Subscribe to Updates
Get the latest creative news from FooBar about art, design and business.
Author: kannadanewsnow57
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ಲ್ಯಾಪ್ ಟಾಪ್ ಯೋಜನೆಯಡಿ ಸಫಾಯಿ ಕರ್ಮಚಾರಿ/ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಮತ್ತು ಅವರ ಅವಲಂಬಿತ ಮಕ್ಕಳು B.Com, B.Sc. BBM, MBBS, M.Com, MA, M.Sc, M.Tech, MBA ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, #48, 2ನೇ ಮುಖ್ಯರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಡಿಸೆಂಬರ್ 16, 2025 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29550603 ಗೆ ಸಂರ್ಪಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ದಿನಾಂಕ : 08.12.2025 ರಿಂದ 19.12.2025 ರವರೆಗೆ ನಡೆಯಲಿರುವ ಕಾರ್ನಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನ ನಡೆಯಲಿದೆ. ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡೂ ಸದನಗಳ ಅಧಿವೇಶನವು ದಿನಾಂಕ 08.12.2025 ರಂದು ಪೂರ್ವಾಹ್ನ 11.00 ಗಂಟೆಗೆ (ಸೋಮವಾರ) ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಪ್ರಾರಂಭವಾಗಲಿದ್ದು, ಸದನದ ತಾತ್ಕಾಲಿಕ ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತಿವೆ. ಅಧಿವೇಶನದಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಮಾನ್ಯ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಮಂಡಿಸಲಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಮಾಹಿತಿಯನ್ನು ಟಿಪ್ಪಣಿ ರೂಪದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿ ಕೊಳ್ಳಲು ಕೋರಿದೆ. 2. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ಪ್ರಧಾನ ಕಛೇರಿಯಿಂದ ಕಳುಹಿಸಿದ ವಿಧಾನ ಸಭೆ/ ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ತಯಾರಿಸಿ ಶೀಘ್ರ ಮಾಹಿತಿಯನ್ನು ಸಲ್ಲಿಸುವುದು. ಈ ಸಂಬಂಧ ಘಟಕಾಧಿಕಾರಿಗಳಿಗೆ ಕೆಳಕಂಡ ನಿರ್ದೇಶನಗಳನ್ನು…
ಬೆಂಗಳೂರು : ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ಮೋಟಾರು ವಾಹನ ಕಾಯಿದೆ / ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ ಬಾಕಿ ಇರುವ ಡಿ.ಎಸ್.ಎ (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ 50% (ಶೇ.ಐವತ್ತರಷ್ಟು ಮಾತ್ರ) ರಷ್ಟು ರಿಯಾಯಿತಿ ನೀಡಿ ನವೆಂಬರ್ 21,2025 ರಿಂದ ಡಿಸೆಂಬರ್ 12, 2025ರ ವರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ. ವಾಹನದ ಮಾಲೀಕರು ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದಂಡದ ಶೇ. 50ರಷ್ಟು ಮೊತ್ತವನ್ನು ಹತ್ತಿರದ ಹಿರಿಯ ಪ್ರಾದೇಶಿಕ ಸಾರಿಗೆ / ಪ್ರಾದೇಶಿಕ ಸಾರಿಗೆ / ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಪಾವತಿಸಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಿಯಾಯಿತಿಯೊಂದಿಗೆ ಪಾವತಿ ಮಾಡುವ ವಿಧಾನ: 1.ಈ ಕೆಳಗಿನ ಮೊಬೈಲ್ ಆಪ್ಗಳನ್ನು ಬಳಸಿ (ಪ್ಲೇ ಸ್ಟೋರ್ ಮತ್ತು…
ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿ ಸ್ವಾಗತಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗಾರ್ಡ್ ಆಫ್ ಆನರ್ ನೀಡಲಾಯಿತು.ಬಳಿಕ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಧ್ಯಕ್ಷೆ ದ್ರೌಪದಿ ಮುರ್ಮು ಹಸ್ತಲಾಘವ ಮಾಡಿದ್ದಾರೆ. ರಷ್ಯಾ ಅಧ್ಯಕ್ಷರು ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಹಸ್ತಲಾಘವ ಮಾಡಿದ್ದಾರೆ. https://twitter.com/ANI/status/1996820000133582916?s=20 https://twitter.com/ANI/status/1996821042816585869?s=20 https://twitter.com/ANI/status/1996820274810167677?s=20
ಬ್ಯಾಂಕ್ ಖಾತೆ ಹೊಂದಿರುವ ಬಹುತೇಕ ಎಲ್ಲರಿಗೂ ಡೆಬಿಟ್ ಕಾರ್ಡ್ ಇರುತ್ತದೆ. ಹಿಂದೆ, ಬ್ಯಾಂಕ್ ಗಳು ಖಾತೆಯನ್ನು ಪಡೆದ ನಂತರ, ನಿಮಗೆ ಡೆಬಿಟ್ ಕಾರ್ಡ್ ಬೇಕೇ? ಅಥವಾ ಬೇಡವೇ? ಎಂದು ಕೇಳುತ್ತಿದ್ದವು. ನಾವು ಬಯಸಿದರೆ ಬ್ಯಾಂಕುಗಳು ಅದನ್ನು ನೀಡುತ್ತಿದ್ದವು. ಆದರೆ ಈಗ ಬ್ಯಾಂಕುಗಳು ಖಾತೆಯೊಂದಿಗೆ ಸ್ವಯಂಚಾಲಿತವಾಗಿ ATM ಕಾರ್ಡ್ಗಳು, ಪಾಸ್ ಬುಕ್ ಗಳು ಮತ್ತು ಚೆಕ್ ಬುಕ್ ಗಳನ್ನು ನೀಡುತ್ತಿವೆ. ನೀವು ಆಯ್ಕೆ ಮಾಡದಿದ್ದರೂ ಸಹ, ಅವರು ಇವುಗಳನ್ನು ನೇರವಾಗಿ ನಿಮ್ಮ ಮನೆಗೆ ಅಂಚೆ ಮೂಲಕ ಕಳುಹಿಸುತ್ತಾರೆ. ಈಗ ಎಲ್ಲರೂ ATM ಕಾರ್ಡ್ಗಳನ್ನು ಬಳಸುತ್ತಿದ್ದಾರೆ. ಕೆಲವು ಅನಕ್ಷರಸ್ಥ ಜನರಿಗೆ ತಿಳಿದಿಲ್ಲದಿದ್ದರೂ, ಅವರು ಅವುಗಳನ್ನು ವಿಶ್ವಾಸಾರ್ಹ ಜನರ ಸಹಾಯದಿಂದ ಬಳಸುತ್ತಾರೆ. ATM ಕಾರ್ಡ್ ಗಳು ಬ್ಯಾಂಕ್ಗಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲದೆ ಸುಲಭವಾಗಿ ನಗದು ಅಥವಾ ಕ್ರೆಡಿಟ್ ಅನ್ನು ಹಿಂಪಡೆಯಲು ಸಾಧ್ಯವಾಗಿಸಿದೆ. ನೀವು ATM ಕಾರ್ಡ್ ಬಳಸುವಾಗ, ನೀವು ಖಂಡಿತವಾಗಿಯೂ 4-ಅಂಕಿಯ ರಹಸ್ಯ ಪಿನ್ ಅನ್ನು ನಮೂದಿಸಬೇಕು. ಕೇವಲ 4-ಅಂಕಿಯ ಪಿನ್ ಏಕೆ ಎಂದು…
ಹಾಸನ : ಸರ್ಕಾರ ಮಾಡಿರುವ ಉತ್ತಮ ಕೆಲಸಗಳು ಜನರಿಗೆ ಕಾಣಬೇಕು ಈ ನಿಟ್ಟಿನಲ್ಲಿ ಡಿ.6 ರಂದು ಹಾಸನದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಣೆ ಮಾಡುವುದರ ಮೂಲಕ ಸಹಕರಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆದಂತಹ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದ ಅವರು ಕಂದಾಯ ಇಲಾಖೆ ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದ ಅವರು 14 ವರ್ಷದಲ್ಲಿ 2444 ರೈರಿಗೆ ಪೋಡಿ ದುರಸ್ತು ಮಾಡಿಕೊಂಡಲಾಗಿದೆ ಆದರೆ 2025ರ ಜನವರಿಯಿಂದ ಇಲ್ಲಿಯವರೆಗೆ 21,631 ಜಮೀನುಗಳನ್ನು ಅಳತೆ ಮಾಡಲಾಗಿದೆ ಇದರಲ್ಲಿ 10 ಸಾವಿರ ಆರ್.ಟಿ.ಸಿ ಆಗಿದೆ ಉಳಿದವು ಕೂಡ ಮುಂದಿನ ದಿನಗಳಲ್ಲಿ ಆರ್.ಟಿ,ಸಿ ಮಾಡಲಾಗುವುದು ಎಂದರು. ಪೌತಿ ಖಾತೆ ಆಂದೋಲನ ವೇದಿಕೆಯ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭ ಮಾಡಲೇಬೇಕು 2.30 ಕ್ಕೆ ಕಾರ್ಯಕ್ರಮ ಮುಗಿಯಬೇಕು ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಬAಧಪಟ್ಟ ವಿ.ಎ ಮತ್ತು ಪಿಡಿಓಗಳು…
ಸಾಮಾನ್ಯವಾಗಿ ಜನರು ದೂರದಿಂದ ಸಿಂಹವನ್ನು ನೋಡಲು ಹೆದರುತ್ತಾರೆ. ಅದು ಹತ್ತಿರ ಬಂದರೆ, ಅದು ತನ್ನ ಜೀವವನ್ನು ಪಣಕ್ಕಿಡುವಷ್ಟು ಅಪಾಯಕಾರಿ. ಇದೀಗ ಯುವಕನೊಬ್ಬ ಹುಚ್ಚಾಟ ಮೆರೆದು ಸಿಂಹಕ್ಕೆ ಆಹಾರವಾದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಜನರು ಪ್ರಾಣ ಕಳೆದುಕೊಂಡಿರುವ ಅನೇಕ ಘಟನೆಗಳಿವೆ. ಅಂತಹ ಒಂದು ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬ್ರೆಜಿಲ್ನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸಿಂಹವನ್ನು ಹತ್ತಿರದಿಂದ ನೋಡುವ ಬಯಕೆ.. ಯುವಕನೊಬ್ಬನ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಸ್ಥಳೀಯರನ್ನು ಬೆಚ್ಚಿಬೀಳಿಸಿದ ಈ ಘಟನೆಯ ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಬ್ರೆಜಿಲ್ನ ಅರುಡಾ ಕ್ಯಾಮರಾ ಮೃಗಾಲಯ ಉದ್ಯಾನವನದಲ್ಲಿ ಈ ಘಟನೆ ನಡೆದಿರುವಂತೆ ತೋರುತ್ತದೆ. ವೀಡಿಯೊದಲ್ಲಿ, ಯುವಕನೊಬ್ಬ ಸಿಂಹವನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿದನು. ಈ ಪ್ರಕ್ರಿಯೆಯಲ್ಲಿ, ಅವನು ಸಿಂಹದ ಗುಹೆಯ ಪಕ್ಕದಲ್ಲಿರುವ ಮರವನ್ನು ಹತ್ತಿ ಅಲ್ಲಿಂದ ನೇರವಾಗಿ ಸಿಂಹದ ಬ್ಯಾರಕ್ಗೆ ಹೋದನು. ದೂರದಿಂದಲೇ ಯುವಕನ ಚಲನವಲನಗಳನ್ನು ಗಮನಿಸಿದ ಸಿಂಹವು ಕೆಲವೇ ಕ್ಷಣಗಳಲ್ಲಿ…
ಬೆಂಗಳೂರು : ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಡಿಸೆಂಬರ್ 06 ರಂದು ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಕಡ್ಡಾಯವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿರುವ ಅವರು, ಡಿಸೆಂಬರ್ 06, 2025 ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲ ಕಚೇರಿಗಳಲ್ಲಿ ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡಿ, ತಮ್ಮ ಅಧೀನದಲ್ಲಿ ಬರುವ ಎಲ್ಲಾ ಕಚೇರಿ, ಸಂಸ್ಥೆಗಳಲ್ಲಿ ಭಾರತರತ್ನ, ಸಂವಿಧಾನಶಿಲ್ಲ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ವನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ.
ಮುಂಬೈ : ಎಂಪಿಸಿ (ಹಣಕಾಸು ನೀತಿ ಸಮಿತಿ) ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ 5.25% ಕ್ಕೆ ಇಳಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ” ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ರೆಪೋ ದರವನ್ನು ಶೇಕಡಾ 5.25% ಕ್ಕೆ ಇಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರವು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಬಲವಾದ ಸ್ಥಿರತೆಯನ್ನು ಸೂಚಿಸುತ್ತದೆ. ಸ್ಥಿರವಾದ ವಿತ್ತೀಯ ನೀತಿಯು ಕಡಿಮೆ-ವೆಚ್ಚದ ವಸತಿ ಸಾಲಗಳನ್ನು ಬೆಂಬಲಿಸುತ್ತಲೇ ಇದೆ, ಮೊದಲ ಬಾರಿಗೆ ಖರೀದಿದಾರರು ಮತ್ತು ಮಧ್ಯಮ ಆದಾಯದ ಕುಟುಂಬಗಳನ್ನು ಮನೆ ಮಾಲೀಕತ್ವಕ್ಕೆ ಹೆಜ್ಜೆ ಹಾಕಲು ಪ್ರೋತ್ಸಾಹಿಸುತ್ತದೆ. https://twitter.com/ANI/status/1996801126323441843?s=20
ನವದೆಹಲಿ : ವಿಚ್ಛೇದನದ ನಂತರವೂ ತಂದೆ ತನ್ನ ಮಕ್ಕಳ ಪೋಷಣೆ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಲಾಖ್-ಎ-ಹಸನ್ ಮೂಲಕ ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಒಂದು ಸಂವೇದನಾಶೀಲ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಮಗುವಿನ ಹಕ್ಕುಗಳನ್ನು ರಕ್ಷಿಸುವ ಪರವಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತು. ವಿಚ್ಛೇದನದ ನಂತರ ಮಗುವಿನ ನಿರ್ವಹಣೆ ಮತ್ತು ಇತರ ಅಧಿಕೃತ ದಾಖಲೆಗಳಲ್ಲಿ ತಂದೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಮುಸ್ಲಿಂ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಮಗುವಿನ ಹಕ್ಕುಗಳನ್ನು ರಕ್ಷಿಸಲು ತಂದೆಗೆ ಸ್ಪಷ್ಟ ಆದೇಶಗಳನ್ನು ನೀಡಿತು. ಪಾಸ್ಪೋರ್ಟ್ ನೀಡುವಿಕೆ, ಶಾಲಾ ಪ್ರವೇಶ ಮತ್ತು ಮಗುವಿನ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳಲ್ಲಿ ತಂದೆ ತನ್ನ ಒಪ್ಪಿಗೆ (ಸಹಿ) ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಪ್ರಾಪ್ತ ಮಗುವಿನ ಬ್ಯಾಂಕ್ ಖಾತೆಯ ಪಾಲನೆಯನ್ನು ತಂದೆಯ ಬದಲು ತಾಯಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಬ್ಯಾಂಕಿಗೆ…














