Subscribe to Updates
Get the latest creative news from FooBar about art, design and business.
Author: kannadanewsnow09
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನು ಪ್ರಿಯಕನೊಬ್ಬ ಆಕೆಯ ಗಂಡನಿಗೆ ಕಳುಹಿಸಿದ್ದಾನೆ. ಮುಂದೆ ಆಗಿದ್ದೇನು ಅಂತ ಮುಂದೆ ಸುದ್ದಿ ಓದಿ.. 4 ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದಂತ ಆ ಇಬ್ಬರು ಮದುವೆಯಾಗೋದಕ್ಕೂ ನಿರ್ಧರಿಸಿದ್ದರು. ಆದರೇ ಇದಕ್ಕೆ ಜಾತಿ ಅಡ್ಡಬಂದು, ಪ್ರೀತಿ ಕೊನೆಗೊಂಡಿತ್ತು. ಯುವತಿ ತನ್ನ ಮನೆಯವರು ತೋರಿಸಿದಂತ ಯುವಕನನ್ನು ಮದುವೆಯಾಗಿ, ಗಂಡನ ಜೊತೆಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಳು. ತನ್ನ ಪ್ರೇಯಸಿ ಬೇರೆಯ ಯುವಕನನ್ನು ಮದುವೆಯಾದಳು ಎಂಬ ಸಿಟ್ಟಿನಿಂದ ಪ್ರಿಯತಮ ಮಾತ್ರ ಮಾಡಿದ್ದು, ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನೇ ಗಂಡನಿಗೆ ಕಳುಹಿಸಿದ್ದಾಗಿದೆ. ಇದರಿಂದ ಕೆರಳಿ ಕೆಂಡವಾದಂತ ಆಕೆಯ ಗಂಡ, ತಾನು ಕಟ್ಟಿದಂತ ತಾಳಿ ಕಿತ್ತು ಮನೆಯಿಂದ ವಿವಾಹಿತೆಯನ್ನು ಹೊರ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಅಲ್ಲಿಂದ ನೇರವಾಗಿ ಇದಕ್ಕೆ ಕಾರಣವಾದಂತ ಪ್ರಿಯಕರನ ಮನೆಯ ಮುಂದೆ ನ್ಯಾಯ ಕೊಡಿಸುವಂತೆ ಧರಣಿ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಪಲಿಚೆರ್ಲು ಗ್ರಾಮ ಅಂಬರೀಶ್ ಮನೆಯ ಮುಂದೆ ಕೆಂಚನಹಳ್ಳಿ ಗ್ರಾಮದ ವಿವಾಹಿತೆ ಧರಣಿ…
ಬೆಂಗಳೂರು; ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯ ಬಗ್ಗೆ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತ್ರ ಸೂಕ್ತ ಕ್ರಮ ವಹಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂಬ ಕುರಿತು ಜಾಲತಾಣಗಳಲ್ಲಿ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್ಗಳಲ್ಲಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಮೊಟ್ಟೆ ಉತ್ಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. https://twitter.com/KarnatakaVarthe/status/2000530076887384522 https://kannadanewsnow.com/kannada/golden-jubilee-celebration-for-sagar-government-pre-university-college-on-december-23rd-and-24th-invitation-letter-released/ https://kannadanewsnow.com/kannada/are-you-making-this-mistake-beware-your-irctc-account-will-be-banned-more-than-3-crore-accounts-have-already-been-banned/
ಬೆಂಗಳೂರು : ಬೆಂಗಳೂರಿಗರು ಈ ಚಳಿಗಾಲದಲ್ಲಿಯೂ ಕ್ರಿಸ್ ಮಸ್ ಸಂಭ್ರಮದ ಬೆಚ್ಚನೆಯ ಅನುಭವವನ್ನು ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ‘ಟಿರಾ’ದಿಂದ ಸೌಂದರ್ಯ, ಆಹಾರ, ಸಂಗೀತ ಮತ್ತು ಕ್ರಿಯೇಟಿವ್ ಕಾರ್ಯಾಗಾರವನ್ನು ಒಟ್ಟಾಗಿ ತರಲಾಗಿದೆ. ಆರಂಭದ ವಾರಾಂತ್ಯಕ್ಕೆ ಹಬ್ಬದ ಸಂಭ್ರಮ, ಔತಣ, ನೇರ ಪ್ರದರ್ಶನಗಳು, ಸುಂದರ ಕ್ಷಣಗಳು ಮತ್ತು ಖುಷಿ ತರುವ ಕ್ರಿಸ್ ಮಸ್ ಟ್ರೀ ಲೈಟಿಂಗ್ ಜೊತೆಗೆ ಅತಿಥಿಗಳು ಆನಂದವನ್ನು ಅನುಭವಿಸುವ ಕ್ಷಣಗಳನ್ನು ಉಣಬಡಿಸಲಾಯಿತು. ಈ ಸಂಭ್ರಮಾಚರಣೆಯು ಹಬ್ಬದ ಅನುಭವನ್ನು ವಿಸ್ತರಿಸಿದೆ. ಇದರೊಂದಿಗೆ ಯಾರೆಲ್ಲ ಮಾಲ್ ಗೆ ಭೇಟಿ ನೀಡುತ್ತಾರೋ ಅವರೆಲ್ಲರೂ ಜನವರಿಯ ಮೊದಲ ವಾರದ ತನಕ ಈ ಹಬ್ಬದ ಸಂಭ್ರಮವನ್ನು ಆನಂದಿಸುತ್ತಾರೆ. ಟಿರಾ ಕೆಫೆಗಳಲ್ಲಿಯ ಆಕ್ಟಿವಿಟಿ ಝೋನ್ ಮತ್ತು ಟಿರಾ ಸ್ಟೋರ್ ನಲ್ಲಿ ಈ ಹಬ್ಬದ ಋತುವಿನ ಪೂರ್ತಿಯಾಗಿ ಇಂಟರಾಕ್ಟಿವ್ ಹಾಗೂ ರಿವಾರ್ಡ್ ದೊರೆಯುವಂಥ ಚಟುವಟಿಕೆಗಳನ್ನು ಟಿರಾದಿಂದ ಆಯೋಜಿಸಲಾಗಿದೆ. ಕೇವಲ 150 ರೂಪಾಯಿಗೆ ಕ್ರಿಸ್ ಮಸ್ ಥೀಮ್ ಇರುವಂಥ ಆಹಾರ ಹಾಗೂ ಪಾನೀಯವನ್ನು ಟಿರಾ ಕೆಫೆಯಿಂದ ನೀಡಲಾಗುತ್ತದೆ. ಹೀಗೆ ಪ್ರತಿ ಖರೀದಿಗೆ ಅದೇ…
ಡಿಸೆಂಬರ್ 14 ರಂದು ಲಾಸ್ ಏಂಜಲೀಸ್ನಲ್ಲಿರುವ ಬ್ರೆಂಟ್ವುಡ್ ಮನೆಯೊಳಗೆ ಪ್ರಸಿದ್ಧ ನಿರ್ದೇಶಕ ರಾಬ್ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಸಿಂಗರ್ ರೀನರ್ ಮೃತಪಟ್ಟಿರುವುದು ಪತ್ತೆಯಾಗಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಅವರ ಮಗ ನಿಕ್ ರೀನರ್ ಅವರನ್ನು ಅವರ ಹೆತ್ತವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. TMZ ವರದಿಯ ಪ್ರಕಾರ, ಅವರನ್ನು USD 4 ಮಿಲಿಯನ್ ಜಾಮೀನಿನ ಮೇಲೆ ಇರಿಸಲಾಗಿದ್ದು, ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯ ವಶದಲ್ಲಿ ಇರಿಸಲಾಗಿದೆ.
ಹಾಸನ; ಗದಗ, ಮಂಗಳೂರು ಬಳಿಕ ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮಾಡಲಾಗಿದೆ. ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯುವ ಸಮಯದಲ್ಲೇ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. https://kannadanewsnow.com/kannada/test-to-detect-cancer-in-eggs-health-minister-dinesh-gundu-rao/ https://kannadanewsnow.com/kannada/shamanur-shivashankarappa-cremated-with-full-government-honors-only-the-memory-of-the-generous-donor-remains/
ಬೆಂಗಳೂರು: ಕಲಾರಸಿಕರಿಗೆ ರಸದೌತಣ ಬಡಿಸಲು ಪರಮ್ ಫೌಂಡೇಶನ್ ಸಜ್ಜಾಗಿದೆ. ಇದೇ ಡಿಸೆಂಬರ್ 18ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಸಂಜೆ 6.30ಕ್ಕೆ ಅಂತಾರಾಷ್ಟ್ರೀಯ ನೃತ್ಯ ಪ್ರದರ್ಶನ ಕಿಂಟ್ಸುಗಿ ನಡೆಯಲಿದೆ. ʻʻಕಿಂಟ್ಸುಗಿ” (Kintsugi) ಜಪಾನಿನ ಒಂದು ವಿಶೇಷ ಕಲೆಯಾಗಿದ್ದು, ಬಿರುಕುಗೊಂಡ ಪಿಂಗಾಣಿಗೆ ಬಂಗಾರದ ಬೆಸುಗೆ ಹಾಕಿ ಆ ಮೂಲಕ ನ್ಯೂನತೆ ಬದಲು ಸೌಂದರ್ಯದ ಭಾಗವಾಗಿ ಕಾಣುವಂತೆ ಮಾಡಲಾಗುತ್ತದೆ. ಅಂದರೆ ಒಡೆದ ಪಿಂಗಾಣಿಗೆ ಚಿನ್ನದ ಪುಡಿಯ ಮಿಶ್ರಣದಿಂದ ಕೂಡಿಸಿ ಚೆಂದ ಗಾಣಿಸುವ ಕಲೆಗೆ ‘ಕಿಂಟ್ಸುಗಿ’ ಎಂದು ಕರೆಯಲಾಗುತ್ತದೆ. ಹೀಗೆ ಮಿಶ್ರಣ ಮಾಡುವುದರಿಂದ ಆ ಪಿಂಗಾಣಿಯು ಸುಂದರವಾಗಿ ಕಾಣುವುದಲ್ಲದೆ, ಅದು ಮತ್ತಷ್ಟು ಮೌಲ್ಯವರ್ಧಿತವಾಗಿ ಕಾಣಿಸುತ್ತದೆ. ಜೊತೆಗೆ ಇನ್ನಷ್ಟು ಬಲಶಾಲಿಯೂ ಆಗುತ್ತದೆ ಎಂಬ ನಂಬಿಕೆಯನ್ನು ಜಪಾನ್ನಲ್ಲಿ ಹೊಂದಲಾಗಿದೆ. ಇದರ ಮೂಲ ಆಶಯವನ್ನು ಇಟ್ಟುಕೊಂಡು ನೃತ್ಯದ ರೂಪ ಪಡೆದಿರುವುದೇ ಈ ‘ಕಿಂಟ್ಸುಗಿ’. ಇಲ್ಲಿ ನೃತ್ಯದ ಮೂಲಕ ಒಡೆದ ಮನಸುಗಳನ್ನು ಬೆಸೆಯುವ ಕಾರ್ಯವನ್ನು ಮಾಡಲಾಗುತ್ತದೆ ಎಂಬ ಆಶಯವನ್ನೇ ಈ ‘ಕಿಂಟ್ಸುಗಿ’ ಡಾನ್ಸ್ ಹೊಂದಿದೆ. ಈ ಕಿಂಟ್ಸುಗಿ ತತ್ವವನ್ನು ಬಳಸಿಕೊಂಡು ಪರಮ್…
ಶಿವಮೊಗ್ಗ : ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಶಾಶ್ವತ ನೆನಪಿನ ಕಾರ್ಯಕ್ರಮವಾಗಬೇಕು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಹಳೇಯ ವಿದ್ಯಾರ್ಥಿಗಳು ಸಹಸ್ರ ಸಂಖ್ಯೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ ಬೇಸೂರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸುವರ್ಣ ಮಹೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಕಾಲೇಜು ಒಂದರ ಸುವರ್ಣ ಮಹೋತ್ಸವ ಎಂದರೆ ಅಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ದೊಡ್ಡ ಹಬ್ಬ ಇದ್ದಂತೆ. ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪೂರ್ಣ ನೆಹರೂ ಮೈದಾನವನ್ನು ಸುವರ್ಣ ಸಂಭ್ರಮಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ. ಸುಮಾರು ೫೩ ವರ್ಷದಲ್ಲಿ ೬೦ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದಿ ಉನ್ನತ ಸ್ಥಾನದಲ್ಲಿದ್ದಾರೆ. ಅವರನ್ನು ಎದುರುಗೊಳ್ಳುವುದೇ ಒಂದು ಸಂಭ್ರಮ ಎಂದರು. ಇದೇ ಡಿಸೆಂಬರ್ 23 ಮತ್ತು 24೪ರಂದು ಎರಡು ದಿನ ಸುವರ್ಣ ಮಹೋತ್ಸವ ನಡೆಯಲಿದೆ. ಡಿ.23ಕ್ಕೆ 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ…
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಈತನಕ 274 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಿದ್ದು ಈತನಕ ಯಾವುದೇ ಸೋಂಕು ಕಂಡು ಬಂದಿಲ್ಲ. ಹೊಸನಗರ ತಾಲ್ಲೂಕಿನಲ್ಲಿ 169 ಸ್ಯಾಂಪಲ್ಗಳನ್ನು ಪರೀಕ್ಷೆ ಮಡಿದ್ದು 8 ಪ್ರಕರಣ ಪತ್ತೆಯಾಗಿದೆ ಎಂಬುದಾಗಿ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೆ.ಎಫ್.ಡಿ. ಮತ್ತು ಪಲ್ಸ್ ಪೊಲೀಯೋ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನಲ್ಲಿ ಕೆಎಫ್ಡಿ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ. ಹೊಸನಗರ ತಾಲ್ಲೂಕಿನ ಸೋನಲೆ ವ್ಯಾಪ್ತಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರಾಥಮಿಕ ಕೇಂದ್ರವ್ಯಾಪ್ತಿಯನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಜನರ ರಕ್ತಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಸಾಗರ ಉಪವಿಭಾಗೀಯ ಅಸ್ಪತ್ರೆಯಲ್ಲಿ ಮಂಗನ ಕಾಯಿಲೆಗಾಗಿ 10 ಬೆಡ್ನ ವಿಶೇಷ ಘಟಕ ಪ್ರಾರಂಭಿಸಲಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ನಿಂದ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಡಿಸೆಂಬರ್ 14 ರಂದು ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ ಪಂದ್ಯಕ್ಕೆ ಅನಾರೋಗ್ಯದ ಕಾರಣದಿಂದ ಗೈರುಹಾಜರಾಗಿದ್ದ ಭಾರತದ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಡೆಯುತ್ತಿರುವ ಸರಣಿಯಿಂದ ಹೊರಗುಳಿದಿದ್ದಾರೆ. ಡಿಸೆಂಬರ್ 17 ರಂದು ಲಕ್ನೋದಲ್ಲಿ ಮತ್ತು ಡಿಸೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉಳಿದ ಎರಡು ಪಂದ್ಯಗಳಿಗೆ ಅವರು ಲಭ್ಯವಿಲ್ಲದಿರುವ ಎಂಬುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ದೃಢಪಟಿಸಿದೆ. https://twitter.com/BCCI/status/2000568936820289945 ಅನಾರೋಗ್ಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಟಿ20ಐಗಳಿಂದ ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಹೊರಗಿಡಲಾಗಿದೆ. ಆದಾಗ್ಯೂ, ಅವರು ಲಕ್ನೋದಲ್ಲಿ ತಂಡದಲ್ಲಿದ್ದಾರೆ, ಅಲ್ಲಿ ಅವರನ್ನು ಮತ್ತಷ್ಟು ವೈದ್ಯಕೀಯವಾಗಿ ನಿರ್ಣಯಿಸಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಅಕ್ಷರ್ ಅವರ ಬದಲಿಯಾಗಿ, ಬಂಗಾಳದ ಸ್ಪಿನ್-ಬೌಲಿಂಗ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಭಾರತದ ತಂಡಕ್ಕೆ ಸೇರಿಸಲಾಗಿದೆ. ಪುರುಷರ…
ಶ್ರೀನಗರ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯ ಮೂಲದ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಾರ್ಯಕರ್ತ ಸಾಜಿದ್ ಜಾಟ್ ಅವರನ್ನು ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೆಸರಿಸಿದೆ. ಈ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕ ಸಾವನ್ನಪ್ಪಿದರು. ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರಿಗೆ ಈ ದಾಳಿಯ ಸಂಚನ್ನು ಔಪಚಾರಿಕವಾಗಿ ಪತ್ತೆಹಚ್ಚಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಶಾಸನಬದ್ಧ ಗಡುವಿಗೆ ಮುಂಚಿತವಾಗಿ ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ 1,597 ಪುಟಗಳ ಚಾರ್ಜ್ಶೀಟ್ನಲ್ಲಿ, ಸಾಜಿದ್ ಜಾಟ್ ಸೇರಿದಂತೆ ಏಳು ಆರೋಪಿಗಳನ್ನು ಸಂಸ್ಥೆ ಹೆಸರಿಸಿದೆ. ಲಷ್ಕರ್-ಎ-ತೊಯ್ಬಾ ಮತ್ತು ಅದರ ಪ್ರಾಕ್ಸಿ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಮೂಲಕ ದಾಳಿಯನ್ನು ಸಂಘಟಿಸಿದ ಪಾಕಿಸ್ತಾನ ಮೂಲದ ನಿರ್ವಾಹಕ ಎಂದು ಸಂಸ್ಥೆ ವಿವರಿಸಿದೆ. ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಈ ದಾಳಿ ನಡೆದಿದ್ದು, ಪ್ರವಾಸಿ…














