Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ: ಕೇಂದ್ರ ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಜನತೆಗೆ ಸಿಬ್ಬಂದಿ ನೇಮಕಾತಿ ಆಯೋಗವು (SSC) ಭರ್ಜರಿ ಸಿಹಿಜುದ್ದಿ ನೀಡಿದೆ. 2026ನೇ ಸಾಲಿನ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಬರೋಬ್ಬರಿ 12,256 ಹುದ್ದೆಗಳ ಬೃಹತ್ ನೇಮಕಾತಿಗೆ ಚಾಲನೆ ನೀಡಲಾಗಿದೆ. ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಈ ಅಧಿಸೂಚನೆಯ ಮೂಲಕ ಒಟ್ಟು ಸರಿಸುಮಾರು 12,256 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಇನ್ಸ್ಪೆಕ್ಟರ್ (ಆದಾಯ ತೆರಿಗೆ/ಕೇಂದ್ರ ಅಬಕಾರಿ), ಸಬ್ ಇನ್ಸ್ಪೆಕ್ಟರ್ (CBI/NIA), ಆಡಿಟರ್ ಮತ್ತು ಟ್ಯಾಕ್ಸ್ ಅಸಿಸ್ಟೆಂಟ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಇದರಲ್ಲಿ ಸೇರಿವೆ. ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ (JSO) ನಂತಹ ನಿರ್ದಿಷ್ಟ ಹುದ್ದೆಗಳಿಗೆ ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ಗಣಿತದಲ್ಲಿ ಶೇ. 60ರಷ್ಟು ಅಂಕ ಅಥವಾ ಪದವಿಯಲ್ಲಿ ಸಾಂಖ್ಯಿಕ ಶಾಸ್ತ್ರ (Statistics) ವಿಷಯವನ್ನು ಓದಿರಬೇಕು. ಅಂತಿಮ ವರ್ಷದ ಪದವಿ…
ಬೇಸಿಗೆಯ ಧಗೆಯು ಎಲ್ಲರಿಗೂ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆದರೆ ಅಸ್ತಮಾ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ (COPD), ಅಲರ್ಜಿ ಅಥವಾ ಇತರ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ತೀವ್ರವಾದ ಬಿಸಿಲು ಮತ್ತು ಆರ್ದ್ರತೆ (Humid weather) ಜೀವಕ್ಕೆ ಕಂಟಕವಾಗುವ ಸಾಧ್ಯತೆ ಇರುತ್ತದೆ. ಹೆಚ್ಚುತ್ತಿರುವ ತಾಪಮಾನ, ಉಸಿರುಕಟ್ಟುವ ವಾತಾವರಣ, ವಾಯು ಮಾಲಿನ್ಯ ಮತ್ತು ಧೂಳಿನ ಕಣಗಳು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದ ಉಸಿರಾಟದ ತೊಂದರೆ ಮತ್ತು ತುರ್ತು ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಬಿಸಿಲು ಮತ್ತು ಆರ್ದ್ರತೆ ಉಸಿರಾಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಾನವನ ದೇಹವು ತನ್ನ ತಾಪಮಾನವನ್ನು ಸಮತೋಲನದಲ್ಲಿಡಲು ನಿರಂತರವಾಗಿ ಶ್ರಮಿಸುತ್ತದೆ. ವಿಪರೀತ ಶಾಖವಿದ್ದಾಗ, ದೇಹವನ್ನು ತಂಪಾಗಿಸಲು ರಕ್ತ ಪರಿಚಲನೆ ಮತ್ತು ಬೆವರುವಿಕೆ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೃದಯ ಬಡಿತ ಮತ್ತು ಉಸಿರಾಟದ ವೇಗವೂ ಹೆಚ್ಚಾಗುತ್ತದೆ. ಆರೋಗ್ಯವಂತ ಜನರಿಗೆ ಇದು ಕೇವಲ ಅಸ್ವಸ್ಥತೆ ಉಂಟುಮಾಡಿದರೆ, ಅಸ್ತಮಾ ಮತ್ತು COPD ರೋಗಿಗಳಲ್ಲಿ ತೀವ್ರ ಉಸಿರಾಟದ ತೊಂದರೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಜತೆಗೆ, ಗಾಳಿಯಲ್ಲಿನ…
ಶಾಲಾ ಪ್ರಾರಂಭೋತ್ಸವವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಮಕ್ಕಳಿಗೆ ಸದಾ ನೆನಪಿನಲ್ಲಿ ಉಳಿಯುವಂತೆ ಹಾಗೂ ಅವರು ಅತ್ಯಂತ ಸಂತೋಷದಿಂದ ಶಾಲೆಗೆ ಬರುವಂತೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತರ ಕಚೇರಿಯು ಕೆಲವು ವಿನೂತನ ಮತ್ತು ಆಕರ್ಷಕ ಸಲಹಾತ್ಮಕ ಚಟುವಟಿಕೆಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬದಲಾಗುತ್ತಿರುವ ಶೈಕ್ಷಣಿಕ ವಾತಾವರಣಕ್ಕೆ ತಕ್ಕಂತೆ ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಐದು ಪ್ರಮುಖ ವಿಭಾಗಗಳ ಅಡಿಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ. 1. ವಿಶೇಷ ಪ್ರವೇಶ ಮತ್ತು ವಿಶಿಷ್ಟ ಸ್ವಾಗತ (Grand & Creative Welcome) ಡಿಜಿಟಲ್ ಸೆಲ್ಫಿ ಬೂತ್: ಶಾಲೆಯ ಮುಖ್ಯ ದ್ವಾರದಲ್ಲಿ ಕೆಂಪು ಹಾಸು (Red Carpet) ಹಾಕಿ, ಕಾರ್ಟೂನ್ ಪಾತ್ರಗಳ ವೇಷ ಧರಿಸಿದ ಶಿಕ್ಷಕರಿಂದ ಮಕ್ಕಳನ್ನು ಸ್ವಾಗತಿಸುವುದು. ಜೊತೆಗೆ ‘ನನ್ನ ಮೊದಲ ದಿನ’ ಎಂಬ ಥೀಮ್ ಉಳ್ಳ ಸೆಲ್ಫಿ ಬೂತ್ ನಿರ್ಮಿಸಿ ಪೋಷಕರೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವುದು. ಹೂವಿನ ಮಳೆಯಿಂದ ಸ್ವಾಗತ: ಮಕ್ಕಳು ಗೇಟ್ ಒಳಗಡೆ…
ನವದೆಹಲಿ: ದೇಶದ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಪ್ರಸ್ತುತ ಇರುವ ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಜೂನ್ 21 ರಿಂದ ಜುಲೈ 19 ರ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯವಾರು ಸ್ಥಾನಗಳ ವಿವರ: ಚುನಾವಣೆ ನಡೆಯಲಿರುವ 24 ಸ್ಥಾನಗಳ ವಿವರ ಹೀಗಿದೆ: ಕರ್ನಾಟಕ: 4 ಸ್ಥಾನಗಳು ಆಂಧ್ರಪ್ರದೇಶ: 4 ಸ್ಥಾನಗಳು ಗುಜರಾತ್: 4 ಸ್ಥಾನಗಳು ಮಧ್ಯಪ್ರದೇಶ: 3 ಸ್ಥಾನಗಳು ರಾಜಸ್ಥಾನ: 3 ಸ್ಥಾನಗಳು ಜಾರ್ಖಂಡ್: 2 ಸ್ಥಾನಗಳು ಮಣಿಪುರ: 1 ಸ್ಥಾನ ಮೇಘಾಲಯ: 1 ಸ್ಥಾನ ಅರುಣಾಚಲ ಪ್ರದೇಶ: 1 ಸ್ಥಾನ ಮಿಜೋರಾಂ: 1 ಸ್ಥಾನ ಪ್ರಮುಖ ದಿನಾಂಕಗಳು: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 8 ಮತದಾನ ನಡೆಯುವ ದಿನಾಂಕ: ಜೂನ್ 18 https://twitter.com/PTI_News/status/2057684243564953762?s=20
ನವದೆಹಲಿ: ದೇಶದ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಪ್ರಸ್ತುತ ಇರುವ ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಜೂನ್ 21 ರಿಂದ ಜುಲೈ 19 ರ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯವಾರು ಸ್ಥಾನಗಳ ವಿವರ: ಚುನಾವಣೆ ನಡೆಯಲಿರುವ 24 ಸ್ಥಾನಗಳ ವಿವರ ಹೀಗಿದೆ: ಕರ್ನಾಟಕ: 4 ಸ್ಥಾನಗಳು ಆಂಧ್ರಪ್ರದೇಶ: 4 ಸ್ಥಾನಗಳು ಗುಜರಾತ್: 4 ಸ್ಥಾನಗಳು ಮಧ್ಯಪ್ರದೇಶ: 3 ಸ್ಥಾನಗಳು ರಾಜಸ್ಥಾನ: 3 ಸ್ಥಾನಗಳು ಜಾರ್ಖಂಡ್: 2 ಸ್ಥಾನಗಳು ಮಣಿಪುರ: 1 ಸ್ಥಾನ ಮೇಘಾಲಯ: 1 ಸ್ಥಾನ ಅರುಣಾಚಲ ಪ್ರದೇಶ: 1 ಸ್ಥಾನ ಮಿಜೋರಾಂ: 1 ಸ್ಥಾನ ಪ್ರಮುಖ ದಿನಾಂಕಗಳು: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 8 ಮತದಾನ ನಡೆಯುವ ದಿನಾಂಕ: ಜೂನ್ 18 https://twitter.com/PTI_News/status/2057684243564953762?s=20
ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ 29 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳ ಕಲಿಕಾ ನ್ಯೂನತೆಗಳನ್ನು ಸರಿಪಡಿಸಲು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಸೇತುಬಂಧ’ ಉಪಕ್ರಮವನ್ನು ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಕಡ್ಡಾಯ ಆದೇಶ ಹೊರಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗನುಗುಣವಾಗಿ ಕಲಿಕಾ ಮಟ್ಟವನ್ನು ಗುರುತಿಸಿ, ಹಿಂದಿನ ವರ್ಷದ ಹಾಗೂ ಪ್ರಸ್ತುತ ವರ್ಷದ ಕಲಿಕೆಯ ನಡುವೆ ಇರುವ ಅಂತರವನ್ನು ಸರಿದೂಗಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ತರಗತಿವಾರು ದಿನಗಳ ನಿಗದಿ: ನಲಿ-ಕಲಿ 1ನೇ ತರಗತಿ: ಶಾಲೆ ಪ್ರಾರಂಭವಾದ ಮೊದಲ 30 ದಿನಗಳ ಕಾಲ ‘ವಿದ್ಯಾಪ್ರವೇಶ’ ಕಾರ್ಯಕ್ರಮ ಜಾರಿಯಲ್ಲಿರುತ್ತದೆ. 2 ರಿಂದ 10ನೇ ತರಗತಿ: ಶಾಲಾ ಆರಂಭದ ಮೊದಲ 15 ದಿನಗಳ ಕಾಲ ಕಡ್ಡಾಯವಾಗಿ ಸೇತುಬಂಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ದ್ವಿಭಾಷಾ ಶಾಲೆಗಳು: 1 ರಿಂದ 5ನೇ ತರಗತಿಗಳಿಗೆ 30 ದಿನಗಳ ಕಾಲ ‘ಟ್ರಾನ್ಸಿಷನ್…
ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವ ಗಡುವನ್ನು ಮತ್ತೊಂದು ವರ್ಷದವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಜಾ ಆದೇಶದ ಪ್ರಕಾರ, ಸಾರ್ವಜನಿಕರು 2027ರ ಜೂನ್ 14ರವರೆಗೆ ‘myAadhaar’ ಪೋರ್ಟಲ್ ಮೂಲಕ ತಮ್ಮ ದಾಖಲೆಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಮೇ 13 ರಂದು ಹೊರಡಿಸಲಾದ ಅಧಿಕೃತ ಜ್ಞಾಪನಾ ಪತ್ರದ (ಮೆಮೊರಾಂಡಂ) ಪ್ರಕಾರ UIDAI ಈ ನಿರ್ಧಾರವನ್ನು ಪ್ರಕಟಿಸಿದೆ. ಹಳೇ ಆ್ಯಪ್ ಸ್ಥಗಿತ; ಹೊಸ ‘ಆಧಾರ್ ಆ್ಯಪ್’ ಬಿಡುಗಡೆ ಮತ್ತೊಂದೆಡೆ, ತಂತ್ರಜ್ಞಾನದ ದೃಷ್ಟಿಯಿಂದಲೂ UIDAI ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ‘ಎಂಆಧಾರ್’ (mAadhaar) ಆ್ಯಪ್ ಅನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅದರ ಬದಲಿಗೆ ಹೆಚ್ಚಿನ ಭದ್ರತೆ ಮತ್ತು ಅತ್ಯಾಧುನಿಕ ಫೀಚರ್ಗಳನ್ನು ಒಳಗೊಂಡ ಹೊಸ ‘Aadhaar app’ ಅನ್ನು ಜನರಿಗೆ ಪರಿಚಯಿಸಿದೆ. ಈ ಹೊಸ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಯಲ್ಲಿನ ದತ್ತಾಂಶದ ನಿಖರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಸಕ್ರಿಯ ನೌಕರರ ಪಟ್ಟಿಯಲ್ಲಿ ಮುಂದುವರಿಯಲು ಅರ್ಹರಲ್ಲದ ನೌಕರರನ್ನು ತಕ್ಷಣವೇ ವ್ಯವಸ್ಥೆಯಿಂದ ಹೊರಹಾಕಲು (Exit Protocol) ಎಲ್ಲಾ ಇಲಾಖೆಗಳ ರೇಖನಾ ಮತ್ತು ವಿತರಣಾಧಿಕಾರಿಗಳಿಗೆ (DDOs) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವ್ಯವಸ್ಥೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ನೌಕರರ ಮಾಹಿತಿ ಮಾತ್ರ ಇರಬೇಕಾಗಿದ್ದು ಕಡ್ಡಾಯವಾಗಿದೆ. ಆದರೆ, ಅರ್ಹರಲ್ಲದ ಹಲವು ನೌಕರರ ವಿವರಗಳು ಇನ್ನೂ ಸಕ್ರಿಯ ಪಟ್ಟಿಯಲ್ಲಿ ಮುಂದುವರಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ವೇತನ ಮತ್ತು ಇತರ ಭತ್ಯೆಗಳು ಅನಧಿಕೃತವಾಗಿ ಪಾವತಿಯಾಗುವುದನ್ನು ತಡೆಗಟ್ಟಲು ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಡ್ಡಾಯವಾಗಿ ಹೊರಗಡಬೇಕಾದ (Exit) 12 ವರ್ಗಗಳು: ಕೆಳಗಿನ ಯಾವುದೇ ಮಾನದಂಡಗಳ ಅಡಿಯಲ್ಲಿ ಬರುವ ನೌಕರರನ್ನು ಸಕ್ರಿಯ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕಾಗುತ್ತದೆ: ಮರಣ (Death): ಮೃತಪಟ್ಟ ನೌಕರರ ವಿವರಗಳು. ವಯೋನಿವೃತ್ತಿ (Superannuation): ನಿವೃತ್ತಿ…
BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ
ಬೆಂಗಳೂರು: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ‘ಅಂಗವಿಕಲರ ಮಾಸಾಶನ ಯೋಜನೆ’ಯನ್ನು ಜಾರಿಗೊಳಿಸಿದೆ. ಕೆಳಕಂಡ ವಿಕಲಚೇತನತೆ ಉಳ್ಳವರು, ವಿಕಲಚೇತನತೆಯೊಂದಿಗೆ ಹುಟ್ಟಿದ ಮಗು ಹಾಗೂ ಅಪಘಾತದಿಂದ ಅಂಗವಿಕಲತೆ ಉಂಟಾದ ವ್ಯಕ್ತಿಗಳು ಈ ಮಾಸಾಶನ ಯೋಜನೆಗೆ ಅರ್ಹರಾಗಿರುತ್ತಾರೆ. ಮಾಸಾಶನ ಪಡೆಯಲು ಇರಬೇಕಾದ ಅರ್ಹತೆಗಳು: ಆದಾಯ ಮಿತಿ: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯವು ರೂ. 32,000/- ಕ್ಕಿಂತ ಕಡಿಮೆ ಇರಬೇಕು. ವಿಕಲಚೇತನತೆಯ ಪ್ರಮಾಣ: ವಿಕಲಚೇತನ ವ್ಯಕ್ತಿಗಳ ಕಾಯ್ದೆ 1995ರ ಪ್ರಕಾರ, ವೈದ್ಯಕೀಯ ಪ್ರಾಧಿಕಾರವು ಪ್ರಮಾಣೀಕರಿಸಿದ ರೀತಿಯಲ್ಲಿ ವಿಕಲಚೇತನತೆಯು ಶೇಕಡಾ 40 ಕ್ಕಿಂತ ಕಡಿಮೆ ಇರಬಾರದು. ಯೋಜನೆಯಡಿ ಬರುವ ವಿಕಲಚೇತನತೆಯ ವಿಧಗಳು: ಅಂಧತ್ವ ಮಂದದೃಷ್ಟಿ ಕುಷ್ಠರೋಗ ನಿವಾರಿತರು ಶ್ರವಣದೋಷವುಳ್ಳವರು ಚಲನವಲನ ಅಂಗವಿಕಲತೆ ಬುದ್ಧಿಮಾಂದ್ಯತೆ ಮಾನಸಿಕ ಅಸ್ವಸ್ಥತೆ ಮಾಸಿಕ ಪಿಂಚಣಿ ಮೊತ್ತದ ವಿವರ: ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ: ಕ್ರ.ಸಂ ವಿಕಲಚೇತನತೆಯ ಪ್ರಮಾಣ / ವಿವರ…
ಬೀದರ್: ಜಿಲ್ಲೆಯ ಪ್ರತಿಷ್ಠಿತ ಬ್ರಿಮ್ಸ್ (BRIMS) ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ತಲ್ಲಣ ಉಂಟುಮಾಡುವ ಘಟನೆಯೊಂದು ನಡೆದಿದೆ. ಸಾರ್ವಜನಿಕರಿಗೆ ಜೀವ ನೀಡುವ ವೈದ್ಯರ ಮೇಲೆಯೇ ಕಿಡಿಗೇಡಿಗಳ ಗುಂಪೊಂದು ಧಾಂದಲೆ ನಡೆಸಿ, ಮನಸೋಇಚ್ಛೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಡರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ತುಕಾರಾಂ ಅವರು ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ನೀಡುವ ವಿಚಾರದಲ್ಲಿ ರೋಗಿ ಜೊತೆ ಬಂದಿದ್ದ ಯುವಕರ ಗುಂಪು ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದೆ. ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನಾಲ್ಕೈದು ಜನರಿದ್ದ ಯುವಕರ ದಂಡು ಡಾ. ತುಕಾರಾಂ ಅವರ ಮೇಲೆ ಮುಗಿಬಿದ್ದಿದೆ. ತೀರ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯ ಆವರಣದಲ್ಲೇ ರಂಪಾಟ ಸೃಷ್ಟಿಸಿದ್ದಾರೆ. ಕಿಡಿಗೇಡಿಗಳ ವರ್ತನೆಯಿಂದ ತೀವ್ರವಾಗಿ ಗಾಯಗೊಂಡಿರುವ ಡಾ. ತುಕಾರಾಂ ಅವರು ಸದ್ಯ ಅದೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ನೀಡಬೇಕಾದ…













