Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (II PUC Exam-2) ಫಲಿತಾಂಶವು ಅಧಿಕೃತವಾಗಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಫಲಿತಾಂಶ ವೀಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್ಲೈನ್ ಮೂಲಕ ಪರಿಶೀಲಿಸಿಕೊಳ್ಳಬಹುದು. ಫಲಿತಾಂಶ ವೀಕ್ಷಿಸುವುದು ಹೇಗೆ? ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಸಂಯೋಜನೆಯನ್ನು (Subject Combination/ Stream) ನಮೂದಿಸಿ ಫಲಿತಾಂಶವನ್ನು ಪಡೆಯಬಹುದು. ಅಧಿಕೃತ ವೆಬ್ಸೈಟ್ಗಳ ಲಿಂಕ್ಗಳು: https://karresults.nic.in https://dpue-exam.karnataka.gov.in/… ವೆಬ್ಸೈಟ್ಗಳು ಮಾತ್ರವಲ್ಲದೆ, ಅಭ್ಯರ್ಥಿಗಳು ಮೊಬೈಲ್ನಲ್ಲಿ ‘ಕರ್ನಾಟಕ ಒನ್’ (Karnataka One) ಆಪ್ಲಿಕೇಶನ್ ಬಳಸಿಕೊಂಡು ಕೂಡ ಅತ್ಯಂತ ಸುಲಭವಾಗಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (II PUC Exam-2) ಫಲಿತಾಂಶವು ಇಂದು, ಮೇ 21ರಂದು ಮಧ್ಯಾಹ್ನ 1:00 ಗಂಟೆಗೆ ಅಧಿಕೃತವಾಗಿ ವೆಬ್ಸೈಟ್ನಲ್ಲಿ ಪ್ರಕಟಗೊಳ್ಳಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಫಲಿತಾಂಶ ವೀಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಮಧ್ಯಾಹ್ನ 1:00 ಗಂಟೆಯ ನಂತರ ತಮ್ಮ ಫಲಿತಾಂಶವನ್ನು ಆನ್ಲೈನ್ ಮೂಲಕ ಪರಿಶೀಲಿಸಿಕೊಳ್ಳಬಹುದು. ಫಲಿತಾಂಶ ವೀಕ್ಷಿಸುವುದು ಹೇಗೆ? ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಸಂಯೋಜನೆಯನ್ನು (Subject Combination/ Stream) ನಮೂದಿಸಿ ಫಲಿತಾಂಶವನ್ನು ಪಡೆಯಬಹುದು. ಅಧಿಕೃತ ವೆಬ್ಸೈಟ್ಗಳ ಲಿಂಕ್ಗಳು: https://karresults.nic.in https://dpue-exam.karnataka.gov.in/… ಗಮನಿಸಿ: ವೆಬ್ಸೈಟ್ಗಳು ಮಾತ್ರವಲ್ಲದೆ, ಅಭ್ಯರ್ಥಿಗಳು ಮೊಬೈಲ್ನಲ್ಲಿ ‘ಕರ್ನಾಟಕ ಒನ್’ (Karnataka One) ಆಪ್ಲಿಕೇಶನ್ ಬಳಸಿಕೊಂಡು ಕೂಡ ಅತ್ಯಂತ ಸುಲಭವಾಗಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ
ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು ಜಾರಿಗೊಳಿಸಿದೆ. ಕೆಳಕಂಡ ವಿಕಲಚೇತನತೆ ಉಳ್ಳವರು, ವಿಕಲಚೇತನತೆಯೊಂದಿಗೆ ಹುಟ್ಟಿದ ಮಗು ಹಾಗೂ ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನ ಯೋಜನೆಗೆ ಅರ್ಹರಾಗಿರುತ್ತಾರೆ. ಮಾಸಾಶನ ಪಡೆಯಲು ಇರಬೇಕಾದ ಅರ್ಹತೆಗಳು: ಆದಾಯ ಮಿತಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯವು ರೂ. 32,000/- ಕ್ಕಿಂತ ಕಡಿಮೆ ಇರಬೇಕು. ವಿಕಲಚೇತನತೆಯ ಪ್ರಮಾಣ: ವಿಕಲಚೇತನ ವ್ಯಕ್ತಿಗಳ ಕಾಯ್ದೆ 1995ರ ಪ್ರಕಾರ, ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ವಿಕಲಚೇತನತೆಯು ಶೇಕಡಾ 40 ಕ್ಕಿಂತ ಕಡಿಮೆ ಇರಬಾರದು. ಯೋಜನೆಯಡಿ ಬರುವ ವಿಕಲಚೇತನತೆಯ ವಿಧಗಳು: ಅಂಧತ್ವ ಮಂದದೃಷ್ಟಿ ಕುಷ್ಠರೋಗ ನಿವಾರಿತರು ಶ್ರವಣದೋಷವುಳ್ಳವರು ಚಲನವಲನ ಅಂಗವಿಕಲತೆ ಬುದ್ಧಿಮಾಂದ್ಯತೆ ಮಾನಸಿಕ ಅಸ್ವಸ್ಥತೆ ಮಾಸಿಕ ಪಿಂಚಣಿ ಮೊತ್ತದ ವಿವರ: ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ: ಕ್ರ.ಸಂ ವಿಕಲಚೇತನತೆಯ ಪ್ರಮಾಣ / ವಿವರ…
ನವದೆಹಲಿ: “ದುಡ್ಡಿಲ್ಲ ಎಂಬ ಕಾರಣಕ್ಕೆ ಬಡವರಿಗೆ ಚಿಕಿತ್ಸೆ ಸಿಗದೇ ಇರಬಾರದು. ಸಾಮಾನ್ಯ ಜನರ ಆರೋಗ್ಯದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಖಾಸಗಿ ಆಸ್ಪತ್ರೆಗಳ ವಿರುದ್ಧ ಗುಡುಗಿದೆ. ಸರ್ಕಾರದಿಂದ ಕಡಿಮೆ ಬೆಲೆಗೆ ಜಾಗ (ಭೂಮಿ) ಪಡೆದುಕೊಂಡು, ಈಗ ಬಡವರಿಗೆ ಉಚಿತ ಸೇವೆ ನೀಡಲು ಹಿಂದೇಟು ಹಾಕುತ್ತಿರುವ ಆಸ್ಪತ್ರೆಗಳ ಆಡಳಿತ ಮಂಡಳಿಗೆ ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದೆ. ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಉಚಿತ ಚಿಕಿತ್ಸೆಯ ನಿಯಮಗಳೇನು? ನ್ಯಾಯಾಲಯದ ಆದೇಶದ ಪ್ರಕಾರ, ಸರ್ಕಾರದ ಸಬ್ಸಿಡಿ ದರದಲ್ಲಿ ಜಾಗ ಪಡೆದ ಎಲ್ಲಾ ಕಾರ್ಪೊರೇಟ್ ಮತ್ತು ಖಾಸಗಿ ಆಸ್ಪತ್ರೆಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು: 25% ಒಪಿಡಿ ಉಚಿತ: ಹೊರರೋಗಿ ವಿಭಾಗಕ್ಕೆ (OPD) ಬರುವ ಶೇ. 25 ರಷ್ಟು ಬಡ ರೋಗಿಗಳಿಗೆ ಸಂಪೂರ್ಣ ಉಚಿತ ತಪಾಸಣೆ ನಡೆಸಬೇಕು. 10% ಬೆಡ್ಗಳು ಮೀಸಲು: ಒಳರೋಗಿ ವಿಭಾಗದಲ್ಲಿ (IPD) ಶೇ.…
ಶಾಲಾ ಪ್ರಾರಂಭೋತ್ಸವವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಮಕ್ಕಳಿಗೆ ಸದಾ ನೆನಪಿನಲ್ಲಿ ಉಳಿಯುವಂತೆ ಹಾಗೂ ಅವರು ಅತ್ಯಂತ ಸಂತೋಷದಿಂದ ಶಾಲೆಗೆ ಬರುವಂತೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತರ ಕಚೇರಿಯು ಕೆಲವು ವಿನೂತನ ಮತ್ತು ಆಕರ್ಷಕ ಸಲಹಾತ್ಮಕ ಚಟುವಟಿಕೆಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬದಲಾಗುತ್ತಿರುವ ಶೈಕ್ಷಣಿಕ ವಾತಾವರಣಕ್ಕೆ ತಕ್ಕಂತೆ ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಐದು ಪ್ರಮುಖ ವಿಭಾಗಗಳ ಅಡಿಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ. 1. ವಿಶೇಷ ಪ್ರವೇಶ ಮತ್ತು ವಿಶಿಷ್ಟ ಸ್ವಾಗತ (Grand & Creative Welcome) ಡಿಜಿಟಲ್ ಸೆಲ್ಫಿ ಬೂತ್: ಶಾಲೆಯ ಮುಖ್ಯ ದ್ವಾರದಲ್ಲಿ ಕೆಂಪು ಹಾಸು (Red Carpet) ಹಾಕಿ, ಕಾರ್ಟೂನ್ ಪಾತ್ರಗಳ ವೇಷ ಧರಿಸಿದ ಶಿಕ್ಷಕರಿಂದ ಮಕ್ಕಳನ್ನು ಸ್ವಾಗತಿಸುವುದು. ಜೊತೆಗೆ ‘ನನ್ನ ಮೊದಲ ದಿನ’ ಎಂಬ ಥೀಮ್ ಉಳ್ಳ ಸೆಲ್ಫಿ ಬೂತ್ ನಿರ್ಮಿಸಿ ಪೋಷಕರೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವುದು. ಹೂವಿನ ಮಳೆಯಿಂದ ಸ್ವಾಗತ: ಮಕ್ಕಳು ಗೇಟ್ ಒಳಗಡೆ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಯಲ್ಲಿನ ದತ್ತಾಂಶದ ನಿಖರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಸಕ್ರಿಯ ನೌಕರರ ಪಟ್ಟಿಯಲ್ಲಿ ಮುಂದುವರಿಯಲು ಅರ್ಹರಲ್ಲದ ನೌಕರರನ್ನು ತಕ್ಷಣವೇ ವ್ಯವಸ್ಥೆಯಿಂದ ಹೊರಹಾಕಲು (Exit Protocol) ಎಲ್ಲಾ ಇಲಾಖೆಗಳ ರೇಖನಾ ಮತ್ತು ವಿತರಣಾಧಿಕಾರಿಗಳಿಗೆ (DDOs) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವ್ಯವಸ್ಥೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ನೌಕರರ ಮಾಹಿತಿ ಮಾತ್ರ ಇರಬೇಕಾಗಿದ್ದು ಕಡ್ಡಾಯವಾಗಿದೆ. ಆದರೆ, ಅರ್ಹರಲ್ಲದ ಹಲವು ನೌಕರರ ವಿವರಗಳು ಇನ್ನೂ ಸಕ್ರಿಯ ಪಟ್ಟಿಯಲ್ಲಿ ಮುಂದುವರಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ವೇತನ ಮತ್ತು ಇತರ ಭತ್ಯೆಗಳು ಅನಧಿಕೃತವಾಗಿ ಪಾವತಿಯಾಗುವುದನ್ನು ತಡೆಗಟ್ಟಲು ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಡ್ಡಾಯವಾಗಿ ಹೊರಗಡಬೇಕಾದ (Exit) 12 ವರ್ಗಗಳು: ಕೆಳಗಿನ ಯಾವುದೇ ಮಾನದಂಡಗಳ ಅಡಿಯಲ್ಲಿ ಬರುವ ನೌಕರರನ್ನು ಸಕ್ರಿಯ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕಾಗುತ್ತದೆ: ಮರಣ (Death): ಮೃತಪಟ್ಟ ನೌಕರರ ವಿವರಗಳು. ವಯೋನಿವೃತ್ತಿ (Superannuation): ನಿವೃತ್ತಿ…
ಲೈಫ್ನಲ್ಲಿ ಒಮ್ಮೆಯಾದ್ರೂ ಸ್ವಂತದೊಂದು ಮನೆ ಅಥವಾ ಸೈಟ್ ತಗೋಬೇಕು ಅನ್ನೋದು ಪ್ರತಿಯೊಬ್ಬರ ದೊಡ್ಡ ಕನಸು. ಅದಕ್ಕಾಗಿಯೇ ಇಡೀ ಜೀವನದ ಕಷ್ಟದ ಗಳಿಕೆಯನ್ನೆಲ್ಲ ಕ್ರೋಢೀಕರಿಸಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡ್ತಾರೆ. ಆದರೆ, ಆಸ್ತಿ ಖರೀದಿಸುವಾಗ ಕೇವಲ ಅದರ ಲೊಕೇಶನ್, ಸುತ್ತಮುತ್ತಲಿನ ವಾತಾವರಣ ಮತ್ತು ಬೆಲೆಯನ್ನು ಮಾತ್ರ ನೋಡಿದರೆ ಸಾಲದು. ಎಲ್ಲವೂ ಸರಿಯಾಗಿದೆ ಅಂದುಕೊಂಡು ಸರಿಯಾದ ದಾಖಲೆಗಳನ್ನು ಪರಿಶೀಲಿಸದೆ ಮುನ್ನುಗ್ಗಿದರೆ, ಭವಿಷ್ಯದಲ್ಲಿ ಕೋರ್ಟ್, ಕಚೇರಿ ಎಂದು ಅಲೆಯಬೇಕಾದ ಪರಿಸ್ಥಿತಿ ಬರಬಹುದು. ನಿಮ್ಮ ಕಷ್ಟದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಬಾರದು ಎಂದರೆ, ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡುವ ಮುನ್ನ ಕಾನೂನು ತಜ್ಞರು ಸೂಚಿಸುವ ಈ ಪ್ರಮುಖ ದಾಖಲೆಗಳನ್ನು ಕಡ್ಡಾಯವಾಗಿ ಕ್ರಾಸ್ ಚೆಕ್ ಮಾಡಿಕೊಳ್ಳಿ. ಟೈಟಲ್ ಡೀಡ್ (ಸ್ವತ್ತು ಮಾಲೀಕತ್ವದ ಪತ್ರ) ಯಾವುದೇ ಆಸ್ತಿಯನ್ನು ಕೊಳ್ಳುವಾಗ ಮೊದಲು ನೋಡಬೇಕಾದ್ದು ‘ಟೈಟಲ್ ಡೀಡ್’. ಈ ಪ್ರಾಪರ್ಟಿಯ ಅಸಲಿ ಒಡೆಯ ಯಾರು? ಮಾರಾಟ ಮಾಡುತ್ತಿರುವ ವ್ಯಕ್ತಿಗೆ ಇದನ್ನು ಮಾರುವ ಕಾನೂನಾತ್ಮಕ ಹಕ್ಕಿದೆಯೇ? ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಈ ಹಿಂದೆ ಆಸ್ತಿ…
ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಬೇಸಿಗೆಯ ಬೇಗೆಯಲ್ಲಿ ನಮ್ಮ ದೇಹದಲ್ಲಿ ಶರವೇಗದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರ ಬೆನ್ನಲ್ಲೇ ಹಲವರಿಗೆ ಕಾಡುವ ಒಂದು ಮುಖ್ಯ ಸಮಸ್ಯೆ ಎಂದರೆ ಮೂತ್ರದ ಬಣ್ಣ ಬದಲಾಗುವುದು (Urine Color Change). ಕೆಲವರಲ್ಲಿ ಮೂತ್ರವು ಅತಿಯಾದ ಗಾಢ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುವುದಲ್ಲದೆ, ತೀವ್ರ ದುರ್ವಾಸನೆ ಕೂಡ ಬರಲಾರಂಭಿಸುತ್ತದೆ. ಇದನ್ನು ನೋಡಿ ಗಾಬರಿ ಪಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ, ಇದಕ್ಕೆ ಅಸಲಿ ಕಾರಣವೇನು? ನಿಮ್ಮ ದೇಹ ನಿಮಗೆ ಕೊಡುತ್ತಿರುವ ಎಚ್ಚರಿಕೆ ಏನಿರಬಹುದು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಗಾಢ ಹಳದಿ ಬಣ್ಣಕ್ಕೆ ಕಾರಣವೇನು? (Dehydration Symptoms) ವೈದ್ಯರ ಪ್ರಕಾರ, ಬೇಸಿಗೆಯಲ್ಲಿ ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ ನಿರ್ಜಲೀಕರಣ (Dehydration). ಬಿಸಿಲಿಗೆ ದೇಹದಿಂದ ಅತಿಯಾಗಿ ಬೆವರು ಹರಿದು ಹೋದಾಗ, ನೀರು ಮತ್ತು ಅಗತ್ಯ ಖನಿಜಾಂಶಗಳ ಕೊರತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ನಾವು ಸರಿಯಾಗಿ ನೀರು ಕುಡಿಯದಿದ್ದರೆ, ಮೂತ್ರವು ಸಾಂದ್ರವಾಗಿ (Thick) ಅದರ ಬಣ್ಣ ಬದಲಾಗುತ್ತದೆ.…
ರಾಜಸ್ಥಾನದಲ್ಲಿ ಎಂಥವರ ಎದೆಯನ್ನೂ ನಡುಗಿಸುವಂತಹ ಭೀಕರ ದುರಂತವೊಂದು ಸಂಭವಿಸಿದೆ. ಬೇಸಿಗೆಯ ಪ್ರಖರ ಬಿಸಿಲಿನ ತಾಪಕ್ಕೆ ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿಕೊಂಡ ಇಬ್ಬರು ಮುಗ್ಧ ಸಹೋದರಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿರುವ ಈ ಹೃದಯವಿದ್ರಾವಕ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರನ್ನು ಆಘಾತಕ್ಕೀಡು ಮಾಡಿದೆ. ಟೀನಾ (8 ವರ್ಷ) ಮತ್ತು ಲಕ್ಷ್ಮಿ (5 ವರ್ಷ) ದುರಂತಕ್ಕೆ ಬಲಿಯಾದ ದುರ್ದೈವಿಗಳು. ಆಟವಾಡಲು ಹೋದವರು ಹೆಣವಾಗಿ ಮರಳಿದರು! ಬುಧವಾರ ಬೆಳಿಗ್ಗೆ ವೈಶಾಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖುದನ್ಪುರಿ ಎಂಬಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಸ್ಥಳೀಯ ಗ್ಯಾರೇಜ್ ಒಂದರ ಬಳಿ ತಾಂತ್ರಿಕ ದೋಷದಿಂದಾಗಿ ಕಳೆದ ಹತ್ತು ದಿನಗಳಿಂದ ಕಾರೊಂದನ್ನು ನಿಲ್ಲಿಸಿಡಲಾಗಿತ್ತು. ಎಂದಿನಂತೆ ಆಟವಾಡುತ್ತಾ ಬಂದ ಈ ಇಬ್ಬರು ಬಾಲಕಿಯರು, ಆಟದ ಭರದಲ್ಲಿ ಕಾರಿನೊಳಗೆ ಹತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ಕಾರಿನ ಡೋರ್ ಒಳಗಿನಿಂದ ಲಾಕ್ ಆಗಿದೆ. ಎಷ್ಟೇ ಪ್ರಯತ್ನಿಸಿದರೂ ಹೊರಬರಲಾಗದೆ ಆ ಪುಟ್ಟ ಕಂದಮ್ಮಗಳು ಕಾರಿನೊಳಗೇ ಸಿಲುಕಿಕೊಂಡಿದ್ದಾರೆ. ಕಾರಿನೊಳಗೆ…
ನವದೆಹಲಿ : ಕೇಂದ್ರ ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನತೆಗೆ ಭಾರತೀಯ ರೈಲ್ವೇ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯದಲ್ಲೇ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ತಾಂತ್ರಿಕ ವಿಭಾಗದಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಒಟ್ಟು 6,565 ಹುದ್ದೆಗಳ ಭರ್ತಿ: ಯಾವ್ಯಾವ ಹುದ್ದೆಗಳಿವೆ? ರೈಲ್ವೇ ಮಂಡಳಿಯು ಸದ್ಯಕ್ಕೆ ಶಾರ್ಟ್ ನೋಟಿಫಿಕೇಷನ್ (ಕಿರು ಅಧಿಸೂಚನೆ) ಹೊರಡಿಸಿದ್ದು, ಒಟ್ಟು 6,565 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ: ಟೆಕ್ನಿಷಿಯನ್ ಗ್ರೇಡ್-1 (ಸಿಗ್ನಲ್): 323 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-3: 6,242 ಹುದ್ದೆಗಳು ಪ್ರಮುಖ ದಿನಾಂಕಗಳು (Important Dates) ಈ ಬೃಹತ್ ನೇಮಕಾತಿಯ ಸಂಪೂರ್ಣ ವಿವರಗಳನ್ನೊಳಗೊಂಡ ಅಧಿಕೃತ ಅಧಿಸೂಚನೆಯು ಜೂನ್ 30, 2026 ರಂದು ಪ್ರಕಟವಾಗಲಿದೆ. ಅರ್ಜಿ ಸಲ್ಲಿಕೆ ಆರಂಭ: ಜೂನ್ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:…














