನ್ನು ಮರು ಜಾರಿಗೊಳಿಸಲು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ನೌಕರರಿಗೆ ಯಾವುದೇ ಹೋರಾಟವಿಲ್ಲದೆಯೇ 6ನೇ ಮತ್ತು 7ನೇ ವೇತನ ಆಯೋಗಗಳನ್ನು ಜಾರಿಗೊಳಿಸಿದ್ದರು. ಈ ಸರ್ಕಾರ ಇನ್ನೂ ಎರಡು ವರ್ಷ ಅಧಿಕಾರದಲ್ಲಿರಲಿದ್ದು, ಅಷ್ಟರೊಳಗೆ ಕೇಂದ್ರ ಮಾದರಿಯ ವೇತನವನ್ನು ನೌಕರರು ಪಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಹಳೇ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ…
ಮಂಗಳೂರು: ಕನ್ನಡದ ಖ್ಯಾತ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷೆಯ ‘ಪುನೀತ್ ಹೃದಯಜ್ಯೋತಿ’ ಯೋಜನೆಯನ್ನು ಶೀಘ್ರದಲ್ಲೇ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯಾದ್ಯಂತ ಒಟ್ಟು 78 ಪುನೀತ್ ಹೃದಯ ಜ್ಯೋತಿ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳಿಗೆ ಜೀವರಕ್ಷಕವಾಗಿ ಮೂಡಿಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೂರು ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಿದ್ದಾರೆ. ಈ ಕೇಂದ್ರಗಳ ಮೂಲಕ ಪ್ರಸಕ್ತ ವರ್ಷದಲ್ಲೇ ಸುಮಾರು 450 ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ತರ ಕಾರ್ಯ ನಡೆದಿದೆ. ಹಠಾತ್ ಹೃದಯಾಘಾತ ಸಂಭವಿಸಿದಾಗ ‘ಗೋಲ್ಡನ್ ಅವರ್’ (ನಿರ್ಣಾಯಕ ಅವಧಿ) ನಲ್ಲಿ ರೋಗಿಗಳಿಗೆ ತ್ವರಿತ ಚಿಕಿತ್ಸೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಡಿ ಹೃದಯಾಘಾತಕ್ಕೊಳಗಾದವರಿಗೆ ಅತ್ಯಂತ ದುಬಾರಿಯಾದ ‘ಟೆನೆಕ್ಟೆಪ್ಲೇಸ್’ (Tenecteplase) ಇಂಜೆಕ್ಷನ್ ಅನ್ನು ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಅಗತ್ಯ…
ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಇಂದು (ಮೇ 24) ಭಾನುವಾರ ಒಟ್ಟು 17 ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ನಾಳೆ ಕೂಡ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 24ರಂದು ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ ಹಾಗೂ ಗದಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಇಲ್ಲಿ ಗುಡುಗು ಮಿಂಚಿನೊಂದಿಗೆ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮೇ 25ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಕರಾವಳಿ ಭಾಗದಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಬೀಳುವ ಸಾಧ್ಯತೆಯಿದೆ.
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸಲು ಆಯೋಗವು ದಿನಾಂಕಗಳನ್ನು ನಿಗದಿಪಡಿಸಿದೆ. ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ: ಪ್ರಥಮ ಹಂತದ ಪರೀಕ್ಷೆಗಳು (ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ) ಮೊದಲ ಹಂತದ ಪರೀಕ್ಷೆಗಳು ಜುಲೈ 17, 2026 ರಿಂದ ಜುಲೈ 19, 2026 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜರುಗಲಿವೆ. ಜುಲೈ 17 (ಶುಕ್ರವಾರ): ಬೆಳಿಗ್ಗೆ 10:00 ರಿಂದ 12:00 ರವರೆಗೆ ಅಕೌಂಟ್ಸ್ ಲೋಯರ್ (01) ಹಾಗೂ ಮಧ್ಯಾಹ್ನ 2:00 ರಿಂದ 4:00 ರವರೆಗೆ ಜನರಲ್ ಲಾ ಭಾಗ-2 (08) ಪರೀಕ್ಷೆ ನಡೆಯಲಿದೆ. ಜುಲೈ 18 (ಶನಿವಾರ): ಬೆಳಿಗ್ಗೆ ಅಕೌಂಟ್ಸ್ ಹೈಯರ್ ಪತ್ರಿಕೆ-1 (22/1) ಮತ್ತು ಮಧ್ಯಾಹ್ನ ಅಕೌಂಟ್ಸ್ ಹೈಯರ್ ಪತ್ರಿಕೆ-2 (22/2) ಪರೀಕ್ಷೆಗಳು ನಡೆಯಲಿವೆ. ಜುಲೈ 19 (ಭಾನುವಾರ): ಬೆಳಿಗ್ಗೆ ಜನರಲ್ ಲಾ ಭಾಗ-1 ಪತ್ರಿಕೆ-1…
ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸುವ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗಿನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಎಲ್ಲಾ 6 ದಿನಗಳೂ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ (ಪಿ.ಎಂ. ಪೋಷಣ್) ಕಡ್ಡಾಯ ಆದೇಶ ಹೊರಡಿಸಿದೆ. ಅಜೀಂ ಪ್ರೇಮ್ಜೀ ಫೌಂಡೇಶನ್ (APF) ಸಂಸ್ಥೆಯ ಆರ್ಥಿಕ ಅನುದಾನದ ನೆರವಿನೊಂದಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಲಾಗುತ್ತಿದ್ದು, ಸದ್ಯ ಜಿಲ್ಲಾ ಮಟ್ಟದಲ್ಲಿ ಶೇ. 50 ರಿಂದ 60 ರಷ್ಟಿರುವ ವಿತರಣೆಯ ಪ್ರಮಾಣವನ್ನು ಪ್ರಸಕ್ತ ಸಾಲಿನಲ್ಲಿ ಶೇ. 90 ಕ್ಕೆ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಮುಖ ಮಾರ್ಗಸೂಚಿಗಳು ಮತ್ತು ನಿಯಮಗಳು: 6 ದಿನಗಳೂ ಕಡ್ಡಾಯ ವಿತರಣೆ: ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನದ ಉತ್ತರದ ಜೊತೆಗೆ ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ…
ಬೆಂಗಳೂರು : ಕರ್ನಾಟಕದ ಪಶುಸಂಗೋಪನಾ ಕ್ಷೇತ್ರದಲ್ಲಿ ಇದೀಗ ಬಿಗ್ ಡಿಜಿಟಲ್ ಕ್ರಾಂತಿಯೊಂದು ಆರಂಭವಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ, ರೈತರ ಆಸ್ತಿಯಾಗಿರುವ ಜಾನುವಾರುಗಳಿಗೆ ಆಧಾರ್ ಮಾದರಿಯ ವಿಶಿಷ್ಟ ಬಯೋಮೆಟ್ರಿಕ್ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ ಅಂತಿಮ ಸಿದ್ಧತೆ ನಡೆಸಿದೆ. ಇನ್ನು ಮುಂದೆ ಮೂಕ ಪ್ರಾಣಿಗಳಿಗೂ ಡಿಜಿಟಲ್ ಐಡೆಂಟಿಟಿ ಸಿಗಲಿದ್ದು, ಇದು ಪಶುಸಂಗೋಪನಾ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಕಿವಿ ಚುಚ್ಚುವ ಪದ್ಧತಿಗೆ ಬ್ರೇಕ್: ಮೂಗಿನ ಗುರುತೇ ಇನ್ಮೇಲೆ ಬಯೋಮೆಟ್ರಿಕ್! ಇದುವರೆಗೆ ಜಾನುವಾರುಗಳನ್ನು ಗುರುತಿಸಲು ಅವುಗಳ ಕಿವಿ ಚುಚ್ಚಿ ಪ್ಲಾಸ್ಟಿಕ್ ಟ್ಯಾಗ್ ಹಾಕಲಾಗುತ್ತಿತ್ತು. ಆದರೆ ಈ ಹಳೇ ಪದ್ಧತಿಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ಮನುಷ್ಯರ ಬೆರಳಚ್ಚು (Fingertips) ಹೇಗೆ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆಯೋ, ಅದೇ ರೀತಿ ಪ್ರತಿ ಜಾನುವಾರಿನ ಮೂಗಿನ ಮೇಲಿನ ರೇಖೆಗಳು ಮತ್ತು ಮಡಿಕೆಗಳು (Muzzle Prints) ಕೂಡ ವಿಭಿನ್ನವಾಗಿರುತ್ತವೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಹಸು, ಎಮ್ಮೆ ಹಾಗೂ ಕರುಗಳ ಮೂಗಿನ ಭಾಗವನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಐಡಿ ಸೃಷ್ಟಿಸಲಾಗುತ್ತದೆ. AI…
ಮನೆಯಲ್ಲಿ ಕರೆಂಟ್ ಬಿಲ್ ಕೈ ಸುಡುತ್ತಿದೆ ಎಂದು ಅನೇಕರು ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ವಿದ್ಯುತ್ ಬಿಲ್ ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಹಲವರಿಗೆ ತಿಳಿಯುವುದೇ ಇಲ್ಲ. ಮನೆಯಲ್ಲಿ ಬಳಸುವ ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಆಫ್ನಲ್ಲಿದ್ದರೂ ಸಹ ವಿದ್ಯುತ್ ಅನ್ನು ಬಳಸಿಕೊಳ್ಳುತ್ತಿರುತ್ತವೆ. ಟಿವಿ, ಚಾರ್ಜರ್ಗಳಂತಹ ಸಾಧನಗಳು ‘ಸ್ಟ್ಯಾಂಡ್ಬೈ ಮೋಡ್’ನಲ್ಲಿ (Standby Mode) ಇದ್ದಾಗಲೂ ಕರೆಂಟ್ ಹೀರುತ್ತಿರುತ್ತವೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಮನೆಯಲ್ಲಿರುವ 6 ಪ್ರಮುಖ ಗ್ಯಾಜೆಟ್ಗಳು ಸ್ಟ್ಯಾಂಡ್ಬೈ ಮೋಡ್ನಲ್ಲಿದ್ದಾಗ ಅತಿ ಹೆಚ್ಚು ವಿದ್ಯುತ್ ವ್ಯಯಿಸುತ್ತವೆ ಎಂದು ತಿಳಿದುಬಂದಿದೆ. ಹಾಗಾದರೆ ಆ ತಪ್ಪುಗಳೇನು? ಬಿಲ್ ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ. 1. ಟಿವಿ (TV) ಸಾಮಾನ್ಯವಾಗಿ ಎಲ್ಲರೂ ಟಿವಿಯನ್ನು ರಿಮೋಟ್ ಮೂಲಕ ಆಫ್ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಟಿವಿ ಸಂಪೂರ್ಣವಾಗಿ ಆಫ್ ಆಗದೆ ಸ್ಟ್ಯಾಂಡ್ಬೈ ಮೋಡ್ಗೆ ಹೋಗುತ್ತದೆ. ಈ ಸಮಯದಲ್ಲಿ ಸ್ಕ್ರೀನ್ ಆಫ್ ಆಗಿದ್ದರೂ ಸಹ, ಒಳಗಿನ ಸರ್ಕ್ಯೂಟ್ಗಳು ವಿದ್ಯುತ್ ಅನ್ನು ಬಳಸುತ್ತಲೇ ಇರುತ್ತವೆ. ಆದ್ದರಿಂದ…
ಬೆಂಗಳೂರು : ಕರ್ನಾಟಕದ ಮಾಜಿ ವಿಧಾನಸಭಾ ಹಾಗೂ ವಿಧಾನಪರಿಷತ್ ಸದಸ್ಯರಿಗೆ (ಮಾಜಿ ಶಾಸಕರಿಗೆ) ಸರ್ಕಾರದಿಂದ ನೀಡಲಾಗುವ ಪಿಂಚಣಿ, ಪ್ರಯಾಣ ಮತ್ತು ವೈದ್ಯಕೀಯ ಸೌಲಭ್ಯಗಳ ಸಂಪೂರ್ಣ ಅಧಿಕೃತ ಮಾಹಿತಿ ಇಲ್ಲಿದೆ. 1. ಪಿಂಚಣಿ ಸೌಲಭ್ಯ (Pension Benefits) ಮೂಲ ಪಿಂಚಣಿ: ವಿಧಾನಸಭಾ ಅಥವಾ ವಿಧಾನಪರಿಷತ್ ಸದಸ್ಯರಾಗಿ ೫ ವರ್ಷಗಳ ಕಾಲ (ಅಥವಾ ಭಾಗಶಃ ಅವಧಿಗೆ) ಸೇವೆ ಸಲ್ಲಿಸಿದ ಯಾವುದೇ ವ್ಯಕ್ತಿ ತನ್ನ ಜೀವಿತಾವಧಿಯವರೆಗೆ ಪ್ರತಿ ತಿಂಗಳು ₹೭೫,೦೦೦ (ಎಪ್ಪತ್ತೈದು ಸಾವಿರ ರೂಪಾಯಿ) ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚುವರಿ ಪಿಂಚಣಿ: ೫ ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದರೆ, ನಂತರದ ಪ್ರತಿ ಪೂರ್ಣಗೊಂಡ ಅಥವಾ ಭಾಗಶಃ ವರ್ಷಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ₹೨೦,೦೦೦ (ಇಪ್ಪತ್ತು ಸಾವಿರ ರೂಪಾಯಿ) ಪಿಂಚಣಿ ನೀಡಲಾಗುತ್ತದೆ. ವಿಶೇಷ ವಿನಾಯಿತಿಗಳು: * ಮೊದಲ ಬಾರಿಗೆ ಚುನಾಯಿತರಾದ ವ್ಯಕ್ತಿ, ವಿಧಾನಸಭೆ ವಿಸರ್ಜನೆಯಾದ ಕಾರಣದಿಂದ ೫ ವರ್ಷಗಳ ಅವಧಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಪೂರ್ಣ ಪಿಂಚಣಿಗೆ ಅರ್ಹರಾಗುತ್ತಾರೆ. ಉಪಚುನಾವಣೆಯಲ್ಲಿ ಆಯ್ಕೆಯಾದವರು ಅಥವಾ ಅವಧಿಯ ಮಧ್ಯದಲ್ಲಿ ನಾಮನಿರ್ದೇಶನಗೊಂಡು,…














