Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ಇಂದು ಬೆಳಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ವಿವರ ಪಡೆದರು. ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು. ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೂ ಸಿಎಂ ಚರ್ಚಿಸಿದರು. https://kannadanewsnow.com/kannada/steps-will-be-taken-for-all-round-development-of-chandragutti-temple-minister-madhu-bangarappa/ https://kannadanewsnow.com/kannada/another-feather-in-the-cap-for-ksrtc-the-countrys-leaders-of-road-transport-2024-award/
ಬೆಂಗಳೂರು: ನಗರಕ್ಕೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬಂದಂತ ಮಾಂಸದ ಬಗ್ಗೆ ಭಾರೀ ವಿವಾದವೇ ಉಂಟಾಗಿತ್ತು. ನಾಯಿ ಮಾಂಸ ಎಂಬುದಾಗಿ ಅನೇಕರು ವಾದಿಸಿದ್ದರೇ, ಕುರಿ ಮಾಂಸ ಅಂತ ಕೆಲವರು. ರಾಜ್ಯ ಸರ್ಕಾರದ ಸರ್ಕಾರಿ ಲ್ಯಾಬ್ ರಿಪೋಸ್ಟ್ ಕೂಡ ಕುರಿ ಮಾಂಸ ಎಂಬುದಾಗಿ ಸ್ಪಷ್ಟ ಪಡಿಸಿತ್ತು. ಈಗ ಹೈದರಾಬಾದ್ ಲ್ಯಾಬ್ ವರದಿ ಕೂಡ ಬಂದಿದೆ. ಹಾಗಾದ್ರೇ ನಾಯಿ ಅಥವಾ ಕುರಿ ಮಾಂಸನ ಎನ್ನುವ ಬಗ್ಗೆ ಮುಂದೆ ಓದಿ. ಆಹಾರ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ಈಗಾಗಲೇ ಬೆಂಗಳೂರಿಗೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬಂದಂತ ಕುರಿ ಮಾಂಸ ಎಂಬುದಾಗಿ ಲ್ಯಾಬ್ ರಿಪೋಸ್ಟ್ ವರದಿಯಿಂದ ತಿಳಿದು ಬಂದಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದರು. ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್ ರಜಾಕ್ ಅವರು ಕುರಿ ಮಾಂಸದಲ್ಲಿ ನಾಯಿ ಮಾಂಸ ಬೆರೆಸಿದ್ದಾರೆ ಎಂಬುದಾಗಿ ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು. ಹೀಗೆ ಬೆಂಗಳೂರಿಗೆ ಬಂದಿದ್ದಂತ ಮಾಂಸವನ್ನು ಆರೋಗ್ಯ ಇಲಾಖೆಯಿಂದ ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ನಾಯಿ ಮಾಂಸ ಅಲ್ಲ. ಕುರಿ ಮಾಂಸ ಅಂತ ಲ್ಯಾಬ್ ರಿಪೋರ್ಟ್…
ನವದೆಹಲಿ: ಸೆಬಿ ಅಧ್ಯಕ್ಷ ಮಾಧಾಬಿ ಪುರಿ ಬುಚ್ ವಿರುದ್ಧ ಮಾಡಲಾಗಿರುವ ಹೊಸ ಆರೋಪಗಳನ್ನು ಅದಾನಿ ಗ್ರೂಪ್ “ದುರುದ್ದೇಶಪೂರಿತ, ಕಿಡಿಗೇಡಿ ಮತ್ತು ಕುತಂತ್ರ” ಎಂದು ನಿರಾಕರಿಸಿದೆ. “ಹಿಂಡೆನ್ಬರ್ಗ್ ಅವರ ಇತ್ತೀಚಿನ ಆರೋಪಗಳು ದುರುದ್ದೇಶಪೂರಿತ, ಕಿಡಿಗೇಡಿ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಕುತಂತ್ರದ ಆಯ್ಕೆಗಳಾಗಿವೆ. ವಾಸ್ತವಾಂಶಗಳು ಮತ್ತು ಕಾನೂನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ವೈಯಕ್ತಿಕ ಲಾಭಕೋರತನಕ್ಕಾಗಿ ಪೂರ್ವನಿರ್ಧರಿತ ತೀರ್ಮಾನಗಳಿಗೆ ಬರುತ್ತವೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. “ಅದಾನಿ ಗ್ರೂಪ್ ವಿರುದ್ಧದ ಈ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ, ಇದು ಸಮಗ್ರ ತನಿಖೆ, ಆಧಾರರಹಿತವೆಂದು ಸಾಬೀತಾಗಿರುವ ಮತ್ತು 2024 ರ ಜನವರಿಯಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ನಿಂದ ಈಗಾಗಲೇ ವಜಾಗೊಳಿಸಲ್ಪಟ್ಟ ಅಪಖ್ಯಾತಿಗೊಳಗಾದ ಹೇಳಿಕೆಗಳ ಮರುಬಳಕೆಯಾಗಿದೆ” ಎಂದು ಅದು ಹೇಳಿದೆ. ಹಿಂಡೆನ್ಬರ್ಗ್ ರಿಸರ್ಚ್ನ ಇತ್ತೀಚಿನ ವರದಿಯ ಬಗ್ಗೆ ಅದಾನಿ ಗ್ರೂಪ್ ಹೇಳಿಕೆ ನೀಡಿದೆ. ಹಿಂಡೆನ್ಬರ್ಗ್ನ ಇತ್ತೀಚಿನ ಆರೋಪಗಳು ದುರುದ್ದೇಶಪೂರಿತ, ಕಿಡಿಗೇಡಿ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಕುತಂತ್ರದ ಆಯ್ಕೆಗಳಾಗಿವೆ. ವಾಸ್ತವಾಂಶಗಳು ಮತ್ತು ಕಾನೂನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ವೈಯಕ್ತಿಕ ಲಾಭಕೋರತನಕ್ಕಾಗಿ ಪೂರ್ವನಿರ್ಧರಿತ…
ಬೆಂಗಳೂರು: ಕೇರಳದ ವಯನಾಡಿನಲ್ಲಿ ಉಂಟಾದಂತ ಭೂ ಕುಸಿತದ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕರ್ನಾಟಕದಲ್ಲಿ ಭೂ ಕುರಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತದ ಪರಿಣಾಮಗಳನ್ನು ತಗ್ಗಿಸುವ ಸಂಬಂಧ ಅಭಿವೃದ್ಧಿ ಕೇಂದ್ರಿತ ಚಟುವಟಿಕೆ ನಿಯಂತ್ರಿಸುವ ನೀತಿಯೊಂದನ್ನು ರೂಪಿಸಲಾಗುತ್ತಿದೆ, ಗುಡ್ಡಗಳನ್ನು ಕಡಿದು ನಿರ್ಮಾಣ ಚಟುವಟಿಕೆ ಕೈಗೊಳ್ಳುವುದು ಸೇರಿ ಹಲವು ಅವೈಜ್ಞಾನಿಕ ಅಭಿವೃದ್ಧಿಗೆ ನಿರ್ಬಂಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಗುಡ್ಡಗಳನ್ನು 90 ಡಿಗ್ರಿಯಲ್ಲಿ ಲಂಬವಾಗಿ ಕತ್ತರಿಸುವುದನ್ನು ತಡೆಯುವುದು, ಗುಡ್ಡದಿಂದ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವುದು ಸೇರಿ ನಿರ್ಮಾಣ ಪರವಾನಗಿಯಲ್ಲಿ ಷರತ್ತು ವಿಧಿಸುವುದು, ಅನಧಿಕೃತ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವುದು ಒಳಗೊಂಡಂತೆ ಹಲವು ಉಪಕ್ರಮಗಳು ನೀತಿಯಲ್ಲಿ ಇರಲಿವೆ ಎಂದು ಅವರು ಹೇಳಿದ್ದಾರೆ. https://twitter.com/KarnatakaVarthe/status/1822223370655605163 https://kannadanewsnow.com/kannada/steps-will-be-taken-for-all-round-development-of-chandragutti-temple-minister-madhu-bangarappa/ https://kannadanewsnow.com/kannada/wayanad-tragedy-minister-m-b-patil-urges-businessmen-to-lend-a-helping-hand/ https://kannadanewsnow.com/kannada/tungabhadra-dam-crest-gate-washed-away-deputy-cm-dk-shivakumar-to-meet-today/
ಬೆಂಗಳೂರು: ಕಂಡುಕೇಳರಿಯದ ಭೂಕುಸಿತದಿಂದ ನಲುಗಿರುವ ಕೇರಳದ ವಯನಾಡ್ ಜನತೆಯ ನೆರವಿಗೆ ರಾಜ್ಯದ ಕೈಗಾರಿಕೋದ್ಯಮಿಗಳು ಧಾವಿಸಿ, ಸಹಾಯಹಸ್ತ ಚಾಚಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮನವಿ ಮಾಡಿದ್ದಾರೆ. ಈ ಬಗ್ಗೆ ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಸಂಬಂಧ ಯಾವುದೇ ಮಾಹಿತಿ/ಮಾರ್ಗದರ್ಶನ ಬೇಕಾದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರನ್ನು ದೂರವಾಣಿ ಸಂಖ್ಯೆ 080-22386796 ಅಥವಾ ಮಿಂಚಂಚೆ officeofdicommissioner@gmail.com ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ವಯನಾಡ್ ದುರಂತದಲ್ಲಿ 412 ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ 138 ಜನ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮಲೋಕವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಉದ್ಯಮಿಗಳು ಸಂತ್ರಸ್ತರ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಸಹಾಯ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ. ನೆರೆಯ ರಾಜ್ಯವು ಈಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಆ…
ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಕಾಫಿ ಔಟ್ ಲೆಟ್ ನ ಕಸದ ಬುಟ್ಟಿಯೊಳಗೆ ಸುಮಾರು ಎರಡು ಗಂಟೆಗಳ ಕಾಲ ವೀಡಿಯೊ ರೆಕಾರ್ಡಿಂಗ್ ಮಾಡಿದಂತ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಸಂಬಂಧ ಕೆಫೆ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಔಟ್ ಲೆಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶೌಚಾಲಯದಲ್ಲಿ ಫೋನ್ ಅಡಗಿಸಿಟ್ಟಿದ್ದಾರೆ ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ ಇನ್ಸ್ಟಾಗ್ರಾಮ್ ಹ್ಯಾಂಡಲ್ ಈ ಆಘಾತಕಾರಿ ಘಟನೆಯನ್ನು ವಿವರಿಸಿದ ಕಥೆಯನ್ನು ಪೋಸ್ಟ್ ಮಾಡಿದೆ. “ನಾನು ಬೆಂಗಳೂರಿನ ಥರ್ಡ್ ವೇವ್ ಕಾಫಿ ಔಟ್ ಲೆಟ್ ನಲ್ಲಿದ್ದೆ. ಶೌಚಾಲಯದ ಸೀಟಿಗೆ ಎದುರಾಗಿ ಸುಮಾರು 2 ಗಂಟೆಗಳ ಕಾಲ ವೀಡಿಯೊ ರೆಕಾರ್ಡಿಂಗ್ ಮಾಡುತ್ತಿರುವ ಫೋನ್ ಅನ್ನು ಮಹಿಳೆಯೊಬ್ಬರು ಕಸದ ಬುಟ್ಟಿಯಲ್ಲಿ ಅಡಗಿಸಿಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಇದು ಫ್ಲೈಟ್ ಮೋಡ್ನಲ್ಲಿತ್ತು, ಆದ್ದರಿಂದ ಅದು ಯಾವುದೇ ಶಬ್ದವನ್ನು ಮಾಡುವುದಿಲ್ಲ” ಎಂದು ಕಥೆಯಲ್ಲಿ ತಿಳಿಸಲಾಗಿದೆ. ಕ್ಯಾಮೆರಾವನ್ನು ಮಾತ್ರ ಬಹಿರಂಗಪಡಿಸಲು ಫೋನ್ ಅನ್ನು…
ರಾಯಚೂರು: ಕರ್ನಾಟಕದಲ್ಲಿ ವಾಸಿಸುತ್ತಿದ್ದಂತ ಐವರು ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಪ್ ಗಳಲ್ಲಿ ಐವರು ಬಾಂಗ್ಲಾ ನಿರಾಶ್ರಿತರು ವಾಸಿಸುತ್ತಿದ್ದರು. ಅವರಿಗೆ ಸಿಎಎ ಅಡಿಯಲ್ಲಿ ಈಗ ಭಾರತೀಯ ಪೌರತ್ವ ದೊರೆತಿದೆ. ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಗ್ ನ ನಿವಾಸಿಗಳಾದಂತ ರಾಮಕೃಷ್ಣನ್ ಅಭಿಕರಿ, ಸುಕುಮಾರ, ಮೊಂಡಲ್, ಬಿ.ಪ್ರಸಾದ ಗೋಲ್ಡರ್, ಜಯಂತ್ ಮೊಂಡಲ್ ಹಾಗೂ ಅದ್ವಿತ ಎಂಬುವರಿಗೆ ಕೇಂದ್ರ ಗೃಹ ಇಲಾಖೆಯಿಂದ ಪೌರತ್ವ ನೀಡಿದಂತ ಸೂಚನ ಪತ್ರವನ್ನು ನೀಡಲಾಗಿದೆ. ಅಂದಹಾಗೇ 1971ರ ಬಾಂಗ್ಲಾದೇಶ ವಿಮೋಚನಾ ವೇಳೆ ಬಾಂಗ್ಲಾ ಹಾಗೂ ಬರ್ಮಾ ವಲಸಿಗರು ಭಾರತಕ್ಕೆ ಆಗಮಿಸಿದ್ದರು. ಅವರು ಅಲ್ಲಿಂದ ಇಲ್ಲಿಯೇ ಆಶ್ರಯ ಪಡೆದುಕೊಂಡಿದ್ದರು. ಹೀಗೆ ಬಂದಂತ ಬಾಂಗ್ಲಾ ವಲಸಿಗರಲ್ಲಿ ಸಿಂಧನೂರು ತಾಲ್ಲೂಕಿನಲ್ಲೇ ಸುಮಾರು 932 ಕುಟುಂಬಗಳಿವೆ. ಅವರಿಗೆ 5 ಎಕರೆ ಜಮೀನು ನೀಡಲಾಗಿತ್ತು. ಈ ಕುಟುಂಬಗಳಿಗೆ ಯಾವುದೇ ಸೌಲಭ್ಯ ನೀಡಲಾಗಿರಲಿಲ್ಲ. ಕಳೆದ 40 ವರ್ಷಗಳಿಂದ ಅರ್ಜಿ ಹಾಕುತ್ತಲೇ ಬಂದಿದ್ದರು.…
ನೀವು ಟ್ವಿಟರ್ ಅನ್ನು ಬಳಸಿದ್ದರೆ (ಅದು X ಗೆ ಬದಲಾಗುವ ಮೊದಲು), ನೀವು ಬ್ಲೂ ಟಿಕ್ ಬಗ್ಗೆ ತಿಳಿದಿರಬೇಕು. ಇದನ್ನು ಗಮನಾರ್ಹ ಖಾತೆಗಳಿಗೆ ಮಾತ್ರ ನೀಡಲಾಗುತ್ತಿತ್ತು ಮತ್ತು ಪರಿಶೀಲಿಸಿದ ಖಾತೆ ಮಾಲೀಕರಿಗೆ ಖ್ಯಾತಿಯನ್ನು ಆಕರ್ಷಿಸಿತು. ಆದಾಗ್ಯೂ, ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ಎಕ್ಸ್ ಆಗಿ ಮಾರ್ಪಟ್ಟಾಗ, ಪರಿಶೀಲನೆ ಮತ್ತು ಆದ್ದರಿಂದ ಬ್ಲೂ ಟಿಕ್ ಪಾವತಿ ವೈಶಿಷ್ಟ್ಯವಾಯಿತು. ಮೆಟಾ ತನ್ನ ಸೇವೆಗಳಾದ್ಯಂತ ಪಾವತಿಸಿದ ಪರಿಶೀಲನೆಯನ್ನು ನೀಡಲು ಇದನ್ನು ಅನುಸರಿಸಿತು. ಅಂದರೆ ನಿಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಪಕ್ಕದಲ್ಲಿ ನೀವು ಸುಲಭವಾಗಿ ಬ್ಲೂ ಟಿಕ್ ಪಡೆಯಬಹುದು. ನೀವು ನಿಜವಾದ ಬಳಕೆದಾರರು ಎಂದು ಇದು ಖಚಿತಪಡಿಸುತ್ತದೆಯಾದರೂ, ಹೊಸ ಬ್ಲೂ ಟಿಕ್ ಹಲವಾರು ವೈಶಿಷ್ಟ್ಯಗಳನ್ನು ಸಹ ತರುತ್ತದೆ – ಎಲ್ಲವೂ ಮೆಟಾ ವೆರಿಫೈಡ್ ಪ್ರೋಗ್ರಾಂ ಅಡಿಯಲ್ಲಿ ಲಭ್ಯವಿದೆ. ಮೆಟಾ ವೆರಿಫೈಡ್ ಬಳಸಿ ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಬ್ಲೂ ಟಿಕ್ ಪಡೆಯುವುದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ. ಪರಿಶೀಲನೆಯ ಮಹತ್ವ ಇನ್ಸ್ಟಾಗ್ರಾಮ್ನಲ್ಲಿ ಪರಿಶೀಲನೆಯು ವ್ಯಕ್ತಿಗಳು ಮತ್ತು…
ಬೆಂಗಳೂರು: ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಹಿನ್ನಲೆಯಲ್ಲಿ, ಡ್ಯಾಂಗೆ ತೆರಳಿ ಪರಿಶೀಲನೆ ನಡೆಸಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಟಿಬಿ ಡ್ಯಾಂಗೆ ತೆರಳುತ್ತಿದ್ದಾರೆ. ಈ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕ್ರೆಸ್ಟ್ ಗೇಟ್ ಮುರಿದಿರುವ ವಿಜಯನಗರದ ತುಂಗಭದ್ರಾ ಜಲಾಶಯಯಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಮಧ್ಯಾಹ್ನ 12.30 ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ. ಬೆಂಗಳೂರಿಂದ ಹೆಲಿಕಾಪ್ಟಾರ್ ನಲ್ಲಿ ವಿಜಯನಗರದ ಹೊಸಪೇಟೆಗೆ ತೆರಳಲಿರುವ ಡಿಸಿಎಂ ಅವರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ ಎಂದು ಹೇಳಿದೆ. https://kannadanewsnow.com/kannada/steps-will-be-taken-for-all-round-development-of-chandragutti-temple-minister-madhu-bangarappa/ https://kannadanewsnow.com/kannada/ladies-and-gentlemen-are-you-going-to-a-coffee-shop-in-bangalore-read-this-news/
ಬೆಂಗಳೂರು: ನಗರದಲ್ಲಿನ ಕೆಫೆಗಳಿಗೆ ಕಾಫಿ ಕುಡಿಯೋದಕ್ಕೆ ಅನೇಕ ಯುವತಿಯರು, ಮಹಿಳೆಯರು ಹೋಗ್ತಾ ಇರುತ್ತೀರಿ. ನೀವು ಹೀಗೆ ಹೋಗ್ತಾ ಇದ್ದರೇ ಎಚ್ಚರ ಎನ್ನುವಂತೆ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಫೆಯೊಂದಕ್ಕೆ ಕಾಫಿಗಾಗಿ ಮಹಿಳೆಯೊಬ್ಬರು ತೆರಳಿದ್ದಾರೆ. ಕಾಫಿಗೂ ಮುನ್ನ ವಾಶ್ ರೂಂಗೆ ತೆರಳಿದಾಗ, ಅಲ್ಲಿ ಮೊಬೈಲ್ ಒಂದನ್ನು ರೆಕಾರ್ಡಿಂಗ್ ಮೂಡ್ ನಲ್ಲಿ ಇರಿಸಿದ್ದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಮೊಬೈಲ್ ಸಹಿತ ಹೊರಗೆ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಂತ ಸದಾಶಿವನಗರ ಠಾಣೆಯ ಪೊಲೀಸರು ಕೆಫೆಯಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದಂತ ಶಿವಮೊಗ್ಗ ಮೂಲಕ ಮನೋಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಆರೋಪಿತ ಕೆಲಸಗಾರನನ್ನು ಕೆಫೆಯ ಕೆಲಸದಿಂದ ವಜಾಗೊಳಿಸಲಾಗಿದೆ. ಅಂದಹಾಗೇ ಕೆಫೆಯ ವಾಶ್ ರೂಮ್ ನಲ್ಲಿ ಆರೋಪಿ ಮನೋಜ್ ಫ್ಲೈಟ್ ಮೂಡ್ ಆನ್ ನಲ್ಲಿ ಮೊಬೈಲ್ ಇರಿಸಿ, ರೆಕಾರ್ಡಿಂಗ್ ಆನ್…