Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: 2025-26ನೇ ಸಾಲಿನ ಡಿಇಎಲ್ಇಡಿ, ಡಿಪಿಇಡಿ, ಡಿಪಿಎಸ್ಇ ಕೋರ್ಸ್ ಗಳ ಸೀಟು ಹಂಚಿಕೆ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದು, 2025-26ನೇ ಸಾಲಿನ ಡಿ.ಇಎಲ್.ಇಡಿ/ಡಿ.ಪಿ.ಇಡಿ/ಡಿ.ಪಿ.ಎಸ್.ಇ. ಕೋರ್ಸ್ಗಳಿಗೆ ಸರ್ಕಾರಿ ಕೋಟಾದಡಿ ಶಿಕ್ಷಣ ಸಂಸ್ಥೆಗಳಿಗೆ ನಿಯಮಾನುಸಾರ ಸೀಟು ಹಂಚಿಕೆ ಮಾಡಿ ಹಾಗೂ ದಾಖಲಾತಿ ಪತ್ರಗಳನ್ನು ಆಯಾ ಜಿಲ್ಲಾ ಡಯೆಟ್ ಕೇಂದ್ರಗಳಿಗೆ ಕಳುಹಿಸಿದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ಡಯಟ್ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಆಯ್ಕೆ ಮತ್ತು ಸೀಟು ಹಂಚಿಕೆಯಾದ ಶಿಕ್ಷಣ ಸಂಸ್ಥೆಯನ್ನು ಖಚಿತಪಡಿಸಿಕೊಂಡು, ನಿಗದಿಪಡಿಸಲಾದ ದಾಖಲಾತಿ ಶುಲ್ಕಕ್ಕೆ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ Jaint Director CAC Bangalore ಇವರ ಹೆಸರಿನಲ್ಲಿ ಹುಂಡಿಯನ್ನು ದಿನಾಂಕ:15/07/2025 ರಿಂದ 19/07/2025 ರೊಳಗೆ ಪಡೆದು ಸಂಬಂಧಪಟ್ಟ ಡಯಟ್ ಕೇಂದ್ರದಲ್ಲಿ ಸಲ್ಲಿಸುವುದರ ಮೂಲಕ ದಾಖಲಾತಿ ಪತ್ರವನ್ನು ಪಡೆಯುವುದು ಹಾಗೂ ದಿನಾಂಕ:22/07/2025ರ ಒಳಗಾಗಿ ಸಂಬಂಧಪಟ್ಟ ಸಂಸ್ಥೆಗಳಲ್ಲಿ ದಾಖಲಾಗುವುದು. ಅಂತಿಮ ದಿನಾಂಕದ ನಂತರ…
ಚಿಕ್ಕಮಗಳೂರು: ಆ ರಸ್ತೆಯಲ್ಲಿ ಮಳೆಗಾಲ ಬಂದ್ರೆ ಸಾಕು ಓಡಾಡುವುದಕ್ಕೆ ಕಷ್ಟ. ಕೆಸರು ಗದ್ದೆಯಾಗುವ ಸ್ಥಿತಿ. ಆದರಲ್ಲೂ ಮಳೆಗಾಲದಲ್ಲಿ ಶಾಲೆಗೆ ಹೋಗೋದಕ್ಕೆ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಷ್ಟ. ಹೀಗಾಗಿ ನಮ್ಮೂರಿನ ರಸ್ತೆ ಮಾಡಿಸಿಕೊಡುವಂತೆ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮಲಗಾರು ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಎಂಬುವರೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಾಕೆ. ಲೋಕನಾಥಪುರ ಗ್ರಾಮದಲ್ಲಿ 8ನೇ ತರಗತಿ ಓದುತ್ತಿರುವಂತ ಸಿಂಧೂರ ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದಾಗಿದೆ. ರಸ್ತೆ ತುಂಬಾ ಹಾಳಾಗಿದ್ದು, ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾಳೆ. ನಮ್ಮ ಊರಿನಿಂದ 3-4 ಕಿಲೋಮೀಟರ್ ದೂರದಲ್ಲಿ ಶಾಲೆಯಿದೆ. ಆ ಶಾಲೆಗೆ ತೆರಳೋದಕ್ಕೆ ಸಾಗಬೇಕಾದಂತ ರಸ್ತೆಯು ಗುಂಡಿ, ಕೆಸರಿನಿಂದ ತುಂಬಿದೆ. ವಾರದಲ್ಲಿ 2-3 ದಿನ ಶಾಲೆಗೆ ಹೋಗೋದಕ್ಕೂ ಆಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಬರೋದಕ್ಕೂ ಕಷ್ಟವಾಗಿದೆ. ನಮ್ಮ ಊರಿಗೆ ಯಾವುದೇ ವಾಹನ ಬರೋದಕ್ಕೆ ಆಗುತ್ತಿಲ್ಲ ಎಂಬುದಾಗಿ ಪ್ರಧಾನಿ ಮೋದಿಗೆ ಬರೆದಂತ ಪತ್ರದಲ್ಲಿ…
ಬೆಂಗಳೂರು: ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್.5ರಿಂದ ಸಾರಿಗೆ ಸಿಬ್ಬಂದಿಗಳು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಕರ್ನಾಟಕದಲ್ಲಿನ ಸಾರಿಗೆ ಸಿಬ್ಬಂದಿಗಳ ಸೇವಾ ಭದ್ರತೆ, ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಈ ಮುಷ್ಕರ ನಡೆಸಲಾಗುತ್ತಿದೆ ಎಂದಿದೆ. ಸಾರಿಗೆ ನಿಗಮಗಳ ಸಿಬ್ಬಂದಿಗಳು ಈ ಹಿಂದೆಯೂ ಮುಷ್ಕರ ನಡೆಸಿದ್ದರು. ಆ ಸಂದರ್ಭದಲ್ಲಿ ನೌಕರರ ಕೆಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿತ್ತು. ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸುವುದು ಬಾಕಿ ಉಳಿದಿದೆ. ಹೀಗಾಗಿ ಮತ್ತೆ ಸಾರಿಗೆ ಸಿಬ್ಬಂದಿಗಳು ಅನಿರ್ಧಿಷ್ಟಾವಧಿಯ ಮುಷ್ಕರಕ್ಕೆ ನಿರ್ಧಾರ ಕೈಗೊಂಡಿದ್ದಾರೆ. https://kannadanewsnow.com/kannada/israeli-strike-hits-syrian-army-headquarters-in-damascus/ https://kannadanewsnow.com/kannada/bbmp-good-news-for-newly-appointed-municipal-workers/
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ ನೇಮಕಗೊಂಡಂತ ಪೌರಕಾರ್ಮಿಕರಿಗೆ ವೇತನವನ್ನು ಹೆಚ್ ಆರ್ ಎಂ ಎಸ್ ತಂತ್ರಾಂಶದಲ್ಲಿ ಪಾವತಿಸುವುದಾಗಿ ಬಿಬಿಎಂಪಿ ತಿಳಿಸಿದೆ. ಈ ಮೂಲಕ ಹೊಸದಾಗಿ ನೇಮಕಗೊಂಡ ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಆದೇಶ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಡಿ.ಪಿ.ಎಸ್, ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ 12692 ನೌಕರರನ್ನು ಪಾಲಿಕೆಯಲ್ಲಿ ಕ್ರಮಬದ್ಧಗೊಳಿಸಿ ಆದೇಶಿಸಿದೆ ಎಂದಿದ್ದಾರೆ. ಸದರಿ ಪೌರಕಾರ್ಮಿಕರಿಗೆ ಪಾಲಿಕೆಯ ಖಾಯಂ ನೌಕರರಿಗೆ ಪಾವತಿಸುವ ವೇತನದಂತೆ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ವೇತನವನ್ನು ಪಾವತಿಸಲು ಕ್ರಮ ವಹಿಸುವಂತೆ ಉಲ್ಲೇಖಿತದ ಕಛೇರಿ ಆದೇಶದಲ್ಲಿ ಆದೇಶಿಸಿರುವುದರಿಂದ ಸದರಿ ಆದೇಶದಂತೆ ಪಾಲಿಕೆಯಲ್ಲಿ ಕ್ರಮಬದ್ಧಗೊಂಡಿರುವ ಡಿ.ಪಿ.ಎಸ್. ಪೌರಕಾರ್ಮಿಕರ ವೇತನವನ್ನು ಜುಲೈ-2025ರ ಮಾಹೆಯಿಂದ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಿ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. https://kannadanewsnow.com/kannada/israeli-strike-hits-syrian-army-headquarters-in-damascus/ https://kannadanewsnow.com/kannada/these-are-the-foods-that-can-cause-cancer/
ಇಸ್ರೇಲ್: ಡಮಾಸ್ಕಸ್ನಲ್ಲಿರುವ ಸಿರಿಯನ್ ಸೇನೆಯ ಪ್ರಧಾನ ಕಚೇರಿಯ ಪ್ರವೇಶ ದ್ವಾರದ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಸಿರಿಯನ್ ರಾಜಧಾನಿಯಲ್ಲಿ ಜೋರಾಗಿ ಸ್ಫೋಟದ ಶಬ್ದ ಕೇಳಿದ ಸ್ವಲ್ಪ ಸಮಯದ ನಂತರ ಮಿಲಿಟರಿಯ ಹೇಳಿಕೆ ಬಂದಿದೆ. ಸಿರಿಯಾದ ದಕ್ಷಿಣದಲ್ಲಿರುವ ಡ್ರೂಜ್ ಬಹುಸಂಖ್ಯಾತ ನಗರವಾದ ಸುವೈದಾ ಮೇಲೆ ದಾಳಿ ಮಾಡುತ್ತಿರುವುದಾಗಿ ಇಸ್ರೇಲ್ ಸೇನೆ ಪ್ರತ್ಯೇಕವಾಗಿ ಹೇಳಿದ್ದು, “ವಿವಿಧ ಸನ್ನಿವೇಶಗಳಿಗೆ” ಸಿದ್ಧವಾಗಿದೆ ಎಂದು ಹೇಳಿದೆ. ಇದಕ್ಕೂ ಮೊದಲು, ಸಿರಿಯನ್ ರಾಜ್ಯ ಸುದ್ದಿ ಸಂಸ್ಥೆ ಇಸ್ರೇಲಿ ಡ್ರೋನ್ಗಳು ನಗರವನ್ನು ಗುರಿಯಾಗಿಸಿಕೊಂಡು ನಾಗರಿಕ ಸಾವುನೋವುಗಳಿಗೆ ಕಾರಣವಾಗಿವೆ ಎಂದು ಹೇಳಿದೆ. ಮಂಗಳವಾರ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಸಶಸ್ತ್ರ ಗುಂಪುಗಳು ಮತ್ತು ಸರ್ಕಾರಿ ಪಡೆಗಳ ನಡುವೆ ಸುವೈದಾದಲ್ಲಿ ಇಂದು ಮುಂಜಾನೆ ಹೋರಾಟ ಪುನರಾರಂಭವಾದ ನಂತರ ಈ ದಾಳಿಗಳು ನಡೆದಿವೆ. ಡ್ರೂಜ್ ಅನ್ನು ರಕ್ಷಿಸಲು ತಾನು ಕಾರ್ಯನಿರ್ವಹಿಸುತ್ತಿರುವುದಾಗಿ ಇಸ್ರೇಲ್ ಹೇಳಿದೆ. ಡ್ರೂಜ್ ಧಾರ್ಮಿಕ ಪಂಥವು ಶಿಯಾ ಇಸ್ಲಾಂನ ಶಾಖೆಯಾದ ಇಸ್ಮಾಯಿಲಿಸಂನ 10 ನೇ ಶತಮಾನದ ಶಾಖೆಯಾಗಿ ಪ್ರಾರಂಭವಾಯಿತು. ವಿಶ್ವಾದ್ಯಂತ…
ಕ್ಯಾನ್ಸರ್ ನಮ್ಮ ಕಾಲದ ಅತ್ಯಂತ ಭಯಂಕರ ರೋಗಗಳಲ್ಲಿ ಒಂದಾಗಿದೆ. ತಳಿಶಾಸ್ತ್ರ ಮತ್ತು ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ದೈನಂದಿನ ಆಹಾರ ಆಯ್ಕೆಗಳು ಸಹ ಕ್ಯಾನ್ಸರ್ ಅಪಾಯದ ಮೇಲೆ ಸದ್ದಿಲ್ಲದೆ ಪ್ರಭಾವ ಬೀರುತ್ತವೆ. ಹಾಗಾದ್ರೆ ಕ್ಯಾನ್ಸರ್ ಗೆ ಕಾರಣವಾಗುವಂತ ಆಹಾರಗಳ ಬಗ್ಗೆ ಮುಂದೆ ಓದಿ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಹಾರ್ವರ್ಡ್ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಗಿರುವ ಡಾ. ಸೌರಭ್ ಸೇಥಿ, ಕ್ಯಾನ್ಸರ್ ಬೆಳವಣಿಗೆ ಮತ್ತು ಪ್ರಗತಿಗೆ ವಿಜ್ಞಾನವು ಸಂಪರ್ಕಿಸುವ ಆರು ದೈನಂದಿನ ಆಹಾರ ಪದಾರ್ಥಗಳನ್ನು ಹೈಲೈಟ್ ಮಾಡಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಆ ಆಹಾರಗಳನ್ನು ತಪ್ಪಿಸಿದರೇ ನೀವು ಕ್ಯಾನ್ಸರ್ ನಿಂದ ದೂರವಿರಬಹುದು. ಅಲ್ಟ್ರಾ-ಸಂಸ್ಕರಿಸಿದ ಮಾಂಸಗಳು: ಕ್ಯಾನ್ಸರ್ನ ಮೌನ ಆಹ್ವಾನ ಸಂಸ್ಕರಿಸಿದ ಮಾಂಸಗಳನ್ನು ಪ್ರೋಟೀನ್-ಭರಿತ ಆಯ್ಕೆಗಳಾಗಿ ನೋಡಲಾಗುತ್ತದೆ. ಕೆಲವರು ಅವುಗಳನ್ನು ಸುಲಭವಾದ ಊಟದ ಆಯ್ಕೆಗಳೆಂದು ಪರಿಗಣಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸಂಸ್ಕರಿಸಿದ ಮಾಂಸಗಳನ್ನು ಗುಂಪು 1 ಕಾರ್ಸಿನೋಜೆನ್ಗಳು ಎಂದು ವರ್ಗೀಕರಿಸಲಾಗಿದೆ. ಅಂದರೆ ಅವು ಕ್ಯಾನ್ಸರ್ಗೆ ಕಾರಣವಾಗಬಹುದು. ವಿಶೇಷವಾಗಿ…
ಬೆಂಗಳೂರು: ಕೋವಿಡ್ ಲಸಿಕೆಗೂ, ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ಈಗಾಗಲೇ ತಿಳಿದಿದೆ ಎಂಬುದಾಗಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದೆ. ರಾಜ್ಯದಲ್ಲಿ ದಾಖಲಾಗುತ್ತಿರುವ ಹೃದಯಾಘಾತ ಪ್ರಕಾರಣಗಳಿಂದ ಯಾರು ಹೆದರುವ ಹಾಗೂ ಗೊಂದಲಗೊಳ್ಳುವ ಅವಶ್ಯಕತೆ ಇಲ್ಲ, ಬದಲಿಗೆ ಆರೋಗ್ಯ ತಪಾಸಣೆ ಮಾಡಿಸಿ, ಸಮತೋಲನ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಂದಾಗಿ ಆತಂಕಗೊಂಡು ಸಾರ್ವಜನಿಕರು ಜಯದೇವ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇಂತಹ ಆತಂಕದ ಅವಶ್ಯಕತೆಯಿಲ್ಲ ಎಂಬುದಾಗಿ ತಿಳಿಸಿದರು. ಸಾರ್ವಜನಿಕರು ಆತಂಕ ಬಿಟ್ಟು ಆರೋಗ್ಯಕರ ಜೀವನಶೈಲಿ, ಅಗತ್ಯ ನಿದ್ರೆ ಹಾಗೂ ವ್ಯಾಯಾಮವನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. https://kannadanewsnow.com/kannada/actor-shah-rukh-khan-sharing-his-experience-as-the-ambassador-of-sunfeast-vowers/ https://kannadanewsnow.com/kannada/three-months-ago-the-crow-carried-off-the-golden-bangle-back-to-the-trees-branch-read-this-news-and-see-how/
ಬೆಂಗಳೂರು: ಐಟಿಸಿ ಸನ್ಫೀಸ್ಟ್ ಅವರ “ವೌಜರ್ಸ್ “ಕ್ರಾಕರ್ಸ್ನ ರಾಯಭಾರಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ , ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸನ್ಫೀಸ್ಟ್ ವೌಜರ್ಸ್ ಈಗಾಗಲೇ ಕ್ರ್ಯಾಕರ್ ವಿಭಾಗದಲ್ಲಿ ತನ್ನ ವಿಭಿನ್ನ, ಬಹು-ಸಂವೇದನಾ ಅನುಭವ ನೀಡುತ್ತಿರುವ ಈ ಸಿಹಿತಿನಿಸು, ರಿಚ್, ಬೋಲ್ಡ್, ಚೀಸೀ ಫ್ಲೇವರ್ನಿಂದ ತುಂಬಿದೆ, ಈ ಅಮೋಘವಾದ ಟ್ರೀಟ್ ವಿಶಿಷ್ಟವಾದ 14-ಪದರದ ಗರಿಗರಿಯಾದ ವಿನ್ಯಾಸವನ್ನು ಸಹ ಹೊಂದಿದೆ, ಇದು ಮೋಡಿಮಾಡುವ ಚೀಸ್ ಮತ್ತು ಕ್ರಂಚ್ನ ಅದ್ಭುತ ಸಮ್ಮಿಲನವನ್ನು ನೀಡುತ್ತದೆ. ಈ ವಿಶಿಷ್ಟ ಸಂವೇದನಾ ಪ್ರೊಫೈಲ್ ಉತ್ಪನ್ನವನ್ನು ಪ್ರತ್ಯೇಕಿಸುವುದಲ್ಲದೆ, ಪ್ರತಿಯೊಂದ ಬೈಟ್ನಲ್ಲೂ ರುಚಿಕರ ಹಾಗೂ ತಲ್ಲೀನಗೊಳಿಸುವ ಆನಂದದ ಕ್ಷಣವನ್ನು ನೀಡಲಿದೆ. ಶಾರುಖ್ ಖಾನ್ ಜೊತೆಗೂಡಿ, ಬ್ರ್ಯಾಂಡ್ ತನ್ನ ಚಿತ್ರಣವನ್ನು ಹೆಚ್ಚಿಸಲು ಹಾಗೂ ತಿನ್ನುವ ಸಮಯಕ್ಕೆ ಹೋಗಬೇಕಾದ ಆಯ್ಕೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಜ್ಜಾಗಿದೆ. ಅವರ ಅಪ್ರತಿಮ ವರ್ಚಸ್ಸು ಮತ್ತು ಪ್ರೇಕ್ಷಕರೊಂದಿಗಿನ ಆಳವಾದ ಭಾವನಾತ್ಮಕ ಅನುರಣನವು ಬ್ರ್ಯಾಂಡ್ನ ರೋಮಾಂಚಕ ವ್ಯಕ್ತಿತ್ವದೊಂದಿಗೆ ಸರಾಗವಾಗಿ ಹೊಂದಿಕೆಯಾಗುತ್ತದೆ – ಗ್ರಾಹಕರ ಸಂಪರ್ಕ ಮತ್ತು ಸ್ಮರಣೆಯನ್ನು ಗಾಢವಾಗಿಸುವ ಭಾವನೆ, ಮೋಡಿ…
ನವದೆಹಲಿ: ದೇಶಾದ್ಯಂತ ಕೃಷಿ ಜಿಲ್ಲೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ವಾರ್ಷಿಕ 24,000 ಕೋಟಿ ರೂ.ಗಳ ವೆಚ್ಚದ ಮೂರು ಪ್ರಮುಖ ಉಪಕ್ರಮಗಳಾದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDDKY) ಗೆ ಬುಧವಾರ ಸಚಿವ ಸಂಪುಟ ಅನುಮೋದನೆ ನೀಡಿದೆ. 2025–26ರ ಕೇಂದ್ರ ಬಜೆಟ್ನಲ್ಲಿ ಪರಿಚಯಿಸಲಾದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDDKY), 11 ಕೇಂದ್ರ ಸಚಿವಾಲಯಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ 36 ಯೋಜನೆಗಳನ್ನು ಸಂಯೋಜಿಸುವ ಮೂಲಕ 100 ಕೃಷಿ ಕೇಂದ್ರಿತ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಕಡಿಮೆ ಕೃಷಿ ಉತ್ಪಾದಕತೆ, ಮಧ್ಯಮ ಬೆಳೆ ಸಾಂದ್ರತೆ ಮತ್ತು ದುರ್ಬಲ ಸಾಲ ಪ್ರವೇಶದ ಆಧಾರದ ಮೇಲೆ ಆಯ್ದ ಜಿಲ್ಲೆಗಳನ್ನು ಗುರುತಿಸಲಾಗಿದೆ. ಪ್ರತಿ ರಾಜ್ಯದಿಂದ ಕನಿಷ್ಠ ಒಂದು ಜಿಲ್ಲೆಯನ್ನು ಒಳಗೊಳ್ಳಲಾಗುವುದು ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೈಲೈಟ್ ಮಾಡಿದ್ದಾರೆ. ಆರು ವರ್ಷಗಳಲ್ಲಿ ಒಟ್ಟು 24,000 ಕೋಟಿ ರೂ.ಗಳ ವೆಚ್ಚದೊಂದಿಗೆ, ಈ ಯೋಜನೆಯು ಬೆಳೆ ಉತ್ಪಾದಕತೆ, ನೀರಾವರಿ, ಸಂಗ್ರಹಣಾ ಮೂಲಸೌಕರ್ಯ, ಸಾಲ ಪ್ರವೇಶ ಮತ್ತು ಸುಸ್ಥಿರ ಕೃಷಿ…
ತಿರುವನಂತಪುರಂ: ಆ ಮಹಿಳೆ ಮನೆಯ ಬಳಿಯಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತನ್ನ ಚಿನ್ನದ ಬಳೆಯನ್ನು ತೆಗೆದಿಟ್ಟಿದ್ದಳು. ಅದನ್ನು ಅಚಾನಕ್ಕಾಗಿ ಕಾಗೆಯೊಂದು ಹೊತ್ತೊಯ್ದಿತ್ತು. ಮನೆಯ ಅಕ್ಕಪಕ್ಕದಲ್ಲಿ ಸುತ್ತಾಡಿ, ಹುಡುಕಾಡಿದರೂ ಸಿಕ್ಕಿರಲಿಲ್ಲ. ಇಂತಹ ಬಳೆ ಮೂರು ತಿಂಗಳ ನಂತ್ರ ಮಹಿಳೆಯ ಕೈ ಸೇರಿದೆ. ಅದು ಹೇಗೆ ಅಂತ ಮುಂದೆ ಓದಿ. ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ ನಲ್ಲಿ ರುಕ್ಮಿಣಿ ಎಂಬ ಮಹಿಳೆ ಮನೆಯ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ 12 ಗ್ರಾಂ ತೂಕದ ಬಳೆಯನ್ನು ಕೈಯಿಂದ ತೆಗೆದು ಮನೆಯ ಹೊರಗಿನ ಗೋಡೆಯ ಮೇಲೆ ಇರಿಸಿದ್ದರು. ಮನೆಯ ಕೆಲಸ ನಿರತಾಗಿದ್ದಂತ ಸಂದರ್ಭದಲ್ಲಿ ಕಾಗೆಯೊಂದು ಆ ಬಳೆಯನ್ನು ಎಗರಿಸಿಕೊಂಡು ಹೋಗಿತ್ತು. ಬಳೆ ಸ್ವಲ್ಪ ದೂರದಲ್ಲಿ ಎಲ್ಲಾದರೂ ಕಾಗೆ ಬಿಟ್ಟಿರಬೇಕು ಅಂತ ಅಕ್ಕಪಕ್ಕ ಎಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ. ಹೀಗಾಗಿ ತಮ್ಮ ಬಳೆಯ ಆಸೆ ಬಿಟ್ಟಿದ್ದರು. ಮೂರು ತಿಂಗಳ ನಂತ್ರ ಅನ್ವರ್ ಸಾದತ್ ಎಂಬಾತ ತಮ್ಮ ಮನೆಯ ಬಳಿಯ ಮಾವಿನ ಮರದಲ್ಲಿ ಮಗಳಿಗೆ ಹಣ್ಣು ಕೀಳಲು ಮರ ಅಲುಗಾಡಿಸಿದ್ದರು. ಆ ವೇಳೆ…













