Subscribe to Updates
Get the latest creative news from FooBar about art, design and business.
Author: kannadanewsnow09
ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ! ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಗೊತ್ತಾ?
ದಿಕ್ಕುಗಳು ಶುಭದ ಸಂಕೇತಗಳಾಗಬಹುದು ಕೆಲವು ಸಂಪ್ರದಾಯಗಳ ಆಧಾರದ ಮೇಲೆ. ಹಿಂದೂ ಸಂಪ್ರದಾಯದಲ್ಲಿ, ದಿಕ್ಕುಗಳು ಶುಭ ಮತ್ತು ಅಶುಭಗಳ ಹೆಸರುಗಳನ್ನು ಹೊಂದಿದ್ದು, ಶುಭದ ದಿಕ್ಕುಗಳಲ್ಲಿ ನಡೆದ ಕ್ರಿಯೆಗಳು ಹೆಚ್ಚು ಪ್ರಾಸಂಗಿಕವಾಗಿ ಹೋಗಬಹುದು. ಹಾಗಾಗಿ ಯಾವುದೇ ಶುಭ ಕಾರ್ಯ ನಡೆಯುವ ವೇಳೆ ಕೊಡ ಸೂಕ್ತ ದಿಕ್ಕು ಗಳ ಆಧಾರದ ಮೇಲೆ ಪೂಜೆ ಸಲ್ಲಿಸಲಾಗುವುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು…
ನವದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪೋಸ್ಟರ್ಗಳು ಮತ್ತು ಕರಪತ್ರಗಳ ವಿತರಣೆ ಅಥವಾ ಘೋಷಣೆಗಳನ್ನು ವಿತರಿಸುವುದು ಸೇರಿದಂತೆ “ಯಾವುದೇ ರೂಪದಲ್ಲಿ” ಮಕ್ಕಳನ್ನು ಪ್ರಚಾರದಲ್ಲಿ ಬಳಸದಂತೆ ಚುನಾವಣಾ ಆಯೋಗ ಸೋಮವಾರ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಪಕ್ಷಗಳಿಗೆ ಕಳುಹಿಸಿದ ಸಲಹೆಯಲ್ಲಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಕ್ಕಳನ್ನು ಯಾವುದೇ ರೀತಿಯಲ್ಲಿ ಬಳಸುವುದರ ಬಗ್ಗೆ ಚುನಾವಣಾ ಆಯೋಗವು ಶೂನ್ಯ ಸಹಿಷ್ಣುತೆಯನ್ನು ವ್ಯಕ್ತಪಡಿಸಿದೆ. ಈ ಮೂಲಕ ಯಾವುದೇ ರೂಪದಲ್ಲಿ ಮಕ್ಕಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂಬುದಾಗಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ. ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮಕ್ಕಳನ್ನು ಜೊತೆಗೆ ಕರೆದುಕೊಂಡು, ವಾಹನದಲ್ಲಿ ಮಕ್ಕಳನ್ನು ಸಾಗಿಸುವುದು ಅಥವಾ ರ್ಯಾಲಿಗಳಲ್ಲಿ ಯಾವುದೇ ರೀತಿಯಲ್ಲಿ ಪ್ರಚಾರ ಚಟುವಟಿಕೆಗಳಿಗೆ ಬಳಸಬಾರದು ಎಂದು ಚುನಾವಣಾ ಕಾವಲು ಸಂಸ್ಥೆ ಹೇಳಿದೆ. ಪ್ರತ್ಯೇಕವಾಗಿ, ಚುನಾವಣಾ ಸಂಬಂಧಿತ ಕೆಲಸ ಅಥವಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಯಾವುದೇ ಸಾಮರ್ಥ್ಯದಲ್ಲಿ ತೊಡಗಿಸಿಕೊಳ್ಳದಂತೆ ಆಯೋಗವು ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಚುನಾವಣಾ ಯಂತ್ರಕ್ಕೆ ನಿರ್ದೇಶನ ನೀಡಿದೆ. ಬಾಲಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ಎಲ್ಲಾ…
ಬೆಂಗಳೂರು: ಅಶ್ವಮೇಧ (ಕ್ಲಾಸಿಕ್) ಹೊಸ ವಿನ್ಯಾಸದ 100 ಕರ್ನಾಟಕ ಸಾರಿಗೆ (ಪಾಯಿಂಟ್ –ಟು-ಪಾಯಿಂಟ್) ಎಕ್ಸ್ ಪ್ರೆಸ್ ಬಸ್ಸುಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಿದರು. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, KSRTC ಅಧ್ಯಕ್ಷ ಗೋಪಿ ಶ್ರೀನಿವಾಸ್, ಕರಾರಸಾ ನಿಗಮ ರವರು ನಿಗಮದ ಅಶ್ವಮೇಧ ಕ್ಲಾಸಿಕ್ ಮಾದರಿಯ 100 ಹೊಸ ವಿನ್ಯಾಸದ ಪಾಯಿಂಟ್-ಟು-ಪಾಯಿಂಟ್ ಎಕ್ಸ್ಪ್ರೆಸ್ ಬಸ್ಸುಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಸಿಎಂ ಸಿದ್ಧರಾಮಯ್ಯ, ರಸ್ತೆ ಸಾರಿಗೆ ನಿಗಮಗಳು ಕಳೆದ 06 ವರ್ಷಗಳಿಂದ ಯಾವುದೇ ನೂತನ ವಾಹನಗಳನ್ನು ಸೇರ್ಪಡೆ ಮಾಡಿರಲಿಲ್ಲ, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷ 5800 ನೂತನ ವಾಹನಗಳನ್ನು ಸೇರ್ಪಡೆ ಮಾಡುವುದಾಗಿ ತಿಳಿಸಿ, ನಿಗಮಗಳು ಹಲವಾರು ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿ, ಸಂತೋಷ ವ್ಯಕ್ತಿಪಡಿಸಿದರು. ನೂತನ ಮಾದರಿಯ Point to Point ಎಕ್ಸ್ಪ್ರೆಸ್ ವಾಹನಗಳ ವೈಶಿಷ್ಟ್ಯಗಳು …
ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಫೆಬ್ರವರಿ 5 ರಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 47 ಶಾಸಕರು ತಮ್ಮ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ ನಂತರ ಜಯಗಳಿಸಿದರು. https://twitter.com/ANI/status/1754424868261818789 ಅವರು ಇಂದು ಬೆಳಿಗ್ಗೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಮಂಡಿಸಿದ್ದರು. ಏತನ್ಮಧ್ಯೆ, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಇಂದು ಬೆಳಿಗ್ಗೆ ರಾಜ್ಯ ವಿಧಾನಸಭೆಗೆ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲು ಆಗಮಿಸಿದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥರಿಗೆ ರಾಂಚಿಯ ವಿಶೇಷ ನ್ಯಾಯಾಲಯವು ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ವಿಧಾನಸಭೆಯಲ್ಲಿ ತನ್ನ ಬಂಧನದ ಬಗ್ಗೆ ಮಾತನಾಡಿದ ಸೊರೆನ್, ತನ್ನ ಬಂಧನದ ದಿನವನ್ನು ಭಾರತದ ಇತಿಹಾಸದಲ್ಲಿ ಕಪ್ಪು ಅಧ್ಯಾಯ ಎಂದು ಕರೆದರು. “ಇಂದು, 8.5 ಎಕರೆ ಭೂ ಹಗರಣದ ಆರೋಪದ ಮೇಲೆ ನನ್ನನ್ನು ಬಂಧಿಸಲಾಗಿದೆ. ಅವರಿಗೆ ಧೈರ್ಯವಿದ್ದರೆ ನನ್ನ ಹೆಸರಿನಲ್ಲಿ ನೋಂದಣಿಯಾಗಿರುವ ಜಮೀನಿನ ದಾಖಲೆಗಳನ್ನು ತೋರಿಸಿ. ಅದು ಸಾಬೀತಾದರೆ ನಾನು ರಾಜಕೀಯ ತೊರೆಯುತ್ತೇನೆ ಎಂದು ಹೇಳಿದ್ದಾರೆ. ಫೆಬ್ರವರಿ…
ನವದೆಹಲಿ: ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ 381 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಭಾರತೀಯ ಸೇನೆ ಸೇರೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ರಾಷ್ಟ್ರ ಸೇವೆಗೆ ಸಿದ್ಧವಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ವಯೋಮಿತಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಟ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಟೆಕ್ ಮತ್ತು ನಾನ್ ಟೆಕ್ ಹುದ್ದೆಗಳಿಗೆ 35 ವರ್ಷದವರೆಗೆ ಅವಕಾಶ ಕಲ್ಪಿಸಲಾಗಿದೆ. ಸೇನೆಯ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ವಿದ್ಯಾರ್ಹತೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಿಇ, ಬಿ.ಟೆಕ್, ಪದವಿ ಪೂರ್ಣಗೊಳಿಸಿರಬೇಕು. ವೇತನ ಆಯ್ಕೆಯಾದಂತ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 56,100 ಸ್ಟೈಪೆಂಡ್ ಪಾವತಿಸಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ 56,100 ರಿಂದ 2,50,000 ರೂ ಮಾಸಿಕ…
ಬೆಂಗಳೂರು: 2023-24ನೇ ಸಾಲಿನ ಮೆಟ್ರಿಕ್ ನಂತ್ರದ ಹಾಗೂ ಮೆಟ್ರಿಕ್ ಕಂ ಮೀನ್ ಶುಲ್ಕ ಮರುಪಾವತಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸೋದಕ್ಕೆ ದಿನಾಂಕ 15-02-2024 ಕೊನೆಯ ದಿನವಾಗಿದೆ. ಈ ಕುರಿತಂತೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸೋ ಮೊದಲು SSP ತಂತ್ರಾಂಶದಲ್ಲಿ ಲಾಗಿನ್ ಆಗಬೇಕು. ಇದಕ್ಕಾಗಿ ಎಸ್ ಎಸ್ ಪಿ ವಿದ್ಯಾರ್ಥಿ ಖಾತೆಗೆ ಲಾಗಿನ್ ಆಗಲು https://ssp.postmetric.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಿದ್ದಲ್ಲಿ, ಸದರಿ ಅರ್ಜಿಯು ಸಂಬಂಧಿಸಿದ ಪ್ರಾಯೋಜಿಕ ಕಲ್ಯಾಣ ಇಲಾಖೆಯಿಂದ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಎಸ್ ಎಸ್ ಪಿಯಲ್ಲಿ 2023-24ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ಬಳಕೆದಾರರ ಕೈಪಿಡಿಯನ್ನು ಸಂಪೂರ್ಣವಾಗಿ ಪರಾಮರ್ಶಿಸಿ, ನಂತ್ರ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಬೇಕಾಗುವ ದಾಖಲೆಗಳು ಏನು.? 10ನೇ ತರಗತಿ ನೋಂದಣಿ ಸಂಖ್ಯೆ,…
ಬೆಂಗಳೂರು: ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಜಾತಿವಾರು ಕಲ್ಪಿಸಲಾಗುತ್ತಿದೆ. ಪರಿಶಿಷ್ಟರಿಗೆ ಶೇ.18ರಷ್ಟು ಮೀಸಲಾತಿ ಕಲ್ಪಿಸಿದ್ರೇ, ಹಿಂದುಳಿದ ವರ್ಗದವರಿಗೆ ಶೇ.32ರಷ್ಟು ಕಲ್ಪಿಸಲಾಗುತ್ತಿದೆ. ಹಾಗಾದ್ರೇ ಯಾರಿಗೆ ಎಷ್ಟು ಮೀಸಲಾತಿ ಅನ್ನೋ ಬಗ್ಗೆ ಮುಂದೆ ಓದಿ. ಪರಿಶಿಷ್ಟ ಜಾತಿ ಈ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಹೊಲೆಯರು, ಮಾದಿಗ, ಬೋವಿ, ಲಂಬಾಣಿ, ಸಮಗಾರ, ಕೊರಚ, ಕೊರಮ ಸೇರಿದಂತೆ 101 ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದಾವೆ. ಇಂತಹ ಪರಿಶಿಷ್ಟ ವರ್ಗದವರಿಗೆ ಶೇ.15ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗುತ್ತಿದೆ. ಪರಿಶಿಷ್ಟ ಪಂಗಡ ಈ ಪರಿಶಿಷ್ಟ ಪಂಗಡದಲ್ಲಿ ಪ್ರಮುಖವಾಗಿ ಬರೋ ಜಾತಿಗಳೆಂದರೇ ನಾಯಕ, ವಾಲ್ಮೀಕಿ ಹಾಗೂ ಆದಿವಾಸಿಗಳು. ಇವರು ಸೇರಿದಂತೆ 56 ಜಾತಿಗಳು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿದ್ದಾವೆ. ಇವರಿಗೆ ಶೇ.03ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಹಿಂದುಳಿದ ವರ್ಗ, ಕೆಟಗರಿ-1 ಪ್ರಮುಖವಾಗಿ ಬರೋ ಹಿಂದುಳಿದ ವರ್ಗಗಗಳ ಜಾತಿಗಳೆಂದ್ರೇ ಉಪ್ಪಾರರು, ಗೊಲ್ಲರು, ಪಿಂಜಾರ ಸೇರಿದಂತೆ 95 ಜಾತಿಗಳಿದ್ದಾವೆ. ಈ ವರ್ಗದವರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಕೆಟಗರಿ 2ಎ ಕುರುಬ, ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ,…
ಶ್ರೀಕೃಷ್ಣನ ಕೈಯಲ್ಲಿರುವ ಚಕ್ರವನ್ನು ‘ಸುದರ್ಶನ ಚಕ್ರ’ ಎಂದು ಕರೆಯಲಾಗುತ್ತದೆ. ಈ ಮಂತ್ರವನ್ನು ಪಠಿಸಿದರೆ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಯಾವುದೇ ದುಷ್ಟ ಶಕ್ತಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತಾರೆ. ಅಂತಹ ಪವಾಡಗಳಿಂದ ಕೂಡಿದ ಸುದರ್ಶನ ಮಂತ್ರ ಇಲ್ಲಿದೆ . ಶ್ರೀ ಸುದರ್ಶನ ಚಕ್ರ ರಕ್ಷಾ ಮಂತ್ರ: ಓಂ ನಮೋ ಸುದರ್ಶನ ಚಕ್ರಾಯ ಸ್ಮರಣ ಮಾತ್ರೇಣ ಪ್ರಗಡಾಯ ಪ್ರಗಡಾಯ ದ್ವಂ ಸ್ವರೂಪಂ ಮಮ ದರ್ಶಯ ದರ್ಶಯ ಮಮ ಸರ್ವತ್ರ ರಕ್ಷಾಯ ರಕ್ಷಾಯ ಸ್ವಾಹಾ ॥ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿರುವ ಈ ಮಂತ್ರವನ್ನು ಮೊದಲು ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದಂದು ದೀಪವನ್ನು ಬೆಳಗಿಸುವ ಮೂಲಕ 1008 ಬಾರಿ ಜಪಿಸಲಾಗುತ್ತದೆ. ಅದರ ನಂತರ ಅಗತ್ಯವಿದ್ದಾಗ 3 ಬಾರಿ ಜಪ ಮಾಡಿದರೆ ಯಾವುದೇ ಅಪಾಯದಿಂದ ಪಾರಾಗಬಹುದು. ಇದು ಯಾವುದೇ ದುಷ್ಟ ಶಕ್ತಿಯಿಂದ ಗುರಾಣಿಯಂತೆ ರಕ್ಷಿಸುತ್ತದೆ. ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿರುವುದರಿಂದ, ನಿಮಗೆ ಅನಿಸಿದಾಗಲೆಲ್ಲಾ ಇದನ್ನು ಜಪಿಸಬಾರದು. ಈ ಮಂತ್ರವನ್ನು ಪ್ರಾರ್ಥಿಸುವ ಮೊದಲು ಒಬ್ಬರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ…
ಬೆಂಗಳೂರು: 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಲ್ಲಿಸಲಾಗಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರವನ್ನು ಬರೆದಿದ್ದು, 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಗ್ರೂಪ್-ಎ, ಗ್ರೂಪ್ ಬಿ ಹುದ್ದೆಗಳ ರಿಕ್ತ ಸ್ತಾನಗಳ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ. ಹೀಗಿದೆ ಗ್ರೂಪ್-ಎ ಕೆಎಎಸ್ ಖಾಲಿ ಹುದ್ದೆಗಳ ವಿವರ ಸಹಾಯಕ ಆಯುಕ್ತರು(ಕಿರಿಯ ಶ್ರೇಣಿ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – 40 ಹುದ್ದೆ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ – 41 ಹುದ್ದೆ ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ – 02 ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…
ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ವರಲೆ ನೇಮಕಗೊಂಡ ನಂತ್ರ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್ ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಇಂತಹ ಅವರು ಇಂದು ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾದಂತ ಪಿ.ಎಸ್ ದಿನೇಶ್ ಕುಮಾರ್ ಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಅವರು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥೇವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು. https://kannadanewsnow.com/kannada/india-will-become-third-largest-economy-during-our-third-term-says-pm-modi/ https://kannadanewsnow.com/kannada/lk-%e0%b2%85%e0%b2%a1%e0%b3%8d%e0%b2%b5%e0%b2%be%e0%b2%a3%e0%b2%bf%e0%b2%97%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%b0%e0%b2%a4%e0%b3%8d%e0%b2%a8-%e0%b2%98%e0%b3%8b%e0%b2%b7%e0%b2%a3/