Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ… ಗಾಂಧಿನಗರವನ್ನು ‘ಗುಂಡಿ ನಗರ’ ಮಾಡಿರುವ ಮಿಸ್ಟರ್ ‘ಗುಂಡಿ’ರಾವ್; ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಆರೋಗ್ಯ ಇಲಾಖೆಯನ್ನೇ ಐಸಿಯುನಲ್ಲಿಟ್ಟಿದ್ದೀರಲ್ಲವೇ ಈ ಸಾಧನೆಗೆ ಯಾವ ಪ್ರಶಸ್ತಿ, ಕಿರೀಟ ಕೊಡಬೇಕು? ಎಂಬುದಾಗಿ ಜೆಡಿಎಸ್ ಪ್ರಶ್ನಿಸಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹದಗೆಟ್ಟ ಆರೋಗ್ಯ ಇಲಾಖೆಯ ಸಚಿವರೇ.. ಜನರಿಗೆ ಉತ್ತಮ ಆರೋಗ್ಯ, ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಕೈಲಾಗದೇ ಬೆಂಗಳೂರನ್ನು ‘ಡೆಂಘೀಯೂರು’ ಮಾಡಿದ ಭ್ರಷ್ಟ ಸರ್ಕಾರ ನಿಮ್ಮದು ಎಂದು ವಾಗ್ಧಾಳಿ ನಡೆಸಿದೆ. ಭ್ರಷ್ಟಚಾರದ ಆರೋಪದಲ್ಲಿ ಪ್ರಾಸಿಕ್ಯೂಷನ್ ಎದುರಿಸುತ್ತಿರುವ ಮೂಡರಾಮಯ್ಯನ ಪರವಾಗಿ ಊಳಿಡುತ್ತಾ ನಿಮ್ಮ ನರಿಬುದ್ಧಿ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದೆ. ಮುಖ್ಯಮಂತ್ರಿಗಳಿಗೆ “ವೈಟ್ನರ್” ಸಪ್ಲೈ ಮಾಡುವುದನ್ನು ಬಿಟ್ಟು ನಿಮ್ಮ ಆರೋಗ್ಯ ಇಲಾಖೆ ಬಗ್ಗೆ ಇನ್ನಾದರೂ ಗಮನ ಹರಿಸಿ.. ನಿಮ್ಮನ್ನು ಆಯ್ಕೆ ಮಾಡಿದ ಜನರ ಪ್ರಾಣ ಉಳಿಸಿ.. ಅವರ ಋಣ ತೀರಿಸಿ ಅಂತ ಆಗ್ರಹಿಸಿದೆ. https://twitter.com/JanataDal_S/status/1826885584037507200 https://kannadanewsnow.com/kannada/dgca-imposes-rs-1-crore-penalties-on-air-india/ https://kannadanewsnow.com/kannada/bengaluru-power-outages-in-these-areas-on-august-25/
ನವದೆಹಲಿ: ಅರ್ಹರಲ್ಲದ ಸಿಬ್ಬಂದಿಯೊಂದಿಗೆ ವಿಮಾನವನ್ನು ನಿರ್ವಹಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (Directorate General of Civil Aviation – DGCA) ಏರ್ ಇಂಡಿಯಾಕ್ಕೆ 95 ಲಕ್ಷ ರೂ.ಗಳ ದಂಡ ವಿಧಿಸಿದೆ. ಇದಲ್ಲದೆ, ಡಿಜಿಸಿಎ ಏರ್ ಇಂಡಿಯಾದ ನಿರ್ದೇಶಕ ಕಾರ್ಯಾಚರಣೆ ಮತ್ತು ನಿರ್ದೇಶಕರಿಗೆ ಕ್ರಮವಾಗಿ 6 ಲಕ್ಷ ಮತ್ತು 3 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ. ಜುಲೈ 10, 2024 ರಂದು ಏರ್ ಇಂಡಿಯಾ ಸಲ್ಲಿಸಿದ ಸ್ವಯಂಪ್ರೇರಿತ ವರದಿಯ ಮೂಲಕ ಈ ಘಟನೆ ಡಿಜಿಸಿಎ ಗಮನಕ್ಕೆ ಬಂದಿದೆ. https://kannadanewsnow.com/kannada/upsc-cds-2-admit-card-2024-released/ https://kannadanewsnow.com/kannada/bengaluru-power-outages-in-these-areas-on-august-25/
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission -UPSC) 2024ನೇ ಸಾಲಿನ ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಎಕ್ಸಾಮಿನೇಷನ್ 2 ಪರೀಕ್ಷೆಯನ್ನು ಪ್ರಕಟಿಸಿದೆ. ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆ 2024 ಕ್ಕೆ ( UPSC CDS 2 exam 2024 ) ಅರ್ಜಿ ಸಲ್ಲಿಸಿದ ಎಲ್ಲರೂ ಲಾಗಿನ್ ಪುಟದಲ್ಲಿ ತಮ್ಮ ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ಬಳಸಿಕೊಂಡು ತಮ್ಮ ಕಾಲ್ ಲೆಟರ್ಗಳನ್ನು ಡೌನ್ಲೋಡ್ ಮಾಡಬಹುದು. ಯುಪಿಎಸ್ಸಿ ಸಿಡಿಎಸ್ 2 2024 ಪರೀಕ್ಷೆಯ ಪ್ರವೇಶ ಪತ್ರದ ಲಿಂಕ್ ಅನ್ನು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ನಲ್ಲಿ upsc.gov.in ಪಡೆಯಬಹುದು. ಅಧಿಕೃತ ಪ್ರಕಟಣೆಯ ಪ್ರಕಾರ, ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆ 2024 ಅನ್ನು ಸೆಪ್ಟೆಂಬರ್ 1, 2024 ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ಕಾಲ್ ಲೆಟರ್ಗಳನ್ನು ಡೌನ್ಲೋಡ್ ಮಾಡಲು ಮತ್ತು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಪ್ರಿಂಟ್ಔಟ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ…
ಶಿವಮೊಗ್ಗ : ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂದು ಒಂದು ದಿನ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಶ್ರೀ ಕೃಷ್ಣ ಜಯಂತಿ ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ)ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆ.26 ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಏರ್ಪಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್…
ನವದೆಹಲಿ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಭಾರತೀಯ ಪ್ರಯಾಣಿಕರ ಬಸ್ ಉರುಳಿದ ಪರಿಣಾಮ 14 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. 40 ಭಾರತೀಯರನ್ನು ಹೊತ್ತ ಬಸ್ ಪೊಖಾರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಉತ್ತರ ಪ್ರದೇಶದ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಉರುಳಿ ಬಿದ್ದಿದೆ ಎಂದು ತನಾಹುನ್ ಜಿಲ್ಲೆಯ ಡಿಎಸ್ಪಿ ದೀಪ್ಕುಮಾರ್ ರಾಯ ತಿಳಿಸಿದ್ದಾರೆ. ಭಾರತೀಯ ಪ್ರಯಾಣಿಕರು ಪೋಖಾರಾದ ಮಜೇರಿ ರೆಸಾರ್ಟ್ನಲ್ಲಿ ತಂಗಿದ್ದರು. ಬಸ್ ಶುಕ್ರವಾರ ಬೆಳಿಗ್ಗೆ ಪೋಖಾರಾದಿಂದ ಕಠ್ಮಂಡುವಿಗೆ ಹೊರಟಿತು. https://twitter.com/ANI/status/1826879461716787220
ಬೆಂಗಳೂರು: 220/66/11ಕೆವಿ ಎಸ್ಆರ್ಎಸ್ ಪೀಣ್ಯ ದಿನಾಂಕ 25.08.2024 ರಂದು 09:30ಗಂಟೆಗಳಿಂದ 15:30ಗಂಟೆಗಳವರೆಗೆ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಗೃಹಲಕ್ಷ್ಮಿ-ಅಪಾರ್ಟ್ಮೆಂಟ್, ಎಸ್ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿ.ಜಿ ಪಾಳ್ಯ, ಇಸ್ರೋ, ನಾರಾಯಣಪುರ, ಎನ್.ಟಿ.ಟಿ.ಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ ಕರೆಂಟ್ ಇರೋದಿಲ್ಲ. ಇನ್ನೂ ಆಕಾಶ್ ಥಿಯೇಟರ್ ರಸ್ತೆ, ವಿ ಇಗ್ನಾನ ಪಬ್ಲಿಕ್ ಸರ್ಕಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆ ಗ್ರಾಮ ಭಾಗಶಃ ಪೀಣ್ಯ 4 ನೇ ಹಂತ, 4 ನೇ ಮುಖ್ಯ, 8 ನೇ ಅಡ್ಡ ಮತ್ತು ಸುತ್ತಮುತ್ತಲಿನ…
ಗೃಹಪ್ರವೇಶಕ್ಕೆ ಮನೆ ಯಜಮಾನನ ಜಾತಕವನ್ನು ನೋಡಿ ಮುಹೂರ್ತವನ್ನು ನಿಷ್ಕರ್ಷೆ ಮಾಡಬೇಕು ಆದರೆ ಸ್ಥೂಲವಾಗಿ ವಾರ ತಿಥಿ ನಕ್ಷತ್ರ ಲಗ್ನ ಕಾಲ ದ್ವಾದಶ ಸುದ್ದಿ ಬಗ್ಗೆ ಸ್ವಲ್ಪ ತಿಳುವಳಿಕೆ ಅಗತ್ಯ. ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ವೈಶಾಖ ಮಾಸದಲ್ಲಿ ಗೃಹಪ್ರವೇಶ ನಡೆಸಿದ್ದಲ್ಲಿ ಬಹು ಪ್ರಶಸ್ತ ಪ್ರದವಾದದ್ದು. ಜೇಷ್ಠ ಮಾಸವು ಶುಭ ಪಾಲ್ಗುಣ ಸಂಪತ್ಕರ ಮಾಘಮಾಸದಲ್ಲಿ ಮತ್ತು ಶ್ರಾವಣ ಮಾಸದಲ್ಲಿ ಸುಖ ಸಂತೋಷ ಮತ್ತು ಧಾನ್ಯ ಸಮೃದ್ಧಿ ವಾರಗಳಲ್ಲಿ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಸಂಪತ್ಕರ ತಿಥಿಗಳಲ್ಲಿ ತೃತಿಯ ಪಂಚಮಿ ಸಪ್ತಮಿ ದಶಮಿ ತ್ರಯೋದಶಿ ಶ್ರೇಷ್ಠ. ರಕ್ತ ತಿಥಿ ದಗ್ದ ಯೋಗ ತಿಥಿಗಳು ಭದ್ರ ಕರಣ ಶುಕ್ಲ ಷಷ್ಟಿಗಳು ಬಹುಳ ಏಕಾದಶಿ ಮೊದಲ ಶುಕ್ಲ ಪ್ರತಿಪದಿಯ ವರೆಗೆ ಪ್ರದೋಷಗಳು ಸೂರ್ಯನನ್ನು ತನಗೆದುರಿಗಿರುವ ಶುಕ್ರನನ್ನು ಬಿಟ್ಟು ಗೃಹಪ್ರವೇಶ ಮಾಡತಕ್ಕದ್ದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ…
ನವದೆಹಲಿ: 40 ಪ್ರಯಾಣಿಕರನ್ನು ಹೊತ್ತ ಭಾರತೀಯ ಪ್ರಯಾಣಿಕರ ಬಸ್ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ನೇಪಾಳ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಯುಪಿ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿರುವ ಬಸ್ ನದಿಗೆ ಬಿದ್ದು ನದಿಯ ದಡದಲ್ಲಿದೆ ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ಖಚಿತಪಡಿಸಿದ್ದಾರೆ. ಅಧಿಕಾರಿಯ ಪ್ರಕಾರ, ಬಸ್ ಪೋಖರಾದಿಂದ ಕಠ್ಮಂಡುವಿಗೆ ಹೋಗುತ್ತಿತ್ತು. 40 ಭಾರತೀಯ ಪ್ರಯಾಣಿಕರು ಬಸ್ ನಲ್ಲಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬೆಂಗಳೂರು; ರಾಜ್ಯ ಸರ್ಕಾರದಿಂದ ಕರ್ನಾಟಕ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (ರೇರಾ) ಮುಖ್ಯಸ್ಥರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ರ ಸೆಕ್ಷನ್ 22 ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017 ರ ನಿಯಮ 18 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಿಶೋರ್ ಚಂದ್ರ ಎಚ್.ಸಿ ಅವರ ಅಧಿಕಾರಾವಧಿ ಪೂರ್ಣಗೊಂಡ ಕಾರಣ ಖಾಲಿ ಇರುವ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಐಎಎಸ್ ರಾಕೇಶ್ ಸಿಂಗ್ ಅವರನ್ನು ನೇಮಕ ಮಾಡಲಾಗಿರುತ್ತದೆ ಎಂದಿದ್ದಾರೆ. 2) ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಹೀಗೆ ನೇಮಕಗೊಂಡ ವ್ಯಕ್ತಿಯು, ಷರತ್ತುಬದ್ಧವಾಗಿ, ರಾಜ್ಯ / ಕೇಂದ್ರ ಸರ್ಕಾರ ಅಥವಾ ಯಾವುದೇ ಸಾರ್ವಜನಿಕ ಉದ್ಯಮ ಅಥವಾ ಅವರ…
ಬೆಂಗಳೂರು: ನಗರದಲ್ಲಿ ರೋಡ್ ರೇಜ್ ಕೇಸ್ ತಡೆಗಟ್ಟುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಆದರೇ ಅದಕ್ಕೂ ಕ್ಯಾರೆ ಎನ್ನದಂತೆ ಇಂದು ಬೈಕ್ ಸವಾರನೊಬ್ಬ ರಸ್ತೆ ಬಿಡು ಅಂತ ಹಾರನ್ ಮಾಡಿದ್ದಕ್ಕೆ ಕಾರು ಚಾಲಕನ ಮೇಲೆ ದಾದಾಗಿರಿ ನಡೆಸಿ, ಅವಾಜ್ ಹಾಕಿರುವಂತ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ರೋಡ್ ರೇಜ್ ಕೇಸ್ ನಡೆದಿದೆ. ಕಾರಿಗೆ ಸೈಡ್ ಬಿಡದೇ ರಸ್ತೆ ಮಧ್ಯದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಿದ್ದಕ್ಕೆ ಸೈಡ್ ಬಿಡುವಂತೆ ಕಾರು ಚಾಲಕ ಹಾರನ್ ಮಾಡಿದ್ದಾನೆ. ಇಷ್ಟಕ್ಕೇ ಕುಪಿತಗೊಂಡ ಬೈಕ್ ಸವಾರ, ರಸ್ತೆ ಮಧ್ಯದಲ್ಲೇ ಬೈಕ್ ನಿಲ್ಲಿಸಿ ಕಾರು ಚಾಲಕನ ಮೇಲೆ ದಾದಾಗಿರಿ ಪ್ರದರ್ಶನ ಮಾಡಿರುವುದಾಗಿ ತಿಳಿದು ಬಂದಿದೆ. ನಾನು ಲೋಕಸ್ ನನಗೆ ಹಾರನ್ ಹೊಡಿತೀಯ ಅಂತ ಅವಾಜ್ ಹಾಕಿರುವಂತ ಪುಂಡ, ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ, ಟ್ರಾಫಿಕ್ ಜಾಮ್ ಕೂಡ ಮಾಡಿ ದಾದಾಗಿರಿ ಮೆರೆದಿದ್ದಾನೆ. ಇದರಿಂದ ಬೇಸತ್ತಂತ ಜನರು ಬಾಗಲಗುಂಟೆ ಠಾಣೆಗೆ ಕೆರೆ ಮಾಡಿ…