Subscribe to Updates
Get the latest creative news from FooBar about art, design and business.
Author: kannadanewsnow09
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಹೂಡಾ (ಬಿ) ಗ್ರಾಮದಲ್ಲಿ ಗ್ರಾಪಂ ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಹಲವು ಮಕ್ಕಳು ವಾಂತಿ ಭೇದಿ ಮತ್ತು ಅಸ್ವಸ್ಥತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕು ಆಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಳಖೇಡ ಗ್ರಾಪಂ ಉಪಾದ್ಯಕ್ಷರು ಸೇರಿದಂತೆ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ತೆಲ್ಕೂರ ಜಿಮ್ಸ್ ನ ವಿದ್ಯಾಧಿಕಾರಿ ಡಾ.ಶಿವಕುಮಾರ ಅವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು. ಸೇಡಂ ತಾಲೂಕಿನ ಭೀಮನಗರದ ಮಮತಾ ಎಂಬ ಐದು ವರ್ಷದ ಮಗು ಸಾವನ್ನಪ್ಪಿದೆ. ಕುಡಿಯುವ ನೀರಿನಿಂದ ಈ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಆರೋಗ್ಯದ ಕುರಿತು ಸರಕಾರಕ್ಕಾಗಲಿ ತಾಲೂಕು ಆಡಳಿತಕ್ಕಾಗಲಿ ಯಾವುದೇ ಕಾಳಜಿ ಇಲ್ಲದಂತೆ ಕಾಣುತ್ತಿದೆ. ತಾಪಂ ಇಒ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಪಿಡಿಒ ಈ…
ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅದೇ ಇ-ಖಾತಾ ಅನುಕೂಲಕ್ಕಾಗಿ ಪಾಲಿಕೆಯಿಂದ ಋಣಭಾರ ಪ್ರಮಾಣಪತ್ರವನ್ನು ವಿತರಿಸೋ ಬಗ್ಗೆ ಆಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ನಾಗರೀಕರು ಅಂತಿಮ ಇ-ಖಾತಾವನ್ನು Online ನಲ್ಲಿ ಪಡೆಯಲು ಅನುಕೂಲವಾಗುವಂತೆ ಈಗ ಪಾಲಿಕೆಯು ಋಣಭಾರ ಪ್ರಮಾಣಪತ್ರ (Encumbrance Certificate) ಅಗತ್ಯವನ್ನು ವಿನಿಯೋಗಿಸಿದೆ ಎಂದಿದೆ. ಉಪ ನೊಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಅಥವಾ ಖಾತಾ ವರ್ಗಾವಣೆ ಉದ್ದೇಶಕ್ಕಾಗಿ ಇ-ಖಾತಾ ಅನ್ನು ವಿತರಿಸಲು ಮಾತ್ರ ಋಣಭಾರ ಪ್ರಮಾಣಪತ್ರದ (Encumbrance Certificate) ಅಗತ್ಯವಿರುತ್ತದೆ ಎಂದು ಹೇಳಿದೆ. ಶೇ. 98 ರಷ್ಟು ಆಸ್ತಿಗಳು ಒಂದು ವರ್ಷದಲ್ಲಿ ಮಾರಾಟ ಅಥವಾ ವರ್ಗಾವಣೆಗೆ ಒಳಪಡುವುದಿಲ್ಲ, ಆದ್ದರಿಂದ ಈ ವ್ಯಕ್ತಿಗಳು ಈಗ ಋಣಭಾರ ಪ್ರಮಾಣಪತ್ರದ (Encumbrance Certificate) ಇಲ್ಲದಂತೆಯೇ ಅಂತಿಮ ಇ-ಖಾತಾವನ್ನು ಪಡೆಯಬಹುದು ಎಂದು ತಿಳಿಸಿದೆ. ಎಲ್ಲಾ ನಾಗರೀಕರು ತಮ್ಮ ಇತರ ವಿವರಗಳನ್ನು ಅಪ್ಲೋಡ್ ಮಾಡಲು ಮತ್ತು ಅವರ ಅಂತಿಮ ಇ-ಖಾತವನ್ನು https://BBMPeAasthi.karnataka.gov.in ನಿಂದ ಡೌನ್ಲೋಡ್ ಮಾಡಲು ವಿನಂತಿಸಲಾಗಿದೆ. https://kannadanewsnow.com/kannada/the-state-government-has-announced-the-list-of-golden-jubilee-awardees-for-the-year-2024/…
ಬೆಂಗಳೂರು: ನಗರದಲ್ಲಿ ರೈಲಿನಲ್ಲಿ ಬಿಟ್ಟಿದ್ದ ಬೆಲೆಬಾಳುವ ಚಿನ್ನದ ಆಭರಣಗಳನ್ನು ಮಾಲೀಕರಿಗೆ ಸುರಕ್ಷಿತವಾಗಿ ರೈಲ್ವೆ ಸಿಬ್ಬಂದಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ರೈಲು ಸಂಖ್ಯೆ 16580 ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಬಿಟ್ಟಿದ್ದ ಸುಮಾರು 5.4 ಲಕ್ಷ ರೂ.ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ನೈಋತ್ಯ ರೈಲ್ವೆ ತಂಡ ಯಶಸ್ವಿಯಾಗಿ ವಶಪಡಿಸಿಕೊಂಡು ವಾಪಸ್ ಹಿಂದಿರಿಗಿಸಿದ್ದಾರೆ. ತುಮಕೂರು ಹೊರಠಾಣೆಯಿಂದ ಚೀಲ ಕಾಣೆಯಾದ ಬಗ್ಗೆ ಮಾಹಿತಿ ಪಡೆದ ರೈಲ್ವೆ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಯಶವಂತಪುರ ನಿಲ್ದಾಣದಲ್ಲಿ ರೈಲಿನ ಹಿಂಭಾಗದ ಸಾಮಾನ್ಯ ಬೋಗಿಯಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅಧಿಕಾರಿಗಳು ಎಚ್ಚರಿಕೆಯಿಂದ ಪರಿಶೀಲಿಸಿದ್ದಾರೆ. ಅದರಲ್ಲಿ 40 ಗ್ರಾಂ ತೂಕದ ಮಂಗಳಸೂತ್ರ, 20 ಗ್ರಾಂ ತೂಕದ ಹಾರ, 1,40,000 ರೂ ಮೌಲ್ಯದ ಹಾರ, 50,000 ರೂ ಮೌಲ್ಯದ 10 ಗ್ರಾಂ ತೂಕದ ಒಂದು ಜೋಡಿ ಕಿವಿಯೋಲೆಗಳು ಮತ್ತು 10 ಗ್ರಾಂ ತೂಕದ 70,000 ರೂ ಮೌಲ್ಯದ ಕುತ್ತಿಗೆ ಸರ ಸರವಿತ್ತು. ವಶಪಡಿಸಿಕೊಂಡ ವಸ್ತುಗಳ ಸಮಗ್ರ ಪರಿಶೀಲನೆ ಮತ್ತು ದಾಖಲಾತಿ ಪ್ರಕ್ರಿಯೆಯ ನಂತರ, ಎಲ್ಲಾ ಕಾನೂನು ಔಪಚಾರಿಕತೆಗಳನ್ನು…
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬೇ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಲಾಗುತ್ತಿದೆ ಎಂದು ವಲಯ ಆಯುಕ್ತರಾದ ಸ್ನೇಹಲ್ ಅವರು ತಿಳಿಸಿದರು. ಪೂರ್ವ ವಲಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬರುವ ಮಿಟ್ಟಲ್ ಟವರ್ಸ್ ನಲ್ಲಿ ಇಂದು ಬಾಕಿ ಆಸ್ತಿ ತೆರಿಗೆ ಪಾವತಿಸದ ಗೋಯಲ್ ಆಸ್ತಿಗೆ ಭೇಟಿ ನೀಡಿ ಬೀಗ ಮುದ್ರೆ ಹಾಕಲು ಮುಂದಾದಾಗ, ಆಸ್ತಿ ಮಾಲೀಕರು ಬಾಕಿಯಿದ್ದ ರೂ.17,42,412 ಗಳ ಆಸ್ತಿ ತೆರಿಗೆಯನ್ನು ಕೂಡಲೆ ಪಾವತಿಸಲಾಗಿದೆ ಎಂದು ಹೇಳಿದರು. ಪೂರ್ವ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ವಿಭಾಗವಾರು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಕೂಡಾ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ವಾಣಿಜ್ಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪರಿಷ್ಕರಣೆ ಪ್ರಕಟಣ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ 10 ಆಸ್ತಿಗಳಿಗೆ ಖುದ್ದಾಗಿ…
ಶಿವಮೊಗ್ಗ: ಅಯೋಡಿನ್ ಕೊರತೆಯಿಂದ ಆಗಬಹುದಾದ ಆರೋಗ್ಯ ಸಮಸ್ಯೆಗಳು ಹಾಗೂ ಇಲಿಜ್ವರವನ್ನು ಬಾರದಂತೆ ತಡೆಯಬಹುದಾದ್ದರಿಂದ ಈ ಕುರಿತು ಅರಿವು ಪಡೆದುಕೊಂಡು ಮುನ್ನೆಚ್ಚರಿಕೆಯಿಂದ ಈ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಿಹೆಚ್ಓ ಡಾ.ನಟರಾಜ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್ಸಿಟಿ ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟಿçÃಯ ಸೇವಾ ಯೋಜನಾ ಘಟಕಗಳು, ಶಿವಮೊಗ್ಗ ಇವರ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಯೋಡಿನ್ ಕೊರತೆ ನಿಯಂತ್ರಣಾ ದಿನ ಹಾಗೂ ಇಲಿಜ್ವರ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಯೋಡಿನ್ ಒಂದು ಸೂಕ್ಷö್ಮ ಪೋಷಕಾಂಶವಾಗಿದ್ದು ಇದರ ಕೊರತೆ ಉಂಟಾದರೆ ಗಳಗಂಡ ಖಾಯಿಲೆ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗೂ ಇಲಿ ಮತ್ತು ಇತರೆ ಸಾಕು ಪ್ರಾಣಿಗಳ ಮೂತ್ರ ನೀರು, ಆಹಾರದಲ್ಲಿ ಬೆರೆತರೆ ಇಲಿಜ್ವರ ಉಂಟಾಗುತ್ತದೆ. ಇವೆರಡನ್ನೂ ನಾವು ನಿಯಂತ್ರಿಸಿ, ಬಾರದಂತೆ ತಡೆಯಬಹುದು. ಅಯೋಡಿನ್ ಯುಕ್ತ ಉಪ್ಪನ್ನು ಬಳಸಬೇಕು. ಇಲಿಜ್ವರದಿಂದ…
ನಮ್ಮಲ್ಲಿ ಪ್ರತಿಯೊಬ್ಬರೂ ಸಂಪತ್ತು ಮತ್ತು ಸಮೃದ್ಧಿಯಿಂದ ಬದುಕಲು ಬಯಸುತ್ತಾರೆ ಮತ್ತು ನಮ್ಮ ಎಲ್ಲಾ ಅಗತ್ಯಗಳು ಈಡೇರುತ್ತವೆ ಆದರೆ ಅದು ಎಲ್ಲರಿಗೂ ಈಡೇರುವುದಿಲ್ಲ, ಕೆಲವು ಸಂದರ್ಭಗಳಲ್ಲಿ ನಾವು ಏನನ್ನಾದರೂ ಪಡೆಯದೆ ಕಷ್ಟಪಡುತ್ತೇವೆ ಮತ್ತು ಕಷ್ಟಪಡುತ್ತೇವೆ. ದೀಪಾವಳಿಯಂದು ಖರೀದಿಸಬೇಕಾದ ವಸ್ತುಗಳು ದೀಪಾತ್ರಿ ದಿನವೆಂದು ಪರಿಗಣಿಸಬಹುದಾದ ದಿನದಂದು ನಾವು ದೀಪಾವಳಿಯನ್ನು ಆಚರಿಸುತ್ತೇವೆ. ಅಂದು ಉತ್ತರ ರಾಜ್ಯಗಳ ಜನರು ಮನೆಯೆಲ್ಲ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸುತ್ತಾರೆ. ದೀಪಾವಳಿಯಲ್ಲಿ ಸಂಜೆ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಲಕ್ಷ್ಮೀ ಪೂಜೆ ಮಾಡುವ ಅಭ್ಯಾಸವಿಲ್ಲದವರೂ ಸಹ ತಮ್ಮ ಬಡತನವನ್ನು ಹೋಗಲಾಡಿಸಲು ಖರೀದಿಸಬೇಕಾದ ಐದು ಪ್ರಮುಖ ವಸ್ತುಗಳನ್ನು ನಾವು ನೋಡಲಿದ್ದೇವೆ. ದೀಪಾವಳಿಯಲ್ಲಿ ಮಹಾಲಕ್ಷ್ಮಿ ದೇವಿಯನ್ನು ಕಟ್ಟುನಿಟ್ಟಾಗಿ ಪೂಜಿಸಬೇಕು. ಮತ್ತು ವಿಶೇಷವಾಗಿ ಈ ವರ್ಷ ದೀಪಾವಳಿ ಗುರುವಾರ ಬರುತ್ತದೆ. ಗುರುವಾರ ಕುಬೇರನ ದಿನ. ಅಂದು ಸಂಜೆ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಲಕ್ಷ್ಮಿ ಕುಬೇರ ಯೋಗ ಉಂಟಾಗುತ್ತದೆ ಎಂದು ಕೂಡ ಹೇಳಬಹುದು. ಇದು ಅಂತಹ ಶಕ್ತಿಯುತ ದಿನವಾಗಿದೆ. ಲಶ್ಮೀಪೂಜೆ ಮಾಡುವ ಅಭ್ಯಾಸವಿಲ್ಲದವರು, ಬಡತನದಿಂದ ನರಳುವವರು, ಏನೇ…
ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲುಪಾಲಾಗಿದ್ದಂತ ನಟ ದರ್ಶನ್ ಗೆ ( Actor Darshan ) 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರು ಬಳ್ಳಾರಿ ಜೈಲಿನಿಂದ 131 ದಿನಗಳ ಬಳಿಕ ಬಿಡುಗಡೆಯಾಗಿದ್ದಾರೆ. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿದ್ದರು. ಅವರಿಗೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಇಲ್ಲದಿದ್ದರೇ ಪ್ರಾಣಾಪಾಯವಿದೆ ಎಂಬುದಾಗಿ ಹೈಕೋರ್ಟ್ ಗೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ್ದಂತ ಹೈಕೋರ್ಟ್ ನ್ಯಾಯಪೀಠವು ನಟ ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿದ್ದಂತ ಜಾಮೀನಿನ ಹಿನ್ನಲೆಯಲ್ಲಿ ನಟ ದರ್ಶ್ ಅವರು ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಹೊರ ಬಂದು, ಅಲ್ಲಿಂದ ಜೈಲಿನ ಬಿಡುಗಡೆಯ ಎಲ್ಲಾ ನಿಯಮಗಳನ್ನು ಪಾಲಿಸಿ, ಸಹಿ ಹಾಕಿದ ನಂತ್ರ, ಬಳ್ಳಾರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹಲವು ತಿಂಗಳುಗಳ ಕಾಲ…
ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷರಾದ ಸ್ಟಾರ್ ಚಂದ್ರು (ವೆಂಕಟರಮಣೆ ಗೌಡ) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರಾದ ಶಿವರಾಜ್ ತಂಗಡಗಿ, ಕಡತ ಮಂಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಮನವಿ ಪಾತ್ರದಲ್ಲೇನಿದೆ? ನಾಡಿನ ಹಿರಿಯ ರಾಜಕೀಯ ನಾಯಕರು , ನಾಲ್ಕು ಸದನಗಳನ್ನು ಪ್ರತಿನಿಧಿಸಿ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಸರ್ವ ಹುದ್ದೆಗಳಿಗೂ ಭೂಷಣರಾಗಿ ದೇಶಕ್ಕೆ ಅದರಲ್ಲೂ ಕನ್ನಡ ನಾಡಿಗೆ ಹೆಮ್ಮೆಯ ಕಳಶ ಪ್ರಯಾರಾಗಿರುವ ಎಸ್.ಎಂ. ಕೃಷ್ಣ ಅವರಿಗೆ ಕರ್ನಾಟಕ ರಾಜ್ಯ ನಾಮಾಂಕಿತ ವಾಗಿ ಐವತ್ತು ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿರುವ ಶುಭ ಸಂಧರ್ಭದಲ್ಲಿ ಶ್ರೀಯುತರಿಗೆ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ…
31-10-2024 ನಾಳೆ ಕುಬೇರ ಪೂಜೆ ಮಾಡಲು ಸಾಧ್ಯವಾಗದವರು ಈ 1 ವಸ್ತುವನ್ನು ತಂದು ಪೂಜಾ ಕೋಣೆಯಲ್ಲಿ ಇರಿಸಿ. ಕೋಟಿಗಟ್ಟಲೆ ಹಣ ಹರಿದು ಬರಲಿದೆ. ಕೆಲವು ವರ್ಷಗಳ ಹಿಂದೆ ದೀಪಾವಳಿ ಎಂದರೆ ಕುಬೇರ ಪೂಜೆ ಮತ್ತು ಲಕ್ಷ್ಮಿ ಪೂಜೆ. ಉತ್ತರದವರು ದೀಪಾವಳಿಯಂದು ಭಗವಾನ್ ಕುಬೇರ ಮತ್ತು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಆದರೆ ಈಗ ಈ ಆರಾಧನೆಗಳು ನಮ್ಮ ದೇಶದಲ್ಲೂ ಬಹಳ ಜನಪ್ರಿಯವಾಗಿವೆ. ನಮ್ಮ ಕರ್ನಾಟಕ ಕರುನಾಡಿನಲ್ಲೂ ದೀಪಾವಳಿಯ ಸಂಜೆ ಕುಬೇರನ ಪ್ರತಿಮೆ, ಕುಬೇರ ಭಾವಚಿತ್ರ, ಕುಬೇರ ನಾಣ್ಯ, ಕುಬೇರ ದೀಪ ಖರೀದಿಸಿ ಈ ಲಕ್ಷ್ಮೀ ಕುಬೇರ ಪೂಜೆಯನ್ನು ಮಾಡುತ್ತಿದ್ದಾರೆ. ತಪ್ಪಿಲ್ಲ. ಪೂಜೆ ಎಲ್ಲರಿಗೂ ಸಾಮಾನ್ಯ. ಇದನ್ನು ಅವರದು ಮತ್ತು ಅವರದು ಎಂದು ವಿಭಜಿಸಲು ಮನುಷ್ಯರಿಗೆ ಅಧಿಕಾರವಿಲ್ಲ. ದೀಪಾವಳಿ ಹಬ್ಬದ ಪುಣ್ಯಕಾಲ 30.10.2024 ತ್ರಯೋದಶಿ ಬುಧವಾರ ನೀರು ತುಂಬುವ ಹಬ್ಬ, ರಾತ್ರಿ ಚಂದ್ರೋದಯ ಕಾಲದಲ್ಲಿ ನರಕ ಚತುರ್ದಶಿ ಅಭ್ಯಂಜನ (ಚಂದ್ರೋದಯ ರಾತ್ರಿ 4.25) 31.10.2024 ಚತುರ್ದಶಿ ಗುರುವಾರ ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ. 1.11.2024 ಅಮಾವಾಸ್ಯೆ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಕೆ ಎಸ್ ಆರ್ ಟಿಸಿ ಬಸ್ಸುಗಳು ಪ್ರಯಾಣಿಕರಿಗೆ ಹೈಟೆಕ್ ಸ್ಪರ್ಷದ ಅನುಭವ ನೀಡಲಿದೆ. ಹಾಗಾದ್ರೇ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸಿನ ವಿಶೇಷತೆ ಏನು.? ಲೋಕಾರ್ಪಣೆಗೊಂಡಂತ 20 ಬಸ್ಸುಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿದ್ದಾವೆ ಎನ್ನುವ ಸಂಪೂರ್ಣ ಮಾಹಿತಿ ಮುಂದೆ ಓದಿ. ಇಂದು ಐರಾವತ ಕ್ಲಬ್ ಕ್ಲಾಸ್ 2.0 ಲೋಕಾರ್ಪಣೆಗೊಳಿಸಿದ ನಂತ್ರ ಸಿಎಂ ಸಿದ್ಧರಾಮಯ್ಯ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್ನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಪರಿಹಾರ ಚೆಕ್ನ್ನು ವಿತರಿಸಿದರು. ಇಂದು, ಖಾಸಗಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ…