Author: kannadanewsnow09

ಬೆಂಗಳೂರು: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಬೌದ್ಧಿಕವಾಗಿ ದಿವಾಳಿಯಾಗಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು, ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ ಅಂತ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯನವರನ್ನು, ಮಲ್ಲಿಕಾರ್ಜುನ ಖರ್ಗೆರವರನ್ನು, ಡಿ.ಕೆ. ಶಿವಕುಮಾರ್ ಅವರನ್ನು ತೇಜೋವದೆ ಮಾಡುವ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ಹಲವಾರು ನಾಯಕರಿಗೆ ಹಲವಾರು ಬಹುಮಾನಗಳನ್ನ ಬಿಜೆಪಿ ಬಳುವಳಿಯಾಗಿ ನೀಡಿರುತ್ತದೆ. ಅಂತಹ ಬಳುವಳಿಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನ ಗಳಿಸಿದ ಛಲವಾದಿ ನಾರಾಯಣಸ್ವಾಮಿ ರವರು, ಮತ್ತೊಮ್ಮೆ ಬಿಜೆಪಿ ಲಾಟರಿ ಯೋಜನೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆದಿರುತ್ತಾರೆ. ಸಂಘಪರಿವಾರದ ಅಣತಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯ ಮುಂದೆ ಸ್ವಾಭಿಮಾನವನ್ನು…

Read More

ಬೆಂಗಳೂರು: ಪ್ರತಿ ವರ್ಷ ಕೊಡ ಮಾಡುವಂತ ಬೆಂಗಳೂರು ಪ್ರೆಸ್ ಕ್ಲಬ್ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಚಿವ ಎಂ.ಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 12ರಂದು ನಡೆಯುವಂತ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರದಾನ ಮಾಡಲಿದ್ದಾರೆ. ಈ ಕುರಿತಂತೆ ಬೆಂಗಳೂರು ಪ್ರೆಸ್ ಕ್ಲಪ್ ಅಧ್ಯಕ್ಷ ಆರ್.ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪತ್ರಿಕೋದ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಬೆಂಗಳೂರು ಪ್ರೆಸ್‌ಕ್ಲಬ್ ಪ್ರತಿ ವರ್ಷ ನೀಡುವ ಪ್ರೆಸ್‌ ಕ್ಲಬ್ ‘ವರ್ಷದ ವ್ಯಕ್ತಿ ಪ್ರಶಸ್ತಿ’, ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ ಗಳನ್ನು ಜನವರಿ 12 ರಂದು ಪ್ರದಾನ ಮಾಡಲಾಗುವುದು ಎಂದಿದ್ದಾರೆ. ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ 50 ಸಾಧಕ ಪತ್ರಕರ್ತರನ್ನು ಗುರುತಿಸಲಾಗಿದೆ. ಇದರ ಜೊತೆಗೆ ಪ್ರೆಸ್‌ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿದ್ದು, ಐವರು ಹಿರಿಯ ಪತ್ರಕರ್ತರು ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ಪ್ರೆಸ್‌ಕ್ಲಬ್‌ ಕಾರ್ಯಕಾರಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಲಾಗಿದ್ದು,  ಬೆಂಗಳೂರು ಅಬಕಾರಿ ಆಯುಕ್ತ ಡಾ.ರವಿಶಂಕರ್ ಜೆ., ಐಎಎಸ್ (ಕೆಎನ್: 2001) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅನ್ಬುಕ್ಕುಮಾರ್, ಐಎಎಸ್ (ಕೆಎನ್: 2004), ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಆಗಿ ನೇಮಿಸಲಾಗಿದೆ. ಬೆಂಗಳೂರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಚುನಾವಣೆಗಳು) ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ (ವೆಚ್ಚ) ವೆಂಕಟೇಶ್ ಕುಮಾರ್ ಆರ್., ಐಎಎಸ್ (ಕೆಎನ್: 2010) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ…

Read More

ಬೆಂಗಳೂರು : ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಪ್ರಯಾಣದರ ಶೇ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ. ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್ ಅವರು ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಪ್ರತಿ ಲೀಟರ್ ಡೀಸೆಲ್ ಗೆ 10-1-2015ರಲ್ಲಿ ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ರೂ60.98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದ್ದು ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ…

Read More

ಬೆಳಗಾವಿ: ಶಾಲೆ ಬಿಟ್ಟ ಮೇಲೆ ಬ್ಯಾಗ್ ತಗೆದುಕೊಂಡು ಬರುವಂತೆ ಸಹಪಾಠಿಗಳು ಹೇಳಿದ ಮಾತನ್ನು ಕೇಳದಿದ್ದಕ್ಕೇ ಸಿಟ್ಟಾಗಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಗೋಕಾಕ್ ನಲ್ಲಿ ನಡೆದಿದೆ. ಬೆಳಗಾವಿಯ ಗೋಕಾಕ್ ವಾಲ್ಮೀಕಿ ಮೈದಾನದಲ್ಲಿ ಶಾಲೆ ಬಿಟ್ಟಾಗ ತನ್ನ ಬ್ಯಾಗ್ ತರುವಂತೆ 10ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳು ತಿಳಿಸಿದ್ದರು. ಆದರೇ ಶಾಲೆ ಬಿಟ್ಟ ನಂತ್ರ ವಿದ್ಯಾರ್ಥಿ ಸಹಪಾಠಿಗಳು ಹೇಳಿದಂತೆ ಅವರ ಬ್ಯಾಗ್ ತರೋದಕ್ಕೆ ನಿರಾಕರಿಸಿ ತಂದಿರಲಿಲ್ಲ. ಇದೇ ಕಾರಣಕ್ಕೆ ಮೈದಾನದಲ್ಲಿ ಜಗಳಕ್ಕೆ ಇಳಿದಂತ ಅಪ್ರಾಪ್ತ ಬಾಲಕರು, ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಕುತ್ತಿಗೆ, ಮೈಮೇಲೆ ಚಾಕು ಇರಿದು ಸ್ಥಳದಿಂದ ಅಪ್ರಾಪ್ತ ಸಹಪಾಠಿಗಳು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿದ್ದಂತ 10ನೇ ತರಗತಿ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗೋಕಾಕ್ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/ https://kannadanewsnow.com/kannada/in-yet-another-big-shock-to-the-people-of-the-state-cabinet-approves-15-hike-in-bus-ticket-prices/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಶೇ.15ರಷ್ಟು ಟಿಕೆಟ್ ದರ ಹೆಚ್ಚಳದ ಬಿಸಿ ಜನವರಿ 15ರಿಂದಲೇ ಜಾರಿಗೊಳ್ಳಲಿದೆ ಅಂತ ಸಚಿವ ಹೆಚ್.ಕೆ ಪಾಟೀಲ್ ಘೋಷಿಸಿದ್ದಾರೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾರಿಗೆ ಬಸ್ ದರ ಏರಿಕೆಗೆ ಸಂಪುಟ ಸಮ್ಮತಿ ನೀಡಲಾಗಿದೆ. ಶೇ.15% ದರ ಏರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು. ಕೆಎಸ್ ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ, ವಾಯುವ್ಯ ಕರ್ನಾಟಕ ಸಂಸ್ಥೆಗಳ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ. ಜನವರಿ 5ರಿಂದ ಹೊಸ ಟಿಕೆಟ್ ದರ ಜಾರಿಯಾಗಲಿದೆ ಎಂದು ತಿಳಿಸಿದರು. 2015ರಂದು ಟಿಕೆಟ್ ದರ ಏರಿಕೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಏರಿಕೆ ಇರಲಿಲ್ಲ. 2015ರಲ್ಲಿ ಡಿಸೇಲ್ ದರ 60.98 ಇತ್ತು. 9.16 ಕೋಟಿ ಡಿಸೇಲ್ ವೆಚ್ಚ ಇತ್ತು. ಸಿಬ್ಬಂದಿ ವೆಚ್ಷವೂ 12 ರಿಂದ 18.36ಕ್ಕೆ ಏರಿದೆ. ಹೆಚ್ಚುವರಿ ಹೊರೆ ಸಾರಿಗೆ ನಿಗಮಗಳ‌ ಮೇಲಿತ್ತು. ಹಾಗಾಗಿ ಬಸ್ ದರ ಏರಿಕೆ ಅನಿವಾರ್ಯವಾಗಿದೆ ಎಂದರು. https://kannadanewsnow.com/kannada/do-you-know-what-minister-ramalinga-reddy-said-about-the-15-per-cent-hike-in-bus-ticket-prices/ https://kannadanewsnow.com/kannada/in-yet-another-big-shock-to-the-people-of-the-state-cabinet-approves-15-hike-in-bus-ticket-prices/

Read More

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಏನು ಹೇಳಿದ್ರು ಅಂತ ಮುಂದೆ ಓದಿ. ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ದರ ಏರಿಸೋದಕ್ಕೆ ಬಿಎಂಟಿಸಿಯಲ್ಲಿ 2014ರಲ್ಲಿ ದರ ಏರಿಸಿದ್ದು. ಅವತ್ತು ಕೇವಲ 30 ರೂಪಾಯಿ ಡಿಸೇಲ್ ಇತ್ತು. 2020ರಲ್ಲಿ ವಾಯವ್ಯ, ಕಲ್ಯಾಣ ಕರ್ನಾಟಕ ಕೆಎಸ್ ಆರ್ ಟಿಸಿ ದರ ಏರಿಸಲಾಗಿತ್ತು. 2020ರಲ್ಲಿ ಪ್ರತಿದಿನ ಡಿಸೇಲ್ 9.16 ಕೋಟಿ ಖರ್ಚು ಮಾಡ್ತಿದ್ವು. ಈಗ 13 ಕೋಟಿ 21 ಲಕ್ಷ ಖರ್ಚಾಗುತ್ತಿದೆ. ಈ ಮೂಲಕ ಒಂದು ದಿನಕ್ಕೆ 10 ಕೋಟಿ ನಮಗೆ ಖರ್ಚಾಗುತ್ತಿದೆ ಎಂದರು. ನಾಲ್ಕು ವಿಭಾಗಗಳಿಂದಲೂ ದರ ಹೆಚ್ಚಳದ ಬಗ್ಗೆ ಕಳೆದ ಐದಾರು ತಿಂಗಳಿಂದ ಪ್ರಸ್ತಾಪ ಬಂದಿತ್ತು. ಈಗ ಶೇ.15 ಒಪ್ಪಿಗೆ ಸಿಕ್ಕಿದೆ. ಒಂದು ಸಾವಿರ ಕೋಟಿ ಬರಬಹುದು. ಆದ್ರೆ ನಷ್ಟದ ಪ್ರಮಾಣ ಕಡಿಮೆ ಆಗುತ್ತೆ. ಬಿಜೆಪಿ ಸರ್ಕಾರ 5900 ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅಷ್ಟು ಸಾಲ…

Read More

ಕಲಬುರ್ಗಿ: ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಂತವರನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಈ ಖೆಡ್ಡಾಕ್ಕೆ ಬಿದ್ದಂತ ವಿಚಾರವನ್ನು ಪತ್ನಿಗೆ ತಿಳಿಸಿ ಬ್ಲಾಕ್ ಮೇಲ್ ಮಾಡಿ, ಲಕ್ಷ ಲಕ್ಷ ಹಣವನ್ನು ವಂಚಕರು ಪೀಕಿದ್ದಾರೆ. ಕಲಬುರ್ಗಿಯ ಸೆನ್ ಠಾಣೆಯ ಪೊಲೀಸ್ ಪೇದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಪೇದೆಯ ಪೋಟೋವನ್ನು ಪತ್ನಿಗೆ ತೋರಿಸಿ 8 ಲಕ್ಷ ಪೀಕಿದ್ದಾರೆ. ಪೂಜ ಹಾಗೂ ಅಮರ್ ಸಿಂಗ್ ಎಂಬಾತ ಸೇರಿ ಸೆನ್ ಠಾಣೆಯ ಪೇದೆ ಹಾಗೂ ಪತ್ನಿಗೆ ಮತ್ತಷ್ಟು ಹಣ ನೀಡದೇ ಇದ್ದರೇ ಹನಿಟ್ರ್ಯಾಪ್ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿದ್ದಾರೆ. 15 ಲಕ್ಷ ಹಣವನ್ನು ಕೊಡುವಂತೆಯೂ ಬೆದರಿಸಿದ್ದಾರೆ. ಹೀಗಾಗಿ ಈ ಬೆದರಿಕೆಗೆ ಹೆದರಿದಂತ ಪೊಲೀಸ್ ಪೇದೆ ಪತ್ನಿ ಆತ್ಮಹತ್ಯೆಗೂ ಯತ್ನಿಸಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಕಲಬುರ್ಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. https://kannadanewsnow.com/kannada/rohit-sharma-ruled-out-of-scg-test-against-australia/ https://kannadanewsnow.com/kannada/isro-to-launch-us-satellite-to-enable-voice-calls-via-smartphones-from-space/

Read More

ಸಿಡ್ನಿ: ನಾಳೆಯಿಂದ (ಶುಕ್ರವಾರ) ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅವರನ್ನು ಭಾರತ ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾಗಿದೆ. ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ನಾಯಕ ಶೋಚನೀಯವಾಗಿ ಫಾರ್ಮ್ನಲ್ಲಿಲ್ಲ ಮತ್ತು ಬ್ಯಾಟಿಂಗ್ ಕ್ರಮಾಂಕದಲ್ಲಿ ರೋಹಿತ್ ಅವರ ಚಲನೆಯೊಂದಿಗೆ ಇಡೀ ತಂಡದ ಸಂಯೋಜನೆಯು ಟಾಸ್ಗೆ ಹೋದ ಕಾರಣ ಈ ಕ್ರಮವು ನಿರೀಕ್ಷಿತ ರೀತಿಯಲ್ಲಿ ಬಂದಿದೆ. ಎರಡನೇ ಮಗುವಿನ ಜನನದಿಂದಾಗಿ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡ ನಂತರ, ರೋಹಿತ್ ಅಡಿಲೇಡ್ನಲ್ಲಿ ನಾಯಕತ್ವಕ್ಕೆ ಮರಳಿದರು. ಆದರೆ ಅಂದಿನಿಂದ ವಿಷಯಗಳು ಆದರ್ಶದಿಂದ ದೂರವಾಗಿವೆ. https://twitter.com/Sahil_Malhotra1/status/1874677531649183987 ಅವರು ಅಡಿಲೇಡ್ ಮತ್ತು ಬ್ರಿಸ್ಬೇನ್ ಪಂದ್ಯಗಳಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದರು. ಆದರೆ ಮೆಲ್ಬೋರ್ನ್ನಲ್ಲಿ ಓಪನರ್ ಮಾಡಲು ನಿರ್ಧರಿಸಿದರು. ಶುಬ್ಮನ್ ಗಿಲ್ ಅವರನ್ನು ಕೈಬಿಡಲು ಮ್ಯಾನೇಜ್ಮೆಂಟ್ಗೆ ಒತ್ತಡ ಹೇರಲಾಯಿತು. ಬ್ಯಾಟ್ನೊಂದಿಗೆ ರೋಹಿತ್ ಅವರ ಕಳಪೆ ರನ್ ಮುಂದುವರಿದಿದ್ದರಿಂದ ಅದು ಹಿನ್ನಡೆಯನ್ನುಂಟು ಮಾಡಿತು. ಇದು ಮಧ್ಯದಲ್ಲಿ ಅವರ ಕೆಳಮಟ್ಟದ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪರಿಣಾಮ…

Read More

ಪ್ರತಿಯೊಬ್ಬರ ಕೋರಿಕೆಯನ್ನು ಪೂರೈಸಲು ನಾವು ವಿವಿಧ ಪ್ರಾರ್ಥನೆಗಳು ಮತ್ತು ಪರಿಹಾರಗಳನ್ನು ನಿರ್ವಹಿಸುತ್ತೇವೆ. ಕೆಲವು ಪ್ರಾರ್ಥನೆಗಳು ಮತ್ತು ಪರಿಹಾರಗಳು ಒಂದೇ ಸಮಯದಲ್ಲಿ ಎರಡೂ ಪ್ರಯೋಜನಗಳನ್ನು ಹೊಂದಬಹುದು. ಈ ರೀತಿಯಾಗಿ, ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಯಾವ ದೀಪವು ಮದುವೆಯ ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ಅದೇ ಸಮಯದಲ್ಲಿ ಮಗುವನ್ನು ಆಶೀರ್ವದಿಸುತ್ತದೆ ಎಂಬುದನ್ನು ನಾವು ನೋಡಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ…

Read More