Author: kannadanewsnow57

ಕಾಬೂಲ್ : ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 9 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಮಾಹಿತಿ ನೀಡಿದೆ. ಪಾಕಿಸ್ತಾನ ಮತ್ತೆ ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದೆ. ಅಫ್ಘಾನ್ ವಕ್ತಾರ ಜಬಿಹುಲ್ಲಾ ಈ ಮಾಹಿತಿಯನ್ನು ನೀಡಿದ್ದಾರೆ. ಖೋಸ್ಟ್ನಲ್ಲಿ 9 ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಕುನಾರ್-ಪಕ್ತಿಕಾದಲ್ಲಿಯೂ ವೈಮಾನಿಕ ದಾಳಿ ನಡೆಸಲಾಗಿದ್ದು, ಅಲ್ಲಿ ಹಾನಿ ಸಂಭವಿಸಿದೆ. ಸೋಮವಾರ ರಾತ್ರಿ 12:00 ಗಂಟೆಗೆ ನಾಗರಿಕ ಪ್ರದೇಶದಲ್ಲಿ ಈ ವೈಮಾನಿಕ ದಾಳಿ ನಡೆದಿದೆ. ಖೋಸ್ಟ್ ಪ್ರಾಂತ್ಯದ ಗಾರ್ಬ್ಜೋ ಜಿಲ್ಲೆಯ ಮಗಲ್ಗೈ ಪ್ರದೇಶದಲ್ಲಿ, ಪಾಕಿಸ್ತಾನಿ ಸೇನೆಯು ಸ್ಥಳೀಯ ನಾಗರಿಕರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿ, ಒಬ್ಬ ಮಹಿಳೆ, 5 ಹುಡುಗರು, 4 ಹುಡುಗಿಯರು ಸಾವನ್ನಪ್ಪಿದರು ಮತ್ತು ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದರು. ಘಟನೆಯಲ್ಲಿ ನಾಲ್ವರು ನಾಗರಿಕರು ಸಹ ಗಾಯಗೊಂಡಿದ್ದಾರೆ.

Read More

ನವದೆಹಲಿ : ಇಥಿಯೋಪಿಯಾದ ಹೈಲೆ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಸುಮಾರು 10,000 ವರ್ಷಗಳ ನಂತರ ಅದು ಸ್ಫೋಟಗೊಂಡಿದೆ. ಪರಿಣಾಮವಾಗಿ ಬೂದಿ ಮೋಡಗಳು ಭಾರತದ ಕಡೆಗೆ ಚಲಿಸುತ್ತಿವೆ. ಈ ಬೂದಿ ಮೋಡಗಳು ಉತ್ತರ ರಾಜ್ಯಗಳ ಮೇಲೆ ಪರಿಣಾಮ ಬೀರಲಿವೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಇದರ ಪರಿಣಾಮಗಳು ಕಂಡುಬಂದವು. ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದಟ್ಟವಾದ ಬೂದಿ ದೆಹಲಿ ಆಕಾಶವನ್ನು ತಲುಪಬಹುದು ಎಂದು ಹವಾಮಾನಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ಈ ಪರಿಣಾಮದಿಂದಾಗಿ ದೆಹಲಿಯ ವಾಯುಮಾಲಿನ್ಯವು ಹೆಚ್ಚು ವಿಷಕಾರಿಯಾಗಬಹುದು ಎಂಬ ಭಯವಿದೆ. ಹೈಲೆ ಗುಬ್ಬಿ ಜ್ವಾಲಾಮುಖಿಯ ಸ್ಫೋಟದ ಬಗ್ಗೆ ಮಾಹಿತಿ ಬೆಳಕಿಗೆ ಬಂದಾಗಿನಿಂದ, ಜನರು ಅದರ ಮೇಲೆ ನಿಗಾ ಇಡುತ್ತಿದ್ದಾರೆ. ಸ್ಫೋಟದ ನಂತರ ಬೂದಿ ಮೋಡಗಳ ಚಲನವಲನಗಳನ್ನು ಪತ್ತೆಹಚ್ಚಲಾಗುತ್ತಿದೆ. ಬೂದಿ ಮೋಡಗಳು ಕೆಂಪು ಸಮುದ್ರದ ಮೇಲೆ ಸುಮಾರು 130 ಕಿ.ಮೀ ವೇಗದಲ್ಲಿ ಇಥಿಯೋಪಿಯಾದ ವಾಯುವ್ಯ ಕಡೆಗೆ ಚಲಿಸುತ್ತಿವೆ. ಭಾರತವು ಆ ದಿಕ್ಕಿನಲ್ಲಿದೆ. ಈ ಸ್ಫೋಟವು ಗಂಟೆಗೆ 10-15 ಕಿ.ಮೀ ಎತ್ತರದವರೆಗೆ ಗಾಳಿಯಲ್ಲಿ ಬೃಹತ್ ಬೂದಿ ಮೋಡವನ್ನು…

Read More

ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ದೇವರಿಗೆ ಬಿಟ್ಟ ಗೋವಿನ ಕಾಲು ಕಡಿದು ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದು ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ. ಮಾತರಂಗಿ ಗ್ರಾಮದ ಮಹಂತೇಶ್ವರ ದೇವರಿಗೆ ಬಿಡಲಾಗಿದ್ದ ಗೋವಿನ ಕಾಲುಗಳನ್ನು ಕಡಿದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿ ಗೋವು ಮೇಯಲು ಹೋಗಿತ್ತು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಕೊಡಲಿಯಿಂದ ಕಡಿದಿದ್ದಾರೆ. ಜಮೀನ ಮಾಲೀಕ ರಮೇಶ್ ಎಂಬಾತಾನೆ ಕಾಲು ಕಡಿದಿದ್ದಾನೆ ಎಂದು ಆರೋಪಿಸಲಾಗಿದೆ.

Read More

ಹುಬ್ಬಳ್ಳಿ : ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಂಗಳೂರಿನಲ್ಲಿ ಆರ್ ಬಿಐ ಹೆಸರಿನಲ್ಲಿ ದರೋಡೆ ನಡೆದಿದ್ದರೆ. ಇತ್ತ ಹುಬ್ಬಳ್ಳಿಯಲ್ಲಿ ಇಡಿ ಹೆಸರಿನಲ್ಲಿ ದರೋಡೆ ನಡೆದಿದೆ. ಹೌದು, ಹುಬ್ಬಳ್ಳಿಯಲ್ಲಿ ಇಡಿ ಅಧಿಕಾರಿಗಳು ಎಂದು ಬೆದರಿಸಿ ಚಿನ್ನಾಭರಣ ದೋಚಲಾಗಿದೆ. ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ ಲೂಟಿ ಮಾಡಲಾಗಿದೆ. ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ ಮಾಡಲಾಗಿದೆ. ಕೇರಳದ ವ್ಯಾಪಾರಿ ಎಂ.ಆರ್. ಸುಧೀನ್ ಎಂಬುವರಿಗೆ ವಂಚಿಸಲಾಗಿದೆ. ನವೆಂಬರ್ 20 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Read More

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ದಾವಣಗೆರೆ ಸೇರಿದಂತೆ ಹಲವು ಕಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದಾವಣಗೆರೆಯಲ್ಲಿ ಎಪಿಎಂಸಿ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಪಿಎಂಸಿ ಕೃಷಿ ಮಾರಾಟ ವಿಭಾಗದ ಸಹಾಯಕ ನಿರ್ದೇಶಕ ಜೆ. ಪ್ರಭು ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿರುವ ಪ್ರಭು ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

Read More

ಬೆಂಗಳೂರು : ಅಪಘಾತ ಕೇಸ್ ಗಳಲ್ಲಿ ಸರ್ಕಾರ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಿದೆ ಎಂಬ ಕಾರಣಕ್ಕೆ ವಿಮಾ ಕಂಪನಿಗಳು ಪರಿಹಾರ ಮೊತ್ತದಲ್ಲಿ ಕಡಿತ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2013ರ ಏ.9ರಂದು ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಪೆರ್ನೆ ಬಳಿ ಸಂಭವಿಸಿದ್ದ ಎಲ್ ಪಿಜಿ ಟ್ಯಾಂಕರ್ ಸ್ಪೋಟದಲ್ಲಿ ಮೃತಪಟ್ಟಿದ್ದ 13 ಮಂದಿಯ ಕುಟುಂಬಗಳಿಗೆ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದ್ದು, ಆ ಮೊತ್ತವನ್ನು ಅಪಘಾತ ವಿಮೆಯಲ್ಲಿ ಕಡಿತಗೊಳಿಸಬೇಕು ಎಂದು ಕೋರಿ ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಶ್ರೀಸುಧಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದ್ದು,ಸರ್ಕಾರ ನೀಡಿರುವ ಪರಿಹಾರ ಸಂತ್ರಸ್ತ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯಾಗಿದೆ. ಅದಕ್ಕೂ ವಿಮೆ ಪರಿಹಾರಕ್ಕೂ ಸಂಬಂಧ ಇಲ್ಲ ಎಂದು ತೀರ್ಪು ನೀಡಿದೆ. ಅಪಘಾತದ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಉಂಟಾಗಿದೆ ಎಂದಿರುವ ಕೋರ್ಟ್, ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರ ನೀಡಲು ಆದೇಶಿಸಿದ್ದ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ಪಾಲಿಸುವಂತೆ ವಿಮಾ ಕಂಪನಿಗೆ…

Read More

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ AI ಚಾಟ್‌ಬಾಟ್‌’ಗಳ ಬಳಕೆ ತುಂಬಾ ಹೆಚ್ಚಾಗಿದ್ದು, ಬಹುತೇಕ ಎಲ್ಲರೂ ತಮ್ಮ ಜೀವನದಲ್ಲಿ ವಿವಿಧ ಅಗತ್ಯಗಳಿಗಾಗಿ AI ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಇವು ಅವರಿಗೆ ಅಗತ್ಯವಿರುವ ಉತ್ತರಗಳನ್ನ ನೀಡುವ ಮೂಲಕ ಅವರ ಕೆಲಸವನ್ನ ಸುಲಭಗೊಳಿಸುತ್ತಿವೆ. ಹೊಸ ಮಾಹಿತಿಯನ್ನ ಒದಗಿಸುತ್ತಿದೆ. ಆದ್ರೆ, ಈ ಚಾಟ್‌ಬಾಟ್‌’ಗಳಿಗೆ ಕೆಲವು ರೀತಿಯ ಪ್ರಶ್ನೆಗಳನ್ನು ಕೇಳುವುದು ಅಪರಾಧ ಎಂದು ನಿಮಗೆ ತಿಳಿದಿದೆಯೇ? ಅಲ್ಲದೆ, ನೀವು AI ಚಾಟ್‌ಬಾಟ್‌ಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಕಾನೂನು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಅನೇಕ ದೇಶಗಳಲ್ಲಿ ಸೈಬರ್ ಕಾನೂನು ಅರಿವು ತುಂಬಾ ಕಟ್ಟುನಿಟ್ಟಾಗಿದೆ. ತಪ್ಪು ಪ್ರಶ್ನೆಗಳನ್ನು ಅಥವಾ ತಪ್ಪು ಮಾಹಿತಿಯನ್ನ ಕೇಳುವುದನ್ನ ಸಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಒಂದು ಸಣ್ಣ ತಪ್ಪು ಪ್ರಶ್ನೆ ಕೂಡ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಅಕ್ರಮ ಮಾಹಿತಿ ಅಪರಾಧವೇ.? ಅನೇಕ ಜನರು ಚಾಟ್‌ಬಾಟ್‌’ಗಳನ್ನು ವಿನೋದ ಅಥವಾ ಕುತೂಹಲಕ್ಕಾಗಿ ಕಾನೂನಿಗೆ ವಿರುದ್ಧವಾದ ಮಾಹಿತಿಯನ್ನು (AI ದುರುಪಯೋಗ) ಕೇಳುತ್ತಾರೆ. ಉದಾಹರಣೆಗೆ, ಅವರು ಶಸ್ತ್ರಾಸ್ತ್ರಗಳನ್ನ ತಯಾರಿಸುವುದು, ಬ್ಯಾಂಕಿಂಗ್…

Read More

ಅಯೋಧ್ಯೆ : ಇಂದು ಅಯೋಧ್ಯೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ರಾಮ ಮಂದಿರವು ಭವ್ಯ ಧ್ವಜಾರೋಹಣ ಸಮಾರಂಭಕ್ಕೆ ಸಿದ್ಧವಾಗುತ್ತಿದೆ. ಈ ಕಾರ್ಯಕ್ರಮವು ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇವಾಲಯ ಪಟ್ಟಣಕ್ಕೆ ಭೇಟಿ ನೀಡಲಿದ್ದು, ಗರ್ಭಗುಡಿಯ ಮೇಲೆ ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ. ಸಮಾರಂಭಕ್ಕೂ ಮುನ್ನವೇ ದೇಶಾದ್ಯಂತದ ಭಕ್ತರು ಅಯೋಧ್ಯೆಗೆ ಆಗಮಿಸಲು ಪ್ರಾರಂಭಿಸಿದ್ದಾರೆ. ದೇಶಾದ್ಯಂತದ ಭಕ್ತರು ನಗರವನ್ನು ತಲುಪಿದ್ದಾರೆ, ದೇವಾಲಯದ ಆವರಣದ ಸುತ್ತಲೂ 100 ಕೆಜಿ ಹೂವುಗಳನ್ನು ಒಳಗೊಂಡಂತೆ ವ್ಯಾಪಕವಾಗಿ ಅಲಂಕರಿಸಲಾಗಿದೆ. ಶಿಖರದ ಮೇಲೆ ಸ್ಥಾಪಿಸಲಾದ 42 ಅಡಿ ಎತ್ತರದ ಧ್ವಜಸ್ತಂಭವನ್ನು 360 ಡಿಗ್ರಿ ತಿರುಗುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವಜವು ಕೇಸರಿ ಬಣ್ಣ ಹಾಗೂ ತ್ರಿಕೋನಾಕೃತಿಯಲ್ಲಿದೆ. 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದರ ಮೇಲೆ ಸೂರ್ಯ, ‘ಓಂ’ ಹಾಗೂ ಕೋವಿದಾರ ಮರವನ್ನು ಚಿತ್ರಿಸಲಾಗಿದೆ. ಸೂರ್ಯನ ಚಿತ್ರ ರಾಮನ ವಂಶವಾದ ಸೂರ್ಯವಂಶವನ್ನು ಸೂಚಿಸುತ್ತದೆ. ‘ಓಂ’ ಶುಭಸೂಚಕವಾಗಿದ್ದು, ಕೋವಿದಾರ ಮರವು ಅಯೋ ಧೈಯ ಪ್ರಾಚೀನ…

Read More

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ, ಹೊರಗಿನ ಆಹಾರವನ್ನ ತಿನ್ನುವವರ ಸಂಖ್ಯೆ ಅಗಾಧವಾಗಿ ಹೆಚ್ಚಾಗಿದೆ. ಅವರಿಗೆ ಸ್ವಲ್ಪ ಸಮಯ ಸಿಕ್ಕಾಗಲೆಲ್ಲಾ ಅವರು ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಹೊರಗೆ ಹೋಗಿ ಫಾಸ್ಟ್ ಫುಡ್ ತೆಗೆದುಕೊಳ್ಳುತ್ತಾರೆ. ಕೆಲವರು ಹೊರಗೆ ತಿನ್ನುತ್ತಾರೆ, ಇನ್ನು ಕೆಲವರು ಮನೆಯಲ್ಲಿ ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದಾಗ್ಯೂ, ಫಾಸ್ಟ್ ಫುಡ್, ವಿಶೇಷವಾಗಿ ಫ್ರೈಡ್ ರೈಸ್ ವಾರಕ್ಕೆ ಎರಡು ಅಥವಾ ಮೂರು ಬಾರಿ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅವು ಈಗ ಏನೆಂದು ನೋಡೋಣ. ಫ್ರೈಡ್ ರೈಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಬೇಯಿಸಿ, ಮತ್ತೆ ಬಿಸಿ ಮಾಡಿ, ಹುರಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಇದು ಎದೆಯುರಿ, ಅಜೀರ್ಣ, ಗ್ಯಾಸ್, ಉಬ್ಬುವುದು ಮುಂತಾದ ಹೊಟ್ಟೆ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದೇ ರೀತಿ, ಫ್ರೈಡ್ ರೈಸ್‌ನಲ್ಲಿ ಬಳಸುವ ಎಣ್ಣೆಯನ್ನ ಮತ್ತೆ ಮತ್ತೆ ಬಳಸಲಾಗುತ್ತದೆ. ಅದರ ಹೊರತಾಗಿ, ಮಸಾಲೆಗಳು ಮತ್ತು ಹೆಚ್ಚುವರಿ ಎಣ್ಣೆ. ಬಳಸಿದ ಎಣ್ಣೆಯಲ್ಲಿರುವ ಟ್ರಾನ್ಸ್ ಕೊಬ್ಬುಗಳು…

Read More

ರಾಜ್ಯ ಸರಕಾರಿ ನೌಕರರಿಗೆ ಕರ್ನಾಟಕ ಸರಕಾರದ ವಿಮಾ ಇಲಾಖೆಯಲ್ಲಿ ವಿಮೆ ಹೊಂದಿರುವ ವಿಮೆದಾರರಿಗೆ ಅಂದರೆ ದಿನಾಂಕ:1-4-2022 ರಿಂದ 31-3-2024 ರ ಅವಧಿಯಲ್ಲಿ ಚಾಲ್ತಿಯಲ್ಲಿರುವ, ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ರೂ.1000 ಗಳಿಗೆ ರೂ.80 ರಂತೆ ಲಾಭಾಂಶ (ಬೊನಸ್) ನೀಡಲಾಗುತ್ತಿದ್ದು, ಬರುವ ಡಿಸೆಂಬರ್ 15 ರೊಳಗೆ ನೇರವಾಗಿ ವಿಮೆದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ.ಕಠಾರೆ ಅವರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ನಿಯಮಾನುಸಾರ ವಿಮೆದಾರರಿಗೆ ಬೋನಸ್ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಜರುಗಿದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಜಿಐಡಿ ಸಿಬ್ಬಂದಿಗಳನ್ನು ನೇಮಿಸಿದ್ದರಿಂದ ವಿಳಂಬವಾಗಿದ್ದು, ಈಗ ಪ್ರತಿ ದಿನ ಹಂತ ಹಂತವಾಗಿ ಖಜಾನೆ ಮೂಲಕ ವಿಮೆದಾರರಿಗೆ ಬೋನಸ್ ಜಮೆ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಜಿಲ್ಲೆಯ ವಿಮಾದಾರ 2,243 ಸರಕಾರಿ ನೌಕರರ ಪೈಕಿ ಸುಮಾರು 600 ಜನರ ಖಾತೆಗೆ ಬೋನಸ್ ಪಾವತಿ…

Read More