Author: kannadanewsnow57

ನವದೆಹಲಿ : ಭಾರತದಲ್ಲಿ ಡಿಜಿಟಲ್ ಪ್ರಕ್ರಿಯೆಗಳನ್ನು ಸುಲಭ, ವೇಗ ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿಸಲು, ನವೆಂಬರ್ 1, 2025 ರಿಂದ ಐದು ಪ್ರಮುಖ ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಈ ಪ್ರಮುಖ ನವೀಕರಣಗಳು ಸಾರ್ವಜನಿಕರ ಬ್ಯಾಂಕಿಂಗ್, ಆಧಾರ್ ಮತ್ತು ಹಣಕಾಸು ವಹಿವಾಟುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ತಾಂತ್ರಿಕ ಸುಧಾರಣೆಗಳ ಮೂಲಕ ನಾಗರಿಕರಿಗೆ ಸುಲಭ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಿಜಿಟಲ್ ಮಾರ್ಗವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಇದು ಒಂದು ಪ್ರಮುಖ ಪರಿಹಾರವಾಗಿದೆ. ಸಂಪೂರ್ಣ ಆಧಾರ್ ನವೀಕರಣ ಪ್ರಕ್ರಿಯೆಯು ನವೆಂಬರ್ 1 ರಿಂದ ಬದಲಾಗುತ್ತದೆ: ದಾಖಲೆಗಳಿಲ್ಲ, ಆನ್‌ಲೈನ್‌ನಲ್ಲಿ ಮಾತ್ರ: ನೀವು ಈಗ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಯಾವುದೇ ದಾಖಲೆಗಳನ್ನು ಅಪ್‌ಲೋಡ್ ಮಾಡದೆಯೇ ಮನೆಯಿಂದಲೇ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಹಿಂದೆ, ಈ ಸೌಲಭ್ಯವು ಆಧಾರ್ ಸೇವಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿತ್ತು, ಆದರೆ ಈಗ ಅದು 100% ಡಿಜಿಟಲ್ ಮತ್ತು ಅನುಕೂಲಕರವಾಗಿರುತ್ತದೆ. ವೇಗದ ಪರಿಶೀಲನೆ: ದಾಖಲಾತಿ ಕೇಂದ್ರಗಳಲ್ಲಿ…

Read More

ಬೆಂಗಳೂರು :ಆದಾಯ ಪ್ರಮಾಣಪತ್ರವು ವ್ಯಕ್ತಿಯ ಅಥವಾ ಕುಟುಂಬದ ಆದಾಯವನ್ನು ಪ್ರಮಾಣೀಕರಿಸುವ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರಿ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸುವುದು, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಸಬ್ಸಿಡಿಗಳನ್ನು ಪಡೆಯುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೆಚ್ಚಿನ ಭಾರತೀಯ ರಾಜ್ಯಗಳು ನಾಗರಿಕರು ತಮ್ಮ ಅಧಿಕೃತ ಪೋರ್ಟಲ್ಗಳ ಮೂಲಕ ಆನ್ಲೈನ್ನಲ್ಲಿ ಆದಾಯ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಸುಲಭವಾಗುವಂತೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿವೆ. ನಿಮ್ಮ ಆಯಾ ರಾಜ್ಯ ಸರ್ಕಾರಿ ಪೋರ್ಟಲ್ನಿಂದ ಡಿಜಿಟಲ್ ರೂಪದಲ್ಲಿ ಆದಾಯ ಪ್ರಮಾಣಪತ್ರಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ವಿವರವಾದ ಮಾರ್ಗದರ್ಶಿಯನ್ನು ಒದಗಿಸುತ್ತದೆ, ಇದು ಪ್ರಕ್ರಿಯೆಯನ್ನು ತ್ವರಿತ, ಅನುಕೂಲಕರ ಮತ್ತು ಕಾಗದರಹಿತವಾಗಿಸುತ್ತದೆ. ಆದಾಯ ಪ್ರಮಾಣಪತ್ರ ಎಂದರೇನು? ಆದಾಯ ಪ್ರಮಾಣಪತ್ರವು ನಿಮ್ಮ ವಾರ್ಷಿಕ ಆದಾಯವನ್ನು ಪರಿಶೀಲಿಸುವ ಸರ್ಕಾರವು ನೀಡುವ ಕಾನೂನು ದಾಖಲೆಯಾಗಿದೆ. ಇದು ಸಾಮಾನ್ಯವಾಗಿ ವಿದ್ಯಾರ್ಥಿಗಳು, ರೈತರು, ನಿರುದ್ಯೋಗಿ ವ್ಯಕ್ತಿಗಳು ಮತ್ತು ಸರ್ಕಾರಿ ಯೋಜನೆಗಳು ಮತ್ತು ಪ್ರಯೋಜನಗಳಿಗಾಗಿ ಅರ್ಜಿ ಸಲ್ಲಿಸುವ ಜನರಿಗೆ ಅಗತ್ಯವಾಗಿರುತ್ತದೆ. ಆದಾಯ ಪ್ರಮಾಣಪತ್ರಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಪ್ರಯೋಜನಗಳು…

Read More

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕು, ಹೆಸರಘಟ್ಟ ಹೋಬಳಿ, ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ.78 ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಸುಮಾರು 1.5 ಕಿ.ಮೀ ಉದ್ದದ ಡಾಂಬರು ರಸ್ತೆಯನ್ನು ಇಂದು ತೆರವುಗೊಳಿಸಲಾಗಿದ್ದು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ತಿಳಿಸಿದ್ದಾರೆ. ಗ್ರಾಮದ ಸರ್ವೆ ನಂ.76/1, 76/2, 76/3, 76/4, 77/2 ರ ಜಮೀನುಗಳಲ್ಲಿ ಹರಿನಾಥ ರೆಡ್ಡಿ, ಪಂಚಮಿ ಡೆವಲಪರ್ಸ್, ನಂ.1609, 60 ಅಡಿ ರಸ್ತೆ, ‘ಬಿ’ ಬ್ಲಾಕ್, ಸಿ.ಕ್ಯೂ.ಎ.ಎಲ್ ಲೇಔಟ್, ಸಹಕಾರನಗರ, ಬೆಂಗಳೂರು-92 ರವರು ಸುಮಾರು 5-00 ಎಕರೆಯ (ಒಂದು ಎಕರೆಗೆ 1.5 ಕೋಟಿ ಮೌಲ್ಯದಂತೆ ಒಟ್ಟು ಸುಮಾರು 7.5 ಕೋಟಿ ಮೌಲ್ಯದ) ಸುಮಾರು 1.5 ಕಿ.ಮೀ ಉದ್ದದ 60 ಅಡಿ ಅಗಲದ ಅನಧಿಕೃತ ಡಾಂಬರು ರಸ್ತೆಯನ್ನು  ನಿರ್ಮಿಸಿದ್ದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಅವರ ನಿರ್ದೇಶನದಂತೆ,  ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಇಂದು ಯಲಹಂಕ ತಹಶೀಲ್ದಾರ್…

Read More

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ…

Read More

ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಚೆಕ್ ಲೀಸ್ಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ಮಗಳಾಗಿದ್ದಲ್ಲಿ ಅಥವಾ ಸಹೋದರ / ಸಹೋದರಿ ಇದ್ದಲ್ಲಿ ಅವಿವಾಹಿತರಾಗಿರುವ ಬಗ್ಗೆ (ನಿಯಮ 3(2) ರನ್ವಯ ಸಂಬಂಧಿಸಿದ ತಹಶೀಲ್ದಾರರಿಂದ ನೀಡಲಾದ ಪ್ರಮಾಣ ಪತ್ರ ಲಗತ್ತಿಸುವುದು.

Read More

ಬೆಂಗಳೂರು : ಸಂಸ್ಥೆಯ ಬಸ್‌ಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಕರ್ನಾಟಕ ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ. ಸಂಸ್ಥೆಯ ಬಸ್ಸುಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿನಂದಕಗಳ ಉಪಯೋಗದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಹೆಚ್ಚು ಹೆಚ್ಚು ತರಬೇತಿ ನೀಡುವುದು. ಸಂಸ್ಥೆಯ ವಾಹನಗಳ/ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ. 1. ಎಲ್ಲಾ ಪ್ರತಿಷ್ಠಿತ ರಾತ್ರಿ ಸಾರಿಗೆಯ ವಾಹನಗಳಲ್ಲಿ 05 ಲೀಟರ್‌ನ 02 ಅಗ್ನಿನಂದಕಗಳು, ಇತರೆ ವಾಹನಗಳಲ್ಲಿ ಅವಶ್ಯ ಅಗ್ನಿ ನಂದಕಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮೇಲೆ ಕಳುಹಿಸುವುದು. 2. ಪ್ರತಿಷ್ಠಿತ ವಾಹನಗಳಲ್ಲಿ (Fire Detection & Suppression System), FAPS (Fire Alarm & Protection System) ಹಾಗೂ ಸದರಿ ಉಪಕರಣಗಳು ಸದಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಹಾಗೂ ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಅವುಗಳ ಕಾರ್ಯನಿರ್ವಹಣೆ ಬಗ್ಗೆ ತಿಳುವಳಿಕೆ ಮೂಡಿಸುವುದು. 3. FDAS (Fire Detection & Alarm System)…

Read More

ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಚೆಕ್ ಲೀಸ್ಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ಮಗಳಾಗಿದ್ದಲ್ಲಿ ಅಥವಾ ಸಹೋದರ / ಸಹೋದರಿ ಇದ್ದಲ್ಲಿ ಅವಿವಾಹಿತರಾಗಿರುವ ಬಗ್ಗೆ (ನಿಯಮ 3(2) ರನ್ವಯ ಸಂಬಂಧಿಸಿದ ತಹಶೀಲ್ದಾರರಿಂದ ನೀಡಲಾದ ಪ್ರಮಾಣ ಪತ್ರ ಲಗತ್ತಿಸುವುದು.

Read More

ಮಂಡ್ಯ : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತವೊಂದು ಸಂಭವಿಸಿದ್ದು, ಟಿಪ್ಪರ್ ಡಿಕ್ಕಿಯಾಗಿ ಇನ್ನೋವಾ ಕಾರು ಹೊತ್ತಿ ಉರಿದಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಟಿಪ್ಪರ್ ಲಾರಿ ಡಿಕ್ಕಿಯಾಗಿ ಇನ್ನೋವಾ ಕಾರು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ಹುಣಸೂರು ಮೂಲದ ಚಂದ್ರಶೇಖರ್ ಸಜೀವ ದಹವಾಗಿದ್ದಾರೆ. ಕಾರಿನಿಂದ ಹೊರಬಾರಲಾಗದೇ ಚಾಲಕ ಚಂದ್ರಶೇಖರ್ ಸಜೀವ ದಹನವಾಗಿದ್ದಾರೆ. ಸದ್ಯ ಚಂದ್ರಶೇಖರ್ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರೀರಂಗಪಟ್ಟಣ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಂಗಳೂರು :  01ನೇ ನವೆಂಬರ್ 2025ರ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಮಾನ್ಯ ಸಚಿವರುಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 01ನೇ ನವೆಂಬರ್ 2025ರ ಕನ್ನಡ ರಾಜ್ಯೋತ್ಸವ ದಿನದ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಈ ಕೆಳಗೆ ಸೂಚಿಸಿದಂತೆ ಮಾನ್ಯ ಸಚಿವರುಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ದಿನಾಂಕ: 17.09.2025 ರಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್‌ಟ್‌ನ ವಿವಿಧ ಯೋಜನೆಯಡಿಯಲ್ಲಿ ನೊಂದಾಯಿತಗೊಂಡಿರುವ, ಖಾಸಗಿ ಆಸ್ಪತ್ರೆಗಳನ್ನು “ಭಾವಿತ ನೊಂದಾವಣಿ” ಎಂದು ಪರಿಗಣಿಸಿರುವುದರಿಂದ 186 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿರುತ್ತದೆ. ಮುಂದುವರೆದು, ಆಸ್ಪತ್ರೆಗಳು ಹೊಂದಿರಬೇಕಾದ ಮೂಲ ಸೌಕರ್ಯಗಳು ಹಾಗೂ ಇತರೆ ಮಾನದಂಡಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿಕೊಂಡು, ಆಸ್ಪತ್ರೆಗಳೊಂದಿಗೆ ಸೂಕ್ತ ಒಪ್ಪಂದ (MoU) ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸಿರುವ ಅನುಬಂಧದಲ್ಲಿನ 70 ಖಾಸಗಿ ಆಸ್ಪತ್ರೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾವಣೆಗೊಳಿಸಲಾಗಿದೆ. ಸದರಿ ಅಧಿಸೂಚನೆಯನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2020, ದಿನಾಂಕ:02.04.2025 ರಲ್ಲಿ ನೀಡಿರುವ ಅಧಿಕಾರ ಪ್ರತ್ಯಾಯೋಜನೆಯ ಮೇರೆಗೆ ಹೊರಡಿಸಲಾಗಿದೆ.

Read More