Subscribe to Updates
Get the latest creative news from FooBar about art, design and business.
Author: kannadanewsnow09
ಹಾಸನ: ಜಿಲ್ಲೆಯಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡಿ, ಹನಿಟ್ರ್ಯಾಪ್ ಮಾಡಿ, ಆ ಬಳಿಕ ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದಂತ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯ ಪೊಲೀಸರಿಂದ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಂತ ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರನ್ನು ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಹಾಗೂ ಪತಿ ಧರ್ಮರಾಜು ಆಲಿಯಾಸ್ ಫಣಿ ಸೇರಿದಂತೆ ನಾಲ್ವರಾಗಿದ್ದಾರೆ. ಅತಿಥಿ ಉಪನ್ಯಾಸಕಿ ನಾಗಲಕ್ಷ್ಮೀ ಅವರೇ ಈ ಹನಿಟ್ರ್ಯಾಪ್ ಜಾಲದ ಕಿಂಗ್ ಪಿನ್ ಎನ್ನಲಾಗಿದೆ. ಬಡ, ಅಸಾಹಯಕ ಮಹಿಳೆಯರನ್ನು ಮುಂದಿಟ್ಟುಕೊಂಡು, ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದಂತ ಆರೋಪ ಬಂಧಿತರ ಮೇಲಿದೆ. ಸಂತ್ರಸ್ತ ಮಹಿಳೆಯೊಬ್ಬರು ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ತೆರಳಿದ್ದರು. ಇದೇ ಸಮಯದಲ್ಲಿ ಅವರಿಪ್ಪರ ಪೋಟೋ ತೆಗೆದು, ಆತನಿಗೆ ಕುಳುಹಿಸಿದ್ದರು. ಈ ವೇಳೆಗೆ ನಾಗಲಕ್ಷ್ಮಿ, ಆಕೆಯ ಗಂಡ ಮನೆಗೆ ತೆರಳಿ, ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಒತ್ತಾಯಿಸಿದ್ದರು. ಅತ್ಯಾಚಾರ ಪ್ರಕರಣ ದಾಖಲಿಸೋದಕ್ಕೆ ಹಿಂದೇಟು ಹಾಕಿದಂತ ಸಂತ್ರಸ್ತ ಮಹಿಳೆಯನ್ನು ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿರುವ…
ಬೆಂಗಳೂರು: ಆರ್ಸೆಲರ್ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ಇಂದು ತನ್ನ ಮೌಲ್ಯವರ್ಧಿತ ಪೋರ್ಟ್ಫೋಲಿಯೊವನ್ನು AM/NS ವೈಬ್ರಾನ್ಸ್ ಮತ್ತು AM/NS ಆಪ್ಟಿಮಾದೊಂದಿಗೆ ಬಲಪಡಿಸುವುದಾಗಿ ಘೋಷಿಸಿದೆ. ಉಪಕರಣ ಮತ್ತು ಕೈಗಾರಿಕಾ ಉತ್ಪಾದನಾ ಪರಿಸರ ವ್ಯವಸ್ಥೆಗಳಲ್ಲಿ ಮೂಲ ಸಲಕರಣೆ ತಯಾರಕರ (OEM ಗಳು) ಹೆಚ್ಚುತ್ತಿರುವ ವಿನ್ಯಾಸ-ನೇತೃತ್ವದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಎರಡು ವಿಶ್ವ ದರ್ಜೆಯ, ಪ್ರೀಮಿಯಂ ಬ್ರಾಂಡ್ ಸ್ಟೀಲ್ ಪರಿಹಾರಗಳು ಇವಾಗಿವೆ. ಈ ಕುರಿತು ಮಾತನಾಡಿದ ಎಎಂ/ಎನ್ಎಸ್ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಮತ್ತು ಉಪಾಧ್ಯಕ್ಷ ರಂಜನ್ ಧರ್, ಸ್ಥಿರವಾದ ಮೇಲ್ಮೈ ಗುಣಮಟ್ಟ, ಬಿಗಿಯಾದ ಸಹಿಷ್ಣುತೆ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸಂಯೋಜಿಸುವ ಉಕ್ಕಿನ ಬೇಡಿಕೆ ಹೆಚ್ಚುತ್ತಿರುವುದರಿಂದ, AM/NS ಇಂಡಿಯಾ ತನ್ನ ಮೌಲ್ಯವರ್ಧಿತ ಪೋರ್ಟ್ಫೋಲಿಯೊವನ್ನು ಬ್ರಾಂಡ್ ಕೊಡುಗೆಗಳೊಂದಿಗೆ ವಿಸ್ತರಿಸುತ್ತಿದೆ, ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರೀಮಿಯಂ, ಅಂತರರಾಷ್ಟ್ರೀಯವಾಗಿ ಮಾನದಂಡದ ಗುಣಮಟ್ಟವನ್ನು ದೇಶೀಯವಾಗಿ ಲಭ್ಯವಾಗುವಂತೆ ಮಾಡುತ್ತದೆ. ಈ ಎರಡು ಬ್ರಾಂಡ್ ಲೇಪಿತ ಕೊಡುಗೆಗಳು ಈಗ ಮೌಲ್ಯವರ್ಧಿತ ಉತ್ಪನ್ನ ಪೋರ್ಟ್ಫೋಲಿಯೊದ ಭಾಗವಾಗಿದೆ, ಇದರಲ್ಲಿ…
ಬೆಂಗಳೂರು: ವೈಜ್ಞಾನಿಕ ಆಧಾರಿತ ಚಿಕಿತ್ಸೆ ಹಾಗೂ ವೆಲ್ನೆಸ್ ಕಾಪಾಡುವ “ಬಾಡಿ ಡೈನಾಮಿಕ್ಸ್ʼ ಎಂಬ ವಿಶೇಷ ವಿಭಾಗವನ್ನು ಹ್ಯಾಪಿಯೆಸ್ಟ್ ಹೆಲ್ತ್ ತೆರೆದಿದ್ದು, ಇದರ ವೈದ್ಯಕೀಯ ನಿರ್ದೇಶಕಿಯಾಗಿ ಭಾರತಿ ಜಜೂ ಅವರನ್ನು ನೇಮಕ ಮಾಡಿದೆ. 35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಜಜೂ ಅವರು, ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಅನುಭವ ಹೊಂದಿದ್ದಾರೆ. ಬಾಡಿ ಡೈನಾಮಿಕ್ಸ್ ವಿಭಾಗವು ಎರ್ಗೋನಾಮಿಕ್ಸ್ (Ergonomics), ಫಿಸಿಯೋಥೆರಪಿ ಮತ್ತು ಯೋಗದ ಮೂಲಕ ಸಮಗ್ರ ಪುನಶ್ಚೇತನ ಸೇವೆಯನ್ನು(rehabilitation) ನೀಡುತ್ತದೆ. ಸಾಮಾನ್ಯ ವೆಲ್ನೆಸ್ ಅಷ್ಟೆ ಅಲ್ಲದೆ, ವೈಜ್ಞಾನಿಕ ಆಧಾರಿತ ಚಿಕಿತ್ಸೆ ಮತ್ತು ಕೆಲಸದ ಸ್ಥಳದಲ್ಲಿ ಉನ್ನತ ಮಟ್ಟದ ಆರೋಗ್ಯವನ್ನು ಕಾಪಾಡುವ ಉದ್ದೇಶದೊಂದಿಗೆ ಈ ವಿಭಾಗವನ್ನು ತೆರೆಯಲಾಗಿದೆ. ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ, “ಬಾಡಿ ಡೈನಾಮಿಕ್ಸ್ ವಿಭಾಗವನ್ನು ವಿಜ್ಞಾನ ಆಧಾರಿತ ಆರೋಗ್ಯ ವ್ಯವಸ್ಥೆಯನ್ನಾಗಿ ರೂಪಿಸಲಾಗಿದೆ. ಇಂದು ಕೇವಲ ಹೆಲ್ತ್ನೆಸ್ ಬಗ್ಗೆ ಜಾಗೃತಿ ಮೂಡಿಸಿದರೂ ಅದನ್ನು ಫಾಲೋ…
ಬೆಳಗಾವಿ: ಜಿಲ್ಲೆಯಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಅದರಲ್ಲಿ ತೆರಳುತ್ತಿದ್ದಂತ ದಂಪತಿಗಳು, ಅವರ ಪುತ್ರಿ ಸ್ಥಳದಲ್ಲೇ ಸಾವನ್ನಪ್ಪಿರುವಂತ ಭೀಕರ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಆಲಖನೂರು ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಗೀರೆಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ, ಪುತ್ರಿ ಆರಾಧ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/7-commission-should-be-given-for-garbage-tender-bill-sanction-special-loc-r-ashok-makes-serious-allegations/
ಬೆಂಗಳೂರು: ಕಸದ ಟೆಂಡರ್ ಪಡೆಯೋದಕ್ಕೆ ಶೇ.7ರಷ್ಟು, ಬಿಲ್ ಮಂಜೂರಾತಿಗೆ ಶೇ.7, ಎಲ್ಒಸಿಗೆ ಶೇ.7ರಷ್ಟು ಕಮೀಷನ್ ನೀಡಬೇಕು ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಸದ ಟೆಂಡರ್ ಪಡೆಯಲು ಶೇ.7ರಷ್ಟು ಕಮಿಷನ್ ಕೊಡಬೇಕು. ಬಿಲ್ ಮಂಜೂರಾತಿಗೆ 7%, ಸ್ಪೆಷಲ್ ಎಲ್ಒಸಿಗೆ 7% ಕೊಡಬೇಕು ಎಂಬುದಾಗಿ ಆರೋಪಿಸಿದರು. ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೆ ಶೇಕಡಾ 21ರಷ್ಟು ಕಮೀಷನ್ ಹೋಗುತ್ತೆ. ಇದಲ್ಲದೇ ಇಂಜಿನಿಯರ್ ಗಳಿಗೆ ಬೇರೆ ರೀತಿಯಲ್ಲಿ ಕೊಡಬೇಕು. ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಸರ್ಕಾರದ ಮಾಫಿಯಾವೇ ಕಾರಣವಾಗಿದೆ ಎಂದರು.
ಬೆಂಗಳೂರು: ತಾನು ಸಾವನ್ನಪ್ಪಿದರೇ ಪತ್ನಿಯನ್ನು ನೋಡಿಕೊಳ್ಳಲು ಸಂಬಂಧಿಕರೇ ಇಲ್ಲವೆಂದು, ಉಸಿರುಗಟ್ಟಿಸಿ ವೃದ್ದ ಪತಿಯೊಬ್ಬ ಕೊಂದಿರುವಂತ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಇಸ್ರೋ ನಿವೃತ್ತ ನೌಕರನಿಂದಲೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಲಾಗಿದೆ. ಬೆಂಗಳೂರಿನ ಅವಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಿರ್ಟುಸೋ ಅಪಾರ್ಮೆಂಟ್ ನಲ್ಲಿ ನೆಲೆಸಿದ್ದಂತ ವೃದ್ಧನೊಬ್ಬ ಈ ಕೃತ್ಯ ಎಸಗಿದ್ದಾನೆ. ಪತ್ನಿ ಸಂಧ್ಯಾ ಎಂಬುವರನ್ನು ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್ ಎಂಬುವರು ಹತ್ಯೆಗೈದಿದ್ದಾರೆ. ನಾನು ಸತ್ತರೆ ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಗೆ ತಿಳಿದು ಬಂದಿದೆ. ಮಾನಸಿಕ ಅಸ್ವಸ್ಥನಂತೆ ನಾಗಲೇಶ್ವರ ರಾವ್ ವರ್ತಿಸುತ್ತಿದ್ದಾರೆ. ನಾನು ಸತ್ತರೆ ನನ್ನ ಪತ್ನಿ ಯಾರು ನೋಡಿಕೊಳ್ಳುತ್ತಾರೆಂದು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೇ ಅವರ ಓರ್ವ ಮಗಳು ಅಮೇರಿಕಾದಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. https://kannadanewsnow.com/kannada/transport-department-employees-brutally-murdered-over-property-dispute-fir-registered-against-10-people/
ಬಾಗಲಕೋಟೆ: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ಬಾಗಲಕೋಟೆಯಲ್ಲಿ ಹೃದಯಾಘಾತದಿಂದ ಪತಿ ಸಾವನ್ನಪ್ಪಿದಂತ ಸುದ್ದಿ ಕೇಳಿದಂತ ಪತ್ನಿಯೂ ಪ್ರಾಣ ಬಿಟ್ಟಿರುವಂತ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ನಗರದಲ್ಲಿ ಪತಿಯ ಸಾವಿನ ಸುದ್ದಿ ಕೇಳಿದಂತ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಆ ಮೂಲಕ ಪತಿ, ಪತ್ನಿ ಸಾವಿನಲ್ಲೂ ಒಂದಾಗಿರುವಂತ ಮನಕಲಕುವ ಘಟನೆ ನಡೆದಿದೆ. ಲೋ ಬಿಪಿಯಿಂದ ಶಶಿಧರ್ ಪತ್ತಾರ್(40) ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯದಲ್ಲೇ ಹೃದಯಾಘಾತದಿಂದ ಅವರು ನಿಧನರಾಗಿದ್ದರು. ಪತಿ ಶಶಿಧರ್ ಪತ್ತಾರ್ ಸಾವಿನ ಸುದ್ದಿ ಕೇಳಿದಂತ ಅವರ ಪತ್ನಿ ಸರೋಜಾ(35) ಮನೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತಿ-ಪತ್ನಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದನ್ನು ಕಂಡು ಕುಟುಂಬಸ್ಥರು ಮಮ್ಮಲ ಮರುಗಿದ್ದಾರೆ. ಸಾವಿನಲ್ಲೂ ಒಂದಾದಂತ ಗಂಡ-ಹೆಂಡತಿಯ ಮನಕಲಕುವಂತ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. https://kannadanewsnow.com/kannada/transport-department-employees-brutally-murdered-over-property-dispute-fir-registered-against-10-people/
ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆಯ ನೌಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ 10 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಾಸನದ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯ ನೌಕರ ವೀರಪ್ಪ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರ ಪುತ್ರ ವಿವೇಕ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸಾರಿಗೆ ಇಲಾಖೆ ನೌಕರ ವೀರಪ್ಪ ಹತ್ಯೆ ಪ್ರಕರಣದಲ್ಲಿ ಮಲ್ಲಮ್ಮ, ಹರೀಶ, ಮಹದೇವಮ್ಮ, ಬಾಗಲಯ್ಯ, ಲೋಕೇಶ, ಸತೀಶ, ಧರ್ಮ, ಜಯರಾಮ, ಸ್ವಾಮಿ ಎಂಬುವರು ಸೇರಿದಂತೆ 10 ಮಂದಿ ವಿರುದ್ಧ ಆಲೂರು ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. https://kannadanewsnow.com/kannada/attention-public-ksrtc-bmtc-bus-services-to-be-suspended-from-tomorrow-evening/
ಬೆಂಗಳೂರು: ನಾಳೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ. ಬೆಂಗಳೂರು ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಸಂಜೆಯಿಂದಲೇ ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಆ ಮೂಲಕ ಸಾರ್ವಜನಿಕರಿಗೆ ಬಸ್ ಸಂಚಾರವಿಲ್ಲದ ಬಿಸಿ ಮುಟ್ಟಲಿದೆ ಎಂಬುದಾಗಿ ತಿಳಿದು ಬಂದಿದೆ. ನಾಳೆ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಕೂಡ ನಡೆಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳು ಸೇರಿದಂತೆ ಬಿಎಂಟಿಸಿ ನೌಕರರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಸಂಜೆ 4 ಗಂಟೆಯಿಂದ ಸಾರಿಗೆ ಬಸ್ ಸಂಚಾರವು ವ್ಯತ್ಯಯ ಉಂಟಾಗೋ ಸಾಧ್ಯತೆ ಇದೆ. ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದ್ದು, ಸಾರ್ವಜನಿಕರಿಗೆ ಬಸ್ ಸಂಚಾರವಿಲ್ಲದ ಬಿಸಿ ಮುಟ್ಟೋ ಸಾಧ್ಯತೆ ಇದೆ.
ಬೆಂಗಳೂರು: ನರೇಗಾ ಯೋಜನೆಯ ಅಡಿಯಲ್ಲಿ ಹಣ ದುರುಪಯೋಗ ಸರ್ಕಾರದ ನಿಯಮಗಳ ಅಡಿ ಅಪರಾಧವಾಗಿದೆ. ಇದಕ್ಕೆ ದಂಡವನ್ನು ವಿಧಿಸಬಹುದು. ಹಾಗಾದರೆ ಕಾಯ್ದೆ ಏನು ಹೇಳುತ್ತದೆ ಅಂತ ಮುಂದಿದೆ ಓದಿ. 1. ನರೇಗಾ ಯೋಜನೆಯ ಅಡಿಯಲ್ಲಿ ಹಣದ ದುರ್ಬಳಕೆ ಅಪರಾಧವಾಗಿದ್ದು ದಂಡ ಹಾಗೂ ನಷ್ಟಪೂರಣ ಕಡ್ಡಾಯ — (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005, ಸೆಕ್ಷನ್ 25; ವ್ಯಾಖ್ಯಾನ “Scheme” ಸೆಕ್ಷನ್ 2(p)). 2. ದುರ್ಬಳಕೆಯಾದ ಸಂಪೂರ್ಣ ಮೊತ್ತವನ್ನು ರಾಜ್ಯ ಉದ್ಯೋಗ ಖಾತರಿ ನಿಧಿಗೆ ಮರುಪಾವತಿಸಬೇಕಾದ ಕಾನೂನು ಬಾಧ್ಯತೆ ಇದೆ — (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005, ಸೆಕ್ಷನ್ 21). 3. ಗ್ರಾಮ ಪಂಚಾಯಿತಿ ಮಟ್ಟದ ಕಾಮಗಾರಿಗಳ ಮೇಲೆ ಸಾಮಾಜಿಕ ಆಡಿಟ್ ಹಾಗೂ ಮೇಲ್ವಿಚಾರಣೆ ಕಡ್ಡಾಯ — (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005, ಸೆಕ್ಷನ್ 16 ಮತ್ತು 17). 4. ಪ್ರೋಗ್ರಾಂ ಅಧಿಕಾರಿ ದೂರು ಸ್ವೀಕರಿಸಿ ದುರ್ಬಳಕೆಯ ವಿಚಾರದಲ್ಲಿ…














