Author: kannadanewsnow09

ಬೆಂಗಳೂರು: ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ಗ್ರಾಹಕರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಮನವಿ ಮಾಡಿದೆ. 1912 ಸಹಾಯವಾಣಿ ಸಂಖ್ಯೆಯ ಸಂಪರ್ಕ ಸಿಗದಿದ್ದಲ್ಲಿ, ಸಾರ್ವಜನಿಕರು ವಾಟ್ಸ್‌ಆ್ಯಪ್‌ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಗ್ರಾಹಕರು ಈ ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ಸಂದೇಶದ ಜೊತೆಗೆ ವಿದ್ಯುತ್‌ ಸಮಸ್ಯೆಗಳಿರುವ ಸ್ಥಳದ ಫೋಟೋ ಹಾಗೂ ವಿಡಿಯೋಗಳನ್ನು ಸಹ ಕಳುಹಿಸಬಹುದಾಗಿದ್ದು, ಇದರಿಂದ ಸಮಸ್ಯೆಗಳನ್ನು ಬೇಗನೆ ಪರಿಹರಿಸಲು ಅನುಕೂಲವಾಗಲಿದೆ. ಸಾಮಾಜಿಕ ಜಾಲತಾಣಗಳ ವಿವರ: ಗ್ರಾಹಕರು ಬೆಸ್ಕಾಂನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕವೂ ಸಂಪರ್ಕಿಸಿ ದೂರು ದಾಖಲಿಸಬಹುದು: ಫೇಸ್‌ಬುಕ್ ಖಾತೆ: ನಮ್ಮ ಬೆಸ್ಕಾಂ ಫೇಸ್‌ಬುಕ್ ಎಕ್ಸ್ (ಟ್ವಿಟರ್) ಖಾತೆ: ನಮ್ಮ ಬೆಸ್ಕಾಂ ಎಕ್ಸ್ ಜಿಲ್ಲಾವಾರು ವಾಟ್ಸ್‌ಆ್ಯಪ್‌ ಸಹಾಯವಾಣಿ ಸಂಖ್ಯೆಗಳು: ಕೆಳಗಿನ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ಆಯಾ ವಲಯ ಮತ್ತು ಜಿಲ್ಲೆಗಳಿಗಾಗಿ ಮೀಸಲಿಡಲಾಗಿದೆ. ವಲಯ / ಜಿಲ್ಲೆ ವಾಟ್ಸ್‌ಆ್ಯಪ್‌ ಸಂಖ್ಯೆ ದಕ್ಷಿಣ ವೃತ್ತ (ಬೆಂಗಳೂರು ನಗರ) 8277884011 ಪಶ್ಚಿಮ ವೃತ್ತ (ಬೆಂಗಳೂರು ನಗರ) 8277884012 ಪೂರ್ವ ವೃತ್ತ…

Read More

ಕುಂಬಳಕಾಯಿ ಬೀಜಗಳು (Pumpkin Seeds) ಪೋಷಕಾಂಶಗಳ ಆಗರ. ಆದರೆ, ಇವುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಸಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬೀಜಗಳನ್ನು ಬಳಸಲು ಇಷ್ಟಪಡುತ್ತಾರೆ. ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ದೇಹಕ್ಕೆ ಅತ್ಯುತ್ತಮ ಪೋಷಕಾಂಶಗಳು ಸಿಗುತ್ತವೆ. ಕುಂಬಳಕಾಯಿ ಬೀಜಗಳನ್ನು ಏಕೆ ನೆನೆಸಿಡಬೇಕು? ಬೀಜಗಳನ್ನು ಹಾಗೆಯೇ ಸೇವಿಸಿದಾಗ ಅದರಲ್ಲಿರುವ ಫೈಟಿಕ್ ಆಮ್ಲವು (Phytic acid) ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಆದರೆ, ನೀರಿನಲ್ಲಿ ನೆನೆಸಿಡುವುದರಿಂದ ಈ ಆಮ್ಲದ ಅಂಶ ಕಡಿಮೆಯಾಗಿ, ಬೀಜಗಳು ಮೃದುವಾಗುತ್ತವೆ. ಅಲ್ಲದೆ, ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಖನಿಜಾಂಶಗಳು ಸುಲಭವಾಗಿ ಲಭ್ಯವಾಗುತ್ತವೆ. ನೆನೆಸಿದ ಕುಂಬಳಕಾಯಿ ಬೀಜಗಳ ಆರೋಗ್ಯ ಪ್ರಯೋಜನಗಳು ಪ್ರತಿದಿನ ಬೆಳಿಗ್ಗೆ ನೆನೆಸಿದ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ: ಹೃದಯದ ಆರೋಗ್ಯಕ್ಕೆ ಉತ್ತಮ: ಇವುಗಳಲ್ಲಿರುವ ಮೆಗ್ನೀಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.…

Read More

ದಕ್ಷಿಣ ಕನ್ನಡ: ಉಜಿರೆಯ ರುಡ್‌ಸೆಟ್ (RUDSET) ಸಂಸ್ಥೆಯ 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ವರದಿಯು ಗ್ರಾಮೀಣ ಯುವಕ-ಯುವತಿಯರ ಸ್ವಾವಲಂಬನೆ ಮತ್ತು ಉದ್ಯಮಶೀಲತೆಯ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ ಅಪಾರ ಕೊಡುಗೆಯನ್ನು ಎತ್ತಿ ತೋರಿಸಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶ ವರದಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, “ಗ್ರಾಮೀಣ ಯುವಕರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ರುಡ್‌ಸೆಟ್ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ” ಎಂದು ಶ್ಲಾಘಿಸಿದರು. ಅಲ್ಲದೆ, 2025–26ನೇ ಸಾಲಿನಲ್ಲಿ ಸಂಸ್ಥೆಯು ಕೈಗೊಂಡ ವಿವಿಧ ತರಬೇತಿ ಕಾರ್ಯಕ್ರಮಗಳು, ಸ್ವಉದ್ಯೋಗ ಪ್ರೋತ್ಸಾಹಕ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇನ್ನಷ್ಟು ನವೀನ ಯೋಜನೆಗಳ ಮೂಲಕ ಹೆಚ್ಚಿನ ಯುವಕರಿಗೆ ತರಬೇತಿ ನೀಡುವಂತೆ ಅವರು ಸಲಹೆ ನೀಡಿ, ಶುಭ ಹಾರೈಸಿದರು. 2025–26ನೇ ಸಾಲಿನ ಪ್ರಮುಖ ಸಾಧನೆಗಳು ಸಂಸ್ಥೆಯ ವರದಿಯ ಪ್ರಕಾರ, ಕಳೆದ…

Read More

ಬೇಸಿಗೆಯ ಬಿಸಿಲಿಗೆ ದೇಹಕ್ಕೆ ತಂಪು ನೀಡುವ ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದಂತೆ ಕೆಲವರು ಕಲ್ಲಂಗಡಿ ಹಣ್ಣಿಗೆ ಹಾನಿಕಾರಕ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಬಳಸಿ ಆರೋಗ್ಯಕ್ಕೆ ಕಂಟಕ ತರುತ್ತಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡಿರುವ ವರದಿಗಳ ಪ್ರಕಾರ, ಎರಿಥ್ರೋಸಿನ್‌ನಂತಹ ವಿಷಕಾರಿ ಬಣ್ಣಗಳನ್ನು ಬಳಸಲಾಗುತ್ತಿದ್ದು, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇಂತಹ ಕಲುಷಿತ ಹಾಗೂ ನಕಲಿ ಹಣ್ಣುಗಳಿಂದ ದೂರವಿರಲು ಮನೆಯಲ್ಲೇ ಕೆಲವು ಸುಲಭ ಪರೀಕ್ಷೆಗಳನ್ನು ಮಾಡಬಹುದು. ಹಣ್ಣಿನ ಬಣ್ಣ ಮತ್ತು ಹೊರನೋಟದ ಪರೀಕ್ಷೆ ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ ಅದರ ಒಳಗಿನ ಬಣ್ಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ನೈಸರ್ಗಿಕವಾಗಿ ಹಣ್ಣಾದ ಕಲ್ಲಂಗಡಿ ಹಣ್ಣಿನ ತಿರುಳು ಸಂಪೂರ್ಣವಾಗಿ ಒಂದೇ ಸಮನಾದ ಗಾಢ ಕೆಂಪು ಬಣ್ಣವನ್ನು ಹೊಂದಿರುವುದಿಲ್ಲ. ಆದರೆ ಕೃತಕ ಬಣ್ಣಗಳನ್ನು ಬಳಸಿದ್ದರೆ, ಅದು ಅತಿಯಾಗಿ ಹೊಳೆಯುವ ಮತ್ತು ಕೃತಕವಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಹಣ್ಣಿನ ಹೊರಭಾಗವನ್ನು ಕೂಡ ಗಮನಿಸಬೇಕು. ಮೇಲ್ಮೈ ತುಂಬಾ ಹೊಳಪಿನಿಂದ…

Read More

ಬೆಂಗಳೂರು: ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದ 30 ವರ್ಷದ ಸುಜಾತ ಅವರ ಅನುಮಾನಾಸ್ಪದ ಸಾವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೇಲ್ನೋಟಕ್ಕೆ ವಿದ್ಯುತ್ ಅವಘಡ ಎಂದು ಬಿಂಬಿತವಾಗಿರುವ ಈ ಘಟನೆಯ ಹಿಂದೆ ಪತಿ ಚೇತನ್ ಕೈವಾಡವಿದೆ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ದುರಂತವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಮಹಿಳೆಯರ ಸುರಕ್ಷತೆ ಮತ್ತು ಜಾಗೃತಿಯ ಬಗ್ಗೆ ಹಲವು ಗಂಭೀರ ಅಂಶಗಳನ್ನು ಮುಂದಿಡುತ್ತದೆ. ತುಮಕೂರಿನ ಹೆಗ್ಗೆರೆಯ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಅವರ ವಿವಾಹವಾಗಿ ಸುಮಾರು 10 ವರ್ಷಗಳಾಗಿದ್ದವು. ಆದರೆ ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಪತಿಯ ಕಿರುಕುಳ ತಾಳಲಾರದೆ ಸುಜಾತ ಕಳೆದ ಮೂರು ತಿಂಗಳಿನಿಂದ ತವರು ಮನೆಯಲ್ಲೇ ವಾಸವಿದ್ದರು. ಕೇವಲ ಎಂಟು ದಿನಗಳ ಹಿಂದೆಯಷ್ಟೇ ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಗೌಡಹಳ್ಳಿಯ…

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆಗಳ ಮೂಲಕ ನುಂಗಲು ಯತ್ನಿಸುತ್ತಿರುವ ಭೂಗಳ್ಳರ ಜಾಲವೊಂದು ಈಗ ಪೊಲೀಸರ ಬಲೆಗೆ ಬಿದ್ದಿದೆ. ಬೆಂಗಳೂರು ದಕ್ಷಿಣದ ಕೊತ್ತನೂರಿನಲ್ಲಿ ಸುಮಾರು 160 ಕೋಟಿ ರೂಪಾಯಿ ಮೌಲ್ಯದ ಬಿಡಿಎ (BDA) ಆಸ್ತಿಯನ್ನು ಕಬಳಿಸಲು ಯತ್ನಿಸಿದ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಹಗರಣದ ಹಿನ್ನೆಲೆ ಏನು? ಬಿಡಿಎ ವಿಚಕ್ಷಣಾ ದಳದ ಡಿವೈಎಸ್‌ಪಿ ಹನುಮಂತರಾಯ ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ವಿವರಗಳು ಹೀಗಿವೆ: ಸ್ಥಳ: ಕೊತ್ತನೂರಿನ ಸರ್ವೆ ನಂಬರ್ 177/1 ಮತ್ತು 176/1. ವ್ಯಾಪ್ತಿ: ಅಂದಾಜು 10 ಗುಂಟೆ ಬೆಲೆಬಾಳುವ ಆಸ್ತಿ. ಇತಿಹಾಸ: 1994ರಲ್ಲಿ ಬಿಡಿಎ ಈ ಜಮೀನನ್ನು ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು. 1996ರಲ್ಲಿಯೇ ಮೂಲ ವಾರಸುದಾರರಾದ ಮಾರಿಯಮ್ಮ ಅವರಿಗೆ ನಿಯಮಾನುಸಾರ ಪರಿಹಾರವನ್ನೂ ವಿತರಿಸಲಾಗಿತ್ತು. ನ್ಯಾಯಾಲಯದ ಆದೇಶ: ಈ ಜಮೀನು ಬಿಡಿಎಗೆ ಸೇರಿದ್ದೆಂದು ಈ…

Read More

ಬೆಂಗಳೂರು: “ಡಬಲ್ ಡೆಕ್ಕರ್, ಪಾರ್ಕಿಂಗ್ ಕಟ್ಟಡ, ಮೇಲ್ಸೆತುವೆ, ಅಂಡರ್ ಪಾಸ್ ಎಲ್ಲವೂ ಬ್ರಾಂಡ್ ಬೆಂಗಳೂರು ನಿರ್ಮಿಸಲು ಸಹಕಾರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಮಾರ್ಗದ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ,  ಕೆ.ಆರ್. ಮಾರುಕಟ್ಟೆಯಲ್ಲಿ ನೆಲಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆ, ಬನಶಂಕರಿ ಬಸ್ ನಿಲ್ದಾಣದ ಜಂಕ್ಷನ್ ನಲ್ಲಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗೆ ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಕಾರ್ಯಕ್ರಮಗಳಲ್ಲಿ ಹಾಗೂ ಮಾಧ್ಯಮಗಳ ಜೊತೆ ಮಾತನಾಡಿದರು. “ಕೆ.ಆರ್ ಮಾರ್ಕೆಟ್ ಅಲ್ಲಿ ನೂತನ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡಿದ್ದು ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ‌. ವಾಹನ ನಿಲುಗಡೆಗೆ ಹೆಚ್ಚು ಶುಲ್ಕ ವಿಧಿಸಿಲ್ಲ. ಸುತ್ತಮುತ್ತ 1 ಕಿ.ಮೀ ಯಾರೂ ವಾಹನ ನಿಲ್ಲಿಸಬಾರದು ಎಂದು ಪೊಲೀಸರು ತಿಳಿಸಬೇಕು. ಅಂಗಡಿ ಮಾಲೀಕರು ವಾಹನಗಳನ್ನು ಅಲ್ಲಿಯೇ ನಿಲ್ಲಿಸಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಟೋ ಮಾಡಲಾಗುವುದು” ಎಂದರು‌. ಪಾರ್ಕಿಂಗ್ ಕಟ್ಟಡಗಳು ಖಾಸಗಿಯವರಿಗೆ ಉತ್ತೇಜನ “ಸಂಚಾರ ದಟ್ಟಣೆ ಇರುವ ಕಡೆ…

Read More

ಶಿವಮೊಗ್ಗ: ಸಾಗರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಅತ್ಯಂತ ಕುತೂಹಲಕಾರಿಯಾಗಿ ಅಂತ್ಯಗೊಂಡಿದ್ದು, ಮಾಲತೇಶಪ್ಪ ಅವರ ನೇತೃತ್ವದ ‘ಶ್ರೀ ಸದ್ಗುರು ಶಿಕ್ಷಕರ ಬಳಗ’ ಭರ್ಜರಿ ಯಶಸ್ಸು ದಾಖಲಿಸಿದೆ. ಚುನಾವಣೆಯ ಒಟ್ಟು 12ಕ್ಕೆ 12 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಇಡೀ ತಂಡ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿದೆ. ಇಂತಹ ತಂಡಕ್ಕೆ ಆರ್ ಬಿ ಡಿ ಸಂಸ್ಥೆಯ ಮುಖ್ಯಸ್ಥರಾದಂತ ಮಹೇಶ್ ಸೂರನಗದ್ದೆ ಹಾಗೂ ಜಲೀಲ್ ಶುಭಾಶಯ ಕೋರಿದ್ದಾರೆ. ಆರ್.ಬಿ.ಡಿ ತಂಡದ ಬೆಂಬಲ ಮತ್ತು ಶುಭಾಶಯ ಶುಭಾಶಯ ಕೋರಿ ಮಾತನಾಡಿದ RBD ಮಾಲೀಕರಾದಂತ ಮಹೇಶ್ ಸೂರನಗದ್ದೆ ಅವರು, “ಮಾಲತೇಶಪ್ಪ ಅಂಡ್ ತಂಡದ ಈ ಗೆಲುವು ಕೇವಲ ಒಂದು ತಂಡದ ಗೆಲುವಲ್ಲ, ಇದು ಇಡೀ ಶಿಕ್ಷಕ ಸಮುದಾಯದ ಗೆಲುವು. ನೂತನ ತಂಡವು ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಲಿ,” ಎಂದು ಆಶಿಸಿದರು. ಅದೇ ರೀತಿ ಆರ್.ಬಿ.ಡಿ ಮುಖ್ಯಸ್ಥರಾದ ಜಲೀಲ್ ಅವರು ಮಾತನಾಡಿ, “ಶ್ರೀ…

Read More

ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ ತಂಡದ ನಡುವೆ ಜಿದ್ದಾ ಜಿದ್ದಿನ ಕಣದಲ್ಲಿ ಸದ್ಗುರು ತಂಡವು ಜಯಭೇರಿ ಭಾರಿಸಿದೆ. ಚುನಾವಣಾಧಿಕಾರಿಗಳು ನೀಡಿದಂತ ಅಧಿಕೃತ ಮಾಹಿತಿಯ ಅನುಸಾರವಾಗಿ ಮಾಲತೇಶಪ್ಪ ಅವರ ಸದ್ಗುರು ತಂಡದ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಜಯಗಳಿಸಿದ್ದರೇ, ದೇವೇಂದ್ರಪ್ಪ ಅವರ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ತಂಡವು ಕ್ಲೀನ್ ಸ್ವೀಪ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 12 ಪದಾಧಿಕಾರಿಗಳ ಆಯ್ಕೆಗೆ ಉರ್ದು ಶಾಲೆಯ ಆವರಣದಲ್ಲಿ ಮತದಾನ ನಡೆಯಿತು. ಒಚ್ಚು 584 ಶಿಕ್ಷಕ ಮತದಾರರಲ್ಲಿ ಬರೋಬ್ಬರಿ 534 ಮಂದಿ ಮತದಾನವನ್ನು ಮಾಡಿದ್ದಾರೆ. 8 ಮಂದಿ ಪುರುಷರು, ನಾಲ್ವರು ಮಹಿಳೆಯ ಆಯ್ಕೆಗೆ ನಡೆದಂತ ಚುನಾವಣೆಯಲ್ಲಿ ಎರಡು ತಂಡಗಳಿಂದ 24 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಇಂದು ನಡೆದಂತ ಮತದಾನದ ಬಳಿಕದ ಮತ ಏಣಿಕೆಯಲ್ಲಿ ಮೊದಲಿನಿಂದಲೂ ಸದ್ಗುರು ಶ್ರೀ ಸದ್ಗುರು ಶಿಕ್ಷಕರ ಬಳಗದ ಪದಾಧಿಕಾರಿಗಳು…

Read More

ಬೆಂಗಳೂರು : “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. ‘ನಮ್ಮ ಇ ಖಾತಾ’ ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು” ಎಂದೂ ಅವರು ಹೇಳಿದರು. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು. “ಪಾಲಿಕೆ ಕಚೇರಿಗಳಲ್ಲಿ ಜನಸಂದಣಿ ಉಂಟಾಗಬಹುದು ಎಂದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರತಿ ವಾರ ಅಂದಾಜು 5 ಸಾವಿರ ಜನರ ದೂರುಗಳಿಗೆ ಪರಿಹಾರ ನೀಡಲಾಗುವುದು. ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು, ಕಡಿಮೆ ದಟ್ಟಣೆ ಇರುವ ಕಡೆ…

Read More