Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕ ಭಾರತೀಯ ಜನತಾ ಪಾರ್ಟಿಯು ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಎ.ಆರ್. ಸಪ್ತಗಿರಿ ಗೌಡ ಅವರು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ನೇಮಕಾತಿಯಲ್ಲಿ ಅತ್ಯಂತ ಗಮನಾರ್ಹ ಅಂಶವೆಂದರೆ, ಖ್ಯಾತ ನಟಿ ಅಮೂಲ್ಯ ಅವರ ಪತಿ ಜಗದೀಶ್ ಆರ್. ಚಂದ್ರ ಅವರಿಗೆ ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಜಗದೀಶ್ ಅವರು ಕಳೆದ ಕೆಲವು ಸಮಯದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಸಂಘಟನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಟಿ ಅಮೂಲ್ಯ ಅವರ ಮಾವ (ಜಿ.ಹೆಚ್. ರಾಮಚಂದ್ರ) ಹಾಗೂ ಪತಿ ಇಬ್ಬರೂ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಜಗದೀಶ್ ಅವರಿಗೆ ಪ್ರಮುಖ ಹುದ್ದೆ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ವಿವಿಧ ಮೋರ್ಚಾಗಳ ನೂತನ ಅಧ್ಯಕ್ಷರ ಪಟ್ಟಿ: ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಘಟಕಗಳಿಗೆ…
ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ಕೂಡಲೇ ರಾಜ್ಯ ಸರಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಂಡ್ಯದ ಲೋಕಸಭೆ ಸದಸ್ಯರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು; ಜನಾಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಕೂಡ ಈ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಸರಕಾರ ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು ಎಂದು ಕೋರಿದ್ದಾರೆ. ಈ ಎಲ್ಲಾ ಪಂಚಾಯಿತಿಗಳ ಗ್ರಾಮಸ್ಥರು ಹಾಗೂ ಪಂಚಾಯಿತಿಗಳ ಸದಸ್ಯರು, ರೈತ ಮುಖಂಡರಾದ ಸುನಂದಾ ಜಯರಾಂ ಅವರು ಸೇರಿದಂತೆ ಅನೇಕರುವ ಈ ಬಗ್ಗೆ ಮನವಿ ಮಾಡಿದ್ದು, ಇವರೆಲ್ಲರೂ 70 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ನಾನು ಪ್ರತಿಭಟನಾ…
ಬೆಂಗಳೂರು: ಇಸ್ರೇಲ್ ಇರಾನ್ ಮೇಲೆ ಯುದ್ಧ ಮಾಡುತ್ತಿದ್ದು, ಇರಾನ್ ಪ್ರತ್ಯುತ್ತರ ನೀಡುತ್ತಿರುವುದು ದೊಡ್ಡ ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಯುದ್ದದಲ್ಲಿ ಇಸ್ರೇಲ್ ಮಾತ್ರವಲ್ಲ, ಅಮೇರಿಕಾ ಕೂಡ ಅದರ ಹಿಂದಿದೆ. ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಅಲ್ಲಿ ಹಲವು ಯುದ್ಧಗಳನ್ನು ಕಂಡಿದ್ದೇವೆ. ಮೊದಲು ಜರಸಲೇಮ್ (ಧರ್ಮಕ್ಕಾಗಿ) ಗಾಗಿ ಯುದ್ಧ ನಡೆಯುತಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ಅಗುತ್ತಿದೆ. ಅಮೇರಿಕಾ ಆಯಿಲ್ ಮೇಲೆ ಹಿಡಿತ ಸಾಧಿಸಲು ಹೋರಾಟ ಮಾಡುತ್ತಿದೆ. ಅಮೇರಿಕಾ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೆಳಿದರು. ಮೂರನೇ ವಿಶ್ವ ಯುದ್ಧ ಆಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಷ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ…
ಬೆಂಗಳೂರು: ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ನೇಮಕ ಮಾಡುವ ಸಂದರ್ಭದಲ್ಲಿ ಒಳ ಮೀಸಲಾತಿ ಪರಿಗಣನೆಗೆ ಎಲ್ಲಾ ಸಮುದಾಯದ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮಗಳೊಂದಿಗ ಮಾತನಾಡಿದ ಅವರು, ರಾಜ್ಯಪಾಲರು ಒಳ ಮೀಸಲಾತಿಗೆ ಅಂಕಿತ ಹಾಕಿ ಆದೇಶ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರ ಭರ್ತಿ ಮಾಡಬೇಕಿರುವ ನೇಮಕಾತಿಗೆ ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟನೆ ಬೇಕಿದೆ. ಮನಸ್ಸು ಮಾಡಿದರೆ ಸಾಧ್ಯತೆ ಇದೆ. ಆದರೆ, ಅವರು ಗೊಂದಲಕ್ಕೆ ಸಿಲುಕಿದ್ದಾರೆ. ನೇಮಕಾತಿಯ ಮೊದಲು ಎಲ್ಲಾ ಸಮುದಾಯದ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಆಗಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಕಾನೂನು ಮಾಡಿದ್ದಾರೆ. ಹಾಗಾಗಿ ಎಲ್ಲ ಸಮುದಾಯದವರೂ ಒಳ ಮೀಸಲಾತಿ ಕೊಡಿ ಅಂತ ಹೇಳಿದ್ದಾರೆ. ಸಮಸ್ಯೆ ಸರಳೀಕರಣ ಮಾಡಬೇಕು. ಕಾನೂನು ತಜ್ಞರ ಸಲಹೆ ಪಡೆದು ಮಾಡಬೇಕು. ಸಂವಿಧಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಅಂತ…
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯು ನಿರೀಕ್ಷೆಗಿಂತಲೂ ವೇಗವಾಗಿ ಗುರಿ ತಲುಪುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಫಾಕ್ಸ್ ನ್ಯೂಸ್ ಮತ್ತು ಸಿಎನ್ಬಿಸಿ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಒಂದೇ ಏಟಿಗೆ 48 ನಾಯಕರ ಅಂತ್ಯ: ಇರಾನ್ ನಾಯಕತ್ವದ ಮೇಲೆ ಈ ಕಾರ್ಯಾಚರಣೆಯು ಭೀಕರ ಪ್ರಹಾರ ಮಾಡಿದೆ ಎಂದು ಹೇಳಿರುವ ಟ್ರಂಪ್, “ಒಂದೇ ಹೊಡೆತಕ್ಕೆ ಇರಾನ್ನ 48 ಪ್ರಮುಖ ನಾಯಕರು ಬಲಿಯಾಗಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ. ಇನ್ನು ಎಷ್ಟು ಗುರಿಗಳು ಬಾಕಿ ಇವೆ ಎಂಬುದು ವಾಷಿಂಗ್ಟನ್ಗೆ ತಿಳಿದಿದೆ ಎಂದು ಅವರು ಸುಳಿವು ನೀಡಿದ್ದಾರೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಡಜನ್ಗಟ್ಟಲೆ ಹಿರಿಯ ಕಮಾಂಡರ್ಗಳು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಪೆಂಟಗನ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳು (IDF) ಮೌಲ್ಯಮಾಪನ ಮಾಡುತ್ತಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ನಿರೀಕ್ಷೆಗಿಂತ ವೇಗವಾಗಿ ಕಾರ್ಯಾಚರಣೆ:…
ಶಿವಮೊಗ್ಗ: ಸಾಮಾನ್ಯವಾಗಿ ಪೊಲೀಸ್ ಎಂದರೆ ಸಾಮಾನ್ಯ ಜನರಿಗೆ ಒಂದು ರೀತಿಯ ಭಯ, ಆತಂಕ. ಪೊಲೀಸರ ಬಳಿ ಹೋಗುವುದು ಎಂದರೆ ಏನೋ ದೊಡ್ಡ ಸಮಸ್ಯೆ ಎನ್ನುವ ಭಾವನೆ ಹಳ್ಳಿ ಜನರಲ್ಲಿ ಮನೆ ಮಾಡಿರುತ್ತದೆ. ಆದರೆ, ಈ ಕಲ್ಪನೆಯನ್ನು ಸುಳ್ಳು ಮಾಡಿ, ಪೊಲೀಸರೇ ಜನರ ಮನೆಬಾಗಿಲಿಗೆ ಬಂದು, ಅವರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿದ ಅಪರೂಪದ ಘಟನೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಾಕ್ಷಿಯಾಗಿದೆ. ಆ ಮೂಲಕ ಗ್ರಾಮ ವಾಸ್ತವ್ಯ ಮಾಡಿ, ಪಿಎಸ್ಐ ಪ್ರವೀಣ್ ಎಲ್ಲರಿಗೂ ಮಾದರಿಯಾಗುವಂತ ನಡೆಯನ್ನು ತೋರಿದ್ದಾರೆ. ಹೌದು.. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಈ ‘ಗ್ರಾಮವಾಸ್ತವ್ಯ’ ಕಾರ್ಯಕ್ರಮವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕುಗ್ಗಿಸುವಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿ, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ಸಾಕ್ಷೀಕರಿಸಿತು. ಗ್ರಾಮವಾಸ್ತವ್ಯದ ಹಿನ್ನೆಲೆ ಮತ್ತು ಉದ್ದೇಶ ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವು ಕುಟುಂಬಗಳ ನಡುವೆ ಹಳೆಯ ವೈಷಮ್ಯಗಳಿರುತ್ತವೆ. ಗಡಿ ವಿವಾದ, ಸಣ್ಣಪುಟ್ಟ ಜಗಳಗಳು ಅಥವಾ ಗ್ರಾಮಗಳಲ್ಲಿ…
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಮಾಜಿ ಅಧ್ಯಕ್ಷ ಮಹಮೂದ್ ಅಹಮದಿನೆಜಾದ್ (69) ಅವರು ತಮ್ಮ ಅಂಗರಕ್ಷಕನೊಂದಿಗೆ ಹತರಾಗಿದ್ದಾರೆ ಎಂದು ಇರಾನ್ನ ‘ಐಎಲ್ಎನ್ಎ’ (ILNA) ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. ಟೆಹ್ರಾನ್ನಲ್ಲಿರುವ ಅಹಮದಿನೆಜಾದ್ ಅವರ ನಿವಾಸದ ಮೇಲೆ ನಡೆದ ಈ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದರೂ, ಇರಾನ್ ಸರ್ಕಾರದಿಂದ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಾಕಿ ಇದೆ. ವಿವಾದಿತ ಮತ್ತು ಫೈರ್ಬ್ರ್ಯಾಂಡ್ ನಾಯಕ 005 ರಿಂದ 2013 ರವರೆಗೆ ಸತತ ಎಂಟು ವರ್ಷಗಳ ಕಾಲ ಇರಾನ್ ಅಧ್ಯಕ್ಷರಾಗಿದ್ದ ಅಹಮದಿನೆಜಾದ್, ಆರಂಭದಲ್ಲಿ ಅಲ್ಲಿನ ಶಿಯಾ ಧರ್ಮಗುರುಗಳು ಹಾಗೂ ಸಂಪ್ರದಾಯವಾದಿಗಳ ನೆಚ್ಚಿನ ನಾಯಕರಾಗಿದ್ದರು. ಇಸ್ರೇಲ್ ವಿರುದ್ಧದ ಅವರ ಕಟು ಟೀಕೆಗಳು ಮತ್ತು ಪ್ರಖರ ಭಾಷಣಗಳಿಂದಾಗಿ ಅವರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು. ಅಹಮದಿನೆಜಾದ್ ಆಡಳಿತ ಮತ್ತು ಹಿನ್ನಡೆ: ಪರಮಾಣು ನೀತಿ: ಅವರ ಅಧಿಕಾರಾವಧಿಯಲ್ಲಿ ಅನುಸರಿಸಿದ ಕಟ್ಟುನಿಟ್ಟಾದ…
ಟೆಹ್ರಾನ್: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಭೀಕರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಯುದ್ಧದ ತೀವ್ರತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೇವಲ 12 ಗಂಟೆಗಳ ಅಂತರದಲ್ಲಿ ಸುಮಾರು 900ಕ್ಕೂ ಅಧಿಕ ಬಾರಿ ದಾಳಿ ನಡೆಸುವ ಮೂಲಕ ಇರಾನ್ನ ಸೇನಾ ನೆಲೆಗಳನ್ನು ಅಕ್ಷರಶಃ ಧ್ವಂಸಗೊಳಿಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆ ಉಡೀಸ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಈ ನಿರಂತರ ದಾಳಿಯಿಂದಾಗಿ ರಾಜಧಾನಿ ಟೆಹ್ರಾನ್ ಮೇಲಿದ್ದ ಇರಾನ್ನ ಸಮಗ್ರ ‘ವಾಯು ರಕ್ಷಣಾ ವ್ಯವಸ್ಥೆ’ (Air Defence Network) ಬಹುತೇಕ ನಿಷ್ಕ್ರಿಯಗೊಂಡಿದೆ. ರಕ್ಷಣಾ ಕವಚವೇ ನಾಶವಾಗಿರುವುದರಿಂದ, ರಾಜಧಾನಿಯಾದ್ಯಂತ ಇರುವ ಪ್ರಮುಖ ಸೇನಾ ನೆಲೆಗಳು ಹಾಗೂ ಉನ್ನತ ನಾಯಕರ ಅಡಗುತಾಣಗಳ ಮೇಲೆ ಸತತವಾಗಿ ದಾಳಿಗಳನ್ನು ಮುಂದುವರಿಸಲು ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ದಾರಿ ಸುಗಮವಾಗಿದೆ. ದಾಳಿಯ ಮುಖ್ಯಾಂಶಗಳು: ಅಮೆರಿಕದ ಅಬ್ಬರ: ಕಾರ್ಯಾಚರಣೆ ಆರಂಭವಾದ ಮೊದಲ 12 ಗಂಟೆಗಳಲ್ಲಿಯೇ ಅಮೆರಿಕವು ಇರಾನ್ ಮೇಲೆ ಸುಮಾರು 900 ಬಾರಿ ದಾಳಿ ನಡೆಸಿದೆ. ಇಸ್ರೇಲ್ ಪ್ರಹಾರ: ಮತ್ತೊಂದೆಡೆ, ಇಸ್ರೇಲ್ ಪಡೆಗಳು…
ಮಿನಾಬ್: ನಿನ್ನೆ ಇರಾನ್ನ ಮಿನಾಬ್ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಬರೋಬ್ಬರಿ 153 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ನ ನ್ಯಾಯಾಂಗ ವಿಭಾಗಕ್ಕೆ ಸಂಯೋಜಿತವಾಗಿರುವ ‘ಮಿಜಾನ್ ನ್ಯೂಸ್ ಏಜೆನ್ಸಿ’ (Mizan News Agency) ವರದಿ ಮಾಡಿದೆ. ಸೇನಾ ನೆಲೆಯ ಸಮೀಪವೇ ದಾಳಿ: ಈ ಶಾಲೆಯು ಇರಾನ್ನ ಪ್ರಬಲ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೆಲೆಯಿಂದ ಕೇವಲ 600 ಮೀಟರ್ (1,968 ಅಡಿ) ದೂರದಲ್ಲಿದೆ. ಈ ಶಾಲೆಯನ್ನು ಗುರಿಯಾಗಿಸಿಕೊಂಡು “ಮೂರು ಕ್ಷಿಪಣಿ ದಾಳಿಗಳನ್ನು” ನಡೆಸಲಾಗಿದೆ ಎಂದು ಮತ್ತೊಬ್ಬ ಇರಾನ್ ಅಧಿಕಾರಿ ಈ ಹಿಂದೆ ಮಾಹಿತಿ ನೀಡಿದ್ದರು. ದಾಳಿಯ ಭೀಕರ ದೃಶ್ಯಗಳು: ದಾಳಿಯ ನಂತರದ ಕೆಲವು ವಿಡಿಯೋ ತುಣುಕುಗಳನ್ನು ಬಿಬಿಸಿ (BBC) ಪರಿಶೀಲಿಸಿ ಖಚಿತಪಡಿಸಿದೆ. ವಿಡಿಯೋಗಳಲ್ಲಿ ಶಾಲಾ ಕಟ್ಟಡದಿಂದ ದಟ್ಟ ಹೊಗೆ ಮೇಲೇಳುತ್ತಿರುವುದು, ಸುತ್ತಮುತ್ತ ಅಪಾರ ಜನಸಂದಣಿ ಸೇರಿರುವುದು ಮತ್ತು ಆತಂಕಗೊಂಡ ಜನರು ಭಯದಿಂದ ಕಿರುಚುತ್ತಿರುವ ದೃಶ್ಯಗಳು ಸೆರೆಯಾಗಿವೆ. ಸ್ವತಂತ್ರ ಪರಿಶೀಲನೆಗೆ ಅಡ್ಡಿ: ಮೃತಪಟ್ಟವರ ನಿಖರ ಸಂಖ್ಯೆಯ ಬಗ್ಗೆ ಸ್ವತಂತ್ರವಾಗಿ ಪರಿಶೀಲನೆ ನಡೆಸಲು…
ಬೆಂಗಳೂರು ಗ್ರಾಮಾಂತರ: ವಿದ್ಯಾದೇಗುಲವಾದ ಶಾಲೆಯಲ್ಲಿಯೇ ರಕ್ಷಕನಾಗಬೇಕಿದ್ದವನು ಭಕ್ಷಕನಾದ ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆಯೊಂದರ (Residential School) ಮಾಲೀಕನೇ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾಗಿದ್ದಾನೆ. ಗಂಡನ ಈ ಕೀಚಕ ಕೃತ್ಯಕ್ಕೆ ಸಾಥ್ ನೀಡಿ, ಅದನ್ನು ಮುಚ್ಚಿಹಾಕಲು ಯತ್ನಿಸಿದ ಆತನ ಪತ್ನಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ವಸತಿ ಶಾಲೆಯ ಮಾಲೀಕ ಧನಂಜಯ್ ಹಾಗೂ ಆತನ ಪತ್ನಿ ಶೈಲಜಾ ಬಂಧಿತ ಆರೋಪಿಗಳು. ಪರೀಕ್ಷೆ ನೆಪದಲ್ಲಿ ಕೂಡಿಹಾಕಿ ಕಿರುಕುಳ: ಆರೋಪಿ ಧನಂಜಯ್ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು. ಗಂಡನ ಈ ನೀಚ ಕೃತ್ಯವನ್ನು ಮುಚ್ಚಿಹಾಕಲು ಪತ್ನಿ ಶೈಲಜಾ ಕೂಡ ಸಾಥ್ ನೀಡಿದ್ದಳು. ಪರೀಕ್ಷೆಯ ನೆಪವೊಡ್ಡಿ ಸತತ 15 ದಿನಗಳ ಕಾಲ ಮಕ್ಕಳನ್ನು ಪೋಷಕರನ್ನು ಭೇಟಿಯಾಗಲು ಬಿಡದೆ, ಫೋನ್ನಲ್ಲಿ ಮಾತನಾಡಲೂ ಅವಕಾಶ ನೀಡದೆ ವಸತಿ ಶಾಲೆಯಲ್ಲೇ ಕೂಡಿಹಾಕಲಾಗಿತ್ತು. ಅಲ್ಲದೆ, ದೌರ್ಜನ್ಯಕ್ಕೊಳಗಾದ ಬಾಲಕಿಗೆ ನಿತ್ಯವೂ ಪರಂಗಿ ಹಣ್ಣನ್ನು (ಪಪ್ಪಾಯಿ)…














