Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಆಸ್ತಿಯನ್ನು (ಜಮೀನು) ಅವರ ವಾರಸುದಾರರ ಹೆಸರಿಗೆ ವರ್ಗಾಯಿಸುವ ‘ಪೌತಿ ಖಾತೆ’ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಮತ್ತಷ್ಟು ಸರಳೀಕರಣಗೊಳಿಸಿದೆ. ಇ-ಪೌತಿ ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಮತ್ತು ರೈತರಿಗೆ ತ್ವರಿತವಾಗಿ ಸೇವೆ ಒದಗಿಸಲು ಇಲಾಖೆಯು 13 ಅಂಶಗಳ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆಯಾಗದಿದ್ದರೆ ಬ್ಯಾಂಕ್ ಸಾಲ, ಪ್ರಕೃತಿ ವಿಕೋಪದ ಪರಿಹಾರ, ಬೆಳೆ ವಿಮೆ ಹಾಗೂ ‘ಪಿಎಂ ಕಿಸಾನ್’ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲು ಮ್ಯುಟೇಶನ್ ಪ್ರಕ್ರಿಯೆಯನ್ನು ಇದೀಗ ಸುಲಭಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು: ದಾಖಲೆಗಳ ಸಲ್ಲಿಕೆ: ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಮರಣ ಪ್ರಮಾಣಪತ್ರ ಹಾಗೂ ವಂಶವೃಕ್ಷವನ್ನು ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ, ನೋಟರಿ ಸಮಕ್ಷಮ ಅಫಿಡವಿಟ್ ಸಲ್ಲಿಸಿ ವಂಶವೃಕ್ಷ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿಡಿಯೋ ಮಹಜರು ಕಡ್ಡಾಯ: ಡೆತ್ ಸರ್ಟಿಫಿಕೇಟ್ ಇಲ್ಲದ ಸಂದರ್ಭದಲ್ಲಿ, ಆಧಾರ್ ಮತ್ತು…
ಬೆಂಗಳೂರು: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನೀರಿನ ಬಳಕೆ ಹೆಚ್ಚಾಗುತ್ತದೆ. ಬಹುತೇಕ ಮನೆಗಳಲ್ಲಿ ನೀರನ್ನು ಸಂಗ್ರಹಿಸಲು ಓವರ್ಹೆಡ್ ಟ್ಯಾಂಕ್ಗಳನ್ನು ಬಳಸಲಾಗುತ್ತದೆ. ಆದರೆ, ಈ ಟ್ಯಾಂಕ್ಗಳನ್ನು ಸರಿಯಾದ ಸಮಯಕ್ಕೆ ಸ್ವಚ್ಛಗೊಳಿಸದಿದ್ದರೆ ಅದರಲ್ಲಿ ಮಣ್ಣು, ಪಾಚಿ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಟ್ಯಾಂಕ್ ಸ್ವಚ್ಛಗೊಳಿಸುವುದು ಎಂದರೆ ದೊಡ್ಡ ಕೆಲಸ. ಟ್ಯಾಂಕ್ ಒಳಗಿಳಿದು ಗಂಟೆಗಟ್ಟಲೆ ಉಜ್ಜಬೇಕು, ಇದರಿಂದ ಮೈ ಕೈ ನೋವು ಗ್ಯಾರಂಟಿ. ಆದರೆ ಈಗ ವೈರಲ್ ಆಗುತ್ತಿರುವ ಒಂದು ‘ದೇಸಿ ಜುಗಾಡ್’ (Desi Jugaad) ಮೂಲಕ ನೀವು ಟ್ಯಾಂಕ್ ಒಳಗಿಳಿಯದೆಯೇ ಕೇವಲ ಎರಡೇ ನಿಮಿಷದಲ್ಲಿ ಅಡಿಭಾಗದಲ್ಲಿರುವ ಕಸವನ್ನು ತೆಗೆಯಬಹುದು. ಈ ಸುಲಭ ವಿಧಾನಕ್ಕೆ ಬೇಕಾಗುವ ವಸ್ತುಗಳು: ಒಂದು ಖಾಲಿ ಪ್ಲಾಸ್ಟಿಕ್ ಬಾಟಲಿ. ಒಂದು ಉದ್ದನೆಯ ಪ್ಲಾಸ್ಟಿಕ್ ಪೈಪ್. ಸೆಲ್ಲೋ ಟೇಪ್ ಅಥವಾ ಗಮ್. ತಯಾರಿಸುವ ವಿಧಾನ: ಮೊದಲು ಪ್ಲಾಸ್ಟಿಕ್ ಬಾಟಲಿಯನ್ನು ಮಧ್ಯಕ್ಕೆ ಕತ್ತರಿಸಿ. ನಮಗೆ ಬಾಟಲಿಯ ಮೇಲ್ಭಾಗ (ಮುಚ್ಚಳ ಇರುವ ಭಾಗ) ಮಾತ್ರ ಬೇಕು. ಈಗ…
ನಾವು ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಬೆಲೆ ಮತ್ತು ಪ್ಯಾಕೆಟ್ ಮೇಲಿರುವ ‘ಎಕ್ಸ್ಪೈರಿ ಡೇಟ್’ (ಮುಕ್ತಾಯ ದಿನಾಂಕ) ಅನ್ನು ತಪ್ಪದೇ ನೋಡುತ್ತೇವೆ. ಆದರೆ, ಬಹುತೇಕ ಎಲ್ಲರ ಮನೆಯಲ್ಲೂ ಪ್ರತಿದಿನ ಬಳಕೆಯಾಗುವ LPG ಗ್ಯಾಸ್ ಸಿಲಿಂಡರ್ ವಿಷಯಕ್ಕೆ ಬಂದಾಗ, ನಾವು ಕೇವಲ ಅದರ ತೂಕ ಮತ್ತು ಸೋರಿಕೆಯನ್ನು ಮಾತ್ರ ಪರಿಶೀಲಿಸುತ್ತೇವೆ. ನಿಮಗೊತ್ತೇ? ಆಹಾರ ಪದಾರ್ಥಗಳಂತೆ ಗ್ಯಾಸ್ ಸಿಲಿಂಡರ್ಗಳಿಗೂ ಕೂಡ ಮುಕ್ತಾಯ ದಿನಾಂಕ ಇರುತ್ತದೆ. ಹಳೆಯ ಅಥವಾ ಅವಧಿ ಮುಗಿದ ಸಿಲಿಂಡರ್ಗಳ ಬಳಕೆ ಅಪಾಯಕಾರಿಯಾಗಬಹುದು. ಸಿಲಿಂಡರ್ ಮೇಲಿರುವ ಕೋಡ್ ಅನ್ನು ಓದುವ ವಿಧಾನ ಇಲ್ಲಿದೆ: ಸಿಲಿಂಡರ್ ಮೇಲಿರುವ ಸಂಕೇತಗಳ ಅರ್ಥವೇನು? ಗ್ಯಾಸ್ ಸಿಲಿಂಡರ್ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರ ಒಳಭಾಗದಲ್ಲಿ A-25, B-26, C-27 ನಂತಹ ಕೋಡ್ಗಳನ್ನು ಬರೆಯಲಾಗಿರುತ್ತದೆ. ಇದರಲ್ಲಿನ ಇಂಗ್ಲಿಷ್ ಅಕ್ಷರಗಳು ತಿಂಗಳನ್ನು ಸೂಚಿಸಿದರೆ, ಅಂಕಿಗಳು ವರ್ಷವನ್ನು ಸೂಚಿಸುತ್ತವೆ. ವರ್ಷದ 12 ತಿಂಗಳುಗಳನ್ನು ನಾಲ್ಕು ಭಾಗಗಳಾಗಿ (ತ್ರೈಮಾಸಿಕ) ವಿಂಗಡಿಸಲಾಗಿದೆ: A (ಜನವರಿ – ಮಾರ್ಚ್): ನಿಮ್ಮ ಸಿಲಿಂಡರ್ ಮೇಲೆ ‘A’…
ನವದೆಹಲಿ : ಭಾರತದಲ್ಲಿ ಹೊಸ ಹಣಕಾಸು ವರ್ಷ ಅಂದರೆ ಏಪ್ರಿಲ್ 1, 2026 ರಿಂದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಲಿವೆ. ಸರ್ಕಾರವು ಹಳೆಯ ‘ಆದಾಯ ತೆರಿಗೆ ಕಾಯ್ದೆ 1961’ ರ ಬದಲಿಗೆ ಹೊಸ ‘ಆದಾಯ ತೆರಿಗೆ ಕಾಯ್ದೆ 2025’ ಅನ್ನು ಜಾರಿಗೆ ತರುತ್ತಿದೆ. ಈ ಹೊಸ ಕಾಯ್ದೆಯು ಸಂಪೂರ್ಣವಾಗಿ ಪಾರದರ್ಶಕತೆ ಮತ್ತು ಡಿಜಿಟಲ್ ಅನುಸರಣೆಯ ಮೇಲೆ ಕೇಂದ್ರೀಕೃತವಾಗಿದೆ. ನಿಮ್ಮ ತೆರಿಗೆ ಸ್ಲ್ಯಾಬ್ಗಳು ಅಥವಾ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ರಿಪೋರ್ಟಿಂಗ್ ಮತ್ತು ಫೈಲಿಂಗ್ ಮಾಡುವ ವಿಧಾನವು ಸಂಪೂರ್ಣವಾಗಿ ಬದಲಾಗಲಿದೆ. ಏಪ್ರಿಲ್ 1 ರಿಂದ ಏನೆಲ್ಲಾ ಬದಲಾಗಲಿದೆ? ಇಲ್ಲಿದೆ ಸಂಪೂರ್ಣ ವಿವರ: 1. ಫಾರ್ಮ್-16 ರ ಬದಲಿಗೆ ‘ಫಾರ್ಮ್-130’ ಇದುವರೆಗೆ ಉದ್ಯೋಗಿಗಳು ಪಡೆಯುತ್ತಿದ್ದ ಫಾರ್ಮ್-16 ಇನ್ನು ಇತಿಹಾಸವಾಗಲಿದೆ. ಇದರ ಜಾಗಕ್ಕೆ ಫಾರ್ಮ್-130 ಬರಲಿದೆ. ಇದು TDS ಪ್ರಮಾಣಪತ್ರವಾಗಿ ಕಾರ್ಯನಿರ್ವಹಿಸಲಿದ್ದು, ಸಂಬಳದಿಂದ ಕಡಿತವಾದ ತೆರಿಗೆ ಮತ್ತು ವಿನಾಯಿತಿಗಳ ಸಂಪೂರ್ಣ ವಿವರವನ್ನು ಹೊಂದಿರುತ್ತದೆ. ಇನ್ನು ಮುಂದೆ ITR ಫೈಲಿಂಗ್ ಹೆಚ್ಚು ಆಟೊಮೇಟೆಡ್ ಆಗಲಿದ್ದು,…
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪೊಲೀಸ್ ಪದಕ’ವನ್ನು ಪ್ರಕಟಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಅವರು ಮಾರ್ಚ್ 27ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಪ್ರಮುಖ ಪುರಸ್ಕೃತರು: ಈ ಬಾರಿಯ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೇಬಲ್ ಹಂತದವರೆಗಿನ ಸಿಬ್ಬಂದಿ ಸೇರಿದ್ದಾರೆ. ಪ್ರಮುಖವಾಗಿ: ಡಾ. ಸುಮನ್ ಡಿ. ಪೆನ್ನೇಕರ್ (ಎಸ್ಪಿ, ಬಳ್ಳಾರಿ ಜಿಲ್ಲೆ) ಡಾ. ಅರುಣ್ ಕೆ. (ಎಸ್ಪಿ, ಉಡುಪಿ ಜಿಲ್ಲೆ) ಪ್ರತೀಕ್ ಶಂಕರ್ (ಎಸ್ಪಿ, ಯಾದಗಿರಿ ಜಿಲ್ಲೆ) ಡಾ. ಗೋಪಾಲ ಎಂ. ಬ್ಯಾಕೋಡ (ಡಿಸಿಪಿ, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು) ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 153 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ. ಏಪ್ರಿಲ್ 2ರಂದು ಪದಕ ಪ್ರದಾನ ಸಮಾರಂಭ: ಪದಕ ಪುರಸ್ಕೃತರಿಗೆ ಏಪ್ರಿಲ್ 02,…
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗಿದ್ದು, ಒಟ್ಟು 36,636 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 273 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ನಲ್ಲಿ ಮಾಹಿತಿ ನೀಡಿದ್ದಾರೆ. ಬುಧವಾರ ನಡೆದ ಕಲಾಪದಲ್ಲಿ ಸದಸ್ಯ ಕೆ. ಗೋವಿಂದರಾಜ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಹಾವು ಕಡಿತವನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಗಮನಾರ್ಹ ಅಂಕಿ-ಅಂಶಗಳು ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ವರದಿಯಿಂದ ತಿಳಿದುಬಂದಿದೆ: ವರ್ಷ ದಾಖಲಾದ ಪ್ರಕರಣಗಳು ಮೃತಪಟ್ಟವರ ಸಂಖ್ಯೆ 2023 6,596 19 2024 13,235 100 2025 16,805 154 ಒಟ್ಟು 36,636 273 ‘ಘೋಷಿತ ಕಾಯಿಲೆ’ ಪಟ್ಟಿಗೆ ಸೇರ್ಪಡೆ ಹಾವು ಕಡಿತದ ಪ್ರಕರಣಗಳ ಬಗ್ಗೆ ನಿಖರ ಮಾಹಿತಿ ಪಡೆಯಲು ಮತ್ತು ಸಾವಿನ ಪ್ರಮಾಣ ತಗ್ಗಿಸಲು ರಾಜ್ಯ ಸರ್ಕಾರ ಇದನ್ನು…
ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು (FLN) ಬಲಪಡಿಸುವ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ‘ಕಲಿಕಾ ದೀಪ’ ಕಾರ್ಯಕ್ರಮವನ್ನು ರಾಜ್ಯದ 1,145 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಆದೇಶ ಹೊರಡಿಸಿದೆ. 2026-27ರ ವೇಳೆಗೆ ಎಲ್ಲಾ ವಿದ್ಯಾರ್ಥಿಗಳು ಭಾಷೆ ಮತ್ತು ಗಣಿತದಲ್ಲಿ ಪ್ರಾವೀಣ್ಯತೆ ಸಾಧಿಸುವ ಗುರಿಯೊಂದಿಗೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಏನಿದು ‘ಕಲಿಕಾ ದೀಪ’ ಯೋಜನೆ? 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಸುಸ್ಥಿತಿಯಲ್ಲಿರುವ ಕಂಪ್ಯೂಟರ್ ಲ್ಯಾಬ್ಗಳನ್ನು ಹೊಂದಿರುವ 1,145 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ‘ಏಕ್ ಸ್ಟೆಪ್’ (EkStep) ಫೌಂಡೇಶನ್ ಸಹಯೋಗದೊಂದಿಗೆ ಈ AI ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 1,44,062 ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತದ ಆರಂಭಿಕ…
ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಿ.ಎಂ. ಪೋಷಣ್ (ಮಧ್ಯಾಹ್ನದ ಉಪಾಹಾರ/ಬಿಸಿಯೂಟ) ಯೋಜನೆಯಡಿ ಕೆಲಸ ಮಾಡುತ್ತಿರುವ ತಾತ್ಕಾಲಿಕ ಅಡುಗೆ ಸಿಬ್ಬಂದಿಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಅಂತ್ಯಕ್ಕೆ (ಮಾರ್ಚ್ 31, 2026) ಇವರ ಸೇವೆಯನ್ನು ಬಿಡುಗಡೆಗೊಳಿಸಲು ಸೂಚಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ನೇಮಿಸಿಕೊಳ್ಳಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಬಿಡುಗಡೆ, ಜೂನ್ 1 ರಿಂದ ಮರು ಸೇರ್ಪಡೆ: 2025-26ನೇ ಸಾಲಿನಲ್ಲಿ ಜೂನ್ 2025 ರಿಂದ ಮಾರ್ಚ್ 2026ರ ವರೆಗೆ ಒಟ್ಟು 10 ತಿಂಗಳ ಅವಧಿಗೆ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆಯಲಾಗಿತ್ತು. ಇದೀಗ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31, 2026 ರಂದು ಎಲ್ಲಾ ಅಡುಗೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತದನಂತರ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ದಿನವಾದ ಜೂನ್ 1, 2026 ರಂದು ಇದೇ ಸಿಬ್ಬಂದಿಯನ್ನು ಮುಂದಿನ 10 ತಿಂಗಳ…
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಲೆಗಳನ್ನು ಆರಂಭಿಸುವವರಿಗೆ, ಮಾನ್ಯತೆ ಪಡೆಯಲು ಹಾಗೂ ಶಾಲಾ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. ಈ ಮೂಲಕ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಟ್ಟಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ) (ತಿದ್ದುಪಡಿ) ನಿಯಮಗಳು 2026’ರ ಕರಡು ಪ್ರಕಾರ, ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಯಾವುದೇ ಹೊಸ ಖಾಸಗಿ ಶಾಲೆ ಸ್ಥಾಪಿಸಲು ಆಡಳಿತ ಮಂಡಳಿಯು ಸ್ವಂತ ಭೂಮಿ ಹೊಂದಿರಬೇಕು. ಇಲ್ಲವೇ, ಕನಿಷ್ಠ 15 ವರ್ಷಗಳ ಕಾಲಾವಧಿಗೆ ನೋಂದಾಯಿತ ಗುತ್ತಿಗೆ (ಲೀಸ್) ಭೂಮಿಯನ್ನು ಹೊಂದಿರಬೇಕು. ದಾಖಲೆಗಳ ಸಲ್ಲಿಕೆ: ಜಾಗದ ಮಾಲೀಕತ್ವದ ಪುರಾವೆಯಾಗಿ ಪಹಣಿ, ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಿದೆ. ಶಾಲಾ ಸ್ಥಳಾಂತರಕ್ಕೆ ಅವಕಾಶ: ಹಾಲಿ ನಡೆಯುತ್ತಿರುವ ಶಾಲೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೆ, ಸುಸ್ಥಿತಿಯಲ್ಲಿರುವ ಸ್ವಂತ, ಬಾಡಿಗೆ ಅಥವಾ ಲೀಸ್ ಜಾಗದ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಕಾಲಾವಕಾಶ ನೀಡುವ ನಿಯಮವನ್ನು ರೂಪಿಸಲಾಗಿದೆ. ಇ-ಬ್ಯಾಂಕ್ ಗ್ಯಾರಂಟಿ ಕಡ್ಡಾಯ:…
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತೈಲ ಕಂಪನಿಗಳನ್ನು ನಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು ಪ್ರತಿ ಲೀಟರ್ಗೆ ತಲಾ 10 ರೂ.ಗಳಷ್ಟು ಕಡಿತಗೊಳಿಸಿದೆ. ಆದರೆ, ಇದರ ನೇರ ಲಾಭ ತೈಲ ಮಾರಾಟ ಸಂಸ್ಥೆಗಳಿಗೆ ಮಾತ್ರ ಸಿಗಲಿದ್ದು, ಬಂಕ್ಗಳಲ್ಲಿ ಗ್ರಾಹಕರಿಗೆ ಪೆಟ್ರೋಲ್ ಅಥವಾ ಡೀಸೆಲ್ ದರ ಇಳಿಕೆಯಾಗುವುದಿಲ್ಲ. ದರ ಇಳಿಕೆ ಯಾಕಿಲ್ಲ? ಮಧ್ಯಪ್ರಾಚ್ಯ ಸಂಘರ್ಷದ ಕಾರಣದಿಂದಾಗಿ ಯುದ್ಧಪೂರ್ವದಲ್ಲಿ ಪ್ರತಿ ಬ್ಯಾರೆಲ್ಗೆ 70 ಡಾಲರ್ ಇದ್ದ ಕಚ್ಚಾತೈಲದ ದರ ಇದೀಗ 100 ಡಾಲರ್ಗೆ ಏರಿಕೆಯಾಗಿದೆ (ಕಳೆದ ಒಂದು ತಿಂಗಳಲ್ಲೇ 30 ಡಾಲರ್ ಹೆಚ್ಚಳ). ಇದರಿಂದ ದೇಶೀಯ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿದ್ದವು. ಈ ನಷ್ಟವನ್ನು ಸರಿದೂಗಿಸಲು ಮತ್ತು ತೈಲ ಬೆಲೆ ಹೆಚ್ಚಳವನ್ನು ತಡೆಯಲೆಂದೇ ಸರ್ಕಾರ ಈ ಸುಂಕ ಕಡಿತ ಮಾಡಿದೆ. ಈ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು ತೈಲ ಕಂಪನಿಗಳು ಸರ್ಕಾರಕ್ಕೆ ಪಾವತಿಸುತ್ತಿದ್ದವು. ಈಗ ಆ…














