Author: kannadanewsnow09

ಕೊಡಗು: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ನಡು ರಸ್ತೆಯಲ್ಲೇ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ಹಿಮವನ ಲೇಔಟ್ ನಲ್ಲಿ ರಸ್ತೆಯಲ್ಲೇ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಮನೆ ಎದುರಿನ ರಸ್ತೆಯಲ್ಲೇ ದೇವಿಪ್ರಸಾದ್(40) ಎಂಬಾತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಮೃತ ದೇವಿಪ್ರಸಾದ್ ಬಳಲುತಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿಕೊಂಡು ದೇವಿಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ದೇವಿಪ್ರಸಾದ್ ನನ್ನು ಕಳೆದುಕೊಂಡು ತಾಯಿ ಗೋಳಾಡುತ್ತಿದ್ದಾರೆ. https://kannadanewsnow.com/kannada/corruption-at-sagars-jamia-masjid-muslim-community-requests-ac-to-investigate/ https://kannadanewsnow.com/kannada/how-many-marks-are-required-to-pass-sslc-puc-here-is-the-official-information-from-the-board/

Read More

ಶಿವಮೊಗ್ಗ : ಸಾಗರದ ಜಾಮಿಯಾ ಮಸೀದಿ ಮತ್ತು ಮಜ್ಲಿಸೆ ಎ ಮುಂತಜಿಮಾ ಮುಸ್ಲಿಮಿನ್ ಸಮಿತಿ ವಕ್ಫ್ ಬೋರ್ಡ್ ನಿಯಮ ಮೀರಿ ವರ್ತಿಸುತ್ತಿದ್ದು, ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಕೂಡಲೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಗುರುವಾರ ನಗರದ ಮುಸ್ಲೀಂ ಸಮುದಾಯದ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು. ಇಂದು ಶಿವಮೊಗ್ಗದ ಸಾಗರದ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಂತ ಮುಸ್ಲೀಂ ಸಮುದಾಯದ ಮುಖಂಡರು,  ವಕ್ಫ್ ಬೋರ್ಡ್ ನಿಯಮ ಪ್ರಕಾರ ಸಮಿತಿ ಮೂರು ವರ್ಷ ಆಡಳಿತ ನಡೆಸಬೇಕು. ಹಾಲಿ ಸಮಿತಿ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರೆಯುತ್ತಿದೆ. ಸಮಿತಿ ಅಧ್ಯಕ್ಷ ಫಯಾಜ್ ಅಹ್ಮದ್, ಕಾರ್ಯದರ್ಶಿ ಸೈಯದ್ ತಾಹೀರ್ ವಕ್ಫ್ ಬೋರ್ಡ್ ನಿಯಮ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂಬುದಾಗಿ ಆರೋಪಿಸಿದರು. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಮಿತಿ ಕಾರ್ಯದರ್ಶಿ ಸೈಯದ್ ತಾಹೀರ್ ಹಣಕಾಸಿನ ವ್ಯವಹಾರದಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ ಈ ಬಗ್ಗೆ ತನಿಖೆ ನಡೆಯಬೇಕು. ತಕ್ಷಣ ಹಾಲಿ ಸಮಿತಿಯನ್ನು ವಜಾಗೊಳಿಡಬೇಕು. ಜಾಮಿಯಾ ಮಸೀದಿ…

Read More

ನವದೆಹಲಿ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದರು. ರಾಯಭಾರ ಕಚೇರಿಯಲ್ಲಿ ಇರಿಸಲಾಗಿದ್ದ ಸಂತಾಪ ಸೂಚಕ ಪುಸ್ತಕದಲ್ಲಿ (Condolence Book) ಸಂದೇಶ ಬರೆಯುವ ಮೂಲಕ ಮಿಸ್ರಿ ಅವರು ಭಾರತದ ಪರವಾಗಿ ಅಧಿಕೃತವಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಇರಾನ್‌ನ ಈ ಸಂಕಷ್ಟದ ಸಮಯದಲ್ಲಿ ಭಾರತವು ಆ ದೇಶದೊಂದಿಗೆ ನಿಲ್ಲಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತದ ಪ್ರಮುಖ ನಾಯಕರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದ ಹಿನ್ನೆಲೆಯಲ್ಲಿ ಈ ಭೇಟಿಯು ಮಹತ್ವ ಪಡೆದುಕೊಂಡಿದೆ. ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ವಿದೇಶಾಂಗ ಕಾರ್ಯದರ್ಶಿಗಳು, ಇರಾನ್ ಸರ್ಕಾರ ಮತ್ತು ಅಲ್ಲಿನ ಜನತೆಗೆ ಭಾರತದ ಸಾಂತ್ವನವನ್ನು ತಿಳಿಸಿದರು. https://twitter.com/ANI/status/2029507460843889114 https://kannadanewsnow.com/kannada/rangoli-tribute-to-siddaramaiah-in-mysuru-for-budget-record-cms-portrait-blooms-across-8000-square-feet/ https://kannadanewsnow.com/kannada/good-news-for-the-states-government-pu-college-students-free-textbooks-to-be-distributed-from-next-year/

Read More

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ತಮ್ಮ ವೃತ್ತಿಜೀವನದ 17ನೇ ಬಜೆಟ್ ಮಂಡಿಸಿ ಹೊಸ ದಾಖಲೆ ಬರೆಯಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಬೃಹತ್ ರಂಗೋಲಿ ಭಾವಚಿತ್ರವನ್ನು ಬಿಡಿಸುವ ಮೂಲಕ ವಿಶಿಷ್ಟವಾಗಿ ಗೌರವ ಸಲ್ಲಿಸಲಾಗಿದೆ. ಮೈಸೂರಿನ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 8 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ರಂಗೋಲಿ ಕಲಾಕೃತಿ ಮೂಡಿಬಂದಿದೆ. ಕರ್ನಾಟಕದ ಭೂಪಟದ ನಡುವೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮುಂಗಡಪತ್ರವನ್ನು ಕೈಯಲ್ಲಿ ಹಿಡಿದಿರುವ ಚಿತ್ರಣವು ನೋಡುಗರ ಗಮನ ಸೆಳೆಯುತ್ತಿದೆ. ಯತೀಂದ್ರ ಯುವ ಬ್ರಿಗೇಡ್ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಖ್ಯಾತ ಕಲಾವಿದ ಪುನೀತ್ ಅವರ ಕೈಚಳಕದಲ್ಲಿ ಈ ಸುಂದರ ರಂಗೋಲಿ ಅರಳಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಅಭಿಮಾನಿಗಳು ತಮ್ಮ ನಾಯಕನ ಈ ಮಹತ್ವದ ಮೈಲಿಗಲ್ಲನ್ನು ಕಲಾತ್ಮಕವಾಗಿ ಆಚರಿಸುತ್ತಿದ್ದಾರೆ. ನಾಳಿನ ಬಜೆಟ್ ಮಂಡನೆಗೂ ಮುನ್ನವೇ ಈ ಬೃಹತ್ ರಂಗೋಲಿ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್…

Read More

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿನ ಭಾಗಕ್ಕೆ ರಕ್ತ ಚಲನೆ ಸ್ಥಗಿತಗೊಂಡಿದ್ದ 9 ವರ್ಷದ ಬಾಲಕನಿಗೆ ಸಕಾಲಿಕ ಶಸ್ತ್ರ ಚಿಕಿತ್ಸೆ ಮೂಲಕ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್‌ ಆಸ್ಪತ್ರೆ ಯಲಹಂಕದ ಬಹುವಿಭಾಗೀಯ ಶಸ್ತ್ರ ಚಿಕಿತ್ಸಕರ ತಂಡ ಯಶಸ್ವಿಯಾಗಿದೆ. ಬಾಲಕನನ್ನು ಆಸ್ಪತ್ರೆಗೆ ಕರೆ ತಂದಾಗ ತೀವ್ರವಾದ ಗಾಯಗಳಿಂದ ಆತ ನರಳುತ್ತಿದ್ದು ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಬಲ ಕಾಲಿನ ಭಾಗಕ್ಕೆ ರಕ್ತ ಪರಿಚಲನೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಲಗಾಲು ಮಂಡಿವರೆಗೂ ಬಹುತೇಕ ಛಿದ್ರವಾಗಿದ್ದು ಪ್ರಾಣಕ್ಕೇ ಕುತ್ತು ತರುವ ಸಂಭವವಿತ್ತು. ಎಕ್ಸ್‌ರೇ ಮಾಡಿದಾಗ ತೊಡೆಯ ಮೂಳೆ ಘಾಸಿಗೊಂಡಿರುವುದು ಕಂಡು ಬಂದಿತ್ತು. ಆಂಜಿಯೋಗ್ರಾಮ್‌ ಮಾಡಿದಾಗ ಮೊಣಕಾಲಿನ ಹಿಂಭಾಗದ ಪ್ರಮುಖ ರಕ್ತನಾಳದಲ್ಲಿ ತಡೆ ಉಂಟಾಗಿರುವುದು ಪ್ರಾಣಕ್ಕೆ ಅಪಾಯ ತರುವ ಸಂಭವನೀಯತೆಯನ್ನು ಅರಿತು ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.ಸಂಪೂರ್ಣ ಘಾಸಿಗೊಂಡಿದ್ದ ಕಾಲಿನ ಭಾಗವನ್ನು ರಕ್ಷಿಸುವುದು ಅಸಾಧ್ಯವೆಂಬುದನ್ನು ಅರಿತಿದ್ದರೂ ಪ್ರಾಣಾಪಾಯದಿಂದ ಪಾರು ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಸರ್ಜನ್‌ ಡಾ.ಚೇತನ್‌ ಸತೀಶ್‌, ಆರ್ಥೋಪೆಡಿಕ್‌ ವಿಭಾಗದ ಹಿರಿಯ ಸಮಾಲೋಚಕ ಡಾ.ವೇಣುಗೋಪಾಲ್‌ ಮೊದಲಾದವರನ್ನೊಳಗೊಂಡ ಬಹು ವಿಭಾಗೀಯ…

Read More

ಮುಂಬೈ: ಕ್ರಿಕೆಟ್ ಲೋಕದ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಪುತ್ರ, 26 ವರ್ಷದ ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಇಂದು (ಮಾರ್ಚ್ 5) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ನಡೆದ ಅತ್ಯಂತ ವೈಭವೋಪೇತ ಸಮಾರಂಭದಲ್ಲಿ ಅರ್ಜುನ್ ತಮ್ಮ ಪ್ರೇಯಸಿ ಸಾನಿಯಾ ಚಾಂದೋಕ್ ಅವರೊಂದಿಗೆ ವಿವಾಹ ಬಂಧನಕ್ಕೊಳಗಾದರು. ದಕ್ಷಿಣ ಮುಂಬೈನ ಖಾಸಗಿ ವೇದಿಕೆಯಲ್ಲಿ ನಡೆದ ಈ ವಿವಾಹ ಸಮಾರಂಭವು ಸಂಪೂರ್ಣವಾಗಿ ಸ್ಟಾರ್‌ಗಳಿಂದ ತುಂಬಿತ್ತು. ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗರು, ಬಾಲಿವುಡ್‌ನ ಎ-ಲಿಸ್ಟ್ ತಾರೆಯರು ಹಾಗೂ ರಾಜಕೀಯ ಗಣ್ಯರು ಈ ಅದ್ದೂರಿ ಮದುವೆಗೆ ಸಾಕ್ಷಿಯಾದರು. ಸಚಿನ್ ತೆಂಡೂಲ್ಕರ್ ಅವರ ಪುತ್ರನ ಮದುವೆಯಾಗಿದ್ದರಿಂದ ಇಡೀ ಕ್ರಿಕೆಟ್ ಲೋಕದ ಕಣ್ಣು ಇಂದು ಮುಂಬೈನತ್ತ ನೆಟ್ಟಿತ್ತು. ವೈರಲ್ ಆಯ್ತು ‘ವರಮಾಲೆ’ ವಿಡಿಯೋ ಮದುವೆಯ ಸಂಭ್ರಮದ ನಡುವೆ, ಅರ್ಜುನ್ ಮತ್ತು ಸಾನಿಯಾ ಅವರ ‘ವರಮಾಲೆ’ ಕಾರ್ಯಕ್ರಮದ ಅತ್ಯಂತ ಸುಂದರವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನವಜೋಡಿಗಳು ಪರಸ್ಪರ ಹಾರ ಬದಲಿಸಿಕೊಳ್ಳುವ ಈ…

Read More

ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಟೀಕೆ ಮಾಡುತ್ತಿರುವ ರತ್ನಾಕರ ಹೊನಗೋಡು ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರತ್ನಾಕರ ಅವರ ಹಳೆಯ ರಾಜಕೀಯ ಹಾದಿಯನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದರು. ಈ ಹಿಂದೆ ಗೋಪಾಲಕೃಷ್ಣ ಬೇಳೂರು ಅವರ ಬೆಂಬಲ ಇಲ್ಲದೇ ಇದ್ದರೇ ಅವರು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಯ ಸದಸ್ಯರೇ ಆಗುತ್ತಿರಲಿಲ್ಲ ಎಂಬುದಾಗಿ ನೆನಪಿಸಿದರು. ಅಸ್ತಿತ್ವಕ್ಕಾಗಿ ಮಾಧ್ಯಮಗಳ ಮುಂದೆ ಅಬ್ಬರ ರತ್ನಾಕರ ಹೊನಗೋಡು ಈ ಹಿಂದೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನೀಡಿದ ರಾಜಕೀಯ ಭಿಕ್ಷೆಯಿಂದ ಎಂಬುದು ಅವರಿಗೆ ಮೊದಲು ನೆನಪಿರಲಿ ಎಂದು ಚೇತರ್ ರಾಜ್ ಕಣ್ಣೂರು ಕುಟುಕಿದರು. ಶಾಸಕರ ಬೆಂಬಲದಿಂದ ಅಧಿಕಾರ ಪಡೆದವರು ಇಂದು ಅವರನ್ನೇ ಟೀಕಿಸುತ್ತಿರುವುದು ಕೃತಘ್ನತೆಯಿಲ್ಲದ ಪರಮಾವಧಿ ಎಂದು ಅವರು ಆಕ್ರೋಶ ಹೊರಹಾಕಿದರು. ಬಿಜೆಪಿಯಲ್ಲಿ ಕನಿಷ್ಠ ಬೆಲೆಯೂ…

Read More

ಆನಂದಪುರ: ಸಾಗರ ತಾಲೂಕಿನ ರಾಜಕೀಯ ರಂಗದಲ್ಲಿ ವಾಕ್ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರತ್ನಾಕರ ಅವರು “ತರ್ಡ್ ಕ್ಲಾಸ್” ಹಾಗೂ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಗದ್ದಲ ಆರಂಭವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಾವಿಗೆರೆ, “ಯಾವುದೇ ಒಂದು ದೊಡ್ಡ ಜಾತ್ರೆ ನಡೆಯುವಾಗ ಕ್ಷೇತ್ರದ ಶಾಸಕರಿಗೆ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಗುರುತರ ಜವಾಬ್ದಾರಿ ಇರುತ್ತದೆ. ಇದಕ್ಕಾಗಿ ಶಾಸಕರು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಸಭೆ ನಡೆಸುವುದು ಶಿಷ್ಟಾಚಾರ ಮತ್ತು ಕರ್ತವ್ಯ. ಇಂತಹ ಜನಪರ ಕೆಲಸಕ್ಕೆ ‘ಧಿಕ್ಕಾರ’ ಎಂದು ಹೇಳಿರುವ ರತ್ನಾಕರ ಹೊನಗೋಡಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ?” ಎಂದು ಕಟುವಾಗಿ ಪ್ರಶ್ನಿಸಿದರು. “ನಾನೇ ನಾಯಕ” ಎಂಬ ಭ್ರಮೆಯಲ್ಲಿ ಹೊನಗೋಡು ಅಧಿಕಾರ ಎನ್ನುವುದು ಶಾಶ್ವತವಲ್ಲ ಎಂಬುದನ್ನು ರತ್ನಾಕರ ಅವರು…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಪಠ್ಯಪುಸ್ತಕ’ ವಿತರಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಸಮಾನ ಶಿಕ್ಷಣದ ಆಶಯ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದ ಕಾರಣದಿಂದ ಪಠ್ಯಪುಸ್ತಕಗಳನ್ನು ಖರೀದಿಸಲು ಪರದಾಡಬಾರದು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. “ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವುದು ನಮ್ಮ ಸರ್ಕಾರದ ಮೂಲ ಆಶಯ. ಹಣದ ಕೊರತೆಯಿಂದ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು,” ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯ ಪ್ರಮುಖ ಅಂಶಗಳು: ಆರ್ಥಿಕ ಹೊರೆ ಇಳಿತ: ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಕಾಲೇಜುಗಳಲ್ಲೂ ಮೂಲಸೌಕರ್ಯ ಹಾಗೂ ಪಠ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಗುಣಮಟ್ಟದ ಬೋಧನೆ: ಇತ್ತೀಚೆಗಷ್ಟೇ ಡಿಜಿಟಲ್ ಬೋರ್ಡ್‌ಗಳನ್ನು ಒದಗಿಸಲು ನಿರ್ಧರಿಸಿದ್ದ ಸರ್ಕಾರ, ಈಗ ಪಠ್ಯಪುಸ್ತಕಗಳನ್ನೂ ಉಚಿತವಾಗಿ…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಹೈಟೆಕ್ ಮಾಡಲು ಭಾರಿ ಯೋಜನೆ ರೂಪಿಸಿದೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯ (KGBV) ಸೇರಿದಂತೆ ಒಟ್ಟು ಸಾವಿರಾರು ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಧುನಿಕ ಡಿಜಿಟಲ್ ಬೋರ್ಡ್ ಹಾಗೂ ಇತರೆ ಪರಿಕರಗಳನ್ನು ನೀಡಲು ನಿರ್ಧರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಸ್ಮಾರ್ಟ್‌ ಕಲಿಕಾ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಕೆಳಗಿನ ಉಪಕರಣಗಳನ್ನು ವಿತರಿಸಲಾಗುತ್ತಿದೆ: ಇಂಟರಾಕ್ಟೀವ್ ಡಿಸ್‌ಪ್ಲೇ ಬೋರ್ಡ್‌ಗಳು: ಒಟ್ಟು 3,767 ಅತ್ಯಾಧುನಿಕ ಸ್ಪರ್ಶ ಸಂವೇದಿ (Interactive) ಡಿಸ್‌ಪ್ಲೇ ಬೋರ್ಡ್‌ಗಳು. ವಿದ್ಯುತ್ ಬ್ಯಾಕ್-ಅಪ್: ನಿರಂತರ ಬೋಧನೆಗಾಗಿ 3,767 ಯುಪಿಎಸ್ (UPS) ಮತ್ತು ಬ್ಯಾಟರಿಗಳ ವ್ಯವಸ್ಥೆ. ಪ್ರೊಜೆಕ್ಟರ್‌ಗಳು: ಆಯ್ದ ಶಾಲೆಗಳಿಗೆ 109 ಎಲ್‌ಇಡಿ (LED) ಪ್ರೊಜೆಕ್ಟರ್‌ಗಳ ವಿತರಣೆ. ಈ ಬೃಹತ್ ಯೋಜನೆಗಾಗಿ ಸರ್ಕಾರವು ಒಟ್ಟು 89.66 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದು, ಪಾರದರ್ಶಕ ಖರೀದಿ ಪ್ರಕ್ರಿಯೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ.…

Read More