Author: kannadanewsnow57

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸಾಲದ ಶೂಲ ದಿಂದ ಪಾರಾಗಲು ಈ ಪರಿಹಾರಗಳನ್ನು ಮಾಡಿ 100% ಫಲಿತಾಂಶ ಸಿಗುತ್ತದೆ. ಸಾಲವೆಂಬುದು ಹೊನ್ನ ಶೂಲವಿದ್ದಂತೆ ಎಂಬ ಗಾದೆ ಮಾತೊಂದಿದೆ. ಸಾಲ ಪಡೆಯುವಾಗ ಇರುವ ಸಂಭ್ರಮ ಅದನ್ನು ತೀರಿಸುವಾಗ ಇರುವುದಿಲ್ಲ. ಅದರಲ್ಲೂ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತ ಹೋಗುವವರಿಗೆ ಎಷ್ಟು ಸಾಲ ಸಿಕ್ಕರು ಸಾಕಾಗದು.ಕೆಲವರು ಸಾಲದ ಸುಳಿಯಲ್ಲಿ ತಾವಾಗಿಯೇ ಸಿಲುಕುತ್ತ ಹೋಗುತ್ತಾರೆ. ನಂತರ ಅದರಿಂದ ಹೊರಬರಲಾಗದೆ ಒದ್ದಾಡಲಾರಂಭಿಸುತ್ತಾರೆ.ಇನ್ನು ಕೆಲವರು ಬೇಡ ಅಂತಲೇ ಸಾಲ ಮಾಡುವುದಿಲ್ಲ.ಆದರೆ ಜೀವನದಲ್ಲಿ ಎದುರಾಗುವ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಮಾಡಿಕೊಳ್ಳುತ್ತಾರೆ.ನಂತರ ಗಳಿಸುವ ಆದಾಯದಲ್ಲಿ.ಸಾಲ ತೀರಿಸಲಾಗದೆ ಒದ್ದಾಡುವಂತಾಗುತ್ತದೆ. ಆದರೆ ಹೀಗೆ ಸಾಲ ಮಾಡಿಕೊಳ್ಳುವುದು ಹಾಗೂ ಅದನ್ನು ತೀರಿಸಬೇಕೆಂದರು. ತೀರಿಸಲಾಗದೆ ಇರುವುದಕ್ಕೆ ಹಲವಾರು ಬಾರಿ ಮನುಷ್ಯನ ಗ್ರಹಗತಿಗಳು ಸಹ ಕಾರಣವಾಗಿರುತ್ತವೆ.ಏನೇ ಮಾಡಿದರು. ಕಾಲದ ಹೊರೆ ಇಳಿಯದಿದ್ದಾಗ ಚಿಂತೆ ಆವರಿಸ ತೊಡಗುತ್ತದೆ.ಹೀಗೆ ಮಾಡಿದ ಸಾಲ ತೀರಿಸಲಾಗದೇ…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸಾಲಿಗ್ರಾಮ ಕಲ್ಲು ಹಿಂದೂ ಧರ್ಮದಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿರುವ ಪವಿತ್ರ ಬಂಡೆಯಾಗಿದೆ. ಇದು ಬ್ರಹ್ಮಾಂಡದ ರಕ್ಷಕನಾದ ಭಗವಾನ್ ವಿಷ್ಣುವಿನ ಸಾಕಾರ ಎಂದು ನಂಬಲಾಗಿದೆ. ಸಾಲಿಗ್ರಾಮವು ಒಂದು ಮಂಗಳಕರವಾದ ಕಲ್ಲುಯಾಗಿದ್ದು, ಅದನ್ನು ಭಕ್ತಿಯಿಂದ ಪೂಜಿಸಿದಾಗ, ಜೀವನ, ಸಂಪತ್ತು, ಸಮೃದ್ಧಿ ಮತ್ತು ಬಯಸಿದ ವರಗಳ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ.ಧಾರ್ಮಿಕ ಗ್ರಂಥಗಳ ಪ್ರಕಾರ, 24 ವಿಧದ ಸಾಲಿಗ್ರಾಮ ಕಲ್ಲುಗಳಿವೆ, ಒಂಬತ್ತು ಭಗವಾನ್ ವಿಷ್ಣುವಿನ ಅವತಾರಗಳಿಗೆ ಸಂಬಂಧಿಸಿದೆ. ವೃತ್ತಾಕಾರದ ಸಾಲಿಗ್ರಾಮ ಕಲ್ಲನ್ನು ಗೋಪಾಲ್ ಎಂದು ಕರೆಯಲಾಗುತ್ತದೆ. ವಿಷ್ಣುವನ್ನು ಸಾಲಿಗ್ರಾಮ ಶಿಲೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಸಾಲಿಗ್ರಾಮ ಕಲ್ಲನ್ನು ಪೂಜಿಸುವುದು ಸನಾತನ ಧರ್ಮದಲ್ಲಿ ಧಾರ್ಮಿಕ ಆಚರಣೆಯಾಗಿದೆ. ಸಾಲಿಗ್ರಾಮವನ್ನು ಮನೆಯಲ್ಲಿ ಸ್ಥಾಪಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಅಪಾರ ಸಂಪತ್ತಿನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಸಾಲಿಗ್ರಾಮ ಕಲ್ಲನ್ನು ಪ್ರತಿಷ್ಠಾಪಿಸುವವರ ಮನೆಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಭೇಟಿ ನೀಡುತ್ತಾಳೆ ಎಂದು…

Read More

ನವದೆಹಲಿ : ಪ್ಯಾನ್ 2.0 ಯೋಜನೆಯ ಮೂಲಕ ಭಾರತ ಸರ್ಕಾರ ನಿರ್ಣಾಯಕ ಹೆಜ್ಜೆ ಇಟ್ಟಿದ್ದು, ಈ ಯೋಜನೆಯನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಇದು ತೆರಿಗೆದಾರರ ಗುರುತಿಸುವಿಕೆಯನ್ನ ಸುರಕ್ಷಿತ ರೀತಿಯಲ್ಲಿ ನಡೆಸಲು ಆಧುನಿಕ, ತಾಂತ್ರಿಕ ವಿಧಾನವನ್ನ ಒದಗಿಸುತ್ತದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ ಈ ಸುಧಾರಿತ ಪ್ಯಾನ್ ಕಾರ್ಡ್ಗಳು ಬಹಳ ವಿಶಿಷ್ಟ ಮತ್ತು ವೈವಿಧ್ಯಮಯವಾಗಿವೆ.. ಹೌದು, ಪ್ಯಾನ್ 2.0 ಕಾರ್ಡ್’ಗಳು ಕ್ಯೂಆರ್ ಕೋಡ್’ಗಳನ್ನ ಸಹ ಹೊಂದಿವೆ. ಈ ಕ್ಯೂಆರ್ ಕೋಡ್ಗಳು ಆರ್ಥಿಕ ಚಟುವಟಿಕೆಯನ್ನ ಸುಗಮಗೊಳಿಸುತ್ತವೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನ 1,435 ಕೋಟಿ ರೂ.ಗಳ ವೆಚ್ಚದಲ್ಲಿ ತಂದಿದೆ. ಈ ಕಾರ್ಯಕ್ರಮವು ಆದಾಯ ತೆರಿಗೆ ಇಲಾಖೆಯ ಚಟುವಟಿಕೆಗಳನ್ನ ಮತ್ತಷ್ಟು ಸುಗಮಗೊಳಿಸುತ್ತದೆ. ಪ್ಯಾನ್ 2.O ಯೋಜನೆ.! ಪ್ಯಾನ್ 2.0.. ಮರು-ವಿನ್ಯಾಸಗೊಳಿಸಿದ ಇ-ಆಡಳಿತ ಯೋಜನೆಯು ತೆರಿಗೆದಾರರ ನೋಂದಣಿ ಸೇವೆಗಳನ್ನು ಪರಿವರ್ತಿಸುವ ಗುರಿಯನ್ನ ಹೊಂದಿದೆ. ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಮತ್ತು ಟ್ಯಾನ್ (ತೆರಿಗೆ ವಿನಾಯಿತಿ, ಸಂಗ್ರಹ ಖಾತೆ ಸಂಖ್ಯೆ) ವ್ಯವಸ್ಥೆಗಳನ್ನು…

Read More

ಬೆಳಗಾವಿ : ಸಾಲಗಾರರ ಕಿರುಕುಳಕ್ಕೆ ಬೇಸತ್ತು ಸೆಲ್ಪಿ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಅಪ್ಪಾಸಾಬ್ ರೇಖಾ ಸಮಗಾರ, ಭೀಮಾ ವಾಳಕೆ ಎಂಬುವವರಿಂದ 50 ಸಾವಿರ ರೂ. ಸಾಲ ಪಡೆದಿದ್ದರು. ಸಾಲಗಾರರ ಕಿರುಕುಳ ತಾಳಲಾರದೇ ಮನನೊಂದು ಸೆಲ್ಪಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಪ್ಪಾಸಾಬ್ 50 ಸಾವಿರ ಹಣಕ್ಕೆ ಲಕ್ಷಾಂತರ ರೂ.ಬಡ್ಡಿ ಪಾವತಿಸಿದ್ದರು ಎನ್ನಲಾಗಿದೆ. ಅಲ್ಲದೇ ಇನ್ನೂ ಹೆಚ್ಚಿನ ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದರಿಂದ ಮನನೊಂದು ಅಪ್ಪಾ ಸಾಬ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಾಲಿನ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕನಕಪುರ ರಸ್ತೆಯಲ್ಲಿ ಬೈಕ್ ನಲ್ಲಿ ಬಂದು ಮುಂಜಾನೆ ಹಾಲು ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಹೌದು, ಬೆಂಗಳುರಿನ ಕನಕಪುರ ರಸ್ತೆಯಲ್ಲಿ ಹಾಲು ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಾಲಿನ ಕ್ರೇಟ್ ಗಳನ್ನು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸುಬ್ರಹ್ಮಣ್ಯಪುರದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಹಾಲು ಅನ್ ಲೋಡ್ ಆದ ಬಳಿಕ ಬೈಕ್ ನಲ್ಲಿ ಬರುವ ಖದೀಮರು ಹಾಲಿನ ಕ್ರೇಟ್ ಗಳನ್ನು ಕದ್ದು ಪರಾರಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More

ಹೈದರಾಬಾದ್ : ತೆಲಂಗಾಣದಲ್ಲಿ ಬುಧವಾರ ಬೆಳಗ್ಗೆ ಪ್ರಬಲ ಭೂಕಂಪನದ ಅನುಭವವಾಗಿದೆ. ಕಂಪನವು ಎಷ್ಟು ಪ್ರಬಲವಾಗಿದೆಯೆಂದರೆ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದ ಕೆಲವು ಪ್ರದೇಶಗಳಲ್ಲಿ ಸಹ ಇದು ಅನುಭವವಾಯಿತು. ಬೆಳಿಗ್ಗೆ ಈ ಆಘಾತಗಳಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬೆಳಿಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಹೈದರಾಬಾದ್‌ನಲ್ಲೂ ಕಂಪನದ ಅನುಭವವಾಗಿದೆ. ಬೆಳಗ್ಗೆ 7:27ಕ್ಕೆ ಭೂಕಂಪ ಸಂಭವಿಸಿದೆ. ಇದರ ಕೇಂದ್ರವು ನೆಲದಿಂದ 40 ಕಿಲೋಮೀಟರ್ ಆಳದಲ್ಲಿದೆ. ಭೂಕಂಪಗಳು ಏಕೆ ಸಂಭವಿಸುತ್ತವೆ? ಭೂಮಿಯೊಳಗೆ 7 ಫಲಕಗಳಿವೆ, ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಘರ್ಷಣೆಯಾಗುವ ವಲಯವನ್ನು ದೋಷ ರೇಖೆ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ ಫಲಕಗಳ ಮೂಲೆಗಳು ಬಾಗುತ್ತವೆ. ಒತ್ತಡ ಹೆಚ್ಚಾದಾಗ, ಫಲಕಗಳು ಒಡೆಯಲು ಪ್ರಾರಂಭಿಸುತ್ತವೆ. ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ ಮತ್ತು ಅಡಚಣೆಯ ನಂತರ ಭೂಕಂಪ ಸಂಭವಿಸುತ್ತದೆ.

Read More

ಹೈದರಾಬಾದ್ : ತೆಲಂಗಾಣ ಹಾಗೂ ಆಂಧ್ರಪ್ರದೇಶದ ಹಲವಡೆ ಇಂದು ಬೆಳ್ಳಂಬೆಳಗ್ಗೆ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ತೆಲುಗು ರಾಜ್ಯಗಳಲ್ಲಿ ಭೂಕಂಪ ಅಸ್ತವ್ಯಸ್ತವಾಗಿದೆ. ಹೈದರಾಬಾದ್, ಹನುಮಕೊಂಡ, ಖಮ್ಮಂ, ಭದ್ರಾದ್ರಿ ಕೊತಗುಡೆಂ, ಮಣುಗೂರು, ಗೋದಾವರಿಖನಿ, ಭೂಪಾಲಪಲ್ಲಿ, ವರ್ಗ, ಚಿಂತಕಣಿ, ಭದ್ರಾಚಲಂ, ಸತ್ತುಪಲ್ಲಿ ಹಾಗೂ ಆಂಧ್ರಪ್ರದೇಶದ ವಿಜಯವಾಡ, ಜಗ್ಗಯ್ಯಪೇಟ್, ತಿರುಪ್ಪೂರ್ ಮತ್ತು ಗಂಪಲಗುಡೆಂ ಸಮೀಪದ ಗ್ರಾಮಗಳು ಕೆಲ ಸೆಕೆಂಡುಗಳ ಕಾಲ ಕಂಪಿಸಿದವು. ಇದರಿಂದ ಜನರು ಭಯಭೀತರಾಗಿ ಮನೆ, ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡಿ ಬಂದರು.

Read More

ಹೈದರಾಬಾದ್ : ತೆಲಂಗಾಣದ ಮುಲುಗುನಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಳಿಗ್ಗೆ 7:27 ಕ್ಕೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇಂದು ಬೆಳ್ಳಂಬೆಳಗ್ಗೆ ತೆಲಂಗಾಣದ ಹೈದರಾಬಾದ್ ಸೇರಿದಂತೆ ಹಲವಡೆ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ಸಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಆದೇಶದಲ್ಲಿ ಏನಿದೆ.? ಮೇಲೆ ಓದಲಾದ ಕ್ರ.ಸಂ. (1) ರ ಸರ್ಕಾರದ ಆದೇಶದಲ್ಲಿ 2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು. ಮೇಲೆ ಓದಲಾದ ಕ್ರ.ಸಂ. (2) ರ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ (Flagship) ವಿಶಿಷ್ಟ ಯೋಜನೆಯಾಗಿದ್ದು, ಇದರಲ್ಲಿ ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿ ಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5.00 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಯಶಸ್ಸಿನಿ ಯೋಜನೆಯು ವಿಮಾ ಯೋಜನೆಯಾಗಿರುವುದಿಲ್ಲ. ಬದಲಾಗಿ ಇದೊಂದು…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ಗಂಟೆ ಕಾಲ “ಮೇಷ್ಟ್ರು” ಆಗಿ ಕಾರ್ಯ ನಿರ್ವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಸಂವಿಧಾನದ ಬಗ್ಗೆ ಪಾಠ ಮಾಡಿದರು. ಮುಖ್ಯಮಂತ್ರಿಗಳ ಪಾಠವನ್ನು ತದೇಕಚಿತ್ತದಿಂದ ಆಲಿಸಿದ ವಿದ್ಯಾರ್ಥಿಗಳು, ಹಲವಾರು ಪ್ರಶ್ನೆಗಳ ಮೂಲಕ ಸಂವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಂಡರು. ಸಂವಿಧಾನ ಓದು ಅಭಿಯಾನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸಿಎಂ ಪಾಠ ಮಾಡುವ ಮೂಲಕ ಗಮನ ಸೆಳೆದರು. ಮುಖ್ಯಮಂತ್ರಿಗಳ ಪಾಠದ ಸಾರಾಂಶ… ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿದೆ ಎನ್ನುವವರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಮತ್ತು ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸಿ ಪಾಠ ಮುಂದುವರೆಸಿದರು. ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ಹೋದರೆ, ಎಷ್ಟೇ ಒಳ್ಳೆ ಸಂವಿಧಾನ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ ಎಂದರು. ಸಂವಿಧಾನದ…

Read More