Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಧಾರುಣ ಘಟನೆ ಎನ್ನುವಂತೆ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಬಳಿಯ ರಂಗಧಾಮ ಕೆರೆಗೆ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃರನ್ನು ತಾಯಿ ಲಾವಣ್ಯ(30), ಮಕ್ಕಳಾದಂತ ನಿಹಾರಿಕಾ (12), ನೇಹಾ (9) ಎಂಬುದಾಗಿ ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ನನ್ನ ಪತ್ನಿ ಆರ್ ಸಿ ಬಿಯ ನಿಖಿಲ್ ಸೋಸಲೆಯನ್ನು ಸಿಎಂ ಸಿದ್ಧರಾಮಯ್ಯ ಆದೇಶ ಅನುಸಾರವಾಗಿ ಕಾನೂನು ಭಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಬಿಡುಗಡೆಗೆ ಆದೇಶಿಸುವಂತೆ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತೆ ಅವರು ಸಿಎಂ ಆದೇಶಾನುಸಾರ ತಮ್ಮ ಪತ್ನಿಯನ್ನು ಕಾನೂನು ಭಾಹಿರವಾಗಿ ಬಂಧನ ಮಾಡಲಾಗಿದೆ. ಹೀಗಾಗಿ ಬಿಡುಗಡೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಸಿಎಂ ಸಿದ್ಧರಾಮಯ್ಯ ಆದೇಶದ ಅನುಸಾರವಾಗಿ ಆರ್ ಸಿ ಬಿಯ ನಿಖಿಲ್ ಸೋಸಲೆ ಬಂಧನ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು ಎಂಬುದಾಗಿ ರಿಟ್ ಅರ್ಜಿಯಲ್ಲಿ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ, ಎರಡು ವರ್ಷದ ಮಗುವಿನೊಂದಿಗೆ ಪ್ರಯಾಣಿಸುವ ವೇಳೆಯಲ್ಲಿ ಕೆ ಐ ಎಎಲ್ ನಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಯಾವುದೇ ತನಿಖೆಯನ್ನೂ ನಡೆಸದೇ ಸಿಎಂ ಆದೇಶಾನುಸಾರ ಬಂಧಿಸಿದ್ದಾರೆ.…

Read More

ಬೆಳಗಾವಿ: 18 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಮೃತಪಟ್ಟ ಕುಟುಂಬದವರಿಗೆ ಕೆಎಸ್ಸಿಎ ಹಾಗೂ ಆರ್ ಸಿಬಿ ಮ್ಯಾನೇಜ್ಮೆಂಟ್ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಸಾವು ನೋವು ತಂದಿದೆ. ಆರ್ ಸಿಬಿ ಹಾಗೂ ಕೆ ಎಸ್ಸಿಎ‌ ಹೆಚ್ಚಿನ ಪರಿಹಾರ ಕೊಡಬೇಕು ಎಂದರು. ಈ ಪ್ರಕರಣದಲ್ಲಿ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ. ನಮ್ಮ ಹಿರಿಯರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ. ರಾಜಕಾರಣಕ್ಕಿಂತ ಘಟನೆ ಯಾಕೆ ಆಯಿತು ಎಂಬುದು ಗೊತ್ತಾಗಬೇಕು. ಇಂಥ ದುರ್ಘಟನೆ ನಡೆದಿದ್ದು ನಿಜಕ್ಕೂ ದುರದೃಷ್ಟಕರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read More

ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE)ಗೆ ಆಗಸ್ಟ್ 3 ರಂದು NEET-PG 2025 ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಪರೀಕ್ಷೆ ನಡೆಸಲು NBE ಎರಡು ತಿಂಗಳಿಗಿಂತ ಹೆಚ್ಚು ಸಮಯ ಕೋರಿದ್ದನ್ನು ಆರಂಭದಲ್ಲಿ ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಆಗಸ್ಟ್ 3 ರಂದು NEET-PG 2025 ಪರೀಕ್ಷೆಯನ್ನು ನಡೆಸಲು ಉಲ್ಲೇಖಿಸಲಾದ ಕಾರಣಗಳು ಸರಿಯಾಗಿವೆ ಎಂದು ಹೇಳಿದೆ. ಆದಾಗ್ಯೂ, NEET-PG 2025 ಪರೀಕ್ಷೆಯನ್ನು ನಡೆಸಲು NBE ಗೆ ಹೆಚ್ಚಿನ ಸಮಯವನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮೇ 30 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕಾಗಿದೆ ಮತ್ತು ಆದ್ದರಿಂದ, ಒಂದೇ ಬಾರಿಗೆ ಪರೀಕ್ಷೆಯನ್ನು ನಡೆಸಲು ಸುಮಾರು 1,000 ಪರೀಕ್ಷಾ ಕೇಂದ್ರಗಳು ಬೇಕಾಗುತ್ತವೆ ಎಂದು NBE ವಾದಿಸಿತು. ಜೂನ್ 15 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಆಗಸ್ಟ್ 3 ರಂದು…

Read More

ಬೆಂಗಳೂರು: ವ್ಯಕ್ತಿಯೊಬ್ಬರು ಕೆಐಎಡಿಬಿಗೆ ಸಲ್ಲಿಸಿದ್ದಂತ ಸ್ಕೆಚ್ ಗೆ ಅನುಮೋದನೆ ನೀಡಲು 1.50 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲಿ ಸೂಪರ್ ವೈಸರ್ ಒಪ್ಪರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ರವಿ ಎಂಬುವರು ಬೆಂಗಳೂರಿನ ಕೆಐಎಡಿಬಿಗೆ ಸ್ಕೆಚ್ ತಯಾರಿಸಿ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಮೋದಿಸೋದಕ್ಕೆ ಕೆಐಎಡಿಬಿ ಸರ್ವೆ ಸೂಪರ್ ವೈಸರ್ ನರೇಂದ್ರ ಕುಮಾರ್ ಎಂಬುವರು 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರವಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಲೋಕಾಯುಕ್ತ ಎಸ್ಪಿ ಡಾ.ವಂಶಿ ಕೃಷ್ಣ ಮೇಲ್ವಿಚಾರಣೆಯಲ್ಲಿ ಪಿಐ ಅನೀಲ್ ಕುಮಾರ್, ಪ್ರಶಾಂತ್, ಅಂಜನ್ ಕುಮಾರ್ ನೇತೃತ್ವದ ತಂಡವು ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಲಂಚದ ಹಣವಾಗಿ 1.50 ಲಕ್ಷ ಪಡೆಯುತ್ತಿದ್ದಂತ ಸಂದರ್ಭದಲ್ಲಿ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಬೆಂಗಳೂರಿನ ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಪಡೆಯುತ್ತಿದ್ದಂತ 1.50 ಲಕ್ಷ ಲಂಚದ ಹಣವನ್ನು ರೆಡ್…

Read More

ಶಿವಮೊಗ್ಗ: ಜಿಲ್ಲೆಯ ಸಾಗರದ ದೇಶಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್ ಮೂರ್ತಿ ಅವರು ಹೃದಯಾಘಾತದಿಂದ ಇಂದು ದಿಢೀರ್ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ದೇಶಿ ಫೌಂಡೇಶನ್ ಸಂಸ್ಥೆ ನಿರ್ಮಿಸಿ, ಸಾಮಾಜಿಕ ಹೋರಾಟದಲ್ಲಿ ತೊಡಗಿದ್ದವರು ಶ್ರೀಧರ್ ಮೂರ್ತಿ. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿ ಪಕ್ಷ ಸೇರಿ ತಮ್ಮ ರಾಜಕೀಯ, ಸಾಮಾಜಿಕ ಕೆಲಸ ಮುಂದುವರೆಸಿದ್ದರು. ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು, ಮನೆಗೆ ವಾಪಾಸ್ ಆದ ವೇಳೆ ಗೇಟಿನ ಮುಂಭಾಗದಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರೀಕ್ಷೆಗೆ ಒಳಪಡಿಸಿದಂತ ವೈದ್ಯರು ಶ್ರೀಧರ್ ಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದೀಗ ಸಾಗರದಲ್ಲಿ ಸಾಮಾಜಿಕ ಹೋರಾಟ ಮಾಡುತ್ತಾ ಗುರುತಿಸಿಕೊಂಡಿದ್ದ ದೇಶೀ ಬ್ರಿಗೇಡ್, ದೇಶಿ ಫೌಂಡೇಶನ್ ಸಂಸ್ಥಾಪಕ ಶ್ರೀಧರ್ ಮೂರ್ತಿ ಇನ್ನಿಲ್ಲವಾಗಿದ್ದಾರೆ.

Read More

ಬೆಂಗಳೂರು : ಚನ್ನೈಸ್ ಅಮಿರ್ತ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (CAIIHM) ಜೂನ್ 04 ಮತ್ತು 05 ರಂದು ತನ್ನ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿತ್ತು, ಇದು ವ್ಯಾಪಕ ಭಾಗವಹಿಸುವಿಕೆಯ ಗಮನವನ್ನು ಸೆಳೆಯಿತು. ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 600 ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಪ್ರಮುಖ ಆತಿಥ್ಯ ಬ್ರ್ಯಾಂಡ್‌ಗಳ ನೇಮಕಾತಿದಾರರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶವನ್ನು ಪಡೆದುಕೊಂಡರು. ಭಾರತದಾದ್ಯಂತ 40 ಕ್ಕೂ ಹೆಚ್ಚು ಸ್ಟಾರ್-ವರ್ಗದ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು, ಅವುಗಳೆಂದರೆ: ಐಟಿಸಿ ಗಾರ್ಡೇನಿಯಾ, ಕಾನ್ರಾಡ್, ಜೆಡಬ್ಲ್ಯೂ ಮ್ಯಾರಿಯಟ್, ತಾಜ್ ಗ್ರೂಪ್ ಆಫ್ ಹೋಟೆಲ್ಸ್, ಗ್ರೀನ್ ಪಾರ್ಕ್, ಹಿಲ್ಟನ್, ತಮಾರಾ, ಚೆನ್ಸೆರಿ ಪೆವಿಲಿಯನ್, ಅಲೋಫ್ಟ್, ಹಾಲಿಡೇ ಇನ್ನ್, ಶಾಂಗ್ರಿ-ಎಲ್ಎ, ಸಿಟ್ರಸ್ ಹೋಟೆಲ್, ಆಹಾರ ಮತ್ತು ಪಾನೀಯ ಸೇವೆ, ಆಹಾರ ಉತ್ಪಾದನೆ, ಫ್ರಂಟ್ ಆಫೀಸ್ ಮತ್ತು ಹೌಸ್ ಕೀಪಿಂಗ್‌ನಂತಹ ವಿವಿಧ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಆಯ್ಕೆ ಮಾಡಲಾಯಿತು. ಹೆಚ್ಚಿನ…

Read More

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು 2025ರ ವಿಶ್ವ ಪರಿಸರ ದಿನವನ್ನು 2025 ಜೂನ್ 5ರಂದು ಒಂಟಿಕೊಪ್ಪಲ್‌ನ ಸ್ಕೌಟ್ಸ್ ಮತ್ತು ಗೈಡ್ಸ್ ಡೆನ್‌ನಲ್ಲಿ ಜರುಗಿದ ಸಮಾರೋಪ ಸಮಾರಂಭದೊಂದಿಗೆ ಸಂಭ್ರಮದಿಂದ ಆಚರಿಸಿತು. ಮೇ 22ರಿಂದ ಜೂನ್ 5ರ ತನಕ ನಡೆದ ಎರಡು ವಾರಗಳ ಅಭಿಯಾನವು ಈ ವರ್ಷದ ಜಾಗತಿಕ ವಿಷಯ – ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಎಂಬುದರಡಿ ನಡೆಯಿತು. ಮುಂಬರುವ ಸಮಾರಂಭವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಡಿಆರ್‌ಎಂ ವಿನಾಯಕ ರಾ ನಾಯಕ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದ ಪ್ರಮುಖ ಆಕರ್ಷಣೆ ಎಂದರೆ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಬಯಲು ನಾಟಕ, ಇದು ಪ್ಲಾಸ್ಟಿಕ್‌ನ ಹಾನಿಗಳನ್ನು ಕುರಿತು ಜಾಗೃತಿ ಮೂಡಿಸಿತು ಮತ್ತು ಶಾಶ್ವತ ಜೀವನಶೈಲಿಗೆ ಪ್ರೋತ್ಸಾಹ ನೀಡಲಾಯಿತು. ಡಿಆರ್‌ಎಂ ಮತ್ತು ಎಡಿಆರ್‌ಎಂ ಸಸಿಗಳನ್ನು ನೆಟ್ಟು ಪರಿಸರ ಸ್ನೇಹಿ ಸಂಕಲ್ಪವನ್ನು ಮರುದೃಢಪಡಿಸಿದರು. ಈ ಕಾರ್ಯಕ್ರಮದಲ್ಲಿ ರೈಲ್ವೆ ಸಿಬ್ಬಂದಿ, ಮಕ್ಕಳು, ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು…

Read More

ಇಂದು 6-6-2025 ರಂದು ವಿಶ್ವ ಜಾಗೃತಿಯ ದಿನದಂದು ಮಾಡಬೇಕಾದ ಪರಿಹಾರಗಳು. ಇಂದು 6 ನೇ ತಿಂಗಳ 6 ನೇ ದಿನ. ಈ ದಿನವನ್ನು ವಿಶ್ವ ಮಂಗಳಕರ ದಿನ ಎಂದು ಹೇಳಲಾಗುತ್ತದೆ. 6 ಎಂಬುದು ಶುಕ್ರ ದೇವರಿಗೆ ಸಂಬಂಧಿಸಿದ ಸಂಖ್ಯೆ. 6 ಎಂದು ಕೇಳಿದಾಗ, ಆರುಮುಗ ನೆನಪಿಗೆ ಬರುತ್ತದೆ. ನಾವು 6 ದೀಪಗಳನ್ನು ಬೆಳಗಿಸುವ ಮೂಲಕ ಮುರುಗ ದೇವರನ್ನು ಪೂಜಿಸುತ್ತೇವೆ. ಆದ್ದರಿಂದ, ಇಂದು ಸುಬ್ರಹ್ಮಣ್ಯ ಸ್ವಾಮಿ ದೇವರನ್ನು ಪೂಜಿಸುವುದರಿಂದಲೂ ವಿಶೇಷ ಫಲಿತಾಂಶಗಳು ದೊರೆಯುತ್ತವೆ. ಶುಕ್ರ ದೇವರನ್ನು ಪೂಜಿಸುವುದರಿಂದಲೂ ವಿಶೇಷ ಫಲಿತಾಂಶಗಳು ದೊರೆಯುತ್ತವೆ. ಶುಕ್ರ ಎಂದರೆ ಕೇವಲ ಹಣವಲ್ಲ. ಗಂಡ-ಹೆಂಡತಿಯ ಸಂಬಂಧ, ಪ್ರೀತಿ, ವಾತ್ಸಲ್ಯ, ಸಂತೋಷ, ಐಷಾರಾಮಿ ಜೀವನ, ರಾಜಮನೆತನದ ಜೀವನ, ಇವೆಲ್ಲವೂ ನಮಗೆ ಶುಕ್ರನ ಮೂಲಕ ಮಾತ್ರ ಲಭ್ಯವಿದೆ. ಹಾಗಾದರೆ, ಇಂದು ಈ ಶುಕ್ರನನ್ನು ವಶೀಕರಿಸಲು, ಇಂದು ಬೆಳಿಗ್ಗೆ ಅಥವಾ ಸಂಜೆ 6:00 ಗಂಟೆಗೆ ನಾವು ಏನು ಮಾಡಬೇಕು? ಆಧ್ಯಾತ್ಮಿಕತೆಗೆ ಸಂಬಂಧಿಸಿದ ಕೆಲವು ಸರಳ ಮಾಹಿತಿಗಳು ಈ ಪೋಸ್ಟ್‌ನಲ್ಲಿ ನಿಮಗಾಗಿ. ಪ್ರಧಾನ ಗುರುಗಳು…

Read More

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಹೆಚ್ಚಿನವರು ಸಾಲದ ಬಾಧೆಯಿಂದ ಬೇಸತ್ತು ಹೋಗಿರುತ್ತಾರೆ. ಸಾಲ ಪಡೆದವರಿಗೆಲ್ಲರಿಗೂ ಕೂಡ ಆದಷ್ಟು ಬೇಗ ಆ ಸಾಲ ತೀರಿಸಿಕೊಳ್ಳುವುದೇ ದೊಡ್ಡ ಕನಸಾಗಿರುತ್ತದೆ. ಸಾಲದಿಂದ ಮುಕ್ತಿಹೊಂದಿದರೆ ಸಾಕೆನಿಸಿರುತ್ತದೆ. ಈ ಮಂತ್ರವನ್ನು ಪಠಿಸಿದರೆ ಸಾಲದ ಬಾಧೆಯು ನಿವಾರಣೆಯಾಗುತ್ತದೆ. ಋಣಮೋಚನ ಮಂಗಳ ಸ್ತೋತ್ರವನ್ನು ಭಗವಾನ್‌ ಶ್ರೀ ಹನುಮಾನ್‌ ನಿಗೆ ಅರ್ಪಿಸಲಾಗಿದೆ. ಜೀವನದಲ್ಲಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದೇ ಸಾಲವನ್ನು ಮಾಡಿಕೊಂಡವರು ಸಾಲ ಆದಷ್ಟು ಬೇಗ ತೀರಿಸುವಂತಾಗಲು ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಸ್ತೋತ್ರ ಪಠಿಸಿದರೆ ಸಾಲದ ಭಾದೆಯು ಕಡಿಮೆಯಾಗುತ್ತದೆ. ಋಣ ಬಾಧೆಯನ್ನು ತಪ್ಪಿಸಲು ಇದು ಅತ್ಯಂತ ಸುಲಭ ಮತ್ತು ಸರಳ ಪರಿಹಾರ. ಶ್ರೀ ಋಣಮೋಚನ ಮಂಗಳ ಸ್ತೋತ್ರ ಶ್ರೀ ಋಣಮೋಚನ ಮಂಗಳ ಸ್ತೋತ್ರವನ್ನು ಪ್ರತಿದಿನವು ತಪ್ಪದೇ…

Read More