Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ಪ್ರಸಕ್ತ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್ಸೈಟ್ http://kmdconline.karnataka.gov.in ಮುಖಾಂತರ ಅಕ್ಟೋಬರ್ 21 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮ(ನಿ)ವನ್ನು ಸಂಪರ್ಕಿಸಲು ತಿಳಿಸಲಾಗಿದೆ. https://kannadanewsnow.com/kannada/extension-of-the-admission-period-for-9th-and-11th-grades-at-jawahar-navodaya-vidyalaya/ https://kannadanewsnow.com/kannada/mild-earthquake-of-magnitude-2-9-in-vijayapura-district/
ಬಳ್ಳಾರಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 9ನೇ ಮತ್ತು 11ನೇ ತರಗತಿಯ (2026-27ನೇ ಸಾಲಿಗಾಗಿ) ಪ್ರವೇಶ ಪರೀಕ್ಷೆಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 23 ರ ವರೆಗೆ ವಿಸ್ತರಿಸಲಾಗಿದೆ. ಆಸಕ್ತರು ಆನ್ ಲೈನ್ ವೆಬ್ಸೈಟ್: 9ನೇ ತರಗತಿಗಾಗಿ-https://cbseitms.nic.in/2025/nvsxi_11/Index/Index?aspxerrorpath=/2025/nvsxi_11/registrationclassXl/registrationclassXI ಮತ್ತು 11ನೇ ತರಗತಿಗಾಗಿ- https://cbseitms.nic.in/2025/nvsxi_11/ ಗೆ ಭೇಟಿ ನೀಡಬಹುದು ಎಂದು ವಿದ್ಯಾಲಯದ ಪ್ರಾಚಾರ್ಯ ಸುದೇಶ ಗೋಪಾಲ ಮಲಾಜುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/mild-earthquake-of-magnitude-2-9-in-vijayapura-district/ https://kannadanewsnow.com/kannada/from-now-on-it-is-mandatory-to-submit-work-cost-bills-to-the-treasury-online-state-government-orders/
ವಿಜಯಪುರ: ಜಿಲ್ಲೆಯಲ್ಲಿ ಬುಧವಾರ 2.9 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ತಿಳಿಸಿದೆ. ಗಮನಿಸಿದ ತೀವ್ರತೆ ಮತ್ತು ತೀವ್ರತೆ ಎರಡೂ ಕಡಿಮೆ ಇರುವುದರಿಂದ ಸಮುದಾಯವು ಭಯಭೀತರಾಗುವ ಅಗತ್ಯವಿಲ್ಲ ಎಂದು ಅದು ಹೇಳಿದೆ. ಭೂಕಂಪವು ಬೆಳಿಗ್ಗೆ 07:43:38 ಕ್ಕೆ ಸಂಭವಿಸಿದ್ದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯರನಾಳ್ ಗ್ರಾಮ ಪಂಚಾಯಿತಿಯ ಹತ್ತರ್ಕಿಹಾಳ ಗ್ರಾಮದ ವಾಯುವ್ಯಕ್ಕೆ 2.5 ಕಿ.ಮೀ ದೂರದಲ್ಲಿ 05 ಕಿ.ಮೀ ಆಳದಲ್ಲಿ ಕೇಂದ್ರಬಿಂದುವಾಗಿದೆ ಎಂದು ಕೆಎಸ್ಎನ್ಡಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. ಭೂಕಂಪದ ಭೂಕಂಪದ ಭೂಕಂಪನ ತೀವ್ರತೆಯ ನಕ್ಷೆಯ ಪ್ರಕಾರ, ಭೂಕಂಪದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪವು ಕೇಂದ್ರಬಿಂದುದಿಂದ 50-60 ಕಿ.ಮೀ ದೂರದವರೆಗೆ ಅನುಭವಿಸಿರಬಹುದು ಎಂದು ಅದು ಹೇಳಿದೆ. ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಏಕೆಂದರೆ ತೀವ್ರತೆ ಕಡಿಮೆಯಾಗಿದೆ, ಆದರೂ ಸ್ಥಳೀಯವಾಗಿ ಕಂಪನಗಳು ಅನುಭವಿಸಬಹುದು, ಕೇಂದ್ರಬಿಂದುವು ಭೂಕಂಪನ ವಲಯ III ರಲ್ಲಿ ಬರುತ್ತದೆ ಮತ್ತು ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ…
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ- 2ರಡಿ ವ್ಯಾಖ್ಯಾನಿಸಲಾದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳಿಗೆ ಕಾಂಟ್ರಕ್ಟ್ ಮ್ಯಾನೇಜೆಂಟ್ ಮಾಡ್ಯೂಲ್ (Contract Management Module) ಮೂಲಕ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಆನ್ಲೈನ್ನಲ್ಲಿ ಖಜಾನೆಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 2ರಡಿ ವ್ಯಾಖ್ಯಾನಿಸಲಾದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳಿಗೆ ದಿನಾಂಕ 01.08.2024 ರಿಂದ ಅನ್ವಯಿಸುವಂತ ಕಾಂಟ್ರಾಕ್ಟ್ ಮ್ಯಾನೇಜೆಂಟ್ ಮಾಡ್ಯೂಲ್ ಅನ್ನು (Contract Management Module) ಜಾರಿಗೆ ತರಲಾಗಿದೆ. ಸದರಿ ಮಾಡ್ಯೂಲ್ ಅನ್ನು ಖಜಾನೆ 2ರ ವೆಚ್ಚ ಅನುಸರಣೆ ಮಾಡ್ಯೂಲ್ (Expenditure Tracking Module) ರೊಂದಿಗೆ ಸಂಯೋಜಿಸಲಾಗಿದೆ ಎಂದಿದ್ದಾರೆ. ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ದಲ್ಲಿನ ನಿಬಂಧನೆಗಳಂತೆ, ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಭೌತಿಕ ಹಾಗೂ ಡಿಜಿಟಲ್ ರೂಪ ಎರಡೂ ವಿಧಾನಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಮಹಾಲೇಖಪಾಲರು ಅವರ ಪತ್ರ ಸಂ. TM/VLC/2025-20256/05-06 ದಿನಾಂಕ:…
ಬೆಂಗಳೂರು: ರಾಜ್ಯ ಸರ್ಕಾರವು ವೋಚರುಗಳ ಡಿಜಿಟಲೀಕರಣದ ಅಂಗವಾಗಿ ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರಗಳನ್ನು ಅಂಗೀಕರಿಸುವ ವಿಧಾನವನ್ನು ಪ್ರಯಾಣ ಭತ್ಯೆ ಬಿಲ್ಲು ಹಾಗೂ ಭವಿಷ್ಯನಿಧಿ ಮುಂಗಡ ಬಿಲ್ಲುಗಳಿಗೂ ವಿಸ್ತರಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2 ರಲ್ಲಿ ಸೃಜಿಸುವ ಜಿಲ್ಲಾ ವಲಯದ ಹಾಗೂ ರಾಜ್ಯ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂಧಿಸಿದ ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ಗಳ ಬದಲು ಆನ್ಲೈನ್ನಲ್ಲಿ ಸಲ್ಲಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓಗಳು ಡಿಎಸ್ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ಲೈನ್ ಮೂಲಕ ಮಾತ್ರ ಸಲ್ಲಿಸುವಂತೆ ಆದೇಶಿಸಲಾಗಿದೆ. ಮುಂದುವರೆದು, ಇತರೆ ಕ್ಷೇಮುಗಳ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರುಗಳನ್ನು ಅಂಗೀಕರಿಸುವ ಕುರಿತು, ಸಿಎಜಿ ರವರು ಸೂಚಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ಮೇಲಿನ ಸ್ವಯಂ ಮೌಲ್ಯಮಾಪನ ಹೇಳಿಕೆಯ ಅನುಸರಣಾ ಪಾಲನಾ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸಿರುವುದಾಗಿ, ಮಹಾಲೇಖಪಾಲರು…
ಬೆಂಗಳೂರು: ನಗರದಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಂತ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆಗೆ ಇಳಿದಂತ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಮನೆಗೆ ನುಗ್ಗಿದ್ದಂತ ಆರೋಪಿಗಳು, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಮೂವರು ಎಸಗಿದ್ದರು. ಬೆಂಗಳೂರಿನ ಉತ್ತರ ತಾಲ್ಲೂಕಿನ ಗಂಗೊಂಡನಹಳ್ಳಿಯಲ್ಲಿ ಈ ಕೃತ್ಯ ನಡೆದಿತ್ತು. https://kannadanewsnow.com/kannada/dk-sivakumars-ambition-for-cm-post-priest-of-raichurs-panchmukhi-anjaneya-temple/ https://kannadanewsnow.com/kannada/attention-to-those-who-have-a-pan-card-if-you-make-this-mistake-you-will-have-to-pay-a-fine-of-10000/
ರಾಯಚೂರು: ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ ಹುದ್ದೆಗಾಗಿ ಡಿ.ಕೆ ಶಿವಕುಮಾರ್ ಸಂಕಲ್ಪ ಮಾಡಿದ್ದಾರೆ ಎಂಬುದಾಗಿ ರಾಯಚೂರಿನ ಪಂಚಮುಖಿ ಆಂಜನೇಯ ದೇಗುಲದ ಅರ್ಚಕರೊಬ್ಬರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಸಂಕಲ್ಪ ಮಾಡಿದ್ದಾರೆ ಎಂಬುದಾಗಿ ರಾಯಚೂರಿನ ಪಂಚಮುಖಿ ಆಂಜನೇಯ ದೇಗುಲದ ಅರ್ಚಕ ಶಾರ್ಮಾಚಾರ್ಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನಾನು ಆಂಜನೇಯನ ಭಕ್ತ. ರಾಮನ ತಂದೆ ದಶರಥ ಮಹಾರಾಜ. ಎಲ್ಲೂ ದಶರಥ ಮಹಾರಾಜನ ದೇಗುಲ ಇಲ್ಲ. ಆದರೇ ರಾಮನ ಬಂಟ ಆಂಜನೇಯ. ಆಂಜನೇಯ ಸಮಾಜದ ಒಬ್ಬ ದೊಡ್ಡ ಸೇವಕ. ಸೇವಕನ ಪಾದಕ್ಕೆ ಪ್ರಾರ್ಥಿಸುವ ಅವಕಾಶ ಸಿಕ್ಕಿದೆ ಎಂದರು. https://kannadanewsnow.com/kannada/i-will-start-from-december-on-friday-mla-lakshman-savadi/ https://kannadanewsnow.com/kannada/attention-to-those-who-have-a-pan-card-if-you-make-this-mistake-you-will-have-to-pay-a-fine-of-10000/
ಬೆಳಗಾವಿ: ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಪ್ರಾರಂಭವಾಗಲಿದೆ. ಅದು ಯಾವ ರೀತಿಯಿಂದ ಅಂತ ನಾನು ಹೇಳುವುದಿಲ್ಲ. ಅದು ಉದಯ ಆದ ಮೇಲೆ ಎಲ್ಲರಿಗೂ ಗೊತ್ತಾಗಲಿದೆ ಎಂಬುದಾಗಿ ಶಾಸಕ ಲಕ್ಷ್ಮಣ ಸವದಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ಬೆಳಗಾವಿಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಡಿಸಿಸಿ ಬ್ಯಾಂಗ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನಾನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತೇನೆ ಅಂತನೂ ಎಲ್ಲಿಯೂ ಹೇಳಿಲ್ಲ. ಕಳೆದ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಆಪೇಕ್ಷಿತನಾಗಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಡಿಸಿಎಂ ಆಗಿದ್ದೇನೆ. ಬ್ಯಾಂಕಿಗೆ ಅಧ್ಯಕ್ಷನಾಗಬೇಕು ಎನ್ನುವಂತ ಭ್ರಮೆ ನನಗೆ ಇಲ್ಲ ಎಂಬುದಾಗಿ ಹೇಳಿದರು. ಡಿಸೆಂಬರ್ ಕಳೆದ ಬಳಿಕ 2026 ಬರುತ್ತದೆ. ಆಗ ಎಲ್ಲರಿಗೂ ಒಳ್ಳೆಯದು ಆಗುತ್ತದೆ. ರಾಜ್ಯಕ್ಕೆ, ದೇಶಕ್ಕೆ, ನನಗೂ ಶುಕ್ರದೆಸೆ ಆರಂಭವಾಗಲಿದೆ. ಮುಂದೆ ಒಳ್ಳೇಯದಾಗುತ್ತದೆ. ಅದಕ್ಕೆ ಯಾವುದೇ ಅರ್ಥ ಬೇಡ ಎಂದರು. https://kannadanewsnow.com/kannada/do-you-know-how-wi-fi-works-without-wires-here-are-the-technology-secrets-you-should-know-read/ https://kannadanewsnow.com/kannada/attention-to-those-who-have-a-pan-card-if-you-make-this-mistake-you-will-have-to-pay-a-fine-of-10000/
ನವದೆಹಲಿ: ಇಂದಿನ ಜಗತ್ತು ಇಂಟರ್ನೆಟ್ ಇಲ್ಲದೆ ಅಪೂರ್ಣ, ಮತ್ತು ಇಂಟರ್ನೆಟ್ ಸೌಲಭ್ಯವನ್ನು ಸುಲಭ ಮತ್ತು ಅನುಕೂಲಕರವಾಗಿಸುವಲ್ಲಿ ವೈ-ಫೈ ದೊಡ್ಡ ಕೊಡುಗೆಯನ್ನು ಹೊಂದಿದೆ. ಮೊದಲು, ಇಂಟರ್ನೆಟ್ ಬಳಸಬೇಕಾದಾಗ, ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ನೇರವಾಗಿ ತಂತಿಯ ಮೂಲಕ ಸಂಪರ್ಕಿಸಬೇಕಾಗಿತ್ತು. ಆದರೆ ಇಂದು, ವೈ-ಫೈ ಈ ತೊಂದರೆಯನ್ನು ಕೊನೆಗೊಳಿಸಿದೆ. ಈಗ ಪ್ರಶ್ನೆ ಏನೆಂದರೆ ಇಂಟರ್ನೆಟ್ ನಿಮ್ಮ ಮೊಬೈಲ್, ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ ಟಿವಿಯನ್ನು ವೈರ್ ಇಲ್ಲದೇ ವೈಫೈ ಮೂಲಕ ತಲುಪುತ್ತಿದೆ. ಹಾಗಾದ್ರೇ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಹಿಂದಿನ ತಂತ್ರಜ್ಞಾನದ ಸೀಕ್ರೇಟ್ ಏನು ಅಂತ ಮುಂದೆ ಓದಿ. ವೈ-ಫೈನ ಪೂರ್ಣ ಹೆಸರು ವೈರ್ಲೆಸ್ ಫಿಡೆಲಿಟಿ. ಈ ತಂತ್ರಜ್ಞಾನವು ಗಾಳಿಯಲ್ಲಿ ಡೇಟಾವನ್ನು ಕಳುಹಿಸಲು ಮತ್ತು ಸೆರೆಹಿಡಿಯಲು ರೇಡಿಯೋ ತರಂಗಗಳನ್ನು ಬಳಸುತ್ತದೆ. ರೇಡಿಯೋ ಸ್ಟೇಷನ್ನಿಂದ ಹೊರಸೂಸುವ ಅಲೆಗಳು ನಿಮ್ಮ ರೇಡಿಯೊವನ್ನು ತಲುಪಿ ಧ್ವನಿಯಾಗಿ ಬದಲಾಗುವಂತೆಯೇ, ವೈ-ಫೈ ರೂಟರ್ನಿಂದ ಹೊರಸೂಸುವ ಅಲೆಗಳು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ತಲುಪಿ ಅಲ್ಲಿ ಇಂಟರ್ನೆಟ್ ಸಿಗ್ನಲ್ಗಳಾಗಿ ಬದಲಾಗುತ್ತವೆ. ಈ…
ಬೆಂಗಳೂರು: ನಗರದಲ್ಲಿ 2 ದಿನ ಶಾಲೆಗೆ ಬಾರದಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಮೇಲೆ ಪ್ರಾಂಶುಪಾಲರು, ಶಿಕ್ಷಕರು ಹಲ್ಲೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಅದರಲ್ಲಿ ಬೆಂಗಳೂರಿನ ಸುಂಕದಕಟ್ಟೆ, ಪೈಪ್ ಲೈನ್ ರಸ್ತೆಯಲ್ಲಿರುವ ಸೆಂಟ್ ಮೆರೀಸ್ ಪಬ್ಲಿಕ್ ಶಾಲೆ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 5ನೇ ತರಗತಿ ವಿದ್ಯಾರ್ಥಿ ಎರಡು ದಿನಗಳ ಕಾಲ ಶಾಲೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ತೀವು ರೀತಿಯಲ್ಲಿ ದಂಡಿಸಿದ್ದು, ಈ ಘಟನೆಯಿಂದ ಆಘಾತಕ್ಕೆ ಒಳಗಾದ ಮಗುವು ವಿಚಿತ್ರ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು, ಮಗುವನ್ನು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದಿದೆ. ಶಾಲೆಯವರ ಈ ವರ್ತನೆಗೆ ಬೇಸರಗೊಂಡ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ನ್ನು ದಾಖಲಿಸಿದ್ದು, ಠಾಣೆಯವರು ಇದುವರೆವಿಗೂ…














