Author: kannadanewsnow57

ಬೆಂಗಳೂರು :ರೈತರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ರೈತರು ಇನ್ನು ಮುಂದೆ ಮನೆಯಿಂದಲೇ ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ‘ಫರ್ಟಿಲೈಸರ್ಸ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್’ (FSAS) ಅಡಿಯಲ್ಲಿ ‘ಫರ್ಟಿಲೈಸರ್ ಬುಕಿಂಗ್ ಆಪ್ ಫಾರ್ ಫಾರ್ಮರ್ಸ್’ (FBF) ಎಂಬ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳ ಆಯ್ದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಮುಂಗಾರು ಹಂಗಾಮಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ನಮ್ಮ ರಾಜ್ಯದಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಈ ಪ್ರಾಯೋಗಿಕ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೇಗೆ ಕೆಲಸ ಮಾಡುತ್ತದೆ ಈ ಆಪ್? ಎಲ್‌ಪಿಜಿ ಅಡುಗೆ ಅನಿಲ (Gas) ಬುಕ್ ಮಾಡುವ ಮಾದರಿಯಲ್ಲೇ ಈ ಆಪ್ ಮೂಲಕ ಗೊಬ್ಬರವನ್ನು ಬುಕ್ ಮಾಡಬಹುದು. ರೈತರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎಫ್‌ಐಡಿ, ಹಿಡುವಳಿ ವಿಸ್ತೀರ್ಣ ಇತ್ಯಾದಿ ಮಾಹಿತಿ…

Read More

ಬೆಂಗಳೂರು: ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರು ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಅನಗತ್ಯ ಕೋರ್ಟ್ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭೂಸ್ವಾಧೀನ ಅಧಿಕಾರಿಗಳು ಜಮೀನಿನ ಬೆಲೆ ನಿಗದಿಪಡಿಸುವ ವಿಧಾನ ಹಾಗೂ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಭೂಬೆಲೆ ನಿಗದಿಪಡಿಸಲು 5 ಪ್ರಮುಖ ವಿಧಾನಗಳು ಭೂಸ್ವಾಧೀನಾಧಿಕಾರಿಗಳು ಪರಿಹಾರ ಧನ ನಿಗದಿಪಡಿಸುವಾಗ ಈ ಕೆಳಗಿನ ಐದು ವಿಧಾನಗಳನ್ನು ಅನುಸರಿಸಬಹುದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ: ಸ್ಥಳೀಯ ಪಂಚರು ನಿಗದಿಪಡಿಸಿದ ಬೆಲೆ. ಆದಾಯದ ಬಂಡವಾಳೀಕರಣ ವಿಧಾನ (Capitalization of Income Method). ತಜ್ಞರ ಅಭಿಮತ. ಭೂಮಾಲೀಕರು ಹಾಗೂ ಬೇಡಿಕೆ ಇಲಾಖೆಯವರು ಒಪ್ಪಂದದ ಮೇರೆಗೆ ಮಾತುಕತೆ ನಡೆಸಿ ನಿಗದಿಪಡಿಸಿದ ಬೆಲೆ. ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಮಾರಾಟವಾದ ಜಮೀನುಗಳ ಅಂಕಿ-ಅಂಶಗಳ ಸರಾಸರಿ ಬೆಲೆ. ಗಮನಾರ್ಹ ಅಂಶ: ಸಾಮಾನ್ಯವಾಗಿ ಅಧಿಕಾರಿಗಳು 5ನೇ ವಿಧಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ನೋಂದಣಿ ಬೆಲೆಗೂ ವಾಸ್ತವ ಬೆಲೆಗೂ…

Read More

ಬೆಂಗಳೂರು: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ತೀವ್ರ ಆತಂಕ ಮೂಡಿಸಿವೆ. ಕೃಷಿ ಇಲಾಖೆಯ (ಬೆಳೆ ಅಭಿವೃದ್ಧಿ ಮತ್ತು ಯೋಜನೆ) ಅಪರ ಕೃಷಿ ನಿರ್ದೇಶಕರ ಕಚೇರಿಯಿಂದ ಲಭ್ಯವಾಗಿರುವ ಅಧಿಕೃತ ವರದಿಯ ಪ್ರಕಾರ, 2025-26ನೇ ಸಾಲಿನಲ್ಲಿ ನವೆಂಬರ್ 15, 2025ರ ಅಂತ್ಯಕ್ಕೆ ರಾಜ್ಯಾದ್ಯಂತ ಒಟ್ಟು 377 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ 46 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 331 ಪ್ರಕರಣಗಳನ್ನು ತೀರ್ಮಾನಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ 310 ಪ್ರಕರಣಗಳು ಪರಿಹಾರಕ್ಕೆ ಅರ್ಹ ಎಂದು ಗುರುತಿಸಲ್ಪಟ್ಟಿವೆ. ಕಲಬುರಗಿ, ಬೆಳಗಾವಿ, ಹಾವೇರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ರಾಜ್ಯದ ಜಿಲ್ಲಾವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಕಲಬುರಗಿ ಪ್ರಥಮ ಸ್ಥಾನ: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 40 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 34 ಪ್ರಕರಣಗಳು ಪರಿಹಾರಕ್ಕೆ ಅರ್ಹವಾಗಿವೆ. ಬೆಳಗಾವಿ ದ್ವಿತೀಯ ಸ್ಥಾನ: ಬೆಳಗಾವಿ…

Read More

ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಲು ಶಾಲಾ ಶಿಕ್ಷಣ ಇಲಾಖೆಯು ಸಜ್ಜಾಗಿದ್ದು, 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಜೂನ್ 1 ರಿಂದ ಅಧಿಕೃತವಾಗಿ ಆರಂಭವಾಗಲಿವೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ವಿಸ್ತೃತ ಸುತ್ತೋಲೆಯನ್ನು ಹೊರಡಿಸಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 1 ರಿಂದ ಆರಂಭಿಸಿ ಜೂನ್ 30 ರೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನವೇ, ಅಂದರೆ ಮೇ 29 ರಂದೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಶಾಲೆಗಳಿಗೆ ಕಡ್ಡಾಯವಾಗಿ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಮಳೆಗಾಲದ ಮುನ್ನೆಚ್ಚರಿಕೆಯೊಂದಿಗೆ ಶಾಲಾ ಹಬ್ಬದ ಮುನ್ನಾದಿನದ ಸಿದ್ಧತೆ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನ ಶಾಲಾ ಆವರಣದ ಸುರಕ್ಷತೆ ಮತ್ತು ಸ್ವಚ್ಛತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇ 28 ರೊಳಗಾಗಿ…

Read More

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (ಕಮರ್ಷಿಯಲ್) ಸಿಲಿಂಡರ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಹೋಟೆಲ್‌ ತಿಂಡಿ ತಿನಿಸುಗಳು ಮತ್ತು ಕಾಫಿ-ಟೀ ದರಗಳು ದುಬಾರಿಯಾಗುವುದು ಬಹುತೇಕ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಲ್ಲಿ ಬಳಸಲಾಗುವ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಹೋಟೆಲ್ ನಿರ್ವಹಣಾ ವೆಚ್ಚದಲ್ಲಿ ಶೇ. 60 ರಷ್ಟು ಭಾರೀ ಏರಿಕೆಯಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮ ನಡೆಸುವುದೇ ಕಷ್ಟಕರವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸದ್ಯದಲ್ಲೇ ನಿತ್ಯದ ತಿಂಡಿಗಳ ಬೆಲೆ 60 ರೂ. ನಿಂದ 90 ರೂ. ವರೆಗೂ, ಹಾಗೂ ಊಟದ ದರಗಳು 150 ರೂ. ವರೆಗೂ ಹೆಚ್ಚಾಗುವ ಅಂದಾಜಿದೆ.ಒಂದು ಸಾಮಾನ್ಯ ಹೋಟೆಲ್‌ಗೆ ತಿಂಗಳಿಗೆ ಸರಾಸರಿ 23,000 ರೂ. ನಷ್ಟು ಗ್ಯಾಸ್ ಬಿಲ್ ಬರುತ್ತಿದ್ದರೆ, ಪ್ರಸ್ತುತ ಜಿಎಸ್‌ಟಿ ಮತ್ತು ಇತರೆ ಹೆಚ್ಚುವರಿ ಶುಲ್ಕಗಳು ಸೇರಿ ಅದು ಬರೋಬ್ಬರಿ 35,000 ರೂ. ದಾಟುತ್ತಿದೆ.ಕೇವಲ ಗ್ಯಾಸ್ ಮಾತ್ರವಲ್ಲದೆ, ದಿನಸಿ ಸಾಮಗ್ರಿಗಳಾದ ಬೇಳೆಕಾಳುಗಳು,…

Read More

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ‘ಗೃಹಜ್ಯೋತಿ’ (ಉಚಿತ ವಿದ್ಯುತ್) ಮತ್ತು ‘ಗೃಹಲಕ್ಷ್ಮಿ’ (ತಿಂಗಳಿಗೆ ₹2000) ಯೋಜನೆಗಳ ದುರುಪಯೋಗಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸಲು ಹೊಸದಾಗಿ ಅರ್ಜಿ ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ. ಭಾನುವಾರ ನಡೆದ ಶಾಸಕರ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಹಲವು ಸಲಹೆಗಳು ಬಂದಿವೆ. ಯೋಜನೆ ಜಾರಿಯಾದಾಗಿನಿಂದ ಪ್ರಸ್ತುತ ಪಟ್ಟಿಯಲ್ಲಿರುವ ಕೆಲವರು ಮೃತಪಟ್ಟಿದ್ದರೂ, ಅವರ ಹೆಸರಿನಲ್ಲಿ ಬೇರೆಯವರು ಹಣ ಮತ್ತು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಕೆಲವರು ಅನರ್ಹರ ಹೆಸರಿನಲ್ಲಿ ತಪ್ಪು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ರೀತಿಯ ಅಕ್ರಮ ಮತ್ತು ದುರುಪಯೋಗದಿಂದಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು ₹100 ಕೋಟಿಗೂ ಅಧಿಕ ನಷ್ಟ…

Read More

ಬೆಂಗಳೂರು: ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ ಎಂಬ ಘೊಷವಾಕ್ಯದಡಿಯಲ್ಲಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಈ ಕಾರ್ಯ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಬಲ, ಪ್ರೋತ್ಸಾಹದೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ. ಅತ್ಯಾಧುನಿಕ ಕಮಾಂಡ್ ಮತ್ತು ಕಂಟ್ರೋಲ್ ರೂಂ ಸ್ಥಾಪನೆ. 2008 ರಲ್ಲಿ ಜನರ ಅನುಕೂಲಕ್ಕಾಗಿ 108 ಸೇವೆ ಪ್ರಾರಂಭಿಸಲಾಗಿತ್ತು. ಈವರೆಗೆ ಖಾಸಗಿ ಸಂಸ್ಥೆ ಇದನ್ನು ನಡೆಸುತ್ತಿತ್ತು. ಹಲವಾರು ಸಮಸ್ಯೆಗಳು ಇದ್ದವು. 25-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಇದನ್ನು ಉನ್ನತೀಕರಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಂತರ ಸರ್ಕಾರವೇ ಇದನ್ನು ನಡೆಸಬೇಕು. ಅತ್ಯಾಧುನಿಕ ವ್ಯವಸ್ಥೆ ಅಳವಡಿಸಬೇಕು ಎಂದು ತೀರ್ಮಾನಿಸಿ, ಹಲವಾರು ಮಾಡೆಲ್ ಗಳನ್ನು ಅಧ್ಯಯನ ಮಾಡಲಾಯಿತು. ಸಿಂಗಪೂರ್ ದೇಶದ ವ್ಯವಸ್ಥೆಯನ್ನೂ ಸಹ ಅಧ್ಯಯನ ಮಾಡಿ, ಸುಸಜ್ಜಿತಗೊಳಿಸಲು ಕಾರ್ಯೋನ್ಮುಖರಾದೆವು. ಈ ವ್ಯವಸ್ಥೆ ಯನ್ನು ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆ ಇದಕ್ಕೆ ಬೇಕಾದ ಸಾಪ್ಟವೇರ್ ಸಿದ್ಧಪಡಿಸಿದೆ. ಸುಸಜ್ಜಿತ 24/7 ಕಮಾಂಡ್ ಕಂಟ್ರೋಲ್ ರೂಂ…

Read More

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಇಂಧನ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 57 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಜಂಟಿ ಮಾಧ್ಯಮ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ ದಾಟಿದ್ದು, ಇದು ಕಳೆದ 78 ವರ್ಷಗಳಲ್ಲೇ ದಾಖಲೆಯಾಗಿದೆ. ಕೇವಲ 11 ದಿನಗಳಲ್ಲಿ ಇಂಧನ ಬೆಲೆಯನ್ನು ಲೀಟರ್ಗೆ ₹7.52 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕರ ಜೀವನೋಪಾಯದ ಬಿಕ್ಕಟ್ಟಿಗೆ ಸ್ಪಂದಿಸದೆ ಮೌನ ವಹಿಸಿದೆ ಎಂದು ಅವರು ಟೀಕಿಸಿದ್ದಾರೆ. 11 ದಿನಗಳಲ್ಲಿ 4 ಬಾರಿ ಬೆಲೆ ಏರಿಕೆಯ ಬರೆ! ಕಳೆದ 11 ದಿನಗಳಲ್ಲಿ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ನಾಲ್ಕು ಬಾರಿ ಬೆಲೆ ಏರಿಕೆಯ ದಾಳಿ ನಡೆಸಿದೆ ಎಂದು ನಾಯಕರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ: ಮೇ 15: ಪೆಟ್ರೋಲ್,…

Read More

ಮೊಬೈಲ್ ಫೋನ್ ಮತ್ತು ನೀರು.. ಇವೆರಡೂ ಒಂದಕ್ಕೊಂದು ಶತ್ರುಗಳು ಎಂದರೆ ತಪ್ಪಾಗಲಾರದು. ಒಂದು ಸಣ್ಣ ಹನಿ ನೀರು ಕೂಡ ನಿಮ್ಮ ದುಬಾರಿ ಫೋನನ್ನ ಹಾಳುಗೆಡವಿ, ಜೇಬಿಗೆ ಕತ್ತರಿ ಹಾಕಬಲ್ಲದು. ಸ್ವಲ್ಪ ಜಾಗರೂಕತೆಯಿಂದ ಇದ್ದರೆ ಫೋನ್ಗೆ ಎದುರಾಗುವ ದೊಡ್ಡ ಕಂಟಕವನ್ನು ತಪ್ಪಿಸಬಹುದು. ಹಾಗಾದರೆ ನಿಮ್ಮ ಮೊಬೈಲ್ನ ಯಾವೆಲ್ಲಾ ಭಾಗಗಳಿಗೆ ಅಪ್ಪಿತಪ್ಪಿಯೂ ನೀರು ತಾಗಬಾರದು ಗೊತ್ತಾ? ಮುಂದೆ ಓದಿ… 1. ಚಾರ್ಜಿಂಗ್ ಪೋರ್ಟ್ (Charging Port) ಫೋನಿನ ಚಾರ್ಜಿಂಗ್ ಪೋರ್ಟ್ ಒಳಗೆ ಆಕಸ್ಮಿಕವಾಗಿಯೂ ಒಂದು ಹನಿ ನೀರು ಹೋಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಇಲ್ಲಿ ನೀರು ಸೇರಿದರೆ ಫೋನ್ನಲ್ಲಿ ಶಾರ್ಟ್ ಸರ್ಕ್ಯೂಟ್ (Short Circuit) ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಫೋನ್ ಚಾರ್ಜ್ ಆಗುವುದಿಲ್ಲ ಮಾತ್ರವಲ್ಲದೆ, ಇಡೀ ಫೋನ್ ಶಾಶ್ವತವಾಗಿ ಸ್ಥಗಿತಗೊಳ್ಳಬಹುದು. 2. ಸ್ಪೀಕರ್, ಮೈಕ್ ಮತ್ತು ಹೆಡ್ಫೋನ್ ಜಾಕ್ ಸ್ಪೀಕರ್ ಮತ್ತು ಮೈಕ್: ಫೋನಿನ ಸ್ಪೀಕರ್ ಅಥವಾ ಮೈಕ್ರೋಫೋನ್ ಒಳಗೆ ತೇವಾಂಶ ಇರಲೇಬಾರದು. ನೀರು ಸೇರಿದರೆ ಧ್ವನಿ ಕೇಳಿಸದಂತಾಗಬಹುದು ಅಥವಾ ಅದರ…

Read More

ಹೈದರಾಬಾದ್: ವಕ್ಫ್ ಆಸ್ತಿಗಳ ಅತಿಕ್ರಮಣದ ವಿರುದ್ಧ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹೈದರಾಬಾದ್ನ ಹಿರಿಯ ವಕೀಲರೊಬ್ಬರನ್ನು ಶನಿವಾರ ಬೆಳಗಿನ ಜಾವ ಅವರ ಮನೆಯ ಹೊರಗಡೆಯೇ ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಖಾಜಾ ಮೊಯಿಜುದ್ದೀನ್ (63) ಕೊಲೆಯಾದ ದುರ್ದೈವಿ ವಕೀಲರು. ಶಾಂತಿ ನಗರದಲ್ಲಿರುವ ಅವರ ನಿವಾಸದ ಬಳಿಯೇ ಈ ಘಟನೆ ನಡೆದಿದ್ದು, ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಘಟನೆ ಹಿನ್ನೆಲೆ: ಶನಿವಾರ ಬೆಳಿಗ್ಗೆ ಸುಮಾರು 5.30 ರ ಸುಮಾರಿಗೆ ವಕೀಲ ಖಾಜಾ ಮೊಯಿಜುದ್ದೀನ್ ಅವರು ಈಜು ತರಬೇತಿಗೆಂದು ಮನೆಯಿಂದ ಹೊರಟಿದ್ದರು. ಅವರು ತಮ್ಮ ಕಾರನ್ನು ಹತ್ತಲು ಮುಂದಾದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಹಸಿರು ಬಣ್ಣದ ಸ್ಕಾರ್ಪಿಯೋ ಎಸ್ಯುವಿ (SUV) ಕಾರು ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೊಯಿಜುದ್ದೀನ್ ಅವರು ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಕೃತ್ಯ ಎಸಗಿದ ತಕ್ಷಣ ದುಷ್ಕರ್ಮಿಗಳು ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಯಿಜುದ್ದೀನ್…

Read More