Author: kannadanewsnow09

ಶಿವಮೊಗ್ಗ : ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ಸೇರಿದಂತೆ ತಡೆಗೋಡೆ ನಿರ್ಮಾಣಕ್ಕೆ ಸುಮಾರು 75 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಮಳೆ  ಉಂಟಾಗುವ ಸಮಸ್ಯೆಯನ್ನು ತಡೆಯಲು ವಿಶೇಷವಾಗಿ ಯೋಜನೆ ರೂಪಿಸಲಾಗಿದ್ದು ಮೊದಲ ಹಂತದಲ್ಲಿ 10 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.  ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,  ಸೇತುವೆ ನಿರ್ಮಾಣ ಮಾಡಿ ಎನ್ನುವುದು ಈ ಭಾಗದ ಜನರ ಬಹುಕಾಲದ ಕನಸು. ಇಲ್ಲಿ ಬಡ ಕುಟುಂಬದವರು ವಾಸವಿದ್ದು, ಮಳೆಗಾಲದಲ್ಲಿ ನೀರು ಅವರ ಮನೆಗಳಿಗೆ ನುಗ್ಗುತ್ತಿದೆ. ಸದಾ ಆತಂಕದಲ್ಲಿಯೆ ಬದುಕುತ್ತಿರುವ ಜನರಿಗೆ ಶಾಶ್ವತ ಪರಿಹಾರ ಒದಗಿಸಲು ಯೋಜನೆ ರೂಪಿಸಿದ್ದು, ಉಪ ಮುಖ್ಯಮಂತ್ರಿಗಳು ಸೇತುವೆ ನಿರ್ಮಾಣಕ್ಕೆ 75 ಕೋಟಿ ರೂ. ಕೊಡಲು ಸಮ್ಮತಿ ಸೂಚಿಸಿದ್ದು, 10 ಕೋಟಿ ಮಂಜೂರು ಮಾಡಿದ್ದಾರೆ. ಬೆಂಗಳೂರಿನಿಂದ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾರೆ. ಈ ಎರಡು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬರೋಬ್ಬರಿ 76 ರೇಷನ್ ಕಾರ್ಡ್ ರದ್ದುಗೊಳಿಸಿ ಆಹಾರ ಇಲಾಖೆ ಆದೇಶಿಸಿದೆ. ಹಾಗಾದ್ರೇ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದುಗೊಂಡಿದ್ಯಾ ಅನ್ನೋ ಬಗ್ಗೆ ಮುಂದೆ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾವೆ. ನ್ಯಾಯಬೆಲೆ ಅಂಗಡಿ 1 ಮತ್ತು 2ರ ವ್ಯಾಪ್ತಿಯಲ್ಲಿದ್ದಂತ ಆದಾಯ ತೆರಿಗೆ ಪಾವತಿಸುತ್ತಿರುವಂತ 76 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ. ಉಳವಿಯ ನ್ಯಾಯಬೆಲೆ ಅಂಗಡಿ 1 ವ್ಯಾಪ್ತಿಯಲ್ಲಿ 52 ರೇಷನ್ ಕಾರ್ಡ್ ರದ್ದುಪಡಿಸಿದ್ದರೇ, ನ್ಯಾಯಬೆಲೆ ಅಂಗಡಿ 2ರ ವ್ಯಾಪ್ತಿಯಲ್ಲಿ 24 ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ರೇಷನ್ ಕಾರ್ಡ್ ಕುಟುಂಬಸ್ಥರು ಆದಾಯ ತೆರಿಗೆ ಪಾವತಿ ಮಾಡುತ್ತಿರುವುದೇ ಕಾರಣವಾಗಿದೆ ಎಂಬುದಾಗಿ ಆಹಾರ ಇಲಾಖೆ ತಿಳಿಸಿದೆ. ಹೀಗಿದೆ ಉಳವಿಯ ನ್ಯಾಯಬೆಲೆ ಅಂಗಡಿ 1ರ ವ್ಯಾಪ್ತಿಯಲ್ಲಿ ರದ್ದುಪಡಿಸಲಾಗಿರುವಂತ 52 ಕಾರ್ಡ್ ಪಟ್ಟಿ ಹೀಗಿದೆ ಉಳವಿಯ ನ್ಯಾಯಬೆಲೆ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಈದ್ ಮಿಲಾದ್ ಪ್ರಯುಕ್ತ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.  ಈ ಕುರಿತಂತೆ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 20-09-2025ರಂದು ಬೆಳಗ್ಗೆ 10 ಗಂಟೆಗೆ ದೂಗೂರು ಹಳ್ಳಿಸಂತೆ ಕಟ್ಟಡದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ. ಫಲಾಹುಲ್ ಮುಸ್ಲಿಂ ಕಮಿಟಿ ಸಂಯುಕ್ತ ಆಶ್ರಯದಲ್ಲಿ ದೂಗೂರು ಗ್ರಾಮ ಪಂಚಾಯ್ತಿ, ಉಳವಿ ಗ್ರಾಮ ಪಂಚಾಯ್ತಿ ಹಾಗೂ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಉಳವಿ, ದೂಗೂರಿನ ಸಾರ್ವಜನಿಕರು ರಕ್ತ ದಾನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. ಯಾರು ರಕ್ತದಾನ ಮಾಡಬಹುದು? ಕನಿಷ್ಠ 45 ಕೆಜಿ ದೇಹ ತೂಕ ಇರುವಂತ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದ ಒಳಗಿನ ಪುರುಷರು ಮತ್ತು ಮಹಿಳೆಯರು, ಕನಿಷ್ಠ 12.5 ಗ್ರಾ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿ ಇರೋರು ರಕ್ತದಾನ ಮಾಡಬಹುದಾಗಿದೆ. ಆದ್ರೇ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆಯನ್ನು ದಿನಾಂಕ:22-09-2025 ರಿಂದ 07-10-2025ರವರೆಗೆ ಕೈಗೊಳ್ಳುವಂತೆ ಸರ್ಕಾರ ಅಧಿಕೃತ ಆದೇಶಿಸಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ ಹೇಳಿದಂತೆ ಜಾತಿಗಣತಿ ಸಮೀಕ್ಷೆ ಮುಂದೂಡಿಕೆ ಇಲ್ಲ. ನಿಗದಿಯಂತೆ ನಡೆಯುವುದು ಖಚಿತವಾದಂತೆ ಆಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರದ ಅನುಮೋದನ ನೀಡಿ ಆದೇಶಿಸಿದೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಇವರು ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ದಿನಾಂಕ:22-09-2025 ರಿಂದ 07-10-2025ರವರೆಗೆ ಕೈಗೊಳ್ಳಲು ಉದ್ದೇಶಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರಿಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಹಾಗೂ ಸಮೀಕ್ಷಾದಾರರಿಗೆ ಅಗತ್ಯ…

Read More

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ರಿಲೀಸ್ ಆಗಿರುವಂತ ವೀಡಿಯೋದಲ್ಲಿ ಆರೋಪಿ ಚಿನ್ನಯ್ಯ ಅವರು ಮಹೇಶ್ ತಿಮರೋಡಿ ಭೇಟಿಯಾದಂತ ವೀಡಿಯೋ ಇದಾಗಿದೆ. ಎರಡು ವರ್ಷದ ಹಿಂದೆ ಆರೋಪಿ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ಭೇಟಿಯಾಗಿದ್ದು ಎನ್ನಲಾದಂತ ವೀಡಿಯೋ ಇದಾಗಿದೆ. ಆರೋಪಿ ಚಿನ್ನಯ್ಯ ಪತ್ನಿ ಜೊತೆಗೆ ತೆರಳಿ ತಿಮರೋಡಿ ಭೇಟಿಯಾಗಿದ್ದರು. ಧರ್ಮಸ್ಥಳಕ್ಕೆ ಬಂದಿದ್ದಾಗ ವಿಠ್ಠಲಗೌಡನಿಗೆ ಚಿನ್ನಯ್ಯ ಸಿಕ್ಕಿದ್ದರಂತೆ. ಈ ವೇಳೆ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲಗೌಡ ಕರೆದೊಯ್ದಿದ್ದರಂತೆ. 2023ರ ಆಗಸ್ಟ್ ನಲ್ಲಿ ತಿಮರೋಡಿಯನ್ನು ಆರೋಪಿ ಚಿನ್ನಯ್ಯ ಭೇಟಿಯಾಗಿದ್ದರಂತೆ. ತಿಮರೋಡಿ ಭೇಟಿಯ ವೇಳೆಯಲ್ಲಿ ಶವಗಳ ಹೂತಿದ್ದ ಬಗ್ಗೆ ಚಿನ್ನಯ್ಯ ಹೇಳಿದ್ದರಂತೆ. ಗುಂಡಿ ತೆಗೆದು ಶವ ಹೂಳುತ್ತಿದ್ದೆ ಎಂಬುದಾಗಿ ತಿಮರೋಡಿಗೆ ಚಿನ್ನಯ್ಯ ಹೇಳಿದ್ದನಂತೆ. ಈ ಮತ್ತೊಂದು ವೀಡಿಯೋ ಈಗ ಬಿಡುಗಡೆ ಮಾಡಲಾಗಿದೆ. https://kannadanewsnow.com/kannada/from-november-4-the-first-skill-summit-in-bengaluru-minister-dr-sharan-prakash-patil/ https://kannadanewsnow.com/kannada/the-government-has-issued-an-important-order-regarding-the-footpaths-and-stone-roads-for-the-lands-of-the-farmers-in-the-state/ https://kannadanewsnow.com/kannada/good-news-for-the-people-of-the-state-the-government-has-ordered-to-open-yoga-and-naturopathy-centers-in-10-taluks/

Read More

ರಾಹು ಕೇತು ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಅವರು ನಮಗೆ ಯಾವುದೇ ಸಮಸ್ಯೆಗಳನ್ನು ಉಂಟುಮಾಡುತ್ತಾರೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ. ಈ ರಾಹು ಕೇತು ದೋಷದಿಂದ ಅನೇಕ ಜನರು ಬಾಧಿತರಾಗಿದ್ದಾರೆ. ಹಾಗಾಗಿ ರಾಹು ಕೇತುವಿಗೆ ಭಯಪಡುವುದರಲ್ಲಿ ಖಂಡಿತಾ ಅರ್ಥವಿದೆ. ಶಾಸ್ತ್ರದ ಪ್ರಕಾರ ರಾಹುದೋಷವಿದ್ದರೆ, ಕೇತುದೋಷವಿದ್ದರೆ ಆರ್ಥಿಕ ಸಮಸ್ಯೆ. ಮದುವೆ ಆಗುವುದಿಲ್ಲ. ವಿವಾಹಿತರು ಉತ್ತಮ ಕುಟುಂಬ ಜೀವನವನ್ನು ಹೊಂದಿರುವುದಿಲ್ಲ. ರಾಹು ಮತ್ತು ಕೇತುಗಳು ಸಾಲದ ಹೊರೆ ಮತ್ತು ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಹಗಳು. ಈ ಎರಡು ಗ್ರಹಗಳು ನಮಗೆ ತರಬಹುದಾದ ತೊಂದರೆಗಳನ್ನು ನಾವು ಹೇಗೆ ತಪ್ಪಿಸಬಹುದು? ಈ ಗ್ರಹಗಳು ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದಾದರೂ, ಅವುಗಳನ್ನು ಸಣ್ಣ ಪ್ರಮಾಣದಲ್ಲಿ ತಡೆಯಲು ಜ್ಯೋತಿಷ್ಯವು ಅನೇಕ ಪರಿಹಾರಗಳನ್ನು ಹೊಂದಿದೆ. ನಿಮಗಾಗಿ ಇಲ್ಲಿದೆ ಸರಳ ಪರಿಹಾರ. ತಲೆಗೆ ಬಂದದ್ದು ಪೇಟದಿಂದ ಹೋಯಿತು ಎಂಬ ತೃಪ್ತಿಗೆ ಉತ್ತಮ ಫಲಿತಾಂಶ ನೀಡಬಲ್ಲ ವಿಶೇಷ ಆಧ್ಯಾತ್ಮಿಕ ಪರಿಹಾರದ ಬಗ್ಗೆ ಇಂದು ತಿಳಿಯಲಿದ್ದೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ…

Read More

ಬೆಂಗಳೂರು: ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ಮುಂದಿನ ನವೆಂಬರ್‌ನಲ್ಲಿ ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಆಯೋಜಿಸುತ್ತಿದೆ. ಕೌಶಲ್ಯತೆ, ನಾವೀನ್ಯತೆ ಮತ್ತು ವಿಶೇಷ ಸೌಲಭ್ಯಗಳ ತಾಣವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್‌. ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಹಲವಾರು ಮಾಹಿತಿ ನೀಡಿದರು. ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನವೆಂಬರ್ 4 ರಿಂದ 6 ರವರೆಗೆ ಈ ಶೃಂಗಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂಥ ಮಹತ್ವಾಕಾಂಕ್ಷೆಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಈ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. “ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಯುವ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು, ಗ್ರಾಮೀಣ ಸಮುದಾಯಗಳು ಮತ್ತು ಅಂಗವಿಕಲರಿಗೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗುವುದು. ಕೌಶಲ್ಯದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ನಮ್ಮ ಸರ್ಕಾರ ಅವಕಾಶಗಳ ಬೃಹತ್‌ ವೇದಿಕೆ ಒದಗಿಸುತ್ತಿದೆ ಎಂದು…

Read More

ಬೆಂಗಳೂರು: ಧರ್ಮ ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ. ಇದೊಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಯಾವುದೇ ಜಾತಿ, ಸಮಾಜದವರು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಎಂದು ಬಿಜೆಪಿಯ ರಾಜಕೀಯ ಚಿಂತನಾ ಶಿಬಿರದಲ್ಲಿ ನಿರ್ಣಯಿಸಿದ್ದೇವೆ ಎಂದು ತಿಳಿಸಿದರು. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‍ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ಚಿಂತನಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ವಿವರಿಸಿದರು. ಜಾತಿ, ಉಪ ಜಾತಿಯನ್ನು ಆಯಾ ಸಮುದಾಯಕ್ಕೆ ಬಿಟ್ಟ ವಿಚಾರ; ಅದನ್ನು ಅವರು ತೀರ್ಮಾನಿಸಬೇಕು ಎಂದರು. ದೇಶ, ರಾಜ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಡಿ ಹಿಂದೂ ಎಂದು ಬರೆಸಲು ವಿನಂತಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ರಾಜ್ಯಗಳಿಗೆ ಜಾತಿ ಜನಗಣತಿ ಅಧಿಕಾರ ಇಲ್ಲದೇ ಇದ್ದರೂ 47 ಹೊಸ ಜಾತಿಗಳನ್ನು ಸೃಷ್ಟಿಸಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ನೇಕಾರ, ಕ್ರಿಶ್ಚಿಯನ್ ಪರಿಶಿಷ್ಟ ಜಾತಿ,…

Read More

ಮಡಿಕೇರಿ: ರಾಜ್ಯದಲ್ಲಿ ವೈದ್ಯರು ಅಪರೂಪದ ಆಪರೇಷನ್ ಮಾಡಿದ್ದಾರೆ. ವ್ಯಕ್ತಿಯೊಬ್ಬರ ಕಣ್ಣಿನಲ್ಲಿದ್ದಂತ 10 ಸೆಂಟಿ ಮೀಟರ್ ಜೀವಂತ ಹುಳುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಮಡಿಕೇರಿಯಲ್ಲಿ ವೈದ್ಯರಿಂದ ಅಪರೂಪದ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕ ಕಣ್ಣಿನಲ್ಲಿದ್ದ ಹುಳುವನ್ನು ವೈದ್ಯರು ಹೊರ ತೆಗೆದಿದ್ದಾರೆ. ಸುಮಾರು 10 ಸೆಂಟಿ ಮೀಟರ್ ಗೂ ಉದ್ದ ಜೀವಂತ ಹುಳು ಇತ್ತು ಎಂಬುದಾಗಿ ತಿಳಿದು ಬಂದಿದೆ. ಕಣ್ಣಿನಲ್ಲಿ ತುರಿಕೆ ಎಂದು ವ್ಯಕ್ತಿ ಚಿಕಿತ್ಸೆಗೆ ಆಗಮಿಸಿದ್ದರು. ಪರೀಕ್ಷೆ ವೇಳೆ ಕಣ್ಣಿನ ಬಿಳಿ ಭಾಗದ ಪೊರೆಯಲ್ಲಿ ಹುಳು ಪತ್ತೆಯಾಗಿದೆ. ಡಾ.ಚಿಣ್ಣಪ್ಪ, ಡಾ.ಗುರುಪ್ರಸಾದ್ ರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕ ಹುಳು ಹೊರತೆಗೆದಿದ್ದಾರೆ. ಮಾನವನ ಕಣ್ಣು, ಮಿದುಳಿನಲ್ಲಿ ಈ ಹುಳ ಆಶ್ರಯ ಪಡೆಯುತ್ತೆ. ಪತ್ತೆ ಹಚ್ಚುವುದು ತಡವಾದ್ರೆ ಶಾಶ್ವತ ದೃಷ್ಟಿ ದೋಷ ಸಾಧ್ಯತೆ ಇದೆಯಂತೆ. ಬಿಳಿದಾರದ ರೀತಿಯ ಹುಳು ಲೋವಾ ಎಂದು ಗುರುತಿಸಲಾಗಿದೆ. ಆಫ್ರಿಕಾ ಭಾಗದಲ್ಲಿ ಹೆಚ್ಚಾಗಿ ಈ ಲೋವಾ ಹುಳು ಕಂಡು ಬರುತ್ತದೆ. ಇದು ಡೀರ್ ಫ್ಲೈ…

Read More

ಮಂಡ್ಯ : ರಾಜ್ಯದಲ್ಲಿ ಹಿಂದುತ್ವದ ಪರ ಹೋರಾಟ ಮಾಡಿದ್ರೆ ನನ್ನ ಮೇಲೆ ರೌಡಿ ಕೇಸ್ ಹಾಕ್ತಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ಧಾಳಿ ನಡೆಸಿದರು. ಮದ್ದೂರು ತಾಲೂಕಿನ ಗಡಿಭಾಗ ನಿಡಘಟ್ಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನ ಶಾಂತ ವಾತಾವರಣವನ್ನು ಹಾಳು ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ನಾವು ಯಾವುದೇ ಪ್ರತಿಭಟನೆಗೆ ಹೋಗುತ್ತಿಲ್ಲ. ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಪೋಲೀಸರು 500 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ವಕಾಲತ್ತು ವಹಿಸಲು ವಕೀಲರ ಜತೆ ಹೋಗುತ್ತಿದ್ದೇನೆ. ಆದರೆ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ತಡೆಯುವ ನೀಚ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಪೋಲೀಸರು ಕಲ್ಲು ಹೊಡೆದವರನ್ನು, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಕಿಡಿಗೇಡಿಗಳ ಮೇಲೆ ಶೂಟ್ ಮಾಡಬೇಕು. ಇಲ್ಲಿ ಹುಟ್ಟಿ, ಬೆಳೆದು ನಮ್ಮ ಮೇಲೆ ಕಲ್ಲು ಎಸೆಯುತ್ತಾರೆ ಎಷ್ಟು ಸೊಕ್ಕು?…

Read More